Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಸಿವು ಎಂಬ ಕ್ರೂರ ಮೃಗವು
ನನ್ನನ್ನು ಬೇಟೆಯಾಡಿ ಕಿತ್ತು ತಿನ್ನುವಾಗ
ನಾ ಹೇಗೆ ಯೋಚಿಸಲಿ ಹೇಳು
ನೆನೆದು ಬೇರೆ ಭಾಗ್ಯದ ಯೋಗವ!!
ಧೂಳು ಕಣಗಳು ಗಾಳಿಯಲ್ಲಿ ಬೆರೆತು
ಆಹಾರವಾಗಿ ನನ್ನ ಉದರ ಸೇರಬಾರದೇ
ಸೇರಿ ತೀರಿಸಬಾರದೇ ನನಗೆ ಅಂಟಿರುವ
ಈ ಹಸಿವಿನ ರಣ ಬಾಧೆಯನು!!
ತುತ್ತು ಅನ್ನದ ಋಣವು ಎತ್ತ ಹೋಯಿತು ಕಾಣೆ
ಅರಿವು ಮೂಡಿಸಿತೇ ಆ ನೆತ್ತಿ ಸುಡುವ ಬಿಸಿಲು
ಯಾವ ಬೇಧವ ನಾ ಮಾಡಿ ತೀರಲಿ ಹೇಳು
ನೆನೆದಾಗ ಕಡು ಶಾಪ ಬಂದು ನನ್ನ ಕಾಡಿತೇ!!
- ಪಿ.ಜಿ.ಜ್ಯೋತಿ
17 Jul 2017, 11:18 am
ನನ್ನವಳ ನೆನಪು ಸದಾ ನನ್ನ ಮನದಲ್ಲಿರಲು,
ನನ್ನ ನೆನಪು ಅವಳಿಗೆ ಒಮ್ಮೊಯೂ
ಬಾರದಿರಲು,
ಆದರೂ ಬೇಸರವಿಲ್ಲ ಎನಗೆ ಕಾರಣ, ಅವಳು ನನ್ನವಳು..
Spb..@#
- Spb...@#
17 Jul 2017, 11:08 am
ಸಾಲು ಕಂಬಗಳ ಹಾದಿಯಲ್ಲಿ
ಸಾಲು ದೀಪಗಳ ನಡುವೆ ರಾತ್ರಿಯಲ್ಲಿ!!
ಏಕಾಂಗಿಯಾಗಿ ನನ್ನವಳು
ಸಾಗಿ ಬರುತಿಹಳು ನಾನು ಇರುವಲ್ಲಿ!!
ಆ ಮೋಡದ ರವಿಕೆಯನು ಹೊದ್ದು
ನೀಲ ಬಾನಿನ ಸೀರೆ ಮೈಗೆ ಸುತ್ತಿಸಿಕೊಂಡು!!
ತಾರೆಗಳ ಒಡವೆಯ ಮಣಭಾರ ಹೇರಿಕೊಂಡು
ಬೀಗುತಲೇ ನನ್ನೆಡೆಗೆ ಸಾಗಿ ಬಂದಿಹಳು!!
ಚಂದ್ರನನೇ ಹಣೆಬೊಟ್ಟಾಗಿಸಿ ನಗುನಗುತಲೇ
ಬೆಳದಿಂಗಳ ತಾ ಹೊತ್ತು ತಂದಿಹಳು!!
ನೈದಿಲೆಯ ನಾಚಿಕೆಯು ತುಂಬಿರುವ ಕಣ್ಣುಗಳು
ಅನುರಾಗದಿಂದ ನನ್ನ ಬಾ ಎಂದು ಕರೆದಿಹವು!!
ಆ ಮದನ ಕನ್ನಿಕೆಗೆ ಶರಣಾಗಿ ನಿಂತಿರುವೆ
ವಲಿದು ಬಂದವಳ ನಾ ದೂರಲಾರದೇ!!
ಭಾವದಲಿ ಮೈ ಮರೆತು ಬೆಸೆದುಕೊಂಡಿಹ
ಒಲವು ಬೆರೆತು ಹೋಯಿತು ಈ ಬದುಕಿನೊಡನೆ!!
- ಪಿ.ಜಿ.ಜ್ಯೋತಿ
17 Jul 2017, 09:45 am
ದೇವರು ಮಾಡಿದ ಮೋಸಕೆ ನನ್ನ ಈ ಜನ್ಮ ಮತ್ತು ಈ ಜನ,
ಕೊಳಕು ಮನಸ್ಸಿನ ಮನುಜರಿಗೆ ದೇವಸ್ಥಾನದಲ್ಲಿ ಮಜ್ಜನ,
ನಾ ಬಯಸಿದ್ದೆನೆ ಈ ರೀತಿ ಜನ್ಮ..??
ಸಾಕು ಸಾಕಾಯಿತು ಈ ನಯವಂಚಕ ಜನರ ಜೊತೆ ಈ ಜನುಮ,
ಕರುಣಿಸು ದೇವಾ ಪ್ರಾಣಿಪಕ್ಷಿ ಸಂಕುಲದಲ್ಲಿ
ನನ್ನ ಮುಂದಿನ ಮರುಜನ್ಮ.....
Spb..@#
- Spb...@#
17 Jul 2017, 01:01 am
ಕರಗಿದರೂ ಕಲ್ಲು,
ಕರಗದೆ ನಿನ್ನ ಕಲ್ಲು ಮನಸು,
ಕರಗದ ಆ ಮನಸು,
ಕರಗುವ ಕಲ್ಲಿಗಿಂತ ಕಡೆ
ಓ ಮನಸೇ...
- Spb...@#
16 Jul 2017, 06:03 pm
ಬಾ ಬಾ ನನ್ನ ಚೆಲುವಿನ ತಾರೆ
ಬೊರ್ಗರೆವ ಕಡಲ ತೊರೆಯಂತೆ
ಉಕ್ಕುವ ಹಾಲಿನ ನೊರೆಯಂತೆಣ್
ನಲುಮೆಯ ಭಾವ ಸೊಗಸಾದ
ಹೂವಂತೆ .
- shree
16 Jul 2017, 05:41 pm
ಸಿರಿವಂತಿಕೆಯ ಬಡಿವಾರ ತುಂಬಿರಲು ಮನಕೆ
ಕಾಣದು ಬಡತನದ ವೇದನೆಯು ಕಣ್ಣಿಗೆ
ಆಡಂಬರದ ಜೀವನ ಬರಿ ಕ್ಷಣಗಳ ಎಣಿಕೆ
ಆಗಸದೆತ್ತರಕೆ ಹಾಕುವ ಕನಸುಗಳ ಹೆಣಿಕೆ
ದುಡ್ಡಿನ ದರ್ಪದ ಪೊರೆ ಕಣ್ಣ ಮೇಲಿರಲು
ಪ್ರೀತಿ ಅಕ್ಕರೆಯ ಸಿಹಿಯ ಸವಿಯದು ಮನವು
ಕ್ಷಣ ಸನಿಹ ನೀರ ಮೇಲಿನ ಗುಳ್ಳೆ ಮಾಯವಾಗಲು
ಬೇಡುವುದು ಮನಸು ಬರಿ ಆಸೆಗಳ ಹವಣಿಕೆಯ
ಸಂಪದವ ಗಳಿಸಿ ಸಾಹುಕಾರರಾದರೇನು
ತೂರಿದರು ಸಂಬಂಧಗಳ ಬಿರುಗಾಳಿಯ ಒಡಲಿಗೆ
ಎಲ್ಲವನು ಗೆಲ್ಲಲು ಬೇಕಿಲ್ಲ ಈ ಹಗಲುವೇಷ
ಸಾಕು ಪ್ರೀತಿಯ ನಡೆ ನುಡಿಯ ನಾಲ್ಕು ಮಾತು ಜೀವಕೆ ....
- Irayya Mathad
16 Jul 2017, 04:17 pm
ಹಣ್ಣೆಲೆ ಉದುರಲೇಬೇಕು,
ಮಣ್ಣಿಲ್ಲಿ ಬೆರೆತು ಅಮೃತವಾಗಲು,
ಕವನ ಮನಮುಟ್ಟಬೇಕು,
ಕವಿಯ ಮನಸ್ಸು 'ಸಂಜೀವಿನಿ' ಆಗಲು.
- Srinivasakavana
16 Jul 2017, 10:45 am
ಕಣ್ಣಿಂದ ನೋಡಿದ ಬಿಂಬ ನಿನ್ನದು
ಅಲ್ಲಿಂದ ಹೊರಡಿದ ಮಾತಿನ ಮಧುರ
ನನ್ನ ಮನಸ್ಸಿನಲ್ಲಿನ ನಿನ್ನ ಪ್ರೀತಿಯದ್ದು........
- ಚುಕ್ಕಿ
16 Jul 2017, 10:15 am
ಆಷಾಢ ಗಾಳಿ ಆಗಸದಿ ಬಿಸಿರಲು
ಆನಂದ ಬೋಜನವಾ ಉದರದಲ್ಲಿ ಸರಿದಿರಲು
ಕಾಲಗಳ ಸರಿದುಗಿಸೋ ಗಳಿಗೆಯ
ಸಂಗಮವ ಸಡಿಲಿಸೋ ಕಾಲ ಆಷಾಢಗಾಲ....
ಹೊಟ್ಟೇಲಿ ಕಾಲಕೆಜಿ ಮನೆಯಲಿ ಪಾವಕೆಜಿ
ಬಿದಿಬಂಡೀಲಿ ಪೌಣಾಕೇಜಿ ಒಟ್ಟನಲ್ಲಿ ಕೈಬಾಯಿಗೆ
ಕೆಲಸದ ಕಲಿಸುವಕಾಲ
ಜಗಳವಾಡುವಗಾಲ ಆಷಾಢಗಾಲ ಆಷಾಡಗಾಲ್.....
ಶುದ್ದ ಗಾಳಿಯ ಗುಳಿಗೆಯ ನುಂಗಿ
ಸತ್ತು ಸೌರಗಿರುವಾ ದ್ರಾಕ್ಷವಾ ಅಮಲ ಸವಿದು
ಬ್ರುಸ್ಟಾನ ಬಾಡೂಟ ಉಂಡು
ಸದ್ದು ಮಾಡದೆ ಕುಂಡೆಯುರಿ ಮುಂಡೆದಿದಿರು
ನಾಕಾಣೆ ನಾಚಿಕೆಯ ನಾಲಿಗೆಯ ಒಳಹಿಡಿದು
ಗಬ್ಬನ್ನೇ ಗಮ್ ಗಮಿಸಿಸೋ ಸುವಾಸಮಾನಗಾಲ್..
ಕಿತ್ತೊದ ರಂಧ್ರಗಳ ಕಿಡಕಿಯ ಮುಚ್ಚಿಸೋಗಾಲ....
ಅದುವೇ ....ಆಶಾಡ....ಗಾಲ್ಲ ಮಜೆಯ ತರುುುವ
ಇದುವೇ ಆಷಾಢ . ಕಾಲ...........
- ಪ್ರದೀಪ.ಮ.ಪಾಡಮುಖೆ
16 Jul 2017, 06:22 am