Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸಿನ ಅರಿವು

ಬಿಚ್ಚು ಮನಸ್ಸಿಂದ ಮಾತಾಡಿದರೆ ಹುಚ್ಚರೆನ್ನುವರು
ಮುಚ್ಚು ಮನಸ್ಸಿಂದ ಮಾತಾಡಿದರೆ
ಮುಗ್ದರೆನ್ನುವರು
ಕಿಚ್ಚಿನಿಂದ ಮಾತಾಡಿದರೆ ಕೀಚಕ
ಕಿರಾತಕರೆನ್ನುವರು
ಹರಿಯುವ ಮನಸ್ಸಿಗೆ ಪರರ
ಅಪ್ಪಣೆಯೇಕೆ
ನೀನು ನೀನಾಗಿರು ಮನವೆ...
ಆದರೂ............
ಅರಿವಿನ ಅಣೆಕಟ್ಟಿರಲಿ ಜೋಕೆ....

ಮನಸ್ಸು ನಿಮ೯ಲವಾಗಿದ್ದರೆ ಅದೇ ಸಾಕ್ಷಾತ್ಕಾರ
ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ
ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ
ಬದುಕು ಸರಳವಾಗಿದ್ದರೆ ಅವರಿಗೊಂದು ನಮಸ್ಕಾರ

- shabudin

27 Apr 2017, 03:59 pm

ಚಂಚಲ ಮನ

ಪ್ರೀತಿಯಲಿ ಆದ ಗಾಯ
ಮಾಸುವ ಮೊದಲು
ಹೊಸ ಪ್ರೀತಿಯ ಆಗಮನ
ಸಾಗುತಿದೆ ಅದರೆಡೆ ಗಮನ
ಎಲ್ಲದಕೂ ಕಾರಣ ಚಂಚಲ ಮನ

- Shreekanth

27 Apr 2017, 09:02 am

ಸೋತ ಮನಕೇ.......

ಯಾರಿಂದ ಈ ಸಂದರ್ಭದಲ್ಲಿ
ಮಾತನಾಡಿದ ಅಂತರಂಗ
ನನ್ನರಿಯದ ಭಾವತರಂಗ........

ಅವಿತು ಕೂತ ತಳಮಳ
ಬಾಧಿಸುವ ಈ ಬಂಧನಾ.............

ಕರೆಯಲಾಗದ ಹೆಸರೋ
ಮರೆಯಲಾಗದ ಉಸಿರೋ
ತಿಳಿಯಲಿಲ್ಲ ನನ್ನ ಸೋತ ಮನಕೇ........

- ಚುಕ್ಕಿ

26 Apr 2017, 11:11 pm

ಜ್ಯೋತಿ ನಂದಿತು

ಸಂಭ್ರಮದಿ ಸಡಗರದಿ ಹೊರಟಿದ್ದೆ ನಾನು,
ಸಂತೋಷವ ಹಂಚಿಕೊಳ್ಳಲೆಂದು
ಹೊರಟಿದ್ದೆ ನಾನು, ಹೊರಟಿದ್ದೆ ನಾನು
ಹೊರಟಿದ್ದೆ , ಸ್ವಲ್ಪ ದೂರ ಸಾಗಿಯೂ ಸಾಗಿದ್ದೆ .
ಸವಿಕನಸ ಸಿಹಿ ಕನಸ ಕಾಣುತಲಿ
ಆಗಲೇ ನಂದಬೇಕೇ ಜ್ಯೋತಿ ? ಬೇಕೇ ? ಜ್ಯೋತಿ .
ಜ್ಯೋತಿ ನಂದಿತು ಕತ್ತಲೆ ಆವರಿಸಿತು .
ಆದರೂ ಸಾಗಿದ್ದೆ ತನ್ನ ಗುರಿಯತ್ತ.
ಗುರಿ ಸಮೀಪಿಸಿತ್ತು ಹತ್ತಿರಾಗಿತ್ತು.
ಅಕ್ಕ ಪಕ್ಕದ ಮನೆಯ ಮುಂದಣ ಬೆಳಕು,
ನಂದಿತು ಜ್ಯೊತಿ ನಂದಿತು.
ಆಸೆಯಿಂದ ತಂದುದ ಕೊಡಲು
ಮಾತನಾಡಿಸಿದೆ ಬಾಲೆಯ ಮುದ್ದು ಬಾಲೆಯ
ದನಿ ಮಾತ್ರ ಕೇಳುತಿತ್ತು, ಚಿತ್ರ ಕಾಣದಾಗಿತ್ತು.
ಹೇಳಲಿಲ್ಲವೇ ನಂದಿತು, ಜ್ಯೋತಿ ನಂದಿತು.
ಮಾತುಕತೆ ಸಾಗಿತ್ತು ಸ್ಮಶಾನ ಯಾತ್ರೆಯಂತೆ
ಬೆಳಕ ತಾ ಎಂದು ಕೂಗಿತ್ತು ಬಾಲೆಯಾ ದನಿ
ಅದಕುತ್ತರ ಬಂದಿತ್ತು ಪುಟ್ಟಿಯಿಂದ ..........
ಕತೆ ಅಲ್ಲಿಗೆ ಮುಗಿದಿತ್ತು , ಆದರೂ ಮನಸಿತ್ತು.
ರಚನೆ ..... ಈರಣ್ಣ . ಹೆಚ್.

- Eranna.HHamsa

26 Apr 2017, 10:04 pm

ಹೃದಯ ಕದ್ದ ಚೋರಿ...

ಅಂಕೆಯಿಲ್ಲದ ಮನಸಿಗೆ ಪ್ರೀತಿಯ ಅಂಕಣಿ ಹಾಕಿದೆ ನೀ
ಅಂಕೇತ್ರಿಣೇತ್ರನಾದ ನನಗೆ ಅಂಕದರ್ಪ ತೋರಿ ಅಂಕಕಾತಿಯಾದೆ ನೀ
ಏಕಾಂಗಿಯ ಗಾಯಕೆ ಆಲಿಂಗನದ ಅಂಕದೌಷದ ನೀಡಿದೆ ನೀ
ಬರಡಾದ ಹೃದಯದಲಿ ಭಾವನೆಗಳ ಅಂಕುರಣ ಮೂಡಿಸಿದೆ ನೀ
ಬಯಸಿ ಬೇಡಿದ ನನಗೆ ಅಂಗಕಲ್ಪಕುಜದಂತೆ ಒಲಿದೆ ನೀ
ಅಂಗಲೇಪವಿಲ್ಲದೆ ಅತಿ ಸರಳ ಕಾಣುವ ಅಂಗವಟಿ ನೀ
ಆಮಂತ್ರಣವಿಲ್ಲದೆ ನನ್ನರಮನೆಗೆ ಅರಸಿಯಾದೆ ನೀ..

- Irayya Mathad

26 Apr 2017, 09:23 pm

ನಡೆದಿರಲು ಮುಳ್ಳಿನ ಹಾದಿಯಲಿ......

ನಡೆದಿರಲು ಮುಳ್ಳಿನ ಹಾದಿಯಲಿ
ಹೂವಂತೆ ಬಂದೆ ನೀನು
ಜೊತೆಯಾಗಿ ಕೈ ಹಿಡಿದು ನಡೆದಿರಲು
ಹೂವೆ ಮುಳ್ಳಾಯಿತೇನು

ನನ್ನ ಮಡಿಲ ಚೆಲುವಿನ ಕೂಸು
ನನ್ನೊಲವ ಪ್ರೀತಿಗೆ ಅರಸು
ಹಿಂದಿರುಗಿ ನೋಡದೆ ಹೊರಟಿರುವೆ ಕಾಣದೆ‌ ಸೊಗಸು
ನೆನಪಾಗದಾಯಿತೆ ಕಂಡ ಎಲ್ಲ ಕನಸು

ತಿರುಗಿ‌ ನೋಡು‌ ಸಾಕಿನ್ನು ಮುನಿಸು
ನಿನ್ನೆಲ್ಲ ಬಾಳ ಕ್ಷಣವ ನನ್ನೊಟ್ಟಿಗೆ ಸವೆಸು
ನಿನ್ನ ವಿನಹ‌ ಬೇರೇನು ‌ಕಾಣೆ ನನ್ನ ಸಹಿಸು
ನೀ ಕಂಡ ನನ್ನ ತಪ್ಪಿಗೆ ನನ್ನ ಮನ್ನಿಸು

ನನ್ನೆದೆಯ ಗೋಡೆಯಲಿ‌ ನಿನ್ನದೆ‌ ಹೆಸರು
ನಿನಗಾಗಿಯೇ ಕಾಯುತಿದೆ ನನ್ನುಸಿರು
ಕಣ್ದೆರೆದು ನೋಡು ನೀನಾಗಿಲ್ಲ ನನ್ನ ಶತ್ರು
ಮನಸರಿತು‌ ಒಂದೊಮ್ಮೆ ಅಪ್ಪಿ ಮಾಡು ಬದುಕು ಹಸಿರು

ಮರೆಯದೆ ಸೇರು ನನ್ನ‌
ಉಸಿರು ಹಾರಿ ಹೋಗುವ ಮುನ್ನ

- ಶ್ರೀಕಾವ್ಯ

26 Apr 2017, 09:21 pm

ನೀನು ...........

ನಿನ್ನ ಕಣ್ಣಲ್ಲಿ ನನಗಾಗಿ ಕಂಬನಿ
ಜಾರಿದೆ ಎಂದು ಹೇಳಿದೆ ನೀನು.........

ಆ ಕಂಬನಿಯ ರೂಪದಲ್ಲಿಯಾದರು
ನಿನ್ನ ನೋಡಲು ಬಂದಿರುವೆನೆಂದು
ತಿಳಿಯಲಿಲ್ಲವೇ ನೀನು..........

ನಿನ್ನಲ್ಲಿನ ನಗು ನಾನಾಗಿರಳು ನನಗಿಷ್ಟವಾದರು
ಕ್ಷೇಮಿಸು ನನ್ನ ನಾನಿರಲಾರೆ ನಿನ್ನ ನಗುವಾಗಿ ಏಕೆಂದರೆ ಆ ನಗು ನನ್ನ ತೊರೆದು
ಅಳುವಾಗಿ ಎಷ್ಟೋ ವರ್ಷಗಳು ಕಳೆಯಿತು........

ಅದರಿಂದಲೇ ನಿನ್ನಲ್ಲಿ ಕಂಬನಿಯಾಗಿ
ನಾ ಕಂಡೆ ನಿನ್ನ ನೋಡಲು ಗೆಳೆಯಾ........

- ಚುಕ್ಕಿ

26 Apr 2017, 09:07 pm

ಬರೆಯಲು

ಕಾವ್ಯನಾಮ ಏತಕೆ ಬೇಕು
ಬಿಳಿ ಹಾಳೆ ಸಿಕ್ಕರೆ ಸಾಕು
ಕವನ ಗಿಚುತ್ತಲ್ಲಿರಬೇಕು
ಬರೆಯಲು ವ್ಯಾಕರಣವೇಕೆ ಬೇಕು
ಕನಸೊಂದಿದ್ದರೆ ಸಾಕು...

- HarshaHL

26 Apr 2017, 08:47 pm

ಈ ಹೊತ್ತು

ಹಾಡು ಹಾಡುವ ಹೊತ್ತು
ಕಾಡು ಉಳಿಸಲು ನೀಡಬೇಕಿದೆ ಒತ್ತು
ನೆಲ ನಾಟಿ ಮಾಡಬೇಕಿದೆ ಕಳೆಗಳನ್ನು ಕಿತ್ತು
ಅನ್ನ ಬೇಡವೇ ಎಲ್ಲರೂ ಕೈ ಜೋಡಿಸಿ
ಅಕ್ಕಿಯ ಬೆಳೆಯೋಣ ಭತ್ತವ ಬಿತ್ತು

- HarshaHL

26 Apr 2017, 07:30 pm

ನಿನ್ನ ಹೇಗೆ ಮರೆಯಲಿ...?

        ನಿನ್ನ ನಾ ಮರೆಯಬಹುದು
        ಆದರೆ, ನಿನ್ನ ನೆನಪು ನಾ ಹೇಗೆ ಮರೆಯಲಿ ?
        ನಿನ್ನ ಕಣ್ಣುಗಳ ನಾ ಮರೆಯಬಹುದು
        ಆದರೆ, ನಿನ್ನ ಕನಸ ನಾ ಹೇಗೆ ಮರೆಯಲಿ?
        ನಿನ್ನ ಮಾತು ನಾ ಮರೆಯಬಹುದು
       ಆದರೆ, ನಿನ್ನ ಧ್ವನಿ ನಾ ಹೇಗೆ ಮರೆಯಲಿ?
ಮರೆತರು ಮರೆಯಲಾಗದ ನೆನಪು ನೀನು...
       ಅರಿತರು ಅರಿಯಲಾಗದ ಒಲವು ನೀನು...
ನಿನ್ನ ಹೇಗೆ ಮರೆಯಲಿ ಹೇಳು ನಾನು...
      ಮತ್ತೆ ನೆನಪಾಗಿ ಕಾಡದಿರು ನೀನು...
      ನನ್ನ ಹೃದಯದ ಪ್ರತಿ ಉಸಿರು ನಿನ್ನ ಹೆಸರು...
      ನಾನೆಂದೂ ಮರೆಯದಂತ ಉಸಿರು ನೀನು...

- ಅರೆಯೂರು ಚಿ. ಸುರೇಶ್

26 Apr 2017, 06:32 pm