Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಾಳ ಪಂಜರ

ಬಾಳ ಪಂಜರದಲ್ಲಿ
ಒಂಟಿ ಹಕ್ಕಿಯ ಹಾಗೆ
ಬಂಧಿತ ವಾಯಿತೇ
ಈ ನನ್ನ ಬದುಕು!!

ನನ್ನವರು ಯಾರಿಲ್ಲ
ಕೂಗಿದರೂ ಕೇಳಲ್ಲ
ಕೊರಗೂ ಧನಿಯೇ
ಇಂದು ಮೂಕಾಯಿತೇ!!

ನೆರೆಯವರೂ ಏಕಿಲ್ಲ
ಸೆರೆಯೇ ಗತಿ ಆಯಿತಲ್ಲ
ಹಿತ ನೀಡುವ ಮನಸು
ಯಾರದೂ ಅಲ್ಲ!!

ಸುಖವಾಗಿ ನಾನಿದ್ದೆ
ಯಾಕಾಗಿ ಹೀಗಾದೆ
ಬಾಳ ಪಂಜರದಿ ನಾ
ಬಂಧಿ ಜೀವವಾದೆ!!

- ಪಿ.ಜಿ.ಜ್ಯೋತಿ

21 Jul 2017, 03:18 pm

ಪಂದ್ಯ

ಸೋತವನು ಯಾರೋ
ಇಲ್ಲಿ ಗೆದ್ದವನು ಯಾರೋ!!
ಬದುಕೆಂಬ ಪಂದ್ಯ ಮುಗಿಸಿ
ಎದ್ದು ನಡೆದವನು ಯಾರೋ!!

ಬದುಕೆಂಬ ಪಂದ್ಯದ
ಆಟಗಾರನು ಯಾರೋ!!
ಏಳು ಬೀಳು ಎಂಬ ಆಟ
ಆಡಿ ಮುಗಿಸಿದವನು ಯಾರೋ!!

ಸೋಲು ಎಂಬ ಭಯದಲ್ಲಿ
ಬಿದ್ದವನು ಯಾರೋ!!
ಈ ಬದುಕು ಎಂಬ ಪಂದ್ಯದಲ್ಲಿ
ಗೆದ್ದವನು ಯಾರೋ!!

- ಪಿ.ಜಿ.ಜ್ಯೋತಿ

21 Jul 2017, 03:14 pm

ನನ್ನ ಬಾಳಿನ ಸಂಗಾತಿ

(ಬಾಳ ಸಂಗಾತಿ )

ಹ್ರುದಯವೆಂಬ‌ ದೇವಾಲಯಕ್ಕೆ.
ಮೆಟ್ಟಿಲುಗಳು‌ ನಾನಾದೆ.
ನನ್ನ ಹ್ರುದಯದ‌ ಬಡಿತದ ಶಬ್ದಗಳಿಗೆ
ಗುಡಿಗಂಟೆಯಿಂದ ಬರುವ ಸ್ವರ ನೀನಾದೆ.

ಹುಣ್ಣಿಮೆ ಚಂದಿರನಂತೆ ಹೊಳೆಯುವ ನಿನ್ನಯ ಮೊಗಕೆ ಸಿಂಧೂರ ತಿಲಕ ನಾನಾದೆ.
ನನ್ನಯ ಮನದಲ್ಲಿ ಹುಟ್ಟಿದ ಪ್ರೀತಿಯೆಂಬ ಮೊಳಕೆಗೆ ಜೀವವು ನೀನಾದೆ.
ಅದರ ಭಾವವು ನಿನ್ನದೆಂದೆ !!ಸ!!

ನಕ್ಷತ್ರದಂತೆ ಹೊಳೆಯುವ ನಿನ್ನಯ ಕಣ್ಣಿನ ರೆಪ್ಪೆಗಳಿಗೆ ಕಾಡಿಗೆ ಎಂಬ ವರ ನಾನಾದೆ.
ಅಧ್ಬುತ ಕಣ್ಣಿಗೆ ಕುಕ್ಕುವಂತಹ ಶಿಲೆ ನೀನಾದೆ
ಅದನ್ನು ಕೆತ್ತಿದ ಶಿಲ್ಪಿ ನಾನಾದೆ !!ಸ !!

ನನ್ನಯ ಜೀವನದಲ್ಲಿ ಹಂತ ಹಂತವಾಗಿ ಮೇಲೇರಲು ಬೆಂಗಾವಲು ನೀನಾದೆ.
ನಿನ್ನ ಸರ್ವಸ್ವವನ್ನು ನನಗಾಗಿ ಧಾರೆ ಎರೆದೆ.
ನಿನ್ನ ಆಸೆಯನ್ನು ಪೂರೈಸಲು ನಿನ್ನ ಬಾಳಿನ ಬೆಳದಿಂಗಳ ಬೆಳಕು ನಾನಾದೆ.

ನಮ್ಮಿಬ್ಬರ ಜೀವನವೆಂಬ ಪಯಣಕ್ಕೆ ಹ್ರುದಯವೆಂಬ ಅರಮನೆಗೆ ಅದರಲ್ಲಿ ಅಡಗಿರುವ ನಮ್ಮಿಬ್ಬರ ಹ್ರುದಯದ ಮಿಡಿತವೆಂಬ ಮಿಲನಕ್ಕೆ ಸದಾ ನಾನು
ನೀನು ಅದಕ್ಕೆ ಚಿರರುಣಿಯಾಗಿ ಜೀವಿಸೋಣ ನನ್ನಯ ಮನವೇ ಸದಾ..ಸದಾ.ಸದಾ

( ಸಂತೋಷ್ / ಜೀತು )

- ಸಂತೋಷ್//ಜೀತು

21 Jul 2017, 02:37 pm

ಆಶ್ರಯ

ಅಲೆದು-ಅಲೆದು
ದಣಿದಿರುವೆ ನಾನು
ಆಶ್ರಯ ನೀಡಿ
ಆದರಿಸುವೆಯ ನೀನು!

ಕಾರಿರುಳು ಕವಿದಿರಲು
ಬಾಳಲ್ಲಿ
ಬೆಳ್ಕಿಂಡಿಯೊಂದು ಕಾಣಲು
ಎದುರಲ್ಲಿ!

ನೂರಾರು ಕಲ್ಪನೆಯು
ಮೂಡಲು ಮನದಲ್ಲಿ
ಕಣ್ಣಿಗೆ ಕಂಡದ್ದು ಕೈಗೆಟುಕದೆ
ಕಣ್ಮರೆಯಾಗುತಿಹುದು ನೋಡಿಲ್ಲಿ!

ಪ್ರಯತ್ನಕ್ಕೆ-ಫಲವಿಲ್ಲದಾಗ
ಪೂಜಾರಿಯ ಮೊರೆಹೋಗುವರಲ್ಲ
ದೋಷಗಳ ಸುರಿಮಳೆ ಸುರಿಸುವರಾಗ
ಪರಿಹಾರಕ್ಕಾಗಿ ಹಣ ತೆರಬೇಕಲ್ಲ!

ಬಯಸಿದ್ದೆಲ್ಲ ಬಳಿಬಂದರೆ
ನಿನ್ನ ನಂಬುವರೆಲ್ಲ
ಬಾಳಲ್ಲಿ ವಿಘ್ನಗಳೆದುರಾದರೆ
ಆರವರ ಬುಟ್ಟಿಗೆ ಬೀಳುವರೆಲ್ಲ!

ಸಹನೆಯಿಂದ ಕಾಯೋಣ.......
ಉತ್ತಮ ಫಲವ ಕಾಣೋಣ.....


ಶಾರಧ

- ಶಕುಂತಲಾ

21 Jul 2017, 01:18 pm

ವೀಣೆಯ ನಾಧ

ಮುಂಜಾನೆ ಮಂಜಿನ‌
ಹನಿಗಳ ತುಂತುರು
ಚುಂಬಿಸಿತು ವೀಣೆಯ
ತಂತಿಯ ಸ್ವರಗಳ!!

ಮಧ್ಯಾಹ್ನ ದುಂಬಿಯ
ನಾಧದ ಝೇಂಕಾರ
ಬೆರೆಯಿತು ವೀಣೆಯ
ಸ್ವರಗಳ‌ ಜೊತೆಯಲಿ!!

ಸಂಜೆಯಲಿ ಪಡುವಣ
ಸೂರ್ಯನ ಕಿರಣವು
ಸ್ಪರ್ಶಿಸಲು ಸುಮಧುರ
ನಾಧದ ಕಂಪನ!!

ರಾತ್ರಿಯಲಿ ಚಂದ್ರನ
ಬೆಳಕಿನ‌ ತಂಪಲಿ
ಹೆಚ್ಚಿಸಿತು ವೀಣೆಯು
ನಾಧದ ಇಂಪನು!!

- ಪಿ.ಜಿ.ಜ್ಯೋತಿ

21 Jul 2017, 10:41 am

ಮಂಜಿನ ಪ್ರೀತಿ

ಮಂಜಿನಂತೆ ಹೊಳೆದು ಬಂದೆ
ತಂದು ಸುರಿದೆ ಪ್ರೀತಿಯ ತಂಪನು!!
ಪ್ರೀತಿಯ ಹೊದಿಕೆ ಹೊದ್ದು ನಿಂತೆ
ನಾ ಮರೆತು ಮಂಜಿನ ಗುಣವನು!!

ಕೊರೆವ ಚಳಿಯ ತಾಳಲಾರೆನು
ನಿನ್ನ ಅಗಲಿ ನಾ ಬಾಳಲಾರೆನು!!
ಮೈ ಕೊಚ್ಚಾದರೂ ಸರಿ ಎಂದು
ನಿನ್ನ ಸನಿಹ ಬಯಸಿ ನಾ ಇದ್ದೆ!!

ನಿನ್ನ ಸ್ನೇಹದ ಸಲಿಗೆಯನ್ನು
ಅರಿತು ಸಂಭ್ರಮಿಸುವು ಗಳಿಗೆಯು!!
ಕರಗಿಹೋಯ್ತು ಮರಳದಂತೆ
ನಾ ಹೊದ್ದ ಮಂಜಿನ ಪ್ರೀತಿಯು!!

- ಪಿ.ಜಿ.ಜ್ಯೋತಿ

21 Jul 2017, 10:11 am

"ಬಿಟ್ಟು ಹೋದ ನೆನಪು".

ಗೆಳತಿ/ಯ,

ನಾ ಹೇಗೆ ಹೊಗಳಲಿ ನಿನ್ನ,
ಏನೆಂದು ಬರೆಯಲಿ ಕವನ,
ಕಗ್ಗತ್ತಲ ಜಗದ ಮೌನ,
ಪಟ ಪಟ ಸುರಿವ ಮಳೆಯ ಗಾನ,
ನಿದ್ರೆ ಬಾರದೆ ನನಗೀದಿನ,
ನೆನಪಾಗಿದೆ ನೀ ನನಗಾಗಿ
'ಬಿಟ್ಟು ಹೋದ ಆ ನೆನಪು'ಗಳ
ನೆನಪಿನ ಧ್ಯಾನ..

spb..@#

- Spb...@#

21 Jul 2017, 02:23 am

ಚಂದಮಾಮ

ಹಳೆಯ ನೆನಪುಗಳ ಸರಮಾಲೆ,
ಆ ಕನಸಿನ ತಿಜೋರಿಯಲ್ಲಿದೆ.
ಆ ತಿಜೋರಿಯ ಕೀಲಿಕೈ, ಬೆಳದಿಂಗಳಿನೊಡೆಯ
ಚಂದಿರನ ಬಳಿ ಇದೆ.
ಅವನ ಕಿಸೆಗೆ ಕೈ ಹಾಕಿ ಎತ್ತಿಕೋ ಮನವೇ.
ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.
ಏಕೆಂದರೆ,
ಅವನು ನಮ್ಮೆಲ್ಲರ
ಮುದ್ದಿನ ಚಂದಮಾಮ...
...ಕನಸಿನೂರಿನ ಪಯಣಿಗ
ಶಿವಾನಂದ.ಆರ್ ನಲ್ಲ ಶಿವು

- shivanandarnallashivu

21 Jul 2017, 01:45 am

ಪ್ರೀತಿ ಮತ್ತು ನಂಬಿಕೆ

ಮುಷ್ಟಿಯಷ್ಟಗಲದ ಹೃದಯಕೆ ಸತ್ತಾಗ
ಮೂರು ಇಡಿ ಮಣ್ಣನ್ನು ಹಾಕಿ ಮುಚ್ಚಿದರು
ಆದರೆ
ಅವಳು ಮಾತ್ರ ಅರೆಕ್ಷಣವೂ ಯೋಚಿಸದೆ
ಪ್ರೀತಿ ಮತ್ತು ನಂಬಿಕೆಯ
ಒಡನಾಡಿಯಾಗಿದ್ದ ಆ ಹೃದಯಕೆ ನೋವ ತಂದಿಟ್ಟು
ನನ್ನ ಬಿಟ್ಟು ಹೊರಟೇ ಹೋದಳು
ನನ್ನ ಮನದಲ್ಲಿ ಹಚ್ಚಳಿಯದ
ನಂಬಿಕೆಯ ಪಾಠ ಕಲಿಸಿದ ಗುರುವಾದಳು.
ಕನಸಿನ ಹುಡುಗಿಯಾಗಿ..?
"ಅನಾಮಿಕನೊಬ್ಬನ ನೋವಿನ ಮಾತು"
.
...ನಲ್ಲ ಶಿವು ಶಿವಾನಂದ ಆರ್

- shivanandarnallashivu

21 Jul 2017, 01:36 am

ಆಮಂತ್ರಣ ಪತ್ರಿಕೆ

ನೀ ನನ್ನೆದುರು ಬಂದ ಆ ಕ್ಷಣ
ಕೆಲ ಕಾಲ ಕೆದಕುವ ನೆನಪುಗಳಿಗೆ
ಪಾತರಗಿತ್ತಿಯ ಬಣ್ಣಗಳಿಂದ
ಓಕುಳಿಯಾಟ ಆಡಿಸಿ
ಒಂದು ಕ್ಷಣ ಭೂಮಿಯ ನಿಲ್ಲಿಸಿ
ನಿನ್ನ ಮುದ್ದಾಡುವಾಸೆಯಾಯ್ತು ಕಣೇ
ಆದರೆ
ತಕ್ಷಣವೇ ನಿನ್ನ ಕೈಯಲ್ಲಿದ್ದ ಮದುವೆಯ
ಆಮಂತ್ರಣ ಪತ್ರಿಕೆ ನೋಡಿದೊಡನೆಯೇ
ನನ್ನುಸಿರೆ ಸ್ಥಬ್ದವಾಯಿತು
ನನ್ನ ಮನಸ್ಸು ಸಹ ಮರುನುಡಿಯದೆ
ನಿಶ್ಯಬ್ಧವಾಯಿತು ಪೂರ್ಣವಾಗಿ...
.
ನಲ್ಲ ಶಿವು ಶಿವಾನಂದ ಆರ್

- shivanandarnallashivu

21 Jul 2017, 01:30 am