Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸಿನ ಮಿಡಿತ

( ಮನಸ್ಸಿನ ಮಿಡಿತ. )

ಓಲ್ಲೆ ಎಂದ ಮನಕೆ ವಜ್ರ ವೈಡೂರ್ಯ ಯಾಕಯ್ಯ.
ನಿನ್ನನು ಹೊಲಿಸಿಕೊಳ್ಳಲು ಯತ್ನಿಸಿದ ನನ್ನ ಮನಕ್ಕೆ ನಿನ್ನ ಮನಸ್ಸು ಎಲ್ಲಿ ಅಲೆಯುತಿದೆ ಎಂದು ತಿಳಿಯದಯ್ಯ .
ಕಣ್ಣಿಗೆ ಕಾಣದ ದಾರಿಯಲಿ ನಿನ್ನಡುಕುತ ನಾನು ಎಲ್ಲಿ ಅಲೆಯಲಯ್ಯ.

ನಿನ್ನ ಹ್ರುದಯದ ಬಡಿತದ ಶಬ್ದಕ್ಕೆ ನನ್ನ ಮನಸ್ಸು ಮಿಡಿಯಿತಯ್ಯ
ಆದರೆ ನಿನ್ನನ್ನು ನೋಡದೆ ನನ್ನ ಕಣ್ಣಲಿ ಕಂಬನಿ ಸುರಿಯಿತಯ್ಯ.
ಇದನ್ನು ನಾನು ನಿನಗೆ ಹೆಂಗೆ ಹೇಳಲಯ್ಯ

ನೀನು ಎಲ್ಲಿ ಅಡಗಿ ಕುಳಿತಿರುವೆ ನಾ ಅಲ್ಲಿಗೆ ಬಂದು‌ ನಿನ್ನನು ಸೇರಿಕೊಳ್ಳಲು ಕಾದು‌ಕುಳಿತೆನಯ್ಯ.
ಚಿಂತಿಸುತ ನನಗೆ ಮನಸು ನೊಯಿತಯ್ಯ ನಾನು‌ ಇದನ್ನು ಹೆಂಗೆ ಹೇಳಲಯ್ಯ ಓ ‌ಅಯ್ಯ.
ನಿನಗೆ ಹೇಂಗೆ ಹೇಳಲಯ್ಯ...
‌‌‌‌‌‌‌‌‌‌‌‌ ‌ ‌ ( ಸಂತೊಷ್ )

- ಸಂತೋಷ್//ಜೀತು

11 Jun 2017, 09:45 pm

ನಿನ್ನ ಉಸಿರಲಿ.......

ಗೆಜ್ಜೆಕಟ್ಟಿ ಹೆಜ್ಜೆ ಹಿಡುತಿರುವೆ ನಿನ್ನ
ಎದೆಬಡಿತದ ತಾಳಕ್ಕೆ ಘಲ್ಲು ಘಲ್ಲೆಂದು......

ನಿನ್ನ ಪ್ರೀತಿಯ ಕುಣಿತದಲ್ಲಿ ಪಾದದಿಂದ
ಚುಂಬಿಸುತ್ತಿರುವೆ
ಈ ಭುವಿಯನ್ನು ನಿನ್ನ ಮನಸೆಂದು...

ನೂರೆಂಟು ಬಣ್ಣಗಳೊತ್ತು ನಾ ಉಟ್ಟ
ವಸ್ತ್ರಗಳ ಅಂಚುಗಳಿಗೆ ಹಂಚುತಿರುವೆ
ನಗುವಚೆಲ್ಲುತ ನನ್ನ ಸೊಗಸನ್ನು...

ನಿನ್ನ ನಗುವಲ್ಲಿ ಮಿಂದು ಬಂದ
ನನ್ನ ನಗುವಿನ ಹೊಳಪಿಗಿಂದು
ಹೊಸತನದ ಸೋಬಗಿನ ಶ್ವೇತವರ್ಣವ
ನೋಡಿ ನಾ ಸೋತೆ ನಿನಗಾಗಿ...

ಈ ಅಪೂರ್ವ ನೃತ್ಯಕ್ಕೆ ಹತ್ತು ರಾಘಗಳ
ಬೆರೆಸಿದ ಸ್ವರಗಳಿಗಿಂದು ಅದನ್ನಾಡಿದ ನಿನ್ನ
ಧ್ವನಿಗೆ ಪ್ರೀತಿಯ ಚುಂಬನ ಸಂಗಾತಿ...

- ಚುಕ್ಕಿ

11 Jun 2017, 07:43 pm

ಮನಸ್ಸಿನ ಭಾವನೆ

( ಮನಸ್ಸಿನ ಭಾವನೆ )

ಮನಸ್ಸೆಂಬುದು ಬರಿ ಮಾನವನ ಭಾವನೆಯಲ್ಲ.
ಮನುಜನ ದೇಹದಲ್ಲಿರುವ ಮಾಂಸದ ಮುದ್ದೆಯಲ್ಲ.
ಅದು ಕನಸ್ಸಿನ ಕಲ್ಪನೆಯನ್ನು ಓಟ್ಟುಗೂಡಿಸಿ.

ಜೀವನವೆಂಬ ಪಯಣವನ್ನು ಸದಾ ಓಟ್ಟಾಗಿ ಮತ್ತೊಂದು ಹ್ರುದಯವನ್ನು ಜೊತೆಗೂಡಿಸಿ
ನಮ್ಮೊಂದಿಗೆ ಜೀವನ ಪರ್ಯಂತ ಹೆಜ್ಜೆಯನ್ನು
ಇಡಿಸುವುದೇ ಮನಸ್ಸು ಸದಾ.........

( ಸಂತೊಷ )

- ಸಂತೋಷ್//ಜೀತು

11 Jun 2017, 02:12 pm

ಜೀವನದ ಸತ್ಯ

ಬರೆದದ್ದೆಲ್ಲ ಕವನವಾಗದು‌. ನುಡಿದದ್ದೆಲ್ಲ ವಚನವಾಗದು. ಕಂಡದ್ದೆಲ್ಲ ಕನಸೆನ್ನಲಾರೆವು.

ಎಂದು ನಡೆದಂತೆ
ನುಡಿಯುತ್ತೇವೆಯೊ ಅದೆ ಎಂದೆಂದೊ ಶಾಶ್ವತವಾಗಿ ಉಳಿವುದು ಅದೇ ಜೀವನದ ಸತ್ಯ‌
( ಸಂತೋಷ್ ಕುಮಾರ್ )

- ಸಂತೋಷ್//ಜೀತು

11 Jun 2017, 12:01 pm

ತುಂತುರು

ನೇಸರನು ಮೈಮುರಿದು
ನಸುನಕ್ಕಾಗ ಹೊಮ್ಮಿತು
ಮುಗಿಲಲ್ಲಿ
ಎಳೆಯ ಕಿರಣಗಳ
ಹೊಂಬಣ್ಣ
ಅದ ಕಂಡ ಭುವಿಯ
ಹೃದಯ ಅಂಗಳದಲಿ
ಚಿತ್ತಾರಗೊಂಡಿತು
ನಿನ್ನ ನೆನಪಿನ ರಂಗೋಲಿ

- Chandni

11 Jun 2017, 05:33 am

ನಿನ್ನ ಹೃದಯದ ರೂಪ

ಹೃದಯದೊಳಲಗೋಗಿ ಕೇಳಿದ ಒಂದು ಪದ ನಿನ್ನನು ಇದು ನಿನ್ನ ಹೃದಯವಾ ಎಂದು ಅಂದು ............

ನೀ ಮೌನಿಯಾದ ಕ್ಷಣ ಅದು ಹೇಳಿತು ನನಗೆ ಇಂದು ನಿನ್ನ ಮಾತಿಲ್ಲದೆ ನನ್ನ ಬಡಿತಸಾಧ್ಯವಿಲ್ಲವೆಂದು,ನಿನ್ನ ನಗುವಿಲ್ಲದೆ ನನ್ನ ಚಲನವಲನ ಸ್ಥಗಿತವೆಂದು ಹಾಗಾದರೆ ಅದು ನಂದೇನಾ ಅಲ್ಲಿರುವುದು ನಾನಾದರೆ ಇಲ್ಲಿ ನಿನ್ನಿಂದಾ ದೂರವೇಕೆ ಗೆಳೆಯಾ........

ಏಕೆಂದರೆ ಅಲ್ಲಿನ ನನ್ನ ಬಿಂಬ ಇಲ್ಲಿರುವ ನನ್ನ ಹೃದಯದಜೊತೆ ನಿನ್ನ ಹೃದಯ ಕಳೆದಸಮಯದಿಂದಲೇ ಅಲ್ಲವೇ ನನ್ನ ರೂಪ ನಿನ್ನ ಹೃದಯದ್ದಾಯಿತು.............

- ಚುಕ್ಕಿ

11 Jun 2017, 12:19 am

ನೀ ನಾದಂತೆ ನನ್ನ ಮನದ ಪರಿವರ್ತನೆಯ ಪರಿ

ನನ್ನ ಮನದ ಮನೆಯಲಿ ಮನೆ ಮಾಡಿ ನೀ ಕುತಂತೇ
ಹಸಿದ ಬಾಳಲಿ ಉಸಿರಾಗಿ ನೀ ಬಂದಂತೇ
ಮನದ ಮುಗಿಲಲ್ಲಿ ಮಳೆಹನಿಗಳ 
ನೀ ಸುರಿದಂತೆ 
ಜೇನಿನ ಗುಡಲಿ ಸಿಹಿಜೇನ ನೀ
ಸವಿದಂತೆ 
ಸೋತ ಸಾಲಿನಲ್ಲಿ ಗೆಲುವಿಗೆ ನೀ ರುವಾರಿಯಾದಂತೆ..       ಈ ಪದಗಳ ಸಾಲುಗಳ ಪೋಣಿಸೋ 
ಪೂರ್ಣಿಮ ನೀ ಬರೆದಂತೆ
ನನ್ನ ಬಾಳ ಬದುಕಿನಲಿ ನೀ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದಂತೇ
ಅಂದಗಳ ಸಂಕೀರ್ಣ ಸಾವಿರ ಬೊಂಬೆಸಂಗ್ರಹದಿ ನೀ 
ನೀ ಪಳ ಪಳ ಹೊಳೆದಂತೇ
ನನ್ನ ನೋವ ನಗಿಸೋ ಗುಳಿಕೆನ್ನೆ 
ಕನ್ಯೆ ನೀ ನಾದಂತೆ

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

11 Jun 2017, 12:04 am

ಉಸಿರ ಉಯ್ಯಾಲೆ

ಮನದಲ್ಲಿ ಕಟ್ಟಿದ ತೂಗು ಉಯ್ಯಾಲೆಯಲ್ಲಿ ನಿನ್ನೀರಿಸಿ
ತೂಗುವೆ ನಿನ್ನನು ನನ್ನ ಉಸಿರಾಟದ ವೇಗದಲ್ಲಿ ಬಂಗಾರಾ...............

ಜಾರಿ ಬಿಲದಿರು ನೀನು ಉಸಿರಾಟದ ರಭಸಕ್ಕೆ
ಜಾರಿದರು ನಿನ್ನ ಪಾದವನ್ನು ಹಿಡಿದೆತ್ತುವೇ ನಾನು ನನ್ನ ಅಂಗೈಯಲ್ಲಿರಿಸಿ ಭುವಿಗೆ ಬೀಳದಂತೆ ಮನದರಸಿ .............

- ಚುಕ್ಕಿ

10 Jun 2017, 11:51 pm

ವಿದಾಯ....

ಯಾರು ನೀವೆಲ್ಲರು ನಾ ಕಾಣೆ
ಎಲ್ಲರು ಬೆರೆತು ಮಾತಾಡಿ ನೋವ ‌ಮರೆಸಿದಿರಿ‌ ನನ್ನಾಣೆ
ಗೆಲ್ಲುವ ಶಕುತಿ ಮನಸುಂಟು ನಿಮ್ಮಲಿ ಜಗವನ್ನೆ
ಅರಿಯದೆ ನೋಯಿಸಿದ್ದರೆ ಕ್ಷಮಿಸಿ ಬಿಡಿ ಸುಮ್ಮನೆ
ಕಲರವದೊಳು‌ ಮರೆತು ಬಿಟ್ಟಿದ್ದೆ ನನ್ನನ್ನೆ

ಕನ್ನಡ ಕವನವಿದು ಉದಯೋನ್ಮುಖ ‌ಬರಹಗಾರರ ತಾಣ
ಬರೆಯುವರೆಲ್ಲರು ಸುಂದರ ಕವಿತೆಗಳ ತೊಟ್ಟು ಪಣ
ಮನಸ ಭಾವ ಬಂಧನಗಳ ಬಿಡಿಸಿಡುವರು ಕವನಗಳಲೆ
ಯಾರು ಅರಿಯದವರ ಸುಖ ದುಃಖಗಳು ಹರಿದು ಬರುವವು ಪದಗಳಲೆ
ನಾನು ಸೇರಿ ಕಳೆದು ಹೋದೆನು ಕವನಗಳ ಮಧ್ಯದಲ್ಲೆ

ತುಂಬಿದಿರಿ ನನ್ನೊಳು ಬರೆಯುವ ಹಂಬಲ
ನಿಮ್ಮೆಲ್ಲರ‌ ಸಹಕಾರ ಹುಟ್ಟಿಸಿತು ಬರೆಯುವ ಚಲ
ನಿಮ್ಮೆಲ್ಲರ ಸಹಕಾರ ಪ್ರೀತಿಗೆ ನಾನೆಂದು‌ ಆಭಾರಿ‌
ನೀವೆಂದು ಬಾಳಲಿ ‌ನಗುನಗುತ ಬಾಳಿರಿ

ನನ್ನೊಳಗಿನ ನನ್ನನು‌ ಪರಿಚಯಿಸಿತು ಕನ್ನಡ ಕವನ
ನಿಮಗೆ ನನ್ನಯ ಮನಃಪೂರ್ವಕ ನಮನ
ಬರೆಯುವ ಕನಸು ನನಸಾದ ಜಾಗವಿದು‌, ಎಂದೂ‌‌ ಮಾಡುವೆನು ಕವನದ ‌ಮನನ
ಎಂದಿಗೂ‌ ನಿಲ್ಲದೆ ಸಾಗುತಿರಲಿ ಕವಿಗಳ‌ ಸೃಷ್ಟಿಸುತ್ತಿರುವ ಸಾಧನ

ಹೇಳೆಬೇಕೆನಿಸುತಿದೆ ಇಂದು ವಿದಾಯ
ಹೊತ್ತುಯ್ಯುತ್ತಿರುವೆನು ನೀವೆಲ್ಲ ನೀಡಿದ ಸದಾಷಯ
ನೀವೆಲ್ಲರು ತಿದ್ದಿದಿರಿ‌‌ ನನ್ನ ನೀಡಿ ನಿಮ್ಮ ಅಭಿಪ್ರಾಯ
ಎಂದಿಗೂ ಜತನ ಮಾಡುವುದು ಅವುಗಳ ನನ್ನೀ ಹೃದಯ

ತುಂಬು ಮನಸಿನ ಧನ್ಯವಾದಗಳು ಎಲ್ಲರಿಗೂ
ನಿಮ್ಮ ಅಭಿಪ್ರಾಯ ಪ್ರೋತ್ಸಾಹಗಳೊಟ್ಟಿಗೆ ನನ್ನನ್ನು ಒಪ್ಪಿ ಸಹಕರಿಸಿದ್ದಕ್ಕೆ, ನಾನೆಂದು ಚಿರಋಣಿ....

- ಶ್ರೀಕಾವ್ಯ

10 Jun 2017, 09:55 pm

ತೂಗುದೀಪ.............✍

ಗಾಳಿ ಜೋಕಾಳಿಗೆ ತೂಗುದೀಪವನಿಡುವೆ
ಮಂದಹಾಸದ ಅರಮನೆಯಲ್ಲಿ
ಅದನ್ನೀರುಸಿ ಬೆಳಗಿಸುವೆ ಬೆಳದಿಂಗಳ
ಬೆಳಕಿನಿಂದ ನನ್ನ ಪ್ರೀತಿಯ ಬತ್ತಿ ಹಚ್ಚಿ
ನಿನಗಾಗಿ..................

ನೀಬರುವ ದಾರಿಕಾಯುವೆ ಆ ದೀಪದ
ಬೆಳಕಿನಲ್ಲಿ ನಿನ್ನ ಗುಣಾಗಣವ ಮಾಡುವೆ
ಆ ದೀಪದ ಕಿವಿಯಲ್ಲಿ ಪಿಸುಮಾತನಾಡುತ
ಮುದ್ದು ಮುದ್ದಾಗಿ ನೀ ನನ್ನ ಜೊತೆಗಾಡಿದ
ಸೊಗಸಾದ ಮಾತುಗಳೇಳುತಲಿ...............

ಇಲಿಸಂಜೆ ವೇಳೆಯಲ್ಲಿ ಮನತಣಿಸಲು
ಬಂದ ನಿನ್ನ ನೆನಪು ಕಾಡುತ್ತಿತ್ತು ನನ್ನ
ನಿನ್ನ ಹೆಸರ ನೆನೆಸುತ್ತ ನನ್ನ ನಾಚಿಕಿಗೆ
ತಾನು ನಾಚುತ್ತಾ ..............

ಬೊಗಸೆಯಲ್ಲಿಡಿದ ತಿಳಿನಿರ ಸೆರೆಯಲ್ಲಿ
ನಗುತ ನಿಂತ ಚಂದಿರನು ಹೇಳುತ್ತಿರುವ
ನನಗೆ ನಿನ್ನ ನೋಡಿ ಮೇಲಿಂದ ನನ್ನ ನೆನೆದು ನೀ
ನನ್ನಾಗೆ ನಗುತ್ತಿರುಯೆಂದು ಗೆಳೆಯಾ...........

- ಚುಕ್ಕಿ

10 Jun 2017, 08:24 pm