Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಉಸಿರೇ... ಉಸಿರೆ..

ಯಾವುದೊ ಹಕ್ಕಿಯ ಹಿಕ್ಕೆಯಲಿ ಬಿದ್ದು
ಮೊಳಕೆಯೊಡೆದ ಸಸಿ ನಾನು...!!
ಮಳೆಯ ಆಸರೆಯಲ್ಲಿಯೆ ಬದುಕು
ಕಟ್ಟಿಕೊಂಡ ಬವಣೆ ನನ್ನದು..!!!

ಅದೇಷ್ಟೊ ದನ-ಕರು ಕುರಿ-ಮೇಕೆಗಳ
ಬಾಯಿಂದ ಉಳಿದು ಅಡಿಗಳೆತ್ತರ ಬೆಳೆದು
ಬಿರುಗಾಳಿಯ ಹೊಡೆತಕ್ಕೆ ನೆಲಮುಟ್ಟಿ ಎದ್ದು ಮತ್ತದೆ ಬಾಯಾರಿಕೆಯಲಿ ಹನಿ ಮಳೆಗಾಗಿ ಕಾದು...!!

ಹತ್ತು ಹಲವು ವರ್ಷಗಳ ನಂತರ
ನನ್ನ ನಾನು ವಿಸ್ತರಿಸಿಕೊಂಡು
ಹಕ್ಕಿಪಿಕ್ಕಿಗಳಿಗೆ ಆಸರೆಯ ನೀಡಿ
ತಂಪು ನೇರಳ ನೀಡಿ, ಪ್ರಕೃತಿಯ ಭಾಗವಾಗಿದ್ದೆ...!!

ಸ್ವಾರ್ಥ ಮಾನವನೆ ನಿನ್ನ ವಿಕೃತ
ಮನಸ್ಸಿನ ಮುಂದೆ ಪ್ರಕೃತಿಯೊಳ
ನಮ್ಮ ಜೀವಕೆ ಬೆಲೆಯುಂಟೆ..?
ನನ್ನ ಬುಡಕೆ ಹಾಕಿದ ಕೊಡಲಿ ಪೆಟ್ಟಿಗೆ
ಮುಂದೆ ಕಾದಿದೆ ಪ್ರತಿಪೆಟ್ಟು ನಿನಗೆ ಅರಿವೂಂಟೆ......!!!

- ಪಿ ಅನಿ...

07 May 2017, 09:32 pm

ಹಕ್ಕಿಯಂತೆ‌ ಹಾರಲು‌‌ ಕಾಯುತಿರುವ ಮನಸು

ಹಕ್ಕಿಯಂತೆ ಹಾರಲು‌‌ ಕಾಯುತಿರುವ ಮನಸಿಗೆ ರೆಕ್ಕೆಯ ಕಟ್ಟಲೇನು
ರೆಕ್ಕೆ ಮುರಿದರೆಂದು ಹೆದರಿ ನೆಲಕಚ್ಚಿ ಕೂರಲೇನು

ಹಾರಲು‌ ಬಾರದ ಹೃದಯಕ್ಕೆ ಹಾರುವುದ ಕಲಿಸಲೇನು
ಅಪಘಾತವಾಗುವ ಭೀತಿಯಲಿ ಬಂದಿಸಿ‌ ಇಡಲೇನು‌

ಆಗಸದಂತ ವಿಸ್ತಾರವ ಒಮ್ಮೆ ಕಣ್ತುಂಬಿಕೊಳ್ಳಲೆಂದು‌ ಹಾರಲೇನು
ಅರಿಯದ ಹಾದಿಯ ‌ಪಯಣವ ನೆನೆದು ರೆಕ್ಕೆ ಮುದುರಲೇನು

ಈ ಬುವಿಯಂತ ಪಕ್ಷಿ ನೋಟವ ಕಂಡು ಹರುಷ ಪಡಲೇನು
ಎತ್ತರದಲಿ‌‌ ಹಾರಲಾಗದಿದ್ದರೆಂದು ನೆನೆದು ಸೊಗಸ ನೋಡುವುದ ಮರೆಯಲೇನು

ಹಾರುವ ದಾರಿ ಜೊತೆಗಿನ ಪಯಣಿಗರ ಜೊತೆ ನಗುತ ಸೇರಲೇನು
ಜೊತೆಗೆ ಸರಿದು ಹೋಗಬೇಕಿರುವವರ ನೆನೆದು ಅವರ ಅರಿಯಲಾಗದೆಂದು ಮೌನವಾಗಲೇನು

ಹಾರಿ ಸುತ್ತಿ ಜಗವ ನೋಡ ಬಯಸುತಿದೆ ಮನಸು
ಹಾರಿ‌‌ ಬಿಡಲೇನು‌ ಕಲ್ಪನೆಗಳ‌‌ ಮರೆತು ಕನಸಾಗಲೆಂದು ನನಸು

- ಶ್ರೀಕಾವ್ಯ

07 May 2017, 06:16 pm

ಮಾಸಿದ ಕವಿತೆ

ಒಂದೊಳ್ಳೆ ಕವಿತೆ ಮಾಸಿತು
ಅವಳ ನೆನಪಿನಂಚಲಿ
ಬಿಡದೆ ಕಾಡಿದ ನೆನಪುಗಳು ಯುಗದಾಚೆಗೆ ಎಳೆದೊಯ್ದವು
ಕನಸಿಗೆ ದೊರೆಯದ ಮುಕ್ತಿ
ಮರೆವು ಬಾರದ ನೆನಪು ಕನಸಾಗಿ ಬಂದಿಸಿತ್ತು
ಅವಳ ಮೌನ ಕಥೆಗೆ ಶೃಂಗಾರ ಕಾಣದೆ ಬಂದಿಯಾಗಿತ್ತು.

- ರವಿಕುಮಾರ

07 May 2017, 05:34 pm

ಒಡೆದ ಕನವರಿಕೆ

ಮೂರನೇ ಬಾರಿ ಅದೇ ದಾರಿಗೆ
ಹೆಜ್ಜೆಯಾದೆ ಹುಡುಗೀ
ಖಾಲಿ ಕಲ್ಲಿನ ಬೆಂಚು ಒಂದಿಷ್ಟು
ಹಳೆಯ ನೆನಪು ಮಾತ್ರ ಜೋಳಿಗೆ ತುಂಬಿಸಿ ಹಿಂದಿರುಗುತ್ತಿರುವೆ

ಬಿಸಿಲ ನೆಪಕ್ಕೆ ಮರದ ವಾರೆ ನಿಂತ
ಬೇಸಿಗೆಕಾಲ ಪದೇ ಪದೇ
ಕೊರೆಯುತ್ತದೆ ನಿನ್ನಂತೆ
ಮೌನ ಒಡೆಯಬೇಕೆಂಬ ನನ್ನ
ಉಮೇದು ಕಾಡಿಗೆ ಕಣ್ಣಿಗೆ
ಪದೇ ಪದೇ ಸೋಲುತ್ತಿತ್ತು

ಮುಗಿಲೂರಿನ ಚೆಲುವೆ
ನನ್ನ ತೊದಲುವಿಕೆಗೆ ಅರ್ಥ ಕೊಡುತ್ತಾಳೆ
ಹೊಸತೊಂದು ಅಧ್ಯಾಯ ಬರೆಯಬೇಕೆಂಬ ನನ್ನ ಹುಂಬತನ ಮರಿ ಹಾಕಿದ್ದು ಆವಾಗಲೇ

ನಿನ್ನ ಅತೀ ಸಮೀಪದಲ್ಲಿ
ತೊರೆದು ಬಂದ ಗರಿಷ್ಟ ಮಟ್ಟದ
ಆಶೆಯೊಂದಕ್ಕೆ ತಿಲಾಂಜಲಿ ಇಡದಿರು
ಒಲವಿನ ಪಾಠಶಾಲೆಗೆ
ನೂತನ ವಿದ್ಯಾರ್ಥಿ ನಾ

-ಅವಿಜ್ಞಾನಿ

- ಅವಿಜ್ಞಾನಿ

07 May 2017, 04:55 pm

ಮರೆಯಾದ ಗೆಳತಿ

ಒಮ್ಮೆ ನಗಿಸಿದೆ,ಒಮ್ಮೆ ಕಣ್ಣೋರಿಸಿದೆ
ನಿ ಯಾರೆಂದು ತಿಳಿಸದೆ!
ಕುಟುಂಬವೋ ಸ್ನೇಹಿತೆಯೋ..
ಎಂದು ನಾ ಕೊನೆಗೂ ಅರಿಯದೆ ಹೋದೆ...

- Vinuu

07 May 2017, 02:56 pm

ನೀ ನನಗೆ ಕೊಟ್ಟ ಮಾತು........

ನನ್ನ ನಗುವನ್ನು ಕಳೆದುಕೊಂಡೆನೆ
ಮಗುವಿನ ರೂಪದಲ್ಲಿ.......

ಕಣ್ಣೀರ ಕೊನೆಗೂ ಕರುಣೆ ಇಲ್ಲ
ಅವಳ ನೆನೆಯಲು ಇದು ಅಡ್ಡಿಯಾಗಿದೆಯಲ್ಲಾ....

ನೋಡೇ ನನ್ನ ಮುದ್ದು ಮಗಳೇ
ಮಾತಿಲ್ಲದೆ ಮಲಗಬೇಡ ನನ್ನ ಉಸಿರೆ ನಿಂತೋಗುತ್ತೆ...........

ನಿನ್ನ ಮುದ್ದು ಮಾತಲ್ಲಿ ನನ್ನ ಅಪ್ಪ
ಎಂದು ಕರಿಯಮ್ಮಾ ಪುಟ್ಟಿ............

ಇನ್ಮುಂದೆ ನೀನಿಲ್ಲವೆಂಬ ಕನಸಲ್ಲೂ
ಒಪ್ಪಲು ಸಾಧ್ಯವಿಲ್ಲ ನನ್ನಿಂದ ಪಾಪು..........

ಇವರೆಲ್ಲಾ ನೀನಿಲ್ಲವೆಂದು ಆ ದೇವರ ಬಳಿ
ಹೋಗಿರುವೆಯೆಂದು ಅಳುತ್ತಿದ್ದಾರೆ ಚಿನ್ನ.......

ನೀ ನನಗೆ ಕೊಟ್ಟ ಮಾತು ಈ ಜನರಿಗೆ
ತಿಳಿದಿಲ್ಲ ಅಲ್ವಾ ಅಪ್ಪ ನಿನ್ನ ನಾನೆಂದು
ಬಿಟ್ಟಿರಲಾರೆ ಎಂದೂ............

- ಶಶಿ

07 May 2017, 10:54 am

ಕವಿತೆ.....

ನಿಂತಾಗಲೊಮ್ಮೆ ಮನವ ಸೇರಿದ ಸೊಲ್ಲ ನೆನೆದು
ಕುಳಿತಾಗಲೊಮ್ಮೆ ಕಲಿತ ನುಡಿಯ ಸೇರಿಸಿ
ಮನಸೊಳಗೆ ಕಾಣದೆ ಬಚ್ಚಿಟ್ಟು ಕುಳಿತ ಪದವ ಹುಡುಕಿ
ಮರೆಯಾಗದೆ ಕಣ್ಮುಂದೆ ಸುಳಿದಾಡುವ ಶಬ್ಧವ ಹೆಕ್ಕಿ
ಮನಸ ಕಾಡುತಿರುವ ಮರೆಯಲಾಗದ ನೆನಪ ಪದಗಳಲೆ ಜರಿದು
ಬದುಕ‌ ಹಸನಾಗಿಸಿದ ಸವಿಯ ನನಸ ಮತ್ತೊಮ್ಮೆ ನೆನೆದು
ಜೊತೆಯಾಗಿಯೇ ಇದ್ದು ನನಸಾಗದ ಕನಸ ಮೇಲೆ ಮುನಿದು
ಬದುಕ ಜೊತೆ ಜೊತೆಗೆ ‌ಬಂದವರ ಹರಸಿ ಹಾರೈಸಿ
ಅರ್ಧಹಾದಿಯಲೆ ಸರಿದು ನಿಂತವರ ಮೇಲೆ ವರದಿ ಒಪ್ಪಿಸಿ
ಪಾಠ ಕಲಿಸಿದ ಕ್ಷಣ ಮನಕೆ ಮತ್ತೊಮ್ಮೆ ವಂದಿಸಿ
ಕಾಪಾಡಿದ ಜೀವಗಳಿಗೆ ಧನ್ಯವಾದ ಅರ್ಪಿಸಿ
ಹೇಳಬೇಕಾದ ಮಾತು ರೀತಿ ನೀತಿ ಶಾಂತಿ‌‌ ಕ್ರಾಂತಿಗಳ ಪದಗಳಲೇ ಬೆರೆಸಿ
ಜೀವ ಜೀವಗಳ ವಿವಿಧ ಭಾವ ಭಾವನೆಗಳ ಸಾಲುಗಳಲಿ ಮೇಳೈಸಿ

ಮೂಡುತಿರುವ ಕವಿತೆಗಳು

ಮಾಡುತಿಹುದು ಮನವ ಸೊಗಸು,
ಅಡಗಿ ಕುಳಿತಿದ್ದ ಕವಿ ಮನವ ಜಗಕೆ ಪರಿಚಯಿಸಿ

- ಶ್ರೀಕಾವ್ಯ

06 May 2017, 10:40 pm

ಒಗ್ಗಟ್ಟು

ಬನ್ನಿರಿ ಬನ್ನಿರಿ ಸಾಗೋಣ
ಗುರಿ ತಲುಪಲು ಸೇರೋಣ

ಭಿನ್ನಗಳನ್ನು ಮರೆಯೋಣ
ಸಮಭಾವಗಳನ್ನು ಬಿತ್ತೋಣ
ಹಮ್ಮುಗಳನ್ನು ಕಳೆಯೋಣ
ಹೆಮ್ಮೆಯ ನಾವು ಗಳಿಸೋಣ

ತರ್ಕಕೆ ನಾವು ಕಾಯೋಣ
ಸಗ್ಗದ ಯಶವ ಪಡೆಯೋಣ
ಕಗ್ಗದ ಅರ್ಥವ ತಿಳಿಯೋಣ
ಬಗ್ಗದ ರೀತಿ ನಡೆಯೋಣ

ಬಂಡಾಯವ ನಾವು ಏಳೋಣ
ಗರ್ವದಿ ಗೆದ್ದು ಬೀಗೋಣ
ಕನಸಿನ ಮಹಾಮನೆ ಕಟ್ಟೋಣ
ಅದರೊಳು ಗಂಧದಿ ಮಥಿಸೋಣ

ಕ್ರಾಂತಿಯ ಹಾದಿಯ ಕ್ರಮಿಸೋಣ
ಶಾಂತಿಯ ತ್ರಿಪಿಟಿಕ ಕೇಳೋಣ
ಮಹೋನ್ನತ ಚಿಂತನೆ ಬೆಳೆಸೋಣ
ಜಗಕೆ ಮಾದರಿಯ ತೋರೋಣ







- ಚಂದ್ರಶೇಖರ ಹೆಗಡೆ

06 May 2017, 09:00 pm

ವಿಶ್ರಾಂತಿ

ನೀ..... ದೂರ ಹೋದ ಮೇಲೆ ಎಲ್ಲಿದೆ

ಮನಸ್ಸಿಗೆ ಶಾಂತಿ?

ನೋವುಗಳು  ತುಂಬಿ  ಸೃಷ್ಟಿಯಾಗಿದೆ ಅಶಾಂತಿ

ನೀ.... ದೂರ ಹೋದ ಮೇಲೆ ಎಲ್ಲವೂ, ಸತ್ತು ಹೋಗಿದೆ ಗೆಳತಿ,

ಅದಕ್ಕಾಗಿ ಬೇಕಿದೆ ಈಗ ನನಗೆ ವಿಶ್ರಾಂತಿ


✍ ಶೇಖರ್ ಬೆಳಾಲ್

- ಎಸ್.ಬಿ

06 May 2017, 07:43 pm

ವಿಶ್ರಾಂತಿ

ನೀ..... ದೂರ ಹೋದ ಮೇಲೆ ಎಲ್ಲಿದೆ

ಮನಸ್ಸಿಗೆ ಶಾಂತಿ?

ನೋವುಗಳು  ತುಂಬಿ  ಸೃಷ್ಟಿಯಾಗಿದೆ ಅಶಾಂತಿ

ನೀ.... ದೂರ ಹೋದ ಮೇಲೆ ಎಲ್ಲವೂ, ಸತ್ತು ಹೋಗಿದೆ ಗೆಳತಿ,

ಅದಕ್ಕಾಗಿ ಬೇಕಿದೆ ಈಗ ನನಗೆ ವಿಶ್ರಾಂತಿ

- ಎಸ್.ಬಿ

06 May 2017, 07:41 pm