ಹುಟ್ಟಿದ ಮಾತಿಗೆ ಮರಣ, ಸತ್ತ ಮೌನಕೆ ಜನನ
ನಗುವಿನ ಅಲೆಯ ಚುಚ್ಚಿ ಕೊಲ್ಲುವ ನೋವಿನ ಅನುಮಾನ
ಕಣ್ಣ ನೀರ ಕಂಡು ಮಿಡಿದ ಹೃದಯದಲಿ ಮತ್ತದೇ ಕಣ್ಣೀರಿನ ಉತ್ಖನನ
ಮತ್ತದೇ ಅಳು ನಗುವಿನ ಪುನಾರಾಗಮನ
ದಾಹವಾಗಿದ್ದಾಗ, ನಾನು ನೀರನ್ನ(ಪ್ರೀತಿ)ರಸುತ್ತಾ
ಮರಳುಗಾಡಿನಲ್ಲಿದ್ದಾಗ ,
ಓಯಸಿಸ್ ನಂತೆ ಗೋಚರಿಸಿ
ಮುಂದೆ ಮುಂದೆ ಕರೆದೊಯ್ದು
ಬಾಳಿನುದ್ದಕೂ ನಿರಾಸೆಯ ನೀರನ್ನು
ಕುಡಿಸಿದೆಯೇಕೆ ?
ಓಯಸಿಸ್ ನಂತೆ ಕಾಣುವ ನೀರಿಗೂ
ನಿನಗೂ ವ್ಯತ್ಯಾಸವಿಲ್ಲವೇ ?
ಅದಕೆಂದೇ ಮಾಯಾಂಗನೆ ಎಂದಿರಬೇಕು ?
ಚಂಚಲೆ ಎಂದಿರಬೇಕು ಋಷಿ ಮುನಿಗಳು.
ರಚನೆ ...... ಈರಣ್ಣ .ಹೆಚ್
ಪರರೇ ನಮ್ಮವರಾಗಿ, ನಮ್ಮವರೇ ಪರರಾಗಿ
ನಮ್ಮೊಳಗೆ ಪರರು ಸೇರಿ, ಪರರೊಳಗೆ ನಮ್ಮವರ ಹುಡುಕಿ
ಕನ್ನಡ ಎನ್ನಡವಾಗಿ, ಎನ್ನಡದೊಳಗೂ ನೂರಾರು ಭಾವ ಭಾಷೆ ಸೇರಿ
ಸೊರಗಿ ಸೋತರು, ಸತ್ತು ಗೆದ್ದು ಮೆರೆಯುತಿಹುದು ಇಂತಿಪ್ಪ ಬೆಂಗಳೂರು
ಪದ ಪದವನ್ನು
ಹಾಡುಮಾಡಿ ಹಾಡುವವನು ನಾನು
ಆದರೂ ಕಾಡುತ್ತಿದೆ ಈಗೇಕೋ
ಪದಗಳ ಅಭಾವ
ಕವನದಲ್ಲಿ ಹಿಂದಿನಂತೆ
ಹೊರಹಾಕಲಾಗುತ್ತಿಲ್ಲ ಭಾವ
ಭಾವನೆಗಳೇ ಸತ್ತ ಮೇಲೆ
ನಾವು ಜೀವಂತ ಶವ
ರಕ್ತ ಬತ್ತಿದ ಹೃದಯದಲ್ಲೂ
ಪ್ರೀತಿಯ ಕಾರಂಜಿ ಉಕ್ಕಿಸಬೇಕೆಂಬ
ಆಸೆ ಒಂದೇ ನನಗೆ
ಅದಕ್ಕಾಗೆ ಗೀಚುತ್ತೇನೆ
ಆಗೊಮ್ಮೆ ಈಗೊಮ್ಮೆ ಕವನ...
ಬರುವೆನೆಂದು ಹೇಳಿ ಹೋದವಳು ಬರಲಿಲ್ಲವೇಕೆ?
ನನ್ನ ಹೃದಯದಲ್ಲಿ ಮನೆಮಾಡಿಕೊಂಡಿದ್ದಳು
ಈಗ ನಾಪತ್ತೆ.
ಹೋಗಲಿ ಬಿಡಿ ನಮಗೇಕೆ ಅವಳ ಚಿಂತೆ
ಬರಿಯುವ ಒಂದು ಕವನವ
ಅವಳ ಕನವರಿಕೆಯಲ್ಲೇ
ನೀವು ರೋಧಿಸಬೇಡಿ
ಸಾಯುವ ಹೇಡಿ ನಾನಲ್ಲ ಬಿಡಿ
ಅವಳ ಕಾಡುವ ನೆನಪುಗಳನ್ನು
ಹಾಡು ಮಾಡಿ ಹೇಳುವ ಕವಿ
ನನ್ನೀ ಕವನವ ಕೇಳಿ ಮುಗುಳ್ನಕ್ಕನಂತೆ ರವಿ...
ನಿನ್ನ ಜ್ಞಾನದೊಳಗಿನ ದೇಗುಲದಲ್ಲಿ
ನನ್ನ ಅಜ್ಞಾನದ ಗವಿಯೊಳಗೆ
ಕತ್ತಲೆಯು ಕವಿದಿದೆಯಯ್ಯಾ
ನಿನ್ನ ಕರುಣಿಯ ಕಡಲೆಂಬ ಭಕ್ತಿಯನ್ನು
ಪಸರಿಸಿ ಸುಜ್ಞಾನವ ನೀಡಿ
ನನ್ನ ಪವಿತ್ರನನ್ನಾಗಿ ಮಾಡು ಎನ್ನಯ್ಯಾ ಬಸವಯ್ಯಾ
ಗುಲಾಬಿ ಹೂದೋಟದ ಮಾಲಿಕ
ಗುಲಾಬಿಯ ನೋಡಿ ಆನಂದಿಸುತ್ತಾನೆ
ಕೈ ಕೆಸರು ಮಾಡಿಕೊಳ್ಳುವ ಮನಸ್ಸಿಲ್ಲ ಅವನಿಗೆ
ಗುಲಾಬಿ ಹೂದೋಟದ ಮಾಲಿ
ಗುಲಾಬಿ ಗಿಡಗಳಿಗೆ ನೀರು ಗೊಬ್ಬರ ಉನ್ನಿಸುತ್ತಾನೆ
ಗುಲಾಬಿಗೆ ಎಲ್ಲಿಲ್ಲದ ಪ್ರೀತಿ ಅವನೆಂದರೆ...