ಮರ- ಗಿಡಗಳ
ಕೊಂಬೆ- ರೆಂಬೆಗಳ
ಎಲೆಗಳ ಮರೆಯಲ್ಲಿ
ಅವಿತು ಕುಳಿತು
ಚಿಲಿ....ಪಿಲಿ....ಸದ್ದು
ಮಾಡುವ ಮುದ್ದು
ಹಕ್ಕಿಯು ನಾನು
ನನ್ನ ಪುಟ್ಟ ಮನೆಯ ಕದ್ದು ಮಲಗಿರುವೆ ನೀನು
ಉಸಿರಾಡುವ ಗಾಳಿಯು
ಇಂದು ನನಗೆ ಯಮಪಾಶವು
ನೀ ಬಳಸುವ ತಂತ್ರಜ್ಞಾನವು
ನನಗಾಗಿದೆ ನೇಣು ಕುಣಿಕೆಯು
ನಿನ್ನ ದುರಾಸೆಗೆ ಇರಲಿ ಮಿತಿ
ಅಲಕ್ಷಿಸಿದರೆ,ಮುಂದೆ ನಿನ್ನ ಅವನತಿ
ನನ್ನವರೆ ತುಂಬಿದ್ದರು ಸುತ್ತಲು ಅಂದು
ದರ್ಪದಿ ನೀನೆ ಮೆರೆಯುವೆ ಇಂದು
ನಿನಂತೆಯೆ ನಾನು
ಬದುಕಲು ಬಿಡು ನೀನು
ಸರ್ವಾಧಿಕಾರಿಗಳೆ ಸರ್ವನಾಶವಾದರು
ನೀನೆನ ಕೊಂಡೊಯ್ಯುವೆ ಎಷ್ಟು ಬಾಚಿದರು
ಬಿಡು ದುರಾಸೆಯ!
ಬೆಳೆಸಿಕೊ ಮಾನವೀಯತೆಯ!
ಇರುಳ
ಬಳಲಿಕೆಗಳು ನಿನ್ನ
ಕೂಡಿ-ಕಳೆದು
ನಿದ್ರೆಯ ಕಸಿದು
ಕೊಂಡಿವೆ,
ರೋಮಾಂಚನದ
ನಿನ್ನ ಸಖ್ಯದಲಿ
ಅದಲು ಬದಲಾಗುವ
ತಲೆದಿಂಬುಗಳು
ಪ್ರೇಮಕತೆಯ ಹೇಳಿಕೊಂಡಿವೆ...!
*
ಈ ಇರುಳ ಕತ್ತಲಿಗೆ
ನಿನ್ನ ಹೆರಳು ಸುಗಂಧವ ಬೀರಿವೆ,
ಕೊರಳ ಬಳಸಿ ಬಳಸಿ
ಉಸಿರ ಬಿಗಿಹಿಡಿದು
ವಿರಹವ ಬೆವರಾಗಿಸಿದ
ಅಮೃತಘಳಿಗೆಗೆ ಸಾಕ್ಷಿಯಾದ
ತಂಪಾದ ಸೂರ್ಯ, ಇಗೋ ಕೆಂಪಾದ.
ಇಂಪಾದ ಸುಪ್ರಭಾತವ
ಕೇಳಿ ಜಗಕೆ ಬೆಳಗಾಯಿತೇನೋ...!
*
ಹೀಗೆ ಸಣ್ಣನೆಯ ಚಳಿಗೆ
ಬೆಚ್ಚಗಿನ ಬೆಳಕು.
ಹಬೆಯಾಡುವ ಕಾಫೀ ಹೀರುವ
ತುಟಿಗಳಿಗೇಕೋ ನಿನ್ನ
ಕೆಂದುಟಿಗಳ ಮೇಲೆಯೇ ಕಣ್ಣು.
ನೀನು ನೀರೊಲೆಯ ಉರಿಸು
ನಾ ಅಣಿಯಾಗುವೆ
ನಿನ್ನೊಲವ ಮಜ್ಜನಕೆ...!
ಅವಳ ಬರುವಿಕೆಗಾಗಿ
ಕಾಯುವಿಕೆ ಇನ್ನು ವ್ಯರ್ಥ!?
ಅದೆಷ್ಟು ಹಗಲು ರಾತ್ರಿಗಳು
ಸಾಕ್ಷಿಯಾದವೋ ಲೆಕ್ಕವೇ ಇಲ್ಲ.
ಅವಳ ಮನ, ಮನೆಯ ಬಾಗಿಲು
ಬಡಿಯುತ್ತಲೇ ಇದ್ದೆ.
ಬಹುಶಃ ನನ್ನೆದೆಬಡಿತ
ಅವಳಿಗೆ ಕೇಳದಾಯಿತು..!
*
ಈಗವಳು
ಕಾಲಗೆಜ್ಜೆಯ ಬಿಚ್ಚಿಟ್ಟಿದ್ದಾಳೆ,
ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದಾಳೆ.
ನಾನ್ಯಾವತ್ತೋ ಸತ್ತಿರುವೆನೆಂಬ ಸತ್ಯ
ಬಹುಶಃ ಅವಳಿಗೆ ತಿಳಿಯದಾಯಿತು.
*
ನನ್ನ ಆತ್ಮ ಮತ್ತು
ಅಂತರಾತ್ಮದ ದೇವತೆಯಾಗಿದ್ದವಳು,
ಆರಾಧನೆಯನು ವಿರೋಧಿಸಿದಾಕೆ.
ನನ್ನ ಸವಿನೆನಪುಗಳ ಅಂತ್ಯ-
ಕ್ರಿಯೆಗಾಗಿ ಕುಳ್ಳು ಕಟ್ಟಿಗೆಯ ಮೇಲೆ
ನನ್ನ ಕೂರಿಸಿ ಅಂತಿಮ ನಮನ
ಹೇಳುತ್ತಿರುವಾಕೆಯ ಹೊಟ್ಟೆ ತಣ್ಣಗಿರಲಿ.
*
ಮಣ್ಣಲ್ಲಿ ಮಣ್ಣಾಗುವ
ಮಸಣವೆಂಬ ಮನೆಗೆ
ಗೃಹಪ್ರವೇಶದ ಕಾರ್ಯ, ನೀವದನ್ನು
ಅಂತಿಮ ನಮನವೆನ್ನುವಿರಿ.
ಪ್ರೇಮದ ಗೋರಿಯೊಳಗಿನ
ನನ್ನ ನೋವುಗಳಿಗೆ ಲೆಕ್ಕ
ಅವಳೇ ಕೊಡಬೇಕು...!
*
ಕನಸುಗಳೇ
ದಯವಿಟ್ಟು ಕಸಿಯದಿರಿ
ನನ್ನ ನಿದಿರೆಯ, ಅವಳ
ಕಾಲಿಗೆ ಗೆಜ್ಜೆಯ ಕಟ್ಟದಿರಿ.
ಅವಳು ನಡೆದು ಬರುವಾಗೆಲ್ಲ
ಘಲ್ಲೆನುವ ನಾದಕೆ ಸ್ವರ್ಗದ ಬಾಗಿಲೊಂದು
ತಂತಾನೇ ತೆರೆದು
ನನಗೆ ಮರುಹುಟ್ಟು ಕರುಣಿಸದಿರಲಿ.
*
ನಾ ಕೊಟ್ಟ ಹೂವು,ಕುಂಕುಮ,
ಒಂದಿಷ್ಟು ಪ್ರೇಮವ
ಗಾಳಿಗೆ ತೂರಿ ನಿಂತವಳು.
ನನ್ನ ಸಮಾಧಿಯ ಮೇಲಿಟ್ಟ
ಹೂವಿಗೆ ಮುತ್ತಿಟ್ಟು ಹೋದಳು,
ತಿರುಗಿ ನೋಡಿದ್ದರೆ ಗೊತ್ತಾಗುತ್ತಿತ್ತೇನೋ
ಗುಲಾಬಿಯೊಂದು ರಕ್ತಕಾರಿದ
ಕಹಿಸತ್ಯ...!
ಗುರಿಯಿಟ್ಟು ಹೊಡೆದಳು
ಹೃದಯಕ್ಕೆ, ಗೋರಿ ಕಟ್ಟಿ
ಮೇಲೊಂದಿಷ್ಟು ಹೂವಿಟ್ಟಳು.
*
ನಿಯಮಾನುಸಾರ ಬದುಕು
ಸಾಗುತ್ತಲೇ ಇತ್ತು, ಗಡಿಯಾರವೇಕೋ
ಟೈಮ್ ಸೆನ್ಸ್ ಕಳೆದುಕೊಂಡಿತ್ತು.
*
ಜೀವನ ರಥಕೆ ಚಕ್ರಗಳ ಜೋಡಿಸಿ
ರೋಧಿಸಿದಳು,ಹಗ್ಗ ಹಿಡಿಯಲು
ನೂರು ಜನ ಸೇರಿ ಜಾತ್ರೆಯೇ ನೆರೆಯಿತು.