Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏಕಾಂಗಿ

ಮೌನವಾಗಿದೆ ಮನವಿಂದು
ಆತ್ಮೀಯತೆ ಹೆಸರಿನಲಿ ವಂಚಿಸಿದೆ ಸ್ನೇಹಿತರ ಗುಂಪೊಂದು
ಮಾತುಗಳೇ ಹಾಗೇ ಹಿಂದೊಂದು-ಮುಂದೊಂದು
ನಂಬಿ ಕೆಟ್ಟಾಗಿದೆ ನಾನಿಂದು
ಇನ್ನಾದರೂ ಇರಬೇಕು ನಾ ಒಂಟಿಯಾಗಿ
ಮನಸ್ಸನ್ನು ಹುಗುರವಾಗಿಸಿ
ಬದುಕ ಬೇಕು ನನ್ನಷ್ಟಿ ನಾನಿಲ್ಲಿ

- ಎಸ್.ಬಿ

11 Jul 2017, 06:07 pm

ಶಾಂತಿ ಕಾಪಡಿ...

ಕೋಮು-ಗಲಭೆಯ ನಡುವೆ
ಕೇಳಿಸಲೇ ಇಲ್ಲ ಶಾಂತಿಯ ಮಾತು
ಬೇಕಿಲ್ಲ ಕೆಲವರಿಗೆ ಶಾಂತಿ
ರಾಜಕೀಕ್ಕೆ ಇದು ಬಹುದೊಡ್ಡ ಆಸ್ತಿ
ಅವರಿಗಿದೆ ಬಹಳಷ್ಟು ಸೇಪ್ಟಿ
ಅಮಾಯಕ ಮಾತ್ರ ಇಲ್ಲಿ ಸಿಕ್ಕಿ ಬಿದ್ದ ಪಾಪಿ
ಅರ್ಥ ಮಾಡಿಕೊಳ್ಳಿ ಯುವಕರೇ
ನೀವು ಈ ದೇಶದ ಭವಿಷ್ಯದ ಆಸ್ತಿ
ಶಾಂತಿ ಕಾಪಡಿ ಭವಿಷ್ಯನ ಕಟ್ಟಿಕೊಳ್ಳಿ

- ಎಸ್.ಬಿ

11 Jul 2017, 04:23 pm

ಮನಸು

ಯಾಕೆ ಸೋಲುವೆ ಮನವೇ
ನಿನಗೆ ಸಿಗುವುದು ಬರಿಯ ನೋವೇ
ನಿನಗೆಂದು ಒಂದು ಹೂವಿಲ್ಲ
ಬಾಳ ಪಯಣದಲ್ಲಿ ಚೂರು ಸಿಹಿಯಿಲ್ಲ.

ಬಡತನದಲ್ಲಿ ಬೆಂದ ಹೃದಯ
ಬೂದಿ ಅಗದೇ ಉಳಿದ ಕರಿ ಇದ್ದಿಲು
ಪ್ರೀತಿ ಗಿಡಕೆ ಹಿಡಿದ ಗೆದ್ದಲು
ಅವಳೇಕೋ ಎಡಗಳಲ್ಲೇ ನಿನ್ನ ಒದ್ದಳು.

ಬಾಯಾರಿಕೆ ತೀರದ ಬೆಂಗಾಡಲ್ಲಿ
ಪ್ರೇಮ ಸಸ್ಯ ಚಿಗುರುವ ಮಾತೆಲ್ಲಿ
ಸೋತ ಎತ್ತಿಗೇ ಹೊಡೆತ ಹೆಚ್ಚು
ಸತ್ತರೂ ಆರಲೊಲ್ಲದು ಪ್ರೀತಿ ಕಿಚ್ಚು.

- ಶ್ರೀಗೋ.

11 Jul 2017, 03:59 pm

ಕವನ

ಭಾವನೆಗೊಂದು ಪದಪುಂಜವ ಕೊಟ್ಟು ಬರೆದ ಸಾಲುಗಳು.....

- ಎಸ್.ಬಿ

11 Jul 2017, 09:49 am

ಹೆಣ್ಣನ್ನು ಕೊಲ್ಲ ಬೇಡಿ (ಆಂಜನೇಯ ಪುತ್ರಿ ಅಂಜಲಿ)

ನಗುವ ಬಾಲ್ಯ ಕಳೆದಿತ್ತು ಅಪ್ಪ ಅಮ್ಮ ನ ಮಡಿಲಲ್ಲಿ

ಯವ್ವನಕ್ಕೆ ಕಾದಿತ್ತು ಬೆಂಕಿಕುಂಡದ ದಾರಿ....

ಕಲ್ಪನೆಯ ತವರು ಕಣ್ಣೀರಲ್ಲಿ ಮುಗಿದು ಹೋಯಿತು

ಶುರುವಹಿತು ಜೀವನದ ಬೆಸುಗೆಯ ನಡುಗೆ

ದಿನಗಳು ಕಳೆದಂತೆಲ್ಲ ತವರಿನ ನೆನಪು ಮರೆಯಾದವು

ನಂಬಿ ಕೈ ಹಿಡದ ಪತಿರಾಯ ಕಣ್ಣೀರಲ್ಲಿ ಮಾಸುವ ಹಾಗೆ ಮಾಡಿದನು

ಮನೆಯವರೆಲ್ಲ ದ್ವೇಷದಿಂದ ಕಂಡರು ಕಾರಣ ನಾನೊಬ್ಬ ಹೆಣ್ಣು ಮಗಳಿಗೆ ಜನುಮವ ನೀಡಿದೆ..

ಹೆಣ್ಣು ಗಂಡು ನೋಡುತ್ತಾ ಮರೆತರು ಮನುಷ್ಯತ್ವ ವನ್ನ
ನನ್ನ ನೋವನ್ನು ಹೇಳುವ ಮುನ್ನ ನಾ ಈ ಭೂಮಿಯ ತೊರೆದೆ ನನ್ನ ಮಗಳಿಗೆ ಆ ದೇವರೇ ಗತಿ....

ಶಾಪದಿ ಮುಕ್ತಿಸು ಇವರನ್ನ ದೇವ ಮುಂದಿನ ಜನ್ಮದಲ್ಲಿ ಕರುಣಿಸದಿರು ತಾಯಿಯನ್ನ ಆಗ ಗೊಟ್ಟದಿತು ಹೆಣ್ಣಿನ ಬೆಲೆ ಯನ್ನ......

- ಅಂಜಲಿ

11 Jul 2017, 08:44 am

ಕನಸಲ್ಲಿ...

ಉಂಡು-ತೇಗಿದೆನು ನಾನು ಕೈಲಾಸದಲಿ.....
ಬೆಳಗೆದ್ದು ನೋಡಿದರೆ ಇರಲಿಲ್ಲ ಮಣ್ಣು-ಗಟ್ಟಿ ಇಲ್ಲಿ
ಕೈ ಕೆಸರಾದರೆ ಸಿಗಬಹುದು ಪಂಚಮೃತ ನಿನಗಿಲ್ಲಿ
ಎಂದು ಬೊಬ್ಬೆಯೊಡಿಯುತ್ತಿದ್ದರು ಅಮ್ಮ ಅಡಿಗೆ,ಮನೆಯಲ್ಲಿ.....

- ಎಸ್.ಬಿ

11 Jul 2017, 08:39 am

ಪ್ರೀತಿಯ ಮಾಯೆ

ವನದಲಿ ಹಸುರಿನ ತೆನೆಯು ಚಿಗುರಲು
ಮನದಲಿ ಹರಿದಿದೆ ಪ್ರೀತಿಯ ಹೊನಲು
ಚಂದದಿ ಸುಮವು ಶ್ರೀಗಂಧ ಬೀರುತ್ತಿರಲು
ಅಂದದಿ ಮೊಗವು ನಗೆಯ ಚೆಲ್ಲುತ್ತಿರಲು
ಅನಾಮಿಕ ನಾ ಆಗಿರುವೆ ಮೈಮರೆಯುತ್ತಿರಲು


ನೀ ಸನಿಹ ಇದ್ದಾಗ ಹುಣ್ಣಿಮೆಯ ಬೆಳದಿಂಗಳು
ನೀ ದೂರವಾದಾಗ ಅಮವಾಸ್ಯೆಯ ಕರಿನೆರಳು
ನೀ ನುಡಿಯಲು ಕೊಳಲು ಗುನುಗುತ್ತಿರಲು
ನೀ ನಡೆಯಲು ಹೆಜ್ಜೆ ನಲಿಯುತ್ತಿರಲು
ಕಣ್ಣಂಚಿಲ್ಲಿ ನಾ ಸೋಲೂತ್ತಿರಲು


ನಿನ್ನ ಕಂಡಾಗ ನಕ್ಷತ್ರದ ದೀಪ ಮಿನುಗುತ್ತಿರಲು
ನೀ ಮರೆಯಾದಾಗ ಎದೆಯಲ್ಲಿ ಮೇಣದ ದೀಪ ಕರಗುತ್ತಿರಲು
ನೀ ಅಳಲು ತುಂತುರು ಹನಿಗಳು ಬೀಳುತ್ತಿರಲು
ನೀ ನಗಲು ಕಾಮನಬಿಲ್ಲು ಮೂಡುತ್ತಿರಲು
ಪ್ರೀತಿಯಲ್ಲಿ ನಾ ತೇಲುತ್ತಿರಲು

- Jayanthi

11 Jul 2017, 08:31 am

ಹಾಗೇ ಗೀಚಿದ್ದು.....

ಕಾನನದ ಗವಿಯೊಳಗೆ
ಹುಡುಕಿದೆ ಕವನಕ್ಕೊಂದು ಪದಪುಂಜವ
ಕಾಣಲ್ಲಿಲ್ಲ ಆ ಕಾಡಿನೊಳಗೆ ಒಂದೂ ಅಕ್ಷರ
ಸುಸ್ತಾಗಿ ಕುಳಿತೆ ಬೃಹತ್ ಮರದ ಹತ್ತಿರ
ಆ...ಆ....ಈ ಪ್ರಕೃತಿ ಮಡಿಲು ಎಷ್ಟೊಂದು ಸುಂದರ
ವರ್ಣನೆ ಸಿಗದ ಈ ಕಾನನದೊಳಗೆ
ಬರೆದೆನು ನಾ.... ಕವನದ,ಪುಸ್ತಕ

- ಎಸ್.ಬಿ

11 Jul 2017, 07:33 am

ಪ್ರೀತಿ ಮೋಹವೋ-ದಾಹವೋ..

ಮನಸಿನ ತಾಳಕೆ
ಪ್ರೀತಿಯ ರಾಗಕೆ.....!
ಸ್ವರವಾಗಿ ಮಿಡಿದಿದೆ
ಈ ನನ್ನ ಹೃದಯ.....!

ನಾ ಬಂದೇ ದುಂಬಿಯಾಗಿ
ಒಲವಿನ ಮಕರಂದ ಹೀರಲು...!
ಈ ಹೂವಿನ ಪರಾಗಸ್ಪರ್ಶಕೆ
ನನ್ನೇ ನಾ ಮರೆತೆ ಹಾರಲು...!

ನಿನ್ನ ನೋಡುತಲಿ
ಬಯಕೆಗೆ ಜಾರುತಲಿ...!
ಸವಿ ಚುಂಬನವ ನೀಡುತಲಿ
ನಾ ಮರೆತೇನೆಲ್ಲಾ ಜಗವಾ...!

ಮೋಹವೋ ನಾ ಕಾಣೆ
ದಾಹವೋ ನಾ ಕಾಣೆ...!
ನಿನ್ನೊಲವಾ ನಾನೆಂದಿಗೂ
ಮರೆಯಲಾರೆ ಜಾಣೆ....!

ಪ್ರೇಮವೋ ನಾ ಕಾಣೆ
ಕಾಮವೋ ನಾ ಕಾಣೆ...!
ಸರಸದಲಿ ಮಿಂದೆವು
ಸವಿ-ಮಿಲನದಿ ಬೆಂದೆವು....!

ಸಂಭ್ರಮದಿ ಬೆರೆತೆವು
ಸರಸ-ಸಲ್ಲಾಪದಿ ಮರೆತವು....!
ಪ್ರತಿ ದಿನಾ-ದಿನಾನೆ
ಆ ರತಿ-ಮನ್ಮತರೂ ನಾಚುವಂತೆ...!

ಬಹುಶಃ ಅವರಿಗೂ
ನಮ್ಮ ನೋಡಿ "ಅಸೂಯೆ" ಬಂದಿರಬೇಕು......!
ಅದಕ್ಕಾಗಿಯೇ ಹಾಕಿರಬಹುದೇ
ನಮ್ಮ " ಪ್ರೀತಿಗೆ " ಕಡಿವಾಣ....?

ಪ್ರೀತಿಯಿಂದ..
ವಿಜಯಾನಂದ..
9741940305

- ವಿಜಯಾನಂದ

10 Jul 2017, 11:10 pm

ಗಾಳಿ..............✍

ಓಡದಿರೆ ಗಾಳಿ ಅತ್ತಿತ್ತ ಬೀಸುತ ರಭಸವಾಗಿ
ನಿನ್ನ ನಡೆದಾಟ ನಿಧಾನಿಸು ನನ್ನ ಉಸಿರು ಮಲಗಿರುವುದು ನನ್ನ ಮಡಿಲಲ್ಲಿ ಮಗುವಂತೆ...............

ಅಲುಗಾಡದೆ ಹೆಜ್ಜೆ ಹಾಕು ಸದ್ದು ಮಾಡದಂತೆ
ಮೆಲ್ಲ ಮೆಲ್ಲನೇ ತಂಗಾಳಿಯಾಗಿ ನನ್ನ ಪ್ರೀತಿಯ ತಂಪು ತುಂಬಿ ನಿನ್ನಲಿ.................

ಅವಳ ಎದೆಯ ಸೇರಿ ನೋಡಿ ಬಾರೆ ಗಾಳಿ ನನ್ನ ರೂಪ ಅಲ್ಲಿರುವುದೇ ಎಂದು ಇದ್ದರೆ ಅವಳನ್ನು ಜೋಪಾನವಾಗಿ ನನ್ನಂತೆ ನೋಡಿಕೊಳ್ಳುತ್ತಿರುವುದೇ ಎಂದು..........

ನಿರಂತರ ನಿನ್ನಂತೆ ನಾನಿರಲಾರೆ ಅವಳ ಜೊತೆಗೆ
ನನ್ನಲ್ಲಿನ ಪ್ರೀತಿಯ ಉಸಿರು ನೀನು ಮಧುರವಾಗಿ ಅವಳ ಮನಸೇರೆ ನನ್ನ ಪ್ರೀತಿಯ ನೆರಳಂತೆ..................

- ಚುಕ್ಕಿ

10 Jul 2017, 10:33 pm