ರಾಮ ದಂಡಿಸಿದ ಸೂರ್ಪನಕಿಯ
ಕತ್ತರಿಸಿ ಅವಳ ಮೂಗು ಕಿವಿಯ
ನೆನೆದು ತಾನುಂಡ ನೋವಿನ ಕಹಿಯ
ಬಂದಳು ಸಹೋದರನಲಿ, ಅವನು ಲಂಕೆಗೆ ಒಡೆಯ
ಕಂಡನು ದಶಮುಖ ಒಡಹುಟ್ಟಿದವಳ ಸ್ಥಿತಿಯ
ರಾಮನಿಗೆ ಕಲಿಸುವೆನು ಪಾಠವನೆಂದು ಇತ್ತನು ಭಾಷೆಯ
ಕಳುಹಿಸಿದ ರಾವಣ ಮಾರೀಚನ ಮಾಡಿ ಬಂಗಾರ ಜಿಂಕೆಯ
ಸೋತಳು ಜಾನಕಿ ನೋಡಿ ಮಾಯ ಮರೀಚಿಕೆಯ
ನಡೆದನು ರಾಮ ಜಿಂಕೆ ಹರಸಿ ಸಮಾಧಾನಿಸಲು ಮನದರಸಿಯ
ಕೊಟ್ಟು ಲಕ್ಷ್ಮಣನಿಗೆ ಅವಳ ಕಾಯುವ ಹೊಣೆಯ
ಕೊಲ್ಲಲು ರಾಮ ಜಿಂಕೆಯ, ಮಾರೀಚ ಕೂಗಿರಲು ರಾಮನಂತೆ ಲಕ್ಷ್ಮಣ ಸೀತೆಯ
ಜಾನಕಿ ಕಳುಹಿಸಿದಳು ಲಕ್ಷ್ಮಣನ ನೋಡಿ ಬರಲೆಂದು ಅಣ್ಣನ ಇತ್ತು ಆಜ್ಞೆಯ
ಹೊರಟನು ರಾಮನ ಅನುಜ ಎಳೆದು ಲಕ್ಷ್ಮಣ ರೇಖೆಯ
ಇತ್ತ ಕಂಡಳು ಜಾನಕಿ ಸನ್ಯಾಸಿಯ
ದಾಟಿದಳು ರೇಖೆಯ ಕೊಡಲು ಭಿಕ್ಷೆಯ ಅರಿಯದೆ ಸನ್ಯಾಸಿ ಅಲಂಕೃತ ಕಪಟಿಯ
ಹೊತ್ತೊಯ್ದನು ದಶಕಂಠ ರಾಮನ ಅರಸಿ ಮೈಥಿಲಿಯ
ಸೆರೆಯಾಗಿಸಿದನು ರಾವಣನ ಅಯೋಧ್ಯೆಯ ರಾಣಿಯ
ಅಶೋಕವನದ ಮರಗಿಡಗಳ ಹೊರತು ಯಾರಿರಲಿಲ್ಲ ಕೇಳಲವಳ ವ್ಯಥೆಯ
ಅನುಭವಿಸಿದಳು ನೋವ ಕಂಡು ಅವಳ ಮೇಲಿನ ದಶಕಂಠನ ಆಸೆಯ
ಹುಡುಕಿದನು ರಾಮ ಅವಳ, ಪಡೆದು ಹನುಮಂತನ ಸೇವೆಯ
ಕಟ್ಟಿದರು ರಾಮಸೇತುವ ಪಡೆದು ಕೋತಿ ಸೇನೆಯ ಸಹಾಯ
ರಾವಣನ ಕೊಂದು ಬಿಡಿಸಿದನು ಸೆರೆಯಿಂದ ಸೀತೆಯ
ಆದರೂ ಕಾಪಾಡಲಿಲ್ಲ ರಾಮನ ಪ್ರೀತಿ ಜಾನಕಿಯ
ಸಾಬೀತು ಮಾಡಲೆ ಬೇಕಾಯಿತು ಅವಳನ್ನೆ ಅವಳು ಪ್ರವೇಶಿಸಿ ಅಗ್ನಿಯ
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ನಿನ್ನ ನಗುವ ಕಂಡು
ನನ್ನ ನೋವು ಮರೆತೆನೇ
ಆ ನಗುವು ಕೂಡ ಬಾನಿಗೆ ಹಾರಿತೆ
ನಾ ಸೋತಲೆಲ್ಲಾ
ಆ ಕಣ್ಣಲ್ಲಿ ಕಂಬನಿ ಜಾರಿತೆ
ಈ ಕಂಬನಿಯೇ ನನ್ನ ಸ್ಪೂರ್ತಿಯಾಯಿತೆ
ಆ ಸ್ಪೂರ್ತಿ ಕೂಡ ಇಂದು ಕಾಣದಾಯಿತೆ
ನನ್ನ ಮೌನವೆಲ್ಲಾ ನೀನು ತಿಳಿದುಕೋಂಡೆಯೇ
ನಿನ್ನ ಮಾತು ನನ್ನ ಖುಷಿಯ ಪಡಿಸಿತೇ
ಆ ಮಾತೇ ಇಂದು ನನ್ನ ದೂರ ತಳ್ಳಿತೇ
ರೂಪದಲ್ಲಿ ನನ್ನ ಬಿಂಬ ಅವಳು
ಮಾತಿನಲ್ಲಿ ನನ್ನ ಜವಳಿ ಅವಳು
ಇಂದು ನನ್ನವಳೇ ನನ್ನ ಬಿಟ್ಟು ಹೋದಳೇ
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ನೀನು ನನ್ನವಳು ಎಂಬ ಆಸೆಯೋಂದು
ಕನಿಸಿನಲ್ಲಿ ಚಿಗುರು ಹೋಡೆಯಿತೇ
ಮನದಲ್ಲಿ ಹೂವು ಅರಳಿತೇ
ಆ ಹೂವ್ವಿಗೇನೆ ಕೋಳ್ಳಿಯಿಟ್ಟು
ನನ್ನವಳು ಹೋರಟು ಹೋದಳೇ
ಸಾವು ಬಂದು ತಲೆಯ ಮೇಲೆ ಕುಂತಿದೆ
ಆ ಸಾವಿಗೇನೆ ಹೇಳಿಬಿಡಲೇ
ಒಮ್ಮೆ ನನ್ನವಳ ಬಳಿ ಹೋಗಿಬರುವೆ
ಆ ಸಾವು ಕೂಡ ಬಿಟ್ಟು ಕೋಟ್ಟಿತೇ
ನನ್ನವಳೇ ನನ್ನ ಬಳಿ ಬರದೇ ಹೋದಳೇ
ಸಾವಿನ ಜೋತೆ ಇಂದು ನಾನು ಹೋಗಿ ಬಿಡಲೇ.....
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ......
ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....
ಬೇರಿದ್ದರೆ ಮರವುಂಟು
ಮರವಿದ್ದರೆ ಕೋಂಬೆಯುಂಟು
ಕೋಂಬೆಯಿದ್ದರೆ ಎಲೆ ಉಂಟು
ಎಲೆಯಿದ್ದರೆ ಹೂವು ಉಂಟು
ಹೂವುಯಿದ್ದರೆ ಕಾಯಿ ಉಂಟು
ಕಾಯಿಯಿದ್ದರೆ ಹಣ್ಣು ಉಂಟು
ಹಣ್ಣುಯಿದ್ದರೆ ಬೆಲೆ ಉಂಟು
ಈ ಬೆಲೆಗಾಗಿ ಹೋರಾಡುವ ನಿನ ಬದುಕು
ಎಂಥದೋ ಒ ಮನುಸಾ.....
ವಿದ್ಯೆಯಿದ್ದರೆ ಜ್ನಾನ ಉಂಟು
ಜ್ನಾನವಿದ್ದರೆ ಕೆಲಸ ಉಂಟು
ಕೆಲಸವಿದ್ದರೆ ದುಡ್ಡುಂಟು
ದುಡ್ಡಿದ್ದರೆ ಬಂದುಗಳು ಉಂಟು
ಬಂದುಗಳಿದ್ದರೆ ಖರ್ಚುಂಟು
ಖರ್ಚಿದ್ದರೆ ದುಡ್ಡಿನ ಆಸೆಉಂಟು
ಆಸೆಯಿದ್ದರೆ ಸ್ವಾರ್ಥ ಉಂಟು
ಆ ಸ್ವಾರ್ಥದ ನಿನ ಬದುಕು
ಎಂಥದೋ ಒ ಮನುಸಾ........
ನೆಲೆಯಿದ್ದರೆ ಕಾಳುಂಟು
ಕಾಳುಯಿದ್ದರೆ ಕೂಳೂಂಟು
ಕೂಳುಯಿದ್ದರೆ ಆಳುಂಟು
ಆಳುಯಿದ್ದರೆ ದರ್ಪ ಉಂಟು
ದರ್ಪಯಿದ್ದರೆ ಅಹಂ ಉಂಟು
ಅಹಂಬಿಟ್ಟರಂ ನೀನುಂಟು
ನೀನುಯಿದ್ದರೆ ಸ್ನೇಹ ಉಂಟು
ಸ್ನೇಹಯಿದ್ದರೆ ಸೇವೆ ಉಂಟು
ಸೇವೆಯಿದ್ದರೆ ನಿನ್ನ ಹೆಸರುಂಟು
ಆ ಹೆಸರು ಮಾಡದ ನಿನ ಬದುಕು
ಎಂಥದೋ ಒ ಮನುಸಾ...
ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....
ಹೊರಟಿರುವೆ ತುಂಬಾ ದೂರ ನೀನು
ಕೈ ಸೇರಿದ್ದ ಪ್ರೀತಿ ಜಾರಿ ಹೋಯಿತೇನು
ಹೊರಟಾಗ ಕೂಗಿ ಕರೆಯಲು ಮಾತೆ ಬಾರದಾಯಿತಲ್ಲ
ನೀ ಹೊರಟ ಮೇಲೆ ಮನಸಿನ ನೋವು ಹೇಳಿತೀರುವುದಲ್ಲ
ನುಡಿದೆ ಮಾತು ಅರಿಯದೆ ಮನಸ
ಮಾತಲ್ಲೆ ಕೊಂದೆಯಲ್ಲ ನನ್ನೆಲ್ಲ ಕನಸ
ಮನಸ ಅರಮನೆಗೆ ಅರಸಾದವನು ನೀನೆನೆ
ಅಲ್ಲಿ ಈಗ ಇರುವುದೆಲ್ಲ ಸ್ಮಶಾನ ಮೌನನೆ
ಸೋತ ಮನಸು ಮತ್ತೆ ಕರೆಯದೆ ಬೀಳ್ಕೊಟ್ಟಿದೆ ನಿನ್ನನು
ನಿನ್ನೆಲ್ಲ ನೆನಪುಗಳು ಎಡಬಿಡದೆ ಕಾಡುತಿವೆ ನನ್ನನು
ತಿರುಗಿ ನೋಡದೆ ಜಾರುತಿದ್ದ ಕಣ್ಣಹನಿಯ ಕಾಣದೆ ಕುರುಡಾದೆ ನೀನು
ನನ್ನೆಲ್ಲ ಭಾವವ ತಿಳಿಸಿ ಹೇಳಲಾಗದೆ ಮೂಕಿಯಾದೆ ನಾನು
ನೀ ಸಾಗುವಾಗ ಮನಸು ಕಂಡ ನೋವಿಗೆದರಿ ಕಲ್ಲಾಯಿತಲ್ಲ
ನೀನಿರದೆ ಈ ಜೀವವು ಕ್ಷಣಕ್ಷಣಕು ಬರಡಾಗುತಿದೆ ನಲ್ಲ
ನಿನ್ನಲೂ ತುಂಬಿದೆ ಈ ಬೀಳ್ಕೊಡುಗೆಯ ನೋವು
ಬರಬಾರದಿತ್ತೆ ನಗುತ ನಾವು ಜೊತೆ ಇದ್ದಾಗಲೆ ಆ ಸಾವು
ಕಾಯುತಿರುವೆನು ಕಾಲ ಸರಿದರು ನಿನ್ನ ಹಾದಿಯನೆ ನಾನು
ಮತ್ತೊಮ್ಮೆ ತಿರುಗಿ ನೆನೆದು ಇತ್ತ ಬಂದು ಬಿಡು ನೀನು
ಒಡೆದ ಮನಸುಗಳು ತಿಳಿಯಲಿ ದೂರ ಇರುವ ನೋವು
ಇನ್ನೆಂದು ದೂರ ಸರಿಯದಂತೆ ಇರಲಿ ನಮ್ಮ ಮನವು
ಮತ್ತೆ ಸೇರಿ ಜೊತೆಯಾಗಿ ಬಾಳುವ ಕರೆಯುವರೆಗೆ ಸಾವು