Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಣದ ಕಡಲು

ಕಾಣದ ಕಡಲಿಗೆ ಭಾವನೆಗಳ ಕನಸನ್ನು ಕಟ್ಟುತ್ತಿರುವ ತಿಳಿಯದ ತೀರ ನಾನು
ಝರಿಯಂತೆ ಹರಿಯುವ ಮುದ್ದಾದ ನದಿಯು
ನೀನು
ನಿನ್ನ ನಡುಗೆಗೆ ದಾರಿ ನಾನಾಗುವ ಆಸೆ ಗಳತಿ.
ಒಮ್ಮೆಯಾದರು ತಿರುಗಿ ನೋಡೆ
ಕತ್ತೆಲೆ ಆವರಿಸಿ ಖಾಲಿಯಾಗುತ್ತಿರವ
ನನ್ನ ಮನದ ಹ್ರೃದಯದಾಳಕ್ಕೆ ಒಮ್ಮೆಯಾದರು
ಸೇರು ಬಾರೆ ನನ್ನ ಪ್ರೀತಿಯ ಮಳೆ ಹನಿಯೇ?????????

seenuPaddu

- seenupaddu

05 Jul 2017, 12:02 am

ನಮ್ಮ ಕೋಲಾರ

ಬನ್ನಿ ಒಮ್ಮೆ ನಮ್ಮೂರಿಗೆ..
--------------------

ನೋಡ ಬನ್ನಿ ನಮ್ಮೂರ
ನಿಮಗೆ ಚಿನ್ನ ರೇಷ್ಮೆ ಹಾಲು ಕೊಟ್ಟ ಕೋಲಾರ..

ನಮ್ಮ ಊರು ಮಾಲೂರು
ಶಿವಾರಪಟ್ಟಣ ಶಿಲ್ಪಿಗಳ ತವರು
ಕಲ್ಲುಗಳಿಗೆ ಇಲ್ಲಿ ಜೀವ ತುಂಬುವರು..

ಕನ್ನಡದ ಆಸ್ತಿ
ನಮ್ಮ ಕವಿ ಮಾಸ್ತಿ
ಅವರು ನಮ್ಮವರೆಂಬ ಹೆಮ್ಮೆ ನಮಗೆ ಸ್ವಲ್ಪ ಜಾಸ್ತಿ..

ಶ್ರೀನಿವಾಸ ನೆಲೆಸಿರುವ ಚಿಕ್ಕತಿರುಪತಿ
ಬರುವ ಭಕ್ತರ ಸಂಖ್ಯೆ ಚಿಕ್ಕದಲ್ಲ ದೊಡ್ಡದಿದೆ ಖ್ಯಾತಿ..

ಬಂಗಾರವನ್ನು ಮೂಟೆಗಳಲ್ಲಿ ತಂದು ಮಾರುತಿದ್ದರಂತೆ ಬಂಗಾರಪೇಟೆಯಲ್ಲಿ
ಹೈದರ್ ಆಲಿ ಹುಟ್ಟಿದ್ದು ಇಲ್ಲೇ ಬೂದಿಕೋಟೆಯಲ್ಲಿ..

ಚಿನ್ನವನ್ನು ಬಗೆಯುತಿದ್ದ ಕೋಲಾರ ಗೋಲ್ಡ್ ಫೀಲ್ಡಲಿ
ಗೋಲ್ಡು ಖಾಲಿಯಾಗಿ ಈಗ ಫೀಲ್ಡು ಮಾತ್ರ ಉಳಿದಿದೆ..
ಇಲ್ಲಿನ ಜನಪ್ರಿಯ ಆಟ ಕಾಲ್ಚೆಂಡು
ಇಂಗ್ಲಿಷರ ಪ್ರಭಾವದಿಂದ ಇದೊಂದು ಮಿನಿ ಇಂಗ್ಲೆಂಡು..

ಕೋಟಿಲಿಂಗ ದರ್ಶಿಸಿದರೆ ಕೋಟಿ ಪಾಪ ಕಳೆವುದು
ಗುಟ್ಟಹಳ್ಳಿಯ ಬೆಟ್ಟದಲ್ಲಿ ಸಕಲ ಪುಣ್ಯ ಸಿಗುವುದು..

ಕಗ್ಗದ ಸಿರಿ ಡಿವಿಜಿ ಯವರು ಹುಟ್ಟಿದ ಮುಳಬಾಗಿಲು
ನಮ್ಮ ಕರ್ನಾಟಕದ ಹೆಬ್ಬಾಗಿಲು..
ಇಲ್ಲಿನ ಆಂಜನೇಯ, ಆವಣಿಯ ರಾಮ, ವಿರೂಪಾಕ್ಷಿ, ಕೊಲದೇವಿ, ಕುರುಡುಮಲೆ, ನರಸಿಂಹ ತೀರ್ಥ
ಎಲ್ಲಾ ದರ್ಶನದಿಂದ ನಿಮಗೆ ಸಿಗುವುದು ಪರಮಾರ್ಥ..

ಶ್ರೀನಿವಾಸಪುರದಲಿ
ಎಲ್ಲಿ ನೋಡಿದರೂ ಮಾವು..

ಸಿಹಿಗೆ ಹೆಸರು ಇಲ್ಲಿನ ಮಾವು
ದೇಶ ವಿದೇಶಕ್ಕೂ ಕಳಿಸುತ್ತೇವೆ ಇಲ್ಲಿಂದ ನಾವು..


ನಗರವನ್ನು ಕಾಯುತ್ತಿರುವ
ಕೋಲಾರಮ್ಮ ಸೋಮೇಶ್ವರ ದೇವಸ್ಥಾನಗಳು
ಮನಮೋಹಕ ಶಿಲ್ಪಕಲೆಗೆ ಉದಾಹರಣೆಗಳು..

ಶತಶ್ರೃಂಗದ ಕಣಿವೆಯಲಿ
ಹಿತಕರವಾದ ಪರಿಸರದಲಿ
ಶಿವನ ಸನ್ನಿಧಿಯಲ್ಲಿ
ಸದಾ ಸಿಹಿನೀರ ಸುರಿಸುತ್ತಾಳೆ ಅಂತರಗಂಗೆ..
ಇಲ್ಲಿ ಬಿಟ್ಟರೆ ಎಲ್ಲ ಕಡೆ ತೊಟ್ಟು ಹನಿಗೂ ಪರದಾಟ ಏಕೆ ಮುನಿಸಿಕೊಂಡಿದ್ದಾಳೋ ಹರಹರ ಗಂಗೆ..

ನೀರಿಲ್ಲದಿದ್ದರೂ ಅತಿ ಹೆಚ್ಚು ತರಕಾರಿ ಬೆಳೆಯೋರು ನಾವು
ಒಂದಿಷ್ಟು ನದಿ ನಾಲೆ ಇದ್ದಿದ್ದರೆ ಇನ್ನೆಷ್ಟು ಬೆಳೆಯುತ್ತಿದ್ದೆವು
ಯೋಚಿಸಿ ನೀವು..

ಎಲ್ಲರ ನೀರಿಲ್ಲದಿದ್ದರೇನಂತೆ..
ಪ್ರೀತಿಯ ಪನ್ನೀರ ಕೊಡುತ್ತೇವೆ..
ಒಮ್ಮೆ ಬನ್ನಿ ಇಲ್ಲಿಗೆ..
ಇಲ್ಲಿನ ಜನರ ಮನಸು ಮಲ್ಲಿಗೆ..

- ವಾಸು ಕೋಲಾರ

04 Jul 2017, 04:43 pm

ಲೆಕ್ಕಾಚಾರ

ಮಾಡುವ ಮೂರು ಕಾಸು
ಸಂಪಾದನೆ....
ಮನದಲ್ಲೆ ಮೂಡುವುದು
ಮುನ್ನೂರು ಯೋಜನೆ...

ರಾಜಕಾರಣಿಗಳು ಮತಕೇಳಲು
ಅಧಿಕಾರ ಚುಕ್ಕಾಣಿ ಹಿಡಿಯಲು
ಒಡ್ಡುವರು ಹಣದ ಆಮಿಷ
ಗಳಿಸಲು ಬೀಸುವರು ಪಾಶ

ಮೂಷಿಕಗ್ರಾಹಿಗಳೆ ಬಹುಮಂದಿ
ತುಂಬಿರಲು....
ಸೆರೆಗೈಯಲು ಹಲವುಮಂದಿ
ಶ್ರಮವಹಿಸಲು.....
ಈ ಶೀತಲ ಯುದ್ಧದಿ
ಜನ ಸಾಮಾನ್ಯರು ನರಳುತಿಹರು

ನೀಡಿ- ಪಡೆವ ಲೆಕ್ಕಾಚಾರಗಳ
ಮೂಟೆಹೊತ್ತು ಸಾಗುವರು
ಕೂಡಿ- ಕಳೆದು,ಗುಣಿಸಿ- ಭಾಗಿಸಿದರು
ಗಣನೆಗೆ ನಿಲುಕದಷ್ಟು ಆಸ್ತಿಗಳ
ಮಾಡಿಡುವರು....



ಶಾರಧ

- ಶಕುಂತಲಾ

04 Jul 2017, 04:11 pm

ಸ್ವಲ್ಪ ಹಾಳಾಗ್ಬಿಟ್ಟಿದಿವಿ...

ತುಂಬಾ ತಲೆ‌ ಕೆಡಿಸ್ಕೊ‌ ಬೇಡಿ ನೀವು
ಸ್ವಲ್ಪ ಹಾಳಾಗ್ಬಿಟ್ಟಿದಿವಪ್ಪ ನಾವು
ಅಯ್ಯೋ ಹಾಕ್ರಪ್ಪ ಯೋಚನೆಗೆ ಲಗಾಮು ತಾವು
ಹೇಳೋದು ಬೇಕಾದಷ್ಟಿದೆ ನಿಮಗೆ ನಾವು
ತುಂಬಾನೆ ಒಳ್ಳೆವ್ರಪ್ಪ ಅಂದ್ಕೊಂಡಿದ್ದಕ್ಕಿಂತ ತಾವು
ಕೆಟ್ಟವ್ರಲ್ಲಪ್ಪ ನೀವಂದ್ಕೊಂಡಷ್ಟು ನಾವು

ರೈಡು ಹೆಲ್ಮೆಟಿಲ್ದೆ ತಲೇಲಿ, ತ್ರಿಪ್ಸ್ ಬೈಕಲಿ ಸಿಗಾಕೊಂಡ್ರೆ ಫೈನು
ಚೆಂದದ ಹುಡುಗಿ ಬಂದ್ರೆ ಹಾಕ್ತಿವಪ್ಪ ಒಂದು ಲೈನು
ಆಗಾಗ ಒಂದು ಸ್ಮೋಕು, ಒಂದು ಪೆಗ್ಗು ವೈನು
ನಮಗೂ ಇರಬೋದಲ್ವೆ ಒಳಗೊಳಗೆ ಸ್ವಲ್ಪ ಪೈನು
ಹೇಳ್ರಪ್ಪ ನಾವು ಮಾಡ್ತಿರೊ ಅಂತ ದೊಡ್ಡ ತಪ್ಪೇನು
ನಗ್ತಾ ನಗ್ತಾ ಬದುಕುವುದೆ ಅಲ್ವೇ ಮೈನು

ಯಾಕ್ರಪ್ಪ ಹಿಂಗೆ ನೀವು ನಮ್ನ ಮಾತಲ್ಲೆ ಕೊಲ್ತೀರಿ
ಮಾತು ಮಾತಿಗೂ ಸೋಂಬೇರಿ ಅಂತೀರಿ
ಬಿರುದು ಕೊಡುವಿರಿ‌ ರೋಡ್ ರೋಡ್ ಅಲೆಯೊ ಪೋಕಿರಿ
ಹಾಕ್ತೀರ ಲೆಕ್ಕಕ್ಕೆ ಸಿಗದಷ್ಟು ಛೀಮಾರಿ
ಅಪ್ಪಿ ತಪ್ಪಿ ಸಿಗಾಕೊಂಡರೆ ಯಾಮಾರಿ
ಆಯ್ತು ಪರ್ವಾಗಿಲ್ಲ ಬೇಜಾರಾಗ್ಬೇಡಿ ಬಿಡ್ರಿ
ನಾವು ಇದಕ್ಕೆಲ್ಲ ತಲೆಕೆಡಿಸ್ಕೊಳ್ಳೋದೆ ಇಲ್ಲ ರೀ

- ಶ್ರೀಕಾವ್ಯ

04 Jul 2017, 02:08 pm

ಮೋಸದ ಪ್ರೀತಿ.....

ಪ್ರೀತಿಯ ಮನಸಿಗೆ ನಿನ್ನ ಆಗಮನದ

ನಿರೀಕ್ಷೆ......

ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ ನಿಂತ ನನಗೆ

ಕಾದಿತ್ತು ಅಗ್ನಿ ಪರೀಕ್ಷೆ.....

ಪ್ರೀತಿಯ ಪಾತ್ರಧಾರಿ ನೀನು ಆದ್ರೆ ಅದೇ

ಪ್ರೀತಿಯನ್ನು ಯಾಕೆ ಕೊಂದೆ.....

ಪ್ರತಿ ನಿರೀಕ್ಷೆ ಯ ಪ್ರತಿಫಲ ಸುಳ್ಳಾದರೆ

ಮೋಸದ ಪ್ರೀತಿಗೆ ಅಗಮಿಸಿದ್ದೇಕೆ....

ಕಾದು ಕಾದು ಕಣ್ಣೀರ ಹನಿಗಳೆಲ್ಲ ಬತ್ತಿದವು

ಒಣಗಿದ ಪ್ರೀತಿಗೆ ಮಳೆ ಹನಿಯ ನಿರೀಕ್ಷೆ.....

ಒಮ್ಮೆ ಬಂದು ನೋಡು ನಾ ಸಾಯುವ ಮುನ್ನ

ನಿನ್ನ ನೆನಪು ಕಾಡುತಿದೆ ನನ್ನ....

- ಅಂಜಲಿ

04 Jul 2017, 01:46 pm

ಆಟ

ರಾಮಾಯಣದಲ್ಲಿ ಹೆಣ್ಣಿಗಾಗಿ ಹೋರಾಟ
ಮಹಾಭಾರತದಲ್ಲಿ ಮಣ್ಣಿಗಾಗಿ ಕಾದಾಟ
ಕನ್ನಡ ನಾಡಿನಲ್ಲಿ ಕಾವೇರಿಗಾಗಿ ಪರದಾಟ
ವಿಧಾನಸೌಧದಲ್ಲಿ ಕುರ್ಚಿಗಾಗಿ ಚೀರಾಟ

ಚುನಾವಣೆಗೆ ಮಂತ್ರಿಗಳು ಓಟಿಗಾಗಿ ಅಲೆದಾಟ
ಅಧಿಕಾರ ಕೖೆ ಸೇರಿದಾಗ ಬಡ ಜನರ ತುಳಿದಾಟ
ಸಿಗದ ಸರಕಾರಿ ಸವಲತ್ತುಗಳ ಕಳ್ಳಾಟ
ಮುಗಿಯದ ಬದುಕಿಗಾಗಿ ಮುಗ್ಧ ರೈತರ ನರಳಾಟ

ಅಕ್ರಮ ಆಸ್ತಿ ಪಡೆಯುವ ಶಾಸಕರ ಹೆಣಗಾಟ
ಲೋಕಾಯುಕ್ತರ ಬಲೆಗೆ ಬಿದ್ದಾಗ ಒಳಗೊಳಗೆ ಪೇಚಾಟ
ಲಂಚಕ್ಕಾಗಿ ಭ್ರಷ್ಟರ ನಿಯತ್ತು ಮಾರಾಟ
ಕಣ್ತುಂಬಿಕೊಳ್ಳಲೇಬೇಕು ನಮ್ಮ ರಾಜಕಾರಣಿಗಳ ಕೆಸರೆರಚಾಟ

ಹೆಣ್ಣು ಮಕ್ಕಳ ಮೇಲೆ ಪಾಪಿಗಳ ಅಟ್ಟಹಾಸದ ಚೆಲ್ಲಾಟ
ಸರ್ವರಿಗೂ ಕೋಳಿಸಿಯೂ ಕೇಳಿಸದಂತಿರುವ ಶೋಷಿತೆಯರ ಕಿರುಚಾಟ
ಕತ್ತಲಲ್ಲೇ ಕುಣಿದು ಬೆಳಕಿಗೆ ಬಾರದ ನ್ಯಾಯದ ನಲಿದಾಟ
ಸಾಗಲೇಬೇಕು ನಮ್ಮ ಸ್ವತಂತ್ರ ಕಂಡುಕೊಳ್ಳವ ಛಲದಾಟ



-ಜಯಂತಿ

- Jayanthi

04 Jul 2017, 12:30 pm

ಚಿನ್ನದ ಹೂವು

ಚಿನ್ನದ ಹೂವಿಗೆ
ಜೀವವ ತುಂಬಲು
ತಪವನು ಗೈದರೂ
ಜೀವವು ಬಾರದು..!!

ವಲಿಯದ ಹೆಣ್ಣಿನ
ಸನಿಹವ ಬಯಸಿ
ನೀ..........‌
ಹಿಂಬಾಲಿಸಿ ನಡೆದರೂ
ಹಿಂತಿರುಗಿಯೂ
ಅವಳು....
ತಾ ನೋಡಳು......!!

- ಪಿ.ಜಿ.ಜ್ಯೋತಿ

04 Jul 2017, 10:11 am

ಮಡಿ- ಮೈಲಿ ಗೆ

ದೇವನೊಬ್ಬ ನಾಮ ಹಲವು
ಎಂದೋ ಸಾರಿದರು ಹಲವರು
ಈ ದೇವರ ನೈವೇದ್ಯ,ಆ ದೇವರಿಗೆ
ಮೈಲಿಗೆ,ಆ ದೇವರ ನೈವೇದ್ಯ
ಈ ದೇವರಿಗೆ ಮೈಲಿಗೆ
ನೀನಗೆ ಇಲ್ಲವಲ್ಲ ಸಮಾನತೆ!

ನಿನ್ನ ನಾಮದಿ ಹಲವು ವ್ರತಗಳ
ಮಾಡಿಸಿ ಇಷ್ಟಾರ್ಥ ಸಿದ್ದಿ ಪ್ರಾಪ್ತಿ
ಎನ್ನುವ ನಮ್ಮ ಆರವರು,
ತಾವೇಕೆ ಪಡೆಯಲಾರರು
ಉತ್ತಮೋತ್ತಮ ಸ್ಥಾನವನ್ನು
ಪೂಜಾ- ವ್ರತಗಳಿಂದ ನಿನ್ನ ಒಲಿಸಿಕೊಳ್ಳಲು ಸಾಧ್ಯವೇ!

ನಿನ್ನ ಮಕ್ಕಳೇ ನಾವೆಲ್ಲ
ಹರಿವ ರಕ್ತ ಒಂದೇಯಲ್ಲ
ಅವರು ಶ್ರೇಷ್ಠ- ನಾವು ಕೀಳು
ಮನುಜನ ಮನಸ್ಸಿಗಿಂತ
ಮೈಲಿಗೆ ಉಂಟೆ ದೇವ!

ಭಕ್ತಿಯಿಂದ ಪೂಜಿಸುವವರು
ಕೆಲವರು........
ಭಯದಿಂದ ಪೂಜಿಸುವವರು
ಬಹುಜನರು.......
ನೀ ಮುನಿಯುವೆ ಎಂಬ ಭಯದಲಿ!

ನಂಬಬೇಕು ದೇವರ
ಮೂಡರಾಗಬಾರದು
ನಂಬಿ ಆರವರ!

ಪ್ರಯತ್ನ ಇಲ್ಲದೆ ಫಲವಿಲ್ಲ
ಕೈ- ಕಟ್ಟಿ ಕೂತರೆ ಹೊಟ್ಟೆ ತುಂಬದು
ಭಯ ಅಳಿಸಿ- ಭಕ್ತಿ ಉಳಿಸಿ!


ಶಾರಧ

- ಶಕುಂತಲಾ

04 Jul 2017, 09:48 am

ಮಿಂಚು

ಕಪ್ಪು ಕಾರಮಾಡದಲ್ಲಿ ಮಿಂಚ್ಹೋಂದ ಕಂಡೆ ನಾ ಅದೇನೋ ಅದ್ಬುತ ಆ ಮಿಂಚಿನ ಒಳಗೊಂದು ಸಂಚಲನ ಅದುವೇ ನಿನ್ನ ನಗುವಿನ ನರ್ತನ

- Dhnanjaya Dhanu

04 Jul 2017, 01:13 am

ಯಾರಿಗೋ

ಯಾರ ಹೃದಯದ ಹಣತೆ
ಯಾರ ಬದುಕಿಗೆ ಬೆಳಕೋ!!
ಯಾರ ಒಲವಿನ ಸೆಳೆತ
ಯಾರ ಸನಿಹದ ಗುರುತೋ!!

ಯಾರ ಹೆಸರಿನ ಯೋಗ
ಯಾರ ಹೆಸರಿನ ಜೊತೆಗೋ!!
ಯಾರ ಕನಸಿನ ಕುರುಹು
ಯಾರ ನಿದಿರೆಯ ಒಳಗೋ!!

ಯಾರ ಕೊರಳಿನ ರಾಗ
ಯಾರ ಬರಹದ ಸಾಲೋ!!
ಯಾರ ನೆನಪಿನ ಸುಖವು
ಯಾರ ಬದುಕಿಗೆ ವರವೋ!!

- ಪಿ.ಜಿ.ಜ್ಯೋತಿ

03 Jul 2017, 10:31 pm