ತೊಟ್ಟ ಬಟ್ಟೆಯಲ್ಲೆ ಮುಂಜಾನೆ , ಎದ್ದು ಅಪ್ಪನ ಹಿಂದೆ ಓಡುತ್ತಿದ್ದೆ
ಗದ್ದೆಯ ದಂಡೆಯ ನಡುವೆ, ಹುಲ್ಲು ಬೆಳೆದ ತೋಟದ ಒಳಗೆ...ಪಕ್ಕದಲ್ಲಿ ಹರಿಯುವ ತೋಡಿನ ಕಡೆಗೆ....ಅಲ್ಲೆ ತಣ್ಣೀರಲ್ಲಿ ಮಿಂದೆದ್ದು , ಬಾಲೆ ಎಲೆಯ ಮೇಲಿಟ್ಟ ಪೂಜಾ ಕಾರ್ಯಕ್ಕೆ ಕೈ ಮುಗಿದು.. ಹಣೆಗೆ ಗಂಧವನಿಟ್ಟ ಅಪ್ಪ...ಕೈ ಮುಗಿದು ನೀರ ಮೇಲೆ ಅದನ ತೇಲಿ ಬಿಟ್ಟ....!!
ತಿರುಗಿ ನೋಡದೆ ಸುರಿದ ಮಳೆಗೆ ಮೈಯೊಡ್ಡಿ ಮನೆ ಸೇರಿದಾಗ...ಅಮ್ಮ ರೆಡಿಯಾಗಿದ್ರು ಕಷಾಯ ಹಿಡಿದು..!!
ಕಹಿ ಎಂದೂ ಬೊಬ್ಬೆ ಹೊಡೆಯುವಂತಿಲ್ಲ ಕುಡಿಯ ಬೇಕು ಕಣ್ಣು ಮುಚ್ಚಿ...ಆ ಮೇಲೆ ಹೊಟ್ಟೆ .. ಉಪ್ಪಿಟ್ಟು, ಪುಂಡಿ ಗಸಿ... ಮನೆಯೊಳಗೆ ಎಲ್ಲ ಮುಗಿದ ಮೇಲೆ ಇಲ್ಲೆನಿದೆ ನಿನಗೆ ನಡಿ ದೇವರ ಸನ್ನಿಧಿಗೆ ಎಂದು ಸುಮ್ಮನೆ ನಡೆದು ಹೋಗುತ್ತಿದ್ದೆವು ದೇವಾಸ್ಥಾನಕ್ಕೆ...
ಓ.....ದೇವರೆ ಬರಬಾರದೆ ಮತ್ತೊಮ್ಮೆ ಆ ಬಾಲ್ಯದ ದಿನಗಳು....
ದರಿದ್ರ ಬದುಕಿನಲಿ ಬ್ಯೂಸಿಯಾದ ಕೆಲಸದಲ್ಲಿ ದೇವಾಲಯಕ್ಕೆ ಇರಲಿ ಮನೆಗೂ ಹೋಗಲಾಗಲಿಲ್ಲವಲ್ಲ....!!
ಅವ್ವಾ,ಶುಭ- ಸಮಾರಂಭಗಳಲ್ಲಿ
ಅಕ್ಕ- ಪಕ್ಕದವರು
ನಮ್ಮನ್ನು ಜಾಸ್ತಿ ಕರೆಯಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!
ನಮ್ಮ ಕೆಲಸ,ನಮ್ಮ ಪಾಲಿಗೆ
ನಾವೇ ಅಂತ್,ಬದುಕಿದರೂ
ಜನರು ಆಡಿಕೊಳ್ಳತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!
ನಮ್ಮ ಜೀವನಶೈಲಿ ಸಹಿಸದವರು
ನಾವು ತಪ್ಪು ಮಾಡದಿದ್ದರೂ
ನಮ್ಮನ್ನೇ ಅಪರಾಧಿ ಸ್ಥಾನದಲ್ಲಿರುಸುತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!
ನಾವೆಲ್ಲರೂ ಬದಲಾಗಬೇಕು
ಊರು ಅಭಿವೃದ್ಧಿಯಾಗಬೇಕೇಂದ್ರೇ
ಅದನೆಲ್ಲಾ,ನಿಮ್ಮೂರಲ್ಲಿ ನಡೆಸಿ ಅಂತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!
ಮಗನಿಗೆ ಉತ್ತರಿಸಿದ ತಾಯಿ,
ಹೌದಪ್ಪಾ,ಎಲ್ಲರೂ ಹೊಟ್ಟೆ- ಬಟ್ಟೆಗಾಗಿ
ಅರಸೀ ಬಂದವರೆ..
ಹೊನ್ನು,ಮಣ್ಣು, ಹೆಣ್ಣಿನಾಸೆಗಾಗಿ
ಒಂದೆಡೆ ನೆಲೆಸಿ ನಿಂತವರೇ.
ಅವರವರ ಮೂಲ ಆ " ಹ್ಯೆಳುವ" ಗೆ ಮಾತ್ರ ಗೊತ್ತು!
ಮತಯಾಚನೆಗೆ ಬರುವಾಗ
ಸಹಾಯವನ್ನು ಕೇಳುವಾಗ
ಸೇವೆಯನ್ನು ಪಡೆಯುವಾಗ
" ಊರು ಬಿಟ್ಟು ಬಂದವ್ರು" ಅಂದವರೇ
ಅದನ್ನೆಲ್ಲಾ ಮರೆತು ಬರ್ತಾರಲ್ಲ ಅದೇ ದೊಡ್ಡದು!
ಎಲ್ಲರೂ ಅವರವರ ಮೂಲನೆಲೆಗೆ ಹೋದ್ರೆ
ಇಲ್ಲಿ ಇರುವವರಾದರೂ ಯಾರು..?
' ಊರೆಂದು' ಕರೆಯಿಸಿಕೊಳ್ಳುವುದು ಹೇಗೆ?
ಒಂದೇ ಕೈಯಿಂದ ಚಪ್ಪಾಳೆ ತಟ್ಟುವವರಿಗೆ
ಇವನ್ನೆಲ್ಲಾ ಕೇಳೆಂದಳು ತಾಯಿ, ಮಗನಿಗೆ..!
ಬಯಸದೆ ಸಿಕ್ಕಿತು ಈ ಕಾಯ
ಅದರೊಳಗೊಂದು ಮನಸೆಂಬ ಮಾಯ
ಕನಸ ಕಂಡು ಕುಪ್ಪಳಿಸುವುದು ಇಲ್ಲದೆ ಲಯ
ಕಣ್ಣೀರ ಸುರಿಸುವುದು ಮಾಡಿಗೊಂಡು ಗಾಯ
ಮಾನವಜನ್ಮ ಸಿಗಲು ಮಾಡಿರಬೇಕಂತೆ ಪುಣ್ಯ
ಎದುರಿಸಿ ಗೆಲಬೇಕಂತೆ ಬಂದರು ಎಂಥದೆ ಕಷ್ಟ ಕಾರ್ಪಣ್ಯ
ಬದುಕಿ ತೋರಿಸಬೇಕು ಕಾಯವಾಗಬೇಕಾದರೆ ಸಾರ್ಥಕ
ನೊಂದು ನೋಯಿಸಿ ಬದುಕಿದರೆ ಜೀವನವು ನಿರರ್ಥಕ
ಮನಸ ಸಂತಸದಿಂದಿರಿಸುವುದಂತೆ ನಿಜ ಬದುಕು
ನಗುವುದೇಗೆ ಮನಸೆ ಮುರಿದು ಆದರೆ ಒಡಕು
ಮತ್ತೆ ಹೇಳಿತು ನೊಂದ ಮನಸು ನಗುವಿಗೆ ಹುಡುಕು ದಾರಿ
ಸಂತಸದಿಂದಿರಲು ಪ್ರಯತ್ನಿಸುತಿರಲೆ ಬೇಕು ಬಾರಿ ಬಾರಿ
ಅವನು ಪಡುವ ನೋವಿನಿಂದ ಆತನನ್ನು ದೂರ ಎಳೆದಷ್ಟು ಆತ ಆ ಯಾತನೆಗೆ ಹತ್ತಿರವಾಗುತ್ತನೆ..ನನ್ನ ಶತ ಪ್ರಯತ್ನ ಸೋಲುತಿದೆ
ಆತನ ನೋವನ್ನು ನಾನು ಕರಗಿಸಿಕೊಳ್ಳಲೂ ಆಗುತ್ತಿಲ್ಲ
ಅವನ,ನೋವನ್ನು ಅವನು ಹೇಗೆ ಜೀರ್ಣಿಸಿಕೊಳ್ತನೋ ಎನ್ನುವುದು ನನ್ನ ಪ್ರತಿ ನಿಮಿಷದ ಕೊರಗು
ಮಾಡಿದಳು ನನ್ನ ಜೊತೆ ಕುಶಲೋಪರಿ,
ಒಣ ಹವೆಯ ಹವಾಮಾನದಲ್ಲೂ
ಆದಳು ಕಣ್ಣೀರ ರುವಾರಿ,
ಹೃದಯವ ಚೂರು ಮಾಡಿದಳು
ಕೊಟ್ಟು ಪ್ರೀತಿಗೆ ಸುಪಾರಿ,
ಕಾರಣ ಕೇಳಿದರೆ ಅವಳಲ್ಲಿಂದ ಪರಾರಿ,
ಆದರೂ ಅವಳೇ ನನ್ನ ಬಂಗಾರಿ,
ಬಿಂಕದ ಸಿಂಗಾರಿ,