Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಮಾತುಗಳು...........

ಕಣ್ಣುಗಳು ಮಲಗಿದ್ದರೇನು ಪ್ರಯೋಜನ ಮನಸು ಮಲಗಿದ್ದಾರೆ ತಾನೇ ಸಂಪೂರ್ಣ ನಿದ್ರೆ
ಅದು ಎಂದಿಗೂ ಸಾಧ್ಯವಿಲ್ಲ ಸಾಯೋವರೆಗೂ........

ಕೆಲಬಯಸುವ ಧ್ವನಿ ಕಿವಿಗಳಿಗೆ
ಎಂದಿಗೂ ಕೇಳುವುದಿಲ್ಲ..........
ಆ ಸ್ವರವ ಬಿಟ್ಟು ಮನಸು ಯಾವ ಸದ್ದನ್ನು ಒಪ್ಪುವುದಿಲ್ಲ ಆದರೂ ಎಲ್ಲರ ಮಾತು ಕೇಳಲೇ ಬೇಕು ನಾವಿನ್ನೂ ಜೀವಂತವಾಗಿದಿವೆಂದು ತಿಳಿಸಕ್ಕೆ ಶಾರೀರಿಗವಾಗಿ...............

ಎಲ್ಲರ ನೋವು ತಿಳಿಯೇ ಮನಸೇ ಎಂದು ಹೇಳುವ ಮೊದಲು ನಿನ್ನ ನೀನು ಅರಿಯೇ ಎಂದು ಹೇಳಿಕೊಡಿ ಬುದ್ದಿಯಿಲ್ಲದ ಮನಸ್ಸಿಗೆ..........

- ಚುಕ್ಕಿ

12 Jul 2017, 09:52 pm

ಒಮ್ಮೆಯಾದರು ಕೈಚಾಚು

ಚಂದದ ಕೈಯಿಂದ ಕೈಚಾಚು
ಅಂದದ ಚನ್ನಿಗ ನಿನಗಾಗಿ ಕಾಯುತ್ತಿರುವ
ಒಲವೆ ಚಂದ ನಮ್ಮಿಂಬ್ಬರ ಮನಸ್ಸುಗಳಿಗೆ ಆನಂದ
ಹಗಲಿನಲ್ಲಿ ಕೈಚಾಚು
ಇರುಳಿನಲ್ಲಿ ನನ್ನ ಬಾಚು

ನಿನ್ನವನು ಸೂತ್ರಇಲ್ಲದ ಪತಂಗದ ರೀತಿ
ಗಾಳಿ ಬೀಸಿದಕಡೆ ಹಾರಾಡಲು ಬಯಸುತ್ತಿರುವನು
ಸೂತ್ರವನ್ನು ಕಟ್ಟಲು ಕೈಚಾಚು..........................
ಆಸೆಯೇಕೈಚಾಚು..
ನಿರಾಸೆಯನ್ನು ತಳ್ಳಿನನ್ನಬಾಚು.......

- ak

12 Jul 2017, 09:23 pm

ಸಿದ್ಧರಾಗಿ ಬನ್ನಿ ಈ ಭುವಿಗೆ................

ಸಿದ್ಧರಾಗಿ ಬನ್ನಿ ಈ ಭುವಿಗೆ ಮುದ್ದು
ಮುಖದ ಹೆಣ್ಣುಮಕ್ಕಳೇ...............
ಕಾದು ಕುಂತಿವೆ ಕ್ರೂರರ ನೂರಾರು
ಕಣ್ಣುಗಳು ನಿಮ್ಮನ್ನು ನುಂಗಳೆಂದು...........

ಬಿರುಕು ಬೀಳದ ಮುಗ್ದವಾದ
ಮನಸುಗಳೊತ್ತು ಜೀವನದಲ್ಲಿ ನೂರಾರು ಆಸೆಗಳೊತ್ತು ಬದುಕದಿರಿ ನೀವೆಲ್ಲಾ ನನ್ನಂತೆ.........
ಒಂದು ಆಸೆಯು ಹಿಡಿರಲಾರದು ನಿಮ್ಮ
ಅಪೇಕ್ಷೆಯಂತೆ.................

ಕೈಗೊಂಬೆಗಳಾಗುವಿರಿ ನೀವು ಹೆತ್ತವರಿಗೆ, ಒಡಹುಟ್ಟಿದವರಿಗೆ,ಸ್ನೇಹಿತರಿಗೆ ಸಮಾಜಕ್ಕೆ......... ನಿಮ್ಮನ್ನು ಮದುವೆಯೇನೆಂಬ ಬಂಧನದಲ್ಲಿ ಕಟ್ಟಿಹಾಕಿದ ಪತಿಗೆ ಕೊನೆಗೂ ನೀವು ಹೆತ್ತ ಮಕ್ಕಳಿಗೆ..................

ಯಾರಿಗಾಗಿ ನಿಮ್ಮ ಜೀವನ ಎಲ್ಲರಿಗೂ ನೀವು ಬೇಕು ನಿಮ್ಮ ನೋವಿನಲ್ಲಿ ಕಣ್ಣಿರುಕುಡ ಕಡೆವರೆಗೂ ನಿಲ್ಲುವುದಿಲ್ಲ...............
ಚಿತೆಯಲ್ಲಿಯೂ ಸಹ ವ್ಯಥೆಯಿಂದ
ಸುಟ್ಟು ಬೂದಿಯಾಗುವಿರಿ ಸ್ವಾತಂತ್ರ್ಯವಿಲ್ಲದೆ.........

ಅಮ್ಮ ನೀನು ಅಕ್ಕ ನೀನು ತಂಗಿ ನೀನು ಸ್ನೇಹಿತೆಯು ನೀನು ಹೆಂಡತಿಯೂ ನೀನು ಮತ್ತೆ ಕಾಲ್ಗೆಜ್ಜೆ ತೊಟ್ಟು ಮನೆಯೆಲ್ಲಾ ಓಡಾಡುವ ಮಗಳು ನೀನು ಹೆಣ್ಣೇ.....................

ಪ್ರೀತಿಯೆoಬ ಹಣತೆಯಲ್ಲಿ ಸ್ವಾರ್ಥವೆಂಬ ಬತ್ತಿಯ ಹಚ್ಚಿದ ಪುರುಷನಿಗೆ ಬೆಳಕು ನೀನು ಹೆಣ್ಣೇ ನಿನ್ನಲ್ಲೇ ನೀನು ಸುಟ್ಟು ಕತ್ತಲೆ ತುಂಬಿದ ಮೂಲೆ ಮೂಲೆಗೆ ಕಾಂತಿ ಬೀರುವ ಜ್ಯೋತಿ ನೀನು ಹೆಣ್ಣೇ.............

ಕರಗೋ ಕನಸು ನೀನು ಕೊರಗೋ ಚಿಂತಾ ಕಾಂತೆಯು ನೀನು ಬಿಸುವ ಬಿರುಗಾಳಿ ನೀನು ತಣ್ಣನೆಯ ತಂಗಾಳಿ ನೀನು ಮಾಯಾ ಲೋಕದ ಮೋಹಿನಿಯು ನೀನು ದೇವಲೋಕದ ಅಪ್ಸರೆಯು ನೀನು ಹೆಣ್ಣೇ...............

ಸಕಲವೂ ನಿನ್ನಿಂದಲೇ ಆರಂಭ ನಿಷ್ಕಾಳವೂ ನಿನ್ನಿಂದಲೇ ಪ್ರಾರಂಭ ಸಿದ್ಧವಾಗಿ ಬಾ ನೀನು ನೂತನ ಪ್ರಪಂಚಕ್ಕೆ ನಿನ್ನ ಎಂದಿಗೂ ಅರಿಯದ ಜನರ ದಾರುಣವಾದ ದೊರಣಿಯ ಜಗಕ್ಕೆ ಹೆಣ್ಣೇ ಎಂದಿಗೂ ಮಣ್ಣಲ್ಲೆ ಮರೆಯಾಗಿರುವ ಹೊನ್ನೇ......

- ಚುಕ್ಕಿ

12 Jul 2017, 09:18 pm

ಹೇ ಹೃದಯಾ

ಗೆಳತೀ...ನೀನೆಂದರೆ...?
ಕಾದು ಕಾವಲಿಯಾದ ಮನಸಿಗೆ..ಹೊಂಗೆ ತಂಪು....!!
ಇರುಳ ಕರಾಳತೆಯಲ್ಲಿ...ಕಳೆದು ಹೋಗುವ...ಕನಸು...!!
ಕಲ್ಪನೆ, ಪರಿಕಲ್ಪನೆ ಬದಲಾವಣೆ ! ನಾಳೆಯ ನಿರೀಕ್ಷೆ,..ಪ್ರತೀಕ್ಷೆ....!!
ಮುಂಗುರುಳು ಮುಂಜಾನೆಯ...ಮಂಜ ಹನಿ...!!
ಕೇಳಿದಷ್ಟೂ ಕೇಳಬೇಕೆನಿಸುವ...ಕಹಾನಿ...!!
ನನ್ನೊಳಗಿನ ತುಮುಲ...ಹೊಯ್ದಾಟ...!!
ತನ್ನ ಅಸ್ತಿತ್ವಕ್ಕಾಗಿ...ಮಾತಿನ ಮೊರೆ ಹೋದ..ಪರಾವಲಂಬಿ ಮೌನ....!!
ಭರವಸೆಯ ಆಲಿಂಗನ...ಕಣ್ಣೋಟದ ಸಿಹಿ ಚುಂಬನ…ಒಂಟಿ ಕತ್ತಲ ಏಕಾಂಗಿತನ....!!
ಮತ್ತೆ..ನನ್ನೀ ಜೀವನ..! !!

- shankarpaschapur@gmail.com

12 Jul 2017, 08:07 am

ಮೌನ ಕನಸು

ನನ್ನ ಎದೆಯಾಳದ ಕನಸುಗಳಿಗೆ ನೀನೆ ಒಡಯ
ನನ್ನ ಮೌನದ ಪ್ರೀತಿ ಕಾಣಲಿಲ್ಲವೆ
ಸಾಗಿದ ನೆನಪುಗಳ ಒತ್ತು ಒಂಟಿಯಾಗಿ ಸೋತೆನು
ಇಲ್ಲದ ಕನಸುಗಳ ಬಾನೆತ್ತರಕ್ಕೆ ಚಿಮ್ಮಿಸಿ
ವಸಂತಗೀತದ ಮೋಹಕ್ಕೆ.ಬಂದಿಯಾದೆನು
ಬಾ ಇನಿಯ ನಿನ್ನ ಬಿಗಿ ತೋಳುಗಳ ನಡುವೆ ಬಂದಿಸು
ನಿನ್ನ ಬಿಸಿಯುಸಿರಿಂದ ತುಟಿಗಳಿಗೆ ಚುಂಬಿಸು
ಕಾದ ಹೃದಯ ತಂಪಾಗುವ ಹಾಗೆ ಹಣೆಗೆ ಪ್ರೀತಿ ಮುತ್ತ ಸಿಂಪಡಿಸಿ ಎದೆಗೆ ಒರಗಿಸಿಕೊ..

- ರವಿಕುಮಾರ

12 Jul 2017, 07:59 am

ಶಬ್ದ

ಕೇಳಬಯಸುವೆ ನಾನು ಮಳೆನೀರ ಸದ್ದು
ಜಲಪಾತದ ತುದಿಯಿಂದ ಒಂದೊಂದು ಹನಿಯು ಧರೆಯೆಡೆಗೆ ಜಾರುವ ಸದ್ದು...................

ಹಕ್ಕಿಗಳ ಚಿಲಿಪಿಲಿಯ ರಾಗ ಅವು ಗಗನದೆಡೆಗೆ ಪಾಯನಿಸುವ ವೇಗ ಪ್ರತಿಯೊಂದರಲ್ಲಿ ವಿನೂತನ ಶಬ್ದ ಕೇಳಿವ ಮನಕೆ ಉಲ್ಲಾಸ...........

- ಚುಕ್ಕಿ

12 Jul 2017, 07:53 am

ತೋಚಿದ್ದು-ಗೀಚಿದ್ದು

ಭಾವನೆಗೊಂದು ಅರ್ಥ ನೀಡಿ ಭಾಂದವ್ಯ ಬೆಸೆಯುವವರು ಪ್ರೇಮಿಗಳು||
ಭಾವನೆಗೊಂದು ಅರ್ಥ ನೀಡಿ ಬರಹ ರಚಿಸುವವರು ಕವಿಗಳು||

- ಎಸ್.ಬಿ

12 Jul 2017, 07:12 am

ಹಾಗೇ ಗೀಚಿದ್ದು

ಬೆಳ್ಳಂಬೆಳಗ್ಗೆ ನಾ ಕಂಡೆ ಬಾನೆತ್ತರದಲಿ
ಬೆಳ್ಳಕ್ಕಿಗಳ ಸಾಲು.....
ಅದ ನೋಡಿ ನಾ ಬರೆದೆ ಕವನದ ಸಾಲು
ಸೂರ್ಯನ ರಶ್ಮಿಯೂ ಅಪ್ಪಳಿಸುತ್ತಿತ್ತು
ಬೆಳ್ಳಕ್ಕಿಯ ಪುಕ್ಕಕ್ಕೂ......
ನಳನಲಿಸುತ್ತಿತ್ತು ಗಗನವು
ನಾಚಿ ನೀರಾಯಿತು ಮೋಡವು

- ಎಸ್.ಬಿ

12 Jul 2017, 06:49 am

ಆತ್ಮೀಯರು...!!

ಅವಗವಾಗ ಅವಕಾಶಕ್ಕಾಗಿ
ಕಾದು ಕುಳಿತವರು.

ಕಷ್ಟ ಕಾಲಕ್ಕೆ ಮೆಸೇಜ್ ನಲ್ಲೆ ಸಮಾಧಾನಿಸುವವರು.

ಎಂದೆಂದಿಗೂ ನಾನಿದ್ದೆನೆಂದು
ಮರೆಯಾಗುವವರು

ಕಿಸೆ ಖಾಲಿಯಾಗುವಂತೆ ನೋಡುವವರು
ಅವಶ್ಯಕತೆ ಇಲ್ಲದಾಗ ಬ್ಯೂಸಿಯಾಗಿರುವವರು

ಒಟ್ಟಾರೆಯಾಗಿ
ನಮ್ಮ ಹಿಂದೆ-ಮುಂದೆ ತಿರುಗುತ್ತಿರುವವರು

- ಎಸ್.ಬಿ

11 Jul 2017, 09:38 pm

ಹಾಗೇ ಸುಮ್ಮನೇ ಗೀಚಿದ್ದು

ಮೂಡಣದಲಿ ಮೂಡಿದ ಸೂರ್ಯನು
ಪಡುವಣದಲಿ ಮುಳುಗುವ ಹೊತ್ತಲ್ಲಿ
ಮಳೆಯು ಇಂಪನ್ನು ಚಿಮ್ಮಿಸಿ
ಬೀಳ್ಕೊಡ್ತು....

ಚಂದಿರನ ಸ್ವಾಗತಿಸಲು
ಮೋಡವನ್ನೇ ಚದುರಿಸಿ ದಾರಿ ಮಾಡಿ ಕೊಡ್ತು
ಬೆಳದಿಂಗಳ ಬೆಳಕನ್ನು ನೀಡಲು
ಕಾತುರನಾಗಿಹನು ಚಂದಿರನು

- ಎಸ್.ಬಿ

11 Jul 2017, 06:31 pm