Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಿಟಿ ಅಂದರೇನು ಕಲಿಸಿತು
ನನ್ನ ಮುಗ್ದತೆಯನ್ನು ದೂರ ಮಾಡಿತು
ಮೌನವನ್ನು ಮುರಿಯಿತು
ಅನ್ನವನ್ನು ನೀಡಿತು
ಹಣವನ್ನೂ ನೀಡಿತು
ಎಲ್ಲರಂತೆ ಬದುಕಲು ಕಲಿಸಿತು
ಜೀವನವನ್ನೇ ಬದಲಾಯಿಸಿತು
ಜೀವನಕ್ಕೆ ಹೊಸ ಅಡಿಪಾಯವನ್ನಿಟ್ಟಿತು
ಸದ್ಯ ಮಂಗಳೂರನ್ನೆ ಬಿಟ್ಟು ಹೋಗುವಂತೆ ಮಾಡಿತು
ಹೊಸ ಜೀವನ , ಹೊಸ ಅನುಭವ ಹೊಸತನವನ್ನು ನೀಡಿದ ಮಂಗಳೂರಿಗೆ ಚಿರಋಣಿ ನಾನು
ಮತ್ತೆ ಬರುವೆನೆಂಬ ಕನಸ ಹೊತ್ತು ತೆರಳುವೆನು ನಾನಿನ್ನು
ಶುಭ ವಿದಾಯ ಮಂಗಳೂರಿಗಿನ್ನು
- ಎಸ್.ಬಿ
17 Jul 2017, 08:23 pm
ನಿನ್ನ್ ಅನುಮತಿ ಇಲ್ಲದೆ ಪ್ರೀತಿಸಿದ ನನ್ನ ಕ್ಷಮಿಸು
ಹುಸಿಮುನಿಸಿನ ನಿನ್ನ ಮೊಗ ಚೆಲುವೆ ಸೊಗಸು
ಬಡಪಾಯಿಯ ತೊಳಲಾಟಕೆ ನಿನಗಿಲ್ಲವೇ ಕರುಣೆ
ಬಿಟ್ಟರು ಬಿಡದೆ ಕಾಡುತಿಹುದು
ನಿನ ನೆನಪು ತರುಣೆ
ಈ ಪ್ರೀತಿ ಪರಿಪಾಟು ನನಗಂತೂ ಅತಿ ಹೊಸದು
ಸಾಕಾಗಿದೆ ನನಗೀಗ ಕನಸಲಿ
ಒಬ್ಬನೇ ಅಲೆದು
ಜೊತೆಯಾಗು ನಿ ನನಗೆ
ಬೇರೇನು ಬೇಡೇನಗೆ
ಈಗಂತೂ ಚಂದಿರನ ಮೊಗದಲೂ ಕಾಣುತಿದೆ
ನಿನ್ನ ಪ್ರತಿಬಿಂಬ
ಪ್ರೀತಿಯ ನೆಪದಲ್ಲಿ
ಕಾಡುತಿಹೆ ನೀ ತುಂಬಾ
- pavan
17 Jul 2017, 07:22 pm
ಹೂವಿನ ಒಡಲಲ್ಲಿನ ಮಕರಂದ ಹೀರುವ ದುಂಬಿಗೆ ಸವಿಜೇನು ಮಾಡಲು ಬೇಕಾದ
ಕಲೆಯನ್ನು ದೇವರು ತುಂಬಿ ಕಳುಹಿಸಿರುವೆನು ಭುವಿಗೆ ಸಿಹಿಯಂಚಲೆಂದು...............
ಕದ್ದರು ಆ ಜೇನಿನ ಮಾಧುರ್ಯವನ್ನು ಮನುಜರು ಅತ್ತು ಕೊಂಬೆಯಲ್ಲಿ ಕೂರುವ ಬದಲಾಗಿ ಸ್ವಾರ್ಥವಿಲ್ಲದ ದುಂಬಿಯು ಹುಡುಕತೊಡಗಿತು ಮತ್ತಷ್ಟು ಸುಗಂಧ ಬೀರುವ ಹೂಗಳನ್ನು ಸೂರ್ಯನು ಉದಾಯಿಸುವ ಮೊದಲೇ ಸ್ವಾಧವನ್ನು ಹಿರಲೆಂದು.........
ಹಚ್ಚಹಸುರಿನ ಕೊಂಬೆಯುಡುಕಿ ಬೆಚ್ಚಗಿನ
ತನ್ನುಸಿರ ಬೇರಸಿ ಮತ್ತೆ ಕುಡಿಟ್ಟಲಾರಂಭಿಸಿತು
ಪರಿಪರಿಯ ಪುಷ್ಪಗಳ ರಸವೀರಿ ತನ್ನ ಸಂಗಡಿಗರ ಜೊತೆಗೂಡಿ.....................
- ಚುಕ್ಕಿ
17 Jul 2017, 07:22 pm
ಅಪ್ಪನ ಕೈಯಲ್ಲಿ ಕಿರುಬೆರಳ ಹಿಡಿದು ನಡೆದ ನಾನು
ನಿನ್ನ ನೆರಳಲ್ಲಿ ಮುದ್ದು ತಂಗಿಯಾದೇನೇನು.......
ಎಲ್ಲರಲ್ಲೂ ಬಹಳ ಗಂಭೀರ ನೀನು
ನನ್ನ ಬಳಿ ಇದ್ದಾಗ ಮನಸರಿತ ಸ್ನೇಹಿತನು ನೀನು.............
ಅಣ್ಣ ನೀನು ನಿಡುವ ಪ್ರೀತಿಯ ಕೈತುತ್ತು
ಅಮ್ಮನ ಮಮತೆಯ ಮಾಧುರ್ಯದ
ಸವಿಜೇನಿನ ಸವಿಯಿತ್ತು..............
- ಚುಕ್ಕಿ
17 Jul 2017, 07:03 pm
ಹೊಳೆಯುವ ನಕ್ಷತ್ರಗಳಿಗೆ ಕಾಲನುಮತಿ ಇದೆ ,,
ಆದರೆ ಪ್ರೀತಿಗೆ???
ಮಳೆತರುವ ಮೊಡಗಳು ಕೂಡ ಖಲಿಯಾಗುತ್ತೆ,,
ಆದರೆ ಮನಸಲ್ಲಿರುವ ಭಾವನೆಗಳು???
ಭೂಮಿಗೂ ತನ್ನದೇ ಮಿತಿ ಇದೆ,,,
ಆದರೆ ಮನುಜನ ಆಸೆಗೆ??
- pavan
17 Jul 2017, 06:54 pm
ಬೆಳಕ ತಾ ನೇಸರ ಬೆಳಕ ತಾ ನೇಸರ,
ಅಳಿಸು ನೀ ದುಗುಡದುಂಖಗಳಿಲ್ಲದ ಜನರ ಅಹಂಕಾರ,
ನೀಡದಿರು ನೊಂದ ಮುಗ್ದ ಮನಗಳಿಗೆ ಅಂದಕಾರ,
ಅಸಂಖ್ಯಾತ ಜೀವರಾಶಿಗಳಿಗೆ ಆಧಾರವಾದ ನಿನಗೆ ಇದೋ ನನ್ನ ಸಾಷ್ಟಾಂಗ
ನಮಸ್ಕಾರ...
- Spb...@#
17 Jul 2017, 01:11 pm
ಯಾವ ಮಾಯೆಯು
ಮುಸುಕಿತು ನಿನ್ನನು!!
ಮರೆತು ಹೋದೆ ಹೇಗೆ
ನೀ ಈ ಪ್ರೇಮದ ಬಗೆ!!
ಎಲ್ಲ ತಿಳಿದೂ ತಳಿಯದಂತೆ
ನಟನೆ ಏತಕೆ ನನ್ನ ಬಳಿಗೆ!!
ಎಲ್ಲ ಸತ್ಯವ ಸುಳ್ಳು ಮಾಡುವ
ಪಣವ ತೊಟ್ಟೆ ನೀ ಏತಕೆ!!
ಏನ ಹೇಳಲಿ ನಿನ್ನ ವರಸೆಗೆ
ಮೋಸ ಹೋದೆನೇ ತಿಳಿಯೆನು!!
ಏನೇ ಆದರೂ ಮುಸುಕ ಸರಿಸಿ
ನೋಡಬಾರದೇ ಒಮ್ಮೆ ನನ್ನನು!!
- ಪಿ.ಜಿ.ಜ್ಯೋತಿ
17 Jul 2017, 12:32 pm
ಯಾಕಾಗಿ ಇರುಳ
ತಂದೆ ನೀ ಓ ನೇಸರ!!
ಯಾಕಾಗಿ ಬಂತು ನನಗೆ
ಇಂದು ಈ ಬೇಸರ!!
ಈ ಇರುಳಿನ ಏಕಾಂತಕೆ
ನಾನೇತಕೆ ಮಣೆ ಹಾಕಿದೆ!!
ಅವನಿಲ್ಲದ ಈ ಇರುಳಿನ
ಅರಿವೇತಕೆ ಹೀಗಾಗಿದೆ!!
ಸುಡು ಬಿಸಿಲಿನ ಉರಿ ತಾಪವು
ಹಿತ ನೀಡಿತೇ ಈ ಮನಸಿಗೆ!!
ಈ ಇರುಳಿನ ಸಂತಾಪವು
ನನ್ನ ಜಡವಾಗಿಸಿ ನಗುವಂತಿದೆ!!
ಇರುಳಲ್ಲಿ ವಿರಹ ಗೀತೆ
ಮನದಲ್ಲಿ ಮನೆ ಮಾಡಿ!!
ಸಾಕಾಯಿತು ಈ ಇರುಳ
ನೋವನ್ನು ಕೊನೆ ಮಾಡು!!
ಓ ನೇಸರ ನೀ ಬೇಗ ಬಾರ
ಇರುಳನು ಸರಿಸಿ ಬೆಳಕ ತಾರ!!
ಅಂಧಕಾರದ ಬದುಕ ನೀನು
ಅಂದವಾಗಿಸು ಬೇಗ ಬಾರ!!
- ಪಿ.ಜಿ.ಜ್ಯೋತಿ
17 Jul 2017, 12:21 pm
ಬೃಂದಾವನದಿ ಹಾಲಿನ ಬೆಳದಿಂಗಳು
ಕೃಷ್ಣನ ಕಾಣದೆ ರಾಧೆ ಕನವರಿಸಿದಳು
ಮೆಲ್ಲನೆ ಕಳ್ಳ ಕೃಷ್ಣನ ಹೆಜ್ಜೆ ಕಂಡಿತು
ರಾಧೆಯ ಕಣ್ಣಲ್ಲಿ ಹುಸಿಮುನಿಸು ಮೂಡಿತು
ಕೊಳಲ ನಾದವ ನುಡಿಸಲು ಕೃಷ್ಣ
ಮೋಡ ಮುಸುಕಿ ಹನಿಯು ಜಿನುಗಿತು
ರಾಗದಿ ತಾಳಕೆ ಕುಣಿಯಲು ರಾಧೆ
ಮಳೆಯಲಿ ಮಿಂದ ಮೊಗವು ಮಿನುಗಿತು
ದೂರದಿ ಬೀಸಲು ಚಳಿಗಾಳಿ
ಸನಿಹಕೆ ಬಂದಳು ಓಡೋಡಿ
ಮೋಹನನು ಕೈ ಹಿಡಿದು ಸೆಳೆಯಲು
ಮೋಹನಾಂಗಿಯು ಕರಗಿದಳು
ಕಣ್ಣ ರೆಪ್ಪಯ ಬಡಿಯಲು ರಾಧೆ
ಮದನನು ಕಣ್ಚುಂಬಿಸಿದನು
ಹೂವಿನ ಅದರದಂತೆ
ತುಟಿಯ ಜೆನು ಸವಿದನು
- Jayanthi
17 Jul 2017, 11:43 am
ಕನ್ನಡದಲ್ಲಿ ಕಲರವ
ಮೂಡಿಸಿದ ಹೆಮ್ಮೆಯ
ಕನ್ನಡ ಕವನ!!
ಚಿಲಿಪಿಲಿ ಹಾಡುವ
ಹಕ್ಕಿಯ ಗೂಡಿದು
ನಮ್ಮ ಕನ್ನಡ ಕವನ!!
ನವ ಯುವ ಕವಿಗಳ
ಹೊಸ ಹೊಸ ಭಾವದಿ
ತುಂಬಿಹ ಕನ್ನಡ ಕವನ!!
ಹೊಸ ಬರಹಗಳ
ಚಿಗುರಿನ ಹಸಿರನು
ಹುರಿದುಂಬಿಸಿದ ಕವನ!!
ನವರಸ ತುಂಬಿಹ
ರಸ ಭಾವ ಇದು
ನಲುಮೆಯ ಕನ್ನಡ ಕವನ!!
ಸಾರುತ ಚಿಲುಮೆಯ
ಸಾಗಲಿ ಎಲ್ಲೆಡೆ
ಸುಮಧುರ ಕನ್ನಡ ಕವನ!!
- ಪಿ.ಜಿ.ಜ್ಯೋತಿ
17 Jul 2017, 11:35 am