Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಟ್ಟು ಹಬ್ಬದ ಸಂದೇಶ

ನೀನು‌‌ ಭುವಿಗೆ ಸ್ಪರ್ಶಿಸಿದ,ನಿನ್ನ ಇಂಪನದ ಮೊದಲ ಆ ದಿನ..
ಅಂದಿನಿಂದ ‌ನನ್ನ ಪರಿಚಯದವರೆಗು ತಿಳಿಯದು ನಿನ್ನ ಜೀವನದ ಕ್ಷಣ..
ಪರಿಚಯವಾದ ಮೇಲೆ ಮೊದಲೆ ಸ್ನೇಹಿತ(ನಾ/ಳಾ)ಗಿ ಸಿಗಬಾರದಿತ್ತ ಅನ್ನುವ ನನ್ನ ಮನ..
ನಾ‌ ನೋಡಿದಾಗಲೆಲ್ಲಾ ನಿನ್ನ ಮೊಗದಲ್ಲಿರುವ ನಗುವೆಂಬ ಆಭರಣ..
ನಿನ್ನ ಮನದಲ್ಲಿರುವ ಮಗುವಿನಂತಹ ಅಂತಃಕರಣ ..
ಯಾವಾಗಲೂ ನಾ‌ ಆಶಿಸುವೆ ಸುಖ,ನಗು ಪ್ರೀತಿ ತುಂಬಿರಲಿ ನಿನ್ನೆಲ್ಲಾ ಮುಂದಿನ ಜೀವನದ ಕ್ಷಣ.

- ಗೌಡಕಲರ್ಪುಲ್

30 Jul 2017, 10:51 am

ನಿನ್ನ ನೆನಪೇ ನನ್ನುಸಿರು

ಹೇ ನಿನ್ನ ನೆನೆದು ನೆನೆದು ನಾ ಕಳೆದೆ ಈಗಾ
ನಿನ್ನ ನೆನಪೆ ನೆನಪು ನನ್ನೆದೆ  ಉಸಿರು ಬಡಿತದ್
ವೇಗ..ವೇಗದ ಓಟ ಕೊನೆವರೆಗು ಈಗಿಗ ಈನ್ನಿಗಾ.....
ಸರಳ ಬದುಕಿನಾ ಬದುಕ ಬಯಕೆಯಾ ಬಾಡಿತೋ..

ನನ್ನೊಲವೇ.. ನನ್ನೊಲವೇ

ಈಗಿಗಾ ಈಗಾ  ತಿಳಿತೋ ತಿಳಿಯದೋ
ದೂರಾ ದೂರ ಅನಿಸೋ ಹಾಗೆ ಏನೋ ಭಾವಭಾವ
ನನ್ನ  ಮನದ.ಮನೆಯಾ ಮನಸ್ಸಿನಲಿಗಾ
ಕಾಲಲ್ಲಿ ಮುರಿದೊದ ಮುಳ್ಳಿನ ತ್ರಾಸ
ಪ್ರಾಸಾ ಮುಡಿತೋ ನ
ನ್ನಲಿಗಾ ನನ್ನಲಿಗಾ...

ನನ್ನೊಡತಿ ...ನನ್ನೊಡತಿ ....

ಕಳೆದೊಗೋ ಆ ನಕ್ಷತ್ರವಾ ಎಣಿಕೆಯ  ಕಡೆಗಣಿಸೋದೆಗೆ
ಸೂತ್ತೋ ಸೂತ್ತೋ ಭೂಮಿಯ ಹಾಗೆ  ಚಂದ್ರನ ಮನೆಯ ಚಂದ್ರಿಕಾಳಾ ಕಂಡೆ 
ಕಡಲ ಕಡಲಲಿ ಕೂರೋ ಮುಂಚೆ ಕಳೆದೊದೇ ನಾನು ಕಳೆದೊದೆ ನಾನು..ಕಳೆದೊದೆ....

 ನನ್ನರಸಿ ..ನನ್ನರಸಿ....

ಬಂದನನದ ಬಳ್ಸೋ ನಿನ್ನ ತೋಳಲ್ಲಿ ಸೇರೋವಾಸೆ ..

ಆಸೆ ಆಸೆ ಅನ್ನೋ ಭಾಷೆಯ ಕಳೆದೊದಾ  ಮಾಹಾದಾಸೆ.. ಮಾಹಾದಾಸೆ..
ನಲಿವ ರಾತ್ರಿಯಾ ಕಳೆದ ಕಳೆವಾ ಶೂನ್ಯ ಕನಸಾ ಕನಸ
ಮಳೆ ಹನಿಯಾ ಹನಿಯಾ ಹನಿಗಮನ ಸುರಿದಿದೆ ಕಣ್ಣಂಚಲಿ ಕಣ್ಣಂಚಲಿ


ಓ ದೇವಾ .. ದೇವಾ ...ಯಾಕಿ ದೂರಾ .. ಯಾಕಿ..ನೋವ.

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

30 Jul 2017, 08:06 am

ಕವನ

ನಾವು ಜೀವನದಲ್ಲಿ ಒಂದೇ
ಜೋಕ್ ಗೆ ಪದೇ ಪದೇ
ನಗಲ್ಲ ಅಂದ್ಮೆಲೆ ಯಾಕ್ರಿ
ಒಂದೇ ನೋವಿಗೆ ಪದೇ ಪದೇ
ಅಳಬೇಕು



ಇದು ಮನದಾಳದ ಮಾತು

- Munna Rk

30 Jul 2017, 08:05 am

ಸವಿ ಸ್ನೇಹ

ಒಲವ ಸವಿ ಮುಂಜಾನೆಯಲಿ
ಕರಗುತಿಹ ಮಂಜು ನಾವಿಲ್ಲಿ,
ಸ್ನೇಹದ ಅಪ್ಪುಗೆಯಲಿ,
ಬಂಧನಗಳ ಶಾಖದಲಿ,
ಬಾಂಧವ್ಯಗಳ ಹೊಳಪಿನಲಿ,
ಪ್ರೀತಿಯ ಬೆಳಕಿನಲ್ಲಿ,
ಈ ಮುಂಜಾನೆಯ ತಂಪಿನಲಿ,
ಹಕ್ಕಿ-ಪಿಕ್ಕಿಗಳ ಕಂಠದ ಇಂಪಿನಲಿ,
ಮೆಲ್ಲನರಳಿದ ಮೊಗ್ಗುಗಳ ಕಂಪಿನಲಿ,
ಇವೆಲ್ಲ ಬಿಂಬಿಸುವ ಸ್ನೇಹ-ಪ್ರೀತಿಯೆ ತುಂಬಿದೆ ನಮ್ಮಲ್ಲಿ,
ಈ ಸ್ನೇಹವೆಂದು ಚಿರಕಾಲ ಉಳಿಯಲಿ...!

ಇಂತಿ ನಿಮ್ಮ ಗೆಳೆಯ ಮನೋಜ್

- manoj kumar

29 Jul 2017, 06:34 pm

ಅಪರೂಪ

ಏನ ಹೇಳಲಿ ಆ ಹೊಳಪ
ಅನಿಸುವುದು ವಿಭೂತಿ ಬಿಳಪ

ಬೆಳಗು ಜ್ಯೋತಿಯ ದೀಪ
ಎದೆ ಬೇಗೆ ಆರಿಸುವ ತಂಪ

ಕೆಂದುಟಿಯಲಿ ಮುಗಳ ನಗುವಿನ ನೆಪ
ಅದುವೇ ಆಕರ್ಷಣೆಯ ಮಂಟಪ

ಕಂಡಾಗ ಸ್ವರ್ಗದ ಪ್ರಸ್ತಾಪ
ಕಾಣದೆ ಇದ್ದಾಗ ಭಾವನೆಗಳ ಆಲಾಪ

ಗೆಳತಿ ಗೆಳತಿಯರ ಕಲಾಪ
ಎದ್ದು ಕಾಣುವುದು ಈ ಮುಖ ಒಂದೇ ಸಾಪ

ಅವಾಗ ಅವಾಗ ಉಕ್ಕುವುದು ಕೋಪ
ಬಿಟ್ಟು ಬಿಟ್ಟು ಕಾಣಿಸುವದಕಿರಬೇನೋ ಪಾಪ

ನೋಡಿದರು ನೋಡದಂತೆ ಮುಂಗೋಪ
ಅಂದು ಅದೆ ಸಮಾರೋಪ

ನಗುವಿಗೆ ಯಾಕೋ ಸಂತ್ತಾಪ
ಕಣ್ಣಲ್ಲೆ ಕಾಣುವುದು ಪ್ರೇಮದ ಮಾಪ

ಮನದಲಿ ಕಾಡುವದೆನೋ ನೆನಪ
ಅದಕ್ಕಾಗಿ ಇರಬೇಕೆನೋ ಹಪ ಹಪ

ಮಳೆ ಸುರಿದಂತೆ ಕನಸುಗಳು ತಪ ತಪ
ಬೆಳೆಯುವುದೊಂದು ಪ್ರೀತಿ ಗೋಪುರದ ವೃಕ್ಷ ಕಲ್ಪ

ಜನ ಭಯಕ್ಕೆ ಮಾತು ಬರದೆ ಗಪ್ಪ ಚಿಪ್ಪ
ಅರಳುವ ಒಲವಿಗೆ ಇದೊಂದು ವಿಧಿಶಾಪ

ಎಂದು ಮಾಸದಿರಲಿ ನಗುವಿನ ರೂಪ
ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದ ಪಡೆದ ನೀ ಅಪರೂಪ

- MB

29 Jul 2017, 03:52 pm

ಬರಗಾಲ

ಎಲ್ಲೆಲ್ಲೂ ಹರಡಿದೆಯೋ
ಬರಗಾಲ
ನಮಗೆ ಇನ್ನೆಲ್ಲಿದೆಯೋ
ಉಳಿಗಾಲ

ತಿನ್ನಲು ಮೇವಿಲ್ಲ
ದಾಹ ನೀಗಲು ಜಲವಿಲ್ಲ
ಮಳೆಯು ಮರೀಚಿಕೆಯಾಯಿತಲ್ಲ
ನರರಿಂದ ನಮಗೆ ಉಳಿಗಾಲವಿಲ್ಲ

ಸಹಪಾಠಿಗಳೆಲ್ಲ ಖಸಾಯಿಖಾನೆ
ಸೇರುತಿರುವರಲ್ಲ
ನಮ್ಮ ಈ ಯಾತನೆ
ಆಲಿಸುವರಾರು ಇಲ್ಲ

ದೇವ ನೀ ದಯೆತೋರೆಯ
ಬಡ ಜೀವವ ಉಳಿಸೆಯ


ಶಾರಧ

- ಶಕುಂತಲಾ

29 Jul 2017, 12:52 pm

"ನಾ".."ನೀ"

"ನಾನು",ನನ್ನದೆಂಬ ನುಡಿಯು "ನಿನ್ನನ್ನು" ನಿಂದಿಸದಂತಾಗದಿರಲಿ..
"ನಾನು".., "ನಿನ್ನನ್ನು" ನಗುವ ನುಡಿಯಾಗಿರಲಿ...
"ನಾನು" ನಿಮ್ಮ ನೆಮ್ಮದಿಯ ನುಡಿಯಾಗಿರಲಿ..

- ಗೌಡಕಲರ್ಪುಲ್

29 Jul 2017, 07:11 am

ವೇದನೆ

ನಿದ್ದೆ ಮಾಡಬೇಕೆಂದಾಗಲ್ಲೆಲ್ಲ
ನಿನ್ನ ನೆನಪು ಕಾಡಿಸಿ ಎಬ್ಬಿಸುತ್ತೆ ಪದೇಪದೇ
ಕಣ್ಣ ರೆಪ್ಪೆ ಮುಚ್ಚಿದರೂ ಕಂಗೊಳಿಸುತಿದೆ ನಿನ್ನ ಮನವೆಲ್ಲ
ನೀ ದೂರಾಗಿ,ದಿನ ಕಳೆದರೂ ನಿನ್ನ ನೆನಪಿನ ಗುಂಗಿನಲ್ಲೆ ಇರುವೆ ನಾ ಸಾದಾ
ಮರೆತು ಮರೆಯಾಗಬೇಕೆಂದ ನಿನ್ನ ನೆನಪುಗಳು ಈ ಮಧ್ಯ ರಾತ್ರಿಯಲ್ಲೇ ನೆನಪಿಸುತಿದೆಯಲ್ಲ
ನಿನ್ನ ಬಿಟ್ಟು ಇರಲಾರದ ಬದುಕು
ಅನುಭವಿಸುತಿದೆ ಕ್ಷಣ ಕ್ಷಣಕ್ಕೂ ಯಾತನೆ
ನಿನ್ನ ನೆನಪೊಂದೆ ಹಗಲು ಈ ನಡು ರಾತ್ರಿಯ ಪುಳಕವು
ಸ್ಟೇಟಸ್ ನೋಡಿದವ ಅಂದುಕೊಂಡನು
ಇವ ಎಂತ ಮಾನಸಿಕ ಪ್ರೇಮಿ ಬರೆಯುತ್ತನೆ ನಡು ರಾತ್ರಿಯಲ್ಲೂ ಅವಳನ್ನೇ ಧ್ಯಾನಿಸಿ
ನೀ ಅಲ್ಲದೇ ನಿನ್ನಾರ ನೆನಪ ಬರಲಿ ಈ ನಡು ರಾತ್ರಿ ಓ.....ಬಿಟ್ಟು ಹೋದಾ ಪಿಶಾಚಿ...
ಓ.....ಸಾರಿ....ಪ್ರೇಯಸಿ...!!

- ಎಸ್.ಬಿ

29 Jul 2017, 01:42 am

ಋಣ

ಅನ್ನದ ಋಣವ
ಬಲ್ಲವರಾರು
ಹುಡುಕುತ ಬರುವುದು
ಬೇಡವೆಂದರು

ಕನಸಿನ ಕೋಟೆ
ಕರಗಿದರೇನು
ತಾಳ್ಮೆಯ ಜ್ಯೋತಿ
ಬೆಳಗದೇನು

ಅರಸಿ ಬಂದಾಗ
ದೂರ ಸರಿದೆ
ನಿಟ್ಟುಸಿರು ಬಿಟ್ಟಾಗ
ನೀನೆ ಬಳಿ ಬಂದೆ

ನಾ ಬಯಸಿದಂತೆ
ನಡೆಯದೇನು
ನಡೆಯುವುದೆಲ್ಲ ನಿನ್ನ ಲೀಲೆಯಲ್ಲವೇನು

ನಾ ನಿನ್ನ ಮಗಳಲ್ಲವೇನು!
ನನ್ನ ಏಳಿಗೆ ನಿನ್ನ ಹೊಣೆಯಲ್ಲವೇನು!
ಕೈ ಹಿಡಿದು ಕಾಯವ್ವ ನೀ‌ನು!
ಸದಾಕಾಲ ನಿನ್ನ ಸೇವಕಳು ನಾನು!



ಶಾರಧ

- ಶಕುಂತಲಾ

28 Jul 2017, 10:10 pm

ಬದುಕು ಮರೀಚಿಕೆ....

ಬದುಕಾಗಿದೆ ಮರೀಚಿಕೆಯ ಹುಡುಕುವಂತ ಪರಿ
ಕಣ್ಣೀರ ಕಡಲೆ ಹರಿಯುತಿದೆ ಕಣ್ಣಿಂದ ಜಾರಿ
ಸೋಲುಗಳೇ ಜೊತೆ ಸೇರಿವೆ ಪ್ರತಿ ಬಾರಿ
ಮರೀಚಿಕೆಯ ಹಿಡಿಯಲು ಇರುವುದೆ ದಾರಿ

ಜೀವನವಾಗಿದೆ ನೋವುಗಳ ರೂವಾರಿ
ಕರೆತಂದಿದೆ ಮನಸಿಗೆ ಸಾವೆಂಬ ವ್ಯಾಪಾರಿ
ಉಳಿದೋಗಿದೆ ಜೀವ ವ್ಯಾಪಾರದಲಿ‌ ಆಗದೆ ಬಿಕರಿ
ಸೋತಿರಲು ಜೀವ ವ್ಯಾಪಾರಿಯೆದುರು ಹಲವು ಬಾರಿ

ನಾನಿಗಿರುವೆ ಮಾತಾಡಲಾಗದ ಮೌನಿ‌ ಜಗದೆದುರು‌
ಮಾತಾಗಲಾರದ ಮೌನವು ಬಿಗಿಹಿಡಿದಿದೆ ನನ್ನ ಉಸಿರು
ಕರುಣೆ ಇ‌ಲ್ಲದೆ ನಿಲ್ಲಿಸಿಬಿಡಲೆ ಮನಸಿನ ಮಾತು
ಮನಸಿರದೆ ಬದುಕಿ ಮಾಡುವುದಾದರು ಎಂತು

- ಶ್ರೀಕಾವ್ಯ

28 Jul 2017, 09:23 pm