Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗದಾಯುದ್ದ

ಶರ ಷಟ್ಪದಿಯಲ್ಲಿ

ಗದಾಯುದ್ಧ ಸ್ವ ಪ್ರಯತ್ನದ ಒಂದು ಯತ್ನ

ಗಡಗಡ ನಡುಗಿತು
ಗುಡುಗುವ ಕಲಿಗಳ
ಹೊಡೆತಕೆ ಧರಣಿಯು ಬಿರುಕಾಗಿ/
ಗಡಸಿನ ದನಿಯಲಿ
ಗುಡುಗನು ಮೀರಿಸಿ
ಸಿಡಿಲಿನ ಹೊಡೆತವು ಬಿರುಸಾಗಿ // /

ಚೆಲ್ಲಿದೆ ಬೆವರಂ
ಯೆಲ್ಲೆಡೆ ಕೇಶವು
ಸಲ್ಲದ ಬಿರುನುಡಿಯೆದೆಸೀಳಿ/
ಮಲ್ಲರು ಬಲ್ಲರು
ಕಲ್ಲಿನಯೆದೆಯೊಳ್
ಮಣಿಸಲು ಹೊಡೆತದಿಯೆದುರಾಳಿ /

ಬಿರಿಯುವ ಭೂಮಿಯ /
ಲುರಿಯುವ ನೇಸರ/
ತೆರದೊಳ್ ಹೊಡೆತದ ಸಮಬಲರು/
ಸರಿಸಮ ಕಾದುತ
ಸರಿಯುತಲೆಗರುತ
ವರಸೆಯಲಿಕ್ಕುತ ಭುಜಬಲರು/

ಪುಟಿದಿಹ ಮೊನಚಿನ
ಹಠದಲಿ ನೋಟವು
ಪಟಪಟ ಹೊಡೆತವ ಹಾಕುತಲಿ/
ಕಟಕಟ ಕಡಿದುಂ /
ಭಟರಾ ಹಲ್ಗಳು
ಸೆಟೆದುಂ ರೋಮಗಳೇಳುತ್ತ/

ಚಕಮಕಿ ಚಳಕವು
ತಕತಕ ಕುದಿತದಿ
ಯಕಟಕಟಾಹರಿ ಕಾಯುತಂ//
ಲಕಲಕ ಹೊಳೆಯುವ
ತಕಥೈ ಗದೆಯೊಳ್
ಚಕಚಕ ಹೊಡೆತದಿ ಹಾಯುತಂ //

ಗಧೆಗಳ ತಿರುಗಿಸಿ
ವಧೆಗಳ ಧಣಿಗಳು
ಸದೆಬಡಿಯುತ್ತಲಿ ಪಟ್ಟುಗಳು//
ಮದಿರೆಯ ಕುಡಿದಿಹ
ಮದಿಸಿದ ಗಜಗಳ
ವಿಧವಿಧ ತಾಡನ ಪೆಟ್ಟುಗಳು //

ಪಟ್ಟಿನಪೆಟ್ಟುಗ /
ಳಿಟ್ಟಿರುಸಿಟ್ಟಿನ /
ಗಟ್ಟಿಯ ತೋಳುಗಳುಕ್ಕಿನೊಲು//
ಜಟ್ಟಿಗಳಲ್ಲಿವೆ/
ಮಟ್ಟವಹಾಕುವ
ತೊಟ್ಟಿಹಬಟ್ಟೆಯು ತೊಪ್ಪೆಯೊಲು///

ಪೆಟ್ಟುಗಳಾಟವ
ಕೆಟ್ಟನು ನೋಡಿಂ
ಬಿಟ್ಟೋಡಿದನವ ರವಿಮನೆಗೆ/
ಗುಟ್ಟನೆಯರಿಯದೆ
ಪೆಟ್ಟಿಗೆ ಸೋತನು
ದಟ್ಟನೆ ಹೊಡೆತವು ಭೀಮನಿಗೆ/

ದಿಗ್ಗಜರಾಟಕೆ
ಸಗ್ಗದ ದೇವರು
ನುಗ್ಗುತ ಬಂದರು ನೋಡಿದರು/
ಕುಗ್ಗದೆ ಬಡಿದುಂ
ಬಗ್ಗುಬಡಿಯುವರ
ಜಗ್ಗದೆ ನೋಡಿದ ಪುರಜನರು/

ಕಿಡಿಗಳು ಚಿಮ್ಮಿವೆ
ನುಡಿಗಳುವುದುರಿವೆ
ಗಡಿಯಿಂದಾಚೆಗೆ ಮಿಂಚಾಗಿ/
ಸಿಡಿಲಾಗಿಂ ಸುರಿ
ಜಡಿಮಳೆ ಪಟಪಟ
ಗುಡುಗುವ ಗಧೆಗಳು ಹೊಂಚಾಗಿ /

ಹೊಡೆತದ ಸದ್ದಿಗೆ
ಗಡಿಯಾ ವನಚರ
ಗಡಿಬಿಡಿ ಬೆರಗೊಳ್ ನಿಲ್ಲುತಲಿ/
ಪುಡಿಪುಡಿ ಮರಗಳು
ತಡೆಯಿರದಂತಿರೆ
ಕಡೆಗೀ ಶಾಮನು ಸಂಚಿನೊಳು /

ಶಕ್ತಿಯತೋರುವ
ಯುಕ್ತಿಯಲಿಕ್ಕಲು
ಮುಕ್ತಿಯಧಾಯಕ ಕಪಟನಟ/
ಭಕ್ತಿಗವೊಲಿದಿಹ
ಶಕ್ತಿಯಪಡಿಸಲ್
ರಕ್ತವವುಕ್ಕಿಸಿ ವೈರಿತಟ/

ಅಂಕಕೆ ಪರದೆಯು
ಶಂಕೆಯುಯೇತಕೆ
ಬಂಕದಿ ಬಿದ್ದಿಹ ಕೌರವನು//
ಅಂಕವ ಮುರಿದನು /
ಲಂಕಿಣಿ ಮೋಸದಿ /
ಕಿಂಕರ ಯಮನಿವ ಗೌರವನು //

ಮೋಸಕೆ ಮೋಸವು
ಸಾಸದ ವಿಜಯವು
ಭಾಸವು ತಂತ್ರವು ಯುದ್ಧದೊಳು //
ಹಾಸವು ವದನದಿ
ದಾಸನ ರಕ್ಷಿಸಿ
ಘಾಸಿಯು ವೈರಿಗೆ ಸೋಲಿನೊಳು /

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ

- shivaprasad aradhya

09 Apr 2026, 06:26 am

ನವ್ಯ/ ಪ್ರಾಚೀನ

ನವ್ಯ ಕಾವ್ಯ / ಛಂದೋಬದ್ಧ ಕಾವ್ಯ

ಎರಡಕ್ಕೂ ತಪಸ್ಸು ಮುಖ್ಯ
ಒಂದು ಒಗಟಾಗಿ ಕಾಡುತ್ತದೆ ಕೆಲವೊಮ್ಮೆ ದಿಡೀರ್ ಬೀಳುವ ಮಳೆಯಂತೆ
ರೂಪಕ ಪ್ರತಿಮೆಗಳ ಒಳಗುಟ್ಟು
ಕೆಲವೊಮ್ಮೆ ಸಾಮಾನ್ಯರಿಗೆ ನಿಲುಕದ ಗುಪ್ತ

ಆದರೂ ಹಲವರ ಸರಳ ನಿರರ್ಗಳ ಮುಕ್ತ
ಮಳೆ ಕೊಚ್ಚುತೆಲ್ಲಾ ಕೊಳೆ
ಹಲವರ ಮಹಾಪೂರ
ಕೆಲವರ ತುಂತುರು ಬೆರಳೆಣಿಕೆಯ ಜೇನ ಹುಟ್ಟು ಗಳು ಸುರಿಸುವ ಹನಿಗಳು ಛಂದ ಮೀರಿದ ಚೆಂದ

ಶಾಸ್ತ್ರೀಯ ಕಲಿಕೆ ಗಮಾರ
ಅಕ್ಷರ ಕಲಿತಂತೆ
ತಾಳಗತಿಯ ಸರಿಗಮ
ಸ್ವರವೊಂದು ಸುಸ್ವರ
ಹಿರಿಯ ಕವಿಗಳ ತಪಸ್ಸು
ಪಡ್ಡೆ ಕವಿಗಳ ಕಡೆನೋಟ
ಕುಮಾರಿಯರ ಕುಡಿನೋಟ

ನವ್ಯವು ಛಂದಸ್ಸು ಜಗಳ ವಾಡದೇ ಪರಸ್ಪರ ನಮಸ್ಕಾರ. ವಿಭಿನ್ನ ಸಂಸ್ಕಾರ
ಪ್ರಕಾರ

ಶಿವಪ್ರಸಾದ

- shivaprasad aradhya

08 Apr 2026, 06:29 am

ಸ್ನೇಹ

ಸ್ನೇಹ ಒಂದು ಸುಂದರ ಕವನ
ಬರೆದರು ಮುಗಿಯದ ಮಂಥನ
ಮರೆತರು ಮರೆಯಲಾಗದ ಸ್ಪಂದನ
ಬಿಟ್ಟರು ಬಿಡಲಾಗದ ಬಂಧನ
ಅದುವೇ ಗೆಳೆತನ ?

- Gopi Krishna

05 Apr 2026, 01:58 am

?️ ಕರುನಾಡಿನ ಕಾಮಧೇನು ?️

?️ ಕರುನಾಡಿನ ಕಾಮಧೇನು ?️


ಕರುನಾಡಿನ ಜನಕೆಲ್ಲ ಕಾಮಧೇನು ನೀವೇ

ಕಲ್ಪತರು ನಾಡಿನಲ್ಲಿ ನೆಲೆಸಿರುವ ಶ್ರೀ ಗುರುವೇ

ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೧||


ನಡೆದಾಡುವ ದೇವರೇನಿಸಿ ಧರೆಯಲ್ಲಿ ನಡೆದಾಡಿದ

ಧರೆಯ ಮೇಲೆ ಧರ್ಮಜ್ಯೋತಿ ಬೆಳಗಿಸಿದ ದೇವ

ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೨||


ದಾಸೋಹದ ಸಿರಿಯಾದೆ ದಾಸೋಹಂ ಎಂದು ಹೇಳಿ

ಹಸಿದ ಒಡಲಿಗೆ ಅನ್ನವಿಟ್ಟ ಮಹಾಶಿವಯೋಗಿ ನೀ

ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೩||


ಕುಲಸೀಮೆ ಜಾತಿ ಎನಿಸದೆ ಸಮಾನತೆ ನೀ ತೋರಿದೆ

ಸಹಬಾಳ್ವೆ ತತ್ವಬೋಧಿಸಿ ಸಮಾನತೆಯ ಹರಿಕಾರನಾದೆ

ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೪||


ಬಸವಪಥದಿ ಸಾಗಿನಡೆದು ಬಸವತತ್ವ ಜಗಕೆ ಸಾರಿದೆ

ಅಭಿನವ ಬಸವಣ್ಣ ಬಿರುದಾಂಕಿತ ಶ್ರೀ ಗುರುವೇ

ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೫||


ವಿದ್ಯೆಯನ್ನು ಹರಸಿಬರುವ ವಿದ್ಯಾರ್ಥಿಸಮೂಹಕ್ಕೆ

ಜ್ಞಾನದಾಹವನ್ನು ಇಂಗಿಸಿದ ಜ್ಞಾನಗಂಗೆ ನೀವು ಗುರುವೇ

ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೬||

?️ಎಸ್.ಕೆ.ಜಂಬಗಿ

- SRI SHYLA JAMBAGI

29 Mar 2026, 02:40 am

"ಅನುಭವದ ಅಕ್ಷರಗಳು"

"ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳು
ಜೀವನಕ್ಕೆ ಅರ್ಥವನ್ನು ಕೊಟ್ಟರೆ..
ಜೀವನ ಹೇಳಿಕೊಟ್ಟ ಪಾಠಗಳು
ಜೀವನದಲ್ಲಿ ಸಾಕಷ್ಟು ಅನುಭವಗಳನ್ನು
ಕೊಟ್ಟಿವೆ ..
ಅರ್ಥವು ಜೀವನದ ರೀತಿ ಬದಲಿಸಿದರೆ
ಅನುಭವವು ಇಡೀ ಜೀವನವನ್ನೇ
ಬದಲಿಸಿದೆ...
ಶಾಲೆಯಲ್ಲಿ ಏನನ್ನು ಕಲಿತ್ತಿಲ್ಲ
ಆದರೆ ಜೀವನ ಎಲ್ಲಾವನು ಕಲಿಸುತ್ತಿದೆ"...
- ಎ.ಆರ್.ರಾಹುಲ್..

- ?.?.?????.

24 Mar 2026, 10:43 pm

"ಭಾವನೆಗಳ ಬಂಧನ"


"ಭಾವನೆಗಳು ನಮ್ಮನು ಬೆಳೆಯಲು
ಅಡ್ಡಿ ಪಡಿಸಿದರೆ..
ಬುದ್ಧಿಶಕ್ತಿಯು ನಮ್ಮನು ಬೆಳೆಯಲು
ಭರವಸೆ ನೀಡುತ್ತವೆ..
ಅದಕ್ಕಾಗಿ ನಾವು ಎಂತಹ ಕಷ್ಟದ ಸಮಯದಲ್ಲಿ
ಬುದ್ಧಿಶಕ್ತಿಯಾನೇ ಉಪಯೋಗಿಸಬೇಕ್ಕೆ ಹೊರತ್ತು ಭಾವನೆಗಳನಲ್ಲ"..

- ಎ.ಆರ್.ರಾಹುಲ್.

- ?.?.?????.

24 Mar 2026, 09:09 pm

?ಶ್ರೀ ಕಾಳಿಕಾ ದೇವಿಯ ಕೃಪೆ ?

ದಿನಾಂಕ: 23.03.2026

. ಕೋಠಾ ಗ್ರಾಮದಲ್ಲಿ ನೆಲಸಿದಂತ ಶ್ರೀ ಜಗನ್ಮಾತೆ ಕಾಳಿಕಾದೇವಿಯ ಪೂಜೆ ಕಾರ್ಯಕ್ರಮ ನೆರವೇರಿದ್ದು ಹಾಗೆಯೇ ನಿನ್ನೆ ದಿನದಂದು ವಿಜೃಂಬಣೆಯಿಂದ ಭಜನಾ ಕಾರ್ಯಕ್ರಮವು ಯಶಸ್ಸು ಆಗಿದೆ ಹಾಗೆಯೇ ಸರಿಯಾಗಿ ಬೆಳ್ಳಿಗ್ಗೆ (11)ಹನ್ನೊಂದು ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಪ್ರಾರಂಭ ಆಗಲಿದೆ ಆದ ಕಾರಣ ಕೋಠಾ ಗ್ರಾಮದ ಸಕಲ ಸದ್ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ

. ?ಧನ್ಯವಾದಗಳು?

- Kalappa Kali

23 Mar 2026, 10:53 am

"ನೆಮ್ಮದಿಯ ಹುಡುಕಾಟ"


"ಜೀವನದ ಅದೆಷ್ಟೋ ಜಂಜಾಟದಲ್ಲಿ
ಒಂದಿಷ್ಟು ನೆಮ್ಮದಿಯ ಪಯಣ
ಪಯಣದ ದೂರ ಹೆಚ್ಚಾದಂತೆ ಅನುಭವದ
ಕ್ಷಣಗಳು ಹೆಚ್ಚಾದವು.
ಅನುಭವದ ದಿನಗಳು...
ಅರ್ಥವಿಲ್ಲದ ನಿರ್ದಿಷ್ಟ ಜೀವನ...
ಈ ಪಯಣದಲ್ಲಿ ಅಲಲ್ಲಿ ಒಂದಿಷ್ಟು
ಪ್ರೀತಿ, ಪ್ರೇಮ, ಇವುಗಳ ಹೋರಾಟದಲ್ಲಿ
ನೆಮ್ಮದಿಯ ಹುಡುಕಾಟ..
ನಂಬಿದವಳು ಕೈ ಬಿಟ್ಟಾಗ ಅರಿವಾಯಿತು..
ಇದೆಲ್ಲ ಯೌವನದ ಒಂದಿಷ್ಟು ಹುಡುಗಾಟ"...

- ಎ.ಆರ್.ರಾಹುಲ್...

- ?.?.?????.

22 Mar 2026, 06:28 pm

ಚಿಕ್ಕಪ್ಪ

ಪ್ರೀತಿಯ ಚಿಕ್ಕಪ್ಪ
ಏನು ಬರೆಯಲಿ ಎಂದು ತೋಚುತ್ತಿಲ್ಲ
ಪ್ರತಿ ಬಾರಿ ನೀವು ದಾರಿಯಲ್ಲಿ ಸಿಕ್ಕಾಗ ನಗು‌ ಮೊಗದಿಂದ ಮಾತನಾಡುವ ನೀವು ಬಾರಿ ಯಾಕೆ ನಗುವುದನ್ನ ಮರೆತು ಬಿಟ್ಟಿರಿ!!
ನೀವು ಪ್ರತಿ ಬಾರಿ ನನ್ನನ್ನು ನಿಮ್ಮ ಮಗಳೆಂದು ಕರೆಯುವಾಗ ಸಂತೋಷವಾಗುತ್ತಿತ್ತು..
ನಮ್ಮ ಕಷ್ಟಗಳಿಗೆ ಹೆಗಲು ನೀಡಿದ್ದೀರಿ, ಸಂತೋಷದ ಕ್ಷಣಗಳಲ್ಲಿ ಜೊತೆಯಾಗಿದ್ದೀರಿ..
ಇಂದು ನೀವು ನಮ್ಮೊಂದಿಗೆ ಜೀವಂತವಾಗಿ ಇಲ್ಲದೇ ಇರಬಹುದು ಆದರೆ ನಿಮ್ಮ ನೆನಪುಗಳು ಸದಾ ನಮ್ಮೆಲ್ಲರ ಜೊತೆ ಶಾಶ್ವತವಾಗಿರುತ್ತದೆ...
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ.. !!

Miss you ಚಿಕ್ಕಪ್ಪ

- ನಮಿತ ಗಟ್ಟಿ

21 Mar 2026, 07:05 pm

ಹೇಗೆ ವರ್ಣಿಸಲಿ ನಿನ್ನ

ಸ್ವರಗಳಲ್ಲಿ ವರ್ಣಿಸಲಾಗದ ಸೌಂದರ್ಯ ನಿನ್ನದು..
ವ್ಯಂಜನಗಳಲ್ಲಿ ಅಳೆಯಲಾಗದ
ವ್ಯಕ್ತಿತ್ವ ನಿನ್ನದು..
ಪದಗಳಲ್ಲಿ ಪೋಣಿಸಲಾಗದ
ಪ್ರೀತಿ ನಿನ್ನದು..
ನಿನ್ನ ಆ ವರ್ತನೆಯ ಕಂಡು
ವರ್ಣಿಸಿದೆ ನಿನ್ನನು ಹೀಗೆ
ನಿ ಬಯಸಿದು ನನ್ನಿಂದ, ಅಂ..ಆಃ..
ಎಂಬ ಎರಡು ಯೋಗವಾಹಗಲೆಂದು..

- ?.?.?????.

20 Mar 2026, 03:43 pm