ನಾನು ಸಾಯಲಿಲ್ಲ
ಅವಳು ಸಾಯಲಿಲ್ಲ
ನಮ್ಮಿಬ್ಬರಿಗೂ ಹುಟ್ಟಿದ
ಪ್ರೀತಿಯ ಕೂಸು ಸತ್ತುಹೋಯಿತು
ಮೂರುದಿನಕೆ ಹಾಲು ತುಪ್ಪ ಬಿಟ್ಟಾಯಿತು
ಗೋರಿಯನು ಕಟ್ಟಾಯಿತು
ಇನ್ನೇನು ಹೇಳುವುದು
ಅವಳ ಬದುಕು ಅವಳಿಗೆ
ನನ್ನ ಬದುಕು ನನಗೆ
ಉಸಿರಿರುವವರೆಗೆ ಜೀವ
ಬದುಕಿರುವವರೆಗೆ ಬದುಕು
ನನಗೆ ಗೊತ್ತು
ನೀ ಬೇರೆಯವರ ಸ್ವತ್ತು
ಜಾಗೃತ ಮನಸು ಹೇಳುವುದು
ನಿನ್ನ ಮರೆತುಬಿಡು ಎಂದು
ನಾನು ಆಕೆಲಸ ಈಕೆಲಸ ಮಾಡುತಾ
ಪ್ರಯತ್ನಿಸುತ್ತಿರುವೆ ಮರೆಯಬೇಕೆಂದು
ನಾ ನಿದ್ರಿಸುವಾಗ ಸುಪ್ತಮನಸಿನಲಿ
ಅಡಗಿರುವ ನಿನ್ನ ನೆನಪು ಕಾಡುವುದು
ಎಚ್ಚರಾದ ಕಣ್ಣುಗಳು ನಿನ್ನ ಹುಡುಕುವವು
ನನ್ನುಸಿರಿರುವವರೆಗೂ ನನ್ನೊಡನೆ ಬರುವ
ನೆನಪುಗಳ ಕೊಟ್ಟಿರುವೆ...
ನೀನೆ ಹೇಳು ನಾ ಏನು ಮಾಡಲೀ...
ಅದೋ,ದೂರದಿಂದ ಕೇಳಿ
ಬರುತ್ತೆ ಮಸಣದ ಕವಿತೆ
ಆಹ್ಲಾದಕರ ಶುಶ್ರಾವ್ಯ
ಇನ್ನು ಏನೇನೋ
**
ಬದುಕಿಗೆ ಆಸೆಯ ವೈನ್
ಕುಡಿಸಿದ್ದಾದರೂ ಏಕೆ!?
ಥೂ,ಅಮಲಿನ್ನು ಇಳಿದಿಲ್ಲ
ಹೊಟ್ಟೆ ತುಂಬಿದ ಮೇಲಿನ
ಹಸಿವು ಕವಿತೆ
**
ಈ ಜೇಬಿನಲಿ
ಅನಾಥ ಮೌನಗಳನ್ನು
ಮಾತ್ರ ಶೇಖರಿಸಲಿರುವುದಲ್ಲ
ಥತ್ ನಿಮ್ ಮುಖಕ್ಕೆ
ಸಾಯೋ ನೆನಪಿಗೆ
ಅವಳೊಂದು ಕವಿತೆ
**
ಎರ್ರಾಬಿರ್ರಿ ಏರಿದೆ
ಅಮಾಯಕ ಬಯಕೆಯ
ಅರ್ಧ ಕವಿತೆಗಳು
ಪದಗಳನ್ನು ಜೋಡಿಸಿ
ಬೇಕಾದವರು ಕವಿತೆಯಾಗಿಸಿ
ದಯವಿಟ್ಟು
**
ಅವನ್ಯಾರದೋ
ಕವಿತೆಯಲಿ ಹೋದ
ನೋಡಿ ಅದೇ ದಾರಿ
ಮಸಣ ಜೋಪಡಿಯೊಳಗೆ
ಇಷ್ಟು ಮಾತ್ರ ಹೇಳಬಲ್ಲ
ನನ್ನೀ ಅಂತಿಮ
ಕವಿತೆ..!!
ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ. ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.
ಹೆತ್ತವರಿಗರಿವಿಲ್ಲ ಜಾತಿಯೊಂದು ಪಿಡುಗು,
ಅವರ ಹೆತ್ತವರು, ಇನ್ನಾರನೋ ಅನುಸರಿಸಿ,
ಸ್ಪಷ್ಟಹುರುಳಿಲ್ಲ, ಈ ಜಾತಿ ವ್ಯವಸ್ಥೆಗೆ,
ಇರುವರೀರ್ವ ಸ್ತ್ರೀ ಪುಲ್ಲಿಂಗ,
ಜಾತಿ ಫಲಕ ತೊಟ್ಟು ಭಾವಭಂಗ..!