Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜನರ ಹಸಿವು

ಕಾಮಧೇನು ಧರೆಗೆ ಬಂದರೂ
ಜನರ ಹಸಿವು ನೀಗದು!!
ಅವರ ಮನದ ದಾಹದ ಬುತ್ತಿ
ಎಂದು ಖಾಲಿ ಆಗದು!!

ಆಸೆ ಎಂಬ ಕೂಸು ಹೊತ್ತು
ಸಾಗುವವರೇ ಎಲ್ಲರೂ!!
ಕೂಸು ಬೆಳೆದು ದೊಡ್ಡದಾದರೂ
ಮರಳಿ ಆಸೆ ಪಡುವರು!!

ಏನಿದು ಯಾವ ಮೋಹದ
ಹಸಿವು ಜ‌ನರ‌ನು ಸುತ್ತಿಕೊಂಡಿದೆ!!
ಸಾವನ್ನು ಬೆನ್ನಿಗೆ ಕಟ್ಟಿಕೊಂಡರೂ
ಏಕೆ ಈ ಭಾವ ಅವರನು ಮುತ್ತಿದೆ!!

- ಪಿ.ಜಿ.ಜ್ಯೋತಿ

24 Jul 2017, 11:20 am

ಸಂತಸದ ಗಾಳಿ

ಸಂತಸದ ಗಾಳಿ ಬೀಸುವ ಗಳಿಗೆ
ದುಃಖವೆಲ್ಲ ತೂರಿ ಹೋಗಲಿ ದೂರಕೆ!!
ಮನದ ದುಗುಡದ ಮುಖವಾಡವು
ತಾ ಕಳಚಿ ಉರುಳಲಿ ನೆಲಕ್ಕೆ!!

ವಿಸ್ವಾಸದ ಸೇತುವೆಯ ಮೇಲೆ
ಸಾಗಿ ಮುನ್ನಡೆಯಲಿ ಬದುಕಿನ ನಡಿಗೆ!!
ನಂಬಿಕೆಯೇ ಆಧಾರ ಸ್ತಂಭವಾಗಿ
ಕೈ ಹಿಡಿದು ನಡೆಸಲೀ ಸದಾ ಹೀಗೆ!!

ಮನಕೆ ಹಿತ ಎನಿಸುವ ಬದುಕನು ಕಟ್ಟಿ
ಬಾಳ ಬಯಸುವ ಕನಸು ನನಸಾಗಲಿ!!
ಮುಗಿಲ ಎತ್ತರಕ್ಕೆ ಬೆಳೆದು ಬಳಲದೇ
ಎದ್ದು ನಿಲ್ಲುವ ಬದುಕು ಹಿತ ನೀಡಲಿ!!

- ಪಿ.ಜಿ.ಜ್ಯೋತಿ

24 Jul 2017, 11:03 am

ರಾತ್ರಿಯಲಿ ನನ್ನವಳು

ರಾತ್ರಿಯು ಕಳೆಯುತಲಿ
ಕನಸುಗಳು ಕರಗುತಿವೆ!!
ಚಂದಿರನೇ ನೀ ನೋಡಿ
ನಗುತಲಿ ಇರುವೆಯಾ!!

ಕನಸಿನಲಿ ನನ್ನವಳ
ಕಾಣುವುದೇ ನೆಮ್ಮದಿಯು!!
ಬೆಳಕು ಹರಿದರೆ ಅವಳು
ನಿನ್ನ ಸೇರುವಳು!!

ಬೇಸರವು ದಿನವೆಲ್ಲ
ಗೋಚರಿಸಿ ನನ್ನ ಒಳಗೆ!!
ಮತ್ತೆ ನೆನೆಯಲೇ ಅವಳ
ರಾತ್ರಿಯ ಕನಸಿನಲ್ಲಿ!!

ಕನಸಿನಲಿ ಬಂದವಳು
ಹಿತ ಉಣಿಸಿ ಹೋಗುವಳು!!
ಹಗಲಿನಲಿ ತಣಿಸು ಬಾರೇ
ನೀ ವಿರಹದ ಹಸಿವ!!

- ಪಿ.ಜಿ.ಜ್ಯೋತಿ

24 Jul 2017, 10:46 am

ಮುಂಜಾನೆ

ಮೂಡಣದಿ ಮುಂಜಾನೆ
ಹೊಂಬೆಳಕ‌‌ ಆರತಿ!!
ಪಡುವಣದಿ ಕಡಲಿನಲಿ
ಅಂಬಿಗನು ಸಾರತಿ!!

ತೆಂಕಣದಿ ಓಡುತಿರುವ
ಮೋಡಗಳ ಸಾಲಿದೆ!!
ಬಡಗಣದಿ ಹಾರುತಿರುವ
ಹಕ್ಕಿಗಳ ಗುಂಪಿದೆ!!

ಎಲ್ಲೆಲ್ಲೂ ಸೌಂದರ್ಯವು
ಕಣ್ಣ ತುಂಬಿಕೊಂಡಿದೆ!!
ಅದ ನೋಡುತಲಿ ಕವಿಯ
ಮನ ಎಲ್ಲಿಗೋ ಓಡಿದೆ!!

- ಪಿ.ಜಿ.ಜ್ಯೋತಿ

24 Jul 2017, 10:16 am

ಕಡಲ ತೀರದ ಮುಗಿಲು.

ಕೋಗಿಲೆಯು ನೀನು ನಿನ್ನ ಸುಮಧುರ ಕಂಠಸಿರಿಯು ನಾನು.
ದೋಣಿ ನೀನು ಅದರ ಉಟ್ಟು ನಾನು,
ನೆನಪುಗಳ ಸಾಗರ ನೀ ಅದನ್ನಡಗಿಸಿರುವ ಮನಸೆಂಬ ಸರೋವರ ನಾನು,
ಸಾಗಲಿ ನಮ್ಮಿಬ್ಬರ ನೆನಪಿನ ಪಯಣ ಎಂದೂ ಹೀಗೆ,
ಮುಗಿಯದ ಸಪ್ತಸಾಗರ ಕಡಲ ತೀರದ
ಮುಗಿಲ ಹಾಗೆ..

..Spb..@#

- Spb...@#

24 Jul 2017, 09:12 am

ಅವಳು ಅಳುವ ಮುನ್ನ

ಅವಳು‌ ಅಳುವ ಮುನ್ನ
ನಾ ಅವಳ ‌ನಗಿಸಲೇ ಬೇಕು!!
ಕಣ್ಣ ಹನಿಗಳ ಮೇಲೂ ಅವಳ
ಖುಷಿಯ ಬರೆಯಲೇ ಬೇಕು!!

ಇರುಳಿನಲ್ಲಿ ಭಯವ ತರುವ
ಆ ಕಪ್ಪು ಛಾಯೆ ಅಳಿಸ ಬೇಕು!!
ದೀಪದಂತೆ ಅವಳ‌ ಬದುಕಿಗೆ
ಬೆಳಕನು ನಾ ತೋರಬೇಕು!!

ಹಗಲಿನಲ್ಲಿ ನೆರಳಿನಂತೆ
ಅವಳಿಗೆ ಅಂಟಿ‌ ನಡೆಯಬೇಕು!!
ಒಂಟಿ ತನದ ದುಗುಡ ಅಳಿಸಿ
ಹಿತವನು ನಾ ನೀಡಬೇಕು!!

- ಪಿ.ಜಿ.ಜ್ಯೋತಿ

24 Jul 2017, 08:54 am

ಭಾರತೀ

ತಾನಿಂದು ತನ್ನವರ ನೋವೆಲ್ಲಾ
ತನ್ನದೆಂದು ತಿಳಿದು ನರಳುತಿಹಳು
ಈ ಭಾರತಿ ಮೂಕಳಾಗಿ.

ಎಲ್ಲ ಭಾಷೆಗಳಿಗೆ ಏಕ ಲೇಖನವಾಗಿ
ಸಂಪ್ರದಾಯಗಳಿಗೆ ಸಾಮ್ರಾಗ್ನಿಯಾಗಿ
ಉಡುಪುಗಳಲ್ಲಿ ಹೊಸದಾದ ಹೊಳಪಾಗಿ
ಕಂಗೊಳಿಸುತ್ತಿರುವಳು.

ತನ್ನ ವಿಶಾಲವಾದ ಒಡಲಲ್ಲಿ ಬಂದವರ ಬರುವವರ ಅಸ್ತಿತ್ವಕ್ಕೆ ಒಂದು ಹೆಸರು
ಕೊಡುವಳು ಭಾರತಿಯರೆಂದು.

ಎಷ್ಟು ಉದಾರಿ ಆದರೂ ಇವಳ ಒಡಲಳಲ್ಲಿ
ಕಿಚ್ಚು ಹಚ್ಚುವವರು ಮಾತ್ರ ತಾನೆತ್ತ ಮಕ್ಕಳೇ.
ಸ್ವದೇಶವ ತೊರೆದು ವಿದೇಶದಲ್ಲಿ ಕಾಲಿಡುವ ಆಸೆ ಇವರಿಗೆ ಅವರಿಟ್ಟ ಎಂಜಲುಂಡು ಕಾಲು ತೊಳೆಯುವಾಸೆ.

ತಾಯಿಯಾ ಕಣ್ಣೀರೊರಿಸಿ ತಾವು ಕಲಿತ ವಿದ್ಯೆಯನ್ನು ತನ್ನ ದೇಶದ ಹಿರಿಮೆಯ ಹೆಚ್ಚಿಸಲು
ಬಳಸದೆ ವಿದ್ಯಾವಂತರ ನೆಲವೆಂದಿಗೂ ಪರಕೀಯ ಪಾದಗಳಿಗೆಂದು ಪರೆದಾಡುವರು ಈ ದೇಶ ದ್ರೋಹಿಗಳು ನಮ್ಮವರೆಂಬ ಮುಸುಕನ್ನು ಹಾಕಿಕೊಂಡು.

ಇವೆಲ್ಲವೂ ತಿಳಿಯ ನಮ್ಮ ಭಾರತಿ ಸ್ವಾರ್ಥವಿಲ್ಲದ
ಅಕಾಶದಂತೆ ಎಲ್ಲರಿಗೂ ಜೀವ ಹೋಗುವವರೆಗೂ ತಂಗುದಾಣವಾಗುವಳು ಅವಳಲ್ಲಿನ ಮಮತೆಯಂಚುತ ಮಾತೆಯಾಗಿ ಮಕ್ಕಳಿಗೆಲ್ಲಾ.

ಭಾರತಿ ಭಾವಿ ಭವಿಷ್ಯದ ಸಾರಥಿ ಸಾಹಿತ್ಯ ಸಂಪತ್ತಿನ ತುಂಬ ತುಂಬಿರುವ ದಿವ್ಯಹಾರತಿ
ನೋಮೊಸ್ತುತಿ ನೋಮೊಸ್ತುತಿ ಭಾರತಿ.

- ಚುಕ್ಕಿ

24 Jul 2017, 07:54 am

ಮಳೆಗೆ ಮನುಷ್ಯನ ಆಲಾಪವೇನ!

ಕಣ್ಣೀರ ಇಟ್ಟರೇನ
ಪನ್ನೀರ ಮಡಿಯಾದರೇನ
ಎಲ್ಲಾ ದೇವರ ಪೂಜಿಸಿದರೇನ
ವರುಣ ಧರೆಗಿಳಿದು ಬರುವನೇನ

ನಾವು ಬೇಡಂದರ ಬಿಡತಾನೇನ
ಬಾ ಎಂದರ ಬರತಾನೇನ
ಬದುಕಿಗೆ ಅವನೆ ಆಧಾರಲ್ವೇನ
ಅವನಿಲ್ಲೆಂದರ ನಾವು ಎಲ್ಲಿತನ ಇರತಿವಿಯೇನ

ಅವನು ಬಂದರ ಹರ್ಷವೇನ
ಅತಿಯಾದರೆ ತೆಗಳಿಕೆಯೇನ
ಎಲ್ಲರಿಗೂ ಅವನು ಇಲ್ಲಾಂದರ ಕಷ್ಟಾನ
ಅವನು ಆಗತಾನೋ ಇಲ್ಲೋ ಅಂತ ಸಂಶೇನ

ಮಳೆರಾಯ ಮಾತ್ರ ಯಾರದ ಕೈಯಾಗ ಇರದವನ!
ನರಜೀವ ಅವನಿಗಾಗಿ ಕೋರಗುವದೇನ
ಧರೆಗೆ ಬಾ ಎಂದು ಹಂಬಲಿಸುವದೇನ
ಹಿರೇಉಳ್ಳಿಗೇರಿ ಕರೆಮ್ಮ ನಿನೇ ಕಾಪಾಡು ನಮ್ಮ ಇನ್ನ!

- MB

23 Jul 2017, 11:36 pm

ಕಣ್ಣಲ್ಲಿ ನಿನ್ನ ಬಿಂಬ

ಕಣ್ಣಲ್ಲಿ ಕಣ್ಣಿಟ್ಟು ನೋಡುತಿರು ನೀನು
ನನ್ನ ಹಿಡಿ ಜೀವನ ನಲಿವು ನೋವು ಎಲ್ಲವೂ ಕಾಣುತ್ತೆ ನಾನು ಕಂಡ ರೀತಿಯಲ್ಲೇ ನಿನಗೆ ಗೆಳೆಯಾ..................

ನೋಡುತ್ತಾ ಕೂತರೆ ನೀನು ನಿನ್ನ ರೂಪವು ಅದರಲ್ಲೇ ಅಡಗಿದೆಯೆಂದು ತಿಳಿಯುತ್ತದೆ ಆ ಕ್ಷಣದಲ್ಲಿ ಗಮನಿಸು ನನ್ನ ನ ಯನಗಳು ನಗುತ್ತಿರುತ್ತವೆ ನಿನ್ನ ನೋಡಿ ನೀನೇ ನನ್ನ ನಗುವೆಂದು...................

- ಚುಕ್ಕಿ

23 Jul 2017, 08:05 pm

"ಒಡೆದು ಚೂರಾದ ದರ್ಪಣ"...

ಗೆಳತಿ/ಯ...

ಕದ್ದುಮುಚ್ಚಿದ ನೋಟದ ಹೋರಾಟಕ್ಕೆ
ನೀ ಕೊಟ್ಟೆ ನ್ಯಾಯ,
ಅಲ್ಲಿಂದ ಶುರು ನಮ್ಮ ಪ್ರೀತಿಯ ವ್ಯವಸಾಯ,
ಬೆಳೆದು ನಿಂತ ಪೈರಂತೆ ನಮ್ಮಿಬ್ಬರ ನೆನಪುಗಳ ಪರಿಚಯ.

ಎಲ್ಲೇ ನೋಡು ಹಳೆಯ ನೆನಪಿನ ಗುರುತು,
ಬಾಳೋದೇಗೆ ಎಲ್ಲಾ ಮರೆತು,
ಬಯಸದೆ ಇತ್ತು ಎಲ್ಲಾ ಅಂದು,
ಬೇಡಿದರೂ ಏನೂ ಇಲ್ಲ ಇಂದು.

ಈಜುವುದೇಗೆ ಹರಿಯೊ ನದಿಯ,
ನಾ ಹೇಗೆ ಸಾಗಿಸಲಿ ನೀನಿಲ್ಲದ ಬದುಕಿನ ಬಂಡಿಯ,
ಮರೆತ್ತಿಲ್ಲ ನನಗಾಗಿ ನೀ ಕೊಟ್ಟ
ನಿನ್ನ ಈ ಪ್ರೀತಿಯ.

ನನ್ನ ಮನದ ಬೇಸರದ ಈ ದಿನ,
ಊಹಿಸಲಾರೆ ನೀ ನನ್ನ ಬಿಟ್ಟು ಹೋದ
ಆ ಕ್ಷಣ,
ಕಾಡುತಿದೆ ನನ್ನ ಮನದಲ್ಲಿ ಇಂದಿಗೂ ಅದೇ ಪ್ರತಿ ದಿನ, ಪ್ರತಿ ಕ್ಷಣ,
ಗೆಳತಿ ನೀನಿಲ್ಲದ ನನ್ನ ಈ ಜೀವನ ,

"ಒಡೆದು ಚೂರಾದ ದರ್ಪಣ"...

Spb..@#

- Spb...@#

23 Jul 2017, 05:58 pm