Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಜಲ್

ಗಜಲ್

ಭುವನೆಯಾಕೋ ಅಳುತಿರುವಳು ಸಂತೈಸುವವರಾರೂ ಇಲ್ಲ,
ದಿಕ್ಕು ಬದಲಿಸಿದ ಅವಳನು ಮರು ಸ್ವಾಗತಿಸುವವರಾರೂ ಇಲ್ಲ,

ಭುವನೆಯ ಬೆನ್ನೇರಿ ಆಂಗ್ಲನೆಂಬ ರಾಕ್ಷಸನು ಆರ್ಭಟಿಸಿರುವನು,
ಕೈ ಕಾಲನು ಹಿಡಿದು ಅವಳು ಕುಗ್ಗದೆ ನಿಲ್ಲಿಸುವವರಾರೂ ಇಲ್ಲ,

ಸುತ್ತಲೂ ಬಲವಂತವಾಗಿ ಆವರಿಸಿದೆ ನಮದಲ್ಲದಿದ್ದರೂ,
ಮೈಕೊಡವಿ ಅದಕೆ ಚೀಮಾರಿ ಹಾಕುವವರಾರೂ ಇಲ್ಲ,

ಮಲಿನವಾದ ಕನ್ನಡಿಯು ಮರು ಹೊಳೆಯಲೆತ್ನಿಸಿದೆ ಹೊಳಪ,
ಅದನು ಮನಸೊಳಗಿನ ಧೈರ್ಯವೆಂಬ ಕಣ್ಣೀರಿನಿಂದ ತೊಳೆಯುವವರಾರೂ ಇಲ್ಲ,

ಅವಳು ಮೇಲೆದ್ದು ನಿಂತು ನಡೆಯಲು ಆಗದೆ ಕೂತಿಹಳು,
ಕೈ ಹಿಡಿದು ಪ್ರಮಾಣಿಸಿ,ಪ್ರಾಮಾಣಿಕವಾಗಿ,ನಡೆಯುವವರಾರೂ ಇಲ್ಲ,

ಈ ಭುವನೆಯ ಸ್ವಂತ ಮಗನಂತೆ ನೀನು "ಓ ಸಮಂಥ",
ನಿನ್ನನು ಕರೆದು ಅವಳಿಗಾಗಿ ಕೈ,ಕೈ ಸೇರಿಸುವ ಹೃದಯವಂತರಾರೂ ಇಲ್ಲ,


- ಮಂಜುನಾಥಸರ್ಜಾಪುರ.ವಿ

01 Aug 2017, 07:34 pm

ಕೊಡೆ

ನಾ ಹಿಡಿದೆ ಕೊಡೆಯೊಂದ
ನೆನೆಯುತ್ತಿದ್ದಾಳೆಂದು
ಮಳೆಯಲಿ ನನ್ನವಳು...

ಆದರವಳು ಆ ಕೊಡೆ ಪಡೆದು
ಹಿಂದಿರುಗಿ ನೋಡದೆ ಹೋದಳು
ನಾ ನೆನೆಯುತ ನಿಂತಿರಲು...

ಬೇಸರವೇನಿಲ್ಲ ನನಗೆ..ಕಾರಣ
ನಾ ಕೊಟ್ಟ ಆ ಕೊಡೆ
ನನ್ನ ನೆನಪಾಗಿ ಅವಳ ಬಳಿಯಿರಲು....

--- ಧರ್ಮ ರಾಜ್

- ಧರ್ಮರಾಜ್

01 Aug 2017, 06:15 pm

ಬೆಲೆಯೋ ಬೆಲೆ

ಮಳೆ ಸೋತಮೇಲೆ ಹನಿಗೆಲ್ಲಿ ಬೆಲೆಯೋ
ಮಾನ ಹೋದಮೇಲೆ ಮಾತಿಗೆಲ್ಲಿ ಬೆಲೆಯೋ
ಮೋಹ ಮೋಳಗಿದ ಮೇಲೆ ನೀತಿಗೆಲ್ಲಿ ಬೆಲೆಯೋ
ಮನು ಮೋಸನಾದಮೇಲೆ ಸತ್ಯಕ್ಕೆಲ್ಲಿ ಬೆಲೆಯೋ

ನಮ್ರತೆ ಅಡಗಿದ ಮೇಲೆ ಆಚರಣೆಗೆಲ್ಲಿ ಬೆಲೆಯೋ
ನಟನೆ ಅತಿಯಾದ ಮೇಲೆ ವಿಶ್ವಾಸಕ್ಕೆಲ್ಲಿ ಬೆಲೆಯೋ ನನ್ನತನ ಅಳಸಿದಮೇಲೆ ವಾದಕ್ಕೆಲ್ಲಿ ಬೆಲೆಯೋ
ನಗು ಅರಳದಮೇಲೆ ಜೀವನಕ್ಕೆಲ್ಲಿ ಬೆಲೆಯೋ

ಕಷ್ಟಕ್ಕೆ ಪರಿಹಾರವಿಲ್ಲದ ಮೇಲೆ ಪ್ರಯತ್ನಕ್ಕೆಲ್ಲಿ
ಬೆಲೆಯೋ
ಕಾರ್ಯ ಫಲಪ್ರದವಾಗದ ಮೇಲೆ ಯೋಜನೆಗೆಲ್ಲಿ ಬೆಲೆಯೋ
ಕ್ರೌರ್ಯ ಪ್ರಭಾವ ಬೀರಿದ ಮೇಲೆ ಮಾನವೀಯತೆಗೆಲ್ಲಿ ಬೆಲೆಯೋ
ಕ್ರಾಂತಿಗೆ ಗೃಹಣ ಹಿಡಿದ ಮೇಲೆ ಹೊಸತನಕ್ಕೆಲ್ಲಿ ಬೆಲೆಯೋ

ಸಂಸಾರ ನೆಮ್ಮದಿ ಇಲ್ಲವೆಂದ ಮೇಲೆ ಒಡಗೂಡಿಬಾಳಿಗೆಲ್ಲಿ ಬೆಲೆಯೋ
ಸಾಹಿತ್ಯ ನಿಜವಿಲ್ಲದ ಮೇಲೆ ಓದಿಗೆಲ್ಲಿ ಬೆಲೆಯೋ
ಸಂಪತ್ತು ನಿಧಿಯಾದ ಮೇಲೆ ಒಡನಟಕ್ಕೆಲ್ಲಿ ಬೆಲೆಯೋ
ಶ್ರೀ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯದಮೇಲೆ ಬರವಣಿಗೆಲ್ಲಿ ಬೆಲೆಯೋ

- MB

01 Aug 2017, 04:54 pm

ಹರಟೆ..!!

ಹೊಡೆಯಬೇಡ ನೀ ಹರಟೆ,
ಹೊಡೆದರೆ ಬಾರಿಸಬೇಕಾದಿತು ಜಾಗಟೆ,
ಹೊಡೆದರೆ ಹೀಗೆ ನೀ ಹರಟೆ,
ಕಡೆಗೆ ದೇವಸ್ಥಾನದಲ್ಲೂ ಸಿಗದು ಬಾರಿಸಲು ಘಂಟೆ..!
ಅರ್ಥ ಮಾಡಿಕೊ ತಮ್ಮ,
ಇದ ತಿಳಿ ಹೇಳಲಾರ ಯಾವ ಬ್ರಹ್ಮ,
ನಿನ್ನ ನಂಬಿದ ಜೀವಕೆ ನೀನೇ ಆಧಾರ ತಿಳಿಯೋ ಮಂಕುತಿಮ್ಮ..

- Spb...@#

01 Aug 2017, 04:35 pm

ಪ್ರೇಮ ಚಂದ್ರಮ

ಹೇಳೋ ಚಂದ್ರಮ
ಆ ಬಾನು ಚಂದವೇ
ಪ್ರೀತಿಯಲ್ಲಿ ಬಿದ್ದ ಮೇಲೆ
ನೀನು ಚಂದವೇ!!

ನನ್ನ ಮನದ ಹೂವಿನ ತೋಟ
ಕಂಡು ಬಂದ ಚಂದ ಮಾಮ
ಹೂವಿನಲ್ಲಿ ಅವನಿಗೆ
ಎನೋ ಅನುರಾಗವು!!

ರಾಶಿ ರಾಶಿ ಕನಸಿನ ಹೂವು
ಅರಳಿ ನಿಂತ ಚಂದವ ಕಂಡು
ಬಾನ ಮರೆತ ಚಂದಿರನು ತಾ
ಮನದಿ ಬಂದು ನೆಲೆಯುರಿದ!!

ತಾರೆಗಳ ಬಂಧವ ಕಳಚಿ
ಮನದ ಹೂವಿನ ಮೋಹವ
ಬೆಳೆಸಿ ಆಸೆಯಿಂದ ಬಂದನು
ಇಲ್ಲಿ ಪ್ರೇಮ ಚಂದ್ರಮ!!

- ಪಿ.ಜಿ.ಜ್ಯೋತಿ

01 Aug 2017, 04:11 pm

ಮನುಷ್ಯನೊಳಗಿನ ಕ್ರೌರ್ಯ

ಮನುಷ್ಯನೊಳಗಿನ ಕ್ರೌರ್ಯ

ತನ್ನ ತನವನು ಮರೆತು

ಅವನಿಂದ ಹೋರಬಂದು

ಅಟ್ಟಹಾಸದಿ ಮೆರೆದು

ಹಿಂಸಾಚಾರಕ್ಕೆ ತಿರುಗಿ

ಎಲ್ಲವನ್ನೂ ನಾಶ ಮಾಡಿ

ಗರ್ವದಲಿ‌ ಸೊಕ್ಕಿ

ರೋಷದಲ್ಲಿ ಬೀಗಿ

ಕೊನೆಯಲ್ಲಿ ಒಂದು ದಿನ

ಅವನನೇ ಬಲಿ ಪಡೆಯಿತೇ!!

- ಪಿ.ಜಿ.ಜ್ಯೋತಿ

01 Aug 2017, 04:02 pm

ಮಲ್ಲಿಗೆ ಸಂಪಿಗೆ

ಮಲ್ಲಿಗೆ ಮಲ್ಲಿಗೆ ಓ
ದುಂಡು ಮಲ್ಲಿಗೆ
ಮೆಲ್ಲಗೆ ಬಂದೆ ನೀ
ನನ್ನ ಎದೆಯೊಳಗೆ!!

ಸಂಪಿಗೆ ಸಂಪಿಗೆ ಓ
ಕೆಂಡ ಸಂಪಿಗೆ
ಸೋತು ಮರುಳಾದೆ
ನಾ ನಿನ್ನ ಕಂಪಿಗೆ!!

ಅವಳ ಜೊತೆ ಸೇರಿದೆ
ಅವಳ ಮುಡಿಯೇರದೆ
ಅವಳ ಖುಷಿ ಕಂಡು
ನೀನಲ್ಲಿ ನಗೆ ಬೀರಿದೆ!!

ಶಿರದಿ ನೀ ಹಿಗ್ಗುತಿರುವೆ
ಓ ದುಂಡು ಮಲ್ಲಿಗೆ
ನಿನ್ನ ಕಂಡು ‌ನಾ ಕುಗ್ಗಿದೆನೇ
ಓ ಕೆಂಡ ಸಂಪಿಗೆ!!

- ಪಿ.ಜಿ.ಜ್ಯೋತಿ

01 Aug 2017, 03:52 pm

ಮರುಭೂಮಿಯಲ್ಲಿ

ಮರುಭೂಮಿಯಲ್ಲಿ
ದಿಕ್ಕು ಕಾಣದ ಹೊತ್ತಲಿ!!
ಎದಿರು ಸಿಕ್ಕ‌ನು ಒಬ್ಬ
ದಾರಿ ತಪ್ಪಿದ ಗೆಳೆಯನು!!

ಅವನ ಅಕ್ಕರೆಯ ಮಾತಿಗೆ
ನಕ್ಕು ಮರುಳಾದ ಮನಸಿದು!!
ಸೋತು ಹೋದೆ‌ನೇ ನಾನು
ಅವನ ಮಾತಿನ ಮೋಡಿಗೆ!!

ಜಾರಿ ಬಿದ್ದಿತೇ ಮನಸು
ಅವನ ಅಂದಕೆ ಸೋತು!!
ಚಂಚಲಗೊಂಡು ಹಾರಿತೇ ಮನ
ಮುಗಿಲೆತ್ತರಕ್ಕೆ ರೆಕ್ಕೆ ಬಡಿದು!!

ಅಯ್ಯೋ ಮೋಡದೊಡನೆ
ಆ ಸಂಭ್ರಮ ಹೇಳ ತೀರದು!!
ಮರಳಿ ಬುವಿಗೆ ಬರಲು
ಮನಕೆ‌ ದಾರಿ ತಿಳಿಯದು!!

ದೂರದ ಮರಳು ದಿಬ್ಬದ ಮೇಲೆ
ಕಂಗೆಟ್ಟು ನಿಂತಿದ್ದಳು ಒಬ್ಬಳು!!
ಅವಳ ಕಂಡೊಡನೆ ಅವನ‌‌ ಕಣ್ಣರಳಿ‌
ಓಡಿ ತಬ್ಬದ ಅವಳ ತನುವನು!!

ಎದಿರು ಸಿಡಿಲು ಬಡಿದಂತೆ
ನಾನು ಕಂಗೆಟ್ಟು ನಿಂತೆ!!
ಮುಗಿಲಿನಿಂದ ಜಾರಿ ಬುವಿಗೆ
ಉರುಳಿದ ಮನದ ಭಾವ ಛಿದ್ರ!!

ಅವಳು ಅವನ ಪ್ರಾಣಕಾಂತೆ
ನಾನು ಏಕಾಂಗಿಯಾಗಿ ನಿಂತೆ!!
ಸುಮ್ಮನೆ ಸಲ್ಲದ ಕನಸ ಹೆಣೆದು
ಯಾಕೆ ತಲ್ಲಣಗೊಂಡಿತು ಮನಸು!!

- ಪಿ.ಜಿ.ಜ್ಯೋತಿ

01 Aug 2017, 03:35 pm

ಚಿಂತೆ

ಅರಿವಿಲ್ಲದವನಿಗೆ ಗುರುವಿನ ಚಿಂತೆ
ಗುರುವಿದ್ದವನಿಗೆ ಗುರಿಯ ಚಿಂತೆ
ಹಸಿದವನಿಗೆ ಊಟದ ಚಿಂತೆ
ಉಂಡವನಿಗೆ ಕರಗಿಸುವ ಚಿಂತೆ
ಒಂಟಿಯಾಗಿದ್ದರೆ ಜಂಟಿಯಾಗುವ ಚಿಂತೆ
ಜಂಟಿಯಾಗಿದ್ದರೆ ಒಂಟಿಯಾಗುವ ಚಿಂತೆ
ಕಷ್ಟದಲ್ಲಿರುವವನಿಗರ ಸುಖದ ಚಿಂತೆ
ಕಷ್ಟ ಬಂದರೇನೆಂಬ ಚಿಂತೆ
ಸಾಯುತಿರುವವನಿಗೆ ಬದುಕುವ ಚಿಂತೆ
ಬದುಕಿರುವವನಿಗೆ ಸಾವಿನ ಭಯದ ಚಿಂತೆ
ವಯಸ್ಸಿಗೆ ಬಂದವನಿಗೆ ಹುಡುಗಿಯ ಚಿಂತೆ
ವಯಸ್ಸಾದವನಿಗೆ ರೋಗದ ಚಿಂತೆ
ಯಾರನ್ನು ಬಿಟ್ಟಿಲ್ಲ ಚಿತೆಗೇರಿಸುವ ಈ ಚಿಂತೆ
ಈ ಜಗತ್ತೇನೆಕೆ ಸೃಷ್ಟಿಸಿದೆನೆಂದು ದೇವರಿಗೆ ದೊಡ್ಡ ಚಿಂತೆ ....

ಧರ್ಮ ರಾಜ್

- ಧರ್ಮರಾಜ್

01 Aug 2017, 02:49 pm

ಅಪ್ಪಿ

ಅಪ್ಪಿ ನಿನ್ನ ಮುದ್ದಿಸಲೇ
ಮಗುವಂತೆ ‌ಮಡಿಲಲಿ ಮಲಗಿಸಲೆ
ಮನಸೊಳಗೆ ನಿನ್ನ ಬಚ್ಚಿಡಲೆ‌
ಇಲ್ಲ ಕಾವಲಿಗೆ ನಿಂತಂತೆ ಕಾಯಲೆ

ಜೋಕಾಲಿ‌ಯ ಕಟ್ಟಿ ಕೂರಿಸಿ ತೂಗಲೆ
ಹಾರುವ ಮುಂಗುರುಳ ನೋಡಿ‌ ಮೈಯ ಮರೆಯಲೆ
ನೀ ನುಡಿವಾಗ ಮೌನಿಯಾಗಬಿಡಲೆ
ನೀ ನನ್ನನೆ ನೋಡುತಲಿರಲು‌ ಮರುಳನಾಗಲೆ‌

ನೀ‌ ನನ್ನ ಸೋಕಿದಾಗ ಶಿಲೆಯಾಗಿ ಬಿಡಲೆ
ನನ್ನ ಕೈ ಹಿಡಿದು ನೀ ನಡೆಸುವಾಗ ಮಗುವಾಗಲೆ
ಕಣ್ಣು ತುಂಬಿ ನಿಂತಾಗ ತಾಯಿ ಮಡಿಲ ನಾ‌ ಕೊಡಲೆ
ಹುಸಿ‌‌ ಮುನಿಸ‌ ತೋರಲು ನೀನು,‌ ಎತ್ತವನಂತೆ ರೇಗಿಬಿಡಲೆ‌
ಹೇಳು ಬಾರೆ ನನ್ನ ಕನಸುಗಳ‌ ಸಾಲೆ
ನಿನಗಾಗಿ ಕಟ್ಟಿರುವೆ ಪ್ರೀತಿಯ ಮಾಲೆ

- ಶ್ರೀಕಾವ್ಯ

01 Aug 2017, 02:06 pm