Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀರೆ ನೀರೆ ಬಾರೆ ಬಾರೆ....

ನೀರೆ ನೀರೆ ಬಾರೆ ಬಾರೆ
ನೀನಿರದ ಈ ಹೃದಯ ನುಚ್ಚುನೂರೆ
ಒಂದು ‌ನಗುವ ತೋರಲು ಬಾರೆ
ನಿನ್ನ ಒಲವಿನ ಸಿಹಿಯನು ತಾರೆ
ಬಾರೆ ಬಾರೆ ನನ್ನೊಲವಿಗೆ ಪ್ರೀತಿಯ ತೋರೆ

ನೀನೆ ನನ್ನ ಪ್ರೇಮಿ ನೀರೆ ನೀರೆ
ನನ್ನೊಲವ ಅಂಗಳಕೆ ನೀನೆ ತಾರೆ
ನೀನಿರದೆ ಕತ್ತಲು ನನ್ನೊಲವ ಅಂಗಳ ಬಾರೆ
ನೀನೆ ತಾರೆ ತಾರೆ ನನ್ನೆದೆಗೆ ಬೆಳದಿಂಗಳ ತಾರೆ

ನೀನಿರದೆ ಕಣ್ಣ ತುಂಬಾ ನೀರ ಧಾರೆ
ಈ ಪ್ರೇಮಿ ಕಣ್ಣ ನೀರ ಒರೆಸಲು ಬಾರೆ
ಬದುಕೆ ಕಾಣದಾಗಿದೆ, ನೀನಿರದೆ ಮನಸೆ
ದಾರಿ ತೋರಿ ಬಂದು ಕೈ ಹಿಡಿದು ನಡೆಸೆ

ನೀ ನನ್ನ ಕೈಯಿಂದ ಜಾರೆ
ನೋವೆ ನನ್ನ ಆವರಿಸಿದೆ ನೀರೆ
ನನ್ನ‌ ಮೌನದ‌ ನೋವಿಗೆ ಮಾತಾಗಿ ಬಾರೆ
ನಾನೆಂದು ನಿನಗೆ ಕಣ್ಣೀರ ತೋರೆ

ಬಂದು ನಿನ್ನ ಪ್ರೀತಿಯ ಸಾರೆ
ನೀರೆ ನೀರೆ ಬಾರೆ ಬಾರೆ
ನಿನ್ನ ಪ್ರೀತಿಯ ತೋರೆ
ಈ ಪ್ರೇಮಿಯ ಉಳಿಸಲು ಬಾರೆ

- ಶ್ರೀಕಾವ್ಯ

07 Jul 2017, 07:23 pm

ಭರವಸೆಯ ಬೆಳಕು

ಕನಸಿನ ಹನಿಯೊಂದು ಕಣ್ಣಿನಿಂದ ಜಾರುವ ಸಮಯ

ಕಾಗದದೋಣಿಯಲ್ಲಿ ಕುಳಿತು ಹೊರಟಿವೆ

ಅಂಬಿಗನಿಲ್ಲದ ಜೀವನದಲ್ಲಿ ನಂಬಿಕೆಯ ಸಾಗರದಲ್ಲಿ

ಭರವಸೆಯ ನೆನಪುಗಳ ಸರಮಾಲೆಯ ಹೊತ್ತು ಹೂರಟಿರುವೆ

ಎಲ್ಲಿಗೆ ಎಂದು ಕೇಳದೆ
ದಯೆ ತೋರು ಭಗವಂತ

ಎ ಜಿ ಶರಣ್

- ಎ ಜಿ ಶರಣ್

07 Jul 2017, 05:40 pm

ತಾಯಿಯ ಆಕ್ರಂದನ

ಹೇಳಿ ಹೋಗಬಾರದಿತ್ತೆ ಕೂಸೆ
ತಾಯಿಯ ಮಮತೆಗಿಂತ
ಪ್ರೀತಿಯ ವ್ಯಾಮೋಹ ಹೆಚ್ಚು ಆಯಿತೇ ?

ನೀ ಬಯಸಿದವಳನ್ನು ನಾ ಮಗಳಾಗಿ ನೋಡಿಕೊಳ್ಳಲಾಗದವಳೇನು
ನನ್ನ ಹೃದಯ ಬಡಿತ ಗಿಂತ
ಪ್ರೀತಿಯ ಮಿಡಿತ ಮಿಗಿಲಾಯಿತೇ ?

ನಿನ್ನ ಅಪ್ಪನ ಆಕ್ರೋಂದನ ನಾ ಹೇಗೆ ಸಮಾಧಾನ ಮಾಡಲಿ ಕೂಸೆ
ಒಡಹುಟ್ಟಿದವರ ಆಸೆಗಳಿಗೆ ತಣ್ಣೀರು ಎರಚಿ ಹೊರಟು
ಹೋಗುವ ಮುನ್ನ ಅರೆಕ್ಷಣ ಯೋಚಿಸಬಾರದಿತ್ತೇ ಕೂಸೆ ?

ಮುಪ್ಪಿನಲ್ಲಿ ನೀನೆ ಆಸರೆಯಾಗುವೆಂದು ಹಂಬಲಿಸಿ
ಕಷ್ಟಗಳ ಮರೆಮಾಚಿ
ಸದಾಕಾಲ ನಿನ್ನ ನಗು ಬಯಸುತ್ತೀದೆ
ನೋವುಗಳಿಂದ ಸವೆದಿರುವ ಮನಕೆ
ಮತ್ತಷ್ಟೂ ನೋವಿನ ಕೊಳ್ಳಿ ಇಟ್ಟು ಹೋಗುವ ಮುನ್ನ ಒಮ್ಮೆ ಯೋಚಿಸಬಾರದಿತ್ತೇ ಕೂಸೆ ?

ಮತ್ತೆ ಬಯಸಿರುವೆ ನನ್ನ ಮಡಿಲಲ್ಲಿ ಹುಟ್ಟಿ ಬಾ ಕೂಸೆ

ಎ ಜಿ ಶರಣ್

- ಎ ಜಿ ಶರಣ್

07 Jul 2017, 05:35 pm

ಮದುವೆ ಆಗದವರ ಬಾಧೆ

ಇನ್ನೂ ಕೂಡಿಬಾರದ ಕಂಕಣಭಾಗ್ಯ
ಕರಿಮಣಿ ಕಟ್ಟುವ ಕನಸ್ಸು ಕನವರಿಸುತ್ತಿದೆ
ಬ್ರಹ್ಮ ಹಣಿದ ಮೂರು ಗಂಟಿಗಾಗಿ
ನಿಧಾನವಾಗಿ ನೆಡೆಯುತ್ತಿದೆ ಬಾಳಿನ ನಂಟು

ಎಲ್ಲಿ ಹೋದರು ಉತ್ತರಸದೆ ಆಗದು ಯವ್ವನದ ಅಂಟು
ಮೌನವಾಗಿ ಸಾಗುತಿದೆ ಕಾಲ

ಸಂಬಂಧಗಳು ಬೆಸೆಯುವ ಮದುವೆಯ ಒಲವಿನ ಕರೆಯೋಲೆಗೆ
ಕಾಯುತ್ತಿರುವೇ ನನ್ನ ನೆಚ್ಚಿನವರಿಗಾಗಿ
ಬೇಗ ಕೂಡಿ ಬರಬಾರದೇ ಆ ಘಳಿಗೆ

ಎ ಜಿ ಶರಣ್

- ಎ ಜಿ ಶರಣ್

07 Jul 2017, 05:32 pm

ಮೌನತುಂಬಿರುವ ಪ್ರಶ್ನೆಗಳು...!!

ಗೆಳತಿ...!!
ನಿರಂತರವಾಗಿ
ಬೀಡು ಬಿಡುತ್ತಿವೆ,
ನನ್ನ ಬರಡು ಹೃದಯದಲ್ಲಿ
ಉತ್ತರವಿಲ್ಲದ ನಿನ್ನ ಎಷ್ಟೋ,
ಮೌನತುಂಬಿರುವ ಪ್ರಶ್ನೆಗಳು...!!

- Kanakamurthi

07 Jul 2017, 01:00 am

ಚೆಂದವನ ತೊಟ

( ಚಂದವನ ತೊಟ )

ಚಂದವನ ತೋಟದಲ್ಲಿ.
ಚೆಂದುಳ್ಳಿ ಚೆಲುವೆ ನೀನೆಲ್ಲಿ. ನಿನ್ನನ್ನು ಬಯಸಿ ಬಂದಿರುವೆ ನಾನಿಲ್ಲಿ ಇ ಚಂದವನ ತೋಟದಲ್ಲಿ. //

ನೀ ಅಡಗಿ ಕುಳಿತಿರುವೆ ಈ ವನದಲ್ಲಿ. ಕತ್ತಲೆಯಿಂದ ಕೂಡಿರುವ ಸಮಯದಲ್ಲಿ.
ಎತ್ತ ನೊಡಿದರೂ ದಾರಿ ಕಾಣದಂತಾಗಿದೆ.
ಸುತ್ತಲೂ ಮಿಂಚುಳ್ಳಿ ಹುಳುಗಳು ಬೆಳಕನ್ನು ಚೆಲ್ಲುತಿವೆ .ಇ ಚಂದವ ತೊಟದಲ್ಲಿ.||

ಅಂಗೈಯಲ್ಲಿ ಮಿಂಚುಳ್ಳಿ ಇಡಿದು ಮಿಂಚಂತೆ ಹೊಳೆಯುವ ನಿನ್ನ ಮೂಗುತಿ ಬೆಳಕನ್ನು ಸ್ಪರ್ಷಿಸಿ.ಅದರ ಹೊಳಪನ್ನು ಹರಿಸಿ.
ಇ ಚಂದವನ ತೋಟದ. ಸುಂದರ ಮೈ ಮಾಟದ. ಸೌಂದರ್ಯದ ಸೊಬಗನ್ನು ಹೊರಚೆಲ್ಲುವುದು.ಚೆಲುವೆ.
ನೀನೆ ನನ್ನ ಚಂದನವನದಲ್ಲಿ ಅರಳಿರುವ ತಾವರೆಯ ಹೂವೆ.


( ಸಂತೋಷ್ // ಜೀತು )

- ಸಂತೋಷ್//ಜೀತು

06 Jul 2017, 09:52 pm

ನಿರಾಕರಿಸದಿರೆ ಗೆಳತಿ

ಕಣ್ಣಲ್ಲಿ ನಿನ್ನಿಟ್ಟು ನನ್ನ ಮಗುವಂತೆ
ಕಾಪಡಲೆಂದು ನಿರ್ಧರಿಸಿದ್ದೆ ನಾನು
ಪ್ರೀತಿಯೆಯ ಗೆಳತಿ............

ತಿಳಿಸಿದ್ದೆ ನನ್ನ ಮನಸು ನಿನ್ನ
ಮೌನಕ್ಕೆ ಮಾತು ಕೊಟ್ಟು ನನ್ನ
ಸ್ವೀಕರಿಸಲು ನಿನ್ನಲ್ಲಿ ಮೊರೆಯಿಟ್ಟಿದ್ದೆ..........

ನಿನ್ನ ತೊರೆದು ಹೋಗುವ ಆಸೆಯಂತೂ ನನಗಿಲ್ಲ ಕನಸಲ್ಲೂ ನಿನ್ನ ಕಣ್ಣಲ್ಲೇ ಕನಸಾಗಿ ಉಳಿಯಲು ನಾನು ಆಸೆ ಪಟ್ಟಿದ್ದೆ ನನ್ನೊಳವೆ ನಿನ್ನೊಳಗೆ...................

ನಿನ್ನ ನಿರಾಕರಣೆ ಕೇಳಿದ ಕಿವಿಗಳಿಂದ
ಅತ್ತು ನನ್ನ ಕಣ್ಣೀರು ನೊಂದಿಹುದು
ಆದರೆ ನೀನಿಲ್ಲವೆಂಬ ಕಟುವಾದ ಸತ್ಯವನ್ನು
ನಂಬದ ನನ್ನ ಹೃದಯ ಇಂದಿಗೂ ನಿನಗಾಗಿ ತಾನಿರುವೆನೆಂದು ಬಡೆದುಕೊಳ್ಳುತ್ತಿರುವುದೇ ಗೆಳತಿ............

ನನ್ನೊಳವಿನ ಸಂಗಾತಿ ಮರೆಯದಿರೆ ನನ್ನನೆಂದು ನಿನ್ನ ಕಾಳಕೆಲಗಿನ ಮಣ್ಣಾಗಿಯಾದರು ನೆನಪಿಟ್ಟುಕೊ ನನ್ನ ಮನಸು ಹಾಸಿದ ಪುಷ್ಪರಾಶಿಯ ಹೆದ್ದಾರಿಯಲ್ಲಿ ನಡೆದು ಕೋಣೆಗಾದರು ನನ್ನ ಸೇರಿ ಮುದ್ದಾದ ಗೆಳತಿ.......

- ಚುಕ್ಕಿ

06 Jul 2017, 08:05 pm

ನಮ್ಮ ಸೈನಿಕರು‌

ನಮ್ಮ ಸೈನಿಕರು‌ ಭಾರತ ಮಾತೆಯ ವೀರರು
ದೇಶದ ಗಡಿಯನ್ನು ಕಾಯುವ ಮಹಾ ಯೋಧರು

ತಂದೆ ತಾಯಿಯ ಮುಖವನ್ನು ನೋಡದೆ
ಮಡದಿಯ ಜೊತೆ ಬಾಳದೆ
ಮಕ್ಕಳೊಂದಿಗೆ ಆಟವಾಡದೆ
ನಮ್ಮನ್ನು ಪರಿಪೋಷಿಸುವರು ತಮ್ಮ ಕಾಳಜಿ ವಹಿಸದೆ.

ರಕ್ತವನ್ನು ಬೆವರಿನಂತೆ ಸುರಿಸುವರು
ಋತುಗಳನ್ನು ಲ್ಕೆಕಿಸದೆ ನಮ್ಮನು ಕಾಯುವರು
ತೊಂದರೆ ಕೊಡುವ ವೈರಿಗಳನ್ನು ಸದೆ ಬಡಿಯುವರು...
ಬಂದೂಕುಗಳನ್ನು ಹಿಡಿದು ನಮ್ಮನು ರಕ್ಷಿಸುವರು.

ಶಾಂತಿಯುತ ದೇಶಕ್ಕೆ ಕಾರಣ ನಮ್ಮ ಯೋಧರು
ನಮ್ಮ ಸೈನಿಕರು‌ ಭಾರತ ಮಾತೆಯ ವೀರರು.

-Aish

- aish

06 Jul 2017, 06:32 pm

ಹೇಳಿ ಬಿಡಲೆ ಒಮ್ಮೆ !!!!

ನನ್ನೊಳಗಿನ ನನ್ನೊಲವೆ
ನನ್ನೆದೆಯೊಳಗಿನ ನನ್ನಕ್ಷರವ
ನನ್ನನುಭವದ ಪ್ರಕಾರ
ನಿನ್ನನಡಿಗೆಯ ಬಗ್ಗೆ
ನನ್ನೆರಡು ಮಾತುಗಳನ್ನ ನಿಂಗ್ಹೇಳಿ ಬಿಡಲೇ!!

ನಿನ್ನ ರೂಪ ಲಾವಣ್ಯಕ್ಕೆ
ನಿನ್ನಂತರಂಗದ ಒಳ್ಳೆತನಕ್ಕೆ
ನಿನ್ನೀ ಪ್ರೀತಿ ವಾತ್ಸಲ್ಯಕ್ಕೆ
ನಿಬ್ಬೆರಗಾಗಿ ನಿಂತಿರುವ ನನಗೆ
ನೀನೊಬ್ಬಳೆ ನಿತ್ಯ ನಿರಾಭರಣ ಸುಂದರಿ!!

ಇಂತಿ ♡ಸ್ನೇಹ ಸಿಂಚನ♡
ನಾಗರಾಜ ಬಿ {9743216235}

- ನಾಗರಾಜ ಬಾಕೆ೯ರ್

06 Jul 2017, 04:32 pm

ಜಾಣ್ಮೆ ....

ಜಾರಿದ ಜಗದಲ್ಲಿ ಜಾಣ್ಮೆಯ ಜಾಗ
ಮುರಿದ ನೊಗದಲ್ಲಿ ಜಾಣ್ಮೆಯ ಉಳುಮೆ
ಹರಿದ ಹರಿವೆಗೆ ಜಾಣ್ಮೆಯ ಹೊಲಿಗೆ
ಕರೆವ ಮನಗಳಿಗೆ ಜಾಣ್ಮೆಯ ಪ್ರೀತಿ .....

- ಈಶ,ಎಂ.ಸಿ.ಹಳ್ಳಿ

06 Jul 2017, 03:01 pm