Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹನಿ..

ಮುಂಜಾವಿನ ತಂಪಲಿ
ಇಳೆಯ ಕೆಂದುಟಿಯ
ಸಿಹಿಮುತ್ತಿಗೆ ,
ರವಿಯ ಮೊಗವು
ಕೆಂಪೇರಿದ ಬೆಳಗು...

- Indushekar Chinivar

25 May 2017, 05:16 am

ಮ‌ರುಕ‌ವಿತೆ

ನಾನು ಓದಿರುವ‌ ಎಲ್ಲ ಗ‌ದ್ಯ‌ ಪ‌ದ್ಯ‌ ಕ‌ಥೆ
ಕ‌ವ‌ನ‌ ಕ‌ವಿತೆಗ‌ಳಲ್ಲಿ‌ ನ‌ನ‌ಗಿಷ್ಟ‌ವಾದ‌ ಅತ್ಯಂತ‌
ಸ‌‌ರ್ವಶ್ರೇಷ್ಠ‌ವಾದ‌ ಸಾಲುಗ‌ಳ‌ನ್ನು ಹೆಕ್ಕಿ ಆಯ್ದು
ಜೋಡಿಸಿ ಮ‌ರುಜೋಡಿಸಿ ಪ್ರೇಮ‌ಕ‌ವಿತೆಯೊಂದ‌ನ್ನು ರ‌ಚಿಸಿ ನ‌ನ್ನ‌ವ‌ಳ‌ ಮುಂದಿಟ್ಟೆ "ಇದೇ ನ‌ನ್ನ‌ ಪ್ರೀತಿಯೆಂದು".
ಅಲ್ಲೇ ಇದ್ದ‌ ಬಂಡೆಯೊಂದ‌ರ‌ ಮೇಲೆ ಕುಳಿತು
ಓದಿ ಅರ್ಥೈಸಿ ವಿಮ‌ರ್ಶಿಸಿ ಪರಾಮ‌ರ್ಶಿಸಿ
ಸ್ವ‌ಲ್ಪ‌ ಹೊತ್ತು ಎತ್ತ‌ಲೋ ನೋಡುತ್ತ‌ ಮೌನ‌ದಿಂದ್ದ‌ಳು ನ‍ಂತ‌ರ‌ ನ‌ನ್ನೆಡೆಗೆ ನೋಡುತ್ತ‌
ಹೀಗೆಂದ‌ಳು "ಯಾರೋ ಇನ್ನಾರಿಗೋ ಬೇಯಿಸಿದ‌ ಮುೃಷ್ಟಾನ್ನ‌ವ‌ನ್ನು ನಿನ್ನ‌ ಪ್ರೀತಿಯೆನ್ನುವುದು ಎಷ್ಟು ಸ‌ರಿ"
ನಾನು ಎನ‌ನ್ನೊ ಯೋಚಿಸುತ್ತ‌ ಉತ್ತ‌ರಿಸಿದೆ
"ಈ ಪ್ರೀತಿ ಸ್ಪುರಿಸುವ‌ ಸಾಲುಗ‌ಳು ಸ‌ಮುದ್ರ‌ ಮಂಥ‌ನ‌ದ‌ಲ್ಲಿ ತೇಲಿ ಬಂದ‌ ಅಮುೃತ‌ದಂತೆ
ನ‌ಮ್ಮ‌ದೆ ಕ‌ನ‌ಸುಗ‌ಳ‌ ಕ‌ನ‌ವ‌ರಿಕೆಗ‌ಳ ಹಾಡಿನಂತೆ
ನ‌ಮ್ಮ‌ ಹೃದ‌ಯ‌ ಗೆದ್ದ‌ರೆ ಅವು ನ‌ಮ್ಮ‌ದೇ ಸಾಲುಗ‌ಳ‌ಲ್ಲ‌ವೆ"?
ಒಲ‌ವೇ ಸ‌ತ್ಯ‌ ಒಲ‌ವೇ ನಿತ್ಯ‌
ಒಲ‌ವೇ ನ‌ಮ್ಮ‌ಯ‌ ಜೀವ‌ನ‌.

- ಶಶಿಧರ ಹೆಚ್ ಎನ್

25 May 2017, 12:39 am

ಹನಿ..

ರಜನಿಯ
ನೀಳ ಜಡೆಯಂಚಿಗೆ
ಚಂದಿರ,
ತಾರೆಗಳ ಕುಚ್ಚನು
ಕಟ್ಟುವ ಇರುಳು...

- Indushekar Chinivar

24 May 2017, 10:29 pm

ನೋದ ಹೃದಯ

ಸುಮ್ಮನಿರು ಕಣ್ಣೀರೆ ...ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ.....
ನಿನ್ನ ಅಳು ವ್ಯರ್ಥ ಸುಮ್ಮನಿರು......
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ ...
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು....
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು....ಕಣ್ಣೀರೆ ನೀ ಸುಮ್ಮನಿರು......................................ಸುರೇಶ್ ಸೂರಿ ದಾವಣಗೆರೆ

- sureshsuri@gmail.com

24 May 2017, 10:17 pm

ಸ್ನೇಹ ಜೀವಿ.......

ಖುಷಿಯಲಿ ತೇಲಾಡಿದೆ ಮನವಿಂದು,
ನನಗೂ ಮನಸ್ಸಿದೆ ಎಂದು ತಿಳಿದವ
ನೀನೆ ಏನು ?
ತಿಳಿಯದೆ ಆದ ಸ್ನೇಹವಿದು,
ಯಾವುದೊ ಜನುಮದ ಬಂಧವಿದು,
ಕೂರಿಸಿದೆಯಲ್ಲೊ ಸ್ನೇಹದ
ಗೋಪುರದ ಮೇಲೆ,
ನೆಲೆಸು ಬಾರೊ ನನ್ನ ಗೆಳೆಯ,
ಸ್ನೇಹದ ಸನ್ನಿಧಿಯೊಳಗೆ….
ಸ್ಥಳ ಒಂದೇ ಆದರು ಎಷ್ಟು ಅಂತರ,
ಜೊತೆಯಿರೆ ಸಾಕು ನಮ್ಮ ಸ್ನೇಹ
ಜನುಮ ಜನುಮಾಂತರ….

- Acchu love

24 May 2017, 10:11 pm

ಬಯಸಿದ ಹೃದಯದ ಪ್ರೀತಿಗೆ ಇಂದು ನಾನೇ ಬೇಡವದೇ.......

ಬಯಸಿದ ಹೃದಯದ ಪ್ರೀತಿಗೆ ಇಂದು ನನ್ನ ಪ್ರೀತಿಯೇ ಬೇಡವಾಗಿದೆ….

ಸುರಿಯುವ ಮಳೆಯಲ್ಲಿ ,ನನ್ನ ಕಣ್ಣೀರಿಗೆ ಬೆಲೆ ಸಿಗಲಿಲ್ಲ ……

ನೂರಾರು ಹೃದಯಗಳ ನಡುವೆ ನನ್ನ ಮನಸಿಗೆ ಅರ್ಥವೆ ಸಿಗಲಿಲ್ಲ ………

ಅರ್ಥಗಳ ಹುಡುಕುತಲಿ ,ಬರಿ ಪ್ರಶ್ನೆಗಳ ಹಾವಳಿಗಳಗಿವೆ..........

- Acchu love

24 May 2017, 09:57 pm

ಸಂಪತ್ತಿಗೆ ಸ್ವಾಭಿಮಾನಿಯ ಸವಾಲ್!

ಮನಸ್ಸು ಭಾರ ವಾಯ್ತು.
ಹೃದಯಕ್ಕೆ ನೋವಾಯ್ತು.
ಸ್ವಾಭಿಮಾನಕ್ಕೆ ದಕ್ಕೆಯಾಯ್ತು.

ಹೀಯಾಳಿಸುವ ಜನಕ್ಕೆ ಸಾಧಿಸಿ ತೋರಿಸುವ ಛಲವಾಯ್ತು
ಜೀವನವೆಂಬ ರಣರಂಗದಲಿ ಚರಿತ್ರೆ ಸೃಷ್ಠಿಸುವ ಕಾಲ ಬಂದಾಯ್ತು
ಚರಿತ್ರೆಯ ಪುಟ ಪುಟದಲ್ಲೂ ಮಿಂಚುವ ರೋಷ ಉಕ್ಕಾಯ್ತು
ಇದೋ ನಿನ್ನ ಸಂಪತ್ತಿಗೆ ಈ ಸ್ವಾಭಿಮಾನಿಯ ಸವಾಲ್ !

- ವೇಣು ಆರ್ ಚಿನ್ನದೂರು

24 May 2017, 09:56 pm

ಚಿಟ್ಟೆಯ ಬಟ್ಟೆ

ಹೋಗುವಾಗ ದಾರಿಯಲ್ಲಿತ್ತೊಂದು ಚಿಟ್ಟೆ.
ಹಿಡಿಯಲು ಹೋಗಿ ಮುರಿದುಕೊಂಡೆ ನನ್ನ ರಟ್ಟೆ.
ವೈದರು ಹಾಕಿದರು ನನಗೆ ಬಿಳಿಯ ಬ್ಯಾಂಡೇಜ್ ಬಟ್ಟೆ,
ಅದನ್ನು ನೋಡಿದ ನನ್ನ ಗೆಳೆಯ ನಕ್ಕ ಸಿಕ್ಕಾಪಟ್ಟೆ.
ಅದರಿಂದ ಕೋಪಗೊಂಡ ನಾನು ಅವನ ಕಪಾಳಕೆ ಒಂದು ಕೊಟ್ಟೆ.

- ವೇಣು ಆರ್ ಚಿನ್ನದೂರು

24 May 2017, 09:56 pm

ನೆನಪುಗಳು........

ಒಳಿತುಗಳೆಲ್ಲ ನನ್ನವಾಗಿ
ಕೆಡುಕುಗಳೆಲ್ಲ ದೂರವಾಗಿ
ಮಡಿಲಿನ ಕೆಂಡವಾಗಿ
ಜನಿಸಿದೆ ಕೊನೆಯ ಮಗಳಾಗಿ

ಸ್ವಚ್ಛಂದ ಆಗಸದಲ್ಲಿ
ಹಾರಾಡುವ ಆಸೆ
ಪಾತಾಳ ಗಂಗೆಯ ಮುಟ್ಟಿ
ಮುತ್ತಿಟ್ಟು, ನಲಿಯುವ ಆಸೆ
ದೂರ ಸಾಗರವ ತೇಲುತ್ತಾ....
ಸಾಗುತ್ತಾ.... ಹಾಡುವಾಸೆ

ಬಾಲ್ಯದ ತುಂಟಾಟಗಳ
ಸಿಹಿ ನೆನಪುಗಳ ಅಲೆಯಲ್ಲಿ
ಬೆಳೆದೆನು ಒಡನಾಡಿಗಳ
ತಾರತಮ್ಯದ ಬಲೆಯಲ್ಲಿ

ಆ ಶಾರದೆ ನೀಡಲಿಲ್ಲ
ನಾ ಬಯಸಿದಷ್ಟು ಚಾತುರ್ಯ
ಆದರೂ... ಹಿಂಜರಿಯಲಿಲ್ಲ
ಆಯ್ದುಕೊಂಡೆ ಸನ್ಮಾರ್ಗ

ಹಿಮಾಲಯದ ಶಿಖರದಲ್ಲಿದೆ
ನನ್ನಾಸೆಯ ಆ ಗುರಿ
ಪ್ರಯತ್ನ ಸಾಗಬೇಕಿದೆ
ಗುರಿಯ ಅರಸಿ


ಶಾರಧ

- ಶಕುಂತಲಾ

24 May 2017, 08:50 pm

ರಾಧೇ.........

ಲಾವಣ್ಯ ಕರಗತ ಮೊಗವ ನೋಡಿ
ನಾಚಿದಲಾ ರಾಧೆ
ಕೃಷ್ಣನು ಕೈ ಹಿಡಿದಾಗ.....

ಕಾಲ್ಗೆಜ್ಜೆ ಜಾರಿ ಬಿತ್ತು ಸಿರಿವನದ
ನೆಲದಲ್ಲಿ ರಾಧೆ ಓಡಿದ ಕ್ಷಣದಲ್ಲಿ......

ಕೈಗೆತ್ತಿ ಮುತ್ತಿಟ್ಟು ಹೃದಯದಲ್ಲಿ ಬಚ್ಚಿಟ್ಟನು ಆ ಗೆಜ್ಜೆಯ ತನ್ನದೆಂದು.......

ತನ್ನದು ಅದು ಕೊಡು ಎಂದು ರಾಧೆ ಕೇಳಿದಾಗ ನೀನೇ ನನ್ನವಳು ಆ ಗೆಜ್ಜೆ ನಿನಗೇಕೆ ಪ್ರೀಯತಮೇ ಎಂದನಾ ತುಂಟ ಕೃಷ್ಣನು......

ಮಾತಿನ ಮಧುರ್ಯತೆಗೆ ಮರುಳಾದ ಆ ರಾಧೆ ನಕ್ಕು ಹೊಡಿ ಬಂದಳು ಶ್ರೀಲೊಳನ ಎದೆಯಲ್ಲಿ ನೆಲೆಯಾಗಳು.....

ಜಲಧಾರೆಯ ಮಡಿಲಲ್ಲಿ ಉಯ್ಯಾಲೆ ಕಟ್ಟಿ ಅದರಲ್ಲಿ ತೂಗುತ್ತಿದ್ದನು ಶ್ರೀ ಕೃಷ್ಣ ಮುದ್ದಾದ ರಾಧೇಯನ್ನು.....

ಉಲ್ಲಾಸದಿ ಹಾಡುತ್ತಿದ್ದ ರಾಧೆಯ ಸೊಗಸಾದ ಪಾದವ ಪ್ರೀತಿಯಿಂದ ಚುಂಬಿಸುತ್ತಾ ಅಡುತ್ತಿದ್ದನು ಅವಳ ಕೇಶರಾಶಿಯ ಜೊತೆ............

ಆ ರಾಧೆ ಕೆನ್ನೆಯಲ್ಲಿ ಕೆoಪಾದ ಬಣ್ಣವಾಗಲು ನಾಚುತ್ತ ತಲೆಬಾಗಿ ನೋಡಿದನು ಆ ಕೃಷ್ಣ ರಾಧೇಯ ಕಡೆಗೆ ದಿಟ್ಟಿಸಿ.......

ನಗುವ ತುಟಿಯಂಚಿನಲ್ಲಿ ಮಧುವಾಗಿ ಕರಗಳು ಪರಿತಪಿಸಿದನು ಆ ನವನೀತ ಚೋರನು.........

ಎಳೆದು ಆ ರಾಧೆಯ ತನ್ನ ಬದಿಗೆ ಎದೆಬಡಿತ ಕೇಳುತ್ತ ನಿಂತನು ಆ ಎದೆಯು ಜಪಿಸುತ್ತಿರುವ ತನ್ನ ನಾಮವ ಕೇಳಿ ಬೆರಗಾಗಿ ತನ್ಮಯನಾದನು ತನ್ನಲ್ಲಿ ತಾನೇ........

- ಚುಕ್ಕಿ

24 May 2017, 08:07 pm