ರೈತನಿವಳ ಹೆತ್ತ ಮಗನಲ್ಲ ಆದರೂ ತನ್ನ
ಒಡಲ ಸವಿ ಉಣಿಸುವವಳಲ್ಲ............
ಇಂತಹ ಅವಣಿಯ ಆಕ್ರೋಶ ಏತಕ್ಕೆ
ಕಳೆದುಕೊಂಡಳು ಪೃಥ್ವಿ ತನ್ನ ತಾಳ್ಮೆಯನಿಂದು.....
ಭೂಮಿ ತಮ್ಮದೆಂದು ತಾಣದರ
ಒಡೆಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ಹುಚ್ಚು ಜನರು ಬಂದಾಗ ಹೊತ್ತು ತಂದಿದ್ದೇನು
ಹೋಗುವಾಗ ಹೊತ್ತೊಯ್ಯುವುದೇನು.....
ಅವಳ ಕೊರೆದು ಕೊರೆದು ಹಿಂಸೆಯ ಮಾಡುವುದು ಬಿಟ್ಟರೆ ..............
ಮೇಘರಾಯನು ನೋಡುತಿಹನು ಮೇಲಿಂದ
ಭೂಮಿ ಸಂಕಟ ಕಣ್ಣು ಮುಚ್ಚಿ ಕುಂತಿಹನು ಒಂದು ಹನಿಯ ಕಣ್ಣೀರು ಬೀಳದಂತೆ ಈ ಜನರ ಹೊಟ್ಟೆಗೆ..................
ಸಹನೆ ಕಳೆದುಕೊಂಡ ಭುವಿಯು ತೋರುತಿಹಳು ತನ್ನ ಕೋಪವನಿಂದು ಭೂಕಂಪದ ರೂಪದಲ್ಲಿ,
ಭೂಕುಸಿತದ ತಾಪದಲ್ಲಿ .
ಬಿರುಕು ಬಿದ್ದ ಭೂಮಿಯ ಬಿಂಬದಲ್ಲಿ
ನೀರಿಲ್ಲದೆ ಒಣಗಿದ ಮರುಭೂಮಿಯಲ್ಲಿ.......
ಕಟ್ಟಡಗಳ ಮಧ್ಯೆ ಉಳಿದ ಒಂದೆರಡು ಮರಗಳನ್ನು ನೋಡಿ
ಕಳೆದೊದ ಕಾನನದ ಅವಶೇಷಗಳು ನೋಡಿ.......
ಪ್ರಕೃತಿಯ ಉಳಿವಿಗೆ ಉಸಿರು ಮರಗಳು
ಹಚ್ಚ ಹಸಿರು ಹೆಚ್ಚು ಮಾಡಿ ಇನ್ನೊಂದು
ಜೀವಿಯ ಉಸಿರಿಗೆ ಹೆಸರಾಗಿ .............
ವಿಶ್ವ ಪರಿಸರ ದಿನದ ಶುಭಾಶಯಗಳು
ಸ್ನೇಹಿತರೆ..................
ಸಾಗುತ್ತಿರುವ ಸಮಯದ ಜೊತೆ
ದೂರ ಸಾಗಿದಂತೆ ಹೃದಯದ ಭಾರ
ಹೆಚ್ಚುತ್ತಿದೆ ಇನ್ನು ಅತಿಯಾಗುತ್ತಿದೆ.........
ನಿನ್ನಿಂದ ದೂರವಾಗುವ ಪ್ರಯತ್ನದಲ್ಲಿ
ಇನ್ನು ಸಮೀಪವಾಗುತ್ತಿರುವೆ ನಿನ್ನ ಇನ್ನು
ಹೆಚ್ಚಾಗಿ ಪ್ರೀತಿಸುತ್ತಿರುವೆ...........
ನನ್ನ ಹೆಜ್ಜೆಗಳು ನಿನ್ನಂದ ದೂರವಾದರು.........
ನಿನ್ನ ಪ್ರೀತಿ ನನ್ನ ಹೃದಯದಲ್ಲಿ ಮಧುವಾಗಿ
ಹೊರಹೊಮ್ಮುತ್ತಿದೆ ಉಸಿರಿಗೆ ಅಡ್ಡಿಯಾಕಿ
ನಿನ್ನ ಹೆಸರೇ ಮತ್ತೆ ಮತ್ತೆ ಕರಿಯೆನ್ನುತ್ತಿದ್ದೆ
ನನ್ನ ಕೂಗು ಎನ್ನುತ್ತಿದ್ದೆ................
ನೀನು ಹಿಂತಿರುಗಿ ನೋಡುವಷ್ಟರಲ್ಲಿ
ನಿನ್ನ ಸೇರು ಕಪ್ಪಾದ ನೆರಳಿಗೆ ಬಣ್ಣತುಂಬುವ
ಬೆಳಕಾಗಿ ಎನ್ನುತ್ತಿದೆ......
ಹಳ್ಳಿಯೊಂದರ ಬೇಲಿ ಗಿಡದ
ಪುಟ್ಟ ಗುಬ್ಬಿ ಮರಿ ನೀನಂದು
ದೆಲ್ಲಿ ಸದನದ ಗದ್ದಿಗೆ ಏರಿ
ಇಂದು ಜಗಕೆ ತೋರಿದೆ ನೀನಾರೆಂದು!
ತಾಯಿಯ ಉಸಿರಿಗೆ ಹೆಸರಾಗಿ
ತಾತನ ಹೆಸರನ್ನು ಹಸಿರಾಗಿಸಲು
ಪಣತೊಟ್ಟು,ಜವರಾಯನಿಗೆ
ಎದುರಾಗಿ,ಈಜಿ ದಡ ಸೇರಿದೆ!
ಕಲ್ಲು- ಮುಳ್ಳುಗಳನೆ ಮೆಟ್ಟಿ ನಡೆದೆ
ಸೋಲು- ಅಪಮಾನಗಳನೆ
ಮೆಟ್ಟಿಲು ಮಾಡಿಕೊಂಡು ಬೆಳೆದೆ
ನೀ- ಒಪ್ಪಿ ಅಪ್ಪಿಕೊಂಡವರೆ
ನಿನ್ನ ಕೊರಳಿಗೆ ಉರುಳಾದರು,
ಬದುಕೊಂದು ಬಿಸಿ ತುಪ್ಪವಾಯಿತು!
ಸಾಗರದಾಚೆಗು ಹರಡಿದೆ ಇಂದು
ನಿನ್ನ ವಿಜಯದ ಕಹಳೆಯು
ಊರೂರು ಅಲೆದೆ ನೀ- ಅಂದು
ಜೀವನ ನಡೆಸಲು, ಸಾಧನೆಯ ಬಿಸಿಲುಗುದುರೆ ಏರಿ!
ಜನಕನೆ ತಲೆಹಿಡುಕನಾಗಿ
ಇನಿಯನೆ ಅಸುರನಾಗಿ
ಮಡಿಲ ಸೇರಿದ ಹಸುಗೂಸಿಗಾಗಿ
ಅಲೆಯುವಾಗ,ನೀ ಕಾಣಲಿಲ್ಲ
ಈ ಜಗಕೆ!
ಉತ್ತಮೋತ್ತಮ ಪುರಸ್ಕಾರಗಳು
ನಿನ್ನ ನಾಮವನ್ನಲಂಕರಿಸುತ್ತ
ಬಾಗಿಲ ಬಳಿಗೆ ಬರಲು
ನಿನಗಾಗಿ ಬರುವರು ಹಿಡಿದು
ವಿಜಯ ಪತಾಕೆ!
ಜೀವನವೆಂಬ ಸಾಗರದಲ್ಲಿ
ಸಮಸ್ಯೆಗಳೆಂಬ ಅಲೆಗಳಲ್ಲಿ
ಬಂದಿಯಾಗದೆ,ಸೀಳಿ
ಮುನ್ನಡೆದೆ ವಿಮುಖಳಾಗದೆ
ಸಮಸ್ಯೆಗೆ ಹೆದರಿ,ಸಾವಿಗೆ
ಶರಣಾಗುವ ಮಹಿಳೆಯರಿಗೆ
ನೀನಾದೆ ಮಾದರಿ ಮಹಿಳಾಮಣಿ!
ಈ- ನಾಡೆಂದು ನಿನಗೆ ಚಿರ- ಋಣಿ!