ಮಳೆ ಸೋತಮೇಲೆ ಹನಿಗೆಲ್ಲಿ ಬೆಲೆಯೋ
ಮಾನ ಹೋದಮೇಲೆ ಮಾತಿಗೆಲ್ಲಿ ಬೆಲೆಯೋ
ಮೋಹ ಮೋಳಗಿದ ಮೇಲೆ ನೀತಿಗೆಲ್ಲಿ ಬೆಲೆಯೋ
ಮನು ಮೋಸನಾದಮೇಲೆ ಸತ್ಯಕ್ಕೆಲ್ಲಿ ಬೆಲೆಯೋ
ನಮ್ರತೆ ಅಡಗಿದ ಮೇಲೆ ಆಚರಣೆಗೆಲ್ಲಿ ಬೆಲೆಯೋ
ನಟನೆ ಅತಿಯಾದ ಮೇಲೆ ವಿಶ್ವಾಸಕ್ಕೆಲ್ಲಿ ಬೆಲೆಯೋ ನನ್ನತನ ಅಳಸಿದಮೇಲೆ ವಾದಕ್ಕೆಲ್ಲಿ ಬೆಲೆಯೋ
ನಗು ಅರಳದಮೇಲೆ ಜೀವನಕ್ಕೆಲ್ಲಿ ಬೆಲೆಯೋ
ಕಷ್ಟಕ್ಕೆ ಪರಿಹಾರವಿಲ್ಲದ ಮೇಲೆ ಪ್ರಯತ್ನಕ್ಕೆಲ್ಲಿ
ಬೆಲೆಯೋ
ಕಾರ್ಯ ಫಲಪ್ರದವಾಗದ ಮೇಲೆ ಯೋಜನೆಗೆಲ್ಲಿ ಬೆಲೆಯೋ
ಕ್ರೌರ್ಯ ಪ್ರಭಾವ ಬೀರಿದ ಮೇಲೆ ಮಾನವೀಯತೆಗೆಲ್ಲಿ ಬೆಲೆಯೋ
ಕ್ರಾಂತಿಗೆ ಗೃಹಣ ಹಿಡಿದ ಮೇಲೆ ಹೊಸತನಕ್ಕೆಲ್ಲಿ ಬೆಲೆಯೋ
ಸಂಸಾರ ನೆಮ್ಮದಿ ಇಲ್ಲವೆಂದ ಮೇಲೆ ಒಡಗೂಡಿಬಾಳಿಗೆಲ್ಲಿ ಬೆಲೆಯೋ
ಸಾಹಿತ್ಯ ನಿಜವಿಲ್ಲದ ಮೇಲೆ ಓದಿಗೆಲ್ಲಿ ಬೆಲೆಯೋ
ಸಂಪತ್ತು ನಿಧಿಯಾದ ಮೇಲೆ ಒಡನಟಕ್ಕೆಲ್ಲಿ ಬೆಲೆಯೋ
ಶ್ರೀ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯದಮೇಲೆ ಬರವಣಿಗೆಲ್ಲಿ ಬೆಲೆಯೋ
ಹೊಡೆಯಬೇಡ ನೀ ಹರಟೆ,
ಹೊಡೆದರೆ ಬಾರಿಸಬೇಕಾದಿತು ಜಾಗಟೆ,
ಹೊಡೆದರೆ ಹೀಗೆ ನೀ ಹರಟೆ,
ಕಡೆಗೆ ದೇವಸ್ಥಾನದಲ್ಲೂ ಸಿಗದು ಬಾರಿಸಲು ಘಂಟೆ..!
ಅರ್ಥ ಮಾಡಿಕೊ ತಮ್ಮ,
ಇದ ತಿಳಿ ಹೇಳಲಾರ ಯಾವ ಬ್ರಹ್ಮ,
ನಿನ್ನ ನಂಬಿದ ಜೀವಕೆ ನೀನೇ ಆಧಾರ ತಿಳಿಯೋ ಮಂಕುತಿಮ್ಮ..
ಅಪ್ಪಿ ನಿನ್ನ ಮುದ್ದಿಸಲೇ
ಮಗುವಂತೆ ಮಡಿಲಲಿ ಮಲಗಿಸಲೆ
ಮನಸೊಳಗೆ ನಿನ್ನ ಬಚ್ಚಿಡಲೆ
ಇಲ್ಲ ಕಾವಲಿಗೆ ನಿಂತಂತೆ ಕಾಯಲೆ
ಜೋಕಾಲಿಯ ಕಟ್ಟಿ ಕೂರಿಸಿ ತೂಗಲೆ
ಹಾರುವ ಮುಂಗುರುಳ ನೋಡಿ ಮೈಯ ಮರೆಯಲೆ
ನೀ ನುಡಿವಾಗ ಮೌನಿಯಾಗಬಿಡಲೆ
ನೀ ನನ್ನನೆ ನೋಡುತಲಿರಲು ಮರುಳನಾಗಲೆ
ನೀ ನನ್ನ ಸೋಕಿದಾಗ ಶಿಲೆಯಾಗಿ ಬಿಡಲೆ
ನನ್ನ ಕೈ ಹಿಡಿದು ನೀ ನಡೆಸುವಾಗ ಮಗುವಾಗಲೆ
ಕಣ್ಣು ತುಂಬಿ ನಿಂತಾಗ ತಾಯಿ ಮಡಿಲ ನಾ ಕೊಡಲೆ
ಹುಸಿ ಮುನಿಸ ತೋರಲು ನೀನು, ಎತ್ತವನಂತೆ ರೇಗಿಬಿಡಲೆ
ಹೇಳು ಬಾರೆ ನನ್ನ ಕನಸುಗಳ ಸಾಲೆ
ನಿನಗಾಗಿ ಕಟ್ಟಿರುವೆ ಪ್ರೀತಿಯ ಮಾಲೆ