Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅನನ್ಯ ಬಂಧ

ನಮ್ಮ ದೇಹದ ಮನದ
ಅಂತರ್ಜಾಲ.. ಮನಸ್ಸು
ಪ್ರಮುಖ ಪ್ರಬಲ ಸಂಹವನ
ನಿಸ್ತಂತು ಪ್ರವಹಿಸಲು
ಪ್ರೀತಿ ಪ್ರೇಮದ ಮಾರ್ಗದ
ಮಧ್ಯದ ಅನನ್ಯ ಬಂಧ
ಬಿಗಿಯಾಗಿದ್ದರೆ ಮಾತ್ರ ಸಾಧ್ಯ
ಉತ್ತಮ ಸಂಬಂಧ

- sathyabapuji

08 Jul 2017, 03:31 pm

ಮನದ ರಾಗ

ಮೌನವಾಗಿ ಬಲೆ ಬೀಸದೆ ನುಡಿಸು ನಿನ್ನ ಮನದ ಪ್ರೀತಿಯ ರಾಗ ನವಿರಾಗಿ ಕಣ್ಣು ತೆರೆದೆ ಮೌನ ಮುರಿಯದ ಮರದ ಹಾಗೆ ಒಳಗಿನ ಮಾತು ನಿಲ್ಲಿಸಿ ಹೃದಯ ಕಾತರಿಸಿದೆ ನಿನ್ನ ಬರುವಿಕೆಗಾಗಿ .......................................................... ಬೀಸುವ ತಂಗಾಳಿಯಲ್ಲೂ ನಿನ್ನದೇ ಹೆಜ್ಜೆ ಸದ್ದು

- Jayanthi

08 Jul 2017, 02:13 pm

ನಾ ಕಲಿಸಿದ ಕಲಿಕೆ ಮರಳಿ ನನಗೆ

ನಾ ಕಲಿಸಿದ ಕಲಿಕೆ ಮರಳಿ ನನಗೆ
ಲೋಕದಲ್ಲಿರುವ ವಿಷಯಗಳನ್ನೆಲ್ಲ
ತುಂಬಿಸಿದೆ ಇದರ ತಲೆಗೆ..........

ಬುದ್ದಿಯಿಲ್ಲದ ಬುದ್ಧಿವಂತೆ ಇದು
ನಾವು ಕಲಿಸಿದ್ದು ಎಂದಿಗೂ ಮರಿಯಲ್ಲ
ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ..........

ಶೂನ್ಯದಲ್ಲೇ ಕೋಟಿಕಲಿತಿದೆ ಒಂದರಲ್ಲೇ
ಮುಕ್ಕೋಟಿ ಕಲಿಸುತ್ತಿದೆ, ಕುಂತಲ್ಲೇ ಪ್ರಪಂಚವನ್ನು ಕ್ಷಣದಲ್ಲಿ ತೋರುತ್ತದೆ,ವಿದ್ಯುತ್ ಉಪಹಾರ ಪಡೆದು ಸಕಲವನ್ನು ಹೇಳಿಕೊಡಲು ಸಿದ್ಧವಾಗುತ್ತದೆ..................

ಅವನಿಯಲ್ಲೇ ಅಗ್ರ ಸ್ಥಾನ ಪಡೆದಿದೆ ತಂತ್ರಜ್ಞಾನವನ್ನು ತನ್ನಿಂದ ತಿಳಿಸಿ ಕಣ್ಮುಂದೆ ತೋರುತ್ತಿದೆ..............

ಜ್ಞಾನದ ಗಣಗಳನ್ನು ಒಳಗೊಂಡ ಗಣಕಯಂತ್ರವಿದು ಜಾಣ್ಮೆಯಿಂದ ಕೆಲಸಮಾಡುವ ಜಾದೂಗಾರನಿದು.........

- ಚುಕ್ಕಿ

08 Jul 2017, 01:45 pm

ಇರುವುದೆಲ್ಲವ ಬಿಟ್ಟು.....

ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ
ಮನ ತುಡಿವುದೆಯಂತೆ ಜೀವನ

ಇರುವುದೆಲ್ಲವ ನೆನೆದು ಬಾರದನೆಂಬಿದನು ಬಿಡು
ಹರುಷಕ್ಕಿದೆ ದಾರಿ ಎಂದಿತು ಡಿ.ವಿ.ಜಿ ಅವರ ಕವನ

ಅತ್ತ ಕಡೆ ಇಲ್ಲ,ಇತ್ತ ಕಡೆಯೂ ಬರುತ್ತಿಲ್ಲ‌ ಕೇಳಿದ‌ ಮನ
ಯಾರು ಹೇಳುವವರಿಲ್ಲ ಎತ್ತ ಕಡೆಗೆ ಕೊಡಬೇಕು ಗಮನ

ಇರುವುದೆಲ್ಲವ‌ ಬಿಟ್ಟು, ಇರದುದರೆಡೆಗೆ ಹುಡುಕಾಟ
ಸಿಗದಿದ್ದಾಗ ನೋವಿನೊಳಗೆ ಮನಸಿನ‌ ತೊಳಲಾಟ

ಏನು ಇಲ್ಲದಿದ್ದರೂ ಕೆಲವೊಮ್ಮೆ ಹರುಷದ ರಸದೂಟ
ಒಮ್ಮೆ ಬೇಕಾದ್ದೆಲ್ಲ ಸಿಕ್ಕರೂ ಏತಕೆ ಸಿಕ್ಕಿತ್ತೆಂಬಂತೆ ತಾಕಲಾಟ

ಹೇಳುವರು ಇಲ್ಲದ್ದ ಪಡೆಯಲು ಇರಬೇಕು ಛಲ
ಹುಡುಕದೆ ಕುಳಿತರೆ ನೀನು ಬದುಕಲಿ‌ ವಿಫಲ

ಪಡೆದೆ ತೀರಬೇಕೆಂದು ಹೊರಟರೆ ಹರಸಿ ಸಫಲ ಛೇಡಿಸುವರು ಬಯಸಿ ಹೊರಟಿರುವರು ಅತಿಆಸೆಯ ಫಲ

ತಿಳಿಯುವುದೇಗೆ ಯಾವುದು ಒಪ್ಪು ,ಯಾವುದು ತಪ್ಪು
ಸರಿ ತಪ್ಪುಗಳ ಜಂಜಾಟದಲಿ ಆಗಿಬಿಡುವೆವು ಬೆಪ್ಪು

ಬದುಕಲಾಗುವುದೆ ಜಗದಗಲ‌ದ ಅಭಿಪ್ರಾಯವ ಒಪ್ಪಿ
ಬದುಕುವುದು ಹೇಗೆ ಇರುವುದ ಅಥವ ಇಲ್ಲದಿರುವುದ ಅಪ್ಪಿ

- ಶ್ರೀಕಾವ್ಯ

08 Jul 2017, 12:35 pm

ನೀನು ಮತ್ತು ನಾವು

ಕಟ್ಟಿರುವರು ನಿನಗೊಂದು
ಆಲಯ.....
ಪ್ರತಿನಿತ್ಯ ಪಡೆಯಲೆಂದು
ಆದಾಯ....

ಹೊತ್ತು ಬರುವರು
ನೂರಾರು ಆಶಯ
ಕುತ್ತು ತರದಿರು
ನಮಗಿರಲಿ ನಿ‌ನ್ನ ಅಭಯ!

ಸೃಷ್ಟಿ ಕರ್ತನು ನೀನೆಂದು
ನಂಬಿರುವೆವು ನಾವು
ನಿನ್ನನ್ನು ಸೃಷ್ಟಿಸುವರು ನಾವಿಂದು
ಮುಗ್ದ ಮಂದಿ ನಾವು!

ಜೀವನ ನಡೆಸಲೆಂದಿಹರು
ಊರಿಗೊಬ್ಬ ಜ್ಯೋತಿಷಿ
ಜನರ ಮೂರ್ಖರಾಗಿಸುತಿಹರು
ಪೂರ್ವಾಪರಗಳ ದೂಷಿಸಿ!

ಆರವರೆ ದೇವರೆಂದು
ಪೂಜಿಸುತಿಹರು ಭಾವಿಸಿ
ನಮ್ಮಲೂಟಿ ಮಾಡುತಿಹರು
ಮಂತ್ರಮುಗ್ದರಾಗಿಸಿ!

ಪ್ರತಿ ನೋವಿಗೊಂದು
ವ್ರತವ ಸೂಚಿಸಿ
ಗಾಳಿಯಲ್ಲಿ ಗೋಪುರವೊಂದು
ನಿರ್ಮಿಸುವರು ಅರ್ಥವಾಗದ
ಮಂತ್ರಗಳ ಮಳೆಯ ಸುರಿಸಿ!

ಕಾಣಿಕೆ ಇತ್ತವರಿಗೆ
ಹರಸುವರು
ಕಾಣಿಕೆ ನೀಡದವರಿಗೆ
ಆರತಿಯನ್ನು ನೀಡರು!

ಕಾಣಬೇಕು ನಿನ್ನ
ಮಾಡುವ ಕಾಯಕದಿ
ಜಪ- ತಪದಿ ನಿನ್ನ
ಕಾಣಲಾಗದು ಈ ಜನುಮದಿ!


ಶಾರಧ

- ಶಕುಂತಲಾ

08 Jul 2017, 11:35 am

ಉಚಿತ ಪ್ರವೇಶ

ನೀ ಬಂದೆ ನನ್ನ ಕನಸಲ್ಲಿ
ನನ್ನ ಅನುಮತಿ ಇಲ್ಲದೆ
ತುಂಬಿದೆ ಬೆಳದಿಂಗಳು ಮನದಲ್ಲಿ
ಚಂದ್ರನ ಅವನತಿ ಇಲ್ಲದೆ
ಆ ಬೆಳದಿಂಗಳಲ್ಲಿ ಮಿಂದು ಬಂದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ


ಬಣ್ಣಗಳಿಗೆ ಕೊನೆಯಿಲ್ಲದ ಲೋಕ
ಬಯಕೆಗಳು ಕೈಗೂಡುವ ಲೋಕ
ಕನಸುಗಳು ನನಸಾಗುವ ಲೋಕ
ಎಲ್ಲರಿಗೂ ಬಲು ಇಷ್ಟವಾದ ಆ ಕನಸಿನ ಲೋಕ
ನನ್ನ ಕನಸಿಗೆ ಬಣ್ಣ ತುಂಬುವುದಾದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ


ಬಾಡುವುದಿಲ್ಲ ಹೂಗಳು ಅಲ್ಲಿ
ಚಿಟ್ಟೆಗಳ ಓಟ ನಿಲ್ಲದು ಅಲ್ಲಿ
ಸೂರ್ಯನ ಶಾಖ ಮುದ್ರಿಸದು ಅಲ್ಲಿ
ಸಂತೆ-ಗದ್ದಲವಿಲ್ಲ
ಭ್ರಮೆ-ವಾಸ್ತವದ ಅರಿವಿಲ್ಲ
ಈ ಕನಸನ್ನು ನಿಜವೆಂದು ನಂಬಿ ಬಂದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ


ಒಲವು ಕುಣಿದು ಕುಪ್ಪಳಿಸುವ ಪ್ರೇಮಲೋಕ
ಸಾವು ಸವರಿದರೂ ತಿಳಿಯದ ಮಾಯಾಲೋಕ
ಕಾದಿರುವೆ ನಲ್ಲ ನೂರು ಮಾತನ್ನಾಡಲು
ಮರೆತಿರುವೆ ಎಲ್ಲಾ ನೀ ನನ್ನ ನಗಿಸಲು
ಕನಸುಗಳು ಮತ್ತೆ ಮರುಕಳಿಸುವ ಬಯಕೆಗಳು
ಸಾವಿರ ಮುತ್ತಿಟ್ಟು ನಂಬಿಕೆಯ ನೆರಳಾಗಿ ಕೂನೆವರೆಗೂ ನನ್ನೊಡನೆ ಇರುವುದಾದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ

- Jayanthi

08 Jul 2017, 09:08 am

ಆಷಾಢ !

ನಮ್ಮ ಕಾಲದಾಗ
ಬೆಳಿಗ್ಗೆ ಸಂಜೆ ಎನ್ನದೆ ಒಂದೇ
ಸಮನೆ ತುಂತುರು
ಗಡಗಡ ನಡಗುವ ದೇಹ
ಗಾಳಿ ಮಳೆ ನಡುವೆ ಗುದ್ದಾಟ

ಆದರೀಗ ಕಾಲವೇ ಬದಲಾಗಿದೆ
ಬಿಸಿಲ ಮಳೆಯ ಚಳಿಯ ಕಾಲ
ಕಂಡು ಹಿಡಿಯಲು ಸಾಧ್ಯವಿಲ್ಲ
ಮಾರ್ಪಟ್ಟಿದೆ ಪ್ರಕೃತಿ ನಿರಂತರ
ಮಾನವನ ಅವಾಂತರಗಳಿಗೆ
ಇದು ಬರೀ ಕಲಿಗಾಲ

- sathyabapuji

08 Jul 2017, 12:42 am

ಅನಿವಾರ್ಯ

ಪ್ರೀತಿ ತೊರೆದು ಒಲವು ಬಚ್ಚಿಡಲು ಅನಿವಾರ್ಯ
ಜೋತೆಗಿದ್ದು ದೂರ ‌ಬಾಳುವುದು‌ ಅನಿವಾರ್ಯ
ಮಾತು ಬಂದರು ಸನ್ನೆ ಮಾಡುವ ಅನಿವಾರ್ಯ
ಕಷ್ಟವಾದರು ಸಹಿಸಿಕೊಳ್ಳಬೇಕಾದ ಅನಿವಾರ್ಯ..

ದುಃಖವಿದ್ದರು ಸಮಾಜದೆದುರು ನಗುವ ಅನಿವಾರ್ಯ
ಇಷ್ಟವಿದ್ದರು ಕಳೆದುಕೊಳ್ಳುವ ಅನಿವಾರ್ಯ
ಪ್ರಾಮಾಣಿಕವಾಗಿರ ಬೇಕೆಂದರು ಸುಳ್ಳು ಹೇಳುವ
ಅನಿವಾರ್ಯ
ಅವಶ್ಯವಾಗಿರುವುದನ್ನು ಗಳಿಸಲು ಸಂಬಂಧಗಳನ್ನು ನಾಶಮಾಡಿಕೊಳ್ಳುವ ಅನಿವಾರ್ಯ..
- aish

- aish

07 Jul 2017, 10:23 pm

ಶುಭಸಂಜೆ

ಶುಭಸಂಜೆ

ಮೊಡದ ಮರೆಯಲ್ಲಿ.ಸಿಡಿಲೊಡೆಯುತಿದೆ ಅದರ ನಡಿವಿನಲಿ.
ಮಿಂಚೊಂದು ಹಾದು ಹೊಗುತಿದೆ ಈ ಕ್ಷಣದಲ್ಲಿ.
ತುಂತುರು ಮಳೆ ಹನಿಯು ಮೈ ಸೊಕುತಿದೆ ಇ ಧರೆಯಲ್ಲಿ.
ನಾ ನಡೆಯುತಿರುವೆ ಅದರ ನಡುವಿನಲಿ .
ಇ ಮುಸ್ಸಂಜೆ ಹೊತ್ತಿನಲಿ.

ನನ್ನ ಗೆಳೆಯರಿಗೆ ಹೆಳುತಿರುವೆ ನಾ ಇ ಕ್ಷಣಲ್ಲಿ.
ಜಿನುಗುತಿರುವ ಮಳೆಯಲ್ಲಿ .ಅವರನ್ನು ನೆನೆಯುತಿರುವೆ ನನ್ನ ಮನದಲ್ಲಿ.
ಶುಭಕೊರುತಿರುವೆ ಇ ಸಂಜೆಯಲಿ
ಶುಭಸಂಜೆ ಗೆಳೆಯರೆ

( ಜೀತು )

- ಸಂತೋಷ್//ಜೀತು

07 Jul 2017, 10:04 pm

ಭಯವಿನ್ನು ಹೋಗಿಲ್ಲ...........

ಭಯವಿನ್ನು ಹೋಗಿಲ್ಲ ಈ ಜನರ
ಕಟುವಾದ ಮಾತುಗಳನ್ನು ಕೇಳಿ...........

ಭಯವಿನ್ನು ಹೋಗಿಲ್ಲ ಸುಡುಗಾಡಲ್ಲಿ ಸುಟ್ಟ ದೇಹಗನ್ನು ಕಿತ್ತು ತಿನ್ನುವ ನರ ರೂಪ ರಾಕ್ಷಸರನ್ನು ನೋಡಿ...................

ಭಯವಿನ್ನು ಹೋಗಿಲ್ಲ ನಂಬಿಕೆಯ ನೆಪದಲ್ಲಿ ನನ್ನ ನೂರು ನೋವುಗಳಿಗೆ ಗುರಿಮಾಡಿದ ಜನರೆಂಬ ಜಾನುವಾರುಗಳನ್ನು ನೋಡಿ..........

ಭಯವಿನ್ನು ಹೋಗಿಲ್ಲ ಕತ್ತಲಲ್ಲಿ ಕಾಣುವ ಬಾವಲಿಯನ್ನು ನೋಡಿಯಲ್ಲ ಜನರ ಮಧ್ಯ ನಡೆಯುವ ಮುಖವಾಡವೋತ್ತ ನರಿಗಳನ್ನು ನೋಡಿ................

ಭಯವಿನ್ನು ಹೋಗಿಲ್ಲ.............

- ಚುಕ್ಕಿ

07 Jul 2017, 07:29 pm