Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನ್ನಿಲ್ಲದೆ ಈ ಜೀವ ಬಾಳದು..

ಮಲ್ಲಿಗೆ ಹೂವ ತೊಂಗಲಲ್ಲಿ
ಅಡಗಿ ಕುಳಿತೆ ಭೃಂಗವಲ್ಲಿ
ಮಲ್ಲಿಗೆಗೆ ನಿನ್ನ ಗಂಧವೊ
ನಿನ್ನಲ್ಲಿ ಮಲ್ಲಿಕಾ ಘಮವೊ...

ಸಂಜೆಗೆಂಪು ಕಡಲತೀರ
ಮೂಡಲು ನಿನ್ನ ಪಾದಚಿತ್ರ
ಪಾದ ರಂಗು ಉಸುಕಿಗೊ
ನಿನ್ನಲ್ಲಿ ಮರಳು ಬಣ್ಣವೊ

ಹರಡಲು ನಿನ್ನ ಕೇಶರಾಶಿ
ಉಂಗುರದ ಮುಂಗುರುಳು ತೋರಿ
ಹೆರಳ ತಾಕಿ ಇರುಳ್ಗಪ್ಪೊ
ನಿಶೆಯ ಛಾಯೆಗೆ, ಕುರುಳ್ಗಪ್ಪೊ

ಭಾವಗಳ ಘರ್ಷಣೆ ನಿಲ್ಲದು
ಹೊಲಿಕೆಗೆ ಪದ ಸಾಲದು
ನೀನ್ನಿಲ್ಲದೆ ಈ ಜೀವ ಬಾಳದು...

- Indushekar Chinivar

16 May 2017, 08:37 am

ಹನಿ..

ಚುಕ್ಕಿಗಳ ಪಲ್ಲಕ್ಕಿಯಲಿ
ಮೆರವಣಿಗೆ ಹೊರಟ
ಚಂದಿರ
ನಿನ್ನ
ತಾಕಿದ ತಿಳಿಗಾಳಿಯ
ಘಮಕೆ ,
ಕ್ಷಣ ಮೈಮರೆತ
ಇರುಳು...

- Indushekar Chinivar

15 May 2017, 10:48 pm

ಪ್ರೀತಿ

ಪ್ರೀತಿ ನಿನ್ನ ಹಠವೇನೆ ನಿನ್ನ ಪ್ರೀತಿಸೋವರಿಗೆ
ಪ್ರತಿಕ್ಷಣ ಬೆಂಬಿಡದೆ ಕಾಡುವೆ ಮತ್ತೆ ಮತ್ತೆ ನೆನೆಪಿಸುವೆ...............

ಮಾತು ನಿನ್ನ ಹೆಸರ ರೂಪ ನಿನ್ನ ಉಸಿರಾ
ಆಕರ್ಷಣೆ ನಿನ್ನ ಅಸ್ತಿತ್ವದ ನೆಲವಾ..........
ಕೋಪ - ತಾಪ ನಿನಗೇಕೆ ...........

ನೋವು-ನಲಿವು ಬಿಡುವುದಿಲ್ಲವೇಕೆ........
ಸರಸ - ವಿರಸದ ಜಂಜಾಟವೇಕೆ.......
ಮರುವು ನಿನ್ನ ಶತ್ರುವಾ ..............

ಏಕೆ ನಿನಗ ಈ ಹುಚ್ಚು ಆಟ ಜನರ
ಜೀವದ ಜೊತೆ ಪರಿಹಾಸ್ಯದ ಅಲೆದಾಟ........
ಪ್ರೀತಿ ನೀ ಜೀವಕೋಡುವ ದೇವರಾಗು
ಜೀವತೆಗೆಯುವ ಜವರಾಯನ ಯಮಪಾಶವಾಗದಿರು..............

- ಚುಕ್ಕಿ

15 May 2017, 07:28 pm

ರಣಹದ್ದುಗಳಿವು

ಸುಂದರ ಕನಸನ್ನು ಗುಯ್ಯ....
ಎನ್ನುತ್ತ ಆಳುಗೆಡಹುವ, ಸುಖ
ನಿದ್ದೆಗೆ ಭಂಗ ತರುವ ಸೊಳ್ಳೆಯ
ಹುಡುಕಿ- ಹುಡುಕಿ ಹೊಸಕಾಕುವ ನಾವು,ದಿನ- ನಿತ್ಯ ಕಿತ್ತು- ತಿನ್ನುವ
ಕ್ರೂರ- ಜಂತುಗಳನ್ನು ನಮ್ಮ ನೆತ್ತರ
ಬಸಿದು ರಕ್ಷಿಸುವ ನಾವೆಂತ ಮೂರ್ಖರು

ನಮ್ಮಿಂದಲೆ ಆರಿಸಿ
ನಮ್ಮನ್ನೆ ಆಳುವ ನಾಯಕರು
ನಮಗರಿವಿಲ್ಲದಯೇ
ನಮ್ಮ ದೋಚುತಿಹರು ನಮಿಸಿ

ರಕ್ಷಿಸುವರೆ ಭಕ್ಷಕರಾಗಿ
ರಕ್ಷಣೆಯೆ ಕನಸಾಗಿ
ಭೂಒಡಲ ಬಗೆದು
ಗರ್ಭವ ಸಿಗಿದು
ಬಂಜೆಯಾಗಿಸಿಹರಿಂದು

ನ್ಯಾಯದ ಅಲೆಯು
ಅನ್ಯಾಯದ ಸುಳಿಗೆ ಬಲಿಯಾಗಿ
ನ್ಯಾಯ ಸಾದಿಸಹೊರಟವರು
ರಾಜಕಾರಣಿಗಳ ಬಲೆಗೆ ಬಲಿಯಾಗಿ
ಮಾಡುವುದೇನೆಂದು? ಕೊರಗುತಿರುವರು ಮೂಖರಾಗಿ

ದನ- ಕಾಯುವವನಿಂದ
ದವಾಖಾನೆ ಕಾಯುವವನಿಗು
ತೆರಬೇಕು ಲಂಚ
ಕಸ- ಬಾಚುವವನಿಂದ
ದೇಶ ಆಳುವವನ ವರೆಗು
ಅಪೇಕ್ಷಿಸುವರು ಲಂಚ

ಲಂಚದ ಮೇಲೆ,ಹಾಸಿ ಮಂಚ
ಪೊಳ್ಳು ಬರವಸೆಗಳ ಬಲೆ ಬೀಸಿ
ಮುಗ್ದ ಜನರ ಮೂರ್ಖರಾಗಿಸಿ
ಮನಬಂದಂತೆ
ನೀತಿಸಂಹಿತೆಗಳ ರೂಪಿಸಿ
ಬಡವರ ರಕ್ತ-ಮಾಂಸವ
ಕಿತ್ತು ತಿನ್ನುತ್ತಿರುವರು ರಣಹದ್ದುಗಳಾಗಿ
ಇಂತಹ- ವುಗಳ ಅಂತ್ಯವ
ಕಾದು ಕುಂತಿರುವೆವು ಬಕಪಕ್ಷಿಗಳಾಗಿ


ಶಾರಧ

- ಶಕುಂತಲಾ

15 May 2017, 04:11 pm

ಆತ್ಮೀಯರು..........✍✍✍

ಕಡಲಷ್ಟು ನೋವನ್ನು ಕಣ್ಣಲ್ಲಿ ಬಚ್ಚಿಟ್ಟು
ಕಣ್ಣೀರ ಮರೆಯಲ್ಲಿ ಆನಂದ ಹಂಚುತಿರುವೇ........

ಆನಂದಭಾಷ್ಪಗಳೆಂದು ನಂಬುವವರು
ನನ್ನ ಕಣ್ಣಿಂದ ನೋಡುವವರು..................

ನೋವಿನಲ್ಲಿ ಕರಗಿದ ಮನಸಿನ ವ್ಯಥೆಯೆಂದು ತಿಳಿದವರು ನನ್ನ ಆತ್ಮೀಯರು.............

ಕೈಯಿಂದ ಬರೆದ ಪದಗಳನ್ನು ಸುಂದರ ಕವನವೆಂದು ಓದುವವರು ಮೆಚ್ಚಿದವರು...........

ಮನಸ್ಸಿಂದ ಬಂದ ಮಾತುಗಳೆಂದು
ಅರಿತವರು ಅಪರಿಚಿತರಾದರೂ ಆತ್ಮೀಯರು.......

- ಚುಕ್ಕಿ

15 May 2017, 02:57 pm

ಸಿಗದೆ ಹೋಗಿರುವ ಪ್ರೀತಿ........

ಸುರಿಯುವ ಮಳೆಯಲ್ಲಿ ,ನನ್ನ ಕಣ್ಣೀರಿಗೆ ಬೆಲೆಯೇ ಸಿಗಲಿಲ್ಲ .........
ಪ್ರೀತಿಸುವ ಹೃದಯಗಳ ಎದುರಲ್ಲಿ ,ನನ್ನ ಪ್ರೀತಿಯೇ ಕಾಣಲಿಲ್ಲ.......
ನಾ ಬಯಸಲಿಲ್ಲ ನಿನ್ನ ಅಂದು ಆದರೆ ಇಂದು ನೀನೇ ನನ್ನ ಉಸಿರಾಗಿರುವಗ .......ನೀನೇಕೆ ನನ್ನಿಂದ ದೂರವಾಗಿರುವೆ ಗೆಳೆಯ
........

- Acchu love

15 May 2017, 09:51 am

ಬಡತನ

ಅವನ ಬೆವರ ಹನಿಯಲಿ
ಅವಳ ಆಸೆಗಳಿತ್ತು,
ತೊದಲು ನುಡಿಯುವ
ಮಗುವಿನ ಬೇಡಿಕೆಯಿತ್ತು.

ಮಧ್ಯಾಹ್ನಕ್ಕೆ ಹನಿ ನೀರಿನ
ಊಟವಿತ್ತು,
ತೆರೆಯ ಮೇಲೆ ನಗುಮೊಗದ
ಮುಖವಾಡವಿತ್ತು.

ಕತ್ತಲಾದರೆ ಬೆಳಕಿನ
ಹುಡುಕಾಟವಿತ್ತು,
ದಿನಬೆಳಗಾದರೆ ಕಿತ್ತು ತಿನ್ನುವ
ಬಡತನದ ದಾರಿದ್ರ್ಯವಿತ್ತು.

- ಅಕ್ಷತ

15 May 2017, 09:49 am

ಕಾಗದದ ಚೂರು

ಬೀದಿಯಲಿ ಬಿದ್ದಿರುವ
ಕಾಗದದ ಚೂರೆಂದು
ನಿಂದಿಸಿದೆ ನೀನು ಅಂದು
ನನನ್ನು ಅವಹೇಳನಗೈದು!!

ತಲೆ ತಗ್ಗಿಸಿ ನೀನು ನನ್ನ
ನಿಂದಿಸಿ ನುಡಿದಿದ್ದೆ
ಕೆಲಸಕ್ಕೆ ಬಾರದೆ ಬೀದಿಯಲಿ
ಬಿದ್ದಿರುವ ಒಣ ತ್ಯಾಜ್ಯವೆಂದು!!

ನೊಂದ ಮನಸಿನಲಿ ನಾ
ಗಾಳಿಯಲಿ ತೂರಾಡಿ
ಮುಗಿಲೆತ್ತರಕ್ಕೆ ಏರಿ ನಿಂತೆ
ಇಂದು ಗಾಳಿಪಟವಾಗಿ!!

ನೋಡುವ ಬಯಕೆ ಇರೆ
ತಲೆ ಎತ್ತಿ ನೋಡು ಒಮ್ಮೆ
ನಾ ತೇಲುತ್ತಿರುವೆ ಇಂದು
ಸ್ವಚ್ಛಂದ ಆಕಾಶದಲ್ಲಿ!!

- ಪಿ.ಜಿ.ಜ್ಯೋತಿ

15 May 2017, 09:07 am

ಪ್ರೀತಿ..........

ನಿನ್ನ ಮುಡಿಗೇರಿಸಿ ಸಿಂಗಾರಿಸುವೆಯಾದರೆ,ನಿನ್ನ ಮುಡಿಗೆ ಹೂವಾಗಿ ನಾ ಬರುವೆ .........ರೆಪ್ಪೆ ಅಡಿಯಲ್ಲಿ ಬಚ್ಚಿಡುವೆ ಆದರೆ ,ಕನಸಾಗಿ ನಾ ಬರುವೆ. ಗೆಳತಿ...........

- Acchu love

14 May 2017, 11:46 pm

ಕಾಣದ ದಾರಿ...

ಭಾವನೆಗಳೇ ಸತ್ತಿರುವಾಗ ಮತ್ತೇನಿದೆ ಮಾತಾಡಲು..
ನನ್ನವರು ಎಂಬ ನಂಬಿಕೆಗೆ ಬೆಲೆಯೇ ಇಲ್ಲಿ ಇಲ್ಲವಾಗಿದೆ..
ಮುಂದೇನು ಅಂತ ಗೊತ್ತಿಲ್ಲ, ಆದರೂ ಮುಂದೆ ಸಾಗುವುದ ಮರೆತ್ತಿಲ್ಲ..

- ನಮಿತ ಗಟ್ಟಿ

14 May 2017, 10:54 pm