Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹನಿ..

ನಿನ್ನ
ಮೆಲ್ಲುಸಿರ ಸೋಕಿ ಮೆಲ್ಲನೆ
ಚಂದಿರ
ಕರಗುವ ಇರುಳು...

- Indushekar Chinivar

12 May 2017, 09:39 pm

ಮನಸು.........

ಮನಸ್ಸಿಗೂ ಮೆದುಳಿಗೂ ನಡೆದ
ಸಂಘರ್ಷಯಲ್ಲಿ ತನ್ನ ಅಧಿಕಾರವನ್ನು
ನಡೆಸುತ್ತಿದ್ದ ಮೆದುಳು ಮನಸ್ಸನ್ನು
ಕ್ಷಣಬಿಡದೆ ನೋಯಿಸಿತು...............

ನೊಂದು ನೊಂದು ಸಹನೆ ಕಳೆದುಕೊಂಡ
ಮನಸು ತಾನು ಇನ್ನು ಅಳಲು ಕಣ್ಣೀರು ಉಳಿದಿಲ್ಲವೆಂದು
ಮೆದುಳಿನ ಮಾತನ್ನು ನಿರಾಕರಿಸಿ
ಸ್ವಚ್ಛಂದವಾಗಿ ಹಾರಡಲು ಸಿದ್ಧವಾಯಿತಿಂದು......

- ಚುಕ್ಕಿ

12 May 2017, 02:14 pm

ಮನಸು ಕನಸು

ಕಪ್ಪು ಬಿಳುಪಿನ ಮನಸು
ಪಡೆದಿರುವುದು ಬಣ್ಣ ಬಣ್ಣದ ಕನಸು
ಹೋಗುವ ಆಸೆಯು‌ ಅದಕೆ‌ ಕಾಮನಬಿಲ್ಲನೆ‌ ಹರಸಿ
ತನ್ನೊಳಗೆ ತುಂಬಿದ ಕಪ್ಪು ಬಿಳುಪಿನ ಚಿತ್ರವ ಸರಿಸಿ

ಯಾರೊ‌ ಮನಸೊಳಗೆ‌ ಕುಂಚವ ತಂದು ಇಟ್ಟರು
ಮತ್ಯಾರೋ ಬಣ್ಣವ ಕೊಂಡು ತಂದರು
ಇನ್ಯಾರೋ ರಂಗಿನ ಕಾಮನಬಿಲ್ಲ ಬಿಡಿಸಿದರು
ಕಾಮನಬಿಲ್ಲ ನೋಡಿ ಮನಸು ಮಾಡುವುದು ತಕರಾರು

ಕಾಮನೆಗಳದೊ ಕಣ್ಣಮುಚ್ಚಾಲೆ ಆಟ
ಕಣ್ಣ ಮುಚ್ಚಿ ಬಿಡುವುದರೊಳಗೆ ತರುವವು ತೊಳಲಾಟ
ಇವುಗಳ ಪಡೆಯಲು ಮನಸಲಿ ಹುಟ್ಟಲು ಹಠ
ಮನಸೊಳಗೆ ಶುರು ಎಂದು ನಿಲ್ಲದ ಹುಡುಕಾಟ

ಗೆಲ್ಲಿಸ ಬಲ್ಲವು ಬದುಕ, ಮನಸ ಮೇಲೆ‌‌ ಮಾಡಿ ಸವಾರಿ
ಕಾಮನೆಗಳು ಆಗುವವು ಆಗಾಗ ವೇಷ ಧರಿಸಿ ‌ಪುಡಾರಿ
ಎಚ್ಚರ ತಪ್ಪಿ ಅಪ್ಪಿದರೆ ಮಾಡುವವು ಪ್ರಪಂಚದಿಂದಲೆ ಪರಾರಿ
ಆಗ ಕಾಪಾಡಲು ಆಗದು ಧರೆಗಿಳಿದು ಬಂದರು ಮುರಾರಿ

- ಶ್ರೀಕಾವ್ಯ

12 May 2017, 01:36 pm

ಮನಸ್ಸಿಗೆ ಮಾತಿದ್ದರೆ........✍

ನನ್ನ ಮನಸ್ಸಿಗೆ ಮಾತಿದ್ದರೆ
ಅದು ತನ್ನಲ್ಲಿ ಏನೂ ಬಚ್ಚಿಡಲ್ಲವೆಂದು
ದೇವರು ಅದಕ್ಕೆ ಮೌನವ ವರವಾಗಿ ಕೊಟ್ಟಿದ್ದಾನೇನೋ..........

ಮೌನ ಮಾತಿಲ್ಲದೆ ಮೌನವಾಯಿತೆಂದು
ತನ್ನಲ್ಲಿ ಅಡಗಿಟ್ಟ ನೆನಪುಗಳನ್ನು ಮೆಲಕು ಹಾಕುತ್ತಾ ಕುಳಿತಿದೆ......

ಹರಿದು ಹೋದ ಕಣ್ಣೀರು
ಮತ್ತೆ ತಾನಿದ್ದ ಕಣ್ಣು ನೆನಪಾಗಿ
ಹಿಂತಿರುಗಿ ನೋಡಿ ಕೇಳಿತು
ನಿನಗೆ ನಾನು ಬೇಡವಾದನೆ ಎಂದೂ......

- ಚುಕ್ಕಿ

12 May 2017, 01:34 pm

ಪ್ರಿಯಸಖಿ

ಮುಂ ಬೆಳಗು ಕಣ್ಣಲ್ಲಿ ಮಲ್ಲಿಗೆ ಆರಳಲು. ಕಡಲ ಮುತ್ತುಗಳ ಮಾಲೆ ಕಟ್ಟಿ ಹಾಕುವೆನು ಕೊರಳಿಗೆ.
ನಿನ್ನಂದದ ಮೊಗದ ತುಂಬು ಕೆನ್ನೆಯ ಮೇಲಿನ
ಮುಂಗುರುಳ ಉರುಳು ಎದೆಯಲ್ಲಿ ತರಲು ಮರುಳು .
ಹಾರಿತ್ತ ಹಕ್ಕಿ ಚಿಮ್ಮಿ ಮುಗಿಲ್ಲೆತ್ತರಕೆ. ಸೋಕ್ಕಿತ್ತು ಜಿಗಿಯುವಿಕೆಯಲಿ. ಸಿಕ್ಕಿತ್ತು ಮುಕ್ತಿ ಪ್ರೀತಿಗೆ ಅದರಲ್ಲಿ. ಒಮ್ಮೆ ಬರಬಾರದೆ ಪ್ರಿಯಸಖಿ ಆ ತಿರುವಿನಲ್ಲಿ ನಿಂತು ಕಾಯುವೆನು ನಿನಗಾಗಿ.

- ಶಶಿಧರ ಹೆಚ್ ಎನ್

12 May 2017, 12:55 pm

ಹನಿ..

ಮುಂಗಾರಿನ ಮೊದಲ ಹನಿಗೆ
ತೊಯ್ದ ನಿನ್ನ ಮುದ್ದು ಮೊಗವ
ತಾಕಿ ನೇಸರ ಪುಳಕದಿ
ಮೇಘರಾಶಿಯಲಿ ತೇಲಿದ ಮಧ್ಯಾಹ್ನ...

- Indushekar Chinivar

12 May 2017, 11:49 am

..... ಜಗಜನನಿ.....

ಈ ಎದೆಯೊಳಗಿನ ಹೃದಯ ಬಡಿತ
ನನ್ನುಸೀರಿನ ಏರಿಳಿತ,
ನರನಾಡಿಯೊಳಗಿನ ಬಿಸಿರಕ್ತ
ಇರುವತನಕ
ಕಾಯುವೆ ನಿನ್ನ ಹಿತ.!!

ಎಲ್ಲರೊಡಗುಡಿ ನಿನ್ನೊಡಲೊಳಗಾಡಿ
ತಿಳಿದಿರುವೆ ನಿನ್ನ ಸಂಸ್ಕೃತಿ,
ಹಲವರಿರುವರು ಉತ್ತುಂಘಕ್ಕೇರಿಸಲು ನಿನ್ನ ಕೀರ್ತಿ,
ಹೇ ಜಗಜನನಿ ಭಾರತಿ.
ನಾ ದುಡಿಯುಬಲ್ಲೆ, ನಾ ಮಡಿಯಬಲ್ಲೆ
ನಿನಗಾಗಿ ಜೀವನ ಪೂರ್ತಿ...!!!
... ಜೈ ಹಿಂದ್....

- ಪಿ ಅನಿ...

11 May 2017, 07:27 pm

(ನೋವು...)

ಅಂದು,ಇಂದುಗಳ ನಡುವೆ
ಬಂದು ಹೋದವರು ಎಷ್ಟೋ

ಅರ್ಥವಾಗದ ಕೆಲವರ ಸ್ನೇಹದಲಿ
ಉಳಿಯುವುದು ಕೇವಲ
ನೆನಪುಗಳು ಒಂದಿಷ್ಟು......

krishna billadi.....

- krishna Billadi melbailu

11 May 2017, 08:39 am

ಭ‌ವಿಷ್ಯ‌

ಕ‍ಂತೆ ಕ‌ನ‌ಸುಗ‌ಳು ಕ‌ಣ್ಣ‌ಲ್ಲಿ
ಆಸೆಗ‌ಳ‌ ಮೂಟೆ ಬೆನ್ನ‌ ಮೇಲೆ
ಪ್ರಿಯ‌ತ‌ಮೆಯ‌ ನೆನ‌ಪುಗ‌ಳು ಎದೆಯ‌ಲ್ಲಿ
ಇರ‌ಲು ನೆಲೆಯಿಲ್ಲ‌ದೆ ಗೂಡು ಕ‌ಟ್ಟಿಕೊಳ್ಳುವ‌
ತ‌ವ‌ಕ‌ ಮ‌ನ‌ದ‌ಲ್ಲಿ
ಭ‌ವಿಷ್ಯ‌ದ‌ ಬ‌ಗ್ಗೆ ಯೋಚಿಸುತ್ತ‌
ಸ್ವ‌ಲ್ಪ‌ ದೂರ‌ ನೆಡೆದು ಹಿಂತಿರುಗಿ ನೋಡಿದೆ
ಸಂಜೆಗ‌ತ್ತ‌ಲ‌ಲ್ಲಿ ಎಲ್ಲೋ ಮ‌ರೆಯಾ‌ದಂತಿರುವ‌
ನ‌ನ್ನೂರಿನ‌ ಅಸ್ಪ‌ಸ್ಟ‌ ಚಿತ್ರ‌ಣ‌ ಕ‌ಣ್ಣೀರ‌ ಹ‌ನಿಯ‌ಲ್ಲಿ
ಸ್ತ‌ಭ್ದ‌ಗೊಂಡಿತ್ತು,
ಹ‌ೃದ‌ಯ‌ ತುಂಬಿ ಬಂದು
ಭಾರ‌ವಾದ‌ ಹೆಜ್ಜೆಯ‌ನಿಟ್ಟು ಮುಂದೆ ಸಾಗಿದೆ.

- ಶಶಿಧರ ಹೆಚ್ ಎನ್

11 May 2017, 05:48 am

ಆರ್ಥಿಕತೆ

ಹವಣಿಸುತ್ತಿರುವೆವು ಸಾಧಿಸಲು "ಆರ್ಥಿಕತೆಯಲಿ‌ ಎತ್ತರದ ಸ್ಥಾನ"
ಅದರಿಂದ ಆಗುವುದೇನಿದೆ ಪ್ರಯೋಜನ
ಕೆಲವರ ಮನೆಯಲ್ಲಿಯೇ ಕೊಳೆಯುತ್ತಿದೆ ಕಾಂಚಣ
ಬದುಕುತ್ತಿರುವರು ಕಟ್ಟಿಕೊಂಡು ಅವರದ್ದೆ ಒಂದು ಬಣ
ಅವರಿಗೆ ಅರಿವಾಗಿವುದೆ ಆಗುತಿರುವ ಸಮಸ್ಯೆಗಳ ಉಲ್ಬಣ

ಇನ್ನೂ ಅರ್ಧದಷ್ಟಿದೆ ದೇಶದಲಿ ತೀರ ಬಡತನ
ಆ ಜನರದ್ದು ಹೃದಯ ಶ್ರೀಮಂತಿಕೆಯ ಮನ
ಅವರು ಪ್ರಾಪಂಚಿಕ ಹಕ್ಕುಗಳ ಅರಿವಿಲ್ಲದ ಜನ
ಅವರತ್ತಿರ ಎಲ್ಲಿ ಬರಬೇಕು ಬದುಕಲು ಬೇಕಿರುವಷ್ಟು ಹಣ
ಎಳೆಯಲಾಗದೆ ಜೀವನ ಬಂಡಿಯ ಆಗುತ್ತಿರುವರು ಹೆಣ

ರಾಜಕೀಯದವರು ಹೊತ್ತಿಕೊಂಡಿರುವರು ಅವರ ಋಣ
ಆದರು ತೋರರು ಆಸಕ್ತಿ ಜನ ಹೊಂದಿದರು ಮರಣ
ಅವರೇನಿದ್ದರು ಚುನಾವಣೆ ಸಮಯದಲ್ಲಷ್ಟೆ ಬರುವರು ಹಿಡಿಯಲು ಚರಣ
ಆಮೇಲೆ ಅವರ ‌ಸಿಗುವುದಿಲ್ಲ ಹುಡುಕಿ ಜನರು ಸೇರಿದರು ಮಣ್ಣ
ಇದ ನೋಡಿ ನೋಡಿ ಬಡಜನ ಆಗಿರುವರು ಹೈರಾಣ

ಇದೆಲ್ಲ ಕಂಡರು ಕಾಣದಂತೆ ನೋಡುತ ತೋರುತಿರುವೆವು ಸಣ್ಣತನ
ಪ್ರತಿಭಟಿಸಿ ನೊಂದವರ ಜೊತೆ ನಿಂತು ಯಾವಗ ಸಾರುವುದು‌ ಹಿರಿತನ
ಎಲ್ಲರೂ ಜೊತೆ ಸೇರಿ ಸಮನಾಗಿ‌ ಒಂದೇ ಮನದಿ ಗುರಿಯೆಡೆಗೆ ಸಾಗುವುದಲ್ಲವೆ ಜೀವನ
ಆಗಲೇ ಆಗುವುದು ನಿಜವಾದ "ಆರ್ಥಿಕತೆಯ ಅರ್ಥ" ಸಂಪೂರ್ಣ
ಯಾವಾಗ ಬರುವುದು ಭಾರತ ದೇಶದಲಿ ಅಂಥ ಸುಂದರ ಕ್ಷಣ

- ಶ್ರೀಕಾವ್ಯ

10 May 2017, 11:29 pm