ಅದೊಂದು ದಿನ ಮುಂಜಾನೆ ನಾ ಹೊರಟಿದ್ದೆ ,
ಸೂರ್ಯನೂ ಎದ್ದಿರಲಿಲ್ಲ,
ಅಂದಿನ ಚಳಿಗ ಹನಿ ನೀರು ಮಂಜಾಗುತ್ತಿತ್ತು ,
ಅರೆ ಯಾರೋ ನರಳುತ್ತಿದ್ದಂತೆ ಭಾಸ ,
ಆ ಶಬ್ದವನ್ನೇ ಹಿಂಬಾಲಿಸಿದೆ ,
ಇನ್ನೂ ಘಾಡವಾದ ಕತ್ತಲೆ ಸರಿದಿರಲಿಲ್ಲ ,
ಅಲ್ಲಿದ್ದದ್ದು ಪ್ರಾಣಿ ಎಂದು ಭಾವಿಸಿ,
ಹತ್ತಿರ ಹೋದೆ , ಭಯದಿಂದಲೆ,
ಏನಾಷ್ಚರ್ಯ ಅದು ನನ್ನಂತೆ ಮಾನವ,
ಒಂದು ತುಂಡು ಬಟ್ಟೆ ಬಿಟ್ಟರೆ
ಅವನಲ್ಲಿ ಏನೂ ಇಲ್ಲ ,
ಮರಕ್ಕಂಟಿದ ಬಳ್ಳಿಯಂತೆ ,ಮಾಂಸವೆಲ್ಲ
ಕರಗಿಹೋಗಿ ಅಳಿದುಳಿದ ಮೂಳೆಯಲ್ಲೆ
ಅವನ ದೇಹ ನಡುಗುತ್ತಿತ್ತು.
ನನ್ನೊಂದು ಪ್ರಶ್ನೆಗೆ ಅವನು ಕೊಟ್ಟ ಉತ್ತರಕ್ಕೆ ,
ಕಲ್ಲಿಗೂ ಕಣ್ಣೀರು ಬರಬಹುದು,
ಬೆಟ್ಟವೇ ಕರಗಿ ನೆಲಕಚ್ಚಬಹುದು,
ಆ ಒಂದು ಮಾತಲಗಲ್ಲೆ ಅಡಗಿತ್ತು ಅವನೆಲ್ಲ
ನೋವು , ಯಾತನೆ,ಅಸಹಾಯಕತೆ,ಭಯವೆಲ್ಲವು.......
ಅದುವೇ ಕ್ರೂರ ಹಸಿವು...!
ತುತ್ತಿಗಾಗಿ ಏಕೆ ಜಗಳ, ತುತ್ತೇ ನಮ್ಮೆಲ್ಲರ ಜೀವಾಳ,
ಮರೆಯಬೇಡವೋ ಮನುಜ ತುತ್ತಿನ ಮೂಲ,
ನೀನೆಸೆಯೋ ಒಂದು ತುತ್ತಲ್ಲೆ ಅಡಗಿದೆ ಒಂದು
ಜೀವ ......ಎಚ್ಚರ ...!
ಆ ಶಶಿಯ ಮರುಹುಟ್ಟು ನೋಡಿ ನಗುತ ಬದುಕುವೆನು
ಇರುಳಲು ಹೊಳೆಯುವ ಚುಕ್ಕೆಯ ನೋಡಿ ಮಿನುಗುವೆನು
ನನಗೂ ಆ ಶಶಿಯಂತೆ ಮರು ಜನ್ಮ ಸಿಗುವುದೇನು
ಮನಸಿನ ಕಾರಿರುಳ ಒಪ್ಪಿ ನಗುತ ಹೊಳೆಯಬಲ್ಲೆನೇನು......
ತಾರೆಗಳು ಸಂಜಾ ವೇಳೆಯಲ್ಲಿ
ಆಡುತ್ತಿದ್ದರು ಉಲ್ಲಾಸದಿಂದ
ಮೇಘರಾಜನ ಮನೆಯ ಅಂಗಳದಲ್ಲಿ
ತಮ್ಮ ಬೆಳದಿಂಗಳ ನಗುವು ಚೆಲ್ಲಿ ಬಾನಿಗೆ......
ಬಂದನು ಶಶಿಯು ತನ್ನ ತಂಪನ್ನು
ಬೀರುತ್ತಾ ತಾರೆಗಳೆಡೆಗೆ........
ಅವನನೋಡಿ ಮನಸೋತ ನಕ್ಷತ್ರಗಳು
ನಿಂತವು ಅವನಲ್ಲಿ ತಮ್ಮ ಚೆಲುವನ್ನು ಚೆಲ್ಲಿ
ಅವನ ಬೆಳಕ ಹೆಚ್ಚಿಸಲು ಇರುಳಿನ ಮಂಕಾದ ಕತ್ತಲು ಕಳೆಯಲು .........
ನಸು ನಗುವಿನ ಹೂವೊಂದು
ಮಸುಕಿನಲ್ಲಿ ಅರಳಿದಂತೆ
ಜೇನು ಗೂಡ ಮನೆಯ ನೋಡಿ
ಜೀವಿಸುವ ತವಕದಂತೆ
ಪ್ರಣಯವಾಯಿತು ಕಾಡಿ
ಮುದ್ದು ಮುಖವ ನೋಡಿ ನೋಡಿ
ಚೆಲುವ ಹರೆಯ ವಯಸ್ಸೆನ್ನದೆ
ಚೆಲ್ಲಾಟವ ಅರಿಯದಾದೆ
ಕಾಂತಿಯುತಾ ಮುಖ ತೊಟ್ಟ
ರಕ್ಕಸಿಯ ಬಲೆಗೆ ಬಿದ್ದೆ!
ಆದರೆ...
ಚೆಲುವನರಸಿ ಬಂದ ಚೆಲುವೆ
ಮುಖವ ನೋಡಿ ಅಂಜುತಿರೆ
ಸಂಶಯವೋ ಉಕ್ಕಿ ಉಕ್ಕಿ
ಮನದೊಳಗೆ ಬಿಕ್ಕಿ ಬಿಕ್ಕಿ
ತೀರಾ ನೇರ ಅವಳ ನೋಟ
ಚುಚ್ಚಿ ಹೇಳುತಿದೆ ನೀತಿ ಪಾಠ
ಅವಳು ದುಃಖ ಮರೆಮಾಚುತಾ
ನಕ್ಕು ನಕ್ಕು ಸಹಿಸಿಕೊಳ್ಳುತಾ
ಬಂದು ನಿಂತು ಹೇಳಿದಳು
ನಿನ್ನ ನಾನು ಮರೆಯಲಾರೆ
ದ್ರೋಹವೆಂದು ಮಾಡಲಾರೆ
ಕೇಳು ಸಖ ನನ್ನ ಮಾತು
ಮರೆತುಬಿಡು ನನ್ನನಿಂತು.!
ಕಾರಣವ ಕೇಳಬೇಡ
ತಪ್ಪು ದಾರಿ ತುಳಿಯಬೇಡ
ನಿನ್ನ ಒಳಿತಿಗಾಗಿ ಈ ನಿರ್ಧಾರ
ಮರೆತು ಬಿಡು ಭರಪೂರ
ಯಶಸ್ಸು ನಿನ್ನದಾಗಿ...
ಕೀರ್ತಿ ಹೆಸರು ಹೆಚ್ಚಾಗಿ
ಮರೆಯಬೇಡ ನನ್ನನಾಗ
ನೀಡು ಹೃದಯದಲ್ಲಿ ಪುಟ್ಟ ಜಾಗ
ಎಂದು ಹೇಳಿ ಹೊರಟ ಸಖಿ
ನನ್ನ ಮನದ ಜೀವನ್ಮುಖಿ
ಛೇ! ನಾನೆಂಥಾ ದಡ್ಡ ಪ್ರೇಮಿ?
ನನ್ನವಳು ಚಿನ್ನ ಪ್ರೇಮಿ
ಅರಿಯದಾಗಿ ಅವಳ ಮನಸು
ಎಗರಾಡಿದೆ ಇರಿಸು ಮರಿಸು
ಸರಿ...
ಆಯಿತೆನ್ನ ಮುದ್ದು ಚೆಲುವೆ
ಸಾಧನೆಯು ನನ್ನ ಗೆಲುವೆ
ನಿನ್ನ ಅಕ್ಕರೆಯು ಸಾಕು
ನನಗೆ ನಿನ್ನ ಪ್ರೀತಿ ಬೇಕು
- ದೇವ 'ನಾಯಕ' ಕಜ್ಜೇರ