ಕಂಡ ಕನಸುಗಳ ಜೀವಿಸುವ ಮೊದಲೇ
ಮುನಿದೆ ನೀ , ದೂರಾದೆವು ನಾವು
ನಿನ್ನ ನೆನಪುಗಳೆ ತುಂಬಿವೆ ಎದೆಯಲ್ಲಿ
ನಿನ್ನೊಡನೆ ಕಳೆದ ಸುಂದರ ಕ್ಷಣಗಳ ಜೊತೆ
ಅಲೆಯುತ್ತಿರುವೆ ನಿಶ್ಶಬ್ದವಾಗಿ
ಮನದ ಓಣಿಯಲಿ
ದುಃಖದ ಮಡುವಿನಲಿ
ಈ ಏಕಾಂತವು ನನ್ನ ಜೀವ ಹಿಂಡುವುದು
ದಾರಿ ತಪ್ಪಿರುವೆ ,
ಮರೆತಿರುವೆ ಬಾಳ ಗಮನವ
ಹೇಳು ನೀ..
ಹೇಗೆ ಸಾಗಿಸಲಿ ಈ ಜೀವನ ನಾವೆಯ
ತಂಗಾಳಿಯಾಗಿ ನೀನಿಲ್ಲದೆ ?
ಯೌವನದ ಋತುಗಳು ಮರಳಿವೆ ಸುಮ್ಮನೆ
ಏಕಾಂತದ ಮೌನ ಹಾದಿ ಸವೆದಿದೆ ಮೆಲ್ಲನೆ
ನಿನ್ನ ಮರೆಯಲು ಯತ್ನಿಸುವೆ
ಆದರೂ ಒಲವೇ..
ಮರೆವಿನ ಸುಳಿಗೆ ಸಿಲುಕಿದರೂ
ನಿನ್ನ ನೆನಪಿನ ಉಸಿರು ಜೀವತುಂಬುವುದು
ಮರೆತಾದರೂ ನಿನ್ನ ಮರೆಯಲಾಗದು
ಕಾರಣ..
ನೀ ನನ್ನ ದೇವತೆ
ನೀನೇ ನನ್ನ ಜೀವನ.
ಚಂದಿರ ನೀ ಆಗುವೆಯ ನನ್ನ ಗೆಳೆಯ
ಈ ಕತ್ತಲ ರಾತ್ರಿಗೆ ತೋರುವೆಯ ದಾರಿಯ
ಒಪ್ಪಿ ಕೊಳ್ಳಲಾರೆನು ನಾನು ಸೋಲ
ಕೊಡುವೆಯ ನಿನ್ನ ಕಾಂತಿಯ ಕೊಂಚ ಸಾಲ
ಎಲ್ಲರಿಗೂ ಕಾಣಸಿಗುವುದು ನಾ ಕಂಡ ಸೋಲುಗಳು
ಎಸೆಯುವರು ಗಾಸಿ ಮಾಡುವ ಮಾತಿನ ಕಲ್ಲುಗಳು
ಇಲ್ಲವಾಗಿವೆ ಮನಸನರಿತು ಮುನ್ನಡೆಸುವ ಮನಸುಗಳು
ನಾ ಬದುಕಲಿ ಗಟ್ಟಿಯಾಗಬೇಕು ಖಾಲಿಯಾಗುವ ಮುನ್ನ ಕನಸುಗಳು
ಸೋಲುಗಳಾಗಬಹುದು ಬಾಳಿಗೆ ಕಪ್ಪು ಛಾಯೆ
ಆಗಬಹುದೆ ಸೋಲುಗಳೇ ಮುಂದಿನ ಬದುಕಿಗೆ ಮಾಯೆ
ಕಾಯುತಲೆ ಇರುವೆ ನೋಡಲೊಮ್ಮೆ ನಾನಾಗಬಹುದು ವಿಜಯೆ
ಆ ಗೆಲುವ ನೋಡದೇನೆ ನಾನು ಸಾಯೆ
ಚಂದ್ರನೆ ನಿನ್ನಳೊಗಿದ್ದರು ಅಷ್ಟು ಕಪ್ಪು ಕಲೆಗಳು
ಮರೆಸಿ ಕದ್ದಿರುವೆ ನಿನ್ನ ಕಾಂತಿಯಲೆ ಮನಸುಗಳು
ನಾನೂ ಕಲಿಯಬೇಕಿದೆ ನೋವ ಮರೆಯುವ ಕಲೆಯ
ಒಮ್ಮೆ ಕೆಳಗಿಳಿದು ಬಂದು ಆ ರಹಸ್ಯವ ಕಲಿಸೆಯ
ನಾನು ಈ ಜಗದೊಟ್ಟಿಗೆ ಸೇರಬೇಕು ನಗುವಿನಲೆ ಆಗಿ ತನ್ಮಯ
ಸುಮ್ಮನಿರು ಕಣ್ಣೀರೆ …ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ…..
ನಿನ್ನ ಅಳು ವ್ಯರ್ಥ ಸುಮ್ಮನಿರು……
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ …
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು….
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು….ಕಣ್ಣೀರೆ ನೀ ಸುಮ್ಮನಿರು……………………………….