ಒಂಟಿ ಮರದ ಮೇಲೆ ಜಂಟಿಯಾಗಿ ಮೂಡಿದ ಹೆಸರು ಕೆತ್ತನೆ ಹೇಳದ ಕವನ...!!
ನಿನ್ನ ಹೊರತು ಬೇರೇ ಏನನ್ನು ಯೋಚಿಸದೆ ನರಳಾಟವೇ ಹೇಳದ ಕವನ ...!!
ಪ್ರೆಯಸಿಯ ಹೆಸರು ಸುವರ್ಣಾಕ್ಷರ ಹಚ್ಚೆಯ ರೂಪದಲ್ಲಿ ಹಾಕಿಸಿದ ನೋವೇ ಹೇಳದ ಕವನ ...!!
ಬಂಡೆ ಗಲ್ಲು ತಾಳ್ಮೆ ಮುರಿದು ಕೇತ್ತಿಸಿಕೋಂಡು ಅವಳ ಹೆಸರು ಹೇಳದ ಕವನ ... !!
ಬಸ್ಸಿನ ಸೀಟಿಗೆ ಗೊತ್ತಾಗಿ ಅವಳಿಗೆ ತಿಳಿಯದೆ ಹೋದ ಆ ಅಕ್ಷರ ಹೇಳದ ಕವನ ...!!
ಸಾವಿರ ರೂಪಾಯಿ ನೋಟಿನ ಮೇಲೆ ಬರೆದ ಬೆಲೆ ಕಟ್ಟಲಾಗದ ಪ್ರತಿಯ ಮಾತು ಹೇಳದ ಕವನ ...!!
ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲಾ ...
ಒಂದು ವಾರ ಒಂದೇ ಒಂದು ವಾರ ನಿನ್ನ ಮನೆಯ ಖರ್ಚುಗಳೆಲ್ಲಾ ನೀನೇ ಜವಾಬ್ದಾರಿ ವಹಿಸಿಕೊ ನಿನ್ನ ತಂದೆ ತಾಯಿ ನಿನಗೆ ದೇವರಾಗಿ ಕಾಣುವರು ....!!!
ಹೊಸ ದಿಗಂತಕೆ ಹೊಸ ವರುಷದ ಆಗಮನ
ಚಿಮ್ಮಲಿ ಎಲ್ಲೆಲ್ಲೂ ನವೋನ್ಮೇಷ ಚೇತನ
ಇನ್ನೇಕೀ ಏಕತಾನತೆಯ ತಾಡನ
ಪ್ರಕೃತಿಗೆ ವಸಂತ ನೀಡುತಿರಲು ಚುಂಬನ
ನಮಗೆಂದೆಂದೂ ಇರಲಿ ಅವಳೊಲವ ಆಲಿಂಗನ
ಅವಳಿಂದಲೆ ತಾನೇ ನಮ್ಮಯ ಜೀವನ
ಸದಾ ತುಂಬಿ ತುಳುಕಲಿ ಭೂದೇವಿಯ ಹೃಣ್ಮನ
ದುಂಬಿಗಿರದ ಮಕರಂದದ ಮೂಲ ತಿಳಿಯುವಾ ಚಿಂತೆ ನಮಗೇಕೆ.?
ಕೋಗಿಲೆ ಓದಿದೆಯೇ ಶಾಸ್ತ್ರ ಪುರಾಣಗಳ ಕಂತೆ?
ಯಾರಿಗಿರದಾ ಜಾತಿ ಮತದ ಕಂತೆ ಮಾನವಾ ನಿನಗೇಕಂತೆ?
ಸುಮ್ಮನೆ ಕರಗು ಬಾ ರಸಿಕ ಪ್ರಕೃತಿಯಲಿ
ಮುಗ್ಧ ಮಗುವಿನಂತೆ
ಸೊರ್ಯಚಂದ್ರ ಗ್ರಹತಾರೆಗಳ ಗ್ರಹಚಾರ ಬಿಡಿಸಿ, ಮಾಡುವುದೇನಿದೆ ಭವಿಷ್ಯದ ಬಲೆಯನು ಬಿಡಿಸಿ
ವಿಜ್ಞಾನದ ಬೆಳಕಲ್ಲಿ ವೈಚಾರಿಕತೆಯ ಕಣ್ ತೆರೆದು ನೋಡು ಬಾರಾ
ಇಡೀವಿಶ್ವವೇ ಕಾಣುವುದು ವಿಸ್ಮಯದ ಮಹಾಪೂರ
ಹಸಿದವನಿಗೆ ಒಂದಗುಳು ನೀಡದೆ ಹಬ್ಬವ ಮಾಡಿ ಏನು ಫಲ
ಮರಗಿಡ ಕಡಿದು ಮನೆಮುಂದೆ ತಳಿರು ತೋರಣ ಕಟ್ಟಿದರೇನು ಫಲ
ಪೂರ್ವಜರು ಮಾಡಿಹರೆಂದು ಮಾಡದಿರಿ ಮೂಢತನದ ಪರಮಾವಧಿ
ಪ್ರಗತಿಯ ಹೆಸರಲಿ ತೋಡದಿರಿ ನಿಮ್ಮದೇ ಸಮಾಧಿ
ಪ್ರಗತಿಯು ಬೇಕಿದೆ ಪ್ರಾಕ್ತನ ಮನಸಿಗೆ ಇದುವೇ ಬದುಕಿಗೆ ಬುನಾದಿ
ಮಾಡಿದರೆ ಮಾಡಿ ಕಾರಣ ತಿಳಿದು
ಈ ಜ್ಞಾನ ಅನಾದಿ
ತರ್ಕದಿ ಒರೆದು ಪ್ರತಿಯೊಂದ ಅರಿತು
ಮಾಡೋಣ ವಿಚಾರವಾದಿ ಯುಗಾದಿ