Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮದುವೆ ಮನೆಯಲೋಂದು ಪ್ರೇಮದ ಕತೆ

ಮದುವೆ ಮನೆಯಲ್ಲಿ ಹುಡುಗಿ
ಸಿಕ್ಕಳು
ಬೆಳದಿಂಗಳ ಚಂದಿರನಂತೆ
.
..... ನಕ್ಕಳು
ಪ್ರೀತಿಸೊಣ ಎಂದರೇ
ಅವಳೇ ಮದುಮಗಳು

- Rajeshkiccha4

28 Apr 2017, 09:45 pm

ನಂಬಿಕೆ

ಭಾವ ಬಂಧನಕೆ ನಂಬಿಕೆಯೇ ಅಡಿಪಾಯವಂತೆ
ಅದರೊಡನೆ ಮಾತಿಗೆ ಜನನ, ಮೌನಕೆ‌‌ ಮರಣ
ನಗುವಿನ ‌ಅಲೆಯು ಮಗುವಿನಂತ ಮನಸಲಿ
ಕಂಡಾಗ ಕಣ್ಣೀರ ಮಿಡಿವುದು ಹೃದಯವು ಅಲ್ಲಿ
ನಕ್ಕಾಗ ನಗುವು, ಅತ್ತಾಗ ಅಳುವು
ನಗಿಸಿ‌‌ ನಕ್ಕು ಅಳಿಸಿ‌ ಅತ್ತು ಕಣ್ಣೀರ ಒರೆಸಿ
ಮಾತು ಮನಸ ಬೆಸೆದು ಕೂಡಿಟ್ಟು ಕಾಪಾಡಿರಲು ಬಂಧವು

ನಂಬಿಕೆಯೇ ಮುರಿದರೇ ಮುಂದಿನದು.............?

ಹುಟ್ಟಿದ ಮಾತಿಗೆ ಮರಣ, ಸತ್ತ ಮೌನಕೆ ಜನನ
ನಗುವಿನ ಅಲೆಯ ಚುಚ್ಚಿ‌ ಕೊಲ್ಲುವ ನೋವಿನ ಅನುಮಾನ
ಕಣ್ಣ ನೀರ ಕಂಡು ಮಿಡಿದ ಹೃದಯದಲಿ‌ ಮತ್ತದೇ ಕಣ್ಣೀರಿನ ಉತ್ಖನನ
ಮತ್ತದೇ ಅಳು ನಗುವಿನ ಪುನಾರಾಗಮನ

ನಗುವೇ ಅಳುವಾಗಿ, ಅಳುವು ಕಾಡಿ ಬಹುವಾಗಿ
ಬಂಧವ ಬೆಸೆದ ಮಾತೆ ನೋಯಿಸುವ ನನಸಾಗಿ
ಕನಸಲೂ ಕಾಡಯವುದು ಸಂಬಂಧವೂ ಪ್ರಶ್ನೆಯಾಗಿ

- ಶ್ರೀಕಾವ್ಯ

28 Apr 2017, 09:15 pm

ನೀ ...... ಹೆಣ್ಣೆ ?

ದಾಹವಾಗಿದ್ದಾಗ, ನಾನು ನೀರನ್ನ(ಪ್ರೀತಿ)ರಸುತ್ತಾ
ಮರಳುಗಾಡಿನಲ್ಲಿದ್ದಾಗ ,
ಓಯಸಿಸ್ ನಂತೆ ಗೋಚರಿಸಿ
ಮುಂದೆ ಮುಂದೆ ಕರೆದೊಯ್ದು
ಬಾಳಿನುದ್ದಕೂ ನಿರಾಸೆಯ ನೀರನ್ನು
ಕುಡಿಸಿದೆಯೇಕೆ ?
ಓಯಸಿಸ್ ನಂತೆ ಕಾಣುವ ನೀರಿಗೂ
ನಿನಗೂ ವ್ಯತ್ಯಾಸವಿಲ್ಲವೇ ?
ಅದಕೆಂದೇ ಮಾಯಾಂಗನೆ ಎಂದಿರಬೇಕು ?
ಚಂಚಲೆ ಎಂದಿರಬೇಕು ಋಷಿ ಮುನಿಗಳು.
ರಚನೆ ...... ಈರಣ್ಣ .ಹೆಚ್

- Eranna.HHamsa

28 Apr 2017, 08:54 pm

ನಮ್ಮ ಬೆಂಗಳೂರು...

ನಮ್ಮ ಬೆಂಗಳೂರು
ಗಡಿ ಮೀರಿ ಬೆಳೆಯುತಿದೆ
ಎಲ್ಲರ ಕೈ ಬೀಸಿ ಕರೆಯುತಿದೆ
ತನ್ನವರು ಪರರೆಂಬ ಭೇದವಿಲ್ಲದೆ

ಕನಸು ಗೆದ್ದವರ ‌ನೆಚ್ಚಿನ ಜಾಗವಿದು
ಸೋತು, ಗೆಲ್ಲುವ ಕನಸ ಕಂಡವರ ತಾಣವಿದು
ಸೋತು ಗೆದ್ದವರ, ಸೋತು ಸತ್ತವರ ಮೂಲವಿದು

ಹೈಟೆಕ್ ಇಲ್ಲುಂಟು,
ಐಟಿ ಬಿಟಿಯ ಜೊತೆಗೆ ಜಗದ ನಂಟು
ಕಂಡರೆ ಮುಗುಳ್ನಕ್ಕು ಮಾತಾಡುವವರು‌ ಎಲ್ಲಂಟು

ಸಾಕೆನಿಸಿದವರಿಗೆ ಬೆಂದಕಾಳೂರು
ಇದ್ದವರಿಗೆ ಬೆಂಗಳೂರು
ಬಂದವರಿಗೆ ಬ್ಯಾಂಗಳೂರು

ತುಂಡುಬಟ್ಟೆ ಗೇಣು ಹೊಟ್ಟೆಯ ಅರಿಯದವರು
ಕಾಣದ ಹೊಟ್ಟೆ ಬಟ್ಟೆಯ ಬೆಲೆಯ ತಿಳಿದವರು
ಹಿಡಿ ಅನ್ನ ಮೊಳ ವಸ್ತ್ರಕ್ಕೆ ಕಾದವರರು‌ ಬದುಕ ಕಟ್ಟುತ್ತಿರುವರು

ಪರರೇ ನಮ್ಮವರಾಗಿ, ನಮ್ಮವರೇ ಪರರಾಗಿ
ನಮ್ಮೊಳಗೆ ಪರರು ಸೇರಿ, ಪರರೊಳಗೆ ನಮ್ಮವರ ಹುಡುಕಿ
ಕನ್ನಡ ಎನ್ನಡವಾಗಿ, ಎನ್ನಡದೊಳಗೂ ನೂರಾರು ಭಾವ ಭಾಷೆ ಸೇರಿ
ಸೊರಗಿ‌ ಸೋತರು, ಸತ್ತು ಗೆದ್ದು ಮೆರೆಯುತಿಹುದು ಇಂತಿಪ್ಪ‌ ಬೆಂಗಳೂರು

- ಶ್ರೀಕಾವ್ಯ

28 Apr 2017, 08:54 pm

ಕವನ

ಪದ ಪದವನ್ನು
ಹಾಡುಮಾಡಿ ಹಾಡುವವನು ನಾನು
ಆದರೂ ಕಾಡುತ್ತಿದೆ ಈಗೇಕೋ
ಪದಗಳ ಅಭಾವ
ಕವನದಲ್ಲಿ ಹಿಂದಿನಂತೆ
ಹೊರಹಾಕಲಾಗುತ್ತಿಲ್ಲ ಭಾವ
ಭಾವನೆಗಳೇ ಸತ್ತ ಮೇಲೆ
ನಾವು ಜೀವಂತ ಶವ
ರಕ್ತ ಬತ್ತಿದ ಹೃದಯದಲ್ಲೂ
ಪ್ರೀತಿಯ ಕಾರಂಜಿ ಉಕ್ಕಿಸಬೇಕೆಂಬ
ಆಸೆ ಒಂದೇ ನನಗೆ
ಅದಕ್ಕಾಗೆ ಗೀಚುತ್ತೇನೆ
ಆಗೊಮ್ಮೆ ಈಗೊಮ್ಮೆ ಕವನ...

- HarshaHL

28 Apr 2017, 07:33 pm

ನನ್ನಮ್ಮ

ಹೇಗೆ ವರ್ಣಿಸಲಿ ಅಮ್ಮಾ
ಜಗದೊಳೆಲ್ಲ ನಿನ್ನದೆ ಮಾಯೆ
ನೀ ಮುಕ್ಕೊಟಿ ದೇವರ ಛಾಯೆ

ನವ ಮಾಸ ಹೊತ್ತು ಕಂದನ
ಏಳು ಬೀಳಿನ ಜೀವನದಲ್ಲಿ
ಜಯವಾಗಲೆಂದು ಹರಸಿ ಭೂಮಿಗೆ ತಂದೆ

ಕಂದ ಅತ್ತಾಗ ಹೊತ್ತು
ಅಂಬರದ ಚಂದ್ರನ ತೋರಿ
ದೇವಲೋಕಕೂ ಮಿಗಿಲಾದ ಮಡಿಲಲಿ ಮಲಗಿಸಿದೆ

ದೇವ ದಾನವರಂದು
ಹಾಲ್ಗಡಲನು ಕಡೆದಾಗ ಅಮೃತ ದೊರೆಯಿತು
ನಾ ನಿನ್ನ ಉದರದಿಂದ ಹೊರ ಬಂದೊಡನೆ
ನಿನ್ನ ಎದೆಹಾಲೆಂಬ ಪಂಚಾಮೃತ ದೊರೆಯಿತು

ಅದೇನಿಹುದೆ ತಾಯಿ
ನಿನ್ನ ಕರೆವ ಪದದಲಿ
ಅಮ್ಮಾ ಎಂದೊಡನೆ ಮನ ಧನ್ಯಾ
ಜೀವದ ನರ ನಾಡಿಗಳಲೆಲ್ಲ
ನವ ಚೈತನ್ಯಾ

ಮೌನಿ
9739651101

- ಮೌನಿ

28 Apr 2017, 07:06 pm

ಮೊಟ್ಟೆಯಿಡುವ ಮೊಡವೆ

ಅವಳ ಚಹರೆಯಲ್ಲಿ ಮೊಡವೆ
ಮೊಟ್ಟೆಯಿಡುವಾಗ
ನಾಚಿಕೆ ಸೆರಗ ಸುತ್ತುತ್ತದೆ
ನನ್ನ ಕನಸುಗಳಿಗೆ ಜಾಮೀನು ರಹಿತ ಸಜೆ ಸಿಗುವುದು ಆವಾಗಲೇ

ಅರಶಿನ ಮುತ್ತುವ ಕೆನ್ನೆ ನನ್ನ
ಕುರುಚಲು ಗಡ್ಡವನ್ನು ಲೇವಡಿ ಮಾಡಲೆಂದೇ ಶೋಭಿಸುತ್ತದೆ
ಹುರಿ ಮೀಸೆ ಕಪ್ಪು ಹುಡುಗ
ಸುರುಮ ಹಚ್ಚುವ ಖಯಾಲಿ ಶುರು
ಮಾಡೋಕೆ ಕಾರಣ ಅವಳೇ

ಪ್ರಣಯದಾಟದಲ್ಲಿ ನಾನೆಂದೂ ಹಾವಾಗಿರಲು ಇಚ್ಚಿಸುತ್ತೇನೆ
ಅವಳೊಂದು ಏಣಿ ಏರಿದಂತೆ
ಇಳಿಸುತ್ತಾಳೆ
ಪುನಾಃ ಅಮಲು ಹತ್ತಿಸುವ ಉಮೇದಿನವಳು ಘಳಿಗೆಗೊಮ್ಮೆ
ಕಾಡುತ್ತಾಳೆ

ಎದೆಯೂರಿನ ಪರಿಚಾರಕಿ ಕಣ್ಣಾಲೆಲ್ಲಿ ಕಥೆ ಹೇಳುತ್ತಾಳೆ
ಮುಗಿಲ ಬಿಟ್ಟ ಉಲ್ಕೆ ನಾನು ಉದುರಬೇಕೆಂದಿರುವೆ ಅವಳೊಳಗೆ
ಅಂತಿಮ ಹಪಹಪಿಗೆ ಹಸಿರು ನಿಶಾನೆ
ಇನ್ನು ಸಿಗಬೇಕಷ್ಟೆ

ಅವಿಜ್ಞಾನಿ

- ಅವಿಜ್ಞಾನಿ

28 Apr 2017, 05:38 pm

ಚಿಂತಿಸದಿಡಿ

ಬರುವೆನೆಂದು ಹೇಳಿ ಹೋದವಳು ಬರಲಿಲ್ಲವೇಕೆ?
ನನ್ನ ಹೃದಯದಲ್ಲಿ ಮನೆಮಾಡಿಕೊಂಡಿದ್ದಳು
ಈಗ ನಾಪತ್ತೆ.
ಹೋಗಲಿ ಬಿಡಿ ನಮಗೇಕೆ ಅವಳ ಚಿಂತೆ
ಬರಿಯುವ ಒಂದು ಕವನವ
ಅವಳ ಕನವರಿಕೆಯಲ್ಲೇ
ನೀವು ರೋಧಿಸಬೇಡಿ
ಸಾಯುವ ಹೇಡಿ ನಾನಲ್ಲ ಬಿಡಿ
ಅವಳ ಕಾಡುವ ನೆನಪುಗಳನ್ನು
ಹಾಡು ಮಾಡಿ ಹೇಳುವ ಕವಿ
ನನ್ನೀ ಕವನವ ಕೇಳಿ ಮುಗುಳ್ನಕ್ಕನಂತೆ ರವಿ...

- HarshaHL

28 Apr 2017, 05:29 pm

ಎನ್ನಯ್ಯಾ

ನಿನ್ನ ಜ್ಞಾನದೊಳಗಿನ ದೇಗುಲದಲ್ಲಿ
ನನ್ನ ಅಜ್ಞಾನದ ಗವಿಯೊಳಗೆ
ಕತ್ತಲೆಯು ಕವಿದಿದೆಯಯ್ಯಾ
ನಿನ್ನ ಕರುಣಿಯ ಕಡಲೆಂಬ ಭಕ್ತಿಯನ್ನು
ಪಸರಿಸಿ ಸುಜ್ಞಾನವ ನೀಡಿ
ನನ್ನ ಪವಿತ್ರನನ್ನಾಗಿ ಮಾಡು ಎನ್ನಯ್ಯಾ ಬಸವಯ್ಯಾ

- gtr

28 Apr 2017, 02:56 pm

ಗುಲಾಬಿ ಹೂದೋಟ

ಗುಲಾಬಿ ಹೂದೋಟದ ಮಾಲಿಕ
ಗುಲಾಬಿಯ ನೋಡಿ ಆನಂದಿಸುತ್ತಾನೆ
ಕೈ ಕೆಸರು ಮಾಡಿಕೊಳ್ಳುವ ಮನಸ್ಸಿಲ್ಲ ಅವನಿಗೆ
ಗುಲಾಬಿ ಹೂದೋಟದ ಮಾಲಿ
ಗುಲಾಬಿ ಗಿಡಗಳಿಗೆ ನೀರು ಗೊಬ್ಬರ ಉನ್ನಿಸುತ್ತಾನೆ
ಗುಲಾಬಿಗೆ ಎಲ್ಲಿಲ್ಲದ ಪ್ರೀತಿ ಅವನೆಂದರೆ...

- HarshaHL

28 Apr 2017, 01:24 pm