Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜನರಿಲ್ಲದ ಜಗತ್ತು........?

ಜನರಿಲ್ಲದ ಜಗತ್ತಿದು ಮುಖವಾಡಹೊತ್ತ
ಮನುಜರ ನೆರಳಿನಿಂದ ಸೃಷ್ಟಿಯಾಗಿರುವುದು...........

ಕಣ್ಣಿದ್ದೂ ನಿಜವನು ಕಾಣಳಾಗದ
ಕುರುಡರೆಲ್ಲರು............
ಸುಳ್ಳಿಗೆ ತಲೆಬಾಗಿ ನಿನ್ನಿಂದೆ ನಾವೆಂದು
ಸುಳ್ಳುಗಳ ಸಾಮ್ರಾಜ್ಯ ಸ್ಥಾಪಿಸಿ ಕಣ್ಣು
ಮುಚ್ಚಿ ನಡೆವರು............

ಹಣವೆಂಬ ದುಷ್ಟನಿಗೆ ಪಟ್ಟಕಟ್ಟಿ
ಜೀವನಕ್ಕೆ ದುಡ್ಡು ಬೆಕೆಂಬುದು ಬಿಟ್ಟು
ದುಡ್ಡಿಗಾಗಿ ಜೀವನವೆಂದು ತಳಿಸಿಕೊಟ್ಟರು
ಮಾನವತ್ವದ ಮೌಲ್ಯ ಮರೆತುಬಿಟ್ಟರು..........

ಜನರಿಲ್ಲದ ಜಗತ್ತಿದು ಸ್ವಾರ್ಥಿಗಳ
ಮೂರ್ತಿಗಳಿಂದ ತುಂಬಿರುವುದು...........
ನಾಟಕಗಳ ಮಜವಿಲ್ಲಿ ಆಡುವವರಿಗೆ
ಆಟ ಆಟ ನೋಡುವವರಿಗೆ ಮನರಂಜನೆಯಾ ಬಾಡೂಟ ನಡುವಲ್ಲಿ ಸಿಕ್ಕ ಅಮಾಯಕರಿಗೆ
ಸತ್ತು ಸಾಯದ ನರಕದಲ್ಲಿನ ಕಾಟ..............

ಜನರಿಲ್ಲದ ಜಗತ್ತಿದು

- ಚುಕ್ಕಿ

30 Jun 2017, 04:50 pm

ಚಿಗುರಿವೆ ಹೊಸ ಕನಸು....

ಸೆಳೆದಿರಲು ನಗುತಲೆ‌ ನೀನು ನನ್ನ ಮನಸು
ಚಿಗುರಿವೆ ಎದೆಯಲಿ ಹೊಸ ಹೊಸ ಕನಸು
ನಯನಗಳು ನಿನ್ನನೆ ನೋಡುತ ನನ್ನ ಮರೆತಿರಲು
ಶಿಲೆಯಾಗಿರುವೆನು ನಾನು ಆಗದೆ‌ ಅಲುಗಾಡಲೂ

ನಿನ್ನ ಭಾವಗಳು ಎಂಥ ಸೊಗಸೆ
ನಿನ್ನಲೇ ನಾನು ಸೇರಿ ಹೋಗುವ ಆಸೆ
ನನ್ನ ತಿರುಗಿ ನೋಡಿ ಕೊಂಚ ಕನಿಕರಿಸೆ
ನನ್ನನೆ‌ ಮರೆತಿರುವೆನು ತಿಳಿಯದೆ ಸಹಕರಿಸೆ
ಕಾಯುತಿರುವೆನು ಸೇರಿ ಹೋಗಲು ನಿನ್ನಲಿ ಸಮ್ಮತಿಸೆ

ಓ ನನ್ನ ಪ್ರಿಯ ಮನಸೆ
ನೀ ನನ್ನ ಬಾಳಿನ ಸವಿಗನಸೆ
ನನ್ನ ಮನಸಿನ ಪ್ರೀತಿಯ ಆದರಿಸೆ
ಸಾಯುತಿರುವೆ ಬಂದು ಉತ್ತರಿಸೆ
ತಿರುಕನ‌ ಕನಸೆಂದಾದರು ಹೇಳಿ‌ ತಿರಸ್ಕರಿಸೆ
ಕಾದಿರುವೆನು ಓ ಮನಸೆ ನೀನಾಗದಿರು ಬರಿ ಕನಸೆ

- ಶ್ರೀಕಾವ್ಯ

30 Jun 2017, 02:54 pm

ಮನ ಮಿಡಿಯುತಿದೆ....

ಒಲವಿನ ಚಿಲುಮೆಗೆ ಮನ ತುಡಿಯುತಿದೆ
ನೀ ಬರುವ ದಾರಿಯನೇ ಮನ ಕಾಯುತಿದೆ

ನನ್ನ ಕಣ್ಣೀರ ಹನಿ ಹನಿಯೂ
ನೀ ಬರುವ ದಾರಿಯಲಿ ಹೂವಾಗಿ ಕಾದಿವೆ

ಒಂದು ಸಾರಿ ಬಂದು ನೋಡು
ನನ್ನೀ ಮನದಲಿ ನಿನ್ನದೆ ಆಲಾಪನೆ

ನೀ ಬರಲು ಒಂದು ಮಾತಾಡಲು
ಸಾಕೆನಗೆ ಈ ಜನುಮಕಿಷ್ಟು

ಮರು ಜನುಮ ಒಂದಿದ್ದರೆ
ಮತ್ತೆ ಹುಟ್ಟಿ ಬರುವೆ ನಿನ್ನವಳೆ ಆಗಿ

- chinmayi

30 Jun 2017, 11:40 am

ಮುಂಜಾವು

ಕರಗುತಿರಲು ಬೆಳದಿಂಗಳ ಚಂದಿರನು
ಉದಯಿಸುತಿರುವನು ಆ ನೇಸರನು
ಸರಿಸುತ ಮುಂಜಾವಿನ ಚುಮುಚುಮು ಚಳಿಯನು
ಪ್ರೀತಿಯಲಿ ಮುತ್ತಿಕುತ ಎಲೆಯ ಮೇಲಿನ ಹಿಬ್ಬನಿಯನು
ಆ ಹಿಬ್ಬನಿಯೂ ಕರಗಿದೆ ‌ನೋಡಿ ಅವನ ಪ್ರೀತಿಯನು
ಹಸಿರು ನಾಚಿ ನಕ್ಕು ರಂಗೇರಿದೆ ಕಂಡು ಪ್ರೇಮದ ಸವಿಯನು ಸುರಿಯುತ ಬರುತಿರುವ ರವಿಯು ಭುವಿಗೆ ಎಳೆಯ ಬಿಸಿಲನು
ಮುಂಜಾವಿನ ಸೂರ್ಯ ‌ರಶ್ಮಿ ಇಮ್ಮಡಿಸಿದೆ ಭೂಮಿಯ ಕಾಂತಿಯನು
ಕೋರುತಿವೆ ಸ್ವಾಗತ ಬೆಳಗಿಗೆ ಹಕ್ಕಿಗಳು ಹಾಡುತ ಇಂಚರವನು

ಕೈ ಕಟ್ಟಿ ತಣ್ಣನೆ ‌ಉಸಿರೊಡನೆ‌
ಬೆಳ್ಳಂಬೆಳಗ್ಗೆ ಬೆಚ್ಚಗೆ ಚಳಿಯೊಡನೆ
ಹಕ್ಕಿ ಪಿಕ್ಕಿಗಳ‌ ಹಾಡಿನೊಡನೆ
ಕರಗುವ ಹಿಬ್ಬನಿಯ ಪ್ರೀತಿಯೊಡನೆ‌
ಸವಿಯುವ ಮನಸಿರಲು ಭೂಮಿಯ ಸೌಂಧರ್ಯವನೆ
ಭುವಿಯೊಳು‌ ನಿಜ ಧನ್ಯನು‌ ಅವನೆ

- ಶ್ರೀಕಾವ್ಯ

29 Jun 2017, 11:58 pm

ಸೋತ ಬದುಕು

ಸೋತವರಿಗೆ ಸಾವಿನ ಭಯವಿಲ್ಲ,
ಸತ್ತವರಿಗೆ ಸೋಲಿನ ಅರಿವಿಲ್ಲ...........

ಇದೆಂಥ ಬದುಕು ನನ್ನದು ಸಾವು ಇಲ್ಲ
ನೋವು ಇಲ್ಲ ನೊಂದು ನೊಂದು ಕಣ್ಣಲ್ಲಿ ನೀರಿಲ್ಲ..........

ಬೆಂದು ಬೆಂದು ಬದುಕುವ ಆಸೆಯಿಲ್ಲ
ನಗುವುದೋ ಅಳುವುದೋ ನನಗೊಂದು ತಿಳಿಯಲಿಲ್ಲ...................

ಕಣ್ಣೀರ ಮುಚ್ಚಿಡಲು ಕತ್ತಲಿನ ಅಸರೆಯ
ಇಂದು ಬೇಡಿರುವೆನಲ್ಲಾ................

ನಗುತ್ತಿರುವ ನಗುವಿಗೆ ಕಾರಣನೇ ಇದುವರೆಗೂ ತಿಳಿದಿಲ್ಲ ಆ ನಗುವು ಕಣ್ಣೀರು ಕೊಟ್ಟಾ ಶಾಪವೆಂದು ನಾನು ಮರಿಯಲ್ಲಾ...............

- ಚುಕ್ಕಿ

29 Jun 2017, 11:10 pm

ಮನಸೇ

ಅಳಬೇಡವೆ ಮನಸೇ ಅಳಬೇಡ ಸತ್ತ ನೀನು
ಅತ್ತರೇನು ಪ್ರಯೋಜನ ಹೇಳೇ ಮನಸೇ......

ನೋವಂತೂ ನಿನಗೆ ಹೊಸದಲ್ಲ ಕಣ್ಣೀರು ನಿನಗೇನು ಅಪರಿಚಿತವಲ್ಲ...........

ಏತಕ್ಕೆ ನಿನ್ನ ಕೋಣೆಯಾಸೆ ಬದುಕಲ್ಲಿ ಬಣ್ಣಗಳು ಇನ್ನು ಉಳಿದುಕೊಂಡಿವೆ ಎಂದೂ...........

ಯಾರು ನಿನ್ನ ಅರಿತವರಲ್ಲ ಯಾರಿಗೂ ನಿನ್ನ ನೋವು ಅರ್ಥವಾಗುವುದಿಲ್ಲ...............

ಸತ್ತ ಶವಕೆ ಸಿಂಗಾರವೇಕೆ ಮಾಡಲು ಯತ್ನಿಸುವೆ ನಿನ್ನ ನಟನೆಯ ನಗುವಲ್ಲಿ ಓ ಮನವೇ..............

ಬಾಡಿದ ಹೂ ನೆಲಕ್ಕೆ ಜಾರಿ ನೆಲಸಮವಾದಮೇಲೆ
ಮತ್ತೆ ಗಿಡದ ಮಡಿಲಲ್ಲಿ ಮೊಗ್ಗಾಗಿ ಅರಳುವ ಆಸೆ ಏತಕ್ಕೆ ನಿನಗೆ ಓ ಹುಚ್ಚು ಮನವೇ................

ನೂರಾರು ನೋವುಗಳ ನುಂಗಿ ನುಂಗಿ ನಿನ್ನ ಹೊಟ್ಟೆ ತುಂಬಿರುವುದಲ್ಲವೇ ಮನವೇ ಅದರಲ್ಲಿ ನಲಿವಿನ ಹಸಿವೇಕೆ ನಿನಗೆ ಮನವೇ...............

ಭಾರವಾಗಿದೆ ನಿನ್ನ ದೇಹ ಕುಡಿದ ಕುಗ್ಗಿದ ನಿನ್ನ ಕಣ್ಣೀರ ಹನಿಗಳೊಂದಿಗೆ ಸಪೂರವಾಗುವ ಆಸೆ ಏತಕೆ ನಿನಗೆ ಮತ್ತೆ ಕಣ್ಣೀರ ನಿನ್ನೊಳಗೆ ತಲ್ಲಿ..........

ಜನರು ಕಟ್ಟಿದ ಕಠಿಣವಾದ ಮಾತುಗಳ ಸಮಾಧಿಯಲ್ಲಿ ಶಾಶ್ವತವಾಗಿ ಮಲಗೆ ಮನವೇ ನಿನಗೆ ಈ ಲೋಕ ಉಸಿರಾಡಲು ಬಿಡುವುದಿಲ್ಲ...........

- ಚುಕ್ಕಿ

29 Jun 2017, 09:17 pm

ಮಾತಿಲ್ಲದ ಮಾತು

ಮಾತಿಲ್ಲದ ಮಾತಲ್ಲಿ
ಕೊಡಲಾರದ
ಉತ್ತರಗಳನ್ನು ಕೊಡಲು
ಹೇಗೆ ತಾನೇ ಸಾಧ್ಯ...........

ಮಾತಿಲ್ಲದ ಮಾತು
ಮೌನವಿಲ್ಲದ ಮೌನ
ನೀರಿಲ್ಲದ ಕಣ್ಣೀರು ನನ್ನ ನಗು
ನಗು ಕಳದೊಗಿದೆ ನನ್ನಲೇ ನಿರಾಗಿ ಕರಗುತ್ತಿದೆ.......

- ಚುಕ್ಕಿ

29 Jun 2017, 08:17 pm

ನನ್ನ ಜೊತೆಗಿರುವ ಸಮಯದಲ್ಲಿ...........

ಮಾತೊಂದು ಬಾರದ ಸಮಯದಲ್ಲಿ
ನಿನ್ನ ನೆನೆಯುತ್ತಾ ಕೂರುವೇ ನನ್ನಲ್ಲಿ.........

ಮಂಜಿನ ಹನಿಗಳ ಬೆವರಲ್ಲಿ ತೊಳೆಯೋಣವೇ
ನಮ್ಮ ನೋವಿನ ಕ್ಷಣಗಳನ್ನು...............

ಪಿಸುಮಾತುಗಳ ನೆಪದಲ್ಲಿ ನಿನ್ನನೊಂದು
ಮಾತು ಕೇಳಿ ನನ್ನ ಎದೆಯಬಡಿತ ನಿನ್ನ ಮನ ಆಲಿಸಿತೇ ನನ್ನ ಜೊತೆಗಿರುವ ಸಮಯದಲ್ಲಿ ಎಂದು.........

- ಚುಕ್ಕಿ

29 Jun 2017, 06:47 pm

ನಿವೇದನೆ!

ಮನದ ಮಾತುಗಳ
ಮೌನದಲ್ಲೆ ಆಲಿಸುತ
ನೀಡುತಿಹೆ ಸಂದೇಶಗಳ
ನಾನಿಹೆ ನಿನ್ನ ದರ್ಶನವ ಕಾಯುತ!

ಮಧುರ ಗಾನದಿ
ವೀಣೆಯ ನುಡಿಸಿ
ಸಪ್ತ- ಸ್ವರಗಳ
ಮಧುವ ಹರಿಸಿ
ಜಗವ ತಣಿಸಿದೆ!

ನನ್ನೆಲ್ಲ ನೋವು- ನಲಿವನು
ನಿನಗೆ ಅರುಹುತ್ತಾ....
ಏಕಾಂಗಿಯಾಗಿ ಚಲಿಸುವೆನು
ನಿನ್ನ ದರ್ಶನಕ್ಕಾಗಿ ಕಾಯುತ್ತಾ.....

ನಾವೇ ಮಾಡಿದ ಮೂರ್ತಿ ನೀನು
ನಿನ್ನ ,ಮುಂದೆ ನಿಂತಿರುವೆನು ನಾನು
ಕಾಯುವೆಯೇನು? ಕನಸುಗಳ
ಸರಮಾಲೆಯ ನನಸು ಮಾಡುತ!

ನೀನೆ ಮನದಿ ತುಂಬಿರಲು
ಆಗಸವ ನೋಡುತ ಸಾಗಲು
ನೂರು ಕಲ್ಪನೆಯು ಮೂಡಿ
ಬೆಳ್ಳಿಮೋಡವು ಸಾಗಲು
ನಿನ್ನ ಬಿಂಬವ ನೋಡಿ
ತಣಿಯಿತು ಮನವು ಹಾಡಿ!


ಶಾರಧ

- ಶಕುಂತಲಾ

29 Jun 2017, 06:21 pm

ಇನ್ನು ಎಷ್ಟುದಿನ ...

ಇನ್ನು ಎಷ್ಪುದಿನ ಈ ಒಂಟಿತನ
ಕಾಯುತ್ತಿರುವೆ ನಾ ನೀನ್ನ ನೆನಪಲೆ ಪ್ರತಿಕ್ಷಣ
ನೀ ಮರೆತರು ನಾ ಮರೆಯುವುದಿಲ್ಲ
ನೀ ನಾಡಿದ ಮಾತುಗಳನ್ನ
ಈ ಜನ್ಮ ಒಂದೆ ಸಾಕು ನೀ ನನ್ನ ಜೀವ ಇನ್ನ
ನೀ ಬರುವ ವರೆಗೂ ಕಾಯುವೆ ನೀನ್ನ ನೆನಪುಗಳ ಸುಳಿಯಲಿ
ನೀ ಬೇಗ ಬರಲಿ ಎಂದು ನಾ ಬೇಡುವೆನು ಆ ದೇವರಲಿ.....
....by
.....Hanu.m.....

- hanumeshm

29 Jun 2017, 05:53 pm