Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಳೆದೊದ ನೆನಪುಗಳು

ತೊಟ್ಟ ಬಟ್ಟೆಯಲ್ಲೆ ಮುಂಜಾನೆ , ಎದ್ದು ಅಪ್ಪನ ಹಿಂದೆ ಓಡುತ್ತಿದ್ದೆ
ಗದ್ದೆಯ ದಂಡೆಯ ನಡುವೆ, ಹುಲ್ಲು ಬೆಳೆದ ತೋಟದ ಒಳಗೆ...ಪಕ್ಕದಲ್ಲಿ ಹರಿಯುವ ತೋಡಿನ ಕಡೆಗೆ....ಅಲ್ಲೆ ತಣ್ಣೀರಲ್ಲಿ ಮಿಂದೆದ್ದು , ಬಾಲೆ ಎಲೆಯ ಮೇಲಿಟ್ಟ ಪೂಜಾ ಕಾರ್ಯಕ್ಕೆ ಕೈ ಮುಗಿದು.. ಹಣೆಗೆ ಗಂಧವನಿಟ್ಟ ಅಪ್ಪ...ಕೈ ಮುಗಿದು ನೀರ ಮೇಲೆ ಅದನ ತೇಲಿ ಬಿಟ್ಟ....!!
ತಿರುಗಿ ನೋಡದೆ ಸುರಿದ ಮಳೆಗೆ ಮೈಯೊಡ್ಡಿ ಮನೆ ಸೇರಿದಾಗ...ಅಮ್ಮ ರೆಡಿಯಾಗಿದ್ರು ಕಷಾಯ ಹಿಡಿದು..!!
ಕಹಿ ಎಂದೂ ಬೊಬ್ಬೆ ಹೊಡೆಯುವಂತಿಲ್ಲ ಕುಡಿಯ ಬೇಕು ಕಣ್ಣು ಮುಚ್ಚಿ...ಆ ಮೇಲೆ ಹೊಟ್ಟೆ .. ಉಪ್ಪಿಟ್ಟು, ಪುಂಡಿ ಗಸಿ... ಮನೆಯೊಳಗೆ ಎಲ್ಲ ಮುಗಿದ ಮೇಲೆ ಇಲ್ಲೆನಿದೆ ನಿನಗೆ ನಡಿ ದೇವರ ಸನ್ನಿಧಿಗೆ ಎಂದು ಸುಮ್ಮನೆ ನಡೆದು ಹೋಗುತ್ತಿದ್ದೆವು ದೇವಾಸ್ಥಾನಕ್ಕೆ...
ಓ.....ದೇವರೆ ಬರಬಾರದೆ ಮತ್ತೊಮ್ಮೆ ಆ ಬಾಲ್ಯದ ದಿನಗಳು....
ದರಿದ್ರ ಬದುಕಿನಲಿ ಬ್ಯೂಸಿಯಾದ ಕೆಲಸದಲ್ಲಿ ದೇವಾಲಯಕ್ಕೆ ಇರಲಿ ಮನೆಗೂ ಹೋಗಲಾಗಲಿಲ್ಲವಲ್ಲ....!!

- ಎಸ್.ಬಿ

22 Jul 2017, 11:22 pm

ಸ್ವಲ್ಪ ಹೊತ್ತು

ಇನ್ನು ಸ್ವಲ್ಪ ಹೊತ್ತು ಇರು ನನ್ನ ಮುಂದೆಯೇ
ನಿನ್ನ ಕಣ್ಣ ತುಂಬಾ ನೋಡಿ ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇನೆ..............

ಮನಸು ನಿನ್ನ ಹುಡುಕಿದಾಗ ಕಣ್ಣಿಂದ ತೋರಲು ನನಗಿನಿತು ಸುಲಭವಾಗುವುದು ಚೆಲುವಾದ ನಿನ್ನ ನಗುವನ್ನು...............

ಎಷ್ಟೊತ್ತು ಕಣ್ಣ ರೆಪ್ಪೆ ಕೆಳಗಿಳಿಸದೆ ನೋಡಿದರೂ
ಎದೆಬಡಿತ ಎಡಬಿಡದೆ ಕೇಳುವುದು ನನ್ನ ಮತ್ತೆ ಮತ್ತೆ ನಿನ್ನ ತೋರಿಸೆಂದು..............

ನನ್ನ ಬಿಟ್ಟು ಹೋಗುವೇನೆಂದರೆ ನೀನು ತುಂಬಿರುವ ನನ್ನ ಮನಸು ನಿನಗನುಮತಿ ನೀಡುವುದಿಲ್ಲ..............

- ಚುಕ್ಕಿ

22 Jul 2017, 06:39 pm

ಅಪರೂಪದ ಅರಗಿಣಿ

ಅಪರೂಪದ ಅರಗಿಣಿ
ಮೂರೋತ್ತು ಅಳುತ್ತಿದೆ.
ಅಂತಸ್ತಿನ ಆಸೆ
ನನಗಿಲ್ಲ ಅಂತಿದೆ.

ಬಂಗಾರದ ಪಂಜರ
ತನಗೇತಕೆ ಅನ್ನುತ್ತಿದೆ.
ಅದರೊಳಗೆ ಕುಳಿತರೆ
ಉಸಿರಾಡುತ್ತಿಲ್ಲ ಎನ್ನುತ್ತಿದೆ.

ಆಕಾಶದೆತ್ತರಕ್ಕೆ ಆರುವ
ಆಸೆ ಅರಗಿಣಿಗೆ ಆಗಿದೆ.
ಸಂಗಡಿಗರೊಡನೆ ಆಟವಾಡುವ
ಬಯಕೆಯಾಗಿದೆ.

ವಸಂತದ ಚಿಗುರು
ಸವಿಯಲು ಸಿದ್ಧವಾಗಿದೆ.
ಸ್ವಾತಂತ್ರ್ಯ ಕೊಡಲೆಂದು
ಮಾಲೀಕನ ಬೇಡುತ್ತಿದೆ.

ಆಸೆ ಹಿಡೇರದ ಅಪರೂಪದ
ಅರಗಿಣಿ ತನ್ನ ಕೊನೆಯುಸಿರೆಳೆದು
ಆ ಬಂಗಾರದ ಪಂಜರಕ್ಕೆ ಬಲಿಯಾಗಿ ಹೋಗಿದೆ.

- ಚುಕ್ಕಿ

22 Jul 2017, 04:41 pm

ನೀ ಬರುವ ಮುನ್ನ

ನೀ ಬರುವ ಮುನ್ನ ನಿನ್ನ ನೆನಪು
ಗಾಳಿಯಲ್ಲಿ ಸುಗಂಧವಾಗಿ ಸೇರಿತು ನನ್ನ...........

ನಾ ನಡೆದು ಬಂದ ದಾರಿಯಲ್ಲಿನ ನನ್ನ ಹೆಜ್ಜೆಗುರುತು ಕಾದು ನೋಡುತ್ತೆ ನಿನ್ನ
ಪಾದವನ್ನು ತನ್ನಲ್ಲಿ ಲೀನವಾಗಿಸಿಕೊಳ್ಳಬೇಕೆಂದು...............

ನಡೆದು ಬಾರೋ ಒಲವಿನ ಗೆಳೆಯ ನನ್ನ
ನೆನಪಿನ ಮನಸಿಂದ ನಿನ್ನೊ ನೋಡುವ ಕಣ್ಣಿನ ಕರೆಗೆ ಕಾಣಿಕೆಯಾಗಿ ಇನ್ನೆಂದು ತೊರೆದು ಹೋಗದಂತೆ...............

- ಚುಕ್ಕಿ

22 Jul 2017, 04:21 pm

ಹಾಡು ಬಾ ಕೋಗಿಲೆ

ಹಾಡು ಬಾ ನೀ ಹಾಡು ಬಾ
ಕರುನಾಡ ಕೋಗಿಲೆ!!
ಅಂತರಂಗವು ನುಡಿದ
ಸವಿಮಾತಿನ ನವ ಪರಿಗಳ!!

ಹಾಡು ಬಾ ನೀ ಹಾಡು ಬಾ
ಕರುನಾಡ ಕೋಗಿಲೆ!!
ನಿಸರ್ಗದಲ್ಲಿ ಸ್ವರ್ಗವಿದೋ
ಈ ನಾಡಿದು ಕೋಗಿಲೆ!!

ಕತ್ತಲೆಯ ಕಾನನದಿ
ಹಾಡುತಿರುವ ಕೋಗಿಲೇ!!
ಮೂಡಣದಿ ತೆರೆದಿರುವುದು
ಬೆಳಕಿನ ಬಾಗಿಲು!!

ಎಚ್ಚರ ಇರುವಾಗ
ಭಯವೇತಕೆ ಕೋಗಿಲೆ!!
ಮೆಚ್ಚುಗೆಯ ಕರುನಾಡಿಗೆ
ನಾವೆಲ್ಲರೂ ಮಕ್ಕಳೇ!!

- ಪಿ.ಜಿ.ಜ್ಯೋತಿ

22 Jul 2017, 11:15 am

" ಊರು ಬಿಟ್ಟು ಬಂದವರು..! "

ಅವ್ವಾ,ಶುಭ- ಸಮಾರಂಭಗಳಲ್ಲಿ
ಅಕ್ಕ- ಪಕ್ಕದವರು
ನಮ್ಮನ್ನು ಜಾಸ್ತಿ ಕರೆಯಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಮ್ಮ ಕೆಲಸ,ನಮ್ಮ ಪಾಲಿಗೆ
ನಾವೇ ಅಂತ್,ಬದುಕಿದರೂ
ಜನರು ಆಡಿಕೊಳ್ಳತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಮ್ಮ ಜೀವನಶೈಲಿ ಸಹಿಸದವರು
ನಾವು ತಪ್ಪು ಮಾಡದಿದ್ದರೂ
ನಮ್ಮನ್ನೇ ಅಪರಾಧಿ ಸ್ಥಾನದಲ್ಲಿರುಸುತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಾವೆಲ್ಲರೂ ಬದಲಾಗಬೇಕು
ಊರು ಅಭಿವೃದ್ಧಿಯಾಗಬೇಕೇಂದ್ರೇ
ಅದನೆಲ್ಲಾ,ನಿಮ್ಮೂರಲ್ಲಿ ನಡೆಸಿ ಅಂತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ಮಗನಿಗೆ ಉತ್ತರಿಸಿದ ತಾಯಿ,
ಹೌದಪ್ಪಾ,ಎಲ್ಲರೂ ಹೊಟ್ಟೆ- ಬಟ್ಟೆಗಾಗಿ
ಅರಸೀ ಬಂದವರೆ..
ಹೊನ್ನು,ಮಣ್ಣು, ಹೆಣ್ಣಿನಾಸೆಗಾಗಿ
ಒಂದೆಡೆ ನೆಲೆಸಿ ನಿಂತವರೇ.
ಅವರವರ ಮೂಲ ಆ " ಹ್ಯೆಳುವ" ಗೆ ಮಾತ್ರ ಗೊತ್ತು!

ಮತಯಾಚನೆಗೆ ಬರುವಾಗ
ಸಹಾಯವನ್ನು ಕೇಳುವಾಗ
ಸೇವೆಯನ್ನು ಪಡೆಯುವಾಗ
" ಊರು ಬಿಟ್ಟು ಬಂದವ್ರು" ಅಂದವರೇ
ಅದನ್ನೆಲ್ಲಾ ಮರೆತು ಬರ್ತಾರಲ್ಲ ಅದೇ ದೊಡ್ಡದು!

ಎಲ್ಲರೂ ಅವರವರ ಮೂಲನೆಲೆಗೆ ಹೋದ್ರೆ
ಇಲ್ಲಿ ಇರುವವರಾದರೂ ಯಾರು..?
' ಊರೆಂದು' ಕರೆಯಿಸಿಕೊಳ್ಳುವುದು ಹೇಗೆ?
ಒಂದೇ ಕೈಯಿಂದ ಚಪ್ಪಾಳೆ ತಟ್ಟುವವರಿಗೆ
ಇವನ್ನೆಲ್ಲಾ ಕೇಳೆಂದಳು ತಾಯಿ, ಮಗನಿಗೆ..!

- ಅಶೋಕ.ಜಿ.ಕಮತಗಿ ( ಶಾಂತಿಪ್ರಿಯ)

- "ಶಾಂತಿಪ್ರಿಯ"

22 Jul 2017, 10:03 am

ಬಯಸದೆ ಸಿಕ್ಕಿತು ಈ ಕಾಯ...

ಬಯಸದೆ ಸಿಕ್ಕಿತು ಈ ಕಾಯ
ಅದರೊಳಗೊಂದು ಮನಸೆಂಬ ಮಾಯ
ಕನಸ ಕಂಡು ಕುಪ್ಪಳಿಸುವುದು‌ ಇಲ್ಲದೆ ಲಯ
ಕಣ್ಣೀರ‌ ಸುರಿಸುವುದು ಮಾಡಿಗೊಂಡು ಗಾಯ

ಮಾನವ‌ಜನ್ಮ ಸಿಗಲು‌ ಮಾಡಿರಬೇಕಂತೆ ಪುಣ್ಯ
ಎದುರಿಸಿ ಗೆಲಬೇಕಂತೆ ಬಂದರು ಎಂಥದೆ ಕಷ್ಟ ಕಾರ್ಪಣ್ಯ
ಬದುಕಿ ತೋರಿಸಬೇಕು ಕಾಯವಾಗಬೇಕಾದರೆ ಸಾರ್ಥಕ
ನೊಂದು ನೋಯಿಸಿ‌ ಬದುಕಿದರೆ ಜೀವನವು ನಿರರ್ಥಕ

ಮನಸ ಸಂತಸದಿಂದಿರಿಸುವುದಂತೆ ನಿಜ ಬದುಕು
ನಗುವುದೇಗೆ ಮನಸೆ ಮುರಿದು ಆದರೆ ಒಡಕು
ಮತ್ತೆ ಹೇಳಿತು ನೊಂದ ಮನಸು ನಗುವಿಗೆ ಹುಡುಕು ದಾರಿ
ಸಂತಸದಿಂದಿರಲು ಪ್ರಯತ್ನಿಸುತಿರಲೆ ಬೇಕು ಬಾರಿ ಬಾರಿ

- ಶ್ರೀಕಾವ್ಯ

22 Jul 2017, 09:39 am

ನನ್ನ ಜೀವನ

ಬರೆದೆನೊಂದು ಪುಟ್ಟ ಕವಿತೆ
ಅದೊಂದು ಹಚ್ಚಳಿಯದ ನೆನಪುಗಳ ಸಂತೆ

ಓರೆಗಚ್ಚಿ ಬಿಟ್ಟ ಕನಸ ಹೆಕ್ಕಿ-ಹೆಕ್ಕಿ ತಂದ ನೆನಪು
ಇರುಳ ಮಾಮ ಆ ಕನಸಿಗೆಲ್ಲಾ ಹೆಚ್ಚಿಸಿದನು ಬೆಳ್ಳಿ ಹೊಳಪು

ಶುಭ ವೇಳೆಯಲಿ ನಡೆದ ಘಟನೆ ಮರೆವ ಘಳಿಗೆ
ಆದರೇಕೋ ಮನದ ಮೇಲೆ
ಮಳೆಯ ಸುರಿಸುವಾಸೆ ಆ ಕಾರ್ಮುಗಿಲಿಗೆ

ಕಹಿ ಘಳಿಗೆಯಲಿ ನಡೆದ ಮಾತೊಂದು
ಅದಕ್ಕೆ ಜೊತೆಯಾದ ಮಾತುಗಳು ನೂರೊಂದು
ಅವರ ಮಾತಿನ ವೀಣೆಯಲಿ
ಸಿಗಲಿಲ್ಲ ಇವರ ಮಾತಿಗೆ ಮನ್ನಣೆ

ಜೀವಗಳೆರೆಡೂ ಮುಖ್ಯ ಎಲ್ಲರ ಬಾಳಲ್ಲೂ
ಅದನುಳಿಸಲಿಕ್ಕಾಗಿ ಪ್ರತಿದಿನ ಹೋರಾಟ ಅವರವರ ಮನದ ಮೂಲೆಯಲ್ಲಿ
ಇವರಿರ್ವರ ಪ್ರೀತಿಗೆ ಮಾತ್ರ ಎಂದಿಗೂ ಮೋಸವಿಲ್ಲ

ಮನವ ಕಲಕುವಾಸೆಯಿಲ್ಲ ಇಲ್ಲಾರಿಗೂ
ತುಸು ಕೋಪ, ಈ ರೀತಿ ಮಾಡಿತು ಎರಡು ಮನಗಳಿಗೂ ಒಂದು ಮನ ಅದ ಸಂತೈಸಲೂ ಬಂದು ಬರಿಗೈಲಿ ಹೋಯಿತು

ಕೆಣಕದಿರು ಮನವೇ ಹಿಂದಿನ ಕಹಿಘಟನೆಗಳ ಅದರಿಂದ ಪ್ರಯೋಜನವಾದದ್ದು ಯಾರಿಗೂ ಇಲ್ಲ ತೆಗೆದು ನೋಡು ಇತಿಹಾಸದ ಪುಟಗಳ

ಮನವ ಕೆಡಿಸಿ ಸಂಬಂಧಗಳ ನಡುವೆ ಗೋಡೆ ಕಟ್ಟುವ ಬದಲು, ಸಂಬಂಧಗಳ ನಡುವೆ (ನಂಬಿಕೆಗೆ ಅರ್ಹರಾದವರಿಗೆ ಮಾತ್ರ) ಸೇತುವೆಯ ಕಟ್ಟು ಹೆಚ್ಚುವುದಾಗ ಪ್ರೀತಿಯ ಅಮಲು...

ಮುಗಿಯಿತು ನೆನಪುಗಳ ಸಂತೆಯ ಹೋರಣ
ಆ ನೆನಪಿನ ಮಾತಿಗೆ ಹುಡುಕಬೇಡಿ ಕಾರಣ
ಇರುವಷ್ಟು ದಿನ ಕಹಿ ಘಟನೆ ಮರೆತು ಹ್ಯಾಪಿಯಾಗಿರೋಣ
ಕನಸಿನೂರಿನ ಪಯಣಿಗ ಶಿವಾನಂದ.ಆರ್ ನಲ್ಲ ಶಿವು

- shivanandarnallashivu

22 Jul 2017, 08:29 am

ಅವನ ಯಾತನೆ

ಅವನು ಪಡುವ ನೋವಿನಿಂದ ಆತನನ್ನು ದೂರ ಎಳೆದಷ್ಟು ಆತ ಆ ಯಾತನೆಗೆ ಹತ್ತಿರವಾಗುತ್ತನೆ..ನನ್ನ ಶತ ಪ್ರಯತ್ನ ಸೋಲುತಿದೆ
ಆತನ ನೋವನ್ನು ನಾನು ಕರಗಿಸಿಕೊಳ್ಳಲೂ ಆಗುತ್ತಿಲ್ಲ
ಅವನ,ನೋವನ್ನು ಅವನು ಹೇಗೆ ಜೀರ್ಣಿಸಿಕೊಳ್ತನೋ ಎನ್ನುವುದು ನನ್ನ ಪ್ರತಿ ನಿಮಿಷದ ಕೊರಗು

- ಎಸ್.ಬಿ

21 Jul 2017, 11:26 pm

"ಬಿನ್ನಾಣದ ವೈಯ್ಯಾರಿ".

ಮಾಡಿದಳು ನನ್ನ ಜೊತೆ ಕುಶಲೋಪರಿ,
ಒಣ ಹವೆಯ ಹವಾಮಾನದಲ್ಲೂ
ಆದಳು ಕಣ್ಣೀರ ರುವಾರಿ,
ಹೃದಯವ ಚೂರು ಮಾಡಿದಳು
ಕೊಟ್ಟು ಪ್ರೀತಿಗೆ ಸುಪಾರಿ,
ಕಾರಣ ಕೇಳಿದರೆ ಅವಳಲ್ಲಿಂದ ಪರಾರಿ,
ಆದರೂ ಅವಳೇ ನನ್ನ ಬಂಗಾರಿ,
ಬಿಂಕದ ಸಿಂಗಾರಿ,

ಈ ಬಿನ್ನಾಣದ ವೈಯ್ಯಾರಿ...

Spb..@#

- Spb...@#

21 Jul 2017, 03:26 pm