ಏರಿಳಿಯುತಿರುವೆ ನನ್ನ ಭಾವನೆಲಯೇ
ಒಮ್ಮೋಮ್ಮೆ ಸದ್ದಾಗಿ ದಡಕ್ಕೆ ಬಡಿಯುವೇ
ಮತ್ತೊಮ್ಮೆ ಮೌನದಿ ಹಿಂದೆ ಸರಿಯುವೇ
ತಣ್ಣನೆ ಗಾಳಿಯೇ ನಿನ್ನಯ ಮುದ್ದಿಗೆ
ನನ್ನ ಆಸೆಯ ಬಹುದೂರ ಹಾರಿಸಲೆ
ಇಲ್ಲದೆ ಉಸಿರೆಳೆದು ಎದೆಯೊಳಗೆ ಬಂದಿಸಲೆ
ಮುಳುಗುತಿರುವೆ ಒ ರವಿಯೇ
ನನ್ನ ಕಲ್ಪನೆಗೆ ಬಣ್ಣ ತುಂಬಿರುವೆ
ಮತ್ತೊಮ್ಮೆ ಬರುವೆಯೆಂದು ನಂಬಿರುವೆ
ಇರುಳು ಸರಿಯುವ ಮುನ್ನ.....
ನೆನಪಲ್ಲೇ ಬಂದು ನೆನಪಾಗುತ್ತೀಯ ನೀನು...........
ನೆನಪನ್ನೇ ಇನ್ನೂ ನೆನಪಾಗಿಸುತ್ತಿಯ ನೀನು..........
ನಿನ್ನ ಪ್ರತಿ ನೆನಪಲ್ಲಿ ಒಂದು ಮಾತು ಇರುತ್ತೆ............
ಆದರೆ ನನ್ನ ಪ್ರತಿ ಮಾತಲ್ಲಿ ನಿನ್ನ ನೆನಪಿರುತ್ತೆ..........
ಜಾತಿ ಜಾತಿ ಎನ್ನಬೇಡ ಹೆಣ್ಣು ಗಂಡೆರಡೆ ಜಾತಿ
ಜಾತಿಯ ಹೆಸರಿನಲ್ಲಿ ಲೋಕದ ಜನರಲ್ಲಿ ತುಂಬಿದೆ ಅನೀತಿ.
ಜಾತಿ ನಿಂದನೆಯಿಂದ ಹೆಚ್ಚುತ್ತಿಹರು ದಿನೆ ದಿನೆ ಶತ್ರು.
ಭಾರತದಲಿ ಭಾವೈಕ್ಯದಿಂದ ಬದುಕಿದರೆ ಎಲ್ಲರು ಭ್ರಾತೃ.
ಜಾತಿಯ ಬೀಜ ಬಿತ್ತುತ್ತಿರುವುದು ರಾಜಕೀಯ ನಾಯಕ.
ಜಾತಿಯ ಅನಿವಾರ್ಯತೆ ಇಲ್ಲ ಎಂದು ಹೇಳುತ್ತಿಹನು ನಾಗರಿಕ.
ಶಿಕ್ಷಣ, ಉದ್ಯೋಗದಲ್ಲಿ ಕಿತ್ತೊಗೆಯಬೆಕು ಜಾತಿಯ ಮೀಸಲಾತಿ.
ಮೀಸಲಾತಿ ಸಿಗಬೆಕು ಸರಿಯಿಲ್ಲದಿದ್ದರೆ ಮಾನವನ ಆರ್ಥಿಕ ಸ್ಥಿತಿ.
ಜನಸಾಮಾನ್ಯರಲ್ಲಿ ಮೂಡಿಸಬೆಕು ಜಾತಿಯ ಹಾನಿಯ ಜಾಗೃತಿ.
ಎಲ್ಲರನು ಸಮನಾಗಿ ಕಾಣುವುದೆ ನಮ್ಮ ಸಂವಿಧಾನದ ಸಂಸ್ಕೃತಿ.
ಆಗಬೆಕಾದರೆ ವಿಶ್ವಕ್ಕೆ ಹಿರಿಯಣ್ಣ ನಮ್ಮ ಹೆಮ್ಮಯ ಭಾರತ,
ಜಾತಿ ಪದ್ಧತಿ ರದ್ದತಿಗೆ ನೀಡಬೆಕು ನಮ್ಮ ದೇಶದ ಪ್ರಜೆಗಳು ಬಹುಮತ.
ಏಕೆಂದರೆ..
ಮೆಚ್ಚುಗೆ ತೋರುವವರಲ್ಲಿ..
ಆಲಿಸಿ ಆನಂದಿಸುವರಲ್ಲಿ..
ಬಣ್ಣಿಸುವರಲ್ಲಿ ಅಭಿನಂದಿಸುವರಲ್ಲಿ..
ಭಾಗವಹಿಸುವರಲ್ಲಿ ಇರುವ
ನಿಷ್ಕಲ್ಮಷ ಮನಸೇ ಇಷ್ಟ
ಆ ಸೃಷ್ಟಿಕರ್ತ ದೇವರಿಗೆ....