ವಿಶಾಲವಾಗಿ, ದಟ್ಟವಾಗಿ ಬೆಳೆದು ನಿಂತ ಅರಣ್ಯ,
ಸಮುದ್ರವನ್ನೆ ನುಂಗುವ ಮೌನ,
ಹಕ್ಕಿಯ ಚಿಲಿಪಿಲಿಯು ಪ್ರತಿದ್ವನಿಸುತ್ತಿತ್ತು,
ಮೈ ಮರೆಸುವ ಸುಗಂದ , ಗಾಳಿಯಲಿ ತೇಲಿ ಬರುತ್ತಿತ್ತು,
ಸೂರ್ಯ ಎಷ್ಟೋ ಸೆಣಸುತ್ತಿದ್ದ ,ನೆಲ ಮುಟ್ಟಲಾಗುತ್ತಿರಲಿಲ್ಲ,
ಆ ಮೌನದ ಮದ್ಯೆ ಏನೋ ಶಬ್ದ,
ಪ್ರಕೃತಿ ಮಾತೆಯ ರಕ್ಷಣೆಗೆ ನಿಂತ ಸೈನ್ಯದಂತೆ,
ಹರಿಯುತ್ತಿತ್ತು ಅಲ್ಲೊಂದು ಜರಿ,
ಎತ್ತರವಾದ ಎದೆಯುಬ್ಬಿಸಿ ನಿಂತ ಮರಗಳು,
ಇದೆಲ್ಲ ನಮ್ಮದೆನ್ನುವ ನಂಬಿಕೆಯಿಂದ,
ಅಲೆದಾಡಿಕೊಂಡಿದ್ದವು ಪ್ರಾಣಿ-ಪಕ್ಷಿಗಳು,
ಅರೆ_______________________________
ಇದೆನಾಯಿತು , ಇಷ್ಟು ಹೊತ್ತು ಕಂಡಿದ್ದೆಲ್ಲ ಮಾಯೆಯೆ,
ಏನೀ ಕರ್ಕಶ ಶಬ್ದ ,
ಬರಿಯ ಧೂಳು,
ಹುಡುಕುವೆನೆಂದರು ಕಾಣದ ಪ್ರಾಣಿ-ಪಕ್ಷಿಗಳು.
ಅಳಿದುಳಿದವುಗಳು ಹೊಟ್ಟೆಗೆ ಹೊಲಸು ತಿಂದು ಬದುಕಿವೆ.
ಇಂದು ನೋಡಿದಷ್ಟೂ ದೂರ ಮರಗಳ ಬದಲು
ಎತ್ತರದ ಕಟ್ಟಡಗಳೆ ಕಾಣುತ್ತಿವೆ.
ಛೇ_____________________
ನಮಗೆಲ್ಲವನ್ನು ಕೊಟ್ಟ ಪ್ರಕೃತಿ ಮಾತೆಗೆ
ನಾವೇನು ಕೊಟ್ಟೆವು,
ಆಧುನಿಕರಣವೆಂಬ ಶಾಪವನ್ನು,
ನಗರೀಕರಣವೆಂಬ ನೋವನ್ನು ಕೊಟ್ಟೆವು,
ಅವಳ ಕರುಳ ಕುಡಿಗಳನ್ನೆ ಕಿತ್ತೆಸೆದೆವು,
ಗರ್ಭವನ್ನೆ ಬಗೆದೆವು,
ಇಷ್ಟಾದರು ಅವಳಿನ್ನೂ ಶಾಂತವಾಗಿದ್ದಾಳೆ,
ಏಕೆಂದರೆ, ಅವಳು ತಾಯಿಯಲ್ಲವೆ,
ಇನ್ನಾದರೂ ಬದಲಾಗೊಣ,
ಅವಳು ನಮಗೆ ಕೊಟ್ಟ ಕೊಡುಗೆಯನ್ನು
ಸ್ಮರಿಸೋಣ,
ಅವಳ ಕಣ್ಣ ನೀರಾಗುವ ಬದಲು,
ನಗುವಿನಲ್ಲಿರಲು ಬಯಸೋಣ...!
ಸೂರ್ಯ ಎಷ್ಟು ಉರಿದರು,
ಆ ಉರಿ ಕೆಡುಕನ್ನು ಸುಡುತ್ತದೆ,
ಚಂದ್ರ ಎಷ್ಟೇ,
ಕೇಡು ಬಯಸಬೇಕೆಂದುಕೊಂಡರು,
ಅವನಿಗರಿವಿಲ್ಲದೆ ದುರಾಸೆಯನ್ನು,
ಅಲೆಗಳ ಮೂಲಕ ಮನಸ್ಸಿನಿಂದ ಹೊರಹಾಕುತ್ತಾನೆ,
ಪಿತೂರಿಗೆ ಸ್ನೇಹದಲ್ಲಿ ಜಾಗವಿಲ್ಲ,
ಕೋಪಕ್ಕೆ ಆಯಸ್ಸು ಮೊದಲೆ ಇಲ್ಲ,
ಪ್ರೀತಿ-ಸ್ನೇಹವೆ ತುಂಬಿದೆ ನಮ್ಮೊಳಗೆಲ್ಲ,
ಸೂರ್ಯ-ಚಂದ್ರರಿರುವವರೆಗು ಸ್ನೇಹಕ್ಕೆ ಕೊನೆಯಿಲ್ಲ.
ನಿಮ್ಮ ಸ್ನೇಹ ಪಡೆದ ನಾನು ಧನ್ಯ,
ನಿಮ್ಮಿಂದ ದೂರಾಗಲು ನನಗಿಷ್ಟವಿಲ್ಲ...!
ಪಾತರಾಗಿತ್ತಿ ಪಕ್ಕದಲಿ ಕೂತು
ಇಳಿದುಬಾ ತಾಯಿ ಎಂದು ಗಂಗೆಯ ಕರೆದು
ಹಿಂದ ನೋಡದ ಗೆಳತಿ ಎಂದು ಬರೆದು
ಕಾವ್ಯ ಪ್ರಭೆಯ ಬೆಳಗಿಸಿದಿರಿ
ಗೆಳೆಯರ ಗುಂಪಿನ ನಾಯಕರಾದ
ನಿಮಗೆ ನಮ್ಮ ನಮನ
ಶಾಸ್ತ್ರವಾಗಿ,ಧರ್ಮವಾಗಿ ಯೋಗಜ್ಞಾನವಾಗಿ
ಅರಳು ಮರಳಿನ ಸತ್ಯದರ್ಶನ ಮಾಡಸಿ
ಗಿಡ ಗಂಟೆಯ ಕೊರಳೊಳಗಿಂದ
ದ್ವನಿಯಾಗಿ ಹೋಮ್ಮಿದಿರಿ
ರಾಶಿ ರಾಶಿ ಮುತ್ತುಗಳ ಬಿಟ್ಟು
ಜೀವನ ಯಾತ್ರೆ ಮುಗಿಸಿದ
ನಿಮಗೆಇದೋನಮನ, ನಿಮಗೆಇದೋನಮನ
ಕಷ್ಟಗಿಳಿಗೆ ನೊಂದು ಕಣ್ಣೀರ ಸಾಗರ
ಜೀವನದ ಪಯಣವನ್ನು ದಾಟಳೆಂದು
ಹೊರೆತಿರುವೆ ಬಡ ಜೀವಿ ನಿನಿಂದು ಸಾಲಕಾಗಿ......
ಶ್ರೀಮಂತರ ಕಾಜಾಣ ಕಬ್ಬಿಣದ ಪೆಟ್ಟಿಗೆಯಲ್ಲಿ
ನಗುತ್ತಾ ಕುಳಿತಿರುವ ಲಕ್ಷ್ಮಿಯನ್ನು ಕೈಚಾಚಿ
ನೀ ಬೇಡುವೆ ಕಣ್ಣೀರ ಹೊರೆಸಲು ಬಾತಾಯೇ ಎಂದು ಸಾಲವಾಗಿ..........
ಬೆಂದ ಬಡಪಾಯಿಯ ನೋವು ನೋಡಲಾಗೆ
ಬಡ್ಡಿಯನ್ನು ಇನ್ನು ಹೆಚ್ಚು ಪಡೆದು ಉದ್ದಾರವಾಗಳು ಇನ್ನು ನಾಲ್ಕು ಜನರ ಕಣ್ಣೀರ
ಕುಡಿದು ಬದುಕಲು ಆಸೆಯಾಗಿ ಕೊಡುವರು ಲಕ್ಷ್ಮಿಯ ಮಕ್ಕಳು ತಮ್ಮಲ್ಲಿನ ಸ್ವಲ್ಪ ಹಣವನ್ನು ಸಾಲವಾಗಿ.................
ದುಡ್ಡು ನೋಡಿದ ದಲಿತರಂತೂ ನಗುಮುಖದ
ಸಂತಸಹೊತ್ತು ಮನೆಗೊಗುವಷ್ಟರಲ್ಲಿ
ಕಾದು ಕುಂತಿವೆ ನೂರು ಖರ್ಚು ಆ ಹಣವ ನುಂಗಲು...............
ಖಾಲಿಯಾಯಿತು ಕೈಯಂತೂ ಮತ್ತೆ ಮಾಮೂಲಿ ಯಥಾಸ್ಥಿತಿ ಅಂಗಳಾಚುವ ಪರಿಸ್ಥಿತಿ...........
ಬಂದರು ವಸುಳಿದಾರರು ತಿಂಗಳಯಿತೆಂದು
ಮನೆ ಬಾಗಿಲಿಗೆ ಕದ್ದು ಮುಚ್ಚಿ ತಾನಿಲ್ಲವೆಂದು
ಬಚ್ಚಿಟ್ಟುಕೊಂಡನು ಭಯದಿಂದ ಮನೆಯೊಳಗೆ..........
ತಾನು ನೋವನು ನಿಂಗುವುದು ಮರೆತು ಹೋದನು...........
ನೋವು ತನ್ನ ನುಂಗುತ್ತಿದ್ದರೆ ಕಣ್ಣೀರ ಮಡಿಲಲ್ಲಿ
ಮಲಗಿ ತಾನು ನೋಂದನು...........
ಮನದೊಳಗಡೆ ಏನೋ ಒಂದು
ಸಿಹಿ ದುಗುಡವು ಅಡಗಿದೆ
ಮನ ಬಯಸುವ ಒಂದೇ..ಒಂದು
ಲಘು ಬೇಡಿಕೆ ಇಟ್ಟಿದೆ
ಕಾಣದೊಂದು ಮುಖವನೆಂದು
ನಾ ನೋಡುವೆ? ಎಂದಿದೆ
ಮುಖದ ಛಾಯೆ ನೆನೆದುಕೊಂಡು
ಹವಹವಿಸುವ ಹಾಗಿದೆ!
ಎಲ್ಲಿರುವೆ...? ನನ್ನ ಸಖಿ
ನಾ ತೊರೆದೆನು ಬಹಳ ದುಡುಕಿ!
ಕಡುಗತ್ತಲ ಕಪ್ಪು ಮಸಿ
ನಸು ನಗುವಿನ ನೋವು ಸೂಸಿ
ವಿರಹ ವಿನಃ ಕ್ಷಣಿಕ ಖುಷಿ
ಅಳು ಬರುತಿದೆ ಉಮ್ಮಳಿಸಿ...!
ಮನವು ವಿವಿಧ ಮುಖದ ಮನಸು
ಸೃಜನ ಭಾವ ಗಂಗೆಯಾಗಿ ಪವಿತ್ರ ನದಿಯಾಗಿರೆ
ನನ್ನ ಮನದ ದುಗುಡವನ್ನು ತೊಳೆವ ತಿಳಿ ಜಲವಾಗಿರೆ
ಬಾ ಬೇಗ ನನ್ನ ಮುದ್ದು ಸಖಿ
ನೀನೇ ನನ್ನ ಪ್ರಾಣ ಸಖಿ
- ದೇವ 'ನಾಯಕ' ಕಜ್ಜೇರ
ಕಪ್ಪು ಬಣ್ಣದ ಕರಿಕನ್ಯೆ
ಬಿಳಿ ಸೀರೆ ಉಟ್ಟು
ಕಾಲುಗಳಿಗೆ ಕಾಲ್ಗೆಜ್ಜೆ ತೊಟ್ಟು
ರಾತ್ರಿಯ ಸದ್ದು ಮಾಡುತ್ತಾ
ಹಾರಾಡುವ ಕೂದಲ್ಲಿ
ಹುಣ್ಣುಮೆ ಗಮಲಿನಂತ ಮಲ್ಲಿಗೆ
ಇಟ್ಟು ಸಿಂಗರಿಸಿಕೊಂಡಿದ್ದಾಳೆ
ಅಬ್ಬಾ.. ಕಪ್ಪು ಬಣ್ಣದಲ್ಲಿ
ಮಿಂಚುತ್ತಿರುವುದು ಹುಣ್ಣುಮೆ
ಚಂದ್ರನಾ...!!!!