Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಿರು ಬೆರಳ ಸಂಧಿಯೊಳಗೆ
ನನ್ನ ಬೆರಳು ಜೋತು
ಬೀಳಬೇಕೆನ್ನುವಾಗ
ನೀ ಅನಾಮತ್ತಾಗಿ ಮುಂಗುರುಳ
ಸರಿಸುವೆ ಗೊತ್ತಾಗದೆ
ಒಲವಿನೂರಿನ ಮೆರವಣಿಗೆಗೆ
ಅನಿರ್ದಿಷ್ಟಾವಧಿ ಹರತಾಳ
ಮಾಡುವವಳ ಹರಸಾಹಸ
ನನಗಂತೂ ಸೋಜಿಗ ಅಂದಿನಿಂದ
ಗಡಿಯಾರದ ವಾರೆ ಓಟಕ್ಕೆ
ಪಕ್ಕದಲ್ಲೊಂದು ಬಯಕೆ
ಬೆತ್ತಲಾಗಿ ಸಾಯುತ್ತದೆ
ಹಿಂದಿನ ಹೆಜ್ಜೆಗಳನ್ನೆಲ್ಲಾ
ಮರೆಸುವ ಅಕಾಲಿಕ ಪ್ರಯತ್ನದಲ್ಲೊಂದು
ಸಫಲತೆ ಕಾಣುತ್ತೀಯ ನೀ ಆವಾಗಲೇ
ಸಣ್ಣಮಟ್ಟದ ತರ್ಕದಲ್ಲಿ ನಾ
ಯಶಕಾಣದ ಮುಂದಿನ ನಡೆ
ನೀ ಮೆಹಂದಿ ಹಚ್ಚಿದ ಕರಗಳ
ಮುಂದಿಟ್ಟದ್ದು ನಾನೋ
ಇನ್ನು ಒಡೆದ ಮೋಡ
ಮಳೆ ಸುರಿಸುತ್ತವೆಂಬ ಭ್ರಮೆಯವ
ಹಲ್ಕಟ್
ಅವಿಜ್ಞಾನಿ
- ಅವಿಜ್ಞಾನಿ
09 Apr 2017, 04:47 pm
ಅತ್ತಿಂದ ಇತ್ತ ಅಡವಿಯ ಸುತ್ತ
ಓಡುತಲಿ ಇರುವ ಪುಟ್ಟ
ಚಂಚಲದ ಮಾಯಾ ಜಿಂಕೆಯಂತೆ
ಆಯಿತು ಈ ನನ್ನ ಮನಸು!!
ತಪ್ಪು ಸರಿ ಏನೆಂದು ಅರಿಯದೇ
ತೊದಲುವ ಪುಟ್ಟ ಕಂದನ
ಮಾತಿನಂತೆ ತಡವರಿಸಿ
ನುಡಿಯುತಲಿ ಈ ನನ್ನ ಮನಸು!!
ಸ್ವಚ್ಛ ವಸ್ತ್ರದ ಮೇಲೆ
ಬಣ್ಣದ ಗೆರೆ ಎಳೆದು
ಅಂದ ಹೆಚ್ಚಿಸುವ ಕೆಲಸ
ಮಾಡ ಬಯಸಿತು ಈ ನನ್ನ ಮನಸು!!
ತನ್ನ ಅರಿವನೂ ಮೀರಿ
ನವ ಪುಳಕದಲಿ ಮೈ ಮರೆತು
ಸವಿ ಪ್ರೀತಿಯಲಿ ಮಿಂದೆದ್ದ ಸಂತಸವ ಮೆರೆದಿಹುದು ಈ ನನ್ನ ಮನಸು!!
- ಪಿ.ಜಿ.ಜ್ಯೋತಿ
09 Apr 2017, 04:19 pm
ನನ್ನ ಜೀವನದ ಒಂದು ಸುಂದರ
ಕನಸು ನೀನು .
ನಿನ್ನ ಸ್ನೇಹದ ಸವಿ ಉಣಿಸಿದ
ಬಂಗಾರ ನೀನು .
ಮಾತಲ್ಲಿ ಹೇಳಲಾರೆ ನಿನ್ನ
ಸ್ನೇಹದ ಅಕ್ಕರೆ ......
ಕ್ಷಣಮಾತ್ರ ನೋಡಲಾರೆ ನಿನ್ನ
ನಿನ್ನ ಕಂಬನಿಯ ಕಲೆಗಳ ನನ್ನ ಕನಸಲ್ಲೂ .
ಎಂದಿಗೂ ನೀನು ನನ್ನ ಆಪ್ತನಾಗಿರು
ನಿನ್ನ ನಗೆಯಲ್ಲಿ ಸಮಪಾಲು
ನನಗಾಗಿ ಇಟ್ಟಿರು.
ನಿನ್ನ ಮಗುವಿನಂತ ನಗು
ನಿಷ್ಕಲ್ಮಶ ಮನಸ್ಸು ಅದೆಂದಿಗೂ
ನಿನ್ನಷ್ಟೇ ಸುಂದರ ಗೆಳಯ.......
ನನ್ನ ಪ್ರಾಣ ಸ್ನೇಹಿತನಾಗಿ ನೀನಿರು
ನಿನ್ನ ಎಲ್ಲಾ ನೋವುಗಳನ್ನು ನನ್ನ ಬಳಿ ಸಂಕೋಚವಿಲ್ಲದೆ ಹಂಚುತಿರು.
ನಿನಗಾಗಿ ನಾನೇನು ಕೊಡಬಲ್ಲೇನೋ ನನಗೆ ತಿಳಿದಿಲ್ಲ ಆದರೆ ನನ್ನ ಗೆಳತನವ ಮಾತ್ರ ನಿನ್ನ ಹೊರೆತು ಬೇರ್ಯಾರಿಗೂ ನಾ ನೀಡಲ್ಲ ಗೆಳೆಯ ನೀಡಲ್ಲ............
ಇಂತಿ ನಿನ್ನ ಸ್ನೇಹಿತೆ ಶ್ರಿ.......... .
- ಚುಕ್ಕಿ
09 Apr 2017, 11:26 am
ಕೋಣೆಯಲ್ಲಿ ಬಿದ್ದಿವೆ
ನೂರಾರು ಮುಖವಾಡ
ಕೆಲವೊಮ್ಮೆ ನಗುವ ಮುಖವಾಡ
ಕೆಲವೊಮ್ಮೆ ಮೌನದ ಮುಖವಾಡ,
ಮುಖವಾಡವಿಲ್ಲದ ಮುಖವ
ಎಂದು ತೋರುವೆನೋ ಜಗಕೆ
ಕಾಣುವುದು ಬರೀ ಕಂಬನಿ ನೋಡ
- ನಿಶಾ ರೂಪ
09 Apr 2017, 07:48 am
ನಾ ಸತ್ತಮೇಲೆ ನನ್ನ ಸುಟ್ಟ ಭೂದಿಯೂ
ಈ ನೆಲದ ಮೇಲೆ ಉಳಿಯಲು ನನಗಿಷ್ಟ ಇಲ್ಲ....
ಈ ಪಾಪಿ ಜನರು ಅದನ್ನೂ ತುಳಿದು ಹೋಗುತ್ತಾರೆ.
ಭೂತಾಯಿಯ ಮಡಿಲಲ್ಲಿ ಶಾಶ್ವತವಾಗಿ
ಬಚ್ಚಿಟ್ಟುಕೊಂಡರೆ ಸಾಕು ಇವರಿಗೆ ಕಾಣದ ಹಾಗೆ...
ಬದುಕಿದ್ದಾಗ ಕ್ಷಣಮಾತ್ರವು ನಿಲ್ಲದ ಕಣ್ಣೀರು
ಕೊನೆಯುಸಿರು ಎಳೆದಾಗಳಾದರು ನಿಂತರೆ ಸಾಕು..
ಮುಕ್ಕೋಟಿ ದೇವರು ಇರುವುದು ನಾಮಮಾತ್ರಕ್ಕೆ
ಕಷ್ಟದಲ್ಲಿ ಕಾಪಾಡಲು ಒಂದು ಕೈ ಸಿಗಲ್ಲ ಇವರದು.
ನಿತ್ಯ ಪೂಜೆ, ಅಲಂಕಾರ,ಅಭಿಷೇಕ,ರಥೋತ್ಸವ
ಕಲ್ಯಾಣ ಈ ಜನರು ಮರತೆ ಹೋಗಿದ್ದಾರೆ.........
ಎಲ್ಲೋ ಇದ್ದ ಕಲ್ಲು ಬಂಡೆಯ ಕೆತ್ತ ಶಿಲ್ಪ ಈ ದೇವರೆಂದು.
ಭೂಮಿಯಲ್ಲಿ ಸಿಕ್ಕ,ಬಂಗಾರ,ತಾಮ್ರ,ಬೆಳ್ಳಿಯಲ್ಲೇ ದೇವರ ಮೂರ್ತಿಗಳೆಂದು.......
ಕೆತ್ತವನು,ವಿಗ್ರಹ ಮಾಡಿದವನು ಕೊನೆಗೂ ಸೇರುವುದು ಅವನಿಯ ಮಡಿಲಿಗೆ ಅದಕ್ಕೆ ಜೀವನದಲ್ಲಿ,ಜೀವಹೋದ ನಂತರ ನಮ್ಮನ್ನು ಹೊರುವುದು ಅವಳೇ..........
ಕೊನೆವರೆಗೂ ನಾ ಚಿರ ಋಣಿ ಅವಳ
ಪಾದ ಕಮಲಗಳಿಗೆ.
ನಂತರವೂ ಋಣಿ ಅವಳ ತಾಯಿ ಪ್ರೀತಿಗೆ .......
- ಚುಕ್ಕಿ
09 Apr 2017, 01:30 am
ಕತ್ತಲೋಳಗೆ ಕತ್ತಲಡಗಿದೆ
ಕರಿ ಮೋಡ ಕವಿಯುತಿದೆ
ಕವಿ ಈಗ ಕವನ ಹೆಣೆಯುತಿಹೆ
ಕವನಗಳಿಗೆ ನಿ ಚಿಲುಮೆ
ಚಿಲುಮೆ ಈಗಾ ಚಿಟಬಡಿಸಿದೆ
ನೀನೇ ಬರಿ ನೀನೇ ...
ಮಿಂಚೆಕೋ ಮಂಕಾಗಿದೆ
ಮನಸೆಕೋ ತೇಲಾಡಿದೇ
ಮಳೆಬಿಲ್ಲು ಮಾತಾಡಿದೆ
ಕನಸೊಂದು ಮನೆಮಾಡಿದೆ
ನವಿಲ್ಲಿಂದು ನಲಿದಾಡಿದೆ
ನಿ ಬರುವಾ ಹಾಗೆ
ಅದೇಕೋ ಹೀಗೆ
✍✍PЯΛDΣΣP✍✍
- ಪ್ರದೀಪ.ಮ.ಪಾಡಮುಖೆ
09 Apr 2017, 12:56 am
ಮನದಲೊಂದು ಭ್ರಮೆ ನಾನೂ
ಹಕ್ಕಿಯಾಗಿದ್ದರೆ, ಹಾರುತಿದ್ದೆ
ನನ್ನ ರೆಕ್ಕೆಗಳ ಬಲದಿಂದ
ಕಣ್ಣಲೊಂದು ಬಿಂಬ ನಾನೂ
ಚಿತ್ರವಾಗಿದ್ದರೆ ,ಬೀಗುತಿದ್ದೆ
ನನ್ನ ಬಣ್ಣಗಳ ಅಂದದಿಂದ
ಮೆದುಳಲೊಂದು ಯೋಚನೆ ನಾನೂ
ಪುಷ್ಪವಾಗಿದ್ದರೆ,ಹರಡುತಿದ್ದೆ
ನನ್ನ ಸುಗಂಧ ಪ್ರೀತಿಯಿಂದ
ಹೃದಯದಲ್ಲಿ ತುಡಿತ ನಾನೂ
ಕನ್ನಡಿಯಾಗಿದ್ದರೆ, ತೋರಿಸುತಿದ್ದೆ
ಪ್ರತಿಬಿಂಬ ನನ್ನ ಸರಳತೆ ಯಿಂದ
ಮನದಲ್ಲಿ ಆಸೆಗಳು ನೂರು ನಾನೂ
ಹೀಗಿದ್ದಿದ್ದರೆ,
ನಾನೂ ಹೀಗಿದ್ದಿದ್ದರೆ.......
ಕವಿರಾಜ
- kavita Rajesh
08 Apr 2017, 10:54 pm
ಭ್ರೂಣಾವಸ್ಥೆಯಲ್ಲೇ
ನನ್ನ ಸಾಯಿಸಲಾಗಲಿಲ್ಲವಾ
ಅವ್ವ ನಿನಗೆ.
ಈ ಲೋಕದ ರಕ್ಷೆಸತ್ವದ
ಮುಂದೆ ನಾತಾಳಿ
ನಿಲ್ಲಲಾರೇನು ನನ್ನವ್ವ.
ನನ್ನ ಮನೋಭಾವಗಳು
ಅರಿಯದಂತ ಜನರ ನಡುವೆ
ಹೇಗೆ ನಾ ಜೀವಿಸಲಿ ಹೇಳವ್ವ.
ಸ್ವಾರ್ಥ ಪೂರಿತ ಜನರಮುಂದೆ
ತಡೆದು ನಿಲ್ಲಲಾಗುತ್ತಿಲ್ಲ.
ನನ್ನ ಬಗ್ಗೆ ಒಂದು
ಚೂರಾದರೂ ಪ್ರೀತಿಯಿಲ್ಲ
ಈ ಕ್ರೂರ ಜನರ ಮನಸ್ಸಿನಲ್ಲಿ......✍
ಪ್ರಾಣ ತೆಗೆಯುವ ಜನರ ಜಗತ್ತಿನಲ್ಲಿ
ಕೋಮಲ ಮನಸ್ಸಿನ ಮುಗ್ದ ಕೂಸು ನಾನು.
ಅಮಾಯಕವಾದ ಮಗುನಾನು
ಹೆಣ್ಣು ಮಗು ನಾನು .
- ಚುಕ್ಕಿ
08 Apr 2017, 09:02 pm
ಪ್ರೀತಿಸುವ ವ್ಯಕ್ತಿಗಳನ್ನು
ದೂರಮಾಡುವುದು ಕೋಪ.
ತಂದೆ-ತಾಯಿಯರನ್ನು
ದುಃಖಿಸುವಂತೆ ಮಾಡುವುದು ಕೋಪ.
ಬಂದು ಬಳಗವನ್ನು ನಿನ್ನಿಂದ
ದೂರ ಮಾಡುವುದು ಕೋಪ.
ಎಲ್ಲರನ್ನೂ ನಿನ್ನಿಂದ ದೂರ
ಮಾಡುವ ಕೋಪವೇತಕೆ ನಿನ್ನ ಬಳಿ.
ಎಲ್ಲರನ್ನೂ ನಿನ್ನ ಹತ್ತಿರ
ಸೇರಿಸುವ ಪ್ರೀತಿ ಇದ್ದರೆ ಸಾಕು ನಿನ್ನ ಬಳಿ.
- ಚುಕ್ಕಿ
08 Apr 2017, 08:16 pm
ಮನಸಿನ ಸುತ್ತ ಸೋಲು ಎನ್ನುವ
ಯಮನು ಕೋಟೆ ಕಟ್ಟಲು ಮುಂದಾಗಿದ್ದಾನೆ
ಗೆಲುವಿನ ದಾರಿಯೆ ಕಾಣದೆ ಸೋತಿದೆ ನನ್ನ ಮನ....
ನೋಂದ ಹೃದಯ.....
- chinmayi.....chinni
08 Apr 2017, 07:26 pm