Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊತ್ತೊಯ್ಯುವ

ಸತ್ತವರ ಹೆಣಗಳನ್ನು ಹೊತ್ತೊಯ್ಯುವ ಹೆಗಲಿಗಿಂತಾ...........
ಬದುಕಿದ್ದಾಗ ಚಿತ್ರವದೇ ಕೊಟ್ಟು
ಮಾನಸಿಕವಾಗಿ ಸಾಯಿಸುವವರ
ಸಂಖ್ಯೆಯೇ ಜಾಸ್ತಿ.............

ರಣಹದ್ದುಗಳು ಮರುಭೂಮಿಯಲ್ಲಿ
ಸತ್ತ ಹೆಣಗಳ ಕಿತ್ತು ತಿಂದರೆ.........?
ರಕ್ತ ಬಾರದೆ,ಹೊಡೆದ ಹೊಡೆತದ
ಗುರ್ತುಕಾಣದೆ , ನಗುವಲ್ಲೇ ನರಕತೋರುವವರು
ಈ ಮಾನಹೀನ ಮಂದೆಯಲ್ಲಾ .........

ನನ್ನಲ್ಲಿ ಅಡಗಿರುವ ಆಕ್ರೋಶವೆಲ್ಲಾ
ಲಾವದಂತೆ ಉಕ್ಕಿ ಬರುತ್ತಿದೆ ಇವರನ್ನೆಲ್ಲಾ
ಸುಟ್ಟು ಬೂದಿ ಮಾಡಲೂ...........
ಗಡಿದಾಟಿದ ಸಮುದ್ರವಾದರು ತನ್ನ ರಭಸವ
ಕಳೆದುಕೊಳ್ಳಬಹುದು ದೂರ ಹೋದಂತೆ.......

ಯಾರ ಮೇಲೂ ಉಳಿದಿಲ್ಲ ಕಿಂಚಿತ್ತೂ
ನಂಬಿಕೆ ನನ್ನಲ್ಲಿ ................
ಆ ಪರಶಿವನ ರುದ್ರರೂಪ ಕಂಡಿರುವರೊ
ಇಲ್ಲವೋ ತಿಳಿದಿಲ್ಲ ನನಗೆ .........

ಒಂದುದಿನಾ ಈ ಘೋರಗಳು ಹೆಚ್ಚಿದಾಗ
ಕಾಣುತ್ತೆ ಆ ಅಗಸದಿಂದ ಈ ನೋವಣೋತ್ತ ಭೂತಾಯಿಯವರೆಗೂ ಸ್ಥಳವಿಲ್ಲದೆ
ಬಿದ್ದ ಹೆಣಗಳ ರಾಶಿ ...........

ದುರ್ಜನರ ದುರ್ಮಗ ಕೊನೆಗೊಂಡು
ಆ ಕಾಲಭೈರವ ಮಾಡುವ ಆನಂದ
ತಂಡವದ ಸಾಕ್ಷಿ........................

- ಚುಕ್ಕಿ

26 Apr 2017, 12:53 am

ಕ್ರೂರರು

ಕರುಣೆ ಇಲ್ಲದ ಕ್ರೂರರು
ಈ ಪಾಪಿ ಜನರು ಎಲ್ಲಾರ
ನಗು ನುಂಗುವುದೇ ಇವರ
ಕೆಲಸ ..........

ಮತ್ತೊಬ್ಬರ ಮನವರಿತು
ಸತ್ತರು ಇವರು ನಡೆಯಲಾರರು
ಎಂತಹಾ ಕಟುಕರಿವರು......

ಮುಖವಾಡ ಧರಿಸಿರುವ
ರಾಕ್ಷಸರು.............

- ಚುಕ್ಕಿ

25 Apr 2017, 11:28 pm

ಶಶಿ..

ಕತ್ತಲ‌ ಇರುಳಿಗೆ ಆದಿತ್ಯನ ನಿರ್ಗಮನ
ಎರವಲ ಪಡೆದು ಶಶಿಯ ಆಗಮನ
ತಾ ಪಡೆದುದೆಲ್ಲವ ಸವೆಸಿ ಬೆಳಗುತಿರುವ ಜಗವ
ಉಲ್ಲಾಸಿಸಿರುವ ಮನವ ಹೆಚ್ಚಿಸಿ ಉನ್ಮಾದವ
ಇರುಳ‌ ಮೆರುಗ ಅಲಂಕರಿಸಿರುವ ತಾರೆಗಳ ಜೊತೆಗಾರನಿವ
ನಕ್ಷತ್ರ ‌ಪುಂಜವ ಜೋಡಿಸಿ ನೋಡಿ ನಗುತಲಿರುವ
ಕಾಣಬಲ್ಲ‌ ಕಲೆಗಳನ್ನೆ ಮರೆಸಿ ಮೋಡಿಮಾಡಿರುವ
ಬೆಳಗುತಲೆ‌ ಜಗವ ‌ಕಾಣದೆ ಮರೆಯಾಗಿಬಿಡುವ
ಮಡಿಯುತ ಚುಕ್ಕೆಗಳೆಲ್ಲವ ಜೊತೆಗೆ ಒಯ್ಯುವ
ನಭವನೆ ಮಂಕಾಗಿಸಿ ಬೆಳಕ ಹಿರಿಮೆಯ ಸಾರಿರುವ
ತಾನೆ ಕರಗಿ‌‌ ಸೋತರು ನಗುತ ಮತ್ತೆ ತುಂಬಿ ಬೆಳಗುವ
ಸೋಲಿಗೆ‌‌ ಸೋತು‌ ಎಲ್ಲರ‌‌ ಮರೆತು ಸಾವಿಗೆ ಹವಣಿಸುವ‌‌‌ ಬದುಕಿಗೆ ಉತ್ತರವಾಗಿರುವ

- ಶ್ರೀಕಾವ್ಯ

25 Apr 2017, 11:18 pm

ಸಮುದ್ರ ತೀರದ ಇಳಿಸಂಜೆ

ಏರಿಳಿಯುತಿರುವೆ ನನ್ನ ಭಾವನೆಲಯೇ
ಒಮ್ಮೋಮ್ಮೆ ಸದ್ದಾಗಿ ದಡಕ್ಕೆ ಬಡಿಯುವೇ
ಮತ್ತೊಮ್ಮೆ ಮೌನದಿ ಹಿಂದೆ ಸರಿಯುವೇ
ತಣ್ಣನೆ ಗಾಳಿಯೇ ನಿನ್ನಯ ಮುದ್ದಿಗೆ
ನನ್ನ ಆಸೆಯ ಬಹುದೂರ ಹಾರಿಸಲೆ
ಇಲ್ಲದೆ ಉಸಿರೆಳೆದು ಎದೆಯೊಳಗೆ ಬಂದಿಸಲೆ
ಮುಳುಗುತಿರುವೆ ಒ ರವಿಯೇ
ನನ್ನ ಕಲ್ಪನೆಗೆ ಬಣ್ಣ ತುಂಬಿರುವೆ
ಮತ್ತೊಮ್ಮೆ ಬರುವೆಯೆಂದು ನಂಬಿರುವೆ
ಇರುಳು ಸರಿಯುವ ಮುನ್ನ.....

- ABHILASH

25 Apr 2017, 11:14 pm

ನಿನ್ನದೆ ನೆನಪು...

ನೆನಪಲ್ಲೇ ಬಂದು ನೆನಪಾಗುತ್ತೀಯ ನೀನು...........
ನೆನಪನ್ನೇ ಇನ್ನೂ ನೆನಪಾಗಿಸುತ್ತಿಯ ನೀನು..........
ನಿನ್ನ ಪ್ರತಿ ನೆನಪಲ್ಲಿ ಒಂದು ಮಾತು ಇರುತ್ತೆ............
ಆದರೆ ನನ್ನ ಪ್ರತಿ ಮಾತಲ್ಲಿ ನಿನ್ನ ನೆನಪಿರುತ್ತೆ..........

ಶಾಬುದ್ದೀನ ಎಸ್ ಆರ್..

- shabudin

25 Apr 2017, 10:39 pm

ಜಾತಿ

ಜಾತಿ

ಜಾತಿ ಜಾತಿ ಎನ್ನಬೇಡ ಹೆಣ್ಣು ಗಂಡೆರಡೆ ಜಾತಿ
ಜಾತಿಯ ಹೆಸರಿನಲ್ಲಿ ಲೋಕದ ಜನರಲ್ಲಿ ತುಂಬಿದೆ ಅನೀತಿ.
ಜಾತಿ ನಿಂದನೆಯಿಂದ ಹೆಚ್ಚುತ್ತಿಹರು ದಿನೆ ದಿನೆ ಶತ್ರು.
ಭಾರತದಲಿ ಭಾವೈಕ್ಯದಿಂದ ಬದುಕಿದರೆ ಎಲ್ಲರು ಭ್ರಾತೃ.


ಜಾತಿಯ ಬೀಜ ಬಿತ್ತುತ್ತಿರುವುದು ರಾಜಕೀಯ ನಾಯಕ.
ಜಾತಿಯ ಅನಿವಾರ್ಯತೆ ಇಲ್ಲ ಎಂದು ಹೇಳುತ್ತಿಹನು ನಾಗರಿಕ.
ಶಿಕ್ಷಣ, ಉದ್ಯೋಗದಲ್ಲಿ ಕಿತ್ತೊಗೆಯಬೆಕು ಜಾತಿಯ ಮೀಸಲಾತಿ.
ಮೀಸಲಾತಿ ಸಿಗಬೆಕು ಸರಿಯಿಲ್ಲದಿದ್ದರೆ ಮಾನವನ ಆರ್ಥಿಕ ಸ್ಥಿತಿ.


ಜನಸಾಮಾನ್ಯರಲ್ಲಿ ಮೂಡಿಸಬೆಕು ಜಾತಿಯ ಹಾನಿಯ ಜಾಗೃತಿ.
ಎಲ್ಲರನು ಸಮನಾಗಿ ಕಾಣುವುದೆ ನಮ್ಮ ಸಂವಿಧಾನದ ಸಂಸ್ಕೃತಿ.
ಆಗಬೆಕಾದರೆ ವಿಶ್ವಕ್ಕೆ ಹಿರಿಯಣ್ಣ ನಮ್ಮ ಹೆಮ್ಮಯ ಭಾರತ,
ಜಾತಿ ಪದ್ಧತಿ ರದ್ದತಿಗೆ ನೀಡಬೆಕು ನಮ್ಮ ದೇಶದ ಪ್ರಜೆಗಳು ಬಹುಮತ.

- Rahul marali

25 Apr 2017, 10:28 pm

ಕಣ್ಣಿಗೆ ಕಾಣದೆಯೇ

ಕನವರಿಸಲು ನಿನ್ನೆಸರ।
ಆವರಿಸಿದೆ ನಿನ್ನಯ ಪ್ರತಿಬಿಂಬ॥

ಕಣ್ಣಿಗೆ ಕಾಣದೆಯೇ।
ಮನೆ ಮಾಡಿರುವೆ ಮನತುಂಬ॥

ಕೈಗಳಿವು ಕಂಪಿಸಿದೆ
ಬರೆಯಲು ಕವಿತೆಗಳ
ನಮ್ಮ ನೆನ್ನೆಗಳ ನೆನೆದು।

ಮರಳಿ ಪಡೆಯುವ
ಹುಚ್ಚು ಕನಸು ಮೂಡಿ
ಕಣ್ತುಂಬಿದೆ ಮನ ನೊಂದು॥

ಮೌನಕ್ಕೆ ಶರಣಾಗಿ
ಕಾಯುತ್ತಿರುವೆ ನಾನು
ಕಾಣುತ ಕನಸು ನೂರೊಂದು॥

-ಸವಿಗನಸು

- ಬಾನು ಅಡಿಗಾರ್

25 Apr 2017, 09:14 pm

ಪ್ರತಿಬಿಂಬ.................✍

ನಿನಗೆ ತಿಳಿಸುವೆ ಗೆಳೆಯ ನನ್ನ
ಹೃದಯದಲ್ಲಿ ಅಡಗಿರುವ
ರೂಪದ ಪ್ರತಿಬಿಂಬವೊಂದು.............

ನನ್ನ ನಯಣದಲ್ಲಿ ಪ್ರೀತಿಯಿಂದ
ನೋಡು ನೀನು ಹೃದಯ ತೋರುತ್ತೆ
ಆ ರೂಪ ನಿನ್ನದೇ ಎಂದೂ........

ತುಟಿಯ ದಾಟದ ಮಾತೊಂದು
ಮಾತನಾಡಿಸುತ್ತೆ ನಿನ್ನ........
ನನ್ನ ಕಣ್ಣಲ್ಲಿನ ನಿನ್ನ ರೂಪ ನನ್ನ
ಬಿಟ್ಟು ಬರಲಾರದೆಂದು.......

ಎದೆಯೇನೆಂಬ ಗುಹೆಯಲ್ಲಿ
ಗುಟ್ಟಾಗಿ ಬಚ್ಚಿಟ್ಟ ಪ್ರೀತಿಯನ್ನು
ತಲುಪಿದೆಯಾ ನೀನು.....
ಇಂದ್ರಾಚಾಪ ಹೊದಿಸಿ
ಆಹ್ವಾನಿಸಲೇ ನಾನು.....

ಅಮೃತ ಧಾರೆ ಹರಿಯುತ್ತಿದೆ
ನನ್ನ ಎದೆಯಲ್ಲಿ ನಿನ್ನ ಸೇರಲೆಂದು....
ನೆನೆದಾಗೆಲ್ಲಾ ನೀ ಮರೆಯಾದರೂ
ನಿನ್ನ ನೋಡಲೆಂದು......

- ಚುಕ್ಕಿ

25 Apr 2017, 08:58 pm

ಹೆಚ್ಚು ಪ್ರಿಯರು....

ಬರೆಯುವವರಷ್ಟೇ ಪ್ರಿಯರು..
ದೇವರಿಗೆ..
ಓದಿ ಮೆಚ್ಚಿಗೆ ತೋರಿಸುವವರು....

ಹಾಡುವವರಷ್ಟೇ ಹತ್ತಿರದವರು..
ದೇವರಿಗೆ..
ಆಲೈಸಿ ಆನಂದಿಸುವರು....

ಚಿತ್ರಾಕಾರರಷ್ಟೇ ರಸಿಕರು..
ದೇವರಿಗೆ..
ಅದನ್ನ ಮೆಚ್ಚಿ ಬಣ್ಣಿಸುವರು....

ನಾಟಕಗಾರರಷ್ಟೇ ಯೋಗ್ಯರು..
ದೇವರಿಗೆ..
ಅವರನ್ನು ಅಭಿನಂದಿಸುವರು....

ಪೂಜಿಸುವವರಷ್ಟೇ ಭಕ್ತಿವಂತರು..
ದೇವರಿಗೆ..
ಭಕ್ತಿಯಿಂದ ಭಾಗವಹಿಸುವರು....

ಏಕೆಂದರೆ..
ಮೆಚ್ಚುಗೆ ತೋರುವವರಲ್ಲಿ..
ಆಲಿಸಿ ಆನಂದಿಸುವರಲ್ಲಿ..
ಬಣ್ಣಿಸುವರಲ್ಲಿ ಅಭಿನಂದಿಸುವರಲ್ಲಿ..
ಭಾಗವಹಿಸುವರಲ್ಲಿ ಇರುವ
ನಿಷ್ಕಲ್ಮಷ ಮನಸೇ ಇಷ್ಟ
ಆ ಸೃಷ್ಟಿಕರ್ತ ದೇವರಿಗೆ....

- KR Sreekamala

25 Apr 2017, 07:05 pm

ನಾನು......

ಕಣ್ಣ ನೀರ ಹನಿಯ ಹಿಡಿದಿಟ್ಟು‌ ಕಾಯುತಿರುವೆ
ಮುತ್ತಾಗಿಸಿ‌ ಕಾಯುವ ಕಪ್ಪೆಚಿಪ್ಪಿಗಾಗಿ

ಮಾತೆಲ್ಲ ಮನಸಲ್ಲೆ ಮನೆಮಾಡಿ‌ ಇಟ್ಟಿರುವೆ
ಮನವೆಂಬ ಮನೆಯ ಅಲಂಕರಿಸುವವರಿಗಾಗಿ

ನೋವೆಲ್ಲವ ‌ಮನದಾಳದಲ್ಲಿ‌ ಬಂಧಿಸಿಟ್ಟಿರುವೆ
ಅವನು ಬಿಡುಗಡೆಗೊಳಿಸಿ ನಗಿಸುವವರಿಗಾಗಿ

ನಗುವನ್ನೇ ಮೋಹಿಸಿ ಕಣ್ಣಂಚಲೆ ಕೂಡಿಟ್ಟಿರುವೆ
ನಗುಮೊಗದ ನಲ್ಮೆಯ ಪ್ರೀತಿಪಾತ್ರರಿಗಾಗಿ

ಬಾಳ ಕನಸುಗಳೆಲ್ಲ ಪೋಣಿಸಿಟ್ಟಿರುವೆ
ಹೆಜ್ಜೆಗೆ ಜೊತೆಯಾಗುವ ಕನಸುಗಾರರಿಗಾಗಿ

ನನಸೆಲ್ಲ‌ವ ಹಂಚುತ್ತ‌ ನಡೆಯುತ್ತಿರುವೆ
ಬಾಳ ಜೊತೆಗೆ ನಡೆಯುತ್ತಿರುವ ನನ್ನವರಿಗಾಗಿ.....

- ಶ್ರೀಕಾವ್ಯ

25 Apr 2017, 06:26 pm