Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸೆರೆ ಸಿಕ್ಕ ಜೀವ

ಪ್ರೀತಿಯ ಸೆರೆಯಲ್ಲಿ ಸಿಕ್ಕ ನನ್ನ ಜೀವ
ಬಿಡಿಸಿಕೊಳ್ಳುವಷ್ಟರಲ್ಲಿ ತಾನೇ ಬದಲಾಯಿತು
ನಿನ್ನ ಹೆಸರೇ ತನ್ನದೆಂದು ನಾಣ್ಯರೋ ಅದಕ್ಕೆ ಗೊತ್ತಿಲ್ಲವೆಂದು.........

ಅದೆಷ್ಟು ಮಾಯೆ ಗೊಳಿಸಿರುವೆ ನನ್ನ
ನೆರಳನ್ನು ನೀನಿಲ್ಲದೇ ತಾನು ನನ್ನ
ಜೊತೆ ಬರುವುದಿಲ್ಲವೆಂದು ನನನ್ನೇ
ಬಿಟ್ಟು ನಿನ್ನಿಂದೆ ನಡೆದಿದೆಯಲ್ಲಾ ........

ತಂಗಾಳಿ ನಿನ್ನಲ್ಲೇ ನೆಲೆಯಾಯಿತೆ
ನನ್ನ ಉಸಿರಿಗೆ ತಾನು ಹೆಸರಾಗನೆಂದು
ಜೀವಿಸಲು ಅವಶ್ಯಕವಾದ ಗಾಳಿಯೇ
ನನ್ನ ಬಿಟ್ಟು ನಿನ್ನಲ್ಲೇ ಇರುವಾಗ..........

ನಾನೆಗೆ ಬದುಕಲಿ ನೀನಿಲ್ಲದೆ ಗೆಳಯಾ...........

- ಚುಕ್ಕಿ

18 May 2017, 04:27 pm

ಗೃಹಪ್ರವೇಶ

ಪ್ರೀತಿಯೇನೆಂಬ ಮನೆಕಟ್ಟಿ
ಮಮತೆಯೆಂಬ ಹೊಸಲು ಇಟ್ಟಿ
ಕನಸೆನೆಂಬ ವಸ್ತುಗಳನ್ನು
ಖರೀದಿ ಮಾಡಿ ನೂರು ಆಸೆಗಳೊತ್ತು

ವಿಜ್ನಾವಿನಾಯಕನಿಗೆ ಮೊದಲ ಪೂಜೆಸಲ್ಲಿಸಿ
ಅರ್ಚನೆಯಿಂದ ಆರಾಧನೆ ಗೈದು
ನೂತನ ಗೃಹಕ್ಕೆ ಸಂಗಾತಿಯ ಜೊತೆಗೂಡಿ
ಪ್ರವೇಶಿಸುವ ಶುಭಕಾರ್ಯ ಗೃಹ ಪ್ರವೇಶ.

- ಚುಕ್ಕಿ

18 May 2017, 11:32 am

ಹನಿ..

ದೂರ‌ ದಿಗಂತದಲಿ
ಕಾರ್ಮುಗಿಲ ಕಂಡ
ಭುವಿಯು
ಮುಂಗಾರನ್ನು ಸ್ವಾಗತಿಸಲು
ಸಂಭ್ರಮದಿ ಅಣಿಯಾದ
ಬೆಳಗು...

- Indushekar Chinivar

18 May 2017, 07:27 am

ತಾಯಿ ಮಡಿಲ ಸುಖ

ಮೊಲೆ ಹಾಲ ಸಿಹಿ ಉಣಿಸಿ
ಸರಿ-ದಾರಿಯಲ್ಲಿ ನಡೆಸಿ
ಜಗವ ಪರಿಚಯಿಸಿ
ಎಲ್ಲಿ ಹೋದೆ ಕಣ್ಮರೆಯಾಗಿಸಿ.......


ಆರಡಿ ದೇಹಕ್ಕೋ ಇಲ್ಲ
ಆರಿಂಚು ಹೃದಯ ಕ್ಕೊ
ಒಂದಿಂಚ್ಚು ಗಾಯವಾದರು
ಮರುಗಳಿಗೆಯೆ ಬೇಡುವುದು
ಈ ಮನ ,ಆ ಒಡಲ......

ಹಸಿವಾದಾಗ ತಾನಾಗಿಯೆ
ಬಾಯಿ ತೆರೆವಂತೆ
ದುಃಖ ವಾದಾಗ ತಂತಾನೆ
ಕಂಬನಿ ಸುರಿವಂತೆ
ಮಾತೆಯ ಮಮತೆಯು
ಕಂದನಿಗೆ ಸ್ವಂತ ವಂತೆ.....

ಮುಕ್ಕೊಟಿ ದೇವರುಗಳು
ಮಾತೆಯ ಮಡಿಲಲ್ಲಿ‌ ಮಕ್ಕಳು
ಮೂರು ಲೋಕ ಸುತ್ತಿದರು
ತಾಯ ಮಡಿಲ ಸುಖ ಪಡೆಯರು.....

ನೂರು- ನೋವ ಮರೆಸುವಂತ
ಮಾಯಾವತಿ ತಾಯಿ!
ತನ್ನ ನೋವಲ್ಲು ,ಕಂದನ ಹರಸುವಂತ
ಕರುಣಾಮಯಿ ತಾಯಿ!
ಕರುಳಿನ ಕುಡಿಯ ಕಾಯುವಳು
ಉಸಿರಾಗಿ ಕಡೆತನಕ!


ಶಾರಧ

- ಶಕುಂತಲಾ

17 May 2017, 10:00 pm

ಮೂಕ ಪ್ರೇಕ್ಷಕ

ಕಾದಿರುವೆ ಕಡಲಂತೆ
ಸೇರು ಬಾ ನದಿಯಂತೆ
ಬರಲು ನೀ ಮಳೆಯಂತೆ
..... ಕುಣಿಯುವೆ ನಾ ನವಿಲಂತೆ

- Rajeshkiccha4

17 May 2017, 07:48 pm

ಚಿಗುರೆಲೆ..........

ಚಿಗುರೆಲೆ ಮ‌ರುಗ‌ದಿರ‌ಲೇ
ತೇಲುತ‌ ತೇಲುತ‌ ಸಾಗಿ ಬ‌ರುವ‌
ಅಲೆಗ‌ಳು ಭುವಿಗೆ ಚುಂಬಿಸಿ
ಮ‌ರ‌ಳಿ ಸಾಗುವುದು ಮ‌ನ‌ದ‌ ಮ‌ಡಿಲಿಗೆ.
ನ‌ವ‌ ವ‌ಸಂತ‌ದ‌ ನ‌ವ‌ ಕೋಗಿಲೆ.
ಹೊಸ‌ತು ಚಿಗುರು ಹೊಸ‌ತು ಕ‌ನ‌ಸು
ಹೊಸ‌ತು ರಾಗ‌ ಹೊಸ‌ತು ಕಾವ್ಯ‌
ಹೊಸ‌ತು ಸೃಷ್ಟಿ ಹೊಸ‌ತು ಮುಕ್ತಿ
ಭೂತ‌ದ‌ ಕ್ರಿಯೆಗೆ ವ‌ರ್ತ‌ಮಾನ‌ದ‌ ಪ್ರ‌ತಿಕ್ರಿಯೆ
ನ‌ವ‌ ಮ‌ನ್ವಂತ‌ರ‌ದ‌ ನ‌ವ‌ ಮ‌ನುಜ‌

- ಶಶಿಧರ ಹೆಚ್ ಎನ್

17 May 2017, 06:58 pm

ಹನಿ..

ಮಳೆಯ ನಿರೀಕ್ಷೆಯಲಿ
ಕಾದು , ಬಸವಳಿದು
ದಿನ ದೂಡಿದ
ಭುವಿಯು
ಚಂದಿರನ ತಂಪಿಗೆ
ಕಾಯುವ ಸಂಜೆ...

- Indushekar Chinivar

17 May 2017, 06:03 pm

ಹುಸಿನುಡಿಯ ಸ್ವರವು

ಅದೇಕೋ ಸುಮ್ಮನೆ ಒಳಗೊಳಗೆ ನೋಯುತ್ತೇನೆ,
ಆದರೂ ಒಂದಾಗಲಿಲ್ಲವೆಂಬ ಬೇಸರವೇನಿಲ್ಲ,
ಅಂದುಕೊಂಡಿದ್ದೆ ಪ್ರೀತಿಯೊಂದು
ಹಾವು ಏಣಿಯಾಟ!!
ಬಟಾಬಯಲಾಯ್ತು ಅತಿಹೆಚ್ಚು ಸೋಲನ್ನೇ ಉಂಡ ಜೂಜಿನಾಟ!!
ಪ್ರೀತಿಯಲ್ಲಿ ಹೊಸೆದ ದಾರದ ಎಳೆಯ
ಶಿಥಿಲತೆಯ ಕಾಣದಾದೆನೇ?
ಇನ್ನೆಲ್ಲಿ ಬೆಳಕು, ನಲುಗಿದ ಹಣತೆಯಲ್ಲೊಂದು
ಮುಳುಗಿದಾ ಬತ್ತಿ.
ಇನ್ನೆಷ್ಟು ಕಾಲ ಸವೆಸಲಿ ಅಂತರಂಗದಾಸೆಯ ಹುದುಗಿಟ್ಟು?
ಮನದ ಗೂಡಿನ ಮುಲೆಯಿಂದ ಹೊರಡುವ ಕಲರವವನು ಕಿವುಚಿಟ್ಟು,
ಕಾಲಸ್ಮರಣೆ ಏನಿತು ಹೊತ್ತು?
ಇನ್ನೇನು ಸಂಧ್ಯಾಕಾಲ,
ರವಿಯು ಕಾಲವಾಗುವ ಕುರುಹು
ಬದಲಾವಣೆಯ ಗಾಳಿ ಬಯಸಿ
ಮತ್ತದೇ ನಾಳೆ, ಅದೇ ಸೆಡವು
ಆದರೂ ನನಗೇನು ಬೇಸರವಿಲ್ಲವೆಂಬ
ಹುಸಿನುಡಿಯ ಸ್ವರವು...!!!!!

-ಕನ್ನಡ ಭಕ್ತ

- ಕನ್ನಡದ ಭಕ್ತ

17 May 2017, 05:10 pm

ನಿನ್ನ ನೋಡಿದ ಕ್ಷಣದಿಂದ

ನಿನ್ನ ಮೇಲಿನ ಪ್ರೀತಿಯೋ
ಪರಿವಿಲ್ಲದ ರೀತಿಯೋ
ಕಣ್ಣಲ್ಲಿನ ರೂಪವೋ
ಎದೆಯಲ್ಲಿನ ದೀಪವೋ

ತಿಳಿದಿಲ್ಲ ನನಗೊಂದು ನಿನ್ನ
ನೋಡಿದ ಕ್ಷಣದಿಂದ..........

ಮರೆತೊದೆ ನಾನು ನನ್ನ ರೂಪ
ಮರೆತೊದೆ ನಾನು ನನ್ನ ಮಾತಿನ
ಚಕಮಕಿ ನಿನ್ನ ನಗುವ ಸದ್ದನು ಕೇಳಿ........

- ಚುಕ್ಕಿ

17 May 2017, 01:34 pm

ಹನಿ..

ನಲ್ಮೆಯ ನೇಸರ
ನಗುವ ಮರೆತು
ಕಳೆಯಿಲ್ಲದ ಇಳೆಯ
ನೋಡುತಾ ಮೌನದಿ
ಸಾಗುವ ಮಧ್ಯಾಹ್ನ...

- Indushekar Chinivar

17 May 2017, 01:02 pm