Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ ಪ್ರೇಮ ನನಗಲ್ಲ...!

ಪ್ರೇಮ ಪತ್ರ ಬರೆಯುತಿರುವೆ
ಪ್ರೇಮಿ ನಾನಲ್ಲ!
ಅನನ್ಯ ಪ್ರೀತಿ ವ್ಯಕ್ತ ಪಡಿಸುತ್ತಿರುವೆ
ನನ್ನ ಪ್ರೇಯಸಿಗಲ್ಲ

ಅನ್ಯ ಮನಗಳ ದಾರ ಹೊಸೆದು
ಸ್ನೇಹವೆಂಬ ತೈಲ ಹಾಕಿ
ಮಧುರ ಪ್ರೇಮದ ದೀಪ ಹಚ್ಚಿ
ಎರಡು ಮನಗಳನು ತೃಪ್ತಿ ಪಡಿಸುತಿರುವೆ

- Dev

15 Jun 2017, 02:23 pm

ಭಗ್ನ ಪ್ರೇಮಿಯ ಅಳಲು

ಮಿಂಚಿನ ಓಟದಲಿ ಆ ನೇಸರಗಳು
ಹುಡುಕುತಿವೆ ಗೆಳತಿಯ...... ನಡುಗುತಿವೆ ಕೈ- ಕಾಲುಗಳು
ಮಾತನಾಡಿಸಲು ಭಯ.....
ಒಡನೆ ಹನ್ವಸ್ಥಿ ಬಿಸಿಯಾದೀತು
ಜೋಕೆ,ಎಚ್ಚರಿಸಿದನು ಗೆಳೆಯ....

ಪ್ರೀತಿ- ಪ್ರೇಮದ ಅರಿವಿಲ್ಲದ ಹುಡುಗಿ
ತಂದೆ- ತಾಯಿಯ ಒಲವಿನ ಬೆಡಗಿ
ತನ್ನ ಹಿಂಬಾಲಕ ರ ಹುಡುಕುತ
ಸಾಗಿದಳು ತನ್ನ.....
ಹೆಜ್ಜೆಗಳೊಂದಿಗೆ ಮೆಲುಕಾಕುತ.....

ಅವನು-ಅವಳ ನೋಡುವುದರಲ್ಲೆ
ಕಳೆದ ಎರಡು ವರುಷ.....
ಅವಳು ಮುಗಿಸಿದಳಷ್ಟರಲ್ಲೆ
ಪದವಿ ಪೂರ್ವದ ಎರಡು ವರುಷ....

ಮುಂದೆ ಕಾಡಿತು ಅವನಿಗೊಂದು
ಚಿಂತೆ......
ನೋಡಲಾಗದೆ ಅವಳನಿನ್ನೆಂದು
ನನ್ನ ಜೊತೆ....

ಅಕಸ್ಮಾತ್ತಾಗಿ ಎದುರಾಗಲು
ಅವಳೊಂದು ದಿನ...
ಪ್ರೀತಿಯ ಮೊಂಬತ್ತಿ ಹಿಡಿದು
ಧೈರ್ಯ ಮಾಡಿ ಹೊರಟ
ಮಾತನಾಡಿಸಲು ಈ ದಿನ.....
ಅವಳು ನುಡಿದಳು ನಿನಾರು?
ಅರಿಯೆನು ನಾನೆಂದು.......!

ಭಗ್ನ ಪ್ರೇಮಿಯ ಹೃದಯ ಜಾರಿ
ನಾ ಅಂದೆ ಮಾತನಾಡಿಸಿದಿದ್ದರೆ
ಅವಳಾಗುತಿದ್ದಳೇನೋ ......?
ನನ್ನ ಮಧನಾರಿ.......
ಆದರೆ ,ನಾನಾದೆ ಒಂದು
ಕುರಿ....!


ಶಾರಧ

- ಶಕುಂತಲಾ

15 Jun 2017, 11:55 am

ಹಸಿವು

ಅದೊಂದು ದಿನ ಮುಂಜಾನೆ ನಾ ಹೊರಟಿದ್ದೆ ,
ಸೂರ್ಯನೂ ಎದ್ದಿರಲಿಲ್ಲ,
ಅಂದಿನ ಚಳಿಗ ಹನಿ ನೀರು ಮಂಜಾಗುತ್ತಿತ್ತು ,
ಅರೆ ಯಾರೋ ನರಳುತ್ತಿದ್ದಂತೆ ಭಾಸ ,
ಆ ಶಬ್ದವನ್ನೇ ಹಿಂಬಾಲಿಸಿದೆ ,
ಇನ್ನೂ ಘಾಡವಾದ ಕತ್ತಲೆ ಸರಿದಿರಲಿಲ್ಲ ,
ಅಲ್ಲಿದ್ದದ್ದು ಪ್ರಾಣಿ ಎಂದು ಭಾವಿಸಿ,
ಹತ್ತಿರ ಹೋದೆ , ಭಯದಿಂದಲೆ,
ಏನಾಷ್ಚರ್ಯ ಅದು ನನ್ನಂತೆ ಮಾನವ,
ಒಂದು ತುಂಡು ಬಟ್ಟೆ ಬಿಟ್ಟರೆ
ಅವನಲ್ಲಿ ಏನೂ ಇಲ್ಲ ,
ಮರಕ್ಕಂಟಿದ ಬಳ್ಳಿಯಂತೆ ,ಮಾಂಸವೆಲ್ಲ
ಕರಗಿಹೋಗಿ ಅಳಿದುಳಿದ ಮೂಳೆಯಲ್ಲೆ
ಅವನ ದೇಹ ನಡುಗುತ್ತಿತ್ತು.
ನನ್ನೊಂದು ಪ್ರಶ್ನೆಗೆ ಅವನು ಕೊಟ್ಟ ಉತ್ತರಕ್ಕೆ ,
ಕಲ್ಲಿಗೂ ಕಣ್ಣೀರು ಬರಬಹುದು,
ಬೆಟ್ಟವೇ ಕರಗಿ ನೆಲಕಚ್ಚಬಹುದು,
ಆ ಒಂದು ಮಾತಲಗಲ್ಲೆ ಅಡಗಿತ್ತು ಅವನೆಲ್ಲ
ನೋವು , ಯಾತನೆ,ಅಸಹಾಯಕತೆ,ಭಯವೆಲ್ಲವು.......
ಅದುವೇ ಕ್ರೂರ ಹಸಿವು...!



ತುತ್ತಿಗಾಗಿ ಏಕೆ ಜಗಳ, ತುತ್ತೇ ನಮ್ಮೆಲ್ಲರ ಜೀವಾಳ,
ಮರೆಯಬೇಡವೋ ಮನುಜ ತುತ್ತಿನ ಮೂಲ,
ನೀನೆಸೆಯೋ ಒಂದು ತುತ್ತಲ್ಲೆ ಅಡಗಿದೆ ಒಂದು
ಜೀವ ......ಎಚ್ಚರ ...!

*ಅನ್ನದಾತ ಸುಖೀ ಭವ*

< ಶುಭೋದಯ >

-ಮನೋಜ್ -

- manoj kumar

15 Jun 2017, 06:31 am

ಕವಿದಿರಲು‌ ಕಾರಿರುಳು.....

ಚಂದಿರನಿಲ್ಲ ಇರುಳಿನಲಿ
ಕವಿದಿರಲು ಕಾರಿರುಳು‌ ಎದೆಯಲಿ
ಚುಕ್ಕಿ ತಾರೆಗಳು ಕಳುವಾಗಿವೆ ಬಾನಿನಲಿ
ಕುಳಿತಿರುಲು ನಾನು ಇಲ್ಲಿ ಮೌನದಲಿ‌....

ಹುಡುಕುತ ಹೋಗಲೇನು ಆ ಬೆಳದಿಂಗಳ
ಕಾದು ಬಂದ ಮೇಲೆ ನೋಡಲೇನು‌ ನಗುವ ತಿಂಗಳ
ನನಗೂ ಬೇಕಿದೆ ಮಿನುಗುವ ಚುಕ್ಕಿಗಳ‌ ಸಹವಾಸ
ಸೇರಿ‌ ‌ಹೋಗಲೇನು‌ ಅವುಗಳ‌ ಮುಗಿಸಿ ವನವಾಸ .....

ಹೂತಿರುವೆ ನೋವುಗಳ ಮೇಲೆ ಕಲ್ಲ ಎಳೆದು
ಕಣ್ಣ ಹನಿ ಹಿಡಿದಿಟ್ಟಿರುವೆ ನನ್ನಲೆ‌ ಕದ್ದು
ನಗುವೆನು ಖುಷಿಯ ಮುಖವಾಡವ ಹೊದ್ದು
ಕಳುಹಿಸಿ ಬಿಡಲೆ ಮನಸನೆ ನನ್ನಿಂದಲೆ ಒದ್ದು .....

ಆ ಶಶಿಯ ಮರುಹುಟ್ಟು ನೋಡಿ ನಗುತ ಬದುಕುವೆನು
ಇರುಳಲು ಹೊಳೆಯುವ ಚುಕ್ಕೆಯ ನೋಡಿ ಮಿನುಗುವೆನು
ನನಗೂ ಆ ಶಶಿಯಂತೆ ಮರು ಜನ್ಮ ಸಿಗುವುದೇನು
ಮನಸಿನ ‌ಕಾರಿರುಳ ಒಪ್ಪಿ‌ ನಗುತ‌ ಹೊಳೆಯಬಲ್ಲೆನೇನು......

- ಶ್ರೀಕಾವ್ಯ

14 Jun 2017, 11:24 pm

ಜೀವನದ ಫಲ......

ವಿದ್ಯೆಯೇ ಒಂದು ಜ್ಯೋತಿ
ಅದೇನೆ ನಮಗೆ ಕೀರ್ತಿ
ಇದನ್ನು ಪಡೆಯಲು ಬೇಕು ಯತ್ನಿಸಿ
ಹಗಲಿರುಳು ಪ್ರಯತ್ನಿಸಿ......

ಇದೆ ಜೀವನದ ರೀತಿ.......

- Acchu love

14 Jun 2017, 11:16 pm

ತಾರೆಗಳು........

ತಾರೆಗಳು ಸಂಜಾ ವೇಳೆಯಲ್ಲಿ
ಆಡುತ್ತಿದ್ದರು ಉಲ್ಲಾಸದಿಂದ
ಮೇಘರಾಜನ ಮನೆಯ ಅಂಗಳದಲ್ಲಿ
ತಮ್ಮ ಬೆಳದಿಂಗಳ ನಗುವು ಚೆಲ್ಲಿ ಬಾನಿಗೆ......

ಬಂದನು ಶಶಿಯು ತನ್ನ ತಂಪನ್ನು
ಬೀರುತ್ತಾ ತಾರೆಗಳೆಡೆಗೆ........
ಅವನನೋಡಿ ಮನಸೋತ ನಕ್ಷತ್ರಗಳು
ನಿಂತವು ಅವನಲ್ಲಿ ತಮ್ಮ ಚೆಲುವನ್ನು ಚೆಲ್ಲಿ
ಅವನ ಬೆಳಕ ಹೆಚ್ಚಿಸಲು ಇರುಳಿನ ಮಂಕಾದ ಕತ್ತಲು ಕಳೆಯಲು .........

- ಚುಕ್ಕಿ

14 Jun 2017, 05:56 pm

ಕವನ

ಉಸಿರಲ್ಲಿ ಬೆರೆತ ಕವನ
ಮಾತಿಲ್ಲದ ಮಾತಾಯಿತೆ ಪದಗಳಲ್ಲಿ........
ಭಾವನೆಗಳ ಕೈ ಸೇರಿದ ಪದಗಳು
ಓದುಗರ ಮನ ಮುಟ್ಟಿತೇ ಪ್ರೀತಿಯಿಂದ
ನನ್ನ ಮನವ ತಿಳಿಸಿ ಮಮತೆಯಿಂದ

ಕವನವಾಗಿ ನನ್ನ ಪ್ರಾಣವಾಯಿತೆ............

- ಚುಕ್ಕಿ

14 Jun 2017, 05:44 pm

ಕನವರಿಕೆ

ಮುಗಿದು ಹೋದ ಕಾಲವ
ಮುಂಜಾನೆ- ಮುಸ್ಸಂಜೆ
ನೆನೆಯುತ ಮರೆಯುವೆ
ನನ್ನೆಲ್ಲ ದುಗುಡವ,,,,,
ಕರುಣಿಸು ನನ್ನವ್ವ ....

ನಿನ್ನ ಸೇವೆಯೆ ನನ್ನುಸಿರು
ನೀ- ತಾ ಬಾಳಲಿ ಹೊಸ ಚಿಗುರು
ನಿನಗಾಗಿ ಮುಡಿಪಿಡುವೆ ನನ್ನುಸಿರು
ಜಯಶಾಲಿ ಆಗೆಂದು ನೀ ಹರಸು!

ನಿನದೆ ಈ ಜಗವೆಲ್ಲ
ನೀ ಕಣ್ಮುಚ್ಚಿ ಕುಳಿತರೆ ಗತಿಯಿಲ್ಲ
ಸುಸಂಸ್ಕೃತ ಪ್ರಜೆಗಳ
ನಿರ್ಮಾಣದ ಜವಾಬ್ದಾರಿ ನನದು
ಗುರುವಾಗಿ ಸನ್ಮಾರ್ಗ ತೊರುವ
ಹೊಣೆಗಾರಿಕೆ ನನದು
ನೀ ನೀಡು ಸದಾವಕಾಶ,,,,,,
ನಾ ಬೆಳಗುವೆ ಪ್ರಕಾಶ,,,,,,,,

ಕಲ್ಮಶವಿಲ್ಲದ ಮಕ್ಕಳ ಹೃದಯದಿ
ಹರಿಸಲು ಪರಿಶುದ್ಧ ಜ್ಞಾನದ ನದಿ
ನಾ ಕನವರಿಸುತಿರುವೆ ಕಾತುರದಿ
ನೀ ಎಡೆಗೊಡು ಈ ಜನುಮದಿ!



ಶಾರಧ

- ಶಕುಂತಲಾ

14 Jun 2017, 04:53 pm

ಸಿರಿಸಂಪತ್ತು

ಕನ್ನಡವು ಚೆನ್ನ ಚೆನ್ನ ಅರ್ಥ ಗಾಂಭೀರ್ಯ
ಇದರ ಬೆಲೆಗೆ ಸರಿಸಮವೋ ವಜ್ರ ವೈಢೂರ್ಯ
ಸಿಗದೆಂದು ಹಲವರಿಗೆ
ಸಿಗವದೊಂದೆ ಕೆಲವರಿಗೆ
ಗುಣವಂತ ಸಿರಿನವಂತ
ಘನವಂತ ಕನ್ನಡಿಗನಿಗೆ
ಸೊಕ್ಕು ರಹಿತ ಸ್ವಾಭಿಮಾನ ತೋರುವ ಚೆನ್ನಿಗನಿಗೆ
- ದೇವ 'ನಾಯಕ' ಕಜ್ಜೇರ

- Dev

14 Jun 2017, 03:26 pm

ನನ್ನವಳು ಮುದ್ದು ಸಖಿ.....!

ನಸು ನಗುವಿನ ಹೂವೊಂದು
ಮಸುಕಿನಲ್ಲಿ ಅರಳಿದಂತೆ
ಜೇನು ಗೂಡ ಮನೆಯ ನೋಡಿ
ಜೀವಿಸುವ ತವಕದಂತೆ

ಪ್ರಣಯವಾಯಿತು ಕಾಡಿ
ಮುದ್ದು ಮುಖವ ನೋಡಿ ನೋಡಿ

ಚೆಲುವ ಹರೆಯ ವಯಸ್ಸೆನ್ನದೆ
ಚೆಲ್ಲಾಟವ ಅರಿಯದಾದೆ
ಕಾಂತಿಯುತಾ ಮುಖ ತೊಟ್ಟ
ರಕ್ಕಸಿಯ ಬಲೆಗೆ ಬಿದ್ದೆ!
ಆದರೆ...
ಚೆಲುವನರಸಿ ಬಂದ ಚೆಲುವೆ
ಮುಖವ ನೋಡಿ ಅಂಜುತಿರೆ
ಸಂಶಯವೋ ಉಕ್ಕಿ ಉಕ್ಕಿ
ಮನದೊಳಗೆ ಬಿಕ್ಕಿ ಬಿಕ್ಕಿ
ತೀರಾ ನೇರ ಅವಳ ನೋಟ
ಚುಚ್ಚಿ ಹೇಳುತಿದೆ ನೀತಿ ಪಾಠ
ಅವಳು ದುಃಖ ಮರೆಮಾಚುತಾ
ನಕ್ಕು ನಕ್ಕು ಸಹಿಸಿಕೊಳ್ಳುತಾ
ಬಂದು ನಿಂತು ಹೇಳಿದಳು

ನಿನ್ನ ನಾನು ಮರೆಯಲಾರೆ
ದ್ರೋಹವೆಂದು ಮಾಡಲಾರೆ
ಕೇಳು ಸಖ ನನ್ನ ಮಾತು
ಮರೆತುಬಿಡು ನನ್ನನಿಂತು.!
ಕಾರಣವ ಕೇಳಬೇಡ
ತಪ್ಪು ದಾರಿ ತುಳಿಯಬೇಡ
ನಿನ್ನ ಒಳಿತಿಗಾಗಿ ಈ ನಿರ್ಧಾರ
ಮರೆತು ಬಿಡು ಭರಪೂರ
ಯಶಸ್ಸು ನಿನ್ನದಾಗಿ...
ಕೀರ್ತಿ ಹೆಸರು ಹೆಚ್ಚಾಗಿ
ಮರೆಯಬೇಡ ನನ್ನನಾಗ
ನೀಡು ಹೃದಯದಲ್ಲಿ ಪುಟ್ಟ ಜಾಗ
ಎಂದು ಹೇಳಿ ಹೊರಟ ಸಖಿ
ನನ್ನ ಮನದ ಜೀವನ್ಮುಖಿ

ಛೇ! ನಾನೆಂಥಾ ದಡ್ಡ ಪ್ರೇಮಿ?
ನನ್ನವಳು ಚಿನ್ನ ಪ್ರೇಮಿ

ಅರಿಯದಾಗಿ ಅವಳ ಮನಸು
ಎಗರಾಡಿದೆ ಇರಿಸು ಮರಿಸು
ಸರಿ...
ಆಯಿತೆನ್ನ ಮುದ್ದು ಚೆಲುವೆ
ಸಾಧನೆಯು ನನ್ನ ಗೆಲುವೆ
ನಿನ್ನ ಅಕ್ಕರೆಯು ಸಾಕು
ನನಗೆ ನಿನ್ನ ಪ್ರೀತಿ ಬೇಕು
- ದೇವ 'ನಾಯಕ' ಕಜ್ಜೇರ

- Dev

14 Jun 2017, 01:32 pm