ಹ್ರುದಯವೆಂಬ ದೇವಾಲಯಕ್ಕೆ.
ಮೆಟ್ಟಿಲುಗಳು ನಾನಾದೆ.
ನನ್ನ ಹ್ರುದಯದ ಬಡಿತದ ಶಬ್ದಗಳಿಗೆ
ಗುಡಿಗಂಟೆಯಿಂದ ಬರುವ ಸ್ವರ ನೀನಾದೆ.
ಹುಣ್ಣಿಮೆ ಚಂದಿರನಂತೆ ಹೊಳೆಯುವ ನಿನ್ನಯ ಮೊಗಕೆ ಸಿಂಧೂರ ತಿಲಕ ನಾನಾದೆ.
ನನ್ನಯ ಮನದಲ್ಲಿ ಹುಟ್ಟಿದ ಪ್ರೀತಿಯೆಂಬ ಮೊಳಕೆಗೆ ಜೀವವು ನೀನಾದೆ.
ಅದರ ಭಾವವು ನಿನ್ನದೆಂದೆ !!ಸ!!
ನಕ್ಷತ್ರದಂತೆ ಹೊಳೆಯುವ ನಿನ್ನಯ ಕಣ್ಣಿನ ರೆಪ್ಪೆಗಳಿಗೆ ಕಾಡಿಗೆ ಎಂಬ ವರ ನಾನಾದೆ.
ಅಧ್ಬುತ ಕಣ್ಣಿಗೆ ಕುಕ್ಕುವಂತಹ ಶಿಲೆ ನೀನಾದೆ
ಅದನ್ನು ಕೆತ್ತಿದ ಶಿಲ್ಪಿ ನಾನಾದೆ !!ಸ !!
ನನ್ನಯ ಜೀವನದಲ್ಲಿ ಹಂತ ಹಂತವಾಗಿ ಮೇಲೇರಲು ಬೆಂಗಾವಲು ನೀನಾದೆ.
ನಿನ್ನ ಸರ್ವಸ್ವವನ್ನು ನನಗಾಗಿ ಧಾರೆ ಎರೆದೆ.
ನಿನ್ನ ಆಸೆಯನ್ನು ಪೂರೈಸಲು ನಿನ್ನ ಬಾಳಿನ ಬೆಳದಿಂಗಳ ಬೆಳಕು ನಾನಾದೆ.
ನಮ್ಮಿಬ್ಬರ ಜೀವನವೆಂಬ ಪಯಣಕ್ಕೆ ಹ್ರುದಯವೆಂಬ ಅರಮನೆಗೆ ಅದರಲ್ಲಿ ಅಡಗಿರುವ ನಮ್ಮಿಬ್ಬರ ಹ್ರುದಯದ ಮಿಡಿತವೆಂಬ ಮಿಲನಕ್ಕೆ ಸದಾ ನಾನು
ನೀನು ಅದಕ್ಕೆ ಚಿರರುಣಿಯಾಗಿ ಜೀವಿಸೋಣ ನನ್ನಯ ಮನವೇ ಸದಾ..ಸದಾ.ಸದಾ
ಹಳೆಯ ನೆನಪುಗಳ ಸರಮಾಲೆ,
ಆ ಕನಸಿನ ತಿಜೋರಿಯಲ್ಲಿದೆ.
ಆ ತಿಜೋರಿಯ ಕೀಲಿಕೈ, ಬೆಳದಿಂಗಳಿನೊಡೆಯ
ಚಂದಿರನ ಬಳಿ ಇದೆ.
ಅವನ ಕಿಸೆಗೆ ಕೈ ಹಾಕಿ ಎತ್ತಿಕೋ ಮನವೇ.
ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.
ಏಕೆಂದರೆ,
ಅವನು ನಮ್ಮೆಲ್ಲರ
ಮುದ್ದಿನ ಚಂದಮಾಮ...
...ಕನಸಿನೂರಿನ ಪಯಣಿಗ
ಶಿವಾನಂದ.ಆರ್ ನಲ್ಲ ಶಿವು
ಮುಷ್ಟಿಯಷ್ಟಗಲದ ಹೃದಯಕೆ ಸತ್ತಾಗ
ಮೂರು ಇಡಿ ಮಣ್ಣನ್ನು ಹಾಕಿ ಮುಚ್ಚಿದರು
ಆದರೆ
ಅವಳು ಮಾತ್ರ ಅರೆಕ್ಷಣವೂ ಯೋಚಿಸದೆ
ಪ್ರೀತಿ ಮತ್ತು ನಂಬಿಕೆಯ
ಒಡನಾಡಿಯಾಗಿದ್ದ ಆ ಹೃದಯಕೆ ನೋವ ತಂದಿಟ್ಟು
ನನ್ನ ಬಿಟ್ಟು ಹೊರಟೇ ಹೋದಳು
ನನ್ನ ಮನದಲ್ಲಿ ಹಚ್ಚಳಿಯದ
ನಂಬಿಕೆಯ ಪಾಠ ಕಲಿಸಿದ ಗುರುವಾದಳು.
ಕನಸಿನ ಹುಡುಗಿಯಾಗಿ..?
"ಅನಾಮಿಕನೊಬ್ಬನ ನೋವಿನ ಮಾತು"
.
...ನಲ್ಲ ಶಿವು ಶಿವಾನಂದ ಆರ್
ನೀ ನನ್ನೆದುರು ಬಂದ ಆ ಕ್ಷಣ
ಕೆಲ ಕಾಲ ಕೆದಕುವ ನೆನಪುಗಳಿಗೆ
ಪಾತರಗಿತ್ತಿಯ ಬಣ್ಣಗಳಿಂದ
ಓಕುಳಿಯಾಟ ಆಡಿಸಿ
ಒಂದು ಕ್ಷಣ ಭೂಮಿಯ ನಿಲ್ಲಿಸಿ
ನಿನ್ನ ಮುದ್ದಾಡುವಾಸೆಯಾಯ್ತು ಕಣೇ
ಆದರೆ
ತಕ್ಷಣವೇ ನಿನ್ನ ಕೈಯಲ್ಲಿದ್ದ ಮದುವೆಯ
ಆಮಂತ್ರಣ ಪತ್ರಿಕೆ ನೋಡಿದೊಡನೆಯೇ
ನನ್ನುಸಿರೆ ಸ್ಥಬ್ದವಾಯಿತು
ನನ್ನ ಮನಸ್ಸು ಸಹ ಮರುನುಡಿಯದೆ
ನಿಶ್ಯಬ್ಧವಾಯಿತು ಪೂರ್ಣವಾಗಿ...
.
ನಲ್ಲ ಶಿವು ಶಿವಾನಂದ ಆರ್