Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬರ ಮತ್ತು ರೈತನ ಗೋಳು

ಬರಬೇಕೆ ಬರ ರೈತನಾ ಬಾಳಲಿ ಹೆಮ್ಮಾರಿಯಂತೆ
ಕಿತ್ತುತಿನ್ನುವ ಬಡತನದ ಬೇಗೆ
ಬಿತ್ತಿದಾ ಬೆಳೆಯೂ ನಾಶವಾಗೆ
ಭೂಮಿಯೆಲ್ಲಾ ಬೆತ್ತಲಾಗಿ
ಬದುಕುವಾಸೆ ಕತ್ತಲಾಗಿ
ಕಾರ್ಮುಗಿಲಿಗಾಗಿ ಕಂಬನಿಗರೆದಿದೆ

ಸಾಲ ಸೋಲ ಖಾಲಿಯಾಗಿ
ಮೀಟರ್ ಬಡ್ಡಿ ದುಪ್ಪಟ್ಟಾಗಿ
ದನಕರುಗಳನು ಕಸಾಯಿಖಾನೆ ಗೆ ನೂಕಿ
ನಾಕವೆಲ್ಲ ನರಕವಾಗಿ ಹನಿ ನೀರಿಗೆ ಕಾದಿದೆ
ಇನ್ನು ನಿಮಗೆ ಕೊಡಲು ನನಗೆಲ್ಲಿಂದ ಹಣ ಬರುವುದೇ?

ಮಾನಕಂಜುವ ಮಕ್ಕಳು ನಾವು
ಕಾವ ದೈವಗಳೇ ಮನ್ನಿಸಿರಿ ನೀವು
ಮಳೆಯನು ತರಿಸಿ ವುಳಿಸಿರಿ ಪ್ರಾಣವ
ಮನೆ ಮಾನ ಹರಾಜಿಗಿದೆ ನಡೆಯಿಸಿ ಪವಾಡವ
ಚುನಾವಣೆಗೆ ನಿಂತ ರಾಜಕಾರಣಿಯಂತೆ
ನೀಡದಿರಿ ಪೊಳ್ಳು ಭರವಸೆಯ

ಮಾನವೇ ಹೋಗಿರೆ ಪ್ರಾಣಕೇನು ಬೆಲೆ
ಕಾಯುವವ ಬರದಿರೆ ಕೊಲ್ಲುವವನ ಕರೆಯದೆ ದಾರಿ ಇದೆಯೇ?
ಈಸಬೇಕಂತೆ ಇದ್ದು ಜಯಿಸಬೇಕಂತೆ
ತತ್ವ ಹೇಳುವ ಮಠಾಧೀಶರು ಇಲ್ಲಿ ನೂರುನೂರು.
ಭಾಷಣ ಬಿಗಿಯುವ ಪುಢಾರಿಗಳಿಗೆ ಹೇಳಿಕೊಡಬೇಕೇ ಮೊಸಳೆ ಕಣ್ಣೀರು

ಮುಗ್ಧ ಮಕ್ಕಳ ಬೀದಿಪಾಲು ಮಾಡಿ ಹೋಗಲೇ ಅಯ್ಯೋ ನನ್ನ ಕೈಯಾರೆ ವಿಷ ವುಣಿಸಲೇ
ಮುದ್ದು ಮಡದಿಯೇ ಅಂದು ನಿನ್ನೊಸಲಿಗಿಟ್ಟೆ ಕೆಂಪು ಕುಂಕುಮ
ಇಂದುಣಿಸುತಿರುವೆ ಪಾಷಾಣದ ಉಂಡಿಗೆಯ ಸಂಭ್ರಮ

ಅಜ್ಜನ ತುತ್ತು, ಅಜ್ಜಿಯ ತುತ್ತು, ಅಪ್ಪನ ತುತ್ತು, ಅಮ್ಮನ ತುತ್ತು, ಬರದ ತುತ್ತು, ದೇವರ ತುತ್ತು, ಸಾಲಿಗನ ತುತ್ತು, ಪುಢಾರಿ - ಪಾಶಂಢಿಗಳ ತುತ್ತು, ಬೆವರ ಕಂಬನಿಯ ತುತ್ತು.
ಬನ್ನಿ ಹೋಗೋಣ ಮನುಜರನು ಮನುಜರಂತೆ ನೋಡುವಾ ತಾಣಕೆ,ಹಸಿವಿರದ, ನೋವಿರದ, ಅಪಮಾನವಿರದ ಜಾಗಕೆ, ಚಿರಶಾಂತಿಯ ನಿದ್ರೆಗೆ

ಎಂದಿನಂದದಿ ಮಾಧ್ಯಮದಿ ವಿಜೃಂಭಿಸುತಿದೆ ರೈತಕುಟುಂಬ ದುರ್ಮರಣದ ವಿಶೇಷ ಸುದ್ದಿ
ದೌಡಾಯಿಸಿ ಬಂದಿತು ರಾಜಕೀಯದ ಆಶಾಡಭೂತಿ.
ಬದುಕಿದಾಗ ಬೊಬ್ಬೆಇಟ್ಟರೂ ಬಾರದಾ ಇವರು, ಸತ್ತಾಗ ಬಂದು ಸಾಂತ್ವಾನ ಮಾಡುವರು.
ರೈತರ ಸಾವು-ಬದುಕಿನ ಹೋರಾಟ ಇವರಿಗಂತೆ ಚದುರಂಗದಾಟ

ಸತ್ತ ಹೆಣದಮೇಲೆ ಮದಿರೆಯ ಕಾಯಿಸಿ ಮದದಿ ಮೆರೆದಾಡುವ ಮಾನಗೇಡಿಗಳು, ರಾಜಕಾರಣದ ಹೇಸಿಗೆಯಲ್ಲಿ ಹೊರಳಾಡುವ ಜಂತು ಹುಳುಗಳು.
ರೈತರಾಸಾವು ಇವರಿಗೊಂದು ಪ್ರಚಾರದ ಗಿಮಿಕ್ಕು,
ನೀವ್ ಸತ್ತರೆ ಬೆಂಕಿ ಇಡರು ಯಾರು ನಿಮ್ಮ ಹೆಣಕ್ಕೂ

ಹಂಸಿನಿ

- ವಿಸ್ಮಯ

12 Apr 2017, 07:52 pm

ಕೂಡಿ ಕಳೆವ ಬದುಕು

ಕೂಡಿ ಕಳೆವ ಆಟವಂತೆ‌ ಬದುಕು
ಎಲ್ಲಾ ಕೂಡಿದಾಗ ಕಂಡ ನಗುವೇ ಸೊಗಸು
ಕಳೆವ ‌ಆಟ ನೋಡಿದಾಗ ಮರಗುವುದು‌ ಮನಸು

ಕೂಡಿ‌ ಕಂಡ ನೋವು‌‌ ಖುಷಿಗಳಿಗೆ‌ ಕೊಡಲಾಗುವುದೆ ಬಿರುದು
ದೂರ‌‌ ಸರಿದು‌ ಒಂಟಿಯಲಿ ಕಂಡ ಖುಷಿಯು ಏನೋ ಮನದಾಳದಲ್ಲಿ ಬರಿದು

ಕೂಡಿದಾಗ ಮೌನದ ಕಟ್ಟೆಯ ಕೊನೆಯು
ಕಳೆದ ಕ್ಷಣವೆ ಮನದಲ್ಲಿ ಮುಗಿಯದ ಮಾತಿನ ಬರವು

ಎಲ್ಲ ಕೂಡುವ ಕ್ಷಣಕ್ಕೆ‌ ಕಾಯುವುದೆ ಕನಸು
ಕೂಡಿದ ಕ್ಷಣವೇ ನಲಿವುದು ಮನಸು
ಆ ಕ್ಷಣವ ನೆನೆವುದೇ‌ ಬಾಳ ಸೊಗಸು

- ಶ್ರೀಕಾವ್ಯ

12 Apr 2017, 06:02 pm

ಮನಸ್ತಾಪದ ಮರ್ಕಟ..

ಪ್ರೀತಿಯಲ್ಲಿ ಕಲಹಗಳು ಸಹಜ ಆದರೆ ಆ ಕಲಹಗಳು ಪ್ರೀತಿಗೆ ಮುಳ್ಳಾಗಬಾರದು,
ಏಕೆಂದರೆ ಉಳಿಪೆಟ್ಟು ಬಿದ್ದಾಗಲೆ ಒಂದು ಕಲ್ಲು ಅದ್ಭುತ ಮೂರ್ತಿಯಾಗುತ್ತದೆ. ಉಳಿಪೆಟ್ಟು ಬಿದ್ದಾಕ್ಷಣ ಕಲ್ಲು ಕುಪಿತಗೊಳ್ಳವುದಿಲ್ಲ, ಸಹನೆಯಿಂದ ಅದು ದೈವ ಸ್ವರೂಪವನ್ನು ಪಡೆಯುತ್ತದೆ. ಹಾಗೆಯೆ ಸಣ್ಣಪುಟ್ಟ ಮನಸ್ತಾಪಗಳನ್ನು ಮೀರಿ ಪ್ರೀತಿಯನ್ನು ಗೆದ್ದು ಪ್ರೇಮ ಮೂರುತಿಯನ್ನು ನಿರ್ಮಿಸಬೇಕು....

- Irayya Mathad

12 Apr 2017, 05:59 pm

... ಕ್ಷಣ ಸುಖದ ವ್ಯಾಮೋಹಿ ನಾನಲ್ಲ...

ಕಣ್ಣೋಟದ ಒಂದು ಸ್ಪರ್ಶಕೆ ಕಾಯಲು ನಾನೂ, ನೋಡದೆ ನೀನು.
ತುಟಿಯಂಚಿನ ಪ್ರೀತಿ ಮಾತಿಗೆ ಕಾಯಲು ನಾನೂ, ಆಡದೆ ನೀನು.
ಕ್ಷಣ ಸುಖದ ಬಿಸಿ ಅಪ್ಪುಗೆಯ ವ್ಯಾಮೋಹಿ ನಾನಲ್ಲ,?
ನನ್ನನೊಮ್ಮೆ ನೋಡಿ ತುಟಿ ಮಲ್ಲಿಗೆ ಅರಳಿದರೆ, ನನ್ನನೆ ಕುರಿತು ಮಾತ್ತೊಂದು ಆಡಿದರೆ,
ಆ.. ಕ್ಷಣಕೆ ಸಾಟಿ ಮತ್ತೊಂದಿಲ್ಲ....!!!

- ಪಿ ಅನಿ...

12 Apr 2017, 05:00 pm

ಪ್ರೀತಿ ಮಾಯೆ

ನಿನ್ನ ಪ್ರೀತಿಗಾಗಿ ನಾನು ಅಲೆದ ದಿನಗಳಿಲ್ಲಾ
ಕ್ಷಣಗಳಿಲ್ಲಾ,ಸ್ಥಳಗಳಿಲ್ಲಾ
ಆದರು ನಿ ನನ್ನ ತಿರುಗಿ ನೋಡಲಿಲ್ಲ
ನಿನ್ನ ಪ್ರೀತಿಗಾಗಿ ಏಳೆಳು ಜನ್ಮ ಎತ್ತೋದೇನು
ಅಸಾದ್ಯವಲ್ಲಾ,
ನಿನಗಾಗಿ ನನ್ನ ಜೀವಾ ಕೂಡೂದೇನ್ ದೂಡ್ಡದಲ್ಲಾ,
ಆದ್ರೆ ನೀ ನನ್ನ ಪ್ರೀತಿನಾ ಒಪ್ಕೋ ಬೇಕಲ್ಲಾ,
ನೀನು ನನ್ನ ಪ್ರೀತಿನಾ ಒಪ್ಕೋಂಡ್ರೆ
ಇವನ್ನೆಲ್ಲಾ ಮಾಡೋದ್ರಲ್ಲಿ ಮುಲಾಜೆ ಇಲ್ಲಾ.

- ಕಿರಣ ( ಮನಸಾರೆ )

12 Apr 2017, 12:24 am

ಹುಡುಕಬೇಡ....

...ಹುಡುಕಬೇಡ ಪ್ರಾಸವ
ನಾ ಬರೆದಿರುವ ಚಿಂದಿಯಲ್ಲಿ
ಬರೆಯಲು ಕವಿತೆಯ
ನಾನೇನು ಕವಿಯಲ್ಲ.

ತಲೆಗೆ ಬಂದ ಪದಗಳ
ಜೊತೆಗೊಂದು ಹಾವು ಏಣಿಯಾಟ,
ಮನಬಂದಂತೆ ಗೀಚಿದೆ,
ಆಳವಾದ ಮಾತುಗಳ ಬಣ್ಣಿಸುತ.

ಸ್ವಲ್ಪ ನೈಜ್ಯತೆಯೂ,
ಕೆಲವೊಮ್ಮೆ ಚಪಾಳೆ ಗುಂಗ್ಗಲಿ
ಮಸಾಲವು... ಬೆರಸಿ ಮಾಡಿದ
ಪೋಲಿಯೋಗರೆ ಈ ನನ್ನ
ಚಿಂದಿ ಬರಹವು.

ಸಂಧಿ ಸಮಾಸಗಳ ಅರಿವಿಲ್ಲ ,
ಲಘು ಗುರುವಿನ ಮಾರ್ಗದರ್ಶನವಿಲ್ಲ,
ಕವನದ ಗಂಧ ಗಾಳಿಯೂ ಗೋತಿಲ್ಲ.
ಆದರೂ ಹಿಂಗುತಿಲ್ಲ ಈ
ಮೊಂಡು ಬರೆಯುವ ಹುಚ್ಚು.

- MK Reddy

11 Apr 2017, 11:55 pm

ಬಿದ್ದ ನಗು...

ತಲೆಯಲ್ಲಿ ಬಿದ್ದ ಅವಳ ನಸು ನಗುವಿನ ಬೀಜಕೆ
ಮನದಲ್ಲಿ ಮೊಳಕೆ ಹೊಡೆದಿದೆ ಪ್ರೀತಿ
ಏನೋ ಹೊಸತನ ಏನೋ ನವನವೀನ

ತಪ್ಪು ಒಪ್ಪಿನ ಪ್ರಶ್ನೆ ಇದಲ್ಲ ,
ಹುಚ್ಚು ವಯಸ್ಸಿನ ಹಂಬಲ,
ನೊಂದ ಮನಸಿನ ಅನುಭವ ಪಡೆಯುವ
ಬೂದಿ ಮುಚ್ಚಿದ ಆತುರ.

ಗೋತಿಲ್ಲ ನನಗೆ ಇದು ಸರಿಯೋ ತಪೋ..
ಎಲ್ಲರಿಗೂ ಬಯಕೆ ಮನದಲ್ಲಿ,
ನನ್ನದು ಆಗಲಿ ಕಥೆಯೊಂದು
ಇನ್ನೊಬರ ಕಣ್ಣ ನೆನೆಸುವ ವ್ಯೆಥೆಯೆಂದು.
ಜಗಕೆ ಸಾರಿ ಹೇಳಬೇಕೆಂಬ ಹಂಬಲ,
ಮುದ್ದು ಮನಸಿನ, ಸುಂದರ ಪ್ರೀತಿಯ,
ಕಹಿ ಕೊನೆಯಿಂದ ನೊಂದ ಜೀವವಿದೆಂದು..

- MK Reddy

11 Apr 2017, 11:55 pm

ಯಾಂತ್ರಿಕತೆ

ಬರಡಾಯಿತು ಮನ, ಬರೆಯಲು ಕವಿತೆ
ಇಲ್ಲವಾದವು ಪದಗಳು.
ಕಡಲಾಚೆಗೆ ಮನ, ಬಯಸಲು ರಂಗು
ಇಲ್ಲವಾಯಿತು ಚೈತನ್ಯ.
ಜಗವ ದೂಡಲು ಮನಸ್ಸು,
ಜಂಜಾಟದಲಿ ಕಾಣೆಯಾದವು ಕನಸು.

#ಯಾಂತ್ರಿಕತೆ

- MK Reddy

11 Apr 2017, 11:53 pm

ಕೇಳಿರೋ...

ಕೇಳಿರೋ ಗೆಳೆಯರೇ
ಯಾಕಿಷ್ಟು ಆತುರ,
ಸಿಗುವರು ಹುಡುಗಿಯರು
ಇನ್ನಷ್ಟು ಸುಂದರ.

ಮಬ್ಬು ಮಂಕುತಿಮ್ಮಂದಿರ,
ಬೆಂಕಿಗೆ ಬಿದ್ದ ತುಪ್ಪದಂತೆ
ಉರಿದು ಕಾಲಿಯಾಗುತಿರೇ,
ಏನು ಹೇಳುವುದು ನಿಮಗೆ.

ಮದುವೆ ಆಗು ನೀ
ಪ್ರೀತಿ ಮಾಡಿ ,ಇಲ್ಲವೇ ಮನೆಯಲಿ ನೋಡಿ.
ವ್ಯತ್ಯಾಸವದು ಒಂದೇ...
ಒಂದು ನೀರಿಲ್ಲದ ಬಾವಿ,
ಇನ್ನೊಂದು ನೀರಿರುವ ಬಾವಿ....

- MK Reddy

11 Apr 2017, 11:53 pm

ಎಲವೋ ಮೂರ್ಖ......

ಎಲವೋ ಮೂರ್ಖ
ಗೊತ್ತಿರುವ ಮೂರು ಪದಗಳನ್ನೇ
ತಿರುಸಿ ಮರೆಸಿ ಬರೆಯುತ್ತಿರುವೆ ಕವನಗಳನ್ನ,
ಓದುಗರೇನು ಬೆಪ್ಪರೆಂದುಕೊಂಡೆಯಾ...?

ಪ್ರಾಸವ ಮುರಿದು,
ವ್ಯಾಕರಣವ ಹರಿದು,
ಹೊಸ ಶೈಲಿಯು ನನ್ನದೊಂದು ಎಂಬ ಭ್ರಮೆಯಲ್ಲಿ
ಗೀಚುತ ಏನೇನೋ
ಕವನವೆಂಬುದ ಬರೆದೆ ನೀನೊಂದು.

ನಿನ್ನ ಚಟಕ್ಕೆ
ಬಲಿಯಾದ ಆ ಪದಗಳೆಷ್ಟೋ...?
ನಿನ್ನ ದೌರ್ಜನ್ಯಕ್ಕೆ
ಮಾನ ಕಳೆದುಕೊಂಡ ಆ ಕವನಗಳೆಷ್ಟೋ...?
ವಿಮರ್ಶೆಗೆ
ತಡವಿಲ್ಲದೆ ನಿಡುವೇ ಅಶುಕಾರಣವ....
ಹೊಸ ಪದಗಳ ಹುಟ್ಟುಹಾಕುತ
ಹೂತು ಹಾಕಿರುವೆ ಶಬ್ದಕೋಶವ.....

ಮನಬಂದಂತೆ ಬರೆದು
ಬರೆದದ್ದೆ ಕವನಗಳೆಂದು ಕೊಚ್ಚಿಕೊಂಡು
ಹೊಗಳುವರ ಸಂಘವ ಕಟ್ಟಿ
ಚಪಾಳೆಗಳ ಬಾವಿಯಲ್ಲಿ ಮಿಂದು
ಕಡಲ ಕಡೆದಂತೆ ಬೀಗುತಿಯೆ
ಬುದ್ದಿ ನಿನಗುಂಟೆ?

ಯಾರ ಭಾವನೆಗಳಿಗೆ
ಯಾರು ಬೇಲಿ ಹಾಕಲು ಸಾಧ್ಯ .?
ಹಾರುವ ಹಕ್ಕಿಗೆ ಬಂಧನಗಳಿಲ್ಲ.
ಆದರೂ ಗೊತ್ತಿರಲಿ ಗೆಳೆಯ
ಓದುಗರು ನಿರುದ್ಯೋಗಿಗಳಲ್ಲ...

- MK Reddy

11 Apr 2017, 11:53 pm