Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾವಡುವ ಪ್ರೀತಿಯ ಆಟ

ನಾವಡುವ ಪ್ರೀತಿಯ ಆಟ ಸೋಲು ಗೆಲುವು ಇಲ್ಲಿಲ್ಲ.................
ಪ್ರೀತಿಗಾಗಿ ನಮ್ಮ ಭಾವನೆಗಳಿಗಾಗಿ ಪರದಾಟ
ಕನಸಲ್ಲೂ ನಿಲ್ಲಲ್ಲಾ.........

ಕೊಟ್ಟ ಪ್ರೀತಿಯ ಕೊಡುಗೆಗಳಿಗೆ ಲೆಕ್ಕವನ್ನು ಇಟ್ಟಿಲ್ಲ..............
ನೀ ಕೊಡುವ ಪ್ರೀತಿಯ ಮುಂದೆ ಇನ್ಯಾರ ಅಕ್ಕರೆಯು ಬೇಕಾಗಿಲ್ಲ.............

ನಿನ್ನೊಡನೆ ನಗು ನಗುತ್ತಾ ಮಾತಾಡಿದರೆ
ಕಷ್ಟಗಳಿಗೆ ಬೆಲೆಯಿಲ್ಲ ಕಣ್ಣೀರಿನ ಚಿಂತೆ ಮಾಡಲ್ಲ...........

ನನಗೆ ಸಿಗುವ ಮಾತಿನ ಮಾಧುರ್ಯ ನಿಲ್ಲಿಸಲು ನಾನು ಸಿದ್ದವಿಲ್ಲ ನಿನ್ನ ನಗುವಿನ ಕೈಬಿಡಲು ನಾನು ಮುಂದೆಂದು ಇಚ್ಛಿಸಲ್ಲ...............

ಕಣ್ಣಲ್ಲಿನ ನೂರು ಕನಸು ನಿನ್ನಿಂದಲೇ ಶುರುವಾದವು ನಿನ್ನ ಜೊತೆಗೆ ಕೂಡಿ ನನಸಾಗಳು ನಾನಾದವು ನಿನಗಾಗಿ ಎಂದು ನಾನೆಂದೂ
ಮರೆಯಲ್ಲ...............

- ಚುಕ್ಕಿ

23 Jun 2017, 05:45 pm

ಚಂಚಲ ಚಿತ್ತ....

ಚಂಚಲ ಚಿತ್ತ
ಹರಿದಾಡುವುದು ಸುತ್ತ ‌ಮುತ್ತ
ಸಿಕ್ಕ ಸಿಕ್ಕದ್ದೆಲ್ಲ ಮನಸಿನಿಂದ ಹೆಕ್ಕುತ್ತ
ಕಂಡದ್ದೆಲ್ಲ ಮನಸೊಳಗೆ‌ ತುಂಬುತ್ತ....

ಕೊನೆಯಿರದ ಪ್ರಶ್ನೆಗಳ ಬಂಡಿಯ ಹತ್ತಿ
ಉತ್ತರ ಹುಡುಕುತ ಮನಸಲೆ ಊರೂರ ಸುತ್ತಿ
ತಾಳ್ಮೆಯ ಕಡಲು, ‌ಮನಸಿನ ಒಡಲೆ ಬತ್ತಿ
ಯಾಕಿಂತ ಅಲೆದಾಟ ಕಾಣದಕ್ಕೆಂದು‌ ಮರುಗಿ ಅತ್ತು
ಮತ್ತೆ ಹೊರಟಲ್ಲೆ ಸೇರುವುದು ಏನು ತಿಳಿಯದೆ ಅರ್ಧ ಸತ್ತು....

ಇದರದು ಹಿಡಿತಕೆ ‌ಸಿಗದ ನಾಗಲೋಟ
ಹಿಡಿಯದಿದ್ದರೆ ಹೆಕ್ಕಿ‌ ತುಂಬುತ್ತ ಎದೆಯೊಳಗೆ ತರುವುದು‌ ತೊಳಲಾಟ
ಎಂದಿಗೆ ನಿಲ್ಲುವುದು ಇದು ತರುವ ಬಡಿದಾಟ
ಸಾಕಾಗದೆ ‌ಇದಕೆ ತನ್ನೊಳಕೆ ತಾನು ಸೃಷ್ಟಿಸುವ ಗೊಣಗಾಟ
ಗೆಲುವು ಸೋಲುಗಳಿಲ್ಲದ ಸೆಣಸಾಣ ಇದರ ಜೊತೆಗಿನ ಕಾದಾಟ
ಜೀವ ಇರುವವರೆಗೂ‌ ಕೊನೆಯಾಗದು ಇದರೊಡೆಗಿನ ಒಡನಾಟ....

- ಶ್ರೀಕಾವ್ಯ

23 Jun 2017, 05:16 pm

ಕಣ್ಣಿರಿನ ಹನಿ ನೆನಪಿಸುತ್ತಿದೆ ನಿನ್ನ..

ಮರೆಯಲೇತ್ನಿಸಿದಷ್ಟು ಕಣ್ಣಿರಿನ ಹನಿ
ನೆನಪಿಸುತ್ತಿದೆ ನಿನ್ನ..

ಅಳಿಸಲೇತ್ನಿಸಿದಷ್ಟು ನಿನ್ನ ನೆನಪುಗಳು
ಕಾಡುತಿದೆ ಇನ್ನ..

ಎಲ್ಲಿಯವರಗೊ ಅನುಭವಿಸಬೇಕೊ
ನಿ ಕೋಟ್ಟ ಈ ಉಡುಗೊರೆಯ ಬಾರವನ್ನ..

- ಅಂಜಲಿ

23 Jun 2017, 10:50 am

ದೇವರಿಗೆ ತಿಳಿಯದ ಉತ್ತರಗಳು...........

ಆ ದೇವರಿಗೆ ತಿಳಿಯಲ್ಲವೇ ಈ ಭೂಮಿಯಲ್ಲಿ ಒಂದೊಂದು ಸಂಬಂಧ ಎಷ್ಟು ಪ್ರೀತಿಯಿಂದ
ಕಟ್ಟಿಕೊಂಡಿರುವವರೆಂದು............

ಅವನಾಡುವ ಆಟದಲ್ಲಿ ಹುಟ್ಟು-ಸಾವು
ಕೇಳದೇನೆ ಕೊಡುವನು ಹುಟ್ಟು ಕೇಳಿಕೊಂಡರು ಬಿಡದೆ ತಗೆಯುವುದು ಪ್ರಾಣ..........

ಅವರನ್ನು ಬಿಟ್ಟು ಉಳಿದವರು ಹೇಗೆ ಬದುಕುತ್ತಾರೆ ಎಂದು ತಿಳಿಯುವುದಿಲ್ಲವೇ ಅವನಿಗೆ.........

ನಮಗೆ ನಮ್ಮ ನೋವುಗಳಿಗಿಂತ ಜಾಸ್ತಿ ನಮ್ಮವರು ಅಂದ್ಕೊಲೋವರ ನೋವು ನೂರು ಪಟ್ಟು ಹೆಚ್ಚು ನೋವಿಗೆ ಗುರಿಮಾಡುತ್ತೆ ನಮ್ಮನ್ನು............

ಆ ದೇವ್ರತರ ಒಂದೇ ಕೇಳ್ಕೊತಿನಿ ಎಂದಿಗು ನನ್ನವರ ಸಾವು ನನ್ನ ಕಣ್ಮುಂದೆ ಬಾರೋ ಮುನ್ನ ನಾನು ಇಲ್ದೆ ಇರೋವಾಗೆ ಮಾಡು ತಂದೆ ಅಂತ......

ಬದುಕಿದ್ದಾಗ ಹಸಿದ ಹೊಟ್ಟೆಗೆ ಇಡದೆ ಇರೋ ಊಟ ಸತ್ತಮೇಲೆ ಇಟ್ಟರೇನು ಬಿಟ್ಟರೇನು
ಆ ದೇವರಿಗೆ ಕಾಣುವುದಿಲ್ಲವೇ ನಮ್ಮ ವ್ಯಥೆ ಎಂದಿಗೂ..............

ದೇವರಿಗೆ ತಿಳಿಯದ ಉತ್ತರಗಳು
ನಮ್ಮನ್ನು ಕಾಡುವ ಪ್ರಶ್ನೆಗಳು..............

- ಚುಕ್ಕಿ

23 Jun 2017, 10:31 am

ಕುತೂಹಲ

ಬೆಳದಿಂಗಳ ಇರುಳಲ್ಲಿ
ಅಜ್ಜಿಯ ಮಡಿಲಲ್ಲಿ
ಮಲಗಿರಲು ನಾನಂದು....

ಮಿನುಗುವ ತಾರೆಗಳ ಜೊತೆಯಲ್ಲಿ
ನಲಿಯುತಿದ್ದನು ಚಂದಿರನು ಅಲ್ಲಿ
ನಡುವೆ ಕಂಡೆನು ವಿಮಾನವೊಂದು....

ಚಲಿಸುತಿತ್ತು ನಿಶ್ಯಬ್ದವಾಗಿ
ಸ್ವಚ್ಛಂದ ಆಗಸವ ಮಲಿನವಾಗಿಸದೆ
ತಾರೆಯೊಂದು ಇಲ್ಲಿಂದ- ಅಲ್ಲಿಗೆ
ಅತ್ಯಲ್ಪ ಚಲನದಂತಾಗಿ
ಅಕ್ಷಿಪಟಲವ ಅರಡಿಸಿದೆ
ಕುತೂಹಲ ತಾಳಲಾರದೆ.....

ಚಿತ್ತಾರವ ಬಿಡಿಸುತಿತ್ತು ಮನವು
ಸದ್ದಿಲ್ಲದೆ ಚುಕ್ಕಿಗಳ ಬಯಲಲ್ಲಿ
ಲೆಕ್ಕವಿಡುತಿತ್ತು ಕಂಗಳು
ದಿಟ್ಟಿಸಿ ನೋಡುತ್ತ ಬಾನಲ್ಲಿ

ಅಚ್ಚರಿಯು ಮೂಡಿತ್ತು
ಮನದ ಗೂಡಲ್ಲಿ....
ತಾರೆಯೊಂದು ಚಲಿಸಿತ್ತು
ಅಜ್ಜಿಯ ಕೇಳಿತು ಮನವು
ಚುಕ್ಕಿ ಹೊರಟಿಹುದು ನೋಡಲ್ಲಿ....

ಒಡನೆಯೆ ನುಡಿಯಿತು ಅಮ್ಮಮ್ಮ!
ಅದು ಅಲ್ಲ ಚುಕ್ಕಿ.......
ಅಲ್ಯುಮಿನಿಯಮ್ ಹಕ್ಕಿ.....
ಇದ ನೀ ತಿಳಿಯಮ್ಮ!


ಶಾರಧ

- ಶಕುಂತಲಾ

22 Jun 2017, 10:23 pm

ಮುಗಿಯದು ಆಸೆ.....

ನನಗೆಂದು ಮುಗಿಯದು ಬರೆಯುವಾಸೆ
ಇಂದೇಕೊ ಖಾಲಿ ಎನಿಸುತ್ತಿದೆ ಭಾವನೆಗಳ ಮೂಸೆ
ಬಣಗುಡುತಿದೆ ಮೊಗೆದಾಗಲೆಲ್ಲ ಸಿಗುತ್ತಿದ್ದ ಪದಗಳ ಬೊಗಸೆ
ಎಲ್ಲಿ ಅಡಗಿರುವೆ ಪದಗಳ ಪೋಣಿಸಿ‌ ಭಾವಗಳ ಸೇರಿಸುವ ಸೊಗಸೆ....

ಒಂಟಿಯಾದಗಲು‌ ಪದಗಳೆ ಜೊತೆಯು ‌
ಕೂಡಿದಾಗಲು ಇದರಲೆ ‌ಹರಿಯುವುದು ಭಾವಗಳ‌ ನದಿಯು
ಇದರಲೆ ಇರುವುದು ಹತಾಶೆಯ‌ ಮುಳುಗಿಸುವ ಅಲೆಯು
ಇದರಲೆ ‌ಹುಟ್ಟುವುದು ನಗುವಿನ ‌ಸೆಲೆಯು
ಭಾವಗಳು ಪದಗಳ‌ ಸೇರಿ‌ ಸೃಷ್ಟಿಸುವ ಈ ಪಯಣಕೆ ಆಗಲೆ ಕೊನೆಯಿರದ ಪಯಣಿಯು.....

ಕನಸಿನ ಉಸ್ತುವಾರಿಗೊಂದು ಕವನ
ಮನಸಿನ ಶಾಯರಿಗೊಂದು ಕವಿತೆ
ನೋವಿನ ಅಮಲಿನ ಭಾವಕ್ಕೊಂದು
ಖುಷಿಯ ನಗುವ ಹರಡಲಿಕ್ಕೆ ಮತ್ತೊಂದು
ಕಂಡ ಕಾಣಲಾಗದದ್ದಕ್ಕೆಲ್ಲ ಮಗದೊಂದು
ಆದರೂ ಬರೆಯಲು ಏನು ತೋಚುತ್ತಿಲ್ಲ ನನಗಿಂದು.....

- ಶ್ರೀಕಾವ್ಯ

22 Jun 2017, 09:33 pm

ಕಾಣದ ಕಡಲು

ನಿನ್ನಿಂದ ದೂರವಾದರೆ ನಾನು
ಕಣ್ಣೀರು ಕೊಡಿ ಹರಿದು
ಆಗುವುದು ಕಡಲು
ಬಂದುಬುಡು ಒಮ್ಮೆ
ನನ್ನ ಕಣ್ಣ ದೊಣಿಯಲಿ ಕುಳಿತು
ತೆಲಿಬಿಡು ಆ ಕಡಲಿನಲ್ಲಿ

- ಹೇಮಚಂದ್ರ

22 Jun 2017, 04:39 pm

ನಿನ್ನ ನೆನಪು

ಅಂದು ಎಡೆಬಿಡದೆ ಸುರಿದ ಮಳೆಯು
ನಿನ್ನ ನೆನಪಿನ ಪ್ರವಾಹ ಹರಿಸಿತು.
ಕಾಡುವ ನೆನಪುಗಳಿಗೆ ಲಗಾಮು ಹಾಕುವ ಪ್ರಯತ್ನದಲಿ ಮನ ಸೋತಿತು.
ಒಳಗೊಳಗೆ ಅತ್ತು, ಸೋತು ಹೋದ ಕನಸುಗಳು ಪುನಃ ಚಿಗುರುವುದೆಂದು ಮನ ಬಯಸಿತು.
ಕಲ್ಪನೆಯ ಗೂಡಿನಿಂದ ಹೊರ ಬಂದಾಗ ಬಯಸಿದೆಲ್ಲ ಕಣ್ಣೀರ ಹನಿಯಲ್ಲಿ ಸೇರಿಕೊಂಡಿತು.

- ಅಕ್ಷತ

22 Jun 2017, 02:00 pm

ಲಲನೇ............

ಲಾವಣ್ಯವಾದ ಲಲನೆಯ ನೋಡುವ ಆಸೆಯಾಗಿ ಲಘುವಾದ ನನ್ನೆದೆಯ ಜಾರಿ ಬಿಟ್ಟೆ ಅವಳ ನೆರಳಲ್ಲಿ ನಾಜೂಕಾಗಿ ನನ್ನವಳ ನೋಡಿಕೊ ಎಂದೂ............

ರಂಜಿತಾಳ ರಂಜಿಸುವ ರಗಳೆಯಲ್ಲಿ ಅವಳ ಹೃದಯ ಸೇರುವ ರಾಜಮಾರ್ಗದಲ್ಲಿ ಭಾವನೆಗಳ ರಶ್ಮಿಯರಸಿ ರಮ್ಯವಾದ ರಾಗಗಳನ್ನು ರವಾನೆ ಮಾಡಿತಿರುವೆ ಮನಸ್ಸಿನಿಂದ...........

ರಶೀದಿ ಕೊಡುವಳೇ ಕೇಳಿ ನೋಡೇ ಹೃದಯವೇ ನಾ ಕೊಟ್ಟ ಪ್ರೀತಿಗೆ ಮತ್ತೆ ನನಗೆ ಹಿಂತಿರುಗಿಸುವಾಗ ಲೆಕ್ಕ ಸರಿಯಾಗಿ ಕೊಡಲು...........

ನಾನು ರಾಜೀವ ನಾನದೊಡೆ ರಾಜಹಂಸ ತಾಣಗುವಳಾ..........
ರಮಣಿಯವಾಗಿ ರಮಿಸಲು
ಮುದ್ದಾದ ಮಾತುಗಳಿಂದ ನಾನು..........

ನಿನ್ನ ಮನವ ನಾ ಕದ್ದೇನೆಂದು ನನ್ನ ಮೇಲೆ ಚಾಡಿಮಾತುಗಳ ಹೇಳದಿರು ನೀನು, ನಿನ್ನನ್ನೇ ಕದ್ದು ನೂರಾರು ನಜರಾಣೆಗಳನ್ನು ನೀಡುವ ಆಸೆ ನನಗೆ................

ಧವಳದಂತ ನಿನ್ನ ತುಟಿಯ ಉಭಯ ಕಡೆಗಳಿಗೆ ನನ್ನ ನಗುವಿನ ಬಣ್ಣ ಹಚ್ಚಲು ನನಗಾಸೆ ಹಚ್ಚಿ ನೋಡಲೇ ಚೆಲುವೆ ನಾನಿಂದು ನಿನ್ನ ನಗುವ ನೋಡಲು...........

- ಚುಕ್ಕಿ

22 Jun 2017, 12:52 pm

ಬರಿಯುವ ಒಂದು ಕವನ

ಕವನ ಬರಿಯಲು
ಇಂಥದೇ ಕಾರಣ ಇರಬೇಕೆಂದೇನಿಲ್ಲ
ರಾತ್ರಿ ಕನಸು ಕಾಣಬೇಕೆಂದೇನಿಲ್ಲ
ಕವನ ಕೆಲಯೋಮ್ಮೆ ಏನು ಹೇಳುವುದಿಲ್ಲ
ಬತ್ತಿದ ಭತ್ತಯೋ ಸತ್ತ ಎಮ್ಮೆಯೋ
ಹೀಗೆ ಯಾವುದರ ಮೇಲಾದರೂ
ಬರಿಯ ಬಹುವುದು
ರಕ್ತ ಬತ್ತಿದ ಹೃದಯದಲ್ಲಿ
ಪ್ರೀತಿಯ ಚಿಲುಮೆ ಹುಟ್ಟಿಸಬಹುದು
ಹಸಿದ ಹೊಟ್ಟೆಯಲ್ಲಿ
ಕ್ರಾಂತಿಯ ಕಿಡಿ ಹೊತ್ತಿಸಬಹುದು
ಸದ್ಯಕ್ಕೆ ನಾನು
ಸಾಯುತಿರುವ ಸಸಿಯ
ನೀರಹಾಯಿಸಿ ಕಾಪಿಟ್ಟುಕೊಲ್ಲಬೇಕು
ಕವನ ಬರಿಯಲು ಕಾರಣ ಬೇಕೇ
ನಾನು ಒಪ್ಪಿಕೊಳ್ಳುವುದಿಲ್ಲ
ಕವನ ಬರಿಯಲು
ಕವನ ಬರಿಯಬೇಕಂದನಿಸಬೇಕಷ್ಟೇ
ಕವನ ಬರಿಯಬಹುದು

◆◆◆◆ಹರ್ಷ ಹೆಚ್ ಎಲ್

- HarshaHL

22 Jun 2017, 11:18 am