Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿದ್ದೆಯಲ್ಲಿನ ನನಸು.........

ಮಲಗು ನೆಮ್ಮದಿಯಾಗಿ ಕನಸಿನ ಕಂಬಳಿ ಹೊದಿಸುವೇ ನಿನ್ನ ನಿರ್ಮಲವಾದ ಮನಸಿಗೆ
ಮಂದಹಾಸದ ಹಾಸಿಗೆಯ ಹಾಸಿ..............

ಲಾಲಿ ಹಾಡು ನಿನ್ನ ಕಣ್ಣ ರೆಪ್ಪೆಗಳಿಗೆ
ನಿದ್ದೆಯಲ್ಲಿ ಎದ್ದು ನೋಡದೆ ನನ್ನ ಕನಸಿನ ಮನಸಲ್ಲಿ.......................

ದಿನವೆಲ್ಲ ಓಡಾಡಿ ಸುಸ್ತಾಗಿರುವ ಕಾಲುಗಳಿಗೆ ವಿಶ್ರಾಂತಿಯ ಸಮಯಕೊಡು ಮತ್ತೆ ಮತ್ತೆ ಹೆಚ್ಚರಗೊಳ್ಳದೆ...............

ನಿದ್ದೆಯಲ್ಲಿನ ನಿನ್ನ ಅಪ್ಪಿಗೇ ನನ್ನ ಮನಕೆ ನೆಚ್ಚಿನ ಕನಸಾಗುವುದು ಏಕೆಂದರೆ ಅದರಲ್ಲಿ ನಿನ್ನ ನಗುವು ಬಿಟ್ಟರೆ ಮುನಿಸು ಕಾಣಲಾರೆದು ನನ್ನ ಕಣ್ಣಿಗೆ........

ಜೋಕಾಲಿ ತೂಗುವ ಕೈಯಿಗೆ ನಿನ್ನ ಪ್ರೀತಿಯಿಂದ
ನೋಡಿಕೊಳ್ಳುವ ಆಸೆ ಏಳು ಜಮ್ಮಕೂ ಕೈಬಿಡದೆ ನಿನ್ನ ಜೊತೆಯಾಗಿ.............

ನಿದ್ದೆಯಲ್ಲಿನ ನನಸು ಆಗುವುದೆಂದು ಭಾವಿಸುವೆ ನನ್ನ ಜೀವನದ ಸವಿಗನಸು ನೀನಿದ್ದರೆ ನನ್ನ ಜೊತೆಗೆ ಎಂದೆಂದೂ ನನ್ನ ಮನಸ್ಸು ಹರುಷದ ಹೊಂಬಣ್ಣ ಹೊತ್ತ ಕಾಮನಬಿಲ್ಲಿನ ಬೆಳಕಿನೆಡೆಗೆ............

- ಚುಕ್ಕಿ

27 Jun 2017, 11:18 pm

ಹರಿದಿದೆ ರಕ್ತ ಕಣ್ಣೀರು..

ಮಕ್ಕಳ ಅರೆಹೊಟ್ಟೆಯ ತುಂಬಲು ಸಜ್ಜಾದ
ಕುದಿಗಂಜಿಯ ದಿಟ್ಟಿಸಿಹಳು ತಾಯಿ
ಹಣೆಯಲಿ ಮೂಡಿದ ಬೆವರ ಹನಿಗಳು
ಮುಂಗುರುಳ ತಾಕಿ ಜಿನುಗುತಿದೆ
ಕೆಂಪು ಕಿಡಿಯಾಗಿ
ಒಲೆಯ ಶಾಖದ ಗುರುತಾಗಿ
ಬಡ ಒಡಲ ತಾಪದ ಕುರುಹಾಗಿ
ಉಪವಾಸದ ಸರದಿ ಗಂಡನದೆಂದು ನೆನೆದು
ಕಂಗಳು ತುಂಬಿ ಕುಂಕುಮ ಕರಗಿ
ಹರಿದಿದೆ ರಕ್ತ ಕಣ್ಣೀರು...

- Indushekar Chinivar

27 Jun 2017, 09:46 pm

ಪ್ರೀತಿ ಸ್ನೇಹ

ಪ್ರೀತಿ ಎಂಬುದು
ಬಲ ವಾಗಿರಬೇಕು
ಬಲವಂತವಾಗಿರಬಾದು

ಸ್ನೇಹ ಎಂಬುದು
ನೆನಪಾಗಿರಬೇಕು
ನೆಪವಾಗಬಾರದು

- ರಾಜೇಶಕಿಚ್ಚ

27 Jun 2017, 09:10 pm

ಒಲವಿನಾ ಹಣತೆ

ಒಂಟಿಯಾದ ನನ್ನ ಜೀವನದ ಪಥದಲಿ,
ಜಂಟಿಯಾಗಿ ಬಂದೆ ನೀ ಜೊತೆಯಲಿ,
ಬೆಳಕ ಚೆಲ್ಲಿದೆ ಜ್ಯೋತಿಯಾಗಿ ಬಾಳಿನಲಿ,
ನಾ ಬೇಡುವುದೊಂದಿದೆ ಆ ದೇವರಲಿ,
ನಮ್ಮೊಲವಿನಾ ಹಣತೆ ಎಂದೂ ಉರಿಯುತಿರಲಿ.
------- tippu --------

- tippu

27 Jun 2017, 08:10 pm

ತುಂತುರು ಮಳೆ

ತುಂತುರು ಮಳೆ ಹನಿ
ಕೆಡಿಸಿತು ನನ್ನ ತಲಿ
ಹೊಂಬಾಲಿಸಿನ ಮಳೆ ಹನಿಯಲಿ ಕಾಣಿಸಿತು ಕಾಮನಬಿಲ್ಲು
ಆ ಹೊಂಬಿಸಿಲು ಮಳೆಯ ಹನಿಯಲಿ ಕಾಮನಬಿಲ್ಲಿನ ನಡುವೆ ನರ್ತಿಸಿತು ನವಿಲು
ಆ ನವಿಲಿನ ನಾಟ್ಯಕ್ಕೆ ಸೋತು ಹೋಯಿತು ನನ್ನ ಮನಸ್ಸು
ತುಂತುರು ಮಳೆ ಕೆಡಸಿತು ನನ್ನ ತಲೆ


...Devu sur

- Devu.sur

27 Jun 2017, 06:14 pm

ಕಾಣದೆ ನಿನಗೆ ಕಣ್ಣೀರು...

ದೇವರೆ... ನೀನೆಷ್ಟು ಸ್ವಾರ್ಥಿ
ಕೆಲವರಿಗೆ ತಿನ್ನಲು ಗಂಜಿ ಇಲ್ಲ
ನೀನು ತಿನ್ನದೇ ಇದ್ದರೂ
ಮೃಷ್ಟಾನ್ನ ಭೋಜನ ನೈವೇದ್ಯ

ಮನೆ ಮನೆಗೆ ಹೋಗಿ ಅಮ್ಮ ಹಸಿವು
ಎಂದರೂ ಹಿಡಿ ಅನ್ನ ಕೊಡದವರು
ನಿನ್ನ ಮೈಯಿಗೆ ಪಂಚಾಮೃತ
ಸುರಿಯುತ್ತಿರುವರಲ್ಲ

ಕಷ್ಟ ಪಟ್ಟು ಸಾಲ ಮಾಡಿ ಬೀಜ ಗೊಬ್ಬರ
ತಂದು ಹಗಲು ಇರುಳೆನ್ನದೆ
ಉಳುಮೆ ಮಾಡಿ ಬಿತ್ತಿರಲು
ಬಾರದೆ ಹೊಗುವನು ಜವರಾಯ

ಅಷ್ಟು ಇಷ್ಟು ಮಳೆ ಬರಲು
ಸೊಗಸಾಗಿ ಬೆಳೆ ಬರಲು
ಹಬ್ಬದ ಸಡಗರ ರೈತನ ಮೊಗದಲಿ
ಸುಗ್ಗಿಯು ಬಂದಿತು ಹಿಗ್ಗನು ತಂದಿತು
ಎಲ್ಲೆಲ್ಲೂ ರಾಶಿ ಕಣ್ಮನ ತುಂಬಿಹುದು

ಕುಷಿಯಲಿ ಹೇಳಿದನು ಮಗಳಿಗೆ
ಪೇಟೆಗೆ ಹೋಗುವೆನು ಬೆಳೆ ಮಾರಿದ
ದುಡ್ಡಲಿ ತರುವೆನು ಬೆಳ್ಳಿಯ ಗೆಜ್ಜೆ
ಬಣ್ಣದ ಅಂಗಿ ಹೋಗಿ ಬರುವೆ ನನ್ನ ಕಂದ

ಪೇಟೆಯ ತಲುಪಲು ಕತ್ತಲಾಗಲು
ಸುತ್ತಲೂ ಮೋಡ ಕವಿದಿರಲು
ಎತ್ತ ನೋಡಿದರು ನಿಲ್ಲಲು ಜಾಗವಿಲ್ಲ
ದೋ ಎಂದು ಸುರಿಯುತ್ತಿರಲು ಮಳೆ
ಬೆಳೆದ ಬೆಳೆಯಲ್ಲ ನೀರು ಪಾಲು

ದೇವರೆ ನೀನೆಷ್ಟು ಕ್ರೂರಿ....

- chinmayi

27 Jun 2017, 02:42 pm

ರೈತ...

ಬಾರದ ಮಳೆಯ‌ ಅರಸುತಾ
ಬೀಜದಲಿ ಅಡಗಿದ
ತನ್ನ ಭವಿಷ್ಯವ ನೆನೆಯುತಾ
ಬಾಳ ಈ ಜೂಜಾಟದಲಿ
ಸೋಲ ಕಹಿವಿಷವನುಂಡು
ಭೂತಾಯಿ ಮಡಿಲಿಗೆ ತಲೆಕೊಟ್ಟ
ಚಿರನಿದಿರೆಗೆ ಜಾರುತಾ...

- Indushekar Chinivar

26 Jun 2017, 10:53 pm

ಹುಡುಗಿಯ ಪ್ರೀತಿ ಸಿಗದಿದ್ದಾಗ

ಗೆಳತಿ ಬರೆಯಲೇನು ನಾನು ಸಾವಿರ ಮುತ್ತುಗಳ ಸೇರಿಸಿ ಮನಸ್ಸಿನ ಒಂದು ಕವಿತೆಯ, ಕೇಳದೆ ನೀ ಕೊಟ್ಟು ಹೋದ ನೋವುಗಳ ಕೂಡಿಸಿ ಹೇಳಲೇನು ನನ್ನ ಒಂದು ಜೀವನದ ಚರಿತೆಯ, ಬಿಳಿಯ ಹಾಳೆಯ ಮೇಲೆ ಬರೆದಿದ್ದು ಮಾಸಬಹುದು ಆದರೆ
ನನ್ನ ಹೃದಯದಲ್ಲಿ ನಾ ಕೆತ್ತಿರುವ ನನ್ನ ನಿನ್ನ ಪ್ರೀತಿಯ ಬರಹವನ್ನು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಕಣೇ ಚಿನ್ನ

- PavanGowda

26 Jun 2017, 10:38 pm

ಪ್ರೀತಿಯಲ್ಲಿ ಬಿದ್ದ ಮೇಲೆ

ದಾರಿ ತಪ್ಪಿತು ಕಾಲುಗಳು
ಕೆಲಸ ಮರೆತಿದೆ ಕೈಗಳು
ಮಾತು ತಪ್ಪಿದೆ ನಾಲಿಗೆ
ಮೌನವಾಗಿದೆ ಒಲವಿಗೆ
ಮನಸ್ಸು ಕೇಳಿದೆ ನಿನ್ನನು
ನೋಟ ಮರೆತಿದೆ ನನ್ನನು

- PavanGowda

26 Jun 2017, 10:15 pm

ಕಾಡಿತೊಂದು ಚಿಂತೆ

ಹುಟ್ಟಿರುವೆವು ನಾವು ಮಾನವರಾಗಿ
ಬದುಕುತ್ತಿಲ್ಲ ಏಕೆ ಸ್ವಾತಂತ್ರ್ಯವಾಗಿ
ದುಡಿ ದುಡಿದು ಬೆವರ ಹನಿ ಸುರಿದು
ಕಾಲುಗಳೆಂಬೊವು ಮರಗಟ್ಟಿದರು
ಬದುಕಲಾರೆವು ನಾವು ಬೇರೆ ಯವರ ಅಂಗಿಲ್ಲದೆ.
ಶ್ರಮ ಯಾರುದೊ ಪ್ರತಿಪಲ ಯಾರದೊ
ತಿರುಗಾಡುವ ಕೈಗಳಿಗಿಲ್ಲಿ ತುಂಬಿತ್ತು ನಗದು
ಮೂರೊತ್ತು ದುಡಿವ ಕೈಗಳಿಗಿಂದು ಸಿಕ್ಕಿದ್ದು
ಬರಿ ಚಿಂತೆ ಚಿಂತೆ ಚಿಂತೆ

- Ms

26 Jun 2017, 09:07 pm