Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಸಿನುಡಿಯ ಸ್ವರವು

ಅದೇಕೋ ಸುಮ್ಮನೆ ಒಳಗೊಳಗೆ ನೋಯುತ್ತೇನೆ,
ಆದರೂ ಒಂದಾಗಲಿಲ್ಲವೆಂಬ ಬೇಸರವೇನಿಲ್ಲ,
ಅಂದುಕೊಂಡಿದ್ದೆ ಪ್ರೀತಿಯೊಂದು
ಹಾವು ಏಣಿಯಾಟ!!
ಬಟಾಬಯಲಾಯ್ತು ಅತಿಹೆಚ್ಚು ಸೋಲನ್ನೇ ಉಂಡ ಜೂಜಿನಾಟ!!
ಪ್ರೀತಿಯಲ್ಲಿ ಹೊಸೆದ ದಾರದ ಎಳೆಯ
ಶಿಥಿಲತೆಯ ಕಾಣದಾದೆನೇ?
ಇನ್ನೆಲ್ಲಿ ಬೆಳಕು, ನಲುಗಿದ ಹಣತೆಯಲ್ಲೊಂದು
ಮುಳುಗಿದಾ ಬತ್ತಿ.
ಇನ್ನೆಷ್ಟು ಕಾಲ ಸವೆಸಲಿ ಅಂತರಂಗದಾಸೆಯ ಹುದುಗಿಟ್ಟು?
ಮನದ ಗೂಡಿನ ಮುಲೆಯಿಂದ ಹೊರಡುವ ಕಲರವವನು ಕಿವುಚಿಟ್ಟು,
ಕಾಲಸ್ಮರಣೆ ಏನಿತು ಹೊತ್ತು?
ಇನ್ನೇನು ಸಂಧ್ಯಾಕಾಲ,
ರವಿಯು ಕಾಲವಾಗುವ ಕುರುಹು
ಬದಲಾವಣೆಯ ಗಾಳಿ ಬಯಸಿ
ಮತ್ತದೇ ನಾಳೆ, ಅದೇ ಸೆಡವು
ಆದರೂ ನನಗೇನು ಬೇಸರವಿಲ್ಲವೆಂಬ
ಹುಸಿನುಡಿಯ ಸ್ವರವು...!!!!!

-ಕನ್ನಡ ಭಕ್ತ

- ಕನ್ನಡದ ಭಕ್ತ

17 May 2017, 05:10 pm

ನಿನ್ನ ನೋಡಿದ ಕ್ಷಣದಿಂದ

ನಿನ್ನ ಮೇಲಿನ ಪ್ರೀತಿಯೋ
ಪರಿವಿಲ್ಲದ ರೀತಿಯೋ
ಕಣ್ಣಲ್ಲಿನ ರೂಪವೋ
ಎದೆಯಲ್ಲಿನ ದೀಪವೋ

ತಿಳಿದಿಲ್ಲ ನನಗೊಂದು ನಿನ್ನ
ನೋಡಿದ ಕ್ಷಣದಿಂದ..........

ಮರೆತೊದೆ ನಾನು ನನ್ನ ರೂಪ
ಮರೆತೊದೆ ನಾನು ನನ್ನ ಮಾತಿನ
ಚಕಮಕಿ ನಿನ್ನ ನಗುವ ಸದ್ದನು ಕೇಳಿ........

- ಚುಕ್ಕಿ

17 May 2017, 01:34 pm

ಹನಿ..

ನಲ್ಮೆಯ ನೇಸರ
ನಗುವ ಮರೆತು
ಕಳೆಯಿಲ್ಲದ ಇಳೆಯ
ನೋಡುತಾ ಮೌನದಿ
ಸಾಗುವ ಮಧ್ಯಾಹ್ನ...

- Indushekar Chinivar

17 May 2017, 01:02 pm

ಮುಗ್ದ ಹಕ್ಕಿಯ ಮನದ ನೋವು

ಮರ- ಗಿಡಗಳ
ಕೊಂಬೆ- ರೆಂಬೆಗಳ
ಎಲೆಗಳ ಮರೆಯಲ್ಲಿ
ಅವಿತು ಕುಳಿತು
ಚಿಲಿ....ಪಿಲಿ....ಸದ್ದು
ಮಾಡುವ ಮುದ್ದು
ಹಕ್ಕಿಯು ನಾನು
ನನ್ನ ಪುಟ್ಟ ಮನೆಯ ಕದ್ದು ಮಲಗಿರುವೆ ನೀನು

ಉಸಿರಾಡುವ ಗಾಳಿಯು
ಇಂದು ನನಗೆ ಯಮಪಾಶವು
ನೀ ಬಳಸುವ ತಂತ್ರಜ್ಞಾನವು
ನನಗಾಗಿದೆ ನೇಣು ಕುಣಿಕೆಯು
ನಿನ್ನ ದುರಾಸೆಗೆ ಇರಲಿ ಮಿತಿ
ಅಲಕ್ಷಿಸಿದರೆ,ಮುಂದೆ ನಿನ್ನ ಅವನತಿ

ನನ್ನವರೆ ತುಂಬಿದ್ದರು ಸುತ್ತಲು ಅಂದು
ದರ್ಪದಿ ನೀನೆ ಮೆರೆಯುವೆ ಇಂದು
ನಿನಂತೆಯೆ ನಾನು
ಬದುಕಲು ಬಿಡು ನೀನು
ಸರ್ವಾಧಿಕಾರಿಗಳೆ ಸರ್ವನಾಶವಾದರು
ನೀನೆನ ಕೊಂಡೊಯ್ಯುವೆ ಎಷ್ಟು ಬಾಚಿದರು
ಬಿಡು ದುರಾಸೆಯ!
ಬೆಳೆಸಿಕೊ ಮಾನವೀಯತೆಯ!


ಶಾರಧ

- ಶಕುಂತಲಾ

17 May 2017, 09:41 am

ಮನಸ್ಸಿನ ಮಾತು

ಮನ ಎಂಬ ಮಂದಿರದಲ್ಲಿ
ಬಾವನೇ ಎಂ ದೇಗುಲದಲ್ಲಿ
ಪ್ರೀತಿ ಎಂಬ ಜೋತಿ ಹಚಿದೇ
ನಿನು ಗೆಳತಿ..

- sadashiv

17 May 2017, 08:21 am

ಹನಿ ಹನಿ ಪ್ರೇಮ್ ಕಹಾನಿ..

ಇರುಳ
ಬಳಲಿಕೆಗಳು ನಿನ್ನ
ಕೂಡಿ-ಕಳೆದು
ನಿದ್ರೆಯ ಕಸಿದು
ಕೊಂಡಿವೆ,
ರೋಮಾಂಚನದ
ನಿನ್ನ ಸಖ್ಯದಲಿ
ಅದಲು ಬದಲಾಗುವ
ತಲೆದಿಂಬುಗಳು
ಪ್ರೇಮಕತೆಯ ಹೇಳಿಕೊಂಡಿವೆ...!
*
ಈ ಇರುಳ ಕತ್ತಲಿಗೆ
ನಿನ್ನ ಹೆರಳು ಸುಗಂಧವ ಬೀರಿವೆ,
ಕೊರಳ ಬಳಸಿ ಬಳಸಿ
ಉಸಿರ ಬಿಗಿಹಿಡಿದು
ವಿರಹವ ಬೆವರಾಗಿಸಿದ
ಅಮೃತಘಳಿಗೆಗೆ ಸಾಕ್ಷಿಯಾದ
ತಂಪಾದ ಸೂರ್ಯ, ಇಗೋ ಕೆಂಪಾದ.
ಇಂಪಾದ ಸುಪ್ರಭಾತವ
ಕೇಳಿ ಜಗಕೆ ಬೆಳಗಾಯಿತೇನೋ...!
*
ಹೀಗೆ ಸಣ್ಣನೆಯ ಚಳಿಗೆ
ಬೆಚ್ಚಗಿನ ಬೆಳಕು.
ಹಬೆಯಾಡುವ ಕಾಫೀ ಹೀರುವ
ತುಟಿಗಳಿಗೇಕೋ ನಿನ್ನ
ಕೆಂದುಟಿಗಳ ಮೇಲೆಯೇ ಕಣ್ಣು.
ನೀನು ನೀರೊಲೆಯ ಉರಿಸು
ನಾ ಅಣಿಯಾಗುವೆ
ನಿನ್ನೊಲವ ಮಜ್ಜನಕೆ...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:17 am

ಅವಳಿಗಾಗಿ ಸುರಿದ ಹನಿಗಳು

ಅವಳ ಬರುವಿಕೆಗಾಗಿ
ಕಾಯುವಿಕೆ ಇನ್ನು ವ್ಯರ್ಥ!?
ಅದೆಷ್ಟು ಹಗಲು ರಾತ್ರಿಗಳು
ಸಾಕ್ಷಿಯಾದವೋ ಲೆಕ್ಕವೇ ಇಲ್ಲ.
ಅವಳ ಮನ, ಮನೆಯ ಬಾಗಿಲು
ಬಡಿಯುತ್ತಲೇ ಇದ್ದೆ.
ಬಹುಶಃ ನನ್ನೆದೆಬಡಿತ
ಅವಳಿಗೆ ಕೇಳದಾಯಿತು..!
*
ಈಗವಳು
ಕಾಲಗೆಜ್ಜೆಯ ಬಿಚ್ಚಿಟ್ಟಿದ್ದಾಳೆ,
ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದಾಳೆ.
ನಾನ್ಯಾವತ್ತೋ ಸತ್ತಿರುವೆನೆಂಬ ಸತ್ಯ
ಬಹುಶಃ ಅವಳಿಗೆ ತಿಳಿಯದಾಯಿತು.
*
ನನ್ನ ಆತ್ಮ ಮತ್ತು
ಅಂತರಾತ್ಮದ ದೇವತೆಯಾಗಿದ್ದವಳು,
ಆರಾಧನೆಯನು ವಿರೋಧಿಸಿದಾಕೆ.
ನನ್ನ ಸವಿನೆನಪುಗಳ ಅಂತ್ಯ-
ಕ್ರಿಯೆಗಾಗಿ ಕುಳ್ಳು ಕಟ್ಟಿಗೆಯ ಮೇಲೆ
ನನ್ನ ಕೂರಿಸಿ ಅಂತಿಮ ನಮನ
ಹೇಳುತ್ತಿರುವಾಕೆಯ ಹೊಟ್ಟೆ ತಣ್ಣಗಿರಲಿ.
*
ಮಣ್ಣಲ್ಲಿ ಮಣ್ಣಾಗುವ
ಮಸಣವೆಂಬ ಮನೆಗೆ
ಗೃಹಪ್ರವೇಶದ ಕಾರ್ಯ, ನೀವದನ್ನು
ಅಂತಿಮ ನಮನವೆನ್ನುವಿರಿ.
ಪ್ರೇಮದ ಗೋರಿಯೊಳಗಿನ
ನನ್ನ ನೋವುಗಳಿಗೆ ಲೆಕ್ಕ
ಅವಳೇ ಕೊಡಬೇಕು...!
*
ಕನಸುಗಳೇ
ದಯವಿಟ್ಟು ಕಸಿಯದಿರಿ
ನನ್ನ ನಿದಿರೆಯ, ಅವಳ
ಕಾಲಿಗೆ ಗೆಜ್ಜೆಯ ಕಟ್ಟದಿರಿ.
ಅವಳು ನಡೆದು ಬರುವಾಗೆಲ್ಲ
ಘಲ್ಲೆನುವ ನಾದಕೆ ಸ್ವರ್ಗದ ಬಾಗಿಲೊಂದು
ತಂತಾನೇ ತೆರೆದು
ನನಗೆ ಮರುಹುಟ್ಟು ಕರುಣಿಸದಿರಲಿ.
*
ನಾ ಕೊಟ್ಟ ಹೂವು,ಕುಂಕುಮ,
ಒಂದಿಷ್ಟು ಪ್ರೇಮವ
ಗಾಳಿಗೆ ತೂರಿ ನಿಂತವಳು.
ನನ್ನ ಸಮಾಧಿಯ ಮೇಲಿಟ್ಟ
ಹೂವಿಗೆ ಮುತ್ತಿಟ್ಟು ಹೋದಳು,
ತಿರುಗಿ ನೋಡಿದ್ದರೆ ಗೊತ್ತಾಗುತ್ತಿತ್ತೇನೋ
ಗುಲಾಬಿಯೊಂದು ರಕ್ತಕಾರಿದ
ಕಹಿಸತ್ಯ...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:15 am

ಮಳೆಯಾಗಿ ಬಾ..

ಅಂತರ್ಜಲವೂ
ಬತ್ತಿ ಹೋಯಿತು.
ಭಾವ ಭಿತ್ತಿಯಲಿ
ಉತ್ತಿ ಬಿತ್ತುವುದಕ್ಕೆ
ಅಡ್ಡಿಯಾಗಿದೆ ಬರಗಾಲ...!

ಈಗ ಕಣ್ಣೊಳಗೆ
ನೀರೂ ಇಲ್ಲ, ನೀನೂ ಇಲ್ಲ.
ಮಣ್ಣೊಳಗೆ ತೇವವಿಲ್ಲ
ನನ್ನೊಳಗೆ ಭಾವವಿಲ್ಲ...!

ಎದೆಯಂತೆ
ಭುವಿಯಾಗಿದೆ ಕಾಯ್ದ ತವೆ.
ಕಾಲಿಡದಿರು ಇಲ್ಲಿ,
ನಿನಗೆ ಕಾಲವೇ
ಉತ್ತರಿಸುವುದು ಅಲ್ಲಿ...!

ಬರುವುದಾದರೆ
ಮಳೆಯಾಗಿ ಬಾ ನೀನು,
ಸಾಕಿನ್ನು ವಿರಹ
ರಾಗ ದ್ವೇಷಗಳ ಮರೆತು
ಒಗ್ಗೂಡಲಿ ಭುವಿ ಭಾನು..!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:14 am

ಹನಿಮುತ್ತು

ಗುರಿಯಿಟ್ಟು ಹೊಡೆದಳು
ಹೃದಯಕ್ಕೆ, ಗೋರಿ ಕಟ್ಟಿ
ಮೇಲೊಂದಿಷ್ಟು ಹೂವಿಟ್ಟಳು.
*
ನಿಯಮಾನುಸಾರ ಬದುಕು
ಸಾಗುತ್ತಲೇ ಇತ್ತು, ಗಡಿಯಾರವೇಕೋ
ಟೈಮ್ ಸೆನ್ಸ್ ಕಳೆದುಕೊಂಡಿತ್ತು.
*
ಜೀವನ ರಥಕೆ ಚಕ್ರಗಳ ಜೋಡಿಸಿ
ರೋಧಿಸಿದಳು,ಹಗ್ಗ ಹಿಡಿಯಲು
ನೂರು ಜನ ಸೇರಿ ಜಾತ್ರೆಯೇ ನೆರೆಯಿತು.

© ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:13 am

ಹನಿಮುತ್ತು

ತಾನಿಲ್ಲದೇ
ನಾನೂ ಒಬ್ಬಂಟಿಯೆಂದು
ಆಕೆಗೂ ತಿಳಿದಿತ್ತು,
ಅಯ್ಯೋ
ಊರ ಮುಂದಿನ ಮಸಣದಲಿ
ಹೆಣಗಳಿಗೇನು ಕಮ್ಮಿ?
ಎಲ್ಲರೊಳಗೊಂದಾಗೆಂದು
ಉಪದೇಶವಿತ್ತಳು.
ಹಾಡು ಹಗಲೇ ಬದುಕು ಕತ್ತಲು..!
ಬದುಕಲಿನ್ನೇನಿದೆ?
ತಯಾರಾಗಿ ಸಿದಗಿಯನೆತ್ತಲು...!!

© ಚಂದ್ರಶೇಖರ ಮಾಡಲಗೇರಿ

- ಚಂದ್ರಶೇಖರಮಾಡಲಗೇರಿ

17 May 2017, 08:12 am