Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನದ ಮಂದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು......
ಹ್ರುದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು .....
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು ........
ನೆನಪಿರಲಿ ಪ್ರೀಯೆ....
ದೀಪ ಆರದಿರಲಿ ,ಮುತ್ತು ಒಡೆಯದಿರಲಿ ,ಪುಷ್ಪ ಬಾಡದಿರಲಿ .........
- Acchu
23 May 2017, 03:55 pm
ತೂಗು ಉಯ್ಯಾಲೆಯಲ್ಲಿ ಲಾಲಿ ಜೋಗುಳ ಹಾಡಿ
ಗರಿಮುದುಡಿ ಮಲಗಿರುವ ಗುಬ್ಬಚ್ಚಿಯ ಕದತಟ್ಟಿ ಕರಿಯೋಣವೇ ಪ್ರಕೃತಿಯ ಮನದಂಗಳಕೆ
ಶುಭೋದಯವಾಯಿತೆಂದು.................
ಸುಪ್ರಭಾತ ಗೀತೆ ಹಾಡಿ ಅದಿತ್ಯನ ಕರೆಕೇಳಿ
ಬೇಗೆದ್ದ ಕೋಳಿ ಕೂಗನು ಆಲಿಸಿ ಎದ್ದು ಹೋದಳು ಮನೆಯೊಡತಿ ಅಂಗಳಕ್ಕೆ ರಂಗೋಲಿ ಹಾಕಲೆಂದು ಹತ್ತು ಬಣ್ಣಗಳೊತ್ತು ತನ್ನ ಕೈಯಲ್ಲಿ............
ಹೊಸಲು ತನ್ನ ತಾಯಿಯೆಂದು ನಮ್ಮ ಮನೆ ಮಹಾಲಕ್ಷ್ಮಿ ಹಚ್ಚಿದಳು ಅರಿಶಿನವ ಇಟ್ಟಲದಕೆ
ಸಿಂದೂರವ ...................
ಮಿಂದು ಮಾಡಿಯೊತ್ತು ದೇವರಮನೆಸೇರಿ ಪೂಜೆಗೈದು ಮನೆಯಮಂದಿಯಲ್ಲ ನಗುತಿರಳು ಬೇಡಿದಳು ದೇವರಲ್ಲಿ ನಮ್ಮ
ಅದೃಷ್ಟಲಕ್ಷ್ಮಿ ...............
ಊಟ ತಿಂಡಿಮಾಡಿಟ್ಟು ತಲೆಮೇಲೆ ಸೆರೆಗೊತ್ತು
ನಡೆದಳು ಧನ್ಯಲಕ್ಷ್ಮೀ ಹೊಲಕ್ಕೆ ಉಳುಮೆಮಾಡಲು ಜಾನಪದ ಗೀತೆಹೇಳಿ ನನ್ನ ಸ್ನೇಹಿತೆಯರೊಡನೆ ಕೂಡಿ..........
ಸಂಧ್ಯಾವೇಳೆ ಮನೆಸೇರಿ ಮಕ್ಕಳ ನಗುಮುಖವ ನೋಡಿ ತಾನು ಪಟ್ಟ ಕಷ್ಟವೆಲ್ಲಾ ಕ್ಷಣದಲ್ಲಿ ಮರೆತಳಾ ಸೌಭಾಗ್ಯವತಿ ಆ ಸಂತಾಣಲಕ್ಷ್ಮೀ................
ವ್ಯಾಪಾರದಲ್ಲಿ ಸಂಪಾದನೆ ಸಾಲದೆಂದು ನೊಂದ ಪತಿಗೆ ನಾಲ್ಕು ಧೈರ್ಯದ ಮಾತಾನೇಲಿ ಪ್ರೀತಿಯಿಂದ ಊಟ ಬಡಿಸಿ ತಾನು ನೋಂದಲಾ
ಆ ಧೈರ್ಯಲಕ್ಷ್ಮಿ
ಹಾಯಾಸದಿ ಮಲಗಿದಳು ಮನೆಗೆಲಸವೆಲ್ಲಾ ಮುಗಿಸಿ ನಾಳೆಯ ದಿನಕೆ ನೂರು ಕನಸೊತ್ತು
ತನ್ನ ಕಣ್ಣಲ್ಲಿ ನಮ್ಮ ಗೃಹಲಕ್ಷ್ಮೀ ............
- ಚುಕ್ಕಿ
23 May 2017, 09:45 am
*ನಮ್ಮ ಧಕ್ಷ ವೀರಸೇನೆ*
by.*ಮಂಜುನಾಥ.ಸಿ*
"ಕಂಡಿರಣ್ಣ ಕಂಡಿರ ನಮ್ಮ ಧಕ್ಷ ವೀರ ಸೇನೆಯೆನ್ನೇನಾದರು ಕಂಡಿರ ."?
"ಮಳೆ,ಗಾಳಿ, ಸುಡಬಿಸಿಲಿನರಿವಿಲ್ಲದೆ ಮುನ್ನೆಡೆಯುವ ನಮ್ಮ ಧಕ್ಷ ವೀರ ಸೇನೆಯೆನ್ನೇನಾದರು ಕಂಡಿರ ."?
"ಮನೆಮಡದಿಯ ಮರೆತು ತಾಯಿತಂದೆ ಸಂಪರ್ಕ ತೊರೆದು ಮಕ್ಕಳಪರಿವಿಲ್ಲದೆ
ಭಾರತೀಯ ಮಕ್ಕಳನೇನಾದರು ಕಂಡಿರ ಕಂಡಿರ."?
"ಸಾವಿರಾರು ಮೈಲು ಕೊರಿಯುವ ಹಿಮಪಾತದಲ್ಲಿ ಕಾಲ್ ಸುಡುವ ಮರಳುಗಾಡಲ್ಲಿ ನಮಗಾಗಿಕಾಯುವ
ನಮ್ಮ ಧಕ್ಷ ವೀರ ಸೇನೆಯೆನ್ನೇನಾದರು ಕಂಡಿರ ."?
"ಶತ್ರುಗಳ ಗುಂಡಿಗೆ ದ್ದಿಟ್ಟ ಉತ್ತರಕೊಡುತ್ತ
ಎದೆಗುಂದದೆ ಪ್ರಾಣವನ್ನೆ ಅರ್ಪಿಸುವ
ನಮ್ಮಧಕ್ಷ ವೀರ ಸೇನೆ ಕಂಡಿರ ?..""
*ಮಂಜುನಾಥ.ಸಿ*
- Manjunatha.c
23 May 2017, 07:21 am
ಬಾಳೆಂಬ ರಥದಲ್ಲಿ ಚಕ್ರವಿಲ್ಲದ ರಥ
ಹೊರಟಿರುವ ಬಂಡ ಬದುಕು .
ಬಂಡ ಬದುಕಲ್ಲಿ ಬಯಸಿದೆ ಏನೋ ಒಂದು
ಅದೇಕೋ ಸಿಗದೇಹೋಹಿತು ಇಂದು
ಬರದ ಬದುಕಿನಲ್ಲಿ ಬಯಿಸಿದೆ ಅನುರಾಗದ ಕಲರವದ ಬಯಕೆಯ .
ಇದೆಲ್ಲ ನೀಲುಕದ ಸ್ವಪ್ನ ಲೋಕದ ಬಯಕೆಯ
ಬಯೀಸಿದ ಸಿರಿ
ಆಸೆಯ ಭಾವ ತಂದಳು ಮನದ ಆಗಸದಲ್ಲಿ
ಕೈಚಾಚಿ ಕರೆದಳು ಚಂದ್ರಚಕೋರಿ
ನೀಲಿ ಹಾಳೆ ಗಗನದಿ ಬಿಳಿ
ಚುಕ್ಕೆಯ ನಡುವೆ ಬೆಳ್ಳಿ ಚುಕ್ಕೆಯ ಬಯಸಿದ ಪರಿ
ಬಯಕೆ ಬರಿ ಕವಿದಕಾಲಿ ಮೋಡ ಚಲಿಸಿದ ಝರಿ
ಬಯಕೆ ಬರಿ ಸತ್ತು ಸರಿಗಮದ ಹೊಂಗನಸ ಕಲ್ಪನೆಯ ಮನದಾಟದ ನುಡಿ
ಬಯಸಿದೆ ಬಯಕೆಯ ಬರಿದಾದ ಬಾಳಲಿ
ಬಯಸು ಬರಿ ಬಯಕೆಯಾಗುಳಿದ ಗುರಿ......
✍✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
23 May 2017, 01:12 am
ಯಾರದೋ ನಗುವಿಗೆ
ನಲಗುವರಿದ್ದಾರೆ ಜಗದೊಳು
ಯಾರದೋ ನೋವಿಗೆ
ನಗುವವರಿದ್ದಾರೆ ಜಗದೊಳು
ನಿನ್ನ ನಗುವಿಗೆ ನಕ್ಕು
ನಿನ್ನ ಅಳುವಿಗೆ ಅತ್ತು
ಬದುಕುವವನಿದ್ದಾನೆ ನನ್ನೊಳು
- sureshsuri@gmail.com
22 May 2017, 11:56 pm
ಕೇಳೆನು ಗೆಳೆಯ ಆ ಕಾಮನಬಿಲ್ಲ ತಂದಿರಿಸು ನನಗಾಗಿ
ಆ ಬಣ್ಣಗಳ ನಾ ಮೋಹಿಸಿರುವೆನೆಂದು
ನಾ ಹೇಳೆನು ಆ ಶಶಿಯ ಕೊಂಡು ತಾ ನನಗಾಗಿ
ಆ ಕಾಂತಿಯು ಬೇಕಿದೆ ನನ್ನ ಸಿಂಗರಿಸಲೆಂದು
ನಾ ಆಸೆಪಡೆನು ತಾ ಆ ಇರುಳ ಎನಗಾಗಿ
ನನ್ನ ಕಣ್ಣ ಸಿಂಗರಿಸುವ ಕಣ್ಣ ಕಾಡಿಗೆಗೆಂದು
ನಾನು ಇಚ್ಛಿಸೆನು ನಕ್ಷತ್ರ ಪುಂಜವ ಕೊಂಡು ಬಾ ನನಗಾಗಿ
ಮಾಲೆ ಕಟ್ಟಿ ಮುಡಿಗೆ ಏರಿಸಿ ಆನಂದಿಸಬೇಕೆಂದು
ನಾ ಬಯಸೆನು ಆ ಸೂರ್ಯನ ಧರೆಗಿಳಿಸು ನನಗಾಗಿ
ಅವನು ನನ್ನಣೆಯ ಸಿಂಧೂರವಾಗಲೆಂದು
ನಾ ಗೊಣಗೆನು ತಾ ಆ ಮಳೆರಾಯನ ನನಗಾಗಿ
ನನ್ನೆಲ್ಲ ನೋವ ಕಣ್ಣೀರೆಲ್ಲ ಒರೆಸಲೆಂದು
ನನ್ನ ಬಯಕೆಗಳೇನಿದ್ದರು
ಆ ಕಾಮನಬಿಲ್ಲ ಕಂಡಾಗ ತೋರಿಸು ಕೈ ಹಿಡಿದು ಜೊತೆ ನಿಂತು ಮತ್ತೊಮ್ಮೆ ನನ್ನ ಮಗುವಾಗಿಸುವವನಾಗು
ಆ ಶಶಿಯಂದವ ನೋಡುತ ಮೈಮರೆತಾಗ ನಿನ್ನ ಪ್ರೀತಿಯ ಅಂದವ ನನಗುಣಿಸಿ ಅವನ ಮರೆಸುವವನಾಗು
ಆ ಇರುಳಲಿ ಬೆಚ್ಚಿ ನಿಂತಾಗ ಜೊತೆ ನಡೆದು ದಾರಿ ತೋರುವ ಸಹಪಾಠಿಯಾಗು
ಆ ನಕ್ಷತ್ರಗಳ ಪುಂಜವ ಜೋಡಿಸಿ ಚಿತ್ರ ಬರೆಯುವಾಗ ಜೊತೆಗಾರನಾಗು
ಸೂರ್ಯನ ಉರಿ ಬಿಸಿಲ ಕಂಡು ಸೋತಾಗ ನೆರಳ ಅರಸಿ ನೀಡುವವನಾಗು,
ಆ ಮಳೆರಾಯನ ಕಂಡು ಮನಸು ಕುಣಿವಾಗ, ನೋವಲಿ ಸೋತು ನಿಂತಾಗ ಅವನ ಹನಿಯ ಮಾಲೆಯೊಳಗೆ ನನ್ನ ನಲಿಸುವವನಾಗು
- ಶ್ರೀಕಾವ್ಯ
22 May 2017, 09:31 pm
ಅದುರುತಿರುವ ಎಡಗಣ್ಣ ನೋಡಿ
ಶುಭ ಸಂಕೇತವೆಂದು ತಿಳಿದು
ಕಾಯುತಿರುವೆ ಆ ಕ್ಷಣಕೆ ಮನ
ಕೋಲಾಹಲದಿಂದ ಕುಣಿಯುವ ಘಳಿಗೆಗೇ .
ಬಾಡಿದ ಹೂ ಬಳ್ಳಿ ಚಿಗುರಿ
ಸೊಗಸಾದ ಹೂ ಬಿಡುವ ದಿನಕ್ಕೆ.
ಎಂದು ಬಾಡದ ನಿನ್ನ ಕಣ್ಣ ಹೂಗಳು
ನನ್ನ ರೂಪ ತುಂಬಿ ನಗೆಬಿರುವ ಕ್ಷಣಕ್ಕೆ.
- ಚುಕ್ಕಿ
22 May 2017, 04:43 pm
ಒಂಟಿಯಾದರು ತುಟಿಯಂಚಲಿ ನಸು ನಗು ಮೂಡುತಿದೆ..
ಹೇಗೆ ಹೇಳಲಿ ನಾ, ಏನೆಂದು ವಿವರಿಸಲಿ ನಾ?
ಕಂಡು ಕಾಣದ ಆ ಗೆಳೆಯನ,
ದೂರವಿದ್ದರು ಕಾಡುವ ನನ್ನ ಇನಿಯನ..
ಪುಳಕದಲಿ ಹೃದಯವು ಅರಳುತ್ತಿದೆ ಹೂವಾಗಿ,
ಮತ್ತೆ ಮುದುಡುತ್ತಿದೆ ನಾಚುತ ಮೊಗ್ಗಾಗಿ..
ಅವನೊಂದಿಗೆ ಸ್ವಚ್ಚಂದವಾಗಿ ಹಕ್ಕಿಯಂತೆ ಹಾರಲೆ..?
ಇಲ್ಲ ಎದೆಯ ಗೂಡಲಿ ಪುಟ್ಟ ಗುಬ್ಬಿಯಂತೆ ಬಚ್ಚಿ ಕೂರಲೆ..?
ಎಲ್ಲಿರುವನೊ ? ಎಂದು ಬರುವನೊ ?
ಕಣ್ಣ ರೆಪ್ಪೆಯಂತೆ ಕಾಯಲು..
ಕಪ್ಪೆ ಚಿಪ್ಪಿನಂತೆ ಜೋಪಾನ ಮಾಡಲು..
- Acchu love
22 May 2017, 03:00 pm
ಲೆಕ್ಕವಿಲ್ಲದ ಅದೆಷ್ಟೋ ಹಗರಣಗಳು
ತೂಕಡಿಸುತ್ತ,ಸಾಗುತಿರುವ ತನಿಕೆಗಳು
ದಲಿತರ ಉದ್ದಾರದ ಮಂತ್ರ
ಅವರ ಮನೆಯಲ್ಲಿ
ಉಣ್ಣುವುದರಲ್ಲಿ ಮಾತ್ರ
ತನಿಕೆಯ ನೆಪದಲ್ಲಿ
ಬಡವರ ಸಂಹಾರ
ಅದೆ,ತನಿಕೆಯ ಮರೆಯಲ್ಲಿ
ಸಿರಿವಂತರ ಉದ್ದಾರ
ಇದೆ,ನಮ್ಮನಾಳುವವರ ಉದ್ಗಾರ
ಸಮಾಜವೆಂಬ ಸುಂದರ
ಹೂ-ದೋಟವು
ಹಗರಣಗಳೆಂಬ ಕೀಟಗಳ
ಹಾವಳಿಯಿಂದ ಸೊರಗಿಹವು
ತನಿಕೆಯೆಂಬ ಔಷಧಿ ಸಿಂಪರಣಿಕೆಯು
ಸಾಗಿದೆ ಆಮೆ- ಗತಿಯಲ್ಲಿ
ಸಾವಿರಾರು- ಸಮಸ್ಯೆಗಳು
ನೂರಾರು- ಹೋರಾಟಗಳು
ಹತ್ತಾರು- ಸಲಹೆಗಳು
ಆರ್ಥಿಕತೆಯ ಬೆನ್ನೆಲುಬು ನಾವು
ಅಭಿವೃದ್ಧಿಯ ನೆಪದಲ್ಲಿ ಮಣ್ಣಾದೆವು
ಹರಿಯುವುದು ಆಶ್ವಾಸನೆಯ
ಮಹಾಪೂರ
ಅರಿಯುವವರಿಲ್ಲ ನಮ್ಮೆದೆಯ
ದುಃಖದ ಸಾಗರ
ಬಿತ್ತಿ- ಬೆಳೆವವರು ನಾವು
ಕೂತು- ಉಣ್ಣುವವರು ನೀವು
ನಿಮ್ಮ ಒಪ್ಪಿಗೆ
ನಾವು ತಿನ್ನುವ ತುತ್ತಿಗೆ ....,,,,,,,,?
ದಿನವಿಡೀ ಶ್ರಮವಹಿಸಿ ದುಡಿವೆವು
ದೇಹವ ದಂಡಿಸಿ- ಕಬ್ಬಿಣವ ಬಗ್ಗಿಸಿ
ಬಂಡೆಗಳ ಬಡಿದು- ಬೆವರ ಸುರಿಸಿ
ವೈಭವದ ಮಹಡಿಯ ನಿರ್ಮಿಸಿವೆವು
ಬೇಸತ್ತು ಹೋಗಿದೆ ಮನ
ಆಶ್ವಾಸನೆ,ಪರಿಶೀಲನೆ, ಯೋಜನೆ ?
ಜಡತ್ವವ ಬಿಡಿ ,ನ್ಯಾಯವ ನೀಡಿ.
ಶಾರಧ
- ಶಕುಂತಲಾ
22 May 2017, 12:44 pm
ಕಣ್ಣಲ್ಲಿ ಕರಗಿದ್ದ ಸೊಗಸಾದ
ಕನಸು ನನಸಾಗಿ ಬಂತೆ ನೀನಾಗಿ
ಹೆಸರಿಡುವ ಮೊದಲೇ ತಿಳಿಸಿಹೊಯ್ತೆ
ನಿನ್ನ ನಗುವಾಗಿ
ಮರೆತಿದ್ದ ಮಾತೊಂದು ಮರೆಯದೆ
ನೆನಪಾಯ್ತೆ ಇಂದು ತಡವಾಗಿ
ಹೇಳೋಕು ಮುನ್ನ ಬದಲಾಯಿತೆ
ನಿನ್ನ ಪ್ರೀತಿಯ ರೂಪವಾಗಿ
- ಚುಕ್ಕಿ
21 May 2017, 11:24 pm