Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಮ್ಮ ಸೈನಿಕರು
ನಮ್ಮ ಯೋಧರ ಬಗ್ಗೆ ಹೆಮ್ಮೆ ಇರುವವರಿಗಾಗಿ.
..ಈ ಕವನ...
ನಮ್ಮ ಸೈನಿಕ ನಮ್ಮ ದೇಶದ ಬಂಗಾರ.
ಶತ್ರುಗಳ ಹೊಡೆದುರುಳಿಸುವಲ್ಲಿ ಈತ ಬಲು ಚತುರ.!
ಅವರ ಕಷ್ಟದಿಂದಲೇ ಕಾಣುವುದು ನಮ್ಮ ದೇಶ ಸುಂದರ.
ಹಾಕಿರಿ ಕಂಡೊಡನೆ ಇವರಿಗೊಂದು ಜೈಕಾರ.!
ನೀಡುವರು ನಮ್ಮ ನಿಮ್ಮೆಲ್ಲರಿಗೂ ರಕ್ಷಣೆ
ತಪ್ಪುವುದಿಲ್ಲ ದಿನನಿತ್ಯ ಶತ್ರುಗಳೊಡನೆ ಘರ್ಷಣೆ.!
ಇವರು ಸಮವಸ್ತ್ರದಲ್ಲಿ ಕಾಣುವರು ಬಲು ಆಕರ್ಷಣೆ
ಅವರೇ ನಮ್ಮ' ನಿಜ ದೇವರು' ಕೇಳು ನನ್ನಾಣೆ.!
ಕಾಯುವರು ನಮಗಾಗಿ ಹಗಲಿರುಳು ಕಾವಲು
ನಮಗಾಗಿ ನಿದ್ದೆ ಕೆಡುವುದು ದಿನನಿತ್ಯ ಇವರಿಗೆ ಮಾಮೂಲು!
ಇವರು ಬಿಡರು ದೇಶದೊಳಗಡೆ ಅಕ್ರಮ ಶಸ್ತ್ರಾಸ್ತ್ರ ನುಸುಳಲು.!
ಬಿಡರು ಶತ್ರುಗಳ ಗಡಿಯ ಎಲ್ಲೆ ಮೀರಲು.!
ಇವರೇ.ನಮ್ಮ ವೀರ ಯೋಧರು...!
ಇವರೇ..ನಮ್ಮ ವೀರ ಯೋಧರು..!
ಕಾಣುವ ದೇವರು ಗುಡಿಯೊಳು ಕುಳಿತಿರಲು
ಕಾಣದ ದೇವರು ಗಡಿಯೊಳು ನಿಂತಿಹರು.!
ಕೊಡು ದೇವ ನೀ ನೂರಾನೆ ಬಲವ..ಆ ಕಾಣದ ದೇವರಿಗೆ
ನೀಡು ದೇವ ಆ ಕಾಣದ ದೇವರಿಗೆ.ನೂರ್ಕಾಲ ಆಯುರ್-ಆರೋಗ್ಯ .!
ಇವರಿಂದಲೇ ದೇಶಕೆ ಬೆಳಕು..ಇವರಿಂದಲೇ ದೇಶಕೆ ಹೊಳಪು.!
- ಪ್ರಕುಲ್
16 Jun 2017, 10:36 am
ನೆನೆದು ನಿನ್ನ, ಭಾವ ನವಿರ
ಮನಕೆ ಬೇಸರ ನೀನಿರದೆ..ಹತ್ತಿರ
ಚಿಕ್ಕ ಮುನಿಸು, ಹುಸಿ ಕೋಪಕೆ
ಹಟ ತೋರಿ ನಡೆದೆ ನೀ..ದೂರಕೆ
ನೀನಿಲ್ಲದೆ ಸಾಗದು ಬಾಳ ನೌಕೆ
ಎದೆಯು ಭಾರ ಈ ನಿನ್ನ..ಮೌನಕೆ
ಹಗಲಿರುಳು ಉರುಳಿ ಕಳೆದು ವರುಷ
ಏಕಾಂತಕೆ ಬಲಿಯಾಯ್ತ ನನ್ನ..ಹರುಷ
ನಿನ್ನೊಲುಮೆ ನುಡಿಗಾಗಿ ನನ್ನ ನಿರೀಕ್ಷೆ
ಸಾಕು ಮಾಡು ಈ ನಿನ್ನ..ಪರೀಕ್ಷೆ
- Indushekar Chinivar
16 Jun 2017, 10:06 am
ನಿದ್ದೆಯಾಗೆ ಜಾರಿದ ಕಣ್ಣು
ಅದರಲ್ಲಿ ನೀನಿರುವುದು ನೋಡು
ತಗಿಯಲ್ಲ ಅಂತಿದೆ...............
ಕನಸಾಗಿ ನನ್ನ ಸೇರುವುದು ನಿನ್ನ ತಪ್ಪು ನಾನೇನು ಮಾಡಲಿ ನಿನ್ನ ಬಿಟ್ಟು ಒಂಟಿಯಾಗಿ ಅಲ್ಲಿ ಬರಲಾಗುತ್ತಿಲ್ಲ ನನ್ನಿಂದ ..........
ಬೆಚ್ಚಗಿನ ನಿನ್ನ ಮಡಿಲು ನಿದ್ದೆಯಲ್ಲಿನ ನಿನ್ನ ಮಾತುಗಳು ಹೇಗೆತಾನೆ ತಿಳಿಯಲಿ ನಾನು ಬೆಳಕರಿಯಿತೆಂದು.............
- ಚುಕ್ಕಿ
16 Jun 2017, 12:39 am
ವಸಂತಾಗಮನವಾಗಿದೆ
ಏಲ್ಲಿ ಮರೆತು ಮೆರೆಯಾದೆ
ತನ್ಮಯ ಮನವು ಸ್ಮರಿಸಿದೆ ನಿನ್ನೆನೇ
ಮರಳಿ ಬಾ ಗೂಡಿಗೆ
ಗುಟುಕಿಗಾಗಿ ಕಾದಿರುವೆ .
ನನ್ನ ನೀ ....ನಿನ್ನ ನಾ ಅರಿತಾಗ
ಭಾವಗಳ ಗೋಪುರ ಕಟ್ಟಿ ಸಂಭ್ರಮಿಸಿದೆ
ಮುಗಿಲೆತ್ತರಕ್ಕೆ ಮನಹಾರಿ ನಲಿದೆ
ಸ್ಪಂದಿಸು ಬಾ ನೀ ...ಈ ಸೂಕ್ಷ್ಮ ಮನಕೆ
ಸದಾ ನಿನ್ನದೇ ಕನವರಿಕೆ
ಹೂವಾಗಿ ಅರಳಿರುವ ಈ ಮನವು
ನಿನ್ನೋಲುಮೆಯ ಸ್ನೇಹವ ಕಾದಿದೆ
ಮೊಗ್ಗಿನ ಮನಕೆ ನೀ ಜಾರದಿರು
ಬೆಸೆದಿರುವ ಪ್ರೇಮವ ನೀ ದೂರದಿರು
ಇದುವೇ ನನ್ನಯ ಕೋರಿಕೆ ....
- Chandni
15 Jun 2017, 11:19 pm
ಮೂಡಣವ ನೋಡದ ಮುದ್ದಾದ
ಮನದೊಡತಿ ಕಣ್ಣೀರಲಿ ಮಿಂದು
ಬಾನಂಗಳಕೆ ಹರಿಸದಿರು ನಿನ್ನ ನೋವನ್ನು
ಕರಿಮೋಡ ಕವಿಯುವ ಹಾಗಿಂದು ನಿನೊಂದು............
ಕಣ್ಣೀರ ನನ್ನೊಳಗೆ ಕಲಿಸು ನಿನ್ನ ಸೊಗಸಾದ
ಕಣ್ಣಿಗೆ ಕಾಡಿಗೆಯ ಗೆರೆಯೆಳೆದು ನನ್ನ ಬಿಂಬವ
ನಾನಿರುವವರೆಗೆ ನಿನ್ನ ನಾಯನದಲ್ಲಿರಿಸು.............
ಕತ್ತಲಲ್ಲಿ ಸೆರೆಸಿಕ್ಕ ನೆರಳು ನೀನಲ್ಲ ನನ್ನೊಳವೆ
ಬೆಳಕಲ್ಲಿ ನಾನೋಡುವ ನೂರಾರು ಅಂದವಾದ
ಬಣ್ಣಗಳ ಹೊಳಪು ನೀನು ಮಾತಿಲ್ಲದ ಚೆಲುವೆ.......................
ಒಂದು ದಿನದಲ್ಲಿ ಬಾಡೋಗುವ ಹೂವಿನ ಅಲ್ಪಾಯಸ್ಸು ನಿನದಲ್ಲಾ ಬಂದಿಯಾಗದೆ ಮನವೇ....................
ನಿತ್ಯ ನೂತನ ಚೇತನಪಡೆಯುವ ಪ್ರಕೃತಿಯ ಉಸಿರು ನೀನು
ನನ್ನ ಪ್ರೇಮವೇ.........
- ಚುಕ್ಕಿ
15 Jun 2017, 06:31 pm
"ಈ ಸಂಜೆಯ ನನ್ನೊಳಗಿನ ಸವಿಗನಸು
ಮಾಡಲೊರಟಿತು ನನ್ನಾಸೆಯ ನನಸು
ಸರಸದ ಅರಸನಾದ ದಾರಿಯ ಸೊಗಸು
ಹೇಳಿತು, ಬರಿ ಬವಣೆಯ ಆಟ ಬಿಡು
ನಂಬುವುದು ಬೇಡ ಬೇರೆಲ್ಲಾ ಮೋಸ
ಒಳ್ಳೆಯದಾಗಲಿ. ನೀ ತೊರೆ ಮನಸ್ಸಿನ ಕಸ
ಒಂದಲ್ಲಾ ಒಂದು ದಿನ ನೀ ಮುಟ್ಟುವೆ ಆಗಸ....."
- ನಿಮ್ಮುಡ್ಗ ಆತ್ಮೀಯ Bore'S..!
- Ananth
15 Jun 2017, 06:02 pm
ನೀ ನಡೆಯುವ ಹಾದಿಯ ಮರದ ನೆರಳು ನಾನಾಗಬಾರದಿತ್ತಾ!!!
ನಿನ್ನ ಮೇಲೆ ಬೀಳುವ ಎಲೆಗಳು ನನ್ನ ಎದೆಯ ಸದ್ದಾಗಬಾರದಿತ್ತಾ......
ನೀ ಇಡುವ ಪಾದದ ಹೆಜ್ಜೆಯ ಕೆಳಗ ನನ್ನ ಮನದ ಹಾಸಿಗೆ.......
ತಂಪು ಗಾಳಿಯಲೆ ನನ್ನ ಜೀವದ ಅಪ್ಪುಗೆ...........
ತಾವರೆಯ ಹೊಲಪಲ್ಲಿ ಕೆಸರು ತುಂಬಿ ಹಸಿರು ಸೂಸುವ ನನ್ನ
ಮನದ ಮಲ್ಲಿಗೆ.........
ನಿನ್ನ ನೋಟದ ಹಿಂದಿರುವ ನಿನ್ನ ಮೈಮಾಟ ನೋಡಲೆಂದು ನನ್ನ ಮನದ ಸಂಕಟ.....
ನಿನ್ನ ಮನವ ಸೊಬಗ ನೋಡಿ ನಾ ಅದೃಷ್ಠವಂತನಾದೇ.........
ತುಳಸಿಯ ಪವಿತ್ರತೆಯ ಮಡಿಲಲ್ಲಿ ಮನಬೆಳಗುವ ದೀಪವಾದೆ...........
ನನಗಾಗಿ ನೀ ಬರೆದ ಕವನ ಮಂದಹಾಸವ
ಚಿಗುರಿಸಿತು ಮಾತಿಲ್ಲದೆ ನನ್ನ ಮೌನ ............
ದೂರದ ದಾರಿಯಲ್ಲಿ ನೀ ಬರುವ ದಾರಿಗಾಗಿ ಕಾದಿರುವುದು ನನ್ನ ಪ್ರಾಣ.........
- ಚುಕ್ಕಿ
15 Jun 2017, 04:23 pm
ಜನರ ಸಮಸ್ಯೆಗಳ
ಚರ್ಚಿಸಲು ಸದನಕ್ಕೆ
ಹಾಜರಾಗದ ಶಾಸಕರು...
ಮೋಜು, ಮಸ್ತಿ ,ಯಾತ್ರೆಗಳ
ಮಾಡುತ್ತ ಸಾಗುತ್ತಿದೆ
ಇವರ ದರ್ಬಾರು ....
ಇಂಥ ಪುಢಾರಿಗಳನ್ನು
ಮತ್ತೊಮ್ಮೆ ಆರಿಸಬಾರದು
ಪ್ರಜ್ಞಾವಂತರು...
ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
15 Jun 2017, 03:33 pm
ಮಾತನ್ನೊ ಗೆಳೆಯನ ಜೊತೆ
ಮೌನವೆಂಬ ಗೆಳತಿ ಇದ್ದರೆ
ಪ್ರೀತಿಯೇನೆಂಬ ಭಾವನೆ ಉಕ್ಕಿಬರುತ್ತದೆ......
ಭಾವನೆ ಉಕ್ಕಿಬರುವಾಗ
ಮೌನವೆಂಬ ಗೆಳತಿ
ಮಾತೆಂಬ ಗೆಳೆಯನಿಗೆ ಸ್ಪಂದಿಸಿದರೆ
ಸಂತೋಷ ತಾನಾಗಿ ಇವರಿಬ್ಬರ ಮಧ್ಯೆ
ನಗು ನಗುತ್ತಾ ತಾ ನಲಿಯುತ್ತದೆ...........
ನಗುತ್ತಿರುವ ಸಂತೋಷದ ಸಂತಸ ನೋಡಿ
ಎರಡು ಹೃದಯಗಳು ಆನಂದದಿಂದ
ಹರ್ಷವನ್ನು ವ್ಯಕ್ತಪಡಿಸುತ್ತವೆ............
ಮಾತೆಂಬ ಗೆಳೆಯನ ತುಂಟನಕ್ಕೆ
ಮನಸೋತು ಮೌನವು ಮಾತಾಗಿ
ಬದಲಾಯಿತು ಮಾತಲ್ಲಿ ಮರೆಯಾಯಿತು........
ಇವರಿಬ್ಬರ ಸಂಭಾಷಣೆಯಲ್ಲಿ ಚುಂಬನದ
ಸುರಿಮಳೆ ಎಲ್ಲರ ಮನಸೆಳೆಯಿತು ಪದಗಳಾಗಿ
ನಾ ಬರೆದ ಕವನದ ರೂಪವಾಗಿ...........✍
- ಚುಕ್ಕಿ
15 Jun 2017, 03:33 pm
ಕನ್ನಡ ಈ ನೆಲ
ನೆಲದ ಗಮಲಿನಂತೆ ಅರಳಿದೆ
ವರ್ಣ ಮಾಲೆ ಹೂವಿನಂತೆ
ಉದುರುತ್ತಿದೆ ನೆಲದಮೇಲೆ
ಸಾಹಿತ್ಯ ನೆಲದ ಒಳಗಿನ ಬೇರು
ಕಾವ್ಯ ಹಳೆ ಬೇರಿನ ಹೂಸ ಚಿಗುರು
ಕವಿತೆ ಕೊಂಬೆಯಂತೆ ಅರಳಿ
ಭಾವಗಳು ಎಲೆಯಂತೆ ಚಿಗುರಿ ನಂತಿದೆ
ಅಲ್ಲಲ್ಲಿ ಈ ಕವಿಗಳೆಂಬ ಪಕ್ಷಿಗಳು
ಕವನವೆಂಬ ಗೂಡುಕಟ್ಟಿ ಕೂಗುತ್ತಿವೆ
ಕಾವ್ಯಪ್ರೆಮಿಗಳು ಈ ಮರದ ಕೆಳಗೆ
ಕುಳಿತು "ಕನ್ನಡ ಕಸ್ತೂರಿಯಲ್ಲವೆ"ಎನ್ನುತ್ತಿದ್ದಾರೆ
- ಹೇಮಚಂದ್ರ
15 Jun 2017, 02:52 pm