Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸುಗಳು ಕಳುವಾಗಿವೆ

ಕನಸುಗಳು ಕಳುವಾಗಿವೆ
ಕಣ್ ರೆಪ್ಪೆಯ ಕಣ್ತಪ್ಪಿಸಿ
ಕದ್ದೊಯ್ದವರು ಯಾರು?
ನಮ್ಮ ಕನಸುಗಳು ಕಳುವಾಗಿವೆ
ದೂರು ತೆಗೆದುಕೊಳ್ಳುವವರಾರು?

- HarshaHL

28 Apr 2017, 01:17 pm

@ರೋಧನೆ@

ಹೂವು ಅರಳುವಾಗ ಮರಕ್ಕೆ ಆನಂದ,
ಆದರೆ ಅದೇ ಹೂವು ಹಣ್ಣಾಗಿ ಉದುರುವಾಗ ರೋಧನೆ.

ಹೆಣ್ಣು ಮಗು ಉದರಿಸುವಾಗ ತಾಯಿಗೆ ಅತ್ಯಾನಂದ,
ಆದರೆ ಅದೇ ಮಗಳು ಬೇರೆ ಮನೆಗೆ ಹೋಗುವಾಗ ರೋಧನೆ.

ಮೂರು ದಿನ ಇದ್ದು ಹೋಗುವ ನೆಂಟರು ಬರುವಾಗ ಆನಂದ,
ಆದರೆ ಅದೇ ನೆಂಟರು ಮರಳಿ ಹೋಗುವಾಗ ರೋಧನೆ.

ಹಾಗಿದ್ದ ಮೇಲೆ......

ಅಪರಿಚಿತರಾಗಿ ಸೇರಿ,ನಲಿದು,ಮರೆಯಲಾಗದ ನೆನಪುಗಳ ಸರಮಾಲೆ ನೀಡಿದ ನೀವು ತೊರೆದು ಹೋಗುವಾಗ ಈ ರೋಧನೆಯಷ್ಟೇ ಸಾಕಾ ಗೆಳೆಯರೆ...........
..................ಶರಣು................

- sharanu

28 Apr 2017, 09:52 am

ಒಲವೇ

ಒಂದು ನಕ್ಷತ್ರವನ್ನು ತಂದು ಕೊಡು....
ಸಾವಿರ ಮುತ್ತುಗಳನ್ನು ಕೊಡುವೆ ಅಂದೆಯಲ್ಲ
ಗೆಳತಿ.......
?????
ಸಾವಿರ ನೆನಪುಗಳ ನಕ್ಷತ್ರಗಳನ್ನು ಭೊಗಸೆಯೊಡ್ದಿ
ಹಿಡಿದು ತಂದಿದೇನೆ ಬಾ ನೊಡು....
ನನ್ನ ಪ್ರೀತಿಯ ಹುಡುಗಿ ಎಲ್ಲಿರುವೆ ನೀ ಹೇಗಿರುವೆ
ನನ್ನ ಪ್ರೀತಿಯ ಹುಡುಗಿ ನೀ ಇರದೆ ನಾ
ನೋಂದಿರುವೆ
ಒಲವೇ ನೀನೆಲ್ಲಿರುವೇ

- Nagaraja A

28 Apr 2017, 09:29 am

ಕನಾಸೆ

ಕಂಗಳಲಿ ತುಂಬಿ ಕಡಲಾದ ಕನಸುಗಳ
ಹಂಚಲು ಹಿಡಿ ಬೊಗಸೆಯೇ ಸಾಕೆ ?
ಕಟ್ಟಿ ಕೆತ್ತಿದ ಕನಸುಗಳು
 ಕಳೆದು ಹೋದೀತು ಜೋಕೆ !!!

 ಆಗಸದಂತೆ ಹರಡಿದ ಆಸೆಗಳ
 ಅರಿಯಲು ತಿಳಿ ಮನವೊಂದೇ  ಸಾಕೆ ?
 ಅರಿವಿಲ್ಲದೆ ಅರಳಿದ ಆಮಿಷಗಳು
 ವಿಷವಾದೀತು ಜೋಕೆ !!!!

- Prabhath

28 Apr 2017, 08:49 am

ತಿಳಿದವರು ತಿಳುವಳಿಕೆಹೀನರಾದಾಗ

ಮರುಕೋತಿ ಮನುಜನಗೆ ಬಣ್ಣದುಂಬಿದ ಹಾಳೆಮೇಲೆ
ಜಾಸ್ತಿ ವ್ಯಾಮೋಹ
ಸುಟ್ಟೋಗೋ ಸುಡುಗಾಡು ಹಾಳೆ

ಜಾಸ್ತಿ ಕರುಣೆ ಮನುಷತ್ವನೆ ಕಳಚೊ ಖೇರಾ ಈ ಗುಲಾಬಿಹಾಳೆ ಹಾಳೆ ಹಾಳೆ ..
ಹಾಳೆ ಇಂದಾಚೆ ಸುಳ್ಳಿನ ಸರಮಾಲೆ
ನಂಬಿಕೆಯ ನಿರಲ್ಲಿ ಮುಳುಗಿಸುವಾಲೆ

ತಿಳಿದವನ ತಿಳುವಳಿಯ ತನುವ್ ತಿಳಿನೀರಾಗೆ ದಡ ಸೇರಿಸಿದಾ(ಹಾ)ಳೆ
ಮನುಜನ ನಿಜ ಕುಲವ್ ಕಟಕಟೇಗೆ
ನಿಲಸೋದೆ ಈ ಹಾಳೆ.
ನಿಯತ್ತಿಗೂ ನೀತಿಗೆಡಿಸೋದು ಈ ಹಾಳೆ .

ನಂಬಿದವನು ನಂಬದಿರುವಾಗೆ
ನಸಿಸೋ ನಾಲ್ಕುಮೂಲೆಯ ಹಾಳೆ..
ಒಟ್ನಲ್ಲಿ ಮನುಜನ ಮನುಷತ್ವವಹಿನ ಒಡಕಿನ ಒಡೆಯನೆ ಹಾಳೆ ಹಾಳೆ.......

ವಿಧಿ ಬರಹ ಕಾಲಿ ಹಾಳೆ

✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

28 Apr 2017, 04:02 am

ನಾನೊಂದು ಗೊಂಬೆಯಲ್ಲಾ

ನಾನೊಂದು ಗೊಂಬೆಯಲ್ಲಾ
ನನಗೂ ಒಂದು ಮನಸಿದೆ........
ಅದು ಮಾರುಕಟ್ಟೆಯಲ್ಲಿ
ಮಾರಾಟವಾಗುವ ವಸ್ತುವಲ್ಲ.......

ಇಷ್ಟಪಟ್ಟು ಕೊಂಡುಕೊಳ್ಳಲು
ಬೆಲೆ ಕಟ್ಟಲಾಗಿದ ವಸ್ತುವದು........
ನೋಡುವ ಕಣ್ಣಿಗೆಲ್ಲಾ ಅದು ಇಷ್ಟವಾದರು
ಅದರ ನೋವು ಅದರದೇ............

ಮಾಮೂಲಿ ಮಾತಲ್ಲಿ ನಾ ಯಾರೆಂದು
ಕೇಳುವವರಿಗೆ ತಿಳಿಯಲ್ಲಾ..............
ಜೊತೆಗಿದ್ದು ದಿನನಿತ್ಯ ನೋಯಿಸುವವರಿಗೂ
ಅದರ ಗೋಳು ತಿಳಿಯಲ್ಲಾ.............

ಕಂಬನಿಯ ಸಾಗರದಲ್ಲಿ ತೇಲಿಬಿಟ್ಟ
ದೋಣಿಯಾದೆ ನಾನು..................
ಮಾತಿಲ್ಲದ ಧ್ವನಿಯ ಸದ್ದು ನಾನು.......

ನೊಂದ ಪುಟದಲಿ ಬರಿಯದೆ ಹಿಂಜರಿದ
ಲೇಖನಿಯು ನಾನೂ..............

- ಚುಕ್ಕಿ

28 Apr 2017, 12:16 am

ಓ ಹೆಣ್ಣೇ.........

ಸದಾ ಶಾಂತವಾದ ಸರೋವರದಂತಿದ್ದ ನನ್ನ ಮನಕೆ ,
ಪ್ರೀತಿಯೆಂಬ ಕಲ್ಲನೆಸೆದು
ಸದಾ ಅನುಮಾನವೆಂಬ ಅಲೆಯಂತೆ
ನನ್ನನ್ನು ಸುತ್ತಿ ಬಳಸಿ ಚುಚ್ಚಿ ಚುಚ್ಚಿ
(ಕೊಳದ) ಮನದ ಶಾಂತತೆಯನ್ನು ಕದಡಿದ
ಮೋಹಿನಿ ? ಮಾಯಾಂಗನೆ ? ನಾನು
ಪರಿತಪಿಸುವ ಸ್ಥಿತಿಯ ಕಂಡು
ಅಪಹಾಸ್ಯ ಮಾಡಿ ನಗುವಷ್ಟು
ವಿನೋದವಾಯಿತೇ ? ಈ ಬಾಳು
ಬರೀ ಗೋಳು, ಗೋಳು .........
ರಚನೆ ..... ಈರಣ್ಣ . ಹೆಚ್

- Eranna.HHamsa

27 Apr 2017, 11:37 pm

ಮರೆತೆ ನನ್ನ ಉಸಿರಲಿ...

ನನ್ನೊಳಗಿನ ಪ್ರತಿ ಭಾವಕ್ಕೂ
ಕನಸಿನ ರೂಪ ಕೊಟ್ಟಾಗ
ಹುಟ್ಟಿದ ಕವಿತೆಗಳು
ಬರೆಯಲು ಕುಳಿತರೆ ನನ್ನ ಮನಸ್ಸೇ ಖಾಲಿ
ಯೋಚಿಸಿದಾಗ ತಿಳಿಯಿತು
ನನ್ನ ಭಾವನೆಗಳೆ ನೀ ಕದ್ದಿರುವೆ 
ನಿನ್ನ ಸವಿಯಾದ ಮಾತು ಕೇಳಿ
ನಾ ಕವಿಯಾದೆ ಗೆಳತಿ
ಕ್ಷಣ ಕ್ಷಣಕೂ ನೆನಪಾದ ನಿನ್ನ ಹೆಸರು
ನಿನ್ನ ಹೆಸರೊಂದಿಗೆ
ನಾ ಮರೆತೆ ನನ್ನ ಉಸಿರು...!!!

- Pb

27 Apr 2017, 09:18 pm

ನಮಸ್ಕಾರಗಳು

ಅಂತರ್ಜಾಲದಲ್ಲಿ
ಮಾತಾಡಲು ಸ್ಥಳ ಕೊಟ್ಟ
ನಮ್ಮೊಳಗಿನ ಕವಿಯನ್ನು ಬಡಿದೆಬ್ಬಿಸಿದ
ನಮ್ಮ ಪಿಸುಮಾತುಗಳನ್ನು ಆಳಿಸಿದ
ನಮ್ಮ ಅರ್ಥವಿಲ್ಲದ ತರ್ಕವಿಲ್ಲದ ಪದ್ಯಗಳನ್ನು
ಆಕಳಿಸದೆ ಓದಿದ ಹಾಡಿದ
ಎಲ್ಲಾ ಓದುಗರಿಗೆ ಬರಹಗಾರರಿಗೆ
ಪಿಸುಮಾತು ತಂಡದವರಿಗೆ
ನನ್ನ ಹೃದಯಪೂರ್ವಕ ನಮಸ್ಕಾರಗಳು....

- HarshaHL

27 Apr 2017, 07:50 pm

ನಿರಾಸೆ

ಈ ನಗರದ ಸೀಮೆಂಟು ಮಹಡಿಗಳ ಮೇಲಿಂದ
ಹನಿಯಿಕ್ಕುತಿದೆ ತೊಟ್ಟಿಕ್ಕುತಿದೆ
ಮೇಲೆ ನಭದಲ್ಲಿ ಕರಿ ಮೋಡಗಳ ಸಾಲು
ಇರುವೆಗಳ ಸಾಲಂತೆ , ಗಡಿ ಇಲ್ಲದಂತೆ
ಸಾಗುತಿದೆ ಎತ್ತಲೋ ಗೊತ್ತಿಲ್ಲ ಗುರಿ ಇಲ್ಲದೆಡೆಗೆ
ಅಂತೂ ಹನಿ ಇಕ್ಕುತಿದೆ , ತೊಟ್ಟಿಕ್ಕುತಿದೆ
ಅಂತೂ ಇದೂ .................
ಸೀಮೆಂಟು ಮಹಡಿಗಳ ಮೇಲಿಂದಿಳಿಯುವ ಮಳೆ
ಇದು ಮಳೆಯೇ ?
ರಚನೆ..... ಈರಣ್ಣ .ಹೆಚ್

- Eranna.HHamsa

27 Apr 2017, 06:31 pm