Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕರಗುವ ಮುನ್ನ ಈ ಕ್ಷಣ

ಕರಗುವ ಮುನ್ನ ಈ ಕ್ಷಣ
ಕಳೆದುಬಿಡುವೆ ನನ್ನ ಪೂರ್ತಿ ಜೀವನ
ಶಿಲೆಯಾಗುಳಿವ ನನ್ನೀ ಹೃದಯದಾಣೆಗೂ.

ಕಣ್ಣುಗಳಾಗಿವೆ ಸಾಗರ
ಕನಸುಗಳಾಗಿ ಹುಕ್ಕುತ್ತಿದೆ ಅವಳ ಜ್ಞಾಪಕ
ಕನಸೇ ಇಂದು ಕಣ್ಣೀರಾಗಿ ಕಡಲ ಸೇರಲು.

ಓಟಕೆ ಇಳಿದು ಸುಸ್ತಾದ ಒಂದು ನದಿ ನಾನು
ಯಾವ ಸಣ್ಣ ತೀರಕೊ ಹತ್ತಿರವಾಗದೇ ಹೋದೆನು
ನಿದ್ರೆಯ ದಾಟಿ ಮುನ್ನಡೆದ ಒಂದು ಕನಸು ನಾನು
ಯಾವ ಕಣ್ಣ ಕನ್ನಡಿಯಲೂ ಪ್ರತಿಬಿಂಬವಾಗದೇ ಹೂದೆನು.

ನನ್ನ ಪ್ರೀತಿಯೇ ಇಂದು ಸ್ನೇಹವಾಗಿ ಹೋಯ್ತೆ?
ನನ್ನ ಬದುಕೇ ಒಂದು ಪ್ರಶ್ನೆಯಾಗಿ ಹೋಯ್ತೆ?

ಇಂದು ಈ ಸಂಬಂಧಕೆ ಒಂದು ಹೆಸರಿದೆಯೇ?
ಈ ಗುಟ್ಟನು ಬಿಡಿಸಲು ಸಾಧ್ಯವಿದೆಯೇ?

--(ತೆಲುಗು ಚಿತ್ರಗೀತೆಯೊಂದರ ಅನುವಾದ)

- ಅಕವಿ

29 Mar 2017, 08:39 pm

ಹೇಳದ ಕವನ ...!

ಒಂಟಿ ಮರದ ಮೇಲೆ ಜಂಟಿಯಾಗಿ ಮೂಡಿದ ಹೆಸರು ಕೆತ್ತನೆ ಹೇಳದ ಕವನ...!!
ನಿನ್ನ ಹೊರತು ಬೇರೇ ಏನನ್ನು ಯೋಚಿಸದೆ ನರಳಾಟವೇ ಹೇಳದ ಕವನ ...!!
ಪ್ರೆಯಸಿಯ ಹೆಸರು ಸುವರ್ಣಾಕ್ಷರ ಹಚ್ಚೆಯ ರೂಪದಲ್ಲಿ ಹಾಕಿಸಿದ ನೋವೇ ಹೇಳದ ಕವನ ...!!
ಬಂಡೆ ಗಲ್ಲು ತಾಳ್ಮೆ ಮುರಿದು ಕೇತ್ತಿಸಿಕೋಂಡು ಅವಳ ಹೆಸರು ಹೇಳದ ಕವನ ... !!
ಬಸ್ಸಿನ ಸೀಟಿಗೆ ಗೊತ್ತಾಗಿ ಅವಳಿಗೆ ತಿಳಿಯದೆ ಹೋದ ಆ ಅಕ್ಷರ ಹೇಳದ ಕವನ ...!!
ಸಾವಿರ ರೂಪಾಯಿ ನೋಟಿನ ಮೇಲೆ ಬರೆದ ಬೆಲೆ ಕಟ್ಟಲಾಗದ ಪ್ರತಿಯ ಮಾತು ಹೇಳದ ಕವನ ...!!

ಇದು ಹೇಳದ ಕವನ ಹೇಳಲಾಗದ ಕವನ ...!!!

- Shiva.S.M...!

29 Mar 2017, 07:09 pm

ತಂದೆ ತಾಯಿಯೇ ಮೊದಲ ದೇವರು ....!

ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲಾ ...
ಒಂದು ವಾರ ಒಂದೇ ಒಂದು ವಾರ ನಿನ್ನ ಮನೆಯ ಖರ್ಚುಗಳೆಲ್ಲಾ ನೀನೇ ಜವಾಬ್ದಾರಿ ವಹಿಸಿಕೊ ನಿನ್ನ ತಂದೆ ತಾಯಿ ನಿನಗೆ ದೇವರಾಗಿ ಕಾಣುವರು ....!!!

- Shiva.S.M...!

29 Mar 2017, 06:58 pm

ಶೋಧ

ಶೋಧಿಸುತಿರುವೆ ಹೃದಯದಲ್ಲಿಳಿದು ನೀನು ನೆಲೆಸಿದ ಕುರುಹು ಬಸಿದು ಬಸಿದು
ಮಾಸಿದ ನೆನಪಿನ ಕಲೆಗಳು ಮನದಿಂದ ಹೊರಬಿದ್ದವು ಬಣ್ಣ ಬಳಿದುಕೊಳ್ಳುತ್ತಾ

ನಿನಗೆ ಅಪರಂಜಿಯ ಪಟ್ಟಕೊಟ್ಟು ನಾನು ಜನರಿಗೆ ಅಪಹಾಸ್ಯನಾದೆ ನನಗೆ ನಾನೇ ಪ್ರಶ್ನೆಯಾದೆ ಬದುಕಿನ ಆದಿ ಅಂತ್ಯ ಅರಿಯದೆ

ನದಿಯೂಁಚಿಂತಿಸುತ್ತಿದೆ ನಾನು ಯಾವಾಗ ಹೇಗೆ ಮುಳುಗುವೆ ಎಂದು ದೋಣಿ ಸಜ್ಜಾಗಿದೆ ಲಗಾಮು ಮರೆತು ಲಂಗರಿಲ್ಲದ ಕಡೆ ಸಾಗಲು

ಯಾರೊ ಗೀಚಿದ ಅಮರಪ್ರೇಮದ ಸಾಲು ಅಮ್ರತವೆಣಿಸಿ ಹೃದಯಕಿಳಿಸಿ ಖಚಿತ ಉಡುಗೊರೆ ಪಡೆದು ಶೋದನೆ ಮುಗಿಸಿ ಶೋಕಸಾಗರದಲ್ಲಿ ನನ್ನವರನು ಅದ್ದಿದೆ..
✍ಆದಿಲ್ ಕೋಟೇಶ್ವರ

- adilsha

29 Mar 2017, 02:16 pm

ನಲಿವಿನ ನಡುವೆ ....

ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವವು "ನಿನ್ನೆಗೆ"
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ "ಸಂಜ್ಞೆಗೆ"

- *RS*

29 Mar 2017, 11:28 am

ಚೈತ್ರದ ಹಾದಿ......!

ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ ಬಣ್ಣದ ಮೋಡಿಗೆ;
ಹೊಸತು ವಷ೯ದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ;

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ;
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ;

- *RS*

29 Mar 2017, 11:23 am

ಗೋಳಿನ ಮಾಮರ******

ಬಾಳಿದು ಕನಸಲ್ಲ , ಗೋಳಿನ ತಿನಿಸಲ್ಲ.
ನಾನೊಂದು ಮಾಮರ , ನೀ ಮಲ್ಲಿಗೆಯ ಬಳ್ಳಿ.
ನನ್ನ-ಹಿಗ್ಗಿನ ಹೊಸ ತೋಟ;
ನೋಡು ಬರುವ ಸುಗ್ಗಿಯಾಟ!
*RS*

- *RS*

29 Mar 2017, 11:15 am

ಮಾವು-ನಾವು.

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.

ಹೂವು ನಾವು, ಹಸಿರು ನಾವು;
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ;
ಹೊಸತು ಬಯಕೆ ನಮ್ಮವು.

ತಳಿರ ತುಂಬಿದಾಸೆಯಲ್ಲ , ಹರಕೆಯಲ್ಲ ನಮ್ಮವು.
*RS*

- *RS*

29 Mar 2017, 11:11 am

ಯುಗ ಯುಗದಿ ಬಂದ ಯುಗಾದಿ ಕಾಲ

ಕವಿದ ಮೋಡ ಕರಗುತ್ತಿದೆ
ಕತ್ತಲೆಯ ಸರೆದು ಬೆಳಕಿನೆಡೆಗೆ
ನಡೆದಿದೆ ಭೂಮಂಡಲ ಬಾನೆತ್ತರದಿ
ಬೋರ್ಗವೇದ ಬಾಳಲ್ಲಿ ಹೊಳಪು ಬೀರಲಿ

ಯುಗ ಕಳೆಯುತಿದೆ ಜಗ ನಡಿಯುತಿದೆ 
ಮನ ಚಿಲುಮುತ್ತಿದೇ.ಯುಗಾದಿ ಜಗಕುಲವ ಸೆರೆಹಿಡಿದಿದೆ 

ಕಹಿ ನೋವ ಬದಿಗಿರಿಸಿ
ಸಿಹಿ ನೋವ ಜೊತೆಯಲಿ ಬೆರೆಸಿ
ಹರುಷವ ಹೊನಲ್ಲೂ ಇದರೊಡನೆ
ಕಲಿಸಿ ಬೆರೆಸಿ 
ಸವಿದು ನೋಡ ಸವಿಯಾಗಿಹುದು
ಜೀವನದ ರಸವ 

ಯುಗ ನಲಿಯುತಿದೆ ಜಗ ಉರುಳುತಿದೆ 
ಮನ ಮಿಡಿಯುತಿದೆ .ಯುಗಾದಿ ಮನಕುಲವ ಬೆಸೆಯುತಿದೆ.

ಸಸಿ ಮೊಳಕೆ ಹೊಡೆಯುತ್ತಿದೆ 
ಗಿಡ ಮರ ಚಿಗುರುತಿದೆ 
ಗುಡಿನಾಚೆ ಹಕ್ಕಿ ಹಾರುತಿದೆ 
ಗಾಳಿ ಸಂಪು ಸುಗಂದವ ಸುರಿಸುವ 
ಕಾಲಕವಿಯುವ ಸಮಯ ಇದಾಗಿದೆ

ಯುಗ ಜನಿಸಿದೆ ಜಗ ನಲುಮಿಸಿದೆ
ಮನ ದುಂಬಿಸಿದೆ ..ಯುಗಾದಿ ಪರಿಸರವ
ಕುಡಿಸಿದೆ.

ರಾಮ ರಾವಣನನ್ನು ರಾಜ್ಯಭಾರವಾದ ಕಾಲ
ವಿಷ್ಣು ಮತ್ಸ್ಯವಾತರವನು ತಳೆದಕಾಲ
ವಿಕ್ರಮಾದಿತ್ಯ ಜಯಿಸಿ ಶಾಲಿವಾಹನ ಶಕೆ
ನಿರ್ಮಾಣವಾದ ನವಭರತದಕಾಲ 
ಚಂದ್ರಸೂರ್ಯ ರಥಗಳಿಸಿದ ಕಾಲ

ಇದುವೇ ಯುಗ ಯುಗದಿ ಬಂದ ಯುಗಾದಿ ಕಾಲ..

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

✍✍✍✍✍ಪ್ರದೀಪ✍✍✍✍✍✍✍✍

- ಪ್ರದೀಪ.ಮ.ಪಾಡಮುಖೆ

29 Mar 2017, 09:32 am

ವಿಚಾರವಾದಿ ಯುಗಾದಿ

ಹೊಸ ದಿಗಂತಕೆ ಹೊಸ ವರುಷದ ಆಗಮನ
ಚಿಮ್ಮಲಿ ಎಲ್ಲೆಲ್ಲೂ ನವೋನ್ಮೇಷ ಚೇತನ
ಇನ್ನೇಕೀ ಏಕತಾನತೆಯ ತಾಡನ
ಪ್ರಕೃತಿಗೆ ವಸಂತ ನೀಡುತಿರಲು ಚುಂಬನ
ನಮಗೆಂದೆಂದೂ ಇರಲಿ ಅವಳೊಲವ ಆಲಿಂಗನ
ಅವಳಿಂದಲೆ ತಾನೇ ನಮ್ಮಯ ಜೀವನ
ಸದಾ ತುಂಬಿ ತುಳುಕಲಿ ಭೂದೇವಿಯ ಹೃಣ್ಮನ

ದುಂಬಿಗಿರದ ಮಕರಂದದ ಮೂಲ ತಿಳಿಯುವಾ ಚಿಂತೆ ನಮಗೇಕೆ.?
ಕೋಗಿಲೆ ಓದಿದೆಯೇ ಶಾಸ್ತ್ರ ಪುರಾಣಗಳ ಕಂತೆ?
ಯಾರಿಗಿರದಾ ಜಾತಿ ಮತದ ಕಂತೆ ಮಾನವಾ ನಿನಗೇಕಂತೆ?
ಸುಮ್ಮನೆ ಕರಗು ಬಾ ರಸಿಕ ಪ್ರಕೃತಿಯಲಿ
ಮುಗ್ಧ ಮಗುವಿನಂತೆ

ಸೊರ್ಯಚಂದ್ರ ಗ್ರಹತಾರೆಗಳ ಗ್ರಹಚಾರ ಬಿಡಿಸಿ, ಮಾಡುವುದೇನಿದೆ ಭವಿಷ್ಯದ ಬಲೆಯನು ಬಿಡಿಸಿ
ವಿಜ್ಞಾನದ ಬೆಳಕಲ್ಲಿ ವೈಚಾರಿಕತೆಯ ಕಣ್ ತೆರೆದು ನೋಡು ಬಾರಾ
ಇಡೀವಿಶ್ವವೇ ಕಾಣುವುದು ವಿಸ್ಮಯದ ಮಹಾಪೂರ

ಹಸಿದವನಿಗೆ ಒಂದಗುಳು ನೀಡದೆ ಹಬ್ಬವ ಮಾಡಿ ಏನು ಫಲ
ಮರಗಿಡ ಕಡಿದು ಮನೆಮುಂದೆ ತಳಿರು ತೋರಣ ಕಟ್ಟಿದರೇನು ಫಲ
ಪೂರ್ವಜರು ಮಾಡಿಹರೆಂದು ಮಾಡದಿರಿ ಮೂಢತನದ ಪರಮಾವಧಿ
ಪ್ರಗತಿಯ ಹೆಸರಲಿ ತೋಡದಿರಿ ನಿಮ್ಮದೇ ಸಮಾಧಿ

ಪ್ರಗತಿಯು ಬೇಕಿದೆ ಪ್ರಾಕ್ತನ ಮನಸಿಗೆ ಇದುವೇ ಬದುಕಿಗೆ ಬುನಾದಿ
ಮಾಡಿದರೆ ಮಾಡಿ ಕಾರಣ ತಿಳಿದು
ಈ ಜ್ಞಾನ ಅನಾದಿ
ತರ್ಕದಿ ಒರೆದು ಪ್ರತಿಯೊಂದ ಅರಿತು
ಮಾಡೋಣ ವಿಚಾರವಾದಿ ಯುಗಾದಿ

ಹಂಸಿನಿ

- ವಿಸ್ಮಯ

29 Mar 2017, 06:47 am