Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತೊಗಟೆ ಕಳಚುವ ಮುನ್ನ (ಗಿಬ್ರಾನ್ ಪ್ರೇರಿತ)

ಪ್ರೇಮ ಎಳೆಯಾಗಿ ನಿನ್ನೊಳಗೆ
ಬೆಳೆಯ್ಪಡುತ್ತದೆ
ಕಣ್ಣೀರಾದರೂ ಹಾಕಿ ಪೋಷಿಸು
ಚಿಗುರುವಾಗ ಮುಳ್ಳುಗಳೂ ಬರಬಹುದು
ಕಾಯಲು ಹುಟ್ಟಿವೆಯೆಂದು
ತಿಳಿದುಕೋ..

ಹಗಲು ರಾತ್ರಿ ಮರವಾಗಿ
ಎದುರು ನಿಂತಿರುತ್ತದೆ
ನೆನಪುಗಳ ಕೊಂಬೆಗಳಲ್ಲಿ
ಕನಸುಗಳು ಕಾಯಿಯಾಗುತ್ತದೆ
ಇಗೋ,ಕೆಲವರಿಗೆ ವಿರಹವೆಂಬ
ಬರಗಾಲ ಎರಗುತ್ತದೆ
ಮೌನದ ಬಿಸಿಲು ಅದಕೆ ಕಾರಣವಾಗಿರುತ್ತದೆ

ನೆನಪಿಡು,ಕಳೆಯಂತೆ ಕೆಲವು
ಬೇನಾಮಿ ಬಳ್ಳಿಗಳೂ ಮುತ್ತುತ್ತವೆ
ನಿನ್ನೊಡಲ ಸಾವಧಾನ ಎಡೆಕೊಡಲಿ
ತಪ್ಪಿಲ್ಲ
ಬಳ್ಳಿಯೂ ಹೂ ಬಿಡವುದಾದರೆ
ಎಚ್ಚರವಾಗಿರು,ಘಮಿಸಿ ರಮಿಸಿ
ಏಕಸ್ವಾಮ್ಯ ಮಾಡಿಕೊಳ್ಳಬಹುದು
ಕ್ರಮೇಣ ಒಣತೊಗಟೆಗಳ ಕಳಚಿಬಿಡು
ಬಳ್ಳಿಯೂ ಪಾಶವಾಗದಿರಲಿ

ನೀ ಬೆಳೆಯಲು ನಿನಗೊಬ್ಬ ಒಡೆಯನಿರುತ್ತಾನೆ ಆ ಅಂಗಳದ
ಕೃಷಿ ನೀನಾಗಿರುತ್ತಿ ನೋಡಿಕೋ,
ಎಂದೆಂದೂ ನಿನ್ನನ್ನು ಸಮೃದ್ಧವಾಗಿಸಲು ಆಶಿಸುವವ

ಕೃತಜ್ಞನಾಗಿರು,
ಕತ್ತರಿಸಲು ಬರದಿರುವವರೆಗೂ,
ಎಳೆಯನ್ನು ಚಿಗುರಿಸುವೆಯೋ
ಚಿವುಟಿ ಹಾಕುವೆಯೋ
ಅಂತಿಮ ತೀರ್ಮಾನ ನಿನ್ನದೇ
ದೇವರು ನನ್ನ ಪರವಾಗಿ ಚಿಂತಿಸಲು
ದಾರಿ ತೋರಲಿ..

*ಅವಿಜ್ಞಾನಿ*

- ಅವಿಜ್ಞಾನಿ

02 Apr 2017, 02:43 pm

ಕಂಗಳ ನೀರಾ ಹನಿ

ಲೇಖನಿಯೊಳಗಪ್ಪಿ
 ಬಿಳಿ ಹಾಳೆಗಪ್ಪುತಿರುವದು ಕಪ್ಪು ವರ್ಣದ ಇಂಕಲ್ಲಾ
  ಕಣ್ಣಿಗು ಕಾಣದ ಬಿಳಿ
  ರೂಪದ ಕಂಗಳ ನೀರಾ ಹನಿ

 ಅದರೆ ಇನ್ನು ಕೇಲ ದೀನಗಳಲ್ಲೆ ಬಿಚ್ಚಲಿದೆ
 ಸಮಾಜ ಸೆವೆಯೆಂ ಮುಖವಾಡವನೊತ್ತಾ ಮುರ್ಖಾ ಮುಖಗಳ
 ಎಚ್ಚೇರ ವಿರಲಿ
 ಬಿಳಿ ಹಾಳೆಯಾ ಮೇಲೆ ಅರ್ಭಟಿಸಲು ಸಜ್ಜಾಗುತಿದೆ
 ಬಿಳಿ ಕಂಗಳ ನಿರಾ ಸುನಾಮಿ .....

ಪ್ರವೀಣ್ ಯಾದವ್

- ಪ್ರವೀಣ್ ಯಾದವ್

02 Apr 2017, 02:40 pm

ನಮ್ಮ ಜವಾಬ್ದಾರಿ ಯಾರದು

ಇಷ್ಟ ಪಟ್ಟು ಮದುವೆ ಆಗಿಲ್ಲ ನೀವು
ನಮಗೆ ಯಾವ ಪ್ರೀತಿಯು ಕೊಟ್ಟಿಲ್ಲ ನೀವು .
ಯಾಕೆ ಈಗಾಯ್ತು ಎಂದು ಕೇಳಲು
ನಮಗೆ ತಿಳಿದಿಲ್ಲ ಅಪ್ಪ-ಅಮ್ಮ .

ಮಕ್ಕಳಾಗುವ ತನಕ ನಿಮ್ಮ ಸ್ವಾರ್ಥ ನಿಮ್ಮದು .
ಆದರೆ ನಿಮಗಾಗಿ ನಾವು ಇದ್ದಮೇಲೆ ನಿಮ್ಮ ಪ್ರಪಂಚವೇ ನಾವಾಗಬೇಕಲ್ಲ .

ಇನ್ನು ನಿಮಗಾಗಿ ನೀವಿದ್ದರೆ ನಾವ್ಯಾಕೆ ನಿಮಗೇ ........
ಅಪ್ಪನ ಪ್ರೀತಿ ಅಮ್ಮನ ಅಕ್ಕರೆ
ಎರಡು ಇಲ್ಲ ನಮಗೆ .

ನಾವು ಎಲ್ಲರ ತರ ಮಕ್ಕಳಲ್ಲವೇ
ನಮಗೂ ಎಲ್ಲರಹಾಗೆ ನೂರು
ಆಸೆಗಲಿಲ್ಲವೇ .........

ಇಬ್ಬರ ಸಂತೋಷಕ್ಕೂ ನಾವು
ಪ್ರತಿರೋಪವಾದಾಗ ಒಬ್ಬರೇ
ನಮ್ಮ ಜವಾಬ್ದಾರಿ ಏಕೆ ವಹಿಸಬೇಕು.

ಎಲ್ಲರೂ ಅನ್ನಬಹುದು ಇದು ನಿಮ್ಮ ವಿಧಿ ಬರಹವೆಂದು ಆದರೆ ನಮಗೆ ಗೊತ್ತು ಅದು ನಮ್ಮ ತಂದೆ-ತಾಯಿ ನಮಗಿಟ್ಟ ಶಾಪವೆಂದು.

- ಚುಕ್ಕಿ

02 Apr 2017, 12:25 pm

ಬಾಳೊಂದು ಗೋಳು... ನೂರಾರು ಸೋಲು...

ಬಾಳೊಂದು ಗೋಳು ನೂರಾರು ಸೋಲು
ಸೋತೆನೆಂದು ನೊಂದರೆ ಬೆಳಗದು ನಿನ್ನ ಬಾಳು
ಗೆದ್ದೆನೆಂದು ಗರ್ವಿಸಿದರೆ ಆಗುವುದು ಹಾಳು
ಓ ನನ್ನ ಮನವೇ ಕೇಳು ಪ್ರೀತಿಗಾಗೆ ಪ್ರತಿಜನ್ಮ ನೀ ತಾಳು||ಪ||

ಅನ್ಯರು ಏನೆಂದರೂ ನಿನ್ನ ಮನವೇ ನೊಂದರೂ
ಕೊನೆಗೆ ನಿನ್ನೇ ಕೊಂದರೂ ಪ್ರೀತಿಯ ಮರೆಬೇಡ ನೀತಿಯ ಬಿಡಬೇಡ| ದಿಕ್ಕಿಲ್ಲದೆ ಸಾಗುವ ಪಯಣ ಗುರಿಯೆಂದು ತಲುಪದು ಉತ್ತಮ ಗುರಿಯೆಡೆಗೆ ಸಾಗಲಿ ಜೀವನ ಗುರಿಯಿಂದ ಜನ್ಮ ಆಗುವುದು ಪಾವನ| ಮನಸ್ಸಿದ್ದರೆ ಕಲ್ಲುಕೂಡಾ ಕರುಗುವುದು ಕೃಷಿ ಇದ್ದರೆ ಶಿಲೆಕೂಡ ಶಿಲ್ಪವಾಗುವುದು| ಆಸೆಯ ಬಿಡು ನೀ ಆಶಯ ಕೈ ಹಿಡಿ ಸಾಧನೆಯ ಮೆಟ್ಟಿಲು ಹತ್ತಿ ಎಲ್ಲರ ಪ್ರೀತಿಯ ಪಡಿ||೧||

ಶತ್ರುಗಳು ಯಾರು ಇಲ್ಲ ನಮಗೆ ನಾವೇ ಕತೃಗಳು ಯಾರೋ ಕಲ್ಲು ಎಸೆದರೆಂದೂ ಅವ ನೀ ದ್ವೇಷಿಸಬೇಡ ಅವನೆಸೆದ ಕಲ್ಲೆ ನಿನ್ನ ಸಾಧನೆಯ ಮೆಟ್ಟಿಲು ಎಂಬುದನ್ನು ಮರೆಯಬೇಡ| ಜೀವನವ ಚಿಂತಿಸಬೇಡ ಬೆನ್ನೇ ತೋರದೆ ಮುನ್ನುಗ್ಗುತ್ತಿದ್ದರೆ ಸೋಲೇ ನಿನಗಿಲ್ಲ ನೀ ಇಟ್ಟ ಪ್ರತಿ ಹೆಜ್ಜೆ ಗೆಜ್ಜೆ ಸದ್ದಾಗಿ ಮನವ ಕದಿಯುವುದು|ಕಾರ್ಯವಿದ್ದರೆ ಕನಸ್ಸು ಕೂಡ ನನಸ್ಸಾಗುವುದು ಕೈ ಹಾಕಿದರೆ ಕಸ ಕೂಡ ರಸವಾಗುವುದು| ನೆನ್ನೆಯ ನೆನ್ನೆಗೆ ಮರೆತು ಬಿಡು ನಾಳೆಯೆಂದು ತಿಳಿಯದ ನಮಗೆ ಈ ಕ್ಷಣವೇ ನೀ ಬದಲಾಗಿ ಕಾರ್ಯಪ್ರವೃತ್ತನಾಗು||೨||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

02 Apr 2017, 12:23 pm

ಸ್ವಾರ್ಥ

ಯಾಕೆ ಈ ಜನರು ಇಗೆ
ತಮ್ಮ ಸ್ವಾರ್ಥ ತಮ್ಮದೆ
ಉಳಿದವರ ಯಾರ ನೋವು
ಇವರಿಗೆ ಕಾಣಲ್ಲ .

ನೊಂದವರ ನೋವಿಗೆ ಸಮಾಧಾನ
ಹೇಳುವುದು ಹಾಗಿರಲಿ
ಅದನ್ನು ಇವರ ಮಾತಿನಿಂದ
ಇನ್ನು ಹೆಚ್ಚಿಸುತ್ತಾರೆ.

ಮಾನವತ್ವ ಎಂಬ ಪದಕ್ಕೆ
ಅರ್ಥವೇ ಗೊತ್ತಿಲ್ಲ ಇವರಿಗೆ .
ಯಾವ ದೇವರು ಇವರನ್ನು
ಕೇಳುವುದಿಲ್ಲವೆಂಬ ಧರ್ಯ ಇವರಲ್ಲಿ.

- ಚುಕ್ಕಿ

02 Apr 2017, 11:23 am

ಕಣ್ಣಲ್ಲೆ ಇರುವೆ....

ಇಂದು ನೀ ನನ್ನ ಅಗಲಿ ಹೋದರೂ..
ನಿನ್ನ ನೆನಪುಗಳಿಂದ ಮಾಸಿ ಹೋದರೂ..
ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ...
ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!

-

02 Apr 2017, 09:45 am

ಗಡುಸಾದ ಮಾತು

ಕಹಿ ನೋವ ಬದಿಗಿರಿಸಿ
ಸಿಹಿ ನೋವ ಜೊತೆಯಲಿ ಬೆರೆಸಿ
ಹರುಷವ ಹೊನಲ್ಲೂ ಇದರೊಡನೆ
ಕಲಿಸಿ ಬೆರೆಸಿ 
ಸವಿದು ನೋಡ ಸವಿಯಾಗಿಹುದು
ಜೀವನದ ರಸವ 
ಗಳಿಗೆ ಗಮನಿಸಿದೆ ಚಿಲುಮೆ ತಿರುಗುತ್ತಿದೆ .
ಮಂಕಾದ ಮಾತು ಗಡುಸಾಗಿದೆ
ತಿಳಿದು ನೋಡಾ ನೋಟದ
ಕಲ್ಪನೆಯ ಹಿಂದಿನಾಚೆಯ ಮಲ್ಲಿಗೆಯ ಹಾಸಿಗೆ
ಸುರಿದೆ ಸುರಿಮಳೆಯ ಮಾತಿನ ಮಹಿಮೆ
ತಿಳಿಯದಿದ್ದೋಡೇ ನಾನಾಗ ಹುಚ್ಚನಾದೆ ..
ಮಂಕುತಿಮ್ಮ್

- ಪ್ರದೀಪ.ಮ.ಪಾಡಮುಖೆ

01 Apr 2017, 11:14 pm

ನಡೆ ಮುಂದೆ

ನಡೆ ಮುಂದೆ ನೀ
ಹಿಂತಿರುಗಿ ನೋಡದೆಲೆ
ಸಾವಿನ ಮನೆಯ ಹೊಸ್ತಿಲಿಗೆ
ನೀ ಹೋಗಿ ಸೇರುವ ವರೆಗೆ...

ಇಟ್ಟು ನಡೆ ದಿಟ್ಟ ಹೆಜ್ಜೆ
ಅಂಜದೆಲೆ ನಡೆದಂತೆ ಗಜ ಪಡೆ
ಊಳಿಡಲಿ ನೂರು ನಾಯಿಗಳ ಹಿಂಡು
ಸಹಿಸದೆಲೆ ನಿನ್ನೇಳಿಗೆಯನು ಕಂಡು
ಜಗ್ಗದಿರು ಕುತಂತ್ರಿಗಳ ಕಾಟಕ್ಕೆ
ಕೂರದಿರು ಸುಖ ರಸದೂಟಕ್ಕೆ.

ಆಗಿದ್ದು ಸಾದಿಸು
ಆಗದ್ದು ದೂರ ಬಿಸುಟು
ಅಹೋರಾತ್ರಿ ಶ್ರಮಿಸು
ಮೀಟುತ್ತಿರು ಬದುಕ ದೋಣಿ ಹುಟ್ಟು.
ಅದರಲ್ಲೇ ಇಹುದು
ಬಾಳ ಪಯಣದ ಗುಟ್ಟು.

- ಶ್ರೀಗೋ.

01 Apr 2017, 09:45 pm

ಹಿತಾಸೆಯೇ ಚಂದ

ಮೋಡ ಕವಿಯಿತು ಮಳೆ ಶುರುವಾಯಿತು.
ತಂಪಾದ ಗಾಳಿ ನನಗೆ ತಾಗಿತು.

ಬಿಸಿ ಬಿಸಿಯ ಕಾಫಿ ನನ್ನ ಕೈ ಸೇರಿತು
ಮಳೆ ನಿಂತಾಗ ಮಣ್ಣಿನ ಘಮ ಘಮ ಮನಸೆಳೆಯಿತು.

ಮಳೆಯಲ್ಲಾಡುಲು ನನಗೇಷ್ಟೋ ಆಸೆ .
ನಿಂತ ನೀರಿನಲ್ಲಿ ಆಡಲು ಅಷ್ಟೊಂದು ಮಜವಲ್ಲ.
ಕಡಲಲ್ಲಿ ಎಷ್ಟು ಆಡಿದರೂ ನನಗೆ ತೃಪ್ತಿಯಾಗಲ್ಲ .

ಸವಿಯದ ಹಣ್ಣಿನ ರುಚಿ ಹೇಗಿದ್ದರೂ ಚಂದ .
ಅನ್ನುವ ಹಾಗೆ ಮಳೆಯಲ್ಲಾಡುವ
ಹಿತಾಸೆಯೇ ಚಂದ.

- ಚುಕ್ಕಿ

01 Apr 2017, 05:56 pm

ಪ್ರೀತಿಗೆ ಸಿಕ್ಕು ಹಾಳಾಗದಿರಲಿ ಹರೆಯ

ಸಮುದ್ರದಲ್ಲಿ ಬಿಟ್ಟ ಕಾಗದದ ಹಡಗಿನಂತೆ ಈ ಹದಿಹರೆಯದ ಪ್ರೀತಿ
ಯಾರೂ ತಿಳಿಯರು ಇದರ ರೀತಿ ನೀತಿ
ಟೈಟಾನಿಕ್ ನಂತಹ ಬೃಹತ್ ಹಡಗೇ ಮುಳುಗಿಹೋಯ್ತು ಸಮುದ್ರದಲ್ಲಿ
ಇನ್ನು ಈ ಸಣ್ಣ ಕಾಗದದ ಹಡಗು ಉಳಿದೀತೆ ಹೇಳಿ.

ಪ್ರೀತಿಯೆಂಬುದು ಜೀವನದಲ್ಲಿ ಯಾವಾಗಲೋ ಮಾಡಬೇಕಾದ ಸವಾರಿ
ಅದಕ್ಯಾಕೆ ಇಂದಿನಿಂದಲೇ ಮಾಡುವೆ ತಯಾರಿ
ಈ ಜೀವನವೆಂಬುದು ಬೃಹತ್ ಸಂತೆ
ಇಲ್ಲಿ ನೀ ತರಬೇಡ ಪ್ರೀತಿಯ ಕಂತೆ.

ಮೊದಲು ಜೀವನವ ಸಾರ್ಥಕವಾಗಿ ಬಾಳು
ನಂತರ ನಿಲ್ಲುವುದು ನಿನ್ನ ಹಿಂದೆ ಹುಡುಗಿಯರ ಸರತಿ ಸಾಲು
ಹರೆಯದಲ್ಲಿ ಹುದುಗಿರುತ್ತದೆ ಏನನ್ನೋ ಸಾಧಿಸುವ ಕಿಚ್ಚು
ಆ ಕಿಚ್ಚನು ಆರಿಸುವ ನೀರಿನಂತೆ ಈ ಪ್ರೀತಿಯ ಹುಚ್ಚು.

ಜೀವನದಲ್ಲಿ ಕೊಡಬೇಡ ಪ್ರೀತಿಗೆ ಮೊದಲ ಸ್ಥಾನ
ಅದರಿಂದ ನಿನಗೆ ಸಿಗುವುದು ಕೇವಲ ಅವಮಾನ
ತಂದೆ ತಾಯಿ ಗುರುಗಳು ಜೀವನದಲ್ಲಿ ತುಂಬಾ ಮುಖ್ಯ
ಇವರ ಮುಂದೆ ಪ್ರೀತಿಯೆಂಬುದು ಅಶಖ್ಯ.

ಜೀವನದಲ್ಲಿ ಒಮ್ಮೆ ಮಾತ್ರ ಸಿಗುವುದು ಹರೆಯ
ಪ್ರೀತಿಗೋಸ್ಕರ ಹಾಳು ಮಾಡಬೇಡ ಈ ಅಮೂಲ್ಯ ಸಮಯ
ನಿನಗಾಗಿ ಕಾಯುತಿರುವುದು ಉಜ್ವಲ ಉಷೆ
ಅದ ನೋಡಲು ನೀ ಇಳಿಸಿಕೊಳ್ಳಬೇಕು ಪ್ರೀತಿಯ ನಶೆ.

ಜೀವನದಲ್ಲಿ ಇರಲಿ ಸಾಧಿಸುವ ಛಲ
ಪ್ರೀತಿ ಮಾಡಿ ಆಗಬೇಡ ಚಂಚಲ
ಪ್ರೀತಿಯ ಹತಾಶೆಯಿಂದ ಕೆಡಿಸಿಕೊಳ್ಳಬೇಡ ನೆಮ್ಮದಿ
ಈ ಲೋಕದಲ್ಲಿ ನಿನ್ನನ್ನು ಪ್ರೀತಿಸುವವರಿದ್ದಾರೆ ಎಷ್ಟೋ ಮಂದಿ
ಪ್ರೀತಿಗೂ ಇದ್ದೇ ಇದೆ ಸೂಕ್ತ ಕಾಲ
ಅದಕ್ಕೆ ಹರೆಯವಲ್ಲ ಸಕಾಲ.

- ಅಕವಿ

01 Apr 2017, 03:44 pm