Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ವಾಸಿಸಲು ನನ್ನ ಈ
ಪುಟ್ಟ ಎದೆಯೊಳಗೆ..
ನನ್ನವಳು ನನಗೆ ಕಟ್ಟಿದಳು
ಕಿರು ನಗೆಯ ಬಾಡಿಗೆ...
ನಾ ಮನಸಾರೆ ಮನಸೋತೆ
ನೋಡಿ ಅವಳ ಕಣ್ಣ ಕಾಡಿಗೆ...
---- ಧರ್ಮ ರಾಜ್
- ಧರ್ಮರಾಜ್
01 Aug 2017, 01:21 pm
ನನ್ನೊಳಗಿನ ಅವಳೆಂದರೆ.....
ಕಣ್ಣಿಗೆ ಕಾಣದವಳು
ಸ್ಪರ್ಶಕ್ಕೆ ಸಿಗದವಳು
ಮಾತಿಗೆ ದೊರಕದವಳು
ನನ್ನೆಲ್ಲ ಭಾವನೆಗಳಿಗೆ ಜೀವ ತುಂಬಿ
ಕವನದ ಮೂಲಕ ವ್ಯಕ್ತವಾಗುವವಳು
ನನ್ನೊಳಗಿನ ಅವಳು .....
---- ಧರ್ಮ ರಾಜ್
- ಧರ್ಮರಾಜ್
01 Aug 2017, 01:17 pm
ಪ್ರೇಮದಿಂದ ನುಡಿಸಿರೆ
ನೀ ಪ್ರೇಮ ರಾಗ!!
ಮೋಹಗೊಂಡು ನುಡಿಸಿರೆ
ನೀ ಮೋಹನ ರಾಗ!!
ನಿನ್ನ ಕೊರಳಿನ ದನಿಯು
ಕೊಳಲಿನಿಂದ ಹೊರ ಹೊಮ್ಮಿ
ಗಾಳಿಯಲ್ಲಿ ತೇಲಿ ತೇಲಿ
ಬಡಿಯಿತೆನ್ನ ಎದೆಯ ಬಾಗಿಲ!!
ನಾ ಮಂತ್ರ ಮುಗ್ಧಳಂತೆ
ಇಲ್ಲಿ ಬಂದು ನಿಂತೆ!!
ಅದು ಏಕೋ ಎಂದು ನನಗೆ
ಒಂದೂ ತಿಳಿಯದು ಸುಂದರ!!
ನಿನ್ನ ನೋಡುತ ನೋಡುತ
ಕೊಳಲ ದನಿಯ ಕೇಳಿದೆ!!
ಸ್ವರಗಳಲ್ಲಿ ಯಾವ ರಾಗ ಸೆಳೆಯಿತು
ತಿಳಿಸದಂತೆ ನನ್ನ ಇಲ್ಲಿ ಕರೆಯಿತು!!
- ಪಿ.ಜಿ.ಜ್ಯೋತಿ
01 Aug 2017, 11:55 am
ಬದುಕು ಎಂಬ ಪಂದ್ಯದಲ್ಲಿ
ಸೋತು ಗೆದ್ದವನು ನಾನು!!
ಪ್ರೀತಿ ಎಂಬ ಮಾಯೆ ತಂದು
ನನ್ನ ಸೋಲಿಸ ಬಂದವಳು ನೀನು!!
ನಿನ್ನ ಮೋಹದಾಟಕೆ ಮರುಳಾಗಿ
ಪ್ರೀತಿಯಲ್ಲಿ ಬಿದ್ದು ಸೋತವ ನಾನು!!
ನನ್ನ ಸೋಲನ್ನು ಕಂಡು ನಕ್ಕು
ತಿರಸ್ಕಾರ ಮಾಡಿದವಳು ನೀನು!!
ನಿನ್ನ ಪ್ರೀತಿಯಲ್ಲಿ ಸೋತ ನಾನು
ಮೂರ್ಖನಲ್ಲ ಕಣೆ ಸೋತು ಗೆದ್ದವನು!!
ನಿನ್ನ ಪ್ರೀತಿಯಲ್ಲಿ ಬಿದ್ದ ಮೇಲೂ
ಎದ್ದು ಬದುಕ ಕಲಿತವನು!!
ಬದುಕು ಎಂಬ ಪಂದ್ಯದಲ್ಲಿ
ನಿಜವಾಗಿ ಗೆದ್ದವನು ನಾನು!!
ಬಾ ಬಂದು ನೋಡು ನನ್ನ ಗೆಲುವ
ನೋಡಿ ನೀಡು ಬಾ ಬಂಗಾರದ ಪದಕ!!
- ಪಿ.ಜಿ.ಜ್ಯೋತಿ
01 Aug 2017, 11:32 am
ಬಂಗಾರದ ಅಂಚಿನ ಸೀರೆ
ನೀ ತೊಟ್ಟಿರೆ ಚಂದವು ನೀರೆ!!
ಬಳುಕುವ ಮೈಯಲಿ ಬಾರೀ
ಹೊಳಪನು ನೀಡಿದೆ ನಾರಿ!!
ನಾಬಿಗೆ ಅಂಟಿದ ನೆರಿಗೆ
ತಾ ಜಾರಿದೆ ಪಾದದ ವರೆಗೆ!!
ರವಿಕೆಯ ಸುತ್ತಲು ಸೆರಗು
ತಂದಿದೆ ಬಾರೀ ಮೆರಗು!!
ಕಾಮನ ಬಿಲ್ಲಿನ ಬಣ್ಣ
ನಿನ್ನ ಸುತ್ತಲೂ ಹರಡಲು ಚೆನ್ನ!!
ಸೂರ್ಯಾಸ್ತದ ಆ ರಂಗು
ಸೋಕಿತೇ ನಿನ್ನಯ ಕೆನ್ನೆ!!
ನಾಚಿಕೆ ಏತಕೆ ಚೆಲುವೆ
ನೀ ಚೆಲ್ಲುತ ಬಾರೆ ಒಲವ!!
ದಿಬ್ಬಣದ ಮನೆಯಲ್ಲಿ ನಿನ್ನ
ಕಾದಿರುವನು ಒಬ್ಬ ವರನು!!
- ಪಿ.ಜಿ.ಜ್ಯೋತಿ
01 Aug 2017, 11:15 am
ಕಾಡಿನಲ್ಲಿ ಅಲೆಯುತ್ತಿರುವ
ಒಂಟಿ ಜಿಂಕೆ ನಾನು!!
ಬಾಣ ಹೂಡಿ ಹೆದರಿಸಬೇಡ
ನೀ ಹೋಗು ಬೇಟೆಗಾರ!!
ಅದು ಹೇಗೋ ನನ್ನವರೆಲ್ಲರಿಂದ
ದೂರಾಗಿ ಒಂಟಿಯಾಗಿರುವೆ!!
ಆದರೂ ಈ ಕಾಡಿನಲ್ಲಿ
ನಾ ನನ್ನವರ ಹುಡುಕುತ್ತಿರುವೆ!!
ಕ್ರೂರ ಮೃಗಗಳ ದೃಷ್ಟಿ ತಾಕದಂತೆ
ಮೈಯೆಲ್ಲ ಕಣ್ಣಾಗಿಲಿ ಅಲೆದಿರುವೆ!!
ಕ್ಷಣ ಕ್ಷಣಕ್ಕೂ ಹೆದರಿರುವ ಈ ನನ್ನ
ಕಣ್ಣುಗಳ ಕಂಡು ಮರುಕ ಬಾರದೇ!!
ನೊಂದಿರುವ ಪಾಪದ ಜೀವಿ ನಾ
ಎಲ್ಲವನ್ನೂ ಕಳೆದುಕೊಂಡಿರುವೆ!!
ಬಾಣ ಹೂಡಿ ಹೆದರಿಸಬೇಡ
ನೀ ಹೋಗು ಬೇಟೆಗಾರ!!
- ಪಿ.ಜಿ.ಜ್ಯೋತಿ
01 Aug 2017, 11:03 am
ಭಯದಲ್ಲರಳಿದ ಕಣ್ಣುಗಳು,
ನೀರಳ ಮೌನ,
ಆಗಾಗ ಕಿವಿಗೆ ತಗುಲುತ್ತಿರುವ ಮಂದಗಾಳಿ,
ಕೈ ಕಾಣದಷ್ಟು ಕತ್ತಲು,
ಯಾವುದೊ ಸದ್ದಿಗೆ ನಡುಗುವ ಹೃದಯ,
ಅತ್ತಿತ್ತ ಕತ್ತಲಲ್ಲಿ ಹುಡುಕಾಟ ಶುರುವಾಗಿತ್ತು,
ಯಾರೋ ಇದ್ದಂತೆ ಪಕ್ಕದಲ್ಲೆ,
ಉಸಿರಾಟ ಜೋರಾಯಿತು,
ಭಯವು ಬೆವರಲ್ಲಿ ಬೆರೆತು ಹೋಯಿತು,
ಇದೆಂತ ಅಂಧಕಾರ,
ಇನ್ನೆನೆಲ್ಲವು ಹೆಚ್ಚಾಯಿತು,
ಬಿದ್ದೆ. ದೇಹಕ್ಕೆ ಪೆಟ್ಟಾಯಿತು,
ಮೆಲ್ಲನೆ ಕಣ್ಣು ಬಿಟ್ಟೆ, ನಮ್ಮನೆ!
ಕಂಡದ್ದು ಕನಸೆಂದು ಸಮಾಧಾನಿಸಿದರು
ಮನಸ್ಸು ಭಯದಲ್ಲಿತ್ತು,
ಮತ್ತೆ ನಿದ್ದೆ ಮಾಡಿದ ನೆನಪಿಲ್ಲ..
ಆ ಕನಸಿನ ರಾತ್ರಿಗಳು
ಮತ್ತೆ ಮತ್ತೆ ಮರುಕಳಿಸುವವು,
ಅವುಗಳೆ ಜೀವನದ ಕಷ್ಟ-ಕಾರ್ಪಣ್ಯಗಳು,
ಮೆಟ್ಟಿ ನಿಂತರೆ ಜಯದ ಶಿಖರ,
ಬೆಚ್ಚಿ ಕುಂತರೆ ಸೋಲು ನಿಖರ,
ಜಯಭೇರಿ ಬಾರಿಸಿ ಗೆಳೆಯರೆ,
ಸಾಧ್ಯವಾದರೆ ಪಕ್ಕದವನ ಕಷ್ಟಕ್ಕು ಹೆಗಲು ಕೊಡಿ,
ಅಂಜಿಕೆ ಬಿಡಿ,
ನೀವಾಗ ಬೆಳೆಯುವಿರಿ,
ಜಗವಾಗ ಬೆಳಗುವುದು...!
(ಮನೋಜ್)
- manoj kumar
01 Aug 2017, 10:48 am
ಬೆಳ್ಳನೆಯ ಕೂದಲಿರೋ
ಕುಡಿ ಮೀಸೆ ಮಾವಯ್ಯ
ನಿನ್ನನ್ನು ವರಿಸಲಾರೆ
ನಾನಿನ್ನೂ ಕಂದಮ್ಮ!!
ಚಂದಮಾಮ ಕಾಣಲು
ನಿನ್ನ ಮಡಿಲಲ್ಲಿ ಮಲಗಿದ್ದೆ
ಸಂತೆಯ ಬೀದಿಯಲ್ಲಿ ನಾ
ನಿನ್ನ ಹೆಗಲೇರಿ ಸಾಗಿದ್ದೆ!!
ಊರೂರು ಅಲೆವಾಗ ನಿನ್ನ
ಬೆರಳ ಹಿಡದು ನಡೆದಿದ್ದೆ
ತಂದೆಯಂತೆ ನೀನು ನನಗೆ
ಭಾಸವಾಗಿ ಹೋದೆ!!
ತಲೆ ಎತ್ತಿ ನೋಡಿದರೆ
ನಿನ್ನ ಕಿರುಗಡ್ಡ ಕಾಣಿವುದು
ಮುಗಿಲೆತ್ತರಕ್ಕೆ ನೀನು
ನಾನಿನ್ನೂ ಎಳೆ ಕೂಸು!!
ಪುಟ್ಟದಾದ ಮನಸು ನನ್ನದು
ನಾನಿನ್ನೂ ಕಂದಮ್ಮ
ನನ್ನನ್ನು ವರಿಸುವ ಆಸೆ
ಏಕೆ ನಿನಗೆ ಮಾವಯ್ಯ!!
- ಪಿ.ಜಿ.ಜ್ಯೋತಿ
31 Jul 2017, 07:14 pm
ನೀನು ಬರುವ ಮುನ್ನ
ನಾನು
ಎಕಾಂಗಿ ಆಗಿಯೇ ಇದ್ದೆ...
ಹೇಳದೇ ಬಂದವನು ನೀನು
ನನ್ನಲ್ಲಿ
ಇಲ್ಲದ ಬಯಕೆ ಹೂಡಿದೆ...
ಬಯಕೆ ಈಡೇರುವ ಮೊದಲೇ
ನೀನು
ಹೇಳದೇ ಎಲ್ಲೋ ಮರೆಯಾದೆ...
ಈಗಲೂ ನಾನು ಏಕಾಂಗಿಯೇ
ಗೆಳೆಯ
ನಿನ್ನ ನೆನಪುಗಳ ಸಂತೆಯಲ್ಲಿ...
- ಪಿ.ಜಿ.ಜ್ಯೋತಿ
31 Jul 2017, 06:29 pm
ಬೇಲಿ ಮ್ಯಾಲಿನ ಕಳ್ಳಿಯ ಗಿಡಕ್ಕೆ
ಹಾಲನ್ನು ಎರೆದು ಹೋರವರು ಯಾರ!!
ಮುಳ್ಳಿನ ಕವಚ ಸುತ್ತಲೂ ಹೊದ್ದು
ಕಾದು ನಿಂತಿಹುದು ಚುಚ್ಚಲು ಯಾರ!!
ಮುಟ್ಟಲು ಹೋದರೆ ಕಳ್ಳಿಯ ಗಿಡವು
ಚುಚ್ಚಿ ಕಳುಹಿತೇ ಮುದ್ದಿನ ಕರವ!!
ರಕುತದ ಮಡುವಲಿ ಮುದ್ದಿನ ಕರವು
ನೋಯುತ ಗಿಡದಿ ಸರಿಯಿತೇ ದೂರ!!
ಕಳ್ಳಿಯ ಗಿಡದ ಬೆಳ್ಳನೆ ಹಾಲದು
ನೋಡಲು ಮಾತ್ರವೇ ಚಂದದ ಪಾನ!!
ದಾಹವ ನೀಗಲು ಕುಡಿಯಲು ಹೋದರೆ
ಪ್ರಾಣಕ್ಕೆ ಹಾನಿ ತರುವ ಪಾಷಾಣ!!
- ಪಿ.ಜಿ.ಜ್ಯೋತಿ
31 Jul 2017, 06:19 pm