ಯಾರು, ಯಾರು ಹೇಳಿದರು ನಿನಗೆ
ಈ ಪ್ರೀತಿ ಕತೆಯ? ನಿನ್ನ ಹುಟ್ಟಿನ ಮೂಲ
ಬಚ್ವಿಟ್ಟಷ್ಟೂ ಬೆಟ್ಟದಷ್ಟು ಬೆಳೆಯುತ್ತಿದೆ,
ಸಮಾಜ ಬೊಬ್ಬಿರಿದು ಹೇಳುತ್ತಿದೆ
ಯಾವ ಸೂಳೆಯ ಮಗನೋ ನೀನು..?!
ಎರಡೂ ಕೈ ಸೇರಿ ಚಪ್ಪಾಳೆ, ತಪ್ಪುಗಳ
ತಿದ್ದಿಕೊಂಡು ನಡೆವ ದಾರಿಗುಂಟ
ಅನುಮಾನಗಳ ಮೈಲಿಗಲ್ಲು.
ಬಿಟ್ಟು ಹೋದನೋ? ಬಿಟ್ಟು ಬಂದಳೋ?
ಅಗಲಿದ್ದಷ್ಟೇ ಸತ್ಯ. ಆಮೇಲೆ ಹುಟ್ಟಿದ್ದು
ನೀನು. ಯಾವ ಸೂಳೆಯ ಮಗನೋ?
ಯಾರು
ಹೇಳಿದರು ನಿನಗೆ ಈ ಪ್ರೀತಿ ಕತೆಯ?
ಸುಳ್ಳುಗಳು ಜೋಡಿಸಿಟ್ಟ ಕಡ್ಡಿಪೆಟ್ಟಿಗೆ...
ಸಣ್ಣ ಬೆಂಕಿಯೇ ನಿಜ, ತನ್ನ
ಮನೆಯ ಸುಟ್ಟೀತೆಂದು
ಮಡಿಲೊಳಗೆ ಕಟ್ಟಿಕೊಂಡು ಅವಳು
ತಾಯಿಯಾದಳು, ನೀನೆಂಥ ಮಗನಾದೆ?
ಎರಡು ದೇಹಗಳು ಮನಸಾರೆ ಬೆರೆತಾಗ
ಬೆವರುಂಡು ಬೆಳೆದ ಮುದ್ದಿನ ಮಗ ನೀನು,
ಬದುಕು ಬದಲಾದಂತೆಲ್ಲ ನಿನ್ನಪ್ಪನಿಗೂ
ಮೊಸದ ಕೊಡಲಿ ತಲೆಯನೇ ಕತ್ತರಿಸಿತು,
ವಿಷವಾದ ಎದೆಹಾಲನೇ ನೀ ದಕ್ಕಿಸಿಕೊಂಡೆ.
ಸತ್ಯ ಸಮಾಧಿಯಾಯ್ತು. ಅರಿಯದೇ
ಬದುಕಿ ನೀನು ಸೂಳೆಯ ಮಗನಾದೆ.
ನಾನು ಸರ್ವಾಂತರ್ಯಾಮಿ,
ಪ್ರೇಮ ಕಾಮ ವಿರಹ ನೋವು ನಲಿವು
ತವಕ ತಲ್ಲಣಗಳೆನ್ನ ಅಸ್ತಿತ್ವ.
ಹೊಸ ತತ್ವಗಳನು ನಿನ್ನ ಕವಿತೆ
ಹುಟ್ಟು ಹಾಕುವುದಾದರೆ
ಮೊದಲು ನನ್ನ ಗುಡಿಸಲರಮನೆಯ
ಹಿತ್ತಿಲಿನಲ್ಲಿ ಅರಳಿದ ಹೂವಿನ
ಮಾಧುರ್ಯವನು ನೀ ಸವಿದು ನೋಡು.
ಹುಟ್ಟೀತು ಹೊಸ ಹಾಡು...!
ಭದ್ರ ಕವಚದ ವಜ್ರದ ಹರಳು..ಕಂದನಿಗೆ ಪಂಜರ ಹಾಕಿದ ತಾಯಿಯ ಕರಳು..ಶೋದಿಸಿ -.ಭೋದಿಸಿ ಬೆಳೆಸಿದವಳು..ತುತ್ತು ಮಾಡಿ ಉಣಿಸಿದವಳು ಕೈಯಿಂದ ಹಿಡಿದು ಕೈಬೆರಳು..ಸದಾ ತಾಯಿಯ ಪ್ರೀತಿ ಮಗುವಿಗೆ ನೆರಳು....ತಾಯಿಯ ದಿನದ ಶುಭಾಶಯಗಳು...
ಬಾವನೆಗಳ ಬಳಿ ನಿಂತು ,ಕಾರಣಗಳ ಹುಡುಕುವ ಈ ಮನಸ್ಸು ,,,,
ಹುಡುಕಿ ಹುಡುಕಿ ಮೌನದ ಮನೆ ಕಟ್ಟಿತು ಮನಸ್ಸು,,,,
ಆಸೆಗಳ ಸರಮಳೆಯ ಮಾಡಿ ನಿನ್ನ ಪ್ರೀತಿಗಾಗಿ ಕಾತರದಿ ಕಾಯುತಿರುವೆ.........
ಮೌನದಲ್ಲಿ ಮನ ಕರಗುವ ಮಾತಿದೆ
ಎಂದು ತಿಳಿದದ್ದು ನಿನ್ನ ಕಣ್ಣ ಕಂಬನಿ ಕಂಡಾಗ.
ಹಗಲಲ್ಲಿ ಮನದಲಿ ಕತ್ತಲೆ ಮೂಡಿತು,
ನಿನ್ನ ಪ್ರಜ್ವಲಿಸುವ ಮುಖ ಕಾಣದಾಗ.
ಬಾಡಿ ಹೋದ ಗಿಡದಂತಿಹ ಈ ಜೀವಕ್ಕೆ,
ಮಳೆ ಹನಿಯಾಗಿ ಬರಬಾರದೆ ನೀನು.