Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಚ್ಚಲ ಮನೆ

ಬಚ್ಚಲು ಮನೆಯೊಳಗೆ
ಬಿಸಿ ನೀರ ಕೊಪ್ಪರಿಗೆ!!
ಕಾದು ಕುಳಿತಿಹುದು
ನಿನ್ನ ಸ್ನಾನಕೆ ಈ ದಿನ!!

ಅರಿಶಿಣ ತೈಲದ
ಅಭ್ಯಂಜನ ನಿನಗೀದಿನ!!
ಘಮ ಘಮಿಸುವ ಚಂದನ
ನಿನ್ನ ಮೈಗೆ ಲೇಪನ!!

ನೆತ್ತಿಗೆ ಹರಳೆಣ್ಣೆಯು
ಹಂಚಿದೆ ತಂಪನು!!
ಕೇಶ ರಾಶಿಗೆ ತಂತು
ಸೀಗೆಕಾಯಿ ಸೊಂಪನು!!

ಬಚ್ಚಲ ಮನೆಯೊಳಗೆ
ಬಿಸಿ ನೀರ ತಂಬಿಗೆ!!
ನಗುತಲೇ ತೊಳೆದಿಹುದು
‌ ನಿನ್ನ ಮೈಯ ಕೊಳೆಯನು!!

- ಪಿ.ಜಿ.ಜ್ಯೋತಿ

25 Jun 2017, 12:01 pm

ಕಣ್ಣು ಕಾಣದ ಮುದುಕಿ

ಕಣ್ಣು ಕಾಣದ ಮುದುಕಿ
ಕಾಡೆಲ್ಲ ಅಲೆದಾಡಿ
ಮತ್ತೆ ಮರಳಿಹಳು ಮನೆಗೆ
ಕತ್ತಲಲ್ಲಿ ಕಡುಗತ್ತಲಲ್ಲಿ!!

ಕಾಡ ಸುಮಗಳ ಕುರಿತು
ಕಾಣದೇ ತಾ ಅರಿತು
ಘಮಿಸಿ ತಂದಹಳು
ಹೊತ್ತು ಬುಟ್ಟಿಯಲ್ಲಿ!!

ಬೊಗಸೆ ಹೂಗಳ ರಾಶಿ
ಚೆಂದದಿ ಪರಿಮಳ ಸೂಸಿ
ಕರೆತಂದಿತು ಊರ ನಾರಿಯರ
ಮನ ಸೆಳೆದು ಎಲ್ಲ ಲಲನೆಯರ!!

ಎಲ್ಲ ಸ್ತೀಯರೂ ಒಂದಾಗಿ
ಕಾಡ ಹೂವಿಗೆ ಮರುಳಾಗಿ
ಕಾಡಿ ಬೇಡಿದರು ಹೂವ
ನೀಡೆಂದು ಆ ಮುದುಕಿಯನ್ನು!!

ಕಣ್ಣು ಕಾಣದ ಮುದುಕಿ
ಎಲ್ಲರಿಗೂ ಸಮನಾಗಿ
ಹೂ ನೀಡಿ ಹೇಳದಳು
ಇದು ವನ ಸುಮವೆಂದು!!

ಯಾರು ಮುಡಿದು
ಇದು ಬಾಡುವುದಿಲ್ಲವೋ
ಅವರೇ ನನ್ನ ಕತ್ತಲೆಯ
ಬದುಕಿನ ಕಣ್ಣುಗಳು ಎಂದು!!.

- ಪಿ.ಜಿ.ಜ್ಯೋತಿ

25 Jun 2017, 10:54 am

ಹೆಣ್ಣಾದ ಹೊಂಬಾಳೆ

ಆ ತಾರೆಯ ತೋಟದಿ
ಹೋವೊಂದ ಹುಡುಕಿರಲು
ಆ ಮೋಡದ ರಥವೇರಿ
ಯಾರೋ ಬಂದಿಹರು!!

ಹೊಂಬಾಳೆ ಮೈದುಂಬಿ
ಹೆಣ್ಣಾಗಿ ಬಂದಿರಲು
ಆ ಚಂದ್ರನು ಹೊಂಬೆಳಕಿನ
ಬಣ್ಣವ ಸುರಿದಿಹನು!!

ರತಿದೇವಿಯು ನಾಚುವ
ಅಂದದ ರೂಪದವಳು!!
ತಾರೆಗಳ ತೋಟದಲ್ಲಿ
ಕಿಲ ಕಿಲ ನಗುತಿಹಳು!!

ಆ ಬಾನಿಗೆ ಕೈ ಚಾಚಿ ನಾ
ಬಾ ಎಂದು ಕರೆದಿರಲು
ಮಳೆ ಹನಿಯ ಮೇಲೆ ನಿಂತು
ಧರೆಗಿಳಿದು ನನ್ನ ಸೇರಿದಳು!!

- ಪಿ.ಜಿ.ಜ್ಯೋತಿ

25 Jun 2017, 10:33 am

ಮುಂಜಾನೆ

ಹಕ್ಕಿಗಳು ಚಿಲಿಪಿಲಿಯ ರಾಗ ಇಂಪಾಗಿ ಕೇಳುತ್ತಿದೆ
ತಂಪಾದ ತಂಗಾಳಿಯು ಪರಿ ಪರಿಯ ಸುವಾಸನೆಗಳನ್ನು ಹೊತ್ತು ತರುತ್ತಿದೆ....................

ಕುಸುಮವ ಚುಂಬಿಸಿದ ಮಂಜನ್ನು ಬೆಚ್ಚಗಾಗಿಸಲು ರವಿ ತನ್ನ ರಶ್ಮಿಯನರಿಸುತಿಹನು
ಮುಂಜಾನೆ ಸೊಬಗನ್ನು ನಮಗೆ ಸೊಗಸಾಗಿ ತೋರಲು..................

ನೂರಾರು ಕೆಲಸಗಳು ನಿಲ್ಲದ ಸಮಯದ ಜೊತೆ ಕಾಲಿಗೆ ಚಕ್ರಗಳಕಟ್ಟಿ ಓಡುವ ಜೀವನ ಶೈಲಿಯಲ್ಲಿ
ಒಂದು ಕ್ಷಣ ಮನದಲ್ಲಿನ ನಗುವು ಕೇಳುತ್ತದೆ ನಗು ನನ್ನ ಗೆಳೆಯ ಈ ಒಂದು ಕ್ಷಣ ನಿನಗಾಗಿ ಮಿಸಲಿಡೋ ಎಂದು..............

- ಚುಕ್ಕಿ

25 Jun 2017, 08:33 am

ಹನಿ..

ಅಳಿದುಳಿದ ಭರವಸೆಯ ಬೆಳಕಲಿ
ಚದುರಿದ ಮೋಡಗಳ ದಿಟ್ಟಿಸುತಾ
ಮೌನದಿ ಇಳೆ ನಿಟ್ಟುಸಿರಾದ ಸಂಜೆ...

- Indushekar Chinivar

24 Jun 2017, 06:55 pm

ಎಡಬಿಡಂಗಿಗಳ ಒಡಕು ಮನೆ!!

ಮುಂಜಾನೆ ಮಂಜಿನಲಿ
ಪುಂಡರ ಸಂಗದಲಿ
ದಿನವಿಡೀ ಅಲೆಯುತಲಿ
ಮೂರೊತ್ತು ಉಂಡು ಮಲಗುವ ಮಗ

ಇದ್ದದಿರಲಿ- ಹೊದದ್ದು ಹೋಗಲೆಂಬ
ಮನಸಿಂದ ದಿನವಿಡೀ ಸೋನೆ
ಮಳೆಯಂತೆ ಜಿನುಗುತ ನುಲಿಯುತ
ಇದ್ದದ್ದನ್ನ ಬೇಯಿಸಿಡುವ ಸೊಸೆ

ಹರಟುತ್ತ ಮನೆ- ಮನೆ ತಿರುಗುತ್ತ
ಹಿತ್ತಾಳೆ ಕಿವಿಯ,ಒಡಕು ಬಾಯಿಂದ
ಆದಿರಂಪಾ- ಬೀದಿರಂಪಾ
ಮಾಡುತ್ತ ಸೊಸೆಯ ಮೇಲೆ
ಕತ್ತಿ ಮಸೆಯುವ ಮಡದಿ...

ಎತ್ತು ಏರಿಗೆಳೆದರೆ
ಕೋಣ ನೀರಿಗೆಳೆವಂತ
ಸಂಸಾರದ ಸೂತ್ರದಾರ
ಒಬ್ಬ ಎಡಬಿಡಂಗಿ...........

ಅಪ್ಪ ಹಾಕಿದ ಆಲದ ಮರ!
ಅದೆ ಎಲ್ಲರಿಗು ಆಧಾರ!
ಇದೆ ಅವರ ನಿರ್ಧಾರ!
ಆರಕೇರದೆ ಮೂರಕ್ಕಿಳಿಯದೆ
ಸಾಗುತಹದು ಈ ಸಂಸಾರ!


ಶಾರಧ

- ಶಕುಂತಲಾ

24 Jun 2017, 01:13 pm

ಈದ್ ಸಂಭ್ರಮ

ಅದೋ.. ಅಲ್ಲಿ ನೋಡು
ಶವ್ವಾಲಿನ ಮೊದಲ
ಚಂದ್ರ ಕಾಣಿಸುತ್ತಿದೆ
ನಾಳೆ ನಮಗೆ ಈದ್..

ಅಮ್ಮ ಮಗನನ್ನೆತ್ತಿ
ಮುರುಕಲು
ಕಿಟಕಿಯೆಡೆಯಿಂದ
ಆಗಸದೆಡೆಗೆ ಕೈ
ತೋತಿಸುತ್ತಿದ್ದರೇ

ಮಗ ಅಮ್ಮನ ಮುಖ
ನೋಡಿ ಕೇಳುತ್ತಿದ್ದಾನೆ
'ನಾಳೆ ನಾವೂ
ಹಬ್ಬ ಮಾಡುತ್ತೀವಾ' ???

ಮಗನ ಮುಗ್ಧ ಪ್ರೆಶ್ನೆ
ಅಮ್ಮನ ಮನ ಕಲಕಿತು..

ಹೊಟ್ಟೆಯಲ್ಲೊಂದು
ಮಗುವನ್ನು ಕರುಣಿಸಿ
ಗಂಡನೆಂಬ ಕಾಮಪಿಪಾಸು
ಓಡಿ ಹೋದ ಮೇಲೆ
ಬಡತನದ ಬೇಗುದಿಯಲ್ಲಿ
ಮಗುವನ್ನು ಸಾಕಲು
ಪಟ್ಟ ಕಷ್ಟಪಾಡು
ದೇವನಿಗೆ ಪ್ರೀತಿ ....

ಮಗನ ಪುಟ್ಟ ಬೆರಳುಗಳು
ಕಣ್ಣೀರನ್ನು ಒರೆಸಿದಾಗ
ವಾಸ್ತವಕ್ಕೆ ಬಂದಳಮ್ಮ..

ಊರಲೆಲ್ಲಾ
ಈದ್ ಸಂಭ್ರಮ

ಹೊಸಬಟ್ಟೆ ತೊಟ್ಟ
ಮಕ್ಕಳೆಡೆಯಲ್ಲಿ
ತನ್ನ ಮಗನೂ
ಸಂಭ್ರಮದಿಂದ
ಹೋಗುವ ದೃಶ್ಯವನ್ನು
ಬಾಗಿಲ ಮರೆಯಲ್ಲಿ
ಕಂಡ ಅಮ್ಮನ
ಕರುಳು ಹಿಂಡಿದಂತಾಯ್ತು...

ಮಗನಿಗೇನು ಗೊತ್ತು ??

ಅದು ಸಿರಿವಂತನೊಬ್ಬ
ಕೊಟ್ಟ ಹಳೇ ಉಡುಪೆಂದು...

ದಾನಿಗಳು ಕೊಟ್ಟ
ಅಕ್ಕಿಯನ್ನು ಅನ್ನಕ್ಕಿಟ್ಟದ್ದು
ನೆನಪಾಗಿ ಒಳ ನಡೆದಳು
ತನ್ನ ಕಣ್ಣೀರ ಕಡಲನ್ನು
ಒರೆಸುತ್ತ ತನದದೇ
ಹಳೇ ಸೀರೆಯಲ್ಲಿ ..

-- ಅಲ್ತಾಫ್ ಬಿಳಗುಳ.

- ಅಲ್ತಾಫ್ ಬಿಳಗುಳ

24 Jun 2017, 09:02 am

ಹೇ ಪತಿ ನಾ ನಿನ್ನ ಸತಿ.....

ಸೋತು ಹೋಗಲೇನು
ಮತ್ತೊಮ್ಮೆ ಶರಣಾಗಿ ನೋಡಲೇನು
ಆಗುವುದೆ ಬದುಕು ಹಾಲುಜೇನು?
ಬಾಳಲಿ ಕಂಡ ಸರಸ ವಿರಸ
ಕಲಿಸುವುದೆ ಜೀವನದಲಿ ಸಮರಸ
ಹೇಳು ಓ ನನ್ನ ಪ್ರಿಯ ಅರಸ

ಬಂದಿಲ್ಲ ಹೊತ್ತು ಒಡವೆ ವಸ್ತ್ರದ ಲಾಲಸೆ
ಹೊರಟು ಬಂದಿರುವೆ ನಿನ್ನನೆ ನಂಬಿ‌ ಬಹುದೂರ ‌ವಲಸೆ
ನೀ ಪ್ರೀತಿಯಲಿರಲು ಅರಮನೆ ನನಗೆ ನಿನ್ನ ಮನಸೆ
ಯಾತಕೆ ತೋರುವೆ ನನ್ನಲಿ ಬೇಡದ ವರಸೆ
ನಾನೆ ಬಾಡಿ‌ ಹೋದರು ‌ಕಾಣದೆ ನಿನಗೆ ನನ್ನ ಕನಸೆ
ಅರ್ಥವಿಲ್ಲದ ಬದುಕ ನೀ ಕೊಟ್ಟರೆ ನಾನೆಂದು ನಿನ್ನ ಮನ್ನಿಸೆ

ನಿನಗೆ ನಾನೆನಿಸಿದನೆ ಕೇವಲ ಹೆಂಡತಿ
ನನಗಿಲ್ಲವೆ ಜಾಗ ಆಗಿ ಮನಸಿಗೆ ಒಡತಿ
ಯಾತಕೆ ಹೀಗೆ ಹೆಂಡತಿಯ ನೀ‌ ಕಾಡುತಿ
ನಿನಗೇನೆ ಅನಿಸುವುದೆ ಇದು ನ್ಯಾಯದ ರೀತಿ
ನನಗೂ ಇರುವುದು ಕಾಡಲು ಒಂದು ಸರತಿ
ನಾನೂ ಹಾಗೆ ಕಾಡಿದರೆ ನೀನೇಗೆ ಉಳಿತಿ
ನೋಡಲಾರೆ ನಿನಗೆ ಬಂದರೆ ಅಂಥ ಸ್ಥಿತಿ

‌ಕಾಯುತಿರುವೆನು ಉಸಿರಿಡಿದು ಕಾಣಲು ನಿನ್ನ ಪ್ರೀತಿ
ಬಂದು ಸೇರು ಕಳೆದು ನನ್ನ ಮನಸೊಳಗಿನ ಭೀತಿ
ಇಂತಿ ನಾ ನಿನ್ನ ಪ್ರೀತಿ ಬಯಸಿ ಕಾಯುತಿರುವ ಸತಿ....
ತಿರಸ್ಕರಿಸದೆ ಸೇರೊ ಮನಸ ನನ್ನ ಪ್ರೀತಿಯ ಪತಿ....

- ಶ್ರೀಕಾವ್ಯ

23 Jun 2017, 11:15 pm

ಜೀವನ

ಬದುಕಿಗೆ ಅರ್ಥ ಬೇಕು
----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು
*ಹೆಮ್ಮೆಯ ಕನ್ನಡಿಗ

- ರಕ್ಷಿತ್ರಕ್ಷು

23 Jun 2017, 09:57 pm

ಹನಿ..

ಅಂಬರ ಕೆಂಪು‌
ಸಂಯಮ ದಾಟಿ
ನಿನ್ನ..ಮುದ್ದು ಗಲ್ಲವ
ಸೋಕಿದ ಸಂಜೆ...

- Indushekar Chinivar

23 Jun 2017, 06:14 pm