Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏಕೆ?

ನಾನು ಸಾಯಲಿಲ್ಲ
ಅವಳು ಸಾಯಲಿಲ್ಲ
ನಮ್ಮಿಬ್ಬರಿಗೂ ಹುಟ್ಟಿದ
ಪ್ರೀತಿಯ ಕೂಸು ಸತ್ತುಹೋಯಿತು
ಮೂರುದಿನಕೆ ಹಾಲು ತುಪ್ಪ ಬಿಟ್ಟಾಯಿತು
ಗೋರಿಯನು ಕಟ್ಟಾಯಿತು
ಇನ್ನೇನು ಹೇಳುವುದು
ಅವಳ ಬದುಕು ಅವಳಿಗೆ
ನನ್ನ ಬದುಕು ನನಗೆ
ಉಸಿರಿರುವವರೆಗೆ ಜೀವ
ಬದುಕಿರುವವರೆಗೆ ಬದುಕು

- ಚೇತನ್ ಬಿ ಸಿ

06 Apr 2017, 08:05 am

ನೀನೆಲ್ಲಿರುವೆ***

ನೀನೆಲ್ಲಿರುವೆಯೋ ನನಗಾಗಿ
ನನ್ನ ನಗುವಿನ ಹೆಸರಾಗಿ***

ಕಂಬನಿಯ ಸೆರೆಮನೆಯಲ್ಲಿ
ನೀನಿಲ್ಲದೆ ಸೆರೆಯಾಗಿರುವೆನು
ನಾ ನಿನಗಾಗಿ***

- ಚುಕ್ಕಿ

05 Apr 2017, 11:58 pm

ಕಣ್ಮರೆಯಾಗು ನೀ...........

ಕರಗಿದ ಕಂಬನಿಯ
ನಗುವಲ್ಲಿ ನಾನಿಂದು
ಮೌನವಾಗಿ ಕುಳಿತಿರುವೆ.

ಯಾರಿಂದ ಈ ನೋವು
ಯಾರಿಗಾಗಿ ಈ ಸಂಘರ್ಷಣೆ
ನನ್ನಲ್ಲಿ ನನಗೀಗ .

ಮರೆಯಾಗು ನೀ ಮಾಯವಾಗು ನೀ
ನನ್ನಿಂದ ದೂರವಾಗು ನೀ
ಹೇ ಕಂಬನಿ ಕಣ್ಮರೆಯಾಗು ನೀ.

- ಚುಕ್ಕಿ

05 Apr 2017, 11:57 pm

ನನ್ನ ದಾರಿ ನಿನ್ನ ದಾರಿ

ನಾನು ನಿನ್ನ‌ ಕ‌ವಿತೆಗ‌ಳ‌ ಸಾಲುಗ‌ಳಾಗುವೆ ಎಂದ‌ಳು, ಸ‌ರಿ ಎಂದೆ.
ನಿನ್ನ‌ ಮೆಚ್ಚಿನ‌ ಹಾಡುಗ‌ಳ‌ ಜೀವ‌ವಾಗುವೆ
ಎನ್ನ‌ಲು, ಆಗ‌ಲಿ ಎಂದೆ.
ನಿನ್ನ‌ ಕ‌ನ‌ಸುಗ‌ಳ‌ ಒಡ‌ತಿಯಾಗಿ ನಿನ್ನ‌ ಕ‌ಲ್ಪ‌ನೆ ಯಾಗುವೆ ಎಂದ‌ಳು.ಹಾಗೆ ಸ್ವ‌ಲ್ಪ‌ ಮ‌ನ‌ಸ್ಸಿಗೆ ಮುದ‌ ನೀಡುವ‌ ಪ್ರೀತಿಯಾಗು ಅಂದೆ.
ಈಗ‌ ನ‌ನ್ನ‌ ದಾರಿ ನ‌ನ‌ಗೆ, ನಿನ್ನ‌ ದಾರಿ ನಿನ‌ಗೆ ಎಂದು ಹೊರ‌ ನೆಡೆದ‌ಳು.
ಸ‌ರಿ ಮೊದ‌ಲ‌ನಿಂದ‌ಲೂ ನ‌ನ್ನ‌ ದಾರಿಯಲ್ಲಿ ನಾನು ಸಾಗುತ್ತಿದ್ದೇನೆಂದು ಬೀಳ್ಕೊಟ್ಟೆ.
ಹೀಗೆ ಅನ‌ಗ‌ತ್ಯ‌,ಕಾರ‌ಣ‌ವಿಲ್ಲದ‌ ಪ್ರೀತಿ ತೋರುತ್ತ‌
ಹ‌ತ್ತಿರ‌ವಾಗಿ ಮ‌ತ್ತೆ ದೂರ‌ವಾ‌ಗುತ್ತ‌ ನೆಮ್ಮ‌ದಿ ಕ‌ಳೆದು, ಕ‌ಳೆದುಕೋಳ್ಳುವ‌ರ‌ನ್ನ ನೆನೆದು ಮ‌ರುಗುತ್ತ‌ ಮುಂದೆ ಹೆಜ್ಜೆ ಹಾಕಿದೆ.

- ಶಶಿಧರ ಹೆಚ್ ಎನ್

05 Apr 2017, 11:01 pm

ಏನು ಮಾಡಲೀ...

ನನಗೆ ಗೊತ್ತು
ನೀ ಬೇರೆಯವರ ಸ್ವತ್ತು
ಜಾಗೃತ ಮನಸು ಹೇಳುವುದು
ನಿನ್ನ ಮರೆತುಬಿಡು ಎಂದು
ನಾನು ಆಕೆಲಸ ಈಕೆಲಸ ಮಾಡುತಾ
ಪ್ರಯತ್ನಿಸುತ್ತಿರುವೆ ಮರೆಯಬೇಕೆಂದು
ನಾ ನಿದ್ರಿಸುವಾಗ ಸುಪ್ತಮನಸಿನಲಿ
ಅಡಗಿರುವ ನಿನ್ನ ನೆನಪು ಕಾಡುವುದು
ಎಚ್ಚರಾದ ಕಣ್ಣುಗಳು ನಿನ್ನ ಹುಡುಕುವವು
ನನ್ನುಸಿರಿರುವವರೆಗೂ ನನ್ನೊಡನೆ ಬರುವ
ನೆನಪುಗಳ ಕೊಟ್ಟಿರುವೆ...
ನೀನೆ ಹೇಳು ನಾ ಏನು ಮಾಡಲೀ...

- ಚೇತನ್ ಬಿ ಸಿ

05 Apr 2017, 10:47 pm

ಹಲ್ಕಟ್ ಕವಿತೆ

ಅದೋ,ದೂರದಿಂದ ಕೇಳಿ
ಬರುತ್ತೆ ಮಸಣದ ಕವಿತೆ
ಆಹ್ಲಾದಕರ ಶುಶ್ರಾವ್ಯ
ಇನ್ನು ಏನೇನೋ
**
ಬದುಕಿಗೆ ಆಸೆಯ ವೈನ್
ಕುಡಿಸಿದ್ದಾದರೂ ಏಕೆ!?
ಥೂ,ಅಮಲಿನ್ನು ಇಳಿದಿಲ್ಲ
ಹೊಟ್ಟೆ ತುಂಬಿದ ಮೇಲಿನ
ಹಸಿವು ಕವಿತೆ
**
ಈ ಜೇಬಿನಲಿ
ಅನಾಥ ಮೌನಗಳನ್ನು
ಮಾತ್ರ ಶೇಖರಿಸಲಿರುವುದಲ್ಲ
ಥತ್ ನಿಮ್ ಮುಖಕ್ಕೆ
ಸಾಯೋ ನೆನಪಿಗೆ
ಅವಳೊಂದು ಕವಿತೆ
**
ಎರ್ರಾಬಿರ್ರಿ ಏರಿದೆ
ಅಮಾಯಕ ಬಯಕೆಯ
ಅರ್ಧ ಕವಿತೆಗಳು
ಪದಗಳನ್ನು ಜೋಡಿಸಿ
ಬೇಕಾದವರು ಕವಿತೆಯಾಗಿಸಿ
ದಯವಿಟ್ಟು
**
ಅವನ್ಯಾರದೋ
ಕವಿತೆಯಲಿ ಹೋದ
ನೋಡಿ ಅದೇ ದಾರಿ
ಮಸಣ ಜೋಪಡಿಯೊಳಗೆ
ಇಷ್ಟು ಮಾತ್ರ ಹೇಳಬಲ್ಲ
ನನ್ನೀ ಅಂತಿಮ
ಕವಿತೆ..!!

#ಅವಿಜ್ಞಾನಿ

- ಅವಿಜ್ಞಾನಿ

04 Apr 2017, 11:01 am

ಸಯಾಮಿ ಕವಿತೆ (ಗಾಲಿಬ್ ಪ್ರೇರಿತ)

ನಾನು ಕವಿತೆ ಕಟ್ಟುವಾಗ
ಸಂಜೆಯ ಪ್ರಸ್ತವಾಗುತ್ತದೆ
ಕತ್ತಲು ಗರ್ಭಧರಿಸಿ ಸೀಮಂತಕೆ
ಚಂದಿರನ ಕಾಯುತ್ತದೆ
ಅವಳ ನೆನಪ ಸೂಲಗಿತ್ತಿಯಿಂದ
ವಿರಹ ವೇದನೆಯೆಂಬ
ಸಯಾಮಿ ಕವಿತೆಯ ಹೆರಿಗೆ ಆಗೋದು ಆಗಲೇ

ನನ್ನ ಕವಿತೆಗೆ ಹೆಸರಿಡಲು
ಅಲೆಯ ಬಾಡಿಗೆ ಪಡೆದು
ಮೂಗಿಲೂರಿಗೆ ಹೊರಡುತ್ತೇನೆ
ಉಬ್ಬಸದ ಕಡಲು ನಗುವ
ಜಾಯಮಾನವ ಪ್ರಕಟಿಸುವಾಗ
ಕವಿತೆಯ ಹೆಸರು ಮೊಳಕೆ
ಹೊಡೆಯದ ಮರವಾಗುತ್ತದೆ

ನನ್ನ ಕನಸಿನ ಕದ ತಟ್ಟುವ
ಅವಳ ಕಿರು ಬೆರಳಿಗೆ ನಾನಿಡುವ
ಮುತ್ತು ಓದಿದರೂ ಮುಗಿಯದ ಕಾವ್ಯವಾಗುತ್ತದೆ
ಪದಗಳ ತುಂಬಿದ ಎದೆಯೊಳಗಿನ
ಹಣತೆ ಮಿನುಗಿ ಅವಳ
ಮೌನಕೆ ಬಲಿಯಾಗುತ್ತದೆ

ಹಣತೆಯ ಗೋರಿಗೆ ಪದಗಳ
ಕಫನ್ ಹೊಲಿದು
ನೋವಿನ ಮಿಝಾನ್ ಮೇಲೆ
ನನ್ನ ಕವಿತೆಯು ಮರು ಹುಟ್ಟು
ಪಡೆಯುತ್ತದೆ


ಹಲ್ಕಟ್

*ಅವಿಜ್ಞಾನಿ*

- ಅವಿಜ್ಞಾನಿ

02 Apr 2017, 10:21 pm

ಒಳಗಣ್ಣು

ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ. ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.

- nagaraj

02 Apr 2017, 05:39 pm

ಜಾತಿ

ನಿನ್ನ ಜನನವಾದೊಡೆ
ಜಾತಿ ಫಲಕ ನಿನ್ನೊಡೆ
ಭಂದನವಾದೆ ಅಂದಿನಿಂದೆ
ಜಾತಿನಿನ್ನೊಡಂ ವಿಲೀನವಾಗೆ.

ಅಜ್ಞಾನವ ತೊಡೆವಂ ಬ್ರಾಹ್ಮಣವರ್ಣಂ,
ಅನ್ಯಾಯವ ತೊಡೆವಂ ಕ್ಷತ್ರಿಯಂ,
ಅಭಾವವ ತೊಡೆವಂ ವೈಶ್ಯಂ,
ಆಲಸ್ಯವ ತೊಡೆವಂ ಶೂದ್ರಂ,
ಜಾತಿ ಎಲ್ಲಿಹುದೋ ಇಲ್ಲಿ,
ಇವೆಲ್ಲವುಗಳು
ಅವರವರ ಗುಣವನಾದರಿಸೆ,
ಅವರವರ ಕೆಲಸವನಾದರಿಸೆ,
ಅವರವರ ಸ್ವಭಾವವನಾಧರಿಸೆ
ಅವರವರ ಖರ್ಮವನಾದರಿಸಿ ವಿಂಗಡಿಸಿರೆ, ಹೊರತು ಹುಟ್ಟಿನಿಂದುದಯಿಸಿದಲ್ಲ..!!

ಹೆತ್ತವರಿಗರಿವಿಲ್ಲ ಜಾತಿಯೊಂದು ಪಿಡುಗು,
ಅವರ ಹೆತ್ತವರು, ಇನ್ನಾರನೋ ಅನುಸರಿಸಿ,
ಸ್ಪಷ್ಟಹುರುಳಿಲ್ಲ, ಈ ಜಾತಿ ವ್ಯವಸ್ಥೆಗೆ,
ಇರುವರೀರ್ವ ಸ್ತ್ರೀ ಪುಲ್ಲಿಂಗ,
ಜಾತಿ ಫಲಕ ತೊಟ್ಟು ಭಾವಭಂಗ..!

-ಕನ್ನಡದ ಭಕ್ತ

- ಕನ್ನಡದ ಭಕ್ತ

02 Apr 2017, 04:54 pm

ದಿಬ್ಬಣ

ಅತ್ತ‌ ರಾಜನ ಮದುವೆಯ ದಿಬ್ಬಣದ ಧನಿ ಕೇಳಿ
ಸುತ್ತ ಊರಿನ ಜನರು ದಂಡೆತ್ತಿ ಹೊರಟಿಹರು!!
ಎತ್ತ ನೋಡಿದರತ್ತ ದೀಪಗಳ ಆರತಿ
ಬೆಳಕ ತೋರಿಹುದು ದಿಬ್ಬಣದ ಊರಿಗೆ!!

ತಳಿರು ತೋರಣಗಳಲಿ ಆ ಊರ ಸಿಂಗಾರ
ಮುಗಿಲೆತ್ತರ ಚಪ್ಪರವು ಅರಮನೆಯ ಅಂಗಳದಿ!!
ರತ್ನ ಖಚಿತ ರಥವನ್ನು ಹೊತ್ತು ನಿಂತಿಹವು
ಜೋಡಿ ನಕ್ಷತ್ರದ ಹೊಳಪುಳ್ಳ ಕುದುರೆಗಳು!!

ಸಂಗೀತ ನರ್ತನವು ವಾದ್ಯ ಸಂತೋಷ
ರಾಣಿಗೆ ಏಕಿಂದು ಇಂತಹ ಸಂಕೋಚ!!
ಮುತ್ತು ರತ್ನದ ಒಡವೆ ಈ ಚಂದ‌ ವಧುವಿಗೆ
ಸ್ವಚ್ಛ ವಸ್ತ್ರದ ಉಡುಪು ನವ ವಧು ವರರಿಗೆ!!

ದಿಬ್ಬಣದ ಊರಲ್ಲಿ ಸಂತಸದ ಸಂಭ್ರಮ
ಸುತ್ತ ಊರ ಜನಕೆ ಭೋಜನ ಉಡುಗೊರೆಯು!!
ಎತ್ತ ನೋಡಿದರತ್ತ ದಿಬ್ಬಣದ ಸಡಗರ
ಗುಂಪು ಗುಂಪಲಿ ಜನರ‌ ಸಂತಸದ ವಿನಿಮಯ!!

- ಪಿ.ಜಿ.ಜ್ಯೋತಿ

02 Apr 2017, 03:19 pm