ಸಾಲ ಸೋಲ ಖಾಲಿಯಾಗಿ
ಮೀಟರ್ ಬಡ್ಡಿ ದುಪ್ಪಟ್ಟಾಗಿ
ದನಕರುಗಳನು ಕಸಾಯಿಖಾನೆ ಗೆ ನೂಕಿ
ನಾಕವೆಲ್ಲ ನರಕವಾಗಿ ಹನಿ ನೀರಿಗೆ ಕಾದಿದೆ
ಇನ್ನು ನಿಮಗೆ ಕೊಡಲು ನನಗೆಲ್ಲಿಂದ ಹಣ ಬರುವುದೇ?
ಮಾನಕಂಜುವ ಮಕ್ಕಳು ನಾವು
ಕಾವ ದೈವಗಳೇ ಮನ್ನಿಸಿರಿ ನೀವು
ಮಳೆಯನು ತರಿಸಿ ವುಳಿಸಿರಿ ಪ್ರಾಣವ
ಮನೆ ಮಾನ ಹರಾಜಿಗಿದೆ ನಡೆಯಿಸಿ ಪವಾಡವ
ಚುನಾವಣೆಗೆ ನಿಂತ ರಾಜಕಾರಣಿಯಂತೆ
ನೀಡದಿರಿ ಪೊಳ್ಳು ಭರವಸೆಯ
ಮಾನವೇ ಹೋಗಿರೆ ಪ್ರಾಣಕೇನು ಬೆಲೆ
ಕಾಯುವವ ಬರದಿರೆ ಕೊಲ್ಲುವವನ ಕರೆಯದೆ ದಾರಿ ಇದೆಯೇ?
ಈಸಬೇಕಂತೆ ಇದ್ದು ಜಯಿಸಬೇಕಂತೆ
ತತ್ವ ಹೇಳುವ ಮಠಾಧೀಶರು ಇಲ್ಲಿ ನೂರುನೂರು.
ಭಾಷಣ ಬಿಗಿಯುವ ಪುಢಾರಿಗಳಿಗೆ ಹೇಳಿಕೊಡಬೇಕೇ ಮೊಸಳೆ ಕಣ್ಣೀರು
ಮುಗ್ಧ ಮಕ್ಕಳ ಬೀದಿಪಾಲು ಮಾಡಿ ಹೋಗಲೇ ಅಯ್ಯೋ ನನ್ನ ಕೈಯಾರೆ ವಿಷ ವುಣಿಸಲೇ
ಮುದ್ದು ಮಡದಿಯೇ ಅಂದು ನಿನ್ನೊಸಲಿಗಿಟ್ಟೆ ಕೆಂಪು ಕುಂಕುಮ
ಇಂದುಣಿಸುತಿರುವೆ ಪಾಷಾಣದ ಉಂಡಿಗೆಯ ಸಂಭ್ರಮ
ಎಂದಿನಂದದಿ ಮಾಧ್ಯಮದಿ ವಿಜೃಂಭಿಸುತಿದೆ ರೈತಕುಟುಂಬ ದುರ್ಮರಣದ ವಿಶೇಷ ಸುದ್ದಿ
ದೌಡಾಯಿಸಿ ಬಂದಿತು ರಾಜಕೀಯದ ಆಶಾಡಭೂತಿ.
ಬದುಕಿದಾಗ ಬೊಬ್ಬೆಇಟ್ಟರೂ ಬಾರದಾ ಇವರು, ಸತ್ತಾಗ ಬಂದು ಸಾಂತ್ವಾನ ಮಾಡುವರು.
ರೈತರ ಸಾವು-ಬದುಕಿನ ಹೋರಾಟ ಇವರಿಗಂತೆ ಚದುರಂಗದಾಟ
ಸತ್ತ ಹೆಣದಮೇಲೆ ಮದಿರೆಯ ಕಾಯಿಸಿ ಮದದಿ ಮೆರೆದಾಡುವ ಮಾನಗೇಡಿಗಳು, ರಾಜಕಾರಣದ ಹೇಸಿಗೆಯಲ್ಲಿ ಹೊರಳಾಡುವ ಜಂತು ಹುಳುಗಳು.
ರೈತರಾಸಾವು ಇವರಿಗೊಂದು ಪ್ರಚಾರದ ಗಿಮಿಕ್ಕು,
ನೀವ್ ಸತ್ತರೆ ಬೆಂಕಿ ಇಡರು ಯಾರು ನಿಮ್ಮ ಹೆಣಕ್ಕೂ
ಪ್ರೀತಿಯಲ್ಲಿ ಕಲಹಗಳು ಸಹಜ ಆದರೆ ಆ ಕಲಹಗಳು ಪ್ರೀತಿಗೆ ಮುಳ್ಳಾಗಬಾರದು,
ಏಕೆಂದರೆ ಉಳಿಪೆಟ್ಟು ಬಿದ್ದಾಗಲೆ ಒಂದು ಕಲ್ಲು ಅದ್ಭುತ ಮೂರ್ತಿಯಾಗುತ್ತದೆ. ಉಳಿಪೆಟ್ಟು ಬಿದ್ದಾಕ್ಷಣ ಕಲ್ಲು ಕುಪಿತಗೊಳ್ಳವುದಿಲ್ಲ, ಸಹನೆಯಿಂದ ಅದು ದೈವ ಸ್ವರೂಪವನ್ನು ಪಡೆಯುತ್ತದೆ. ಹಾಗೆಯೆ ಸಣ್ಣಪುಟ್ಟ ಮನಸ್ತಾಪಗಳನ್ನು ಮೀರಿ ಪ್ರೀತಿಯನ್ನು ಗೆದ್ದು ಪ್ರೇಮ ಮೂರುತಿಯನ್ನು ನಿರ್ಮಿಸಬೇಕು....
ನಿನ್ನ ಪ್ರೀತಿಗಾಗಿ ನಾನು ಅಲೆದ ದಿನಗಳಿಲ್ಲಾ
ಕ್ಷಣಗಳಿಲ್ಲಾ,ಸ್ಥಳಗಳಿಲ್ಲಾ
ಆದರು ನಿ ನನ್ನ ತಿರುಗಿ ನೋಡಲಿಲ್ಲ
ನಿನ್ನ ಪ್ರೀತಿಗಾಗಿ ಏಳೆಳು ಜನ್ಮ ಎತ್ತೋದೇನು
ಅಸಾದ್ಯವಲ್ಲಾ,
ನಿನಗಾಗಿ ನನ್ನ ಜೀವಾ ಕೂಡೂದೇನ್ ದೂಡ್ಡದಲ್ಲಾ,
ಆದ್ರೆ ನೀ ನನ್ನ ಪ್ರೀತಿನಾ ಒಪ್ಕೋ ಬೇಕಲ್ಲಾ,
ನೀನು ನನ್ನ ಪ್ರೀತಿನಾ ಒಪ್ಕೋಂಡ್ರೆ
ಇವನ್ನೆಲ್ಲಾ ಮಾಡೋದ್ರಲ್ಲಿ ಮುಲಾಜೆ ಇಲ್ಲಾ.
ಪ್ರಾಸವ ಮುರಿದು,
ವ್ಯಾಕರಣವ ಹರಿದು,
ಹೊಸ ಶೈಲಿಯು ನನ್ನದೊಂದು ಎಂಬ ಭ್ರಮೆಯಲ್ಲಿ
ಗೀಚುತ ಏನೇನೋ
ಕವನವೆಂಬುದ ಬರೆದೆ ನೀನೊಂದು.
ನಿನ್ನ ಚಟಕ್ಕೆ
ಬಲಿಯಾದ ಆ ಪದಗಳೆಷ್ಟೋ...?
ನಿನ್ನ ದೌರ್ಜನ್ಯಕ್ಕೆ
ಮಾನ ಕಳೆದುಕೊಂಡ ಆ ಕವನಗಳೆಷ್ಟೋ...?
ವಿಮರ್ಶೆಗೆ
ತಡವಿಲ್ಲದೆ ನಿಡುವೇ ಅಶುಕಾರಣವ....
ಹೊಸ ಪದಗಳ ಹುಟ್ಟುಹಾಕುತ
ಹೂತು ಹಾಕಿರುವೆ ಶಬ್ದಕೋಶವ.....
ಮನಬಂದಂತೆ ಬರೆದು
ಬರೆದದ್ದೆ ಕವನಗಳೆಂದು ಕೊಚ್ಚಿಕೊಂಡು
ಹೊಗಳುವರ ಸಂಘವ ಕಟ್ಟಿ
ಚಪಾಳೆಗಳ ಬಾವಿಯಲ್ಲಿ ಮಿಂದು
ಕಡಲ ಕಡೆದಂತೆ ಬೀಗುತಿಯೆ
ಬುದ್ದಿ ನಿನಗುಂಟೆ?
ಯಾರ ಭಾವನೆಗಳಿಗೆ
ಯಾರು ಬೇಲಿ ಹಾಕಲು ಸಾಧ್ಯ .?
ಹಾರುವ ಹಕ್ಕಿಗೆ ಬಂಧನಗಳಿಲ್ಲ.
ಆದರೂ ಗೊತ್ತಿರಲಿ ಗೆಳೆಯ
ಓದುಗರು ನಿರುದ್ಯೋಗಿಗಳಲ್ಲ...