Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ಕವನ"

ಮನದ ಕಲ್ಪನೆಗಳ ಮೂಕರಾಗಮೌನದ ಬರವಣಿಗೆಯೇ

"ಕವನ".

- Spb...@#

21 Jul 2017, 01:17 am

ಮಾತಿದ್ದು ಮೂ(ರ್ಖ)ಕರೂ..

ಟ್ರಿಣ್sss ಟ್ರಿಣ್sssಯೆಂಬ
'ಲ್ಯಾಂಡ್ ಪೋನಿ'ನ ಸದ್ದು
ಅಡಗಿ ಹೋಗಿದೆ

ಕರಿ ಎತ್ತ ಕಾಳಿಂಗ
ಬಿಳಿ ಎತ್ತ ಮಾನಿಂಗ
' ಬಾನುಲಿ'ಯ ಹಾಡು ಆರ್ತಧ್ವನಿಯಾಗಿದೆ

ಬಾರಿಸು ಕನ್ನಡ ಡಿಂಡಿಮವ
ಚಂದನ ವಾಹಿನಿಯ
ದರ್ಶನವೂ 'ದೂರ' ಸರಿದಿದೆ

ನಿಮ್ದೂ ಲೇಟರ್ ಬಂದಿದೆ
ಎಂದೂ ಹೇಳುವ
'ಅಂಚೆ'ಯಣ್ಣನ ಕೆಲಸ ಕಡಿಮೆಯಾಗಿದೆ

' ಫೇಸ್ ಬುಕೆಂಬ' ಮಾಯೆಯೂ
ಹತ್ತಿರದವರನ್ನ ದೂರಾಗಿ :
ದೂರಿದ್ದವರನ್ನ ಹತ್ತಿರವಾಗಿಸಿದೆ

ಸ್ವಂತಿಕೆ ಭಾವಚಿತ್ರದ
ಲೈಕು, ಕಾಮೆಂಟ್ ಗಳ
ಪ್ರಭಾವದ ಸ್ಪರ್ಧೆ ಹೆಚ್ಚಾಗುತ್ತಲಿದೆ

ಚಾವಡಿ,ಕಟ್ಟೆಕಲ್ಲು ಮಾತಾಡುತಿವೆ!
ಮೌನವೂ ಹೆಚ್ಚಾಗಿ
ಮಾತಿಗೆ ' ಬೇಡಿಕೆ' ಬಂದಂತಾಗಿದೆ

ಚಾಟಿಂಗ್ ಹೆಚ್ಚಾಗಿ
ಡೇಟಿಂಗ್ಸ್ ಪಿಕ್ಸಾಗಿ
ಮೊಬೈಲಾಟದಿಂದ ಮೈದಾನಗಳು ಸೊರಗುತಿವೆ

ಸ್ಮಾರ್ಟ್ಪೋನಿನ ವ್ಯಾಲ್ಯೂನ
ಇಳಿಸಿತು ಜಿಯೋ
ರುಚಿಹಚ್ಚಿ ಪಂಡಿತರನ್ನ,ಪೆದ್ದರನ್ನಾಗಿಸಿದೆ

ಸತ್ಯವೂ ದೂರಾಗಿ
ಕುಚೇಷ್ಟೆ,ಹುಚ್ಚುನಗೆಗಳು ಅತಿಯಾಗಿ
ಮಾತಿದ್ದು " ಮೂ( ರ್ಖ)ಕ" ರಂತೆ ವರ್ತಿಸುವುದಾಗಿದೆ.

- ಅಶೋಕ.ಜಿ.ಕಮತಗಿ (ಶಾಂತಿಪ್ರಿಯ)

- "ಶಾಂತಿಪ್ರಿಯ"

20 Jul 2017, 08:31 pm

ಕವಿತೆ...........

ಅಭಿನಯಸಹಿತ ವಾಚಿಸುತ್ತಿರುವ ಅಪೂರ್ವ ದೃಶ್ಯಾವಳಿಗಳನ್ನು ಕಾಣುತ್ತಿದ್ದೇ ದಿನವಿಡೀ ನನ್ನ
ಮನಸಲ್ಲಿ ಕನಸಾಗಿ ಕಲ್ಪನೆಯಾಗಿ,ನೋವಾಗಿ ನಲಿವಾಗಿ...................

ಏತಕ್ಕೆ ಕವನವೇ ನನ್ನನು ಬಿಟ್ಟೋಗೋವ
ಆಸೆ ನಿನಗೆ ಈ ನೆಚ್ಚಿನ ಗೆಳತಿಯನ್ನು ಒಂಟಿಯಾಗಿ ನನ್ನಲ್ಲಿ ನೀನಿಲ್ಲದೆ..............

ಬೆರೆತೊಗಿರುವೆ ನಿನ್ನಲ್ಲಿನ ಭಾವನೆಯಾಗಿ ನಾನು ಮನಸ್ಸಿನ ಮಾದರಿಯ ಮಾತು ನೀನು ಹೊರಹೊಮ್ಮಿ ಬರುವೆ ಪದಗಳಂತೆ ತಿಳಿಸಲು ನನಗೆ ನಾನು ನಿನ್ನಲ್ಲೇ ಇರುವೆನೆಂದು ಕವಿತೆ..........

ಕವಿತೆ-ಕವಿ ಕಂಡ ವಿಸ್ಮಯ ತೇಜಸ್ಸಿನ ಚರಿತೆ
ನನ್ನಲ್ಲಿನ ಲೋಕಕ್ಕೆ ಒಂದು ಹೆಸರಂತೆ ಬಂದು ನನ್ನ ಅರಿತೆ ಕವಿತೆ ನೆನಿಯೇ ಮತ್ತೊಮ್ಮೆ ನನ್ನ ಬಾರೆ ನನ್ನ ನೆಚ್ಚಿನ ಸ್ನೇಹಿತೆ ಮನಸೊಳಗೆ ಮಾಧುರಿಯಂತೆ...................

- ಚುಕ್ಕಿ

20 Jul 2017, 08:04 pm

ಅಂಜಿಕೆ ಏತಕ್ಕೋ

ಸಂತೆಯ ಬೀದಿಲಿ
ಗಾಜಿನ ಬಳೆ ಕಂಡೆ!!
ಕೊಳ್ಳುವ ಮನಸಿರುವಾಗ
ಅಂಜಿಕೆ ಏತಕ್ಕೋ!!

ಸಂಪಿಗೆ ಮರದಲ್ಲಿ
ಹೂಗಳ ಪರಿ ಕಂಡೆ!!
ಮುಡಿಯುವ ಮನಸಿರುವಾಗ
ಅಂಜಿಕೆ ಏತಕ್ಕೋ!!

ಬಾಳೆಯ ಬನದಲ್ಲಿ
ಬಾಳೆಯ ಕೊನೆ ಕಂಡೆ!!
ತಿನ್ನುವ ಮನ‌ಸಿರುವಾಗ
ಅಂಜಿಕೆ ಏತಕ್ಕೋ!!

ನನ್ನಯ ಎದುರಲ್ಲಿ
ನಿನ್ನನು ನಾ ಕಂಡೆ!!
ಮೆಚ್ಚುವ ಮನಸಿರುವಾಗ
ಅಂಜಿಕೆ ಏತಕ್ಕೋ!!

- ಪಿ.ಜಿ.ಜ್ಯೋತಿ

20 Jul 2017, 03:48 pm

ಅನಿಸಿಕೆ

ಸ್ನೇಹ ಕೆಟ್ಟದು ಬಯಸದು
ಪ್ರೀತಿ ಒಳ್ಳೆಯದನ್ನು ಅಳಿಸದು
ನೀತಿ ದಾರಿಯನ್ನು ತಪ್ಪಿಸದು
ನ್ಯಾಯ ದ್ವೇಷವನ್ನು ಸೃಷ್ಟಿಸದು

ಧರ್ಮ ಪಾಪವನ್ನು ನಡೆಸದು
ಅಜ್ಞಾನ ಮುಂದೆ ಸಾಗಿಸದು
ಸುಜ್ಞಾನ ಹಿಂದೆ ಉಳಿಸದು
ಆತ್ಮ ಹೀನವನ್ನು ಸ್ವೀಕರಿಸದು

ಮನಸ್ಸು ಹತೋಟಿಸದು
ಕಾಮ ಅವಿತಿಸದು
ಕ್ರೋಧ ಶಾಂತಿಯನ್ನು ಬಯಸದು
ಮಧ ದಾರಿಯನ್ನು ತೋರಿಸದು

ಮಾತ್ಸರ್ಯ ಏಳಿಗೆಯನ್ನು ಸಹಿಸದು
ಮೋಹ ಸಂತೋಷವನ್ನು ತರಿಸದು
ಲೋಭ ತೃಪ್ತಿಯನ್ನು ಕೂಡದು

ಹೆಣ್ಣು ಮೋಹವನ್ನು ತ್ಯಜಿಸದು
ಹೋಣ್ಣು ಆಸೆಯನ್ನು ತಿರಿಸದು
ಮಣ್ಣು ಬದುಕನ್ನು ನಿಲ್ಲಿಸಲು!

- MB

20 Jul 2017, 01:25 pm

ಕಾಣೋದಿಲ್ಲ , ಕಾಡೂದಿಲ್ಲ

ಕಾಣೋದಿಲ್ಲ , ಕಾಡೂದಿಲ್ಲ
ಕಣ್ಣು ಮುಚ್ಚಲು ನೀನೇ ಜಗವೆಲ್ಲ.
ನನ್ನ ಕಣ್ಣಿಗೂ, ನಿನ್ನ ನಗುವಿಗೂ
ಏನೊ ಅರಿಯದ ಅನುಬಂಧ
ಎಲ್ಲೂ ಕುಳಿತು ನೀ ನಗುತಿರಲು
ಕಣ್ಣಲ್ಲಿ ನಿನ್ನ ಬಿಂಭಗಳ ಸಾಲು.
ಸರಸ ವಿರಸ ಅರಿಯದ ಅದರ
ತುಸು ಪಾಠ ಹೇಳು ಬಾ
ರಸಿಕತೆಯ ಉದಯ ಮನದಲ್ಲಿ
ಈ ಬಾಳಲಿ ನೀ ಬಂದಾಗಿನಿಂದ
ತುಸು ನಾಚಿಕೆಯ ಬದಿಗೆ ಸರಿಸು
ಆಡೋಣ ಕೊಂಚ ಪ್ರೆಮದ ಆಟ.

- ಕುಮಾರ ಸಿದ್ದರಾಜ

20 Jul 2017, 01:10 pm

ಅವಿಶ್ರಾಂತ

ಅನುದಿನವು- ಅನುಕ್ಷಣವು
ಅವಿಶ್ರಾಂತ ಜೀವಿಗಳು ನಾವು
ಗಳಿಕೆಯೆಡೆಗೆ ನಮ್ಮ ಗಮನವು
ಸಂಬಂಧಗಳ ಸವಿಯ ಮರೆತಿರುವೆವು

ಮುಂಜಾನೆ ರವಿ ರಶ್ಮಿಯ
ಸವಿಯಲು ಸಮಯವಿಲ್ಲ
ಸಾಲು-ಸಾಲು ಸಾಗುವ ಬಾನಾಡಿಯ
ಸುಮಧುರ ಗಾನವ ಆಲಿಸಿಲ್ಲ

ನಿಸರ್ಗದ ಅರಿವು ನಮಗಿಲ್ಲ
ತರು-ಲತೆಗಳ ಚುಂಬನದ ಸವಿಯಿಲ್ಲ
ಸಿದ್ದ ವಸ್ತುಗಳೆ ಬಾಳಲ್ಲೆಲ್ಲ
ಮಾತೃ ವಾತ್ಸಲ್ಯವು ಕನಸಾಯಿತಲ್ಲ

ವಿದೇಶಿಯರ ಮೋಡಿಗೆ
ಮರುಳಾದೆವು
ಮಾತೃಭಾಷೆಯ ಪಾಲಿಗೆ
ನಾವೆ ಉರುಳಾದೆವು

ಆಂಗ್ಲಭಾಷೆಗೆ ಅಡಿಯಾಳಾದೆವು
ಆತ್ಮಸಾಕ್ಷಿಯ ಹಂತಕರು ನಾವು
ಜಪಿಸುವರು ಉದ್ದಾರದ ಮಂತ್ರ
ಅದು ಆಂಗ್ಲ ಭಾಷೆಯಿಂದ ಮಾತ್ರ

ಕನ್ನಡಾಂಬೆಯ ಮಡಿಲಲ್ಲಿ
ಕನ್ನಡವು ಸೊರಗಿಹುದು
ಪರಕೀಯತೆಯು ಪೌರುಷದಲಿ
ಆಡಂಬರದಿ ಮೆರೆಯುತಿಹುದು

ಭಾರತಾಂಬೆಗೆ ಜೈಕಾರ
ಕನ್ನಡಾಂಬೆಗೆ ಜೈಕಾರ
ಪರಕೀಯತೆಗೆ ಇರಲಿ
ನಮ್ಮ ದಿಕ್ಕಾರ.........

- ಶಕುಂತಲಾ

20 Jul 2017, 01:03 pm

ಎದ್ದೇಳು ಭಾರತೀಯ

ಎದ್ದೇಳು ಭಾರತೀಯ
ಮುನ್ನುಗ್ಗು ನೀ ಮಹನೀಯ!!
ಅಂಜಿಕೆಯ ಬಿಟ್ಟು ಗಂಡೆದೆಯ ತಟ್ಟಿ
ಎಳೆದೊಯ್ಯಿ ನಮ್ಮ ತೇರ!!

ಸಿಡಿಲನ್ನು ಹಸ್ತದಲ್ಲಿ ಹಿಡಿದು
ರಣರಂಗದಲ್ಲಿ ಶತ್ರುಗಳ ಸದೆ ಬಡಿದು!!
ಮುಗಿಲೆತ್ತರಕ್ಕೆ ತಲೆಯೆತ್ತಿ
ಹಾರಬಿಡು ಈ ನಮ್ಮ ನಾಡ ಧ್ವಜವ!!

ಗುಂಡಿಗೆಯ ಒಳಗಿನ ಬಿಸಿ ನೆತ್ತರು
ಹೊರ ಚಿಮ್ಮಿ ನರ ನಾಡಿ ತಲುಪುವಂತೆ!!
ಈ ದೇಶ ಪ್ರೇಮ ನಿನ್ನ ಒಳಗಿನಿಂದ
ಹರಿ ಬಿಡು ಎಲ್ಲರೊರಳಗೂ!!

ಈ ಜಾತಿ ಭಾವವನ್ನು ಸರಿಸಿ ದೂರಕ್ಕೆ
ನೀನಾಗು ಭಾರತೀಯ!!
ಈ ನಮ್ಮ ಬಾವುಟದ ತ್ರಿವರ್ಣದಲ್ಲಿ
ಇಹುದು ಎಲ್ಲರಿಗೂ ಸಮ ಪಾಲು!!

- ಪಿ.ಜಿ.ಜ್ಯೋತಿ

20 Jul 2017, 11:59 am

ಕಣ್ಣಲ್ಲೆ ಕೆತ್ತಿದ ಶಿಲ್ಪ

ಶಿಲ್ಪಿಯೊಬ್ಬನು ಕಣ್ಣಲ್ಲೇ ಕೆತ್ತಿದ
ಪ್ರೇಮದ ಶಿಲ್ಪ ನೀನು!!
ಹೋಗು ನಡೆ ಎಲ್ಲರ ಕಣ್ಣಿನಲ್ಲೂ
ಪ್ರೇಮದ ಭಾವ ತುಂಬು!!

ಕವಿಯೊಬ್ಬನು ಬರಹದಲ್ಲಿ
ನಿನಗೆ ಜೀವ ತಂದ!!
ಹೋಗು ನಡೆ‌ ಎಲ್ಲರ ಪ್ರೇಮದಲ್ಲೂ
ನೀನು ‌ಜೀವ ತುಂಬು!!

ನಾಟ್ಯಕಾರನೊಬ್ಬ ಕಲಿಸಿದ
ಹಾವ ಭಾವ ನಿನ್ನಲ್ಲಿ!!
ಹೋಗು ನಡೆ ಎಲ್ಲರ ಜೀವನದಲ್ಲೂ
ಹಾವ ಭಾವ ತುಂಬು!!

ಸಂಗೀತಗಾರನ ಹಾಡಿನ ಮೋಡಿಯ
ರಸಿಕತೆ ನೀನು!!
ಹೋಗು ನಡೆ ಎಲ್ಲರ ಹಾವ ಭಾವದಲ್ಲೂ
ರಸಿಕತೆ ತುಂಬು!!

ಚಿತ್ರಕಲಾಕಾರನ ಕುಂಚದಲ್ಲಿ ಮೂಡಿದ
ಬಣ್ಣದ ಕಲೆ ನೀನು!!
ಹೋಗು ನಡೆ ಎಲ್ಲರ ರಸಿರತೆಯಲ್ಲೂ
ಬಣ್ಣವನ್ನು ತುಂಬು!!

- ಪಿ.ಜಿ.ಜ್ಯೋತಿ

20 Jul 2017, 11:29 am

ನನ್ನ ತಾಯಿ

ದೇವತೆಯ ಸ್ವರೂಪಿ
ನೀನು ತಾಯಿ!!
ಮರು ಜನ್ಮದಲ್ಲೂ
ನೀನೇ ನನ್ನ ತಾಯಿ!!

ಹೊತ್ತು ಹೆತ್ತ ಕಂದನ
ಅಪ್ಪಿ ಮುದ್ದಿಸಿದವಳು!!
ಮೊಲೆ ಹಾಲನು ಉಣಿಸಿ
ಹಸಿವ ನೀಗಿಸಿದವಳು!!

ಮಾತೆ ಎಂದರೇ
ಮಮತೆಗೆ ಹೆಸರು!!
ಮಾತೆಯ ಮಡಿಲಲ್ಲಿ
ಕಂದನ ಉಸಿರು!!

ಹೊತ್ತವಳು ಇವಳು
ನನ್ನ ಹೆತ್ತವಳು ಇವಳು!!
ಮರು ಜನ್ಮದಲ್ಲೂ ಆಗಬೇಕು
ನೀನೇ ನನ್ನ ತಾಯಿ!!

- ಪಿ.ಜಿ.ಜ್ಯೋತಿ

20 Jul 2017, 10:50 am