Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾನು ನೀನು ಚಿಕ್ಕ ವಯಸ್ಸಲ್ಲಿ
ಕುಡಿ ಆಡಿದ ಆಟದ ನೇನಪಲ್ಲಿ
ಆಗೇ ಇದೆ ಗೇಳತಿ ಈಗ
ನನ್ನ ಮರೆತು ಏಕೆ ಹೋಗತಿ
ನೀ ಹೋದರೆ ಸಾವೇ ನನ್ನ ಗತಿ
- VEERU
22 Jun 2017, 11:02 am
ನಿನ್ನ ಸೊಗಸಾದ ರೂಪವ
ನೋಡದೆ ಬಾಡೋಗಿವೇ ನನ್ನ ಕಣ್ಣುಗಳು.........
ನನ್ನ ಹೃದಯ ತುಂಬಿದ ನಿನ್ನ ನೆನಪು
ಕಾಡಿದೆ ನನ್ನನಿಂದು............
ಉಳಿದೊದ ಮಾತುಗಳು ಕೇಳುತ್ತಿವೆ ನನ್ನ
ನಮ್ಮನ್ನು ತಿಳಿಸುವ ಆಸೆ ಇಲ್ಲವೇ ನಿನಗೆಂದು.....
ನಿನ್ನಕಡೆಗೆ ನಾನಾಕಿದ ಹೆಜ್ಜೆಗಳು ಹಿಂತಿರುಗಿ ನನ್ನ ಕೇಳುತ್ತಿವೆ ಪೂರ್ತಿಗೊಳಿಸು ನಮ್ಮನ್ನು ಗಮ್ಯ ಸೇರಿಸೆಂದು...........
- ಚುಕ್ಕಿ
22 Jun 2017, 09:52 am
ಮರಣದ ಬಾಗಿಲ
ತೆರೆದು ಹೋದವರು
ಇದುವರೆಗೂ ಮರಳಿ
ಬರಲಿಲ್ಲವೆಂದರೇ
ಮರಣದಲ್ಲೇನೋ
ಸ್ವಾದವಿರಬಹುದು !!!!!
ಸಾವನ್ನಪ್ಪಿದವರು
ಭೂಮಿಯಲ್ಲಿ
ಮಾಡಿದ
ತನ್ನ ಪಾಪ ಪುಣ್ಯಗಳ
ಲೆಕ್ಕವನ್ನೊಪ್ಪಿಸಿ
ಫಲಿತಾಂಶಕ್ಕಾಗಿ
ಕಾಯುತ್ತಿರಬಹುದೇನೋ ???
ಉನ್ನತ ಸ್ಥಾನಮಾನ
ಗಳಿಸುವ ಆಸೆಯಿಂದ..
ಇರಬಹುದು..!!!
ಇಲ್ಲದಿದ್ದರೇ
ಒಬ್ಬರಾದರೂ
ಮರಳಿ ಬರಬಹುದಿತ್ತು ....
ದೇವನ ಸನ್ನಿಧಿಗೆ
ತೆರಳುವವರಿಗೊಂದು
ಪಿಳ್ಳೆ ನೆಪಗಳು....
ಅಪಘಾತ, ಕೊಲೆ
ಆತ್ಮಹತ್ಯೆ, ಕಾಯಿಲೆ..
ಮತ್ತೆಂದು ಮರಳಿ
ಬಾರಾದ ಯಾತ್ರೆಯ ಕರೆ
ಬಂದಾಗ ಯಾರಿಗೂ
ತಿಳಿಸದೇ ಧಿಡೀರ್
ಹೊರಟುಬಿಡುತ್ತಾರೆ ....
ನೀವೆಲ್ಲರೂ ನನ್ನ
ಹಾದಿಯಲ್ಲೇ
ಬರಲಿದ್ದೀರಿ
ಎಂಬ ಎಚ್ಚರಿಕೆಯ
ಸಂದೇಶವ ಕೊಟ್ಟು ...
ಯಾತ್ರೆಗೊಂಡವರ
ಹಾದಿಯಲ್ಲಿ ಸಾಗಿ
ಮರಣದ ರುಚಿಯನ್ನು
ಪ್ರತಿಯೊಬ್ಬರೂ
ಅನುಭವಿಸಲಿಕ್ಕಿದೆ...
ಆಹಾ...
ನನ್ನ ಮರಣ
ನನ್ನ ಕಣ್ಣ ಮುಂದಿದೆ
ಅಂತಿಮ ಯಾತ್ರೆಯ
ಸರ್ವ ಸಿದ್ಧತೆ
ಮಾಡಿಕೊಳ್ಳಬೇಕಾಗಿದೆ...
- ಅಲ್ತಾಫ್ ಬಿಳಗುಳ
22 Jun 2017, 12:10 am
ನಾ ಮುಡಿದ ಮಲ್ಲಿಗೆಯು
ಬಾಡದೇ ಅರಳಿದೆ ಇಂದು!!
ನೀ ಬರುವ ದಾರಿಯನ್ನು
ಕಾಯುತಲಿಹುದು ತಾ ನಿಂದು!!
ಘಮಿಸಿ ಪರಿಮಳವ ತಾನು
ಒಂದೇ ಸಮನೆ ಹರಿಸುತಲಿಹುದು!!
ಸಂಜೆ ಸೂರ್ಯ ಮುಳುಗಿದರೂನು
ಮಂದಹಾಸ ಬೀರುತಲಿಹುದು!!
ಶಿರವನ್ನೇರಿ ಕಿರೀಟದಂತೆ
ಶುಭ್ರ ಶೋಭೆ ಬೀರುತಲಿಹುದು!!
ಒಂದೇ ಸಮನೆ ಕಾಯುತಲಿಹುದು
ನೀ ಬರುವ ದಾರಿಯನ್ನು ಇಂದು!!
- ಪಿ.ಜಿ.ಜ್ಯೋತಿ
21 Jun 2017, 05:45 pm
ಬಾಳೆಯ ಬನದಲ್ಲಿ
ಮಂಗಗಳ ಕಾದಾಟ!!
ಇದ್ದ ಒಂದು ಬಾಳೆ ಕೊನೆಗೆ
ತಮ್ಮಲ್ಲೇ ಎಳೆದಾಟ!!
ರೆಂಬೆ ಕೊಂಬೆಗಳಲ್ಲಿ
ಜೋತು ಆಡುವ ಮಂಗ!!
ಬಾಳೆ ಬನದಲಿ ನುಗ್ಗಿ
ತಂತು ಗಿಡಗಳಿಗೆ ಬಂಗ!!
ತಾನೆಂದು ತನದೆಂದು
ಅದಕೇನೋ ಚಲ್ಲಟ!!
ಮುರಿದಿರಲು ಬಾಳೇ ಗಿಡವು
ಮಾಲಿಕನ ಪರದಾಟ!!
- ಪಿ.ಜಿ.ಜ್ಯೋತಿ
21 Jun 2017, 05:45 pm
ಓ ಪ್ರೇಮದ ಶ್ವೇತಾಂಬರಿ
ನೀ ಬಾಳಿನ ಕಾದಂಬರಿ!!
ಮುಂಗುರುಳು ತೂಕಡಿಸುವ
ಮಗುವಂತಿದೆ
ಆ ಮಗುವೀಗ ಇರುಳಲ್ಲಿ
ನನ್ನ ಕೆಣಕಿದೆ!!
ಈ ಪ್ರೀತಿಯ ಹೊಸ ಆಸೆಯ
ಚಪ್ಪಾಳೆಗೆ
ಕಣ್ಣ ರೆಪ್ಪೆಯು ಒಪ್ಪಿಗೆಯ
ತಾ ನೀಡಿದೆ!!
ಓ ಪ್ರೇಮದ ಶ್ವೇತಾಂಬರಿ
ನೀ ನನ್ನಯ ಕಾದಂಬರಿ!!
ಹುಸಿ ಮುನಿಸಿನ ಸವಿನುಡಿಗಳ
ಒಡನಾಟಕೆ
ಮಿತಿ ಮೀರಿದ ಒಲವಿಂದು
ನನ್ನ ಕಾಡಿದೆ!!
ಸಂಭ್ರಮಿಸುವ ಈ ನಮ್ಮಯ
ಸಮ್ಮಿಲನಕೆ
ಮುಗಿಲೇರಿರೋ ಆ ಚಂದ್ರನ
ಸಾಕ್ಷಿ ಇದೆ!!
- ಪಿ.ಜಿ.ಜ್ಯೋತಿ
21 Jun 2017, 05:25 pm
ಪರಿಶೀಲನೆಯಲ್ಲೆ ಮುಗಿಯುವುದು
ನಾಡಿನ ಬರಗಾಲ.....
ಪರಿಹಾರ ಘೊಷಣೆಯಲ್ಲೆ ಮುಗಿಯುವುದು ಮಳೆಗಾಲ.......
ಇದ ಪಡೆಯಲು ಜೀವನವೇ
ಮುಗಿಯುವುದು ಅಲೆದಾಟದಲ್ಲಿ.....
ಇವರನ್ನು ಕೆಳಲು,ಅವರಲ್ಲಿಗೆ
ಅವರನ್ನು ಕೇಳಲು, ಇವರಲ್ಲಿಗೆ
ತಿರುಗಿಸುತ್ತಾ......ಮಾಡುವರು
ಇರಿಸು- ಮುರಿಸು ಪಡೆಯುವಲ್ಲಿಗೆ
ಎಲ್ಲಿಗೋದರು ಇಲ್ಲ ಎಂಬ
ನುಡಿ ಕೇಳಲು, .......
ಜನಿಸಿತು ಸಂಶಯದ ಗೂಡು
ಎಲ್ಲಿಗೋಯಿತು.........
ಆಯಿತೆ ಮೂಷಿಕನ ಪಾಲು....
ಹುಡುಕಲು ಅದರ ಜಾಡು
ದೊರೆಯಿತು ತಿಮಿಂಗಿಲಗಳ ಗೂಡು...
ಬೇಡುವ ಕೈಗಳು ನೂರಾರು
ನೀಡುವ ಕೈಗಳು ಕೆಲವಾರು
ದೋಚುವ ಕೈಗಳು ಸಾವಿರಾರು
ರಕ್ಷಿಸುವರು ಇದರಡಿ ಮರೆಯಾದರು!
ನೀಡುವ ರೈತ ಶಾಪವ
ಪಡೆಯಲಾಗದೆ ಹಿಡಿ ಅನ್ನವ
ನೀಡುವವರಾರು ಮರುಜನ್ಮವ!!
ಅರಿಯಲಾಗದು ಜಗದ ಮರ್ಮವ!!
ಶಾರಧ
- ಶಕುಂತಲಾ
21 Jun 2017, 04:13 pm
ಮನಸಿನಲ್ಲಿ ತುಂಬಿರುವ ಕಠೋರವಾದ ಮೌನ ಉಳಿಸಿತು ನನ್ನಲ್ಲಿ ಅಳಿಯಾದ ಅಳುವನ್ನು.........
ಕೇಳಿ ಕೇಳಿ ಈ ಮೌನದ ಕರ್ಕಶವಾದ ಧ್ವನಿಯನ್ನು
ಮಾತಿನ ಮಾತನು ಕೇಳುವ ತಾಳ್ಮೆಯೇ ಇಲ್ಲದಾಯ್ತು ನನ್ನಲ್ಲಿ.................
ಯಾಕೇ ಮೌನವೇ ನೀನಿಗ ಮೌನಿಯಾದೆ ನೀನು ನನ್ನ ಮಾತನ್ನು ನುಂಗಿ ....................
ನನಗೆ ಕೊಟ್ಟ ಹಿಂಸೆ ಸಾಲಲಿಲ್ಲವೇ ನಿನಗೆ ನೆಮ್ಮದಿಯಾಗಿ ನೀ ನಿದ್ರಿಸಲೂ ನನ್ನ ನಿದ್ದೆಯೂ ಕೆಡಿಸುತ್ತಿರುವೆಯಲ್ಲಾ.............
ತಲೆಯ ಮುಟ್ಟಿನೊಡೆ ಅದರಲ್ಲಿನ ನರ-ನಾಡಿಗಳು
ತಮ್ಮ ರಕ್ತದ ಚಲನವಲನವನ್ನು ನಿಲ್ಲಿಸಿ ನನಗೆ ನೋವು ಕೊಟ್ಟು ನರಕ ತೋರುತ್ತಿವೆ ನಿನ್ನ ಜೊತೆಗೂಡಿ................
ನೂರು ಶಬ್ದಗಳನ್ನು ಕೇಳುತ್ತಿದ್ದರು ನನ್ನ
ಬಿಡದೆ ಕಾಡುತ್ತಿರುವೆ ನೀನು...........
ನನಗಂತೂ ತಿಳಿದಿಲ್ಲ ನಿನ್ನಿಂದ ತಪ್ಪಿಸಿಕೊಳ್ಳುವ ದಾರಿ ಏನಿದೆ ಎಂದು.............
ಕಣ್ಣೀರಿಗೂ ನಿನ್ನ ಮೇಲೆ ಪ್ರೀತಿಯೇ ಇಲ್ಲದ ಮೇಲೆ ಹೇಗೆ ಇಡಬೇಕು ನಿನ್ನ ನನ್ನೊಳಗೆ ಹೇಳೇ ಮೌನವೇ ನಿನ್ನಲ್ಲಿ ಏತಕೆ ಈ ಮೌನ................
- ಚುಕ್ಕಿ
21 Jun 2017, 04:08 pm
ಲೋಕವೆಲ್ಲಾ ಕೆಟ್ಟದೆಂದು ಕಪ್ಪಾಗಿ ನೋಡುವ
ಬದಲು ನಿನ್ನ ಕಣ್ಣಲ್ಲಿ ನೆಲೆಯಾಗಿರುವ
ಬಿಳುಪನ್ನು ನೋಡು ಮೊದಲು............
ಅದರಲ್ಲೇ ಕಲ್ಮಶವಿಲ್ಲವೆಂದ ಮೇಲೆ
ನಿನ್ನ ದೃಷ್ಟಿ ದೋಷ ತಿಳಿದು ಬದುಕು
ಮನದಲ್ಲಿನ ಕಲ್ಮಶಗಳನ್ನು ಕಿತ್ತುಹಾಕು........
ಬಂಡೆಕಲ್ಲುಗಳಿರುವ ಬರಡು ಭೂಮಿ ಎಂದು ನೋಡುವ ಬದಲು ಅದರಲ್ಲಿ ಜೀವ ಪಡೆದುಕೊಂಡಿರುವ ಪುಟ್ಟಗಿಡಗಳನ್ನು ನೋಡು ಯಾರ ಮೇಲೂ ಆಧಾರವಾಗದೆ ಅವು ಬೆಳೆದು ಮರವಾಗುವ ಶೈಲಿಯ ನೋಡು............
ಸಮುದ್ರದಲ್ಲಿನ ಉಪ್ಪುನೀರು ನಿರುಪಯೋಗ
ಎನ್ನುವ ಬದಲು ಆ ಸಾಗರದಿಂದ ಪಡೆದ ಉಪ್ಪು ಬೆರೆಸಿ ಮಾಡುವ ನೂರು ರುಚಿಕರವಾದ ಅಡಿಗೆಗಳನ್ನು ನೋಡು...................
ಜೀವನ ನೀನು ನೋಡಿವ ದೃಷ್ಟಿಕೋನದಿಂದಲೇ
ನಿನ್ನನ್ನು ನೋಡುತ್ತದೆ.........................
ಒಳ್ಳೆಯ ಆಲೋಚನೆಗಳನ್ನು ಮಾಡು ಒಳ್ಳೆಯ ಕೆಲಸಗಳನ್ನು ಮಾಡು ನಿನ್ನ ಸುತ್ತಲಿನ ಸಮಾಜವೂ
ನಿನ್ನ ಒಳ್ಳೆಯ ವ್ಯಕ್ತಿಯಾಗಿ ಗುರ್ತಿಸುತ್ತದೆ ನಿನಗೆ ಒಳಿತನ್ನು ಬಯಸುತ್ತದ್ದೆ...........
- ಚುಕ್ಕಿ
21 Jun 2017, 03:11 pm
ನೀನಿನ್ನ ಹೊಗಬೇಡ ದೂರ
ಕಡಿದೆನ್ನ ಮನಸಿನ ದಾರ
ನಿ ಹೀಗೆ ತೊರೆದರೆ ಊರ
ನನಗಿನ್ನಾರು ಆದಾರ
ಬರಬೇಕೆಂದು ನಿ ಹೊದ ದೂರ
ನನ್ನ ಕಣ್ಣಿಗೆ ಬಂದಿದೆ ಬಾರ
ಇನ್ನು ಕಣ್ಣಲ್ಲಿ ಕಣ್ಣಿಟ್ಟು ಯಾರ
ಕೊರಳಲ್ಲಿಡುವೆ ನಾ ಮುತ್ತಿನ ಹಾರ?
ನಿನ್ನ ಹುಡುಕುತಾ ನಾ ಬಂದಾಗ
ನನ್ನ ನಿ ಹಿಂದೆ ಕಳುಹಿಸು ಬೇಗ
ತುಂಬಿದ ಕಣ್ಣ ಸೆರಗಲ್ಲೊರಿಸಿ
ನಸುನಕ್ಕಿದೆ ನೊವನು ಮರೆಸಿ
- ಹೇಮಚಂದ್ರ
21 Jun 2017, 12:11 pm