Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಂದು ಮಿಡಿತ ಪ್ರಕೃತಿ ಮಾತೆಗಾಗಿ

ವಿಶಾಲವಾಗಿ, ದಟ್ಟವಾಗಿ ಬೆಳೆದು ನಿಂತ ಅರಣ್ಯ,
ಸಮುದ್ರವನ್ನೆ ನುಂಗುವ ಮೌನ,
ಹಕ್ಕಿಯ ಚಿಲಿಪಿಲಿಯು ಪ್ರತಿದ್ವನಿಸುತ್ತಿತ್ತು,
ಮೈ ಮರೆಸುವ ಸುಗಂದ , ಗಾಳಿಯಲಿ ತೇಲಿ ಬರುತ್ತಿತ್ತು,
ಸೂರ್ಯ ಎಷ್ಟೋ ಸೆಣಸುತ್ತಿದ್ದ ,ನೆಲ ಮುಟ್ಟಲಾಗುತ್ತಿರಲಿಲ್ಲ,
ಆ ಮೌನದ ಮದ್ಯೆ ಏನೋ ಶಬ್ದ,
ಪ್ರಕೃತಿ ಮಾತೆಯ ರಕ್ಷಣೆಗೆ ನಿಂತ ಸೈನ್ಯದಂತೆ,
ಹರಿಯುತ್ತಿತ್ತು ಅಲ್ಲೊಂದು ಜರಿ,
ಎತ್ತರವಾದ ಎದೆಯುಬ್ಬಿಸಿ ನಿಂತ ಮರಗಳು,
ಇದೆಲ್ಲ ನಮ್ಮದೆನ್ನುವ ನಂಬಿಕೆಯಿಂದ,
ಅಲೆದಾಡಿಕೊಂಡಿದ್ದವು ಪ್ರಾಣಿ-ಪಕ್ಷಿಗಳು,
ಅರೆ_______________________________
ಇದೆನಾಯಿತು , ಇಷ್ಟು ಹೊತ್ತು ಕಂಡಿದ್ದೆಲ್ಲ ಮಾಯೆಯೆ,
ಏನೀ ಕರ್ಕಶ ಶಬ್ದ ,
ಬರಿಯ ಧೂಳು,
ಹುಡುಕುವೆನೆಂದರು ಕಾಣದ ಪ್ರಾಣಿ-ಪಕ್ಷಿಗಳು.
ಅಳಿದುಳಿದವುಗಳು ಹೊಟ್ಟೆಗೆ ಹೊಲಸು ತಿಂದು ಬದುಕಿವೆ.
ಇಂದು ನೋಡಿದಷ್ಟೂ ದೂರ ಮರಗಳ ಬದಲು
ಎತ್ತರದ ಕಟ್ಟಡಗಳೆ ಕಾಣುತ್ತಿವೆ.
ಛೇ_____________________
ನಮಗೆಲ್ಲವನ್ನು ಕೊಟ್ಟ ಪ್ರಕೃತಿ ಮಾತೆಗೆ
ನಾವೇನು ಕೊಟ್ಟೆವು,
ಆಧುನಿಕರಣವೆಂಬ ಶಾಪವನ್ನು,
ನಗರೀಕರಣವೆಂಬ ನೋವನ್ನು ಕೊಟ್ಟೆವು,
ಅವಳ ಕರುಳ ಕುಡಿಗಳನ್ನೆ ಕಿತ್ತೆಸೆದೆವು,
ಗರ್ಭವನ್ನೆ ಬಗೆದೆವು,
ಇಷ್ಟಾದರು ಅವಳಿನ್ನೂ ಶಾಂತವಾಗಿದ್ದಾಳೆ,
ಏಕೆಂದರೆ, ಅವಳು ‌‌‍ತಾ‌‌‌ಯಿಯಲ್ಲ‌‍‍‌‌‌‌‌‌‍ವೆ,


ಇನ್ನಾದರೂ ಬದಲಾಗೊಣ,
ಅವಳು ನಮಗೆ ಕೊಟ್ಟ ಕೊಡುಗೆಯನ್ನು
ಸ್ಮರಿಸೋಣ,
ಅವಳ ಕಣ್ಣ ನೀರಾಗುವ ಬದಲು,
ನಗುವಿನಲ್ಲಿರಲು ಬಯಸೋಣ...!

ಮನೋಜ್ -

- manoj kumar

14 Jun 2017, 09:22 am

ನೀ ಇಲ್ಲದೆ ನಾನಾ......

ಶಶಿ ಇಲ್ಲದ ಬಾನು
ಸವಿಯಿಲ್ಲದ ಜೇನು
ಕವಿಯಿಲ್ಲದ ನಾನು ಬರೆಯುವುದು ಇನೇನು......

- Acchu love

13 Jun 2017, 10:25 pm

ಸ್ನೇಹ

ಸೂರ್ಯ ಎಷ್ಟು ಉರಿದರು,
ಆ ಉರಿ ಕೆಡುಕನ್ನು ಸುಡುತ್ತದೆ,
ಚಂದ್ರ ಎಷ್ಟೇ,
ಕೇಡು ಬಯಸಬೇಕೆಂದುಕೊಂಡರು,
ಅವನಿಗರಿವಿಲ್ಲದೆ ದುರಾಸೆಯನ್ನು,
ಅಲೆಗಳ ಮೂಲಕ ಮನಸ್ಸಿನಿಂದ ಹೊರಹಾಕುತ್ತಾನೆ,
ಪಿತೂರಿಗೆ ಸ್ನೇಹದಲ್ಲಿ ಜಾಗವಿಲ್ಲ,
ಕೋಪಕ್ಕೆ ಆಯಸ್ಸು ಮೊದಲೆ ಇಲ್ಲ,
ಪ್ರೀತಿ-ಸ್ನೇಹವೆ ತುಂಬಿದೆ ನಮ್ಮೊಳಗೆಲ್ಲ,
ಸೂರ್ಯ-ಚಂದ್ರರಿರುವವರೆಗು ಸ್ನೇಹಕ್ಕೆ ಕೊನೆಯಿಲ್ಲ.

ನಿಮ್ಮ ಸ್ನೇಹ ಪಡೆದ ನಾನು ಧನ್ಯ,
ನಿಮ್ಮಿಂದ ದೂರಾಗಲು ನನಗಿಷ್ಟವಿಲ್ಲ...!

ಇಂತಿ ನಿಮ್ಮ ಗೆಳೆಯ
ಮನೋಜ್

- manoj kumar

13 Jun 2017, 08:18 pm

ನಾ ಕಂಡ ಬೇಂದ್ರೆ.

ದುಃಖವೆನಿದ್ದರೂ ನೋವು ಎಷ್ಟಿದ್ದರೂ
ಸುಕವನಷ್ಟೇ ಉಣಿಸಿದಿರಿ ನೀವೂ
ಒಡಲ ಬಡಬಾಗ್ನಿಯಲಿ ಬೆಂದು
ನೋವನ್ನೇ ಗಾನಕ್ಕೆ ತೆತ್ತು ಬೇಂದ್ರೆಯಾದಿರಿ

ಜೀವನದ ಸಿಹಿಕಹಿಗಳ
ನಾಕುತಂತಿಯಲಿ ಮೀಟಿ
ಯಾಕಾಗಿ ಬೇಕಾಗಿ ಸಾಕಾಗಿ ಕುಣಿಸುತ್ತಾ
ಉಯ್ಯಾಲೆಯಾಡಿಸಿ ನಗಿಸಿದಿರಿ

ಸಾದಕರೆಲ್ಲರ ಸಾದನಕೇರಿಗೆ
ಕೈಬೀಸಿ ಬಾ ಹತ್ತಿರ ಎಂದಿರಿ
ಕನ್ನಡಾಂಬೆಯ ಚೈತನ್ಯ ಪೂಜೆಯನ್ನು
ಜಗ ಹೋಗಳುವಂತೆ ಮಾಡಿದಿರಿ

ಜ್ಞಾನ ಪೀಠ ದ ಗರಿಯನ್ನು
ಸಾರಸ್ವತ ಲೋಕಕ್ಕೆ ಮುಡಿಸಿದಿರಿ
ಸಹಸ್ತ್ರ ಪದ್ಯಗಳ ಸರದಾರರಾಗಿ
ವರಕವಿಯಾಗಿ ಮಾನಸದಲ್ಲಿ ಉಳಿದಿರಿ

ನಕ್ಕು ನಗಿಸಿ ರಮಿಸುವ ರಸಿಕರಿಗೆ
ಕೊಟ್ಟಿರಿ ನೀವೂ ಸಖೀಗೀತ,ಕಾಮಕಸ್ತೂರಿ
ಶ್ರಾವಣ ಬಂತು ಶ್ರಾವಣ ನಾದಲೀಲೆಯಾಡಿ
ಮುಗಿಲಮಲ್ಲಿಗೆ ಅರಳಿಸಿದಿರಿ

ಪಾತರಾಗಿತ್ತಿ ಪಕ್ಕದಲಿ ಕೂತು
ಇಳಿದುಬಾ ತಾಯಿ ಎಂದು ಗಂಗೆಯ ಕರೆದು
ಹಿಂದ ನೋಡದ ಗೆಳತಿ ಎಂದು ಬರೆದು
ಕಾವ್ಯ ಪ್ರಭೆಯ ಬೆಳಗಿಸಿದಿರಿ
ಗೆಳೆಯರ ಗುಂಪಿನ ನಾಯಕರಾದ
ನಿಮಗೆ ನಮ್ಮ ನಮನ

ಶಾಸ್ತ್ರವಾಗಿ,ಧರ್ಮವಾಗಿ ಯೋಗಜ್ಞಾನವಾಗಿ
ಅರಳು ಮರಳಿನ ಸತ್ಯದರ್ಶನ ಮಾಡಸಿ
ಗಿಡ ಗಂಟೆಯ ಕೊರಳೊಳಗಿಂದ
ದ್ವನಿಯಾಗಿ ಹೋಮ್ಮಿದಿರಿ
ರಾಶಿ ರಾಶಿ ಮುತ್ತುಗಳ ಬಿಟ್ಟು
ಜೀವನ ಯಾತ್ರೆ ಮುಗಿಸಿದ
ನಿಮಗೆಇದೋನಮನ, ನಿಮಗೆಇದೋನಮನ

- ಅನಿಲಕುಮಾರ್.ಜಿ.

13 Jun 2017, 07:59 pm

ನೊಂದ ಮನಸ್ಸು

ಮನಸ್ಸಲ್ಲಿ ಬಚಿಟ್ಟೆ ನಿನನ್ನು
ಕನಸಲ್ಲಿ ತೆರೆದಿಟ್ಟೆ ನೋವನ್ನು
ನಿ ಬಂದು ಸೆರು ಮನಸ್ಸನ್ನು
ದುರಮಾಡು ನನ್ನ ನೋವನ್ನು

- Rajeshkiccha4

13 Jun 2017, 07:05 pm

ಸಾಲದ ಜೀವಿ

ಕಷ್ಟಗಿಳಿಗೆ ನೊಂದು ಕಣ್ಣೀರ ಸಾಗರ
ಜೀವನದ ಪಯಣವನ್ನು ದಾಟಳೆಂದು
ಹೊರೆತಿರುವೆ ಬಡ ಜೀವಿ ನಿನಿಂದು ಸಾಲಕಾಗಿ......

ಶ್ರೀಮಂತರ ಕಾಜಾಣ ಕಬ್ಬಿಣದ ಪೆಟ್ಟಿಗೆಯಲ್ಲಿ
ನಗುತ್ತಾ ಕುಳಿತಿರುವ ಲಕ್ಷ್ಮಿಯನ್ನು ಕೈಚಾಚಿ
ನೀ ಬೇಡುವೆ ಕಣ್ಣೀರ ಹೊರೆಸಲು ಬಾತಾಯೇ ಎಂದು ಸಾಲವಾಗಿ..........

ಬೆಂದ ಬಡಪಾಯಿಯ ನೋವು ನೋಡಲಾಗೆ
ಬಡ್ಡಿಯನ್ನು ಇನ್ನು ಹೆಚ್ಚು ಪಡೆದು ಉದ್ದಾರವಾಗಳು ಇನ್ನು ನಾಲ್ಕು ಜನರ ಕಣ್ಣೀರ
ಕುಡಿದು ಬದುಕಲು ಆಸೆಯಾಗಿ ಕೊಡುವರು ಲಕ್ಷ್ಮಿಯ ಮಕ್ಕಳು ತಮ್ಮಲ್ಲಿನ ಸ್ವಲ್ಪ ಹಣವನ್ನು ಸಾಲವಾಗಿ.................

ದುಡ್ಡು ನೋಡಿದ ದಲಿತರಂತೂ ನಗುಮುಖದ
ಸಂತಸಹೊತ್ತು ಮನೆಗೊಗುವಷ್ಟರಲ್ಲಿ
ಕಾದು ಕುಂತಿವೆ ನೂರು ಖರ್ಚು ಆ ಹಣವ ನುಂಗಲು...............

ಖಾಲಿಯಾಯಿತು ಕೈಯಂತೂ ಮತ್ತೆ ಮಾಮೂಲಿ ಯಥಾಸ್ಥಿತಿ ಅಂಗಳಾಚುವ ಪರಿಸ್ಥಿತಿ...........
ಬಂದರು ವಸುಳಿದಾರರು ತಿಂಗಳಯಿತೆಂದು
ಮನೆ ಬಾಗಿಲಿಗೆ ಕದ್ದು ಮುಚ್ಚಿ ತಾನಿಲ್ಲವೆಂದು
ಬಚ್ಚಿಟ್ಟುಕೊಂಡನು ಭಯದಿಂದ ಮನೆಯೊಳಗೆ..........

ತಾನು ನೋವನು ನಿಂಗುವುದು ಮರೆತು ಹೋದನು...........
ನೋವು ತನ್ನ ನುಂಗುತ್ತಿದ್ದರೆ ಕಣ್ಣೀರ ಮಡಿಲಲ್ಲಿ
ಮಲಗಿ ತಾನು ನೋಂದನು...........

- ಚುಕ್ಕಿ

13 Jun 2017, 03:31 pm

ಅದೇನೋ ಅವಸರ............

ಅದೇನೋ ಅವಸರ ನನ್ನ
ಮನಕೆ ನಿನ್ನ ನೋಡಿ ತಣ್ಣಗಾಗಲು
ತಾನು ನಿನ್ನ ನಗಿವಿನ ಹಾಗೆ..........

ಕುಂತು ನಿನ್ನ ಸನಿಹದಲ್ಲಿ
ಮಾತನಾಡಿ ಮನಸಿನಲ್ಲಿ
ಕೊಂಚ ನಿನ್ನ ಕಾಡಿ ಬೇಡಿ
ಮತ್ತೆ ನಿನ್ನ ಮಾತನಾಡಿ........

ಮಲಗುವಾಸೆ ನನಗಿಂದು ನಿನ್ನ
ಮಡಿಲ ಸ್ಪರ್ಶದಲ್ಲಿ ಬೆಚ್ಚನೆ
ಉಸಿರಿನಲ್ಲಿ...........

ಅದೇನೋ ಅವಸರ ನನಗೆ
ನಿನ್ನ ನೋಡುವ ತವಕದಲ್ಲಿ ನನ್ನ
ಮರೆಯುವ ಆಸೆಯಲ್ಲಿ.........

- ಚುಕ್ಕಿ

13 Jun 2017, 02:44 pm

ಅವಸಾನದಂಚಿನಲ್ಲಿ .... ಸುಪ್ತ ಪ್ರತಿಭೆಗಳು......

ಒಂದೇ- ಒಂದು ಹುಳಿ ಪೆಟ್ಟಿನಿಂದ
ಕಲ್ಲೊಂದು ಸುಂದರ ಶಿಲೆಯಾಗದು
ಒಂದೇ- ಒಂದು ಸಂದರ್ಶನದಿಂದ
ವ್ಯಕ್ತಿಯೊಬ್ಬನ ಪಾಂಡಿತ್ಯ ಅಳೆಯಲಾಗದು......

ಸುಂದರವಾದ ಉಪಹಾರ ನಿಲಯವು
ನೀಡುವುದೇ ರುಚಿಕರ ಉಪಹಾರ!
ಸಲಹಾಕಾರವೇ ಇಲ್ಲದ ಭೋಜನಾಲಯವು
ನೀಡಬಲ್ಲದು ಅದ್ಬುತ ರುಚಿಯ!

ಸುಪ್ತ ಪ್ರತಿಭೆ ಅರಿಯದು
ಮೆಚ್ಚಿಸುವ ಮಾರ್ಗ....
ಅವಕಾಶ ಸಿಕ್ಕರೆ ಮರೆಯದು
ದುಡಿಯುವ ಮಾರ್ಗ.....
ತೋರುವುದು ಎಲ್ಲರಿಗೂ
ಎಂದೆಂದೂ ಸನ್ಮಾರ್ಗ....


ಶಾರಧ

- ಶಕುಂತಲಾ

13 Jun 2017, 01:58 pm

ಹಂಬಲ

ಮನದೊಳಗಡೆ ಏನೋ ಒಂದು
ಸಿಹಿ ದುಗುಡವು ಅಡಗಿದೆ
ಮನ ಬಯಸುವ ಒಂದೇ..ಒಂದು
ಲಘು ಬೇಡಿಕೆ ಇಟ್ಟಿದೆ
ಕಾಣದೊಂದು ಮುಖವನೆಂದು
ನಾ ನೋಡುವೆ? ಎಂದಿದೆ
ಮುಖದ ಛಾಯೆ ನೆನೆದುಕೊಂಡು
ಹವಹವಿಸುವ ಹಾಗಿದೆ!

ಎಲ್ಲಿರುವೆ...? ನನ್ನ ಸಖಿ
ನಾ ತೊರೆದೆನು ಬಹಳ ದುಡುಕಿ!

ಕಡುಗತ್ತಲ ಕಪ್ಪು ಮಸಿ
ನಸು ನಗುವಿನ ನೋವು ಸೂಸಿ
ವಿರಹ ವಿನಃ ಕ್ಷಣಿಕ ಖುಷಿ
ಅಳು ಬರುತಿದೆ ಉಮ್ಮಳಿಸಿ...!

ಮನವು ವಿವಿಧ ಮುಖದ ಮನಸು
ಸೃಜನ ಭಾವ ಗಂಗೆಯಾಗಿ ಪವಿತ್ರ ನದಿಯಾಗಿರೆ
ನನ್ನ ಮನದ ದುಗುಡವನ್ನು ತೊಳೆವ ತಿಳಿ ಜಲವಾಗಿರೆ

ಬಾ ಬೇಗ ನನ್ನ ಮುದ್ದು ಸಖಿ
ನೀನೇ ನನ್ನ ಪ್ರಾಣ ಸಖಿ
- ದೇವ 'ನಾಯಕ' ಕಜ್ಜೇರ

- Dev

13 Jun 2017, 01:32 pm

"ಕರಿಕನ್ಯೆ"

ಕಪ್ಪು ಬಣ್ಣದ ಕರಿಕನ್ಯೆ
ಬಿಳಿ ಸೀರೆ ಉಟ್ಟು
ಕಾಲುಗಳಿಗೆ ಕಾಲ್ಗೆಜ್ಜೆ ತೊಟ್ಟು
ರಾತ್ರಿಯ ಸದ್ದು ಮಾಡುತ್ತಾ
ಹಾರಾಡುವ ಕೂದಲ್ಲಿ
ಹುಣ್ಣುಮೆ ಗಮಲಿನಂತ ಮಲ್ಲಿಗೆ
ಇಟ್ಟು ಸಿಂಗರಿಸಿಕೊಂಡಿದ್ದಾಳೆ
ಅಬ್ಬಾ.. ಕಪ್ಪು ಬಣ್ಣದಲ್ಲಿ
ಮಿಂಚುತ್ತಿರುವುದು ಹುಣ್ಣುಮೆ
ಚಂದ್ರನಾ...!!!!

- ಹೇಮಚಂದ್ರ

13 Jun 2017, 12:07 pm