Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
( ನನ್ನವಳ ಕಲಾಕ್ರುತಿ )
ಹ್ರುದಯವೆಂಬ ಅರಮನೆಯಲ್ಲಿ ನನ್ನವಳ ನೆನಪಿಗಾಗಿ ಓಂದು ಸುಂದರ ಸೌಂದರ್ಯ ಬರಿತ ಶಿಲ್ಪವನ್ನು ಕೆತ್ತಿ ಅದರಲ್ಲಿ ಅವಳ ಅಂದವ ಕಡೆನು ನಾನು .
ನಿನ್ನ ಸುಂದರವಾದ ಶಿಲೆಯನ್ನು ಕಂಡಾಗ ಅದರಲ್ಲಿರುವ ನಿನ್ನ ಭಂಗಿಯು ಸೌಂದರ್ಯ ಲಹರಿಯ ಇಂಪಾದ ಸಂಗೀತ ಸುಧೆ ನಿನ್ನೊಳಗೆ ಅಡಗಿ ಕುಳಿತಿದ್ದಂತೆ ನನ್ನ ಮನದಲ್ಲಿ ಸ್ವರಗಳ ಇಂಪಾದ ನಾದವು ಕೇಳಿಸಿತು. ಓ ನನ್ನ ಅಪ್ಸರೆಯೆ ...
( ಸಂತೋಷ// ಜೀತು )
- ಸಂತೋಷ್//ಜೀತು
25 Jun 2017, 04:31 pm
ಬೆಣ್ಣೆ ಕದಿಯುವ ಮುದ್ದು ಕೃಷ್ಣ ಅವನ ಚುರುಕು ನೋಟದಲ್ಲಿ ನನ್ನ ಮನವ ಕದ್ದುಬಿಟ್ಟ...............
ಬ್ರಹ್ಮಾಂಡವ ಬಾಯಲ್ಲಿ ಬಚ್ಚಿಟ್ಟ ಕಳ್ಳ ಕೃಷ್ಣ
ನನ್ನ ಮನವ ಅವನ ಹೃದಯದ ಅರಮನೆಯಲಿ ಕೂಡಿಟ್ಟ.........
ಮಾಧವನ ಮುರಳಿ ಗಾನವ ಕೇಳುತಿರಳು ನನ್ನೆದೆಯ ವೀಣೆ ತನ್ನಂತೆ ತಾನೆ
ಸ್ವರಗಳ ಜೊತೆಗೂಡಿಸುತ್ತಿರುವು ನಿನ್ನ ಉಸಿರಿನಾಡಿಗೆ ಕೃಷ್ಣ...............
ನವಿಲುಗರಿಯ ಚೆಲುವಿಗೆ ಮನಸೋತ ಮಲ್ಲಿಗೆ ನಿನ್ನ ಶಿಗೆಯಲ್ಲಿ ಸೇರಲೆಂದು ಪರದಾಡಿತು ನಿನ್ನ ಮನದ ಮಲ್ಲಿಗೆಯಾದ ಶ್ರೀಯ ಅನುಮತಿ ಕೇಳದೇನೆ ಕೇಳಿತು.............
ನಿನ್ನ ನಗೆಯ ಸದ್ದಲ್ಲಿ ನಿನಾಗದ ನೀನಾಗಿರಳು ನನಗನುಮತಿ ನೀಡುವೆಯಾ ನವನೀತ ಚೋರ..............
- ಚುಕ್ಕಿ
25 Jun 2017, 04:27 pm
ನೋಡಲು ಹೋದೆನು ನವ ವಧುವನ್ನು
ಘಂ ಎಂದು ಮಲ್ಲಿಗೆ ಹೂವಿನ ಪರಿಮಳ
ಇಣುಕಿ ನೋಡಿದೆನು ಸುಂದರ ಹುಡುಗಿಯ
ಬಾಗಿಲ ಮರೆಯಲ್ಲಿ ಪರದೆ ಸರಿಯುವಾಗ
ಅಂದದ ಬೆಡಗಿ ನಾಚಿಕೆ ತುಂಬಿದ ವದನ
ಆದರೂ ಕಿರು ನೋಟದಿಂದ ನೋಡಿದಳು
ಇಹ ಲೋಕದ ಚೆಲುವಿನ ಚಿತ್ತಾರ ಕಣ್ಣೆದುರು
ಇವಳೊಂದಿಗಿದ್ದರೆ ಜೀವನ ಆಹಾ ಎಂತಹ ಸುಖ
ಕಲ್ಪನಾ ಲಹರಿ ಮನದಾಳದಲ್ಲಿ ಹರಿಯುತಿತ್ತು
ಕೊಡುತೆಗೆಯ ವಿಚಾರ ವಿನಿಮಯ ನಡೆಯುತಿತ್ತು
ಮಾತುಕತೆ ನೆಗೆದು ಬಿತ್ತು ಸಂಬಂಧ ಕುಸಿಯಿತು
ಮನದಲ್ಲೇ ಶಾಪವ ಹಾಕುತ್ತಾ ಹೆಜ್ಜೆ ಸಾಗುತ್ತಿತ್ತು ಮುಂದಿನ ಆನ್ವೇಷಣೆಯ ನೆನೆಯುತ್ತಾ
- sathyabapuji
25 Jun 2017, 03:54 pm
ನಾವು ನಡೆವ ಹಾದಿಯಲ್ಲಿ
ಹಲವು ಅನುಭವಗಳ ಜೊತೆಯಲ್ಲಿ
ಒಳಿತು- ಕೆಡುಕುಗಳ ಸಂಗಮದಲ್ಲಿ
ಬೆಳೆವೆವು ತಿರುವುಗಳ ಬಂಧನದಲ್ಲಿ!
ಕನಸುಗಳ ಬತ್ತಿ ಹೊಸೆದು
ಕಷ್ಟಗಳ ತೈಲ ಸುರಿದು
ವಿಜಯದ ಜ್ಯೋತಿ ಬೆಳಗಿಸೆಂದು
ಹರಸುವರು ನಮ್ಮ ಪಡೆದವರು!
ಸಮಾಜದ ಎಡರು- ತೊಡರು
ಹಾದಿಯಲ್ಲಿ,ಕೆಡುಕು- ಒಳಿತುಗಳ
ಮೋಡಿನಲ್ಲಿ ,ತಿದ್ದಿ- ತೀಡುತ
ಬೆಳೆಸುವ ಜಾದೂಗಾರರು
ಅವರೆ ಶಿಕ್ಷಕರು.........
ಉತ್ತಮೋತ್ತಮ ಸ್ಥಾನವನ್ನ
ಅಲಂಕರಿಸಿದರು......
ಸಾಧಾರಣ- ಅಸಾಧಾರಣ
ಸಾಧನೆಯ ಬೆನ್ನೆಲುಬು
ನಮ್ಮ ಶಿಕ್ಷಕರು......
ವೃತ್ತಿ ಜೀವನದ ಪಯಣದಲ್ಲಿ
ಬಂದು- ಹೋಗುವ ಮಾರ್ಗದಲ್ಲಿ
ಬೆರೆವರು ಶಿಕ್ಷಕ ನೌಕೆಯಲ್ಲಿ
ಉಳಿವರು ಎಲ್ಲರ ಮನದಲ್ಲಿ....
ಗುರುವಿನ ಗುಲಾಮನಾಗುವ
ತನಕ ದೊರೆಯದಣ್ಣ ಮುಕುತಿ!
ಪ್ರತ್ಯಕ್ಷ-ಪರೊಕ್ಷ ಗುರುಗಳಿಗೆಲ್ಲ
ಇದೋ... ನನ್ನ ನಮನ...
ಶಾರಧ
- ಶಕುಂತಲಾ
25 Jun 2017, 03:50 pm
ಮತ್ತೊಮ್ಮೆ ಕರಿಯಲೇ ನಿನ್ನ ಸಾವು ನನ್ನ ಕರೆದೊಯ್ಯುವ ಮುನ್ನ..............
ಮತ್ತೊಮ್ಮೆ ನೆನೆಯುತ್ತಾ ಕೂರಲೇ ನಿನ್ನ ಜೊತೆಗೆ ಕಳೆದ ಒಂದೊಂದು ಕ್ಷಣದ ರೋಮಾಂಚಕಾರಿ ಸಂಗತಿಗಳನ್ನು..................
ಮತ್ತೊಮ್ಮೆ ನಿನ್ನ ಕೈಯಡಿಗೆ ರುಚಿಯು ಸವಿಯಲೇ ಮಗದೊಮ್ಮೆ ಮಾಡಿಕೊಡುವಂತೆ ನಿನ್ನ ಕೇಳಲೇ..................
ಮತ್ತೊಮ್ಮೆ ನಿನ್ನ ನೋಡುವಾಸೆ ನನಗೆ
ನಿನ್ನ ಜೊತೆ ಮಾತನಾಡುತ್ತಾ ಕೂರುವ ಆಸೆ
ನಿನ್ನ ನಗುವಲ್ಲಿ ನನ್ನನ್ನು ನಾನು ಮರೆಯುವಾಸೆ.........
ಮತ್ತೊಮ್ಮೆ ನಿನ್ನನು ನಾನು ನನ್ನಲ್ಲಿ ಬಂಧಿಸುವ ಆಸೆ ಮತ್ತೊಮ್ಮೆ ಮತ್ತೊಮ್ಮೆ..............
- ಚುಕ್ಕಿ
25 Jun 2017, 03:18 pm
ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕಿನ ಆಸೆ ಬಳಲುತ್ತಿರುವ ಅವಿದ್ಯಾವಂತ ನಾನಿಲ್ಲಿ
- Devu.sur
25 Jun 2017, 03:08 pm
ಮೋರಿ ಎನ್ನುವರೆಲ್ಲ
ಊರ ಕೊಳೆಯನ್ನು ಹೊತ್ತು
ದೂರ ಹೋಗುವ ನನ್ನ ಕಂಡು
ಮುಖವ ತಿರುವುವವರೆ ಎಲ್ಲ!!
ಮೋರಿ ಎನ್ನುವರೆಲ್ಲ
ಕೊಳೆತು ನಾರುವ ಕಸವ
ತಂದು ನನ್ನ ಒಡಲಲ್ಲಿ
ಸುರಿದು ಮೂಗು ಮಚ್ಚುವರೆಲ್ಲ!!
ಮೋರಿ ಎನ್ನುವರೆಲ್ಲ
ಎಲ್ಲರ ಮನೆಯ ಕೊಳೆಯನ್ನು
ತೊಳೆದು ಶುಧ್ದಗೊಳಿಸಿ
ಕೊಳೆ ನೀರಾಗಿ ಹರಿದು ಬಂದೆ ನಾನು!!
ಮೋರಿ ಎನ್ನುವರೆಲ್ಲ
ಕನಿಕರವೇ ಇಲ್ಲದ ಜನ
ನನ್ನ ಕಂಡು ಅಸಹ್ಯವೆಂದು
ಕರೆದು ನನ್ನ ನೋಯಿಸುವರಲ್ಲ!!
- ಪಿ.ಜಿ.ಜ್ಯೋತಿ
25 Jun 2017, 12:25 pm
ಬಚ್ಚಲು ಮನೆಯೊಳಗೆ
ಬಿಸಿ ನೀರ ಕೊಪ್ಪರಿಗೆ!!
ಕಾದು ಕುಳಿತಿಹುದು
ನಿನ್ನ ಸ್ನಾನಕೆ ಈ ದಿನ!!
ಅರಿಶಿಣ ತೈಲದ
ಅಭ್ಯಂಜನ ನಿನಗೀದಿನ!!
ಘಮ ಘಮಿಸುವ ಚಂದನ
ನಿನ್ನ ಮೈಗೆ ಲೇಪನ!!
ನೆತ್ತಿಗೆ ಹರಳೆಣ್ಣೆಯು
ಹಂಚಿದೆ ತಂಪನು!!
ಕೇಶ ರಾಶಿಗೆ ತಂತು
ಸೀಗೆಕಾಯಿ ಸೊಂಪನು!!
ಬಚ್ಚಲ ಮನೆಯೊಳಗೆ
ಬಿಸಿ ನೀರ ತಂಬಿಗೆ!!
ನಗುತಲೇ ತೊಳೆದಿಹುದು
ನಿನ್ನ ಮೈಯ ಕೊಳೆಯನು!!
- ಪಿ.ಜಿ.ಜ್ಯೋತಿ
25 Jun 2017, 12:01 pm
ಕಣ್ಣು ಕಾಣದ ಮುದುಕಿ
ಕಾಡೆಲ್ಲ ಅಲೆದಾಡಿ
ಮತ್ತೆ ಮರಳಿಹಳು ಮನೆಗೆ
ಕತ್ತಲಲ್ಲಿ ಕಡುಗತ್ತಲಲ್ಲಿ!!
ಕಾಡ ಸುಮಗಳ ಕುರಿತು
ಕಾಣದೇ ತಾ ಅರಿತು
ಘಮಿಸಿ ತಂದಹಳು
ಹೊತ್ತು ಬುಟ್ಟಿಯಲ್ಲಿ!!
ಬೊಗಸೆ ಹೂಗಳ ರಾಶಿ
ಚೆಂದದಿ ಪರಿಮಳ ಸೂಸಿ
ಕರೆತಂದಿತು ಊರ ನಾರಿಯರ
ಮನ ಸೆಳೆದು ಎಲ್ಲ ಲಲನೆಯರ!!
ಎಲ್ಲ ಸ್ತೀಯರೂ ಒಂದಾಗಿ
ಕಾಡ ಹೂವಿಗೆ ಮರುಳಾಗಿ
ಕಾಡಿ ಬೇಡಿದರು ಹೂವ
ನೀಡೆಂದು ಆ ಮುದುಕಿಯನ್ನು!!
ಕಣ್ಣು ಕಾಣದ ಮುದುಕಿ
ಎಲ್ಲರಿಗೂ ಸಮನಾಗಿ
ಹೂ ನೀಡಿ ಹೇಳದಳು
ಇದು ವನ ಸುಮವೆಂದು!!
ಯಾರು ಮುಡಿದು
ಇದು ಬಾಡುವುದಿಲ್ಲವೋ
ಅವರೇ ನನ್ನ ಕತ್ತಲೆಯ
ಬದುಕಿನ ಕಣ್ಣುಗಳು ಎಂದು!!.
- ಪಿ.ಜಿ.ಜ್ಯೋತಿ
25 Jun 2017, 10:54 am
ಆ ತಾರೆಯ ತೋಟದಿ
ಹೋವೊಂದ ಹುಡುಕಿರಲು
ಆ ಮೋಡದ ರಥವೇರಿ
ಯಾರೋ ಬಂದಿಹರು!!
ಹೊಂಬಾಳೆ ಮೈದುಂಬಿ
ಹೆಣ್ಣಾಗಿ ಬಂದಿರಲು
ಆ ಚಂದ್ರನು ಹೊಂಬೆಳಕಿನ
ಬಣ್ಣವ ಸುರಿದಿಹನು!!
ರತಿದೇವಿಯು ನಾಚುವ
ಅಂದದ ರೂಪದವಳು!!
ತಾರೆಗಳ ತೋಟದಲ್ಲಿ
ಕಿಲ ಕಿಲ ನಗುತಿಹಳು!!
ಆ ಬಾನಿಗೆ ಕೈ ಚಾಚಿ ನಾ
ಬಾ ಎಂದು ಕರೆದಿರಲು
ಮಳೆ ಹನಿಯ ಮೇಲೆ ನಿಂತು
ಧರೆಗಿಳಿದು ನನ್ನ ಸೇರಿದಳು!!
- ಪಿ.ಜಿ.ಜ್ಯೋತಿ
25 Jun 2017, 10:33 am