ಸುಡು ಬಿಸಿಲಲ್ಲಿ ತನ್ನಪ್ಪನಿಗೆ
ನೆರವಾಗಿ ದುಡಿವಳು ತಾಯಿ
ಸುಂದರ ಮನೆಯ ನಿರ್ಮಾಣಕ್ಕೆ
ಅವರು ಕೊಡುವ ಕಾಸಿಗೆ
ಜೆಲ್ಲಿ-ಸಿಮೆಂಟು,ಇಟ್ಟಿಗೆಗಳೆ
ಗೆಳೆಯರಾಗಿ ಬಿಸಿಲಲ್ಲಿ
ರಸ್ತೆಯ ಇಕ್ಕೆಲಗಳಲ್ಲಿ
ನಯ- ನಾಜೂಕಿಲ್ಲದೆ
ಅಮ್ಮನ ತೋಳಿನ ಆಸರೆಗಾಗಿ
ಅಂಬಲಿಸುವ ಪುಟ್ಟ ಕಂದಮ್ಮನು ನಾನು,ಬಲ್ಲವರಾರು ನನ್ನ ನೋವನು?
ನಾ- ಅಮ್ಮನಿಗಾಗಿ ಹಟಮಾಡಿದಾಗ
ಅವಳು ನನ್ನ ಬಡಿದು ಗದರಿಸುವಳು
ಒಡೆಯನು ಏನೆಂದಾನೊ?
ಎಂಬ ಬೀತಿಯಲಿ.....
ನೀ ಯಾಕೆ ಬಂದೆಯೊ
ನನ್ನ ಒಡಲಲ್ಲಿ.......
ಎಂದು ಕಂಬನಿ ಸುರಿಸವಳು
ನೋವಿನಲಿ.....
ರೈತನಿವಳ ಹೆತ್ತ ಮಗನಲ್ಲ ಆದರೂ ತನ್ನ
ಒಡಲ ಸವಿ ಉಣಿಸುವವಳಲ್ಲ............
ಇಂತಹ ಅವಣಿಯ ಆಕ್ರೋಶ ಏತಕ್ಕೆ
ಕಳೆದುಕೊಂಡಳು ಪೃಥ್ವಿ ತನ್ನ ತಾಳ್ಮೆಯನಿಂದು.....
ಭೂಮಿ ತಮ್ಮದೆಂದು ತಾಣದರ
ಒಡೆಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ಹುಚ್ಚು ಜನರು ಬಂದಾಗ ಹೊತ್ತು ತಂದಿದ್ದೇನು
ಹೋಗುವಾಗ ಹೊತ್ತೊಯ್ಯುವುದೇನು.....
ಅವಳ ಕೊರೆದು ಕೊರೆದು ಹಿಂಸೆಯ ಮಾಡುವುದು ಬಿಟ್ಟರೆ ..............
ಮೇಘರಾಯನು ನೋಡುತಿಹನು ಮೇಲಿಂದ
ಭೂಮಿ ಸಂಕಟ ಕಣ್ಣು ಮುಚ್ಚಿ ಕುಂತಿಹನು ಒಂದು ಹನಿಯ ಕಣ್ಣೀರು ಬೀಳದಂತೆ ಈ ಜನರ ಹೊಟ್ಟೆಗೆ..................
ಸಹನೆ ಕಳೆದುಕೊಂಡ ಭುವಿಯು ತೋರುತಿಹಳು ತನ್ನ ಕೋಪವನಿಂದು ಭೂಕಂಪದ ರೂಪದಲ್ಲಿ,
ಭೂಕುಸಿತದ ತಾಪದಲ್ಲಿ .
ಬಿರುಕು ಬಿದ್ದ ಭೂಮಿಯ ಬಿಂಬದಲ್ಲಿ
ನೀರಿಲ್ಲದೆ ಒಣಗಿದ ಮರುಭೂಮಿಯಲ್ಲಿ.......
ಕಟ್ಟಡಗಳ ಮಧ್ಯೆ ಉಳಿದ ಒಂದೆರಡು ಮರಗಳನ್ನು ನೋಡಿ
ಕಳೆದೊದ ಕಾನನದ ಅವಶೇಷಗಳು ನೋಡಿ.......
ಪ್ರಕೃತಿಯ ಉಳಿವಿಗೆ ಉಸಿರು ಮರಗಳು
ಹಚ್ಚ ಹಸಿರು ಹೆಚ್ಚು ಮಾಡಿ ಇನ್ನೊಂದು
ಜೀವಿಯ ಉಸಿರಿಗೆ ಹೆಸರಾಗಿ .............
ವಿಶ್ವ ಪರಿಸರ ದಿನದ ಶುಭಾಶಯಗಳು
ಸ್ನೇಹಿತರೆ..................