Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀರವ ಇರುಳ ಅಪ್ಪುಗೆಯಲಿ..

ದೂರ ಸರಿದರೂ ಕಾಡುವೆ
ನೀ ಏಕಾಂತದಲಿ
ಹರಿದಿದೆ ಕಂಬನಿಯ ಧಾರೆ
ನೆನೆಯುತ ನಿನ್ನ ವೇದನೆಯಲಿ
ಮರೆಯಲಾಗದೆ ನಾ
ಮುಳುಗಿರುವೆ ಮತ್ತಿನಲಿ

ತಾಳ ತಪ್ಪಿದ ಎದೆಯ
ಭಾವಗಳ ಸಂತೈಸಲು
ಮಾತಿಗೆಳೆಯುವೆ ತಾರೆಗಳ
ಹೆಪ್ಪುಗಟ್ಟಿದ ಮೌನದಲಿ
ನೀರವ ಇರುಳ ಅಪ್ಪುಗೆಯಲಿ..

- Indushekar Chinivar

31 May 2017, 10:21 pm

ಸೀತೆ...

ರಾಮ ದಂಡಿಸಿದ ಸೂರ್ಪನಕಿಯ
ಕತ್ತರಿಸಿ ಅವಳ ಮೂಗು ಕಿವಿಯ
ನೆನೆದು ತಾನುಂಡ ನೋವಿನ ಕಹಿಯ
ಬಂದಳು‌ ಸಹೋದರನಲಿ, ಅವನು ಲಂಕೆಗೆ ಒಡೆಯ
ಕಂಡನು ದಶಮುಖ ಒಡಹುಟ್ಟಿದವಳ ಸ್ಥಿತಿಯ
ರಾಮನಿಗೆ ಕಲಿಸುವೆನು ಪಾಠವನೆಂದು ಇತ್ತನು ಭಾಷೆಯ
ಕಳುಹಿಸಿದ ರಾವಣ ಮಾರೀಚನ ಮಾಡಿ ಬಂಗಾರ ಜಿಂಕೆಯ
ಸೋತಳು‌ ಜಾನಕಿ ನೋಡಿ ಮಾಯ ಮರೀಚಿಕೆಯ
ನಡೆದನು ರಾಮ ಜಿಂಕೆ ಹರಸಿ ಸಮಾಧಾನಿಸಲು ಮನದರಸಿಯ
ಕೊಟ್ಟು ಲಕ್ಷ್ಮಣನಿಗೆ ಅವಳ ಕಾಯುವ ಹೊಣೆಯ
ಕೊಲ್ಲಲು ರಾಮ ಜಿಂಕೆಯ, ಮಾರೀಚ ಕೂಗಿರಲು ರಾಮನಂತೆ ಲಕ್ಷ್ಮಣ ಸೀತೆಯ
ಜಾನಕಿ ಕಳುಹಿಸಿದಳು ಲಕ್ಷ್ಮಣನ ನೋಡಿ ಬರಲೆಂದು ಅಣ್ಣನ ಇತ್ತು ಆಜ್ಞೆಯ
ಹೊರಟನು ರಾಮನ ಅನುಜ ಎಳೆದು ಲಕ್ಷ್ಮಣ ರೇಖೆಯ
ಇತ್ತ ಕಂಡಳು ಜಾನಕಿ ಸನ್ಯಾಸಿಯ
ದಾಟಿದಳು ರೇಖೆಯ ಕೊಡಲು ಭಿಕ್ಷೆಯ ಅರಿಯದೆ ಸನ್ಯಾಸಿ ಅಲಂಕೃತ ಕಪಟಿಯ
ಹೊತ್ತೊಯ್ದನು ದಶಕಂಠ ರಾಮನ ಅರಸಿ ಮೈಥಿಲಿಯ
ಸೆರೆಯಾಗಿಸಿದನು ರಾವಣನ ಅಯೋಧ್ಯೆಯ ರಾಣಿಯ
ಅಶೋಕವನದ ಮರಗಿಡಗಳ ಹೊರತು ಯಾರಿರಲಿಲ್ಲ‌ ಕೇಳಲವಳ ವ್ಯಥೆಯ
ಅನುಭವಿಸಿದಳು‌ ನೋವ ಕಂಡು ಅವಳ ಮೇಲಿನ ದಶಕಂಠನ ಆಸೆಯ
ಹುಡುಕಿದನು ರಾಮ ಅವಳ‌, ಪಡೆದು ಹನುಮಂತನ ಸೇವೆಯ
ಕಟ್ಟಿದರು ರಾಮಸೇತುವ ಪಡೆದು ಕೋತಿ‌ ಸೇನೆಯ ಸಹಾಯ
ರಾವಣನ‌ ಕೊಂದು‌‌‌ ಬಿಡಿಸಿದನು ಸೆರೆಯಿಂದ ಸೀತೆಯ
ಆದರೂ ಕಾಪಾಡಲಿಲ್ಲ‌ ರಾಮನ ಪ್ರೀತಿ ಜಾನಕಿಯ
ಸಾಬೀತು ಮಾಡಲೆ ಬೇಕಾಯಿತು ಅವಳನ್ನೆ ಅವಳು‌ ಪ್ರವೇಶಿಸಿ ಅಗ್ನಿಯ

- ಶ್ರೀಕಾವ್ಯ

31 May 2017, 09:07 pm

ಏತಕೆ.......

ಕಣ್ಣಿಗೆ ಕಾಣದ ನೋವನ್ನು
ಕಣ್ಣು ಸ್ವಾರ್ಥವಿಲ್ಲದೆ ನನ್ನ
ಜೊತೆ ಹಂಚಿಕೊಳ್ಳುವುದ್ಯೆಕೆ............

ನಡಿಗೆ ತಿಳಿಯದ ಕಾಲು
ನನಗಾಗಿ ನಡಿಯುವುದೇಕೆ.......

ಕೆಲಸ ಅರಿಯದ ಕೈ ನನ್ನ ಕೆಲಸ
ಮಾಡುವುದೇಕೆ...........

ನನಗಾಗಿ ಇರುವ ಮನಸ್ಸು
ಇತರರ ಕಷ್ಟಕ್ಕೆ ಸ್ಪಂದಿಸುವುದೇಕೇ........

ಬಂಧಿಸಲು ಆಸೆಯಾಗಿದೆ ನನ್ನ
ನೋವನ್ನು ಬಿರುಗಾಳಿ ಮಧ್ಯೆದಲ್ಲಿ.....

ಮಳೆ ಬರುವ ರಭಸದಲ್ಲಿ ಚಿದ್ರಿಸಿ
ಹೋಗುತ್ತೆ ನನ್ನ ವ್ಯಥೆಯೂ
ಕಣ್ಣಲ್ಲಿ ಉಳಿಯದೆ.........

- ಚುಕ್ಕಿ

31 May 2017, 01:15 pm

ನಾಡು -ಕಾಡು

ನಾಲ್ಕು ಜನ ಮಧ್ಯೆ ಇದ್ದು
ನೊಂದು ಸಾಯುತ್ತ ಬದುಕುವ
ನಾಡಿಗಿಂತ...................

ಯಾರು ಇಲ್ಲದೆ ನಗುತ್ತಾ
ಸಾಯುವ ಕಾಡು ಉತ್ತಮ...............

ನೂರು ಮಾತನಾಡಿ ಬೆಸೆತ್ತು
ನಮ್ಮಲ್ಲೇ ನಾವು ನರಳುವುದಕ್ಕಿಂತ............

ಒಂದು ಮಾತನಾಡದೆ ಮೌನದಲ್ಲಿ
ಮನಸ್ಸಿನ ಜೊತೆ ಮಾತನಾಡುವುದು
ಅತ್ಯುತ್ತಮ..........

ನೋವನ್ನು ಎಲ್ಲರ ಜೊತೆ ಹಂಚಿಕೊಂಡು
ಮನಸ್ಸು ಹಗುರ ಮಾಡಿಕೊಂಡು ಅವರ
ಕರುಣೆಗೆ ಪಾತ್ರರಾಗುವುದಂಕಿಂತ......

ನಮ್ಮಲ್ಲೇ ಇಟ್ಟು ಕಣ್ಣೀರಿನ ಜೊತೆ
ಹೇಳಿಕೊಳ್ಳುವುದು ಶ್ರೇಷ್ಠ.........

ಏಕೆಂದರೆ ಕಂಬನಿಯು ನಮ್ಮಲ್ಲೇ
ಇರುವುದರಿಂದ ಅದಕ್ಕೆ ತಿಳಿಯುತ್ತೆ
ನಮ್ಮ ನೋವಿನ ಅನುಭವ........

ನಲಿವಿನ ಸಂಭ್ರಮ..........

- ಚುಕ್ಕಿ

31 May 2017, 11:44 am

ನನ್ನವಳೇ ನನ್ನ ಕನ್ನಡಿ

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ನಿನ್ನ ನಗುವ ಕಂಡು
ನನ್ನ ನೋವು ಮರೆತೆನೇ
ಆ ನಗುವು ಕೂಡ ಬಾನಿಗೆ ಹಾರಿತೆ
ನಾ ಸೋತಲೆಲ್ಲಾ
ಆ ಕಣ್ಣಲ್ಲಿ ಕಂಬನಿ ಜಾರಿತೆ
ಈ ಕಂಬನಿಯೇ ನನ್ನ ಸ್ಪೂರ್ತಿಯಾಯಿತೆ
ಆ ಸ್ಪೂರ್ತಿ ಕೂಡ ಇಂದು ಕಾಣದಾಯಿತೆ
ನನ್ನ ಮೌನವೆಲ್ಲಾ ನೀನು ತಿಳಿದುಕೋಂಡೆಯೇ
ನಿನ್ನ ಮಾತು ನನ್ನ ಖುಷಿಯ ಪಡಿಸಿತೇ
ಆ ಮಾತೇ ಇಂದು ನನ್ನ ದೂರ ತಳ್ಳಿತೇ
ರೂಪದಲ್ಲಿ ನನ್ನ ಬಿಂಬ ಅವಳು
ಮಾತಿನಲ್ಲಿ ನನ್ನ ಜವಳಿ ಅವಳು
ಇಂದು ನನ್ನವಳೇ ನನ್ನ ಬಿಟ್ಟು ಹೋದಳೇ

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ನೀನು ನನ್ನವಳು ಎಂಬ ಆಸೆಯೋಂದು
ಕನಿಸಿನಲ್ಲಿ ಚಿಗುರು ಹೋಡೆಯಿತೇ
ಮನದಲ್ಲಿ ಹೂವು ಅರಳಿತೇ
ಆ ಹೂವ್ವಿಗೇನೆ ಕೋಳ್ಳಿಯಿಟ್ಟು
ನನ್ನವಳು ಹೋರಟು ಹೋದಳೇ

ಸಾವು ಬಂದು ತಲೆಯ ಮೇಲೆ ಕುಂತಿದೆ
ಆ ಸಾವಿಗೇನೆ ಹೇಳಿಬಿಡಲೇ
ಒಮ್ಮೆ ನನ್ನವಳ ಬಳಿ ಹೋಗಿಬರುವೆ
ಆ ಸಾವು ಕೂಡ ಬಿಟ್ಟು ಕೋಟ್ಟಿತೇ
ನನ್ನವಳೇ ನನ್ನ ಬಳಿ ಬರದೇ ಹೋದಳೇ
ಸಾವಿನ ಜೋತೆ ಇಂದು ನಾನು ಹೋಗಿ ಬಿಡಲೇ.....

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ......

- ಅಗಸ್ತ್ಯ

31 May 2017, 10:08 am

ಸಿಹಿ

ಚಂದ ದ ಈ ಜನ್ಮಕ್ಕೆ
ನಗುವೆಂಬ ದೀಪವ ಹಚ್ಚೀ
ಚಂದ ದ ಈ ಹೃದಯ ಕ್ಕೆ
ಪ್ರೀತಿ ಏಂಬ ದೀಪವ ಹಚ್ಚೀ
ಮರೆಯದಿರಿ ಸ್ನೇಹ ವ
ಮರೆಯದಿರಿ ನನ್ನ ಕವನವ....

ಸುಮಂತ್ ಆರ್ಯ...

- ಸುಮಂತ್ಆರ್ಯ

31 May 2017, 12:33 am

ತಿಥಿ

ಎಲ್ಲಾ ಸೇರಿ ನನ್ನ ಹೆಸ್ರಲಿ
ಹಾಲು ತುಪ್ಪ ಬಿಡ್ತಾವ್ರೆ ಅನ್ಸಯ್ತೆ

ಅಣ್ಣ ಆಡಿದ್ ಮಾತು ಬಂದು
ಎದೆಗೆ ನಾಟಿ ಚುಚ್ಚುತೈತೆ.

ಅವ್ವ ನಿನ್ನ ಮೌನ ನಂಗೆ
ಚುಚ್ಚಿ ಚುಚ್ಚಿ ಸಾಯಿಸ್ತೈತೆ.

ಚುಚ್ಚೋದ್ ಸ್ವಲ್ಪ ಜೋರಾಯ್ತೇನೋ . .
ಯಾಕೊ ವಸಿ ನೋಯ್ತಾಯಿದೆ . .

ಎರಡು ಕಣ್ಣು ತುಂಬಿಕೊಂಡು
ಮಂಜು ಮಂಜಾಗ್ ಆಗುತೈತೆ.

ಯಾವನುಗ್ ಬೇಕು ಪ್ರೀತಿ ಪ್ರೇಮ
ನೆಮ್ಮದಿ ಇಲ್ದಂಗ್ ಆಗೈತೆ.

ಯಾವ್ದು ಬೇಡ ಹಳ್ಳಿಗ್ ಹೋಗಿ
ಕ್ಯಾಮೆ ಗೀಮೆ ನೋಡವ ಅನಿಸೈತೆ


little edited
by

ವ ರಾ ಚ

- ವ.ರಾ.ಚ

30 May 2017, 10:20 pm

ಎಂಥದೋ ಒ ಮನುಸಾ

ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....

ಬೇರಿದ್ದರೆ ಮರವುಂಟು
ಮರವಿದ್ದರೆ ಕೋಂಬೆಯುಂಟು
ಕೋಂಬೆಯಿದ್ದರೆ ಎಲೆ ಉಂಟು
ಎಲೆಯಿದ್ದರೆ ಹೂವು ಉಂಟು
ಹೂವುಯಿದ್ದರೆ ಕಾಯಿ ಉಂಟು
ಕಾಯಿಯಿದ್ದರೆ ಹಣ್ಣು ಉಂಟು
ಹಣ್ಣುಯಿದ್ದರೆ ಬೆಲೆ ಉಂಟು
ಈ ಬೆಲೆಗಾಗಿ ಹೋರಾಡುವ ನಿನ ಬದುಕು
ಎಂಥದೋ ಒ ಮನುಸಾ.....

ವಿದ್ಯೆಯಿದ್ದರೆ ಜ್ನಾನ ಉಂಟು
ಜ್ನಾನವಿದ್ದರೆ ಕೆಲಸ ಉಂಟು
ಕೆಲಸವಿದ್ದರೆ ದುಡ್ಡುಂಟು
ದುಡ್ಡಿದ್ದರೆ ಬಂದುಗಳು ಉಂಟು
ಬಂದುಗಳಿದ್ದರೆ ಖರ್ಚುಂಟು
ಖರ್ಚಿದ್ದರೆ ದುಡ್ಡಿನ ಆಸೆಉಂಟು
ಆಸೆಯಿದ್ದರೆ ಸ್ವಾರ್ಥ ಉಂಟು
ಆ ಸ್ವಾರ್ಥದ ನಿನ ಬದುಕು
ಎಂಥದೋ ಒ ಮನುಸಾ........

ನೆಲೆಯಿದ್ದರೆ ಕಾಳುಂಟು
ಕಾಳುಯಿದ್ದರೆ ಕೂಳೂಂಟು
ಕೂಳುಯಿದ್ದರೆ ಆಳುಂಟು
ಆಳುಯಿದ್ದರೆ ದರ್ಪ ಉಂಟು
ದರ್ಪಯಿದ್ದರೆ ಅಹಂ ಉಂಟು
ಅಹಂಬಿಟ್ಟರಂ ನೀನುಂಟು
ನೀನುಯಿದ್ದರೆ ಸ್ನೇಹ ಉಂಟು
ಸ್ನೇಹಯಿದ್ದರೆ ಸೇವೆ ಉಂಟು
ಸೇವೆಯಿದ್ದರೆ ನಿನ್ನ ಹೆಸರುಂಟು
ಆ ಹೆಸರು ಮಾಡದ ನಿನ ಬದುಕು
ಎಂಥದೋ ಒ ಮನುಸಾ...

ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....

- ಅಗಸ್ತ್ಯ

30 May 2017, 09:07 pm

ಹೊರಟಿರುವೆ ದೂರ ನೀನು....

ಹೊರಟಿರುವೆ ತುಂಬಾ ದೂರ ನೀನು
ಕೈ ಸೇರಿದ್ದ ಪ್ರೀತಿ ಜಾರಿ ಹೋಯಿತೇನು
ಹೊರಟಾಗ ಕೂಗಿ ಕರೆಯಲು ಮಾತೆ ಬಾರದಾಯಿತಲ್ಲ
ನೀ ಹೊರಟ ಮೇಲೆ ಮನಸಿನ ನೋವು ಹೇಳಿತೀರುವುದಲ್ಲ

ನುಡಿದೆ ಮಾತು ಅರಿಯದೆ ಮನಸ
ಮಾತಲ್ಲೆ ಕೊಂದೆಯಲ್ಲ ನನ್ನೆಲ್ಲ ಕನಸ
ಮನಸ ಅರಮನೆಗೆ ಅರಸಾದವನು ನೀನೆನೆ
ಅಲ್ಲಿ‌ ಈಗ ಇರುವುದೆಲ್ಲ ಸ್ಮಶಾನ ಮೌನನೆ

ಸೋತ ಮನಸು ಮತ್ತೆ ಕರೆಯದೆ ಬೀಳ್ಕೊಟ್ಟಿದೆ ನಿನ್ನನು
ನಿನ್ನೆಲ್ಲ‌ ನೆನಪುಗಳು ಎಡಬಿಡದೆ‌‌ ಕಾಡುತಿವೆ ನನ್ನನು
ತಿರುಗಿ ನೋಡದೆ ಜಾರುತಿದ್ದ ಕಣ್ಣಹನಿಯ ಕಾಣದೆ ಕುರುಡಾದೆ ನೀನು
ನನ್ನೆಲ್ಲ ಭಾವವ ತಿಳಿಸಿ ಹೇಳಲಾಗದೆ ಮೂಕಿಯಾದೆ ನಾನು

ನೀ ಸಾಗುವಾಗ‌‌ ಮನಸು ಕಂಡ ನೋವಿಗೆದರಿ‌ ಕಲ್ಲಾಯಿತಲ್ಲ
ನೀನಿರದೆ ಈ ಜೀವವು ಕ್ಷಣಕ್ಷಣಕು ಬರಡಾಗುತಿದೆ ನಲ್ಲ
ನಿನ್ನಲೂ‌ ತುಂಬಿದೆ ಈ ಬೀಳ್ಕೊಡುಗೆಯ ನೋವು
ಬರಬಾರದಿತ್ತೆ ನಗುತ ನಾವು ಜೊತೆ ಇದ್ದಾಗಲೆ ಆ ಸಾವು

ಕಾಯುತಿರುವೆನು ಕಾಲ ‌ಸರಿದರು‌ ನಿನ್ನ ಹಾದಿಯನೆ ನಾನು
ಮತ್ತೊಮ್ಮೆ ತಿರುಗಿ ನೆನೆದು ಇತ್ತ‌‌‌ ಬಂದು ಬಿಡು ನೀನು
ಒಡೆದ ಮನಸುಗಳು ತಿಳಿಯಲಿ‌‌ ದೂರ‌ ಇರುವ ನೋವು‌‌
ಇನ್ನೆಂದು ದೂರ ಸರಿಯದಂತೆ ಇರಲಿ ನಮ್ಮ ಮನವು
ಮತ್ತೆ ಸೇರಿ ಜೊತೆಯಾಗಿ ಬಾಳುವ ಕರೆಯುವರೆಗೆ ಸಾವು

- ಶ್ರೀಕಾವ್ಯ

30 May 2017, 07:36 pm

ಮಮತೆ

ಮಾತು ತೋರದೆ ಮಮತೆ ನಿನ್ನ
ಕೈತುತ್ತು ತೋರುತ್ತದೆ ಅಪ್ಪ

ಕಣ್ಣು ತೋರದ ಮಮತೆ ನಿನ್ನ
ಹೆಗಳಮೇಲೆ ಕುಳಿತಾಗ ನನ್ನ
ಧೈರ್ಯ ತೋರುತ್ತದೆ ಅಪ್ಪ

ಕೈಹಿಡಿದು ನಡಿದಾಗ ಕಿರುಬೆರಳು
ತುದಿಯು ನಿನ್ನ ಮನಸ ತೋರುತ್ತದೆ
ಅಪ್ಪ ......

ನವಮಾಸಗಳು ಹೊತ್ತ ಅಮ್ಮ
ಪ್ರೀತಿತೋರಿ ಮಮತೆ ತಿಳಿಸಿದರೆ
ನಿನ್ನ ಹೃದಯ ಬಡಿತ ಪ್ರತಿಕ್ಷಣ
ನನ್ನ ಮೇಲಿನ ಮಮತೆ ತೋರುತ್ತದೆ ಅಪ್ಪ

- ಚುಕ್ಕಿ

30 May 2017, 05:49 pm