Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಗರದಿ ಓಡಾಡುವ ಯಂತ್ರಗಳು ನಾವು
ಒಂದು ಬಟನ್ ನಿನ್ನ ನಿರ್ದೇಶನದಂತೆ ನಡಿಯುವೆವು
ಬೆಳಗೇಳಲೊಂದು ಅಲಾರಾಮು
ತಿನ್ನಲು ತಂಗಳು ರೊಟ್ಟಿಯಂಥಾ ಬ್ರೆಡ್ಡು ಬನ್ನು
ಕಾಲಚಕ್ರಕೂ ಬಂದಿದೆ ಇಲ್ಲಿ ವೇಗ
ಮನಸಿನ ಭಾವನೆಗೆಲ್ಲಿದೆ ಜಾಗ
ಮುಖಕ್ಕೆ ಇರಲೇಬೇಕು ಮೇಕಪ್ಪು
ತುಟಿಗಿಷ್ಟು ಲಿಪ್ ಸ್ಟಿಕ್ಕು ಮನದ ನೊವಿಗಿಲ್ಲ ಇಲ್ಲಿ ಟಾನಿಕ್ಕು
ಹೊರಗೆ ಹೋದರೆ ಟ್ರಾಫಿಕ್ಕು ಎಲ್ಲೆಲ್ಲೂ ಕಸ ಪ್ಲಾಸ್ಟಿಕ್ಕು,
ನಗುವಿಗೂ ಹುಡುಕುವರು ಲಾಜಿಕ್ಕು ಕಂಬನಿಯೂ ಇಲ್ಲೊಂದು ಸರಕು
ಜಂಕ್ ಫುಡ್ ತಿಂದು ತಿಂದು ಹಿಡಿಯಿತೇ ಮನಸಿಗೂ ಜಂತು
ಎಲ್ಲಿ ಹುಡುಕಿದರೂ ಸಿಗದು ಒಂದಿಷ್ಟು ಮಾನವೀಯತೆಯ ರಂಗು
ಕಳೆದುಕೊಂಡಿಹೆವು ನಮ್ಮತನವನು ಎಲ್ಲೆಂದು ತಿಳಿಯದಾಗಿದೆ
ಹುಡುಕಬೇಕಿದೆ ಈ ಜನಜಂಗುಳಿಯಲಿ ನಾವ್ ಕಳೆದುಹೋಗದೆ
ಬೇಬಿಸಿಟಿಂಗಿನ ನಡುವೆ ಕಳೆದುಹೋಯಿತೇ ಅಜ್ಜ ಅಜ್ಜಿಯರ ಆ ಪ್ರೀತಿ
ಜೀನ್ಸ್ ಟಾಪಿನ ನಡುವೆ ಕರಗಿಹೋಯಿತೇ ಕಂಬನಿ ಒರೆಸುತ್ತಿದ್ದ ಅಮ್ಮನಾಸೆರಗು
ಕೈಬೀಸಿ ಕರೆಯುತಿದೆ ಪುಟ್ಟ ಊರಿನಾ ಪುಟ್ಟ ಗುಡಿಸಲು
ಸಾಟಿಯೇ ಅದಕೆ ನಗರದಾ ಗಗನಚುಂಬಿ ಮಹಲು
ಸುತ್ತಲೂ ಗಡಿಬಿಡಿಯ ಸಂತೆ ನಡುವೆ ನಿಂತಿಹೆ ನೀ ಏಕಾಂಗಿಯಂತೆ
ಇಷ್ಟೊಂದು ಸವಲತ್ತಿನ ನಡುವೆಯೂ ಆಗಿಹೆ ನೀ ಅನಾಥನಂತೆ
ಔದ್ಯೋಗೀಕರಣಕೆ ಇದುವೇ ದೇವಾಲಯ ವಂತೆ
ನಗರೀಕರಣದ ಶಿಶುವೇ ನೀ ಅನಾಥಪ್ರಜ್ಞೆಯಂತೆ
ಹಂಸಿನಿ
- ವಿಸ್ಮಯ
16 Apr 2017, 09:22 pm
ನೋಟದಲ್ಲಿ ಒಲವನ್ನು ಬೀರುವ ಜಾಣೆ
ಬೇಟೆಯಾಡುವೆ ಏಕೆ ಈ ಹೃದಯವನೇ಼
ಮೀಟಿ ಸ್ವರ ಹೋರಡಿಸು ಪ್ರೇಮ
ವೀಣೆಯನ್ನು
ದಾಟಿ ನಾಬರುವೆ ನೂರಾರು ಚಿಂತೆಯನ್ನು .......
- chinnadana ni kosam
16 Apr 2017, 07:58 pm
ಕನಸಿನ
ಒಡತಿಯ
ಅಪ್ಪಣೆಯಿಲ್ಲದೆ
ರಾಶಿ ರಾಶಿ
ಬಂದು ಬೀಳುವ
ಕನಸುಗಳೇ
ನನ್ನೊಳಗಿನ
"ಕವಿತೆ"
#ಕೃಷ್ಣಮುತ್ತು
- ಕೃಷ್ಣ ಮುತ್ತು
16 Apr 2017, 07:50 pm
ಜುಮುಕಿ ಸುಂದರಿ ಹೊತ್ತು
ಮೀರಿಸುವಾಗ ನನ್ನ ಕುತೂಹಲವು
ಒಂದು ಹೆಜ್ಜೆ ಮುಂದಿಡುತ್ತದೆ
ಬೆಳಕ ಹೆರುವ ಕ್ಯಾಂಡಲ್ಲಿನ ಕತ್ತಲು
ನನ್ನೊಳಗೆ ದೇಶಾಂತರವಾಗುವ
ಸೂಚನೆ ಸಿಗುವುದು ಆವಾಗಲೇ
ಹುಬ್ಬುಗಳಲಿ ಕಥೆ ಹೇಳುವ
ಮೌನರಾಣಿ ಕಾಜಿನ ಬಳೆಗೆ
ಕವನ ಹುಟ್ಟಿಸುತ್ತಾಳೆ
ನಿನ್ನೆಯ ತಾಕಲಾಟ ಕೇಳಿದ
ಕಿವಿಗಳಿಗೆ ಮುಂಗುರುಳು ಸುತ್ತುವುದು ಅದಕ್ಕಾಗಿಯೇ
ನನ್ನೊಲವು ಕಾಯಿಯಾದಾಗ
ಅವಳಿಗೆ ಹಣ್ಣಿನ ವ್ಯಾಮೋಹ
ತಾರಕಕ್ಕೇರುತ್ತದೆ ಎಂಬುದು
ಇನ್ನು ಕೂಡ ನಿಗೂಢ ರಹಸ್ಯ
ಅವಳೆದೆಯ ಬೇರಿಗೆ ಜೋತು
ಬಿದ್ದ ನೀರಿಲ್ಲದ ಒಣಮಣ್ಣು ನಾನು
ಯೋಚನಾ ಲಹರಿಗೆ ತಡೆ
ಹಾಕುವ ನನ್ನ ಕನಿಷ್ಟ ಪ್ರಯತ್ನವನ್ನು
ಅಲ್ಲಗಳೆಯುವ ಅವಳ ಆಂತರ್ಯ
ಭ್ರಮೆಯ ಹುಟ್ಟಿದ ಹಬ್ಬಕ್ಕೆ
ಶುಭಾಶಯ ಕೋರುತ್ತದೆ
ಮುಗಿಲೂರಿನವಳು ಮಂಜಿನಂತೆ
ಕರಗುವ ಕಲೆ ಮಾತ್ರ ಪ್ರಯೋಗಿಸುವುದು ಈ ಜಂಗಮನ ಮೇಲೆ
*ಅವಿಜ್ಞಾನಿ
- ಅವಿಜ್ಞಾನಿ
16 Apr 2017, 06:51 pm
ಬರೆದ ಕವಿತೆ ಓದುವವರಿದ್ದರೆ..
ಬರೆದವರಿಗೆ ಸಿಗುವುದು ಮಾನ್ಯತೆ..
ಅದೇ ಉತ್ತೇಜನ ಕೊಡುವುದು
ಬರೆದವರ ಮನಸಿಗೆ..
ಇಲ್ಲದಿದ್ದರೆ ಬರೆದದ್ದು ಸೇರುವುದು
ಮೂಲೆಗುಂಪಿಗೆ..
ಇವರಿಬ್ಬರೂ ಬೇಕು ಈ ಸಮಾಜಕೆ..
ಆಗಲೇ ಕವಿತೆಗೆ ಸಿಗುವುದು
ಸಾರ್ಥಕತೆ....
- KR Sreekamala
16 Apr 2017, 03:14 pm
ನನ್ನೆದೆಯ ವನದಲ್ಲಿ ಮಾಸದಿರಲಿ ನಿನ್ನೊವಿನ ಹೆಸರು.....
ಈ ವಿರಹದ ಬೇಗೆಯಲಿ ಬೆಂದು ಬಳಲುತ್ತಿದೆ
ನನ್ನಯ ಉಸಿರು......
- raki
16 Apr 2017, 02:08 pm
ಕಲ್ಲಂತ ಮನಸು ಕರಗಿಸೋ ಕರುಣಾಮಯಿ ಕಣ್ಣು ನಿಮ್ದು
ಕಟುಕನಿಗೂ ಕವನದ ಸುವಾಸನೆ ಬಡಿಸಿಡಿದ ಕಾಮಾಕ್ಷಿ ಕನ್ಯೆ ನೀನು
ಮನಸಿಂದು ಹಸಿ ಬಿಸಿ
ಕನಸೇಕೋ ಕಸಿ ಕಸಿ
ಕಲ್ಲು ಮನವಿಗೆ ಕರುಣೆ ಬಾರದು
ಒಲವ ಕೈಯಲಿಹಿಡಿದು ನೆಲದೊಳಹಾಸಿ ಒಲವನು ಮಣ್ಣು ಮಸಿ ಮಾಡಿದಾತನು ನಾ
ನನ್ನುಸಿರಿಂದು ಬಿಸಿ ಬಿಸಿ
ಭಾವನೆಇಂದೇಕೋ ಹುಸಿ ಹುಸಿ
ಬಣ್ಣಬಳೆದಳು ನನ್ನ ಬದುಕಿಗೆ
ನಾ ಬಳೆದೆ ನಿನ್ನ ಬದುಕಿಗೆ ನೀರ ಮೇಲೆ ಸುಟ್ಟಸುಣ್ಣ ಅರ್ಥಹಿನ ಬಣ್ಣವ ಮನದಬಿಳಿಗೋಡೆಯದಿ
ಅನುರಾಗ ಝರಿ ಝರಿ
ಅನುವಾದ ಕಾಲಿ ಕೈ
✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
16 Apr 2017, 01:42 pm
ಒಂದು ಮರದಲ್ಲಿ
ಹಲವು ಹಕ್ಕಿ ಸೇರಿ
ಒಂದೇ ಕಲರವ ಬೀರುವ ಹಾಗೆ
ಕಟು಼ತರುವೆವು ನಮ್ಮ
ಪ್ರೇಮಿಗಳ ಲೋಕ....
- chinnadana ni kosam
16 Apr 2017, 01:34 pm
ಮನಸುಗಳ ಕಲಹಕೆ ಅನುಮಾನವೆ
ಸುಳಿವು......
ಮನಸುಗಳ ಮಿಲನಕೆ ಬೇಕು ಒಲವೆಂಬ
ಗೆಲುವು.......
- raki
16 Apr 2017, 11:44 am
ಅಕ್ಕ ಎಂಬ ಮಾತಲ್ಲಿ ಎಂತ ಅಕ್ಕರೆ
ಅಕ್ಕರೆ ಸಕ್ಕರೆಗಿಂತ ಸಿಹಿ ನೀ ನಕ್ಕರೆ
ನಗು ಅರಿಯದ ನನ್ನ ಬಾಳಲ್ಲಿ ನೀ ತುಂಬಿದೆ
ನಗು ಎಂಬ ಸಕ್ಕರೆ.
- PARASHURAM B
16 Apr 2017, 10:59 am