Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬದುಕೆಂಬ ಅಂಗಡಿಯಲ್ಲಿ
ಭಾವನೆಗಳನ್ನು ಮಾರಾಟಕ್ಕಿಟ್ಟರೆ
ಮೊದಲು ಮಾರಟವಾಗುವುದು ಸಂತೋಷ...
ನಮ್ಮ ಜೊತೆಗಿರುವುದು ದುಃಖ
ಬೆಳೆಕಟ್ಟಲಾಗುವುದು ಪ್ರೀತಿ.........
ಕೊನೆಗೆ ನಮ್ಮ ಜೊತೆಗೂಳಿಯುವುದು ನೆನಪು..........
ಕೊನೆಗೆ ಉಳಿದ ಕಹಿ ನೆನಪುಗಳನ್ನು ಇಟ್ಕೊಂಡು ಜೀವನದ ಬಗ್ಗೆ ಮೂಡಿದ ಬೇಜರಾದ ಉಳಿದ ಕಾಲ ಕಳೆಯೋದು ಜೀವನ........
ನಮ್ಗೆ ಇಷ್ಟ್ ಅದವರು ನೊಂದುಕೊಳ್ಳಬಾರದು ಅಂತ ನಗುವನ್ನು ನಟಿಸಿ ದಿನಬೆಳಗಾದರೆ ಮನಸಲ್ಲಿ ಅಳುತ್ತಾ ಬದುಕುವುದೇ ಸರೀನಾ...............
- ಚುಕ್ಕಿ
27 May 2017, 02:06 pm
ಸಣ್ಣ ಸಣ್ಣ ನೋವುಗಳಿಗೂ ನೊಂದು
ಅಮ್ಮನ ಮಡಿಲ ಸೇರಿ
ಮೊಗವ ತೋರದೆ ಅತ್ತ ಕ್ಷಣಗಳು ನೆನಪಿನಲ್ಲಿ ಇಟ್ಟಿರುವೆ....
ಯಾರೇನೊ ಎಂದರೆಂದು ಕಣ್ಣಾಲಿಗಳಲಿ ನೀರು ತುಂಬಿ
ಅಮ್ಮನ ಮುಖವ ನೋಡುತ ನಿಂತಾಗ
ಕಣ್ಣಲ್ಲೆ ಕಣ್ಣೀರ ಒರೆಸಿದ ನೆನಪುಗಳ ಮರೆಯಲಾರದಾಗಿರುವೆ...
ಕಂಡ ನೋವುಗಳ ಲೆಕ್ಕವಿಟ್ಟಿಲ್ಲ
ಮಾಡಿದ ಅಪಮಾನ ಅನುಮಾನಗಳ ನೆನಪಗಳು ನನ್ನ ಬಿಟ್ಟಿಲ್ಲ
ಸೋಲುಗಳೆಲ್ಲ ಜೀವನದ ಮುಖವ ತೋರಿಸುವ ಪಾಠವಾಗಿ ಕಲಿತಿರುವೆ....
ಮನಸಲಿ ಅಗ್ನಿಪರ್ವತವೇ ಹೊತ್ತಿ ಉರಿಯುತ್ತಿದ್ದರು
ಕಣ್ಣಲಿ ನದಿಯೆ ಹರಿದು ಹೋಗಲುಕಾಯುತ್ತಿದ್ದರು
ಅಮ್ಮನ ಮಡಿಲ ಸೇರದೆ ಅವಳಿಗೆ ನಾ ಧೈರ್ಯವಂತೆಯಾಗಿರುವೆ ಎಂದು ನೆಮ್ಮದಿ ಕೊಟ್ಟಿರುವೆ .....
ನೋವುಗಳೆಲ್ಲ ಏನೇನು ಅಲ್ಲವೆಂಬಂತೆ ಕಾಣುವ ಸ್ಥೈರ್ಯವಿಲ್ಲ
ಕಣ್ಣಂಚಲಿ ಅವು ಬಂದು ಜಾರದಂತೆ
ಮರೆಮಾಚಿ ನಗುತ ಎಲ್ಲವ ಮರೆಸುವುದ ಕಲಿತಿರುವೆ ...
ಕಣ್ಣ ಹನಿಗಳಲಿ ಅವುಗಳು ಬಾರದಂತೆ ಬೀಗ ಜಡಿದು
ನಗುವುದ ಕಲಿತು , ನಗಿಸುವುದ ಕಲಿಯುತ್ತಿರುವೆ
ಅದರೊಳಗೆ ಕಾಣದ ಮುಖವ ಅವಿತಿಡುವುದ ಕಂಡುಕೊಂಡಿರುವೆ
ಆದರೆ ನನ್ನ ಮನಸೊಳಗೆ ಅವುಗಳು ಪ್ರವಾಹಿಸಿ ಕಾಡಿಸುವುದ ತಡೆಯಲಾರದೆ ಸೋತಿರುವೆ....
- ಶ್ರೀಕಾವ್ಯ
27 May 2017, 01:25 pm
ಗೆಳೆಯ
ನಾ ನಿನಗೆ
ಇಷ್ಟವಿಲ್ಲವೆಂದರೆ
ಹೇಳಿಬಿಡು.
ಹೊರತು,
ನಾನು ಅಲ್ಲದ
ನನ್ನನ್ನು
ಸೃಷ್ಟಿಸಿಬೇಡ.
ಕಣ್ಣೀರನ್ನು
ನಿನ್ನ ನೆನಪಿನ
ಚಿತೆಗೆ
ಹಾಕಿಬಿಡುವೆನು.
ಹೊರತು,
ನಿನ್ನ ಮಾತುಗಳಿಗೆ
ಕೊರಗಿ
ಸಾಯಲಾರೆನು.
- ಅಕ್ಷತ
27 May 2017, 12:34 pm
ಆವ ಶುಭಕಾರ್ಯವಿಹುದಿಂದು
ಇನಿತು ಹೂ ತಂದಿರುವಿರೆಂದು
ಸಂದೇಹದಿ ಇನಿಯನ ಕೇಳಲು
ಸನಿಹ ಬಂದ.... ಇನಿಯನು
ನಿನ್ನ ಮುತೈದೆಯಾಗಿ ನೋಡುವಾಸೆ
ಏಕೋ.... ಮೂಡಿದೆ ಮನಕಿಂದು
ಎಂದು ನೋವಿನಿಂದ ನುಡಿದನಂದು...
ಮಡದಿ- ಮಕ್ಕಳ ಕಡೆಗೆ
ಮಂದಹಾಸದಿ ಕೈ- ಬೀಸಿ
ನಡೆದನು ಗೆಳೆಯನ ಒಡಗೂಡಿ
ಮರಳಿ ಬಾರದ ಲೋಕಕ್ಕೆ
ಕಣ್ಣಿಗೆ ಕಾಣದ ಊರಿಗೆ
ನಂಬಿದವರ ಬಾಳಲ್ಲಿ
ಬಿರುಗಾಳಿ ಎಬ್ಬಿಸಿ......,,,,?
ಮನೆಯೆ ದೇವಾಲಯವೆಂದು
ಇನಿಯನೆ ದೇವರೆಂದು......
ಬಾಳು ಸಾಗಿಸಿದವಳಾಕೆ
ಲೋಕದ- ವ್ಯವಹಾರಕ್ಕೆ
ದೂರವಿದ್ದವಳಾಕೆ......?
ಬಂಧುಗಳಿಗೆಲ್ಲ ಬಾರವಾದಳು
ಇಳೆಯೊಳಗೆ ಒಬ್ಬೊಂಟಿಯಾದಳು
ಕರುಳ- ಬಳ್ಳಿಗೆ ನೆರಳಾಗಿ
ಬಾಳುವ ಛಲ ತೊಟ್ಟಳು
ಸವಾಲುಗಳ ಸಾಗರದಲ್ಲಿ
ಮುಳುಗಿ- ತೇಲುವದ
ಕರಗತ ಮಾಡಿಕೊಂಡು ಮನ್ನುಗ್ಗುತಿರುವಳು.......
ಮುಕ್ತಿಯ ಅರಸಿಕೊಂಡು......
ಶಾರಧ
- ಶಕುಂತಲಾ
27 May 2017, 12:02 pm
ಚಳಿಯಾಗಿದೆ ನನ್ನ ಹೃದಯಕೆ
ನಿನ್ನ ಉಸಿರಾ ಬಿಸಿ ತಾಪವಿಲ್ಲದೆ ಜೊತೆಗೆ.............
ಬಚ್ಚಿಡು ನನ್ನ ನಿನ್ನ ಹೃದಯದಲ್ಲಿ ಗಾಳಿ ತಾಗುವ ಮುನ್ನಾ...........
ಅಲ್ಲಿರುವ ನನ್ನ ಛಾಯೆಯನ್ನು ಕೇಳಿ ಬರುವೇ ಒಂದು ಕ್ಷಣವಾದರು ನಿನ್ನನ್ನು ಮರೆತನಾ ನೆನೆಯದೆ ಎಂದು......
ಅಲ್ಲಿಂದ ಹೋಗಬೇಡವೆಂದು ಹಠ ಹಿಡಿಯಬೇಡ ಏಕೆಂದರೆ ಅಲ್ಲಿ ನನ್ನ ಜೊತೆ ನಾ ಕುಳಿತರೆ ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವವರ್ಯಾರೋ ಬಂಗಾರ ನಾನಿಲ್ಲದೆ.......
ಮಲಗಿರುವಾಗ ಮುದ್ದಾದ ಮಗು ನೀನು ,
ಎದ್ದ ಮೇಲೆ ತುಂಟ ಹುಡುಗ ನೀನು ,
ನೋವಿನಲ್ಲಿದ್ದಾಗ ಸ್ನೇಹಿತನು ನೀನು .....
ನನ್ನ ಜೊತೆ ನಾನಿದ್ದಾಗ ನನ್ನ
ಹೃದಯದ ಬಡಿತ ನೀನು,
ನನ್ನನ್ನು ನಾನಾಗಿ ಪ್ರೀತಿಸುವ ಪ್ರೀಯವಾದ ಪ್ರೇಮಿಕನು ನೀನು........
ಒಂದು ಸೆಕೆಂಡಿಗೊಮ್ಮೆ ಕಣ್ಣ ರೆಪ್ಪೆಯು ಮುಚ್ಚಿ ತಗಿಯುತ್ತೆ ಯಾಕೆ ಗೊತ್ತಾ ಅದರಲ್ಲಿವ ನಿನಗೆ
ಈ ಜಗವ ಜಾಗ್ರತ್ತೆಯಿಂದ ತೋರಲು ಮತ್ತೆ ನಿನ್ನ ರೂಪವನ್ನು ಎಲ್ಲಿಗೂ ಹೋಗದಂತೆ ನನ್ನಲ್ಲೇ ಬಚ್ಚಿಡಲು.......
- ಚುಕ್ಕಿ
27 May 2017, 11:11 am
ಬಯಸಿದ್ದು ಸಿಗಲಿಲ್ಲ ,
ಸಿಕ್ಕಿದು ಹಿಡಿಸಲಿಲ್ಲ,
ಹಿಡಿಸಿದ್ದು ನನ್ನ ಬಳಿ ಬರಲಿಲ್ಲ ,
ಬಳಿ ಬಂದ ಪ್ರೀತಿಗೆ ನಾ ದೂರವದೆ ,
ದೂರವಾದ ಪ್ರೀತಿಗೆ ಹಂಬಲಿಸುವಂತಾಯಿತು.
ನಾ ನಿನ್ನ ಎಷ್ಟು ಹಂಬಲಿಸಿದರು ,ಕೂಗಿ ಕರೆದರು ನೀ ಮರಳಿ ಬರಲೇ ಇಲ್ಲ ............
ಕಾರಣ ನೀ ಮತ್ತೆ ಬಾರದ ಚುಕ್ಕಿ ತಾರೆಯ ನಕ್ಷತ್ರವಾಗಿರುವೆ.........
ನೀ ಏಕೆ ನನಗೆ ಸಿಗಲಿಲ್ಲ.........
- Acchu love
27 May 2017, 09:41 am
ಕಡಲ ಒಡಲೆಲ್ಲ ವಿಷವೇ ತುಂಬಿಹಿದು
ಪ್ರೀತೀಯ ಅಮೃತವೆಲ್ಲಿಂದ ತರಲಿ?
ಮನದ ಬೇಗುದಿಯ ಪ್ರಶ್ನೆಗೆ
ಉತ್ತರ ಎಲ್ಲೆಂದು ಹುಡಕಲಿ?
ನಿನ್ನದೇ ಪ್ರಶ್ನೆಗೆ ನೀನೆ ಉತ್ತರ
ನನ್ನದೇನಿದ್ದರು ಮೌನ ನಿರಂತರ.
- ಶಶಿಧರ ಹೆಚ್ ಎನ್
26 May 2017, 10:21 pm
ನಿನ್ನ ನಯನಗಳ
ಅಂದಕೆ ಮನಸೋತು
ನಿಶೆಯು
ಕಾಡಿಗೆಯಾಗಿ
ಕಣ್ ತಂಪಾಗಿಸಿದ
ಇರುಳು...
- Indushekar Chinivar
26 May 2017, 09:38 pm
" ಅಂದು!
ಊರೊಳಗೆ?
ಸೇದಿ-ಕುಡಿಯುತ್ತಿದ್ದರು!
ಬಾವಿ-ನೀರು.
ಇಂದು!
ಬಾರೊಳಗೆ?
ಸೇದಿ-ಕುಡಿಯುತ್ತಿದ್ದಾರೆ!
ಸಿಗರೇಟ್-ವಿಸ್ಕಿ-ಬೀರು."
ಬರಹ
ರಾಮಪ್ಪ ದುಮ್ಮಾಡಿ
HRD@BELLARY
- RAMAPPA DUMMADI
26 May 2017, 09:17 pm
ಮುಖವಾಡಹೊತ್ತು ತಿರುಗುವ
ನಟನೆಯಲ್ಲಿ ಹುಸಿನಗೆಯ ತೋವರ
ಜನರ ವೈಖರಿಯನ್ನು ನಂಬಲಾರೆನು
ಮತ್ತೆ ನಗು ನಗುತ್ತಾ ಅವರ ಬಳಿ ಮಾತನಾಡಲಾರೆನು...........!!!!!
ಸ್ವಾರ್ಥಪೂರಿತ ಮನುಷ್ಯರೆಲ್ಲಾ
ಇತರರನ್ನು ತುಳಿದು ಹಾಕಿ
ಶ್ರೇಷ್ಠರೆಂಬ ಪಟ್ಟಕಟ್ಟಿಕೊಂಡಿರುವ
ಕೀರ್ತಿಪತಾಕೆಯೊತ್ತು ತಿರುಗುವ ಘನತೆಯ
ನಾನು ನೋಡಲಾರೆನು.........!!!!!
ನಂಣ್ಮುಂದೆ ನಗುನಗುತ್ತಾ ಹೇಳುವರು
ನಿಜವಲ್ಲದ ನಿಜವನ್ನು
ಇತರರಲ್ಲಿ ಹೇಳುವರು ನನ್ನ ಬಗ್ಗೆಯೇ
ನಿಜವಲ್ಲದ ಸುಳ್ಳನ್ನು ..............!!!!!
ಒಬ್ಬೊಬ್ಬರಿಗೆ ಒಂದೊಂದು ಮಾತು
ಅವರ ಕಿವಿಗಳು ಕೇಳಬಯಸುವ ಮಾತು
ಅದು ನಿಜವಾದರೂ ಸರಿ ಮಿಥ್ಯಾವಾದರು
ಸರಿ...........!!!!!
ಯಾರ ಬಳಿಯಾದರು ನೀನು ನೀನಾಗಿರು
ಸತ್ಯಕ್ಕೆ ತಲೆಬಾಗುವ ಉತ್ತಮ ಗುಣಹೊಂದಿರು
ಲೋಕವೆಲ್ಲಾ ನಿನಗೆ ವಿರುದ್ಧವಿದ್ದರು
ನೀನು ನಿನ್ನತನವನ್ನು ಎಂದಿಗೂ ಕಳೆದುಕೊಳ್ಳದಿರು...........!!!!!
- ಚುಕ್ಕಿ
26 May 2017, 08:49 pm