Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಉಬ್ಬಿದ ಉದರದಲಿ
ಇರುವುದು ಕಂದಮ್ಮ!!
ಹಬ್ಬದ ಸಡಗರವು
ತಾಯ ಮಡಿಲಿನಲಿ!!
ಹೆಸರೇನು ನಾ ಇಡಲಿ
ಹೇಗೆ ನಾ ಮುದ್ದಿಸಲಿ!!
ಮಗನಾಗೋ ಮಗಳಾಗೋ
ಬಾ ನೀನು ಕಂದಮ್ಮ!!
ಹೆದರದೇ ನಾ ಹೆರುವೆ
ಅಳಬೇಡ ಕಂದಮ್ಮ!!
ನೋವನು ನಾ ನುಂಗಿ
ಜನುಮ ನೀಡುವೆ ನಿನಗೆ!!
ಈ ನನ್ನ ಅಂಗೈಯು
ನಿನ್ನ ಬರುವ ಕಾದಿಹುದು!!
ಮಮತೆಯು ಕಡಲಿನಂತೆ
ಹೃದಯದಲಿ ಉಕ್ಕಿಹುದು!!
ಮುದ್ದಿಸಲು ನಾ ನಿನ್ನ
ಕಾತುರದಿ ಕಾದಿರುವೆ!!
ನವ ಮಾಸ ಕಳೆದೊಡನೆ
ನವ ಭಾವ ನೀ ತುಂಬು!!
- ಪಿ.ಜಿ.ಜ್ಯೋತಿ
03 Aug 2017, 01:18 pm
ಹಿಂತಿರುಗಿ ನೋಡದೇ
ನೀ ನಡೆದುಬಿಡು ಮನುಜ!!
ನಿನಗೆ ಸರಿ ಎನಿಸಿದ
ಸತ್ಯದ ದಾರಿಯಲ್ಲಿ!!
ಕಡುಗತ್ತಲ ಹಾದಿ ಅದು
ಹೆದರದೇ ಮುನ್ನುಗ್ಗು!!
ಕಲ್ಲು ಮುಳ್ಳಿರಬಹುದು
ಸ್ವಲ್ಪ ಸಹಿಸಿಕೋ!!
ಏಕಾಂತ ಕಾಡಿದರೂ
ಎದೆಗುಂದ ಬೇಡ ನೀ!!
ಬೆನ್ನ ಹಿಂದೆ ಕಾವಲಾಗಿ
ನಿಂತಿರುವುದು ಒಂದೇ ಸತ್ಯ!!
- ಪಿ.ಜಿ.ಜ್ಯೋತಿ
03 Aug 2017, 10:40 am
ಕಸಾಯಿ ಖಾನೆಗೆ ಸಾಗಿಸುತ್ತಿರುವ
ಗೋವೊಂದು ತಪ್ಪಿಸಿಕೊಂಡು
ನನ್ನ ಬಳಿ ಓಡಿ ಬಂದು
ರಕ್ಷಣೆಯನ್ನು ಕೋರಿ ನಿಂತಿತ್ತು!!
ಅದರ ಹಣೆಯನ್ನೊಮ್ಮೆ
ನೆವರಿಸಲು ನಾನು
ಅದರ ಕಣ್ಣಿಂದ ನೀರು
ಜಿನುಗಿತ್ತು ಹರಿದಿತ್ತು!!
ಛೇ ಮಾತೃ ಸ್ವರೂಪಿಯಾದ
ಗೋ ಮಾತೆಗೆ ಈ ಗತಿಯೇ
ಎಂದು ಮನದಲ್ಲಿ ನೊಂದು
ಅದನೊಮ್ಮೆ ಅಪ್ಪಿದೆ!!
ನನ್ನ ಬಿಸಿ ಉಸಿರ ಸಮಾಧಾನವೋ
ಅದರ ಆತ್ಮ ವಿಶ್ವಾಸವೋ
ಅದನ್ನು ಎಳೆದುಕೊಂಡು ಹೋಗಲು
ಬಂದವನನ್ನು ತಿವಿದು ಉರುಳಿಸಿತು!!
ಮನದಲ್ಲಿ ಹೊಸ ಹುರುಪೊಂದು
ಮೂಡಿ ಆ ಗೋವಿನ ಜೊತೆಯಲ್ಲಿ
ಮನೆಗೆ ಹಿಂದಿರುಗುವಾಗ
ಅದೆಸ್ಟೊ ಆಲೋಚನೆಗಳು!!
ಇಂತಹ ಸಾವಿರಾರು ಗೋಗಳನ್ನು
ರಕ್ಷಿಸುವ ಹಾಗೂ ಕಸಾಯಿ ಖಾನೆಯನ್ನು
ಮುಚ್ಚಿಸುವ ಶಕ್ತಿ ನೀಡೆಂದು
ಗೋ ಮಾತೆಯಲ್ಲಿ ಬೇಡಿದೆ!!
- ಪಿ.ಜಿ.ಜ್ಯೋತಿ
03 Aug 2017, 10:28 am
ನೀನಿಲ್ಲದ ಈ ಬದುಕಿನಲ್ಲಿ
ಸಂತಸವ ನಾ ಹೇಗೆ ಹುಡುಕಲಿ!!
ನಿನ್ನ ನೆನಪಿನ ಸಂದೇಶವು
ನನ್ನ ಹೃದಯದಲ್ಲಿ ಪ್ರತಿ ಕ್ಷಣವು!!
ನಿನ್ನ ನೆನಪಿನ ಸೋಗಿನಿಂದ
ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತಿರುವೆ!!
ಆದರೂ ಈ ರಾಡಿಯಾದ ಮನಸಿನ
ಕೊಳೆಯನ್ನು ತೊಳೆಯಲಾಗುತ್ತಿಲ್ಲ!!
ನಿನ್ನ ನೆನಪನ್ನು ಮರೆಸು ಎಂದು
ಸಾಗರದ ಅಲೆಗಳನ್ನು ಕೇಳ ಬಯಸಿದೆ!!
ನನ್ನ ದುರಾದೃಷ್ಟವೇ ಸಾಗರದ ನೀರೆಲ್ಲ
ಬತ್ತಿ ಮರುಭೂಮಿ ಶೃಷ್ಠಿ ಆಗಿದೆ!!
ಮಳೆಯಲ್ಲಿ ನಿಂತು ನಾನು ಒಮ್ಮೆ
ಅತ್ತುಬಿಡಲೇ ಎಂದು ಅಂದುಕೊಂಡೆನು!!
ಆ ಮೋಡಕೂ ಕನಿಕರ ಬಾರದೇ
ಗಾಳಿಯ ಸೇರಿ ಎಲ್ಲೋ ದೂರ ಓಡಿದೆ!!
- ಪಿ.ಜಿ.ಜ್ಯೋತಿ
03 Aug 2017, 09:42 am
ಹರೆಯದಲಿ ಅರಳು ಮರಳು
ಶುರುವಾಯಿತು ನಿನ್ನ ಕಂಡು!!
ದಿನವೆಲ್ಲ ಇರಿಸು ಮುರಿಸು
ಮನಸಿನಲಿ ನೀನು ಬಂದು!!
ಹಗಲಿನಲ್ಲಿ ಹಗಲು ಕನಸು
ಕಾಣುತಿಹುದು ನನ್ನ ಮನಸು!!
ಕನಸಿಗಿಲ್ಲ ಯಾವ ಬೇಲಿ
ಜಾರಿ ಬಿತ್ತು ನನ್ನ ವಯಸು!!
ಸೂತ್ರ ಹರಿದ ಗಾಳಿ ಪಟದಂತೆ
ಎಲ್ಲಿಯೋ ಹಾರಿ ಹೋದಂತೆ!!
ಸೂತ್ರ ಹಿಡಿದು ನನ್ನ ಸೇರು
ತಿರುಗಿ ಬರಲು ದಾರಿ ತೋರು!!
ರಾತ್ರಿಯಲಿ ನಿದಿರೆ ಇಲ್ಲ
ಕಣ್ಣ ಎದುರು ನೀನೇ ಎಲ್ಲ!!
ಬಂದೆ ನೀನು ಮನದ ಮನೆಗೆ
ಒರಗಿ ಕೊಳ್ಳಲೇ ನಿನ್ನ ಎದೆಗೆ!!
- ಪಿ.ಜಿ.ಜ್ಯೋತಿ
03 Aug 2017, 09:27 am
ನಮ್ಮೆಲ್ಲರನ್ನು ಸಂತೈಸುತಿಹಳು
ಕನ್ನಡಾಂಬೆಯು ತನ್ನ ಮಡಿಲಲ್ಲಿ..
ಆಕೆಗೆ ದ್ರೋಹವೆಸಗಿದಂತೆ
ನಲಿದಾಡದಿದ್ದರೆ ಕನ್ನಡ ನಮ್ಮ ಬಾಯಲ್ಲಿ..
ನಮಗ್ಯಾಕೆ ಅಂಜಿಕೆ ಕನ್ನಡ ನುಡಿಯಲು
ಅನ್ಯ ಭಾಷೆಗಳ ಎದುರಲ್ಲಿ..
ಹೆಮ್ಮೆಯಿಂದ ಹೇಳು ನೀನೆಂದೆಂದಿಗೂ
ಕನ್ನಡಿಗನಾಗಿ ಬಾಳುವೆ ಕನ್ನಡ ನಾಡಲ್ಲಿ..
---- ಧರ್ಮ ರಾಜ್
- ಧರ್ಮರಾಜ್
03 Aug 2017, 05:49 am
ದೇವನವನು ಕಾಣಲೆಂದು ಯಾಕೆ ಅಳುವಿರಿ,,
ಆತ್ಮದಲ್ಲಿ ಇರುವ ಅವನ ದಿನವು ಜಪಿಸಿರಿ....
ಸತ್ಯ ಹಾದಿಯಲ್ಲಿ ಎಂದು ದೇವನಿರುವನು,,,,
ತಪ್ಪಿ ನಡೆವ ಅವನು ನಮ್ಮ ಕಯ್ಯ ಹಿಡಿವನು,.....
- ಶಾಫಿ
02 Aug 2017, 07:54 pm
ಮೋಡದ ಚಿಲುಮೆಯಡಿ
ಮೂಡಿಹುದು ಬೆಳಕೊಂದು
ಚಲ್ಲುತಿರುವನೇ ಬೆಳಕ
ಚಂದಿರನು ಅಲ್ಲಿ ನಿಂದು!!
ಸಂಜೆಯಲಿ ಸುಂದರನು
ನಗು ನಗುತ ನಿಂದಿಹನು
ಯಾರನೋ ಕಾಣಲು ಬಂದು
ಮರೆಯಲಿ ಅವಿತಿಹನು!!
ಸುಳ್ಳು ಹೇಳಿ ಸರಸ ಆಡುವ
ಚತುರ ಚಂದಿರನು ಅವನು
ಬಾನಿನಿಂದ ಬಾಣ ಹೂಡಿ
ಯಾರ ಹೃದಯ ಗೆಲ್ಲುವನು!!
- ಪಿ.ಜಿ.ಜ್ಯೋತಿ
02 Aug 2017, 04:37 pm
ಜಡೆ ಎಂಬ ಉಯ್ಯಾಲೆಯಲ್ಲಿ
ತೂಗಾಡುತ್ತಿರುವ ಸಂಪಿಗೆ!!
ನಿನ್ನ ಪರಿಮಳದ ಕಂಪಿಗೆ
ಮನಸೋತಳೇ ಅವಳು ಸಂಪಿಗೆ!!
ಸೊಂಪಾದ ಕೂದಲಲ್ಲಿ
ಜೊಂಪಾಗಿ ಕುಳಿತ ಕೆಂಡ ಸಂಪಿಗೆ!!
ನಿನ್ನ ನುಣುಪಾದ ದಳಗಳು
ಅವಳ ಕೆಂಪಾದ ಕೆನ್ನೆಯ ಹಾಗಿದೆ!!
ಶಿರವೇರುವ ವರ ಪಡೆದಿಹ
ಸಿಂಗಾರದ ಪುಷ್ಪ ನೀ ಸಂಪಿಗೆ!!
ಪರಿಮಳಿಸುವ ಪರಿ ಹರಡುವ
ಸುಂದರ ಪುಷ್ಪ ನೀ ಸಂಪಿಗೆ!!
- ಪಿ.ಜಿ.ಜ್ಯೋತಿ
02 Aug 2017, 04:23 pm
ಒಂಟಿ ಕಾಲಿನ ಗೆಜ್ಜೆಯ ದನಿಯ
ಸದ್ದದು ಹೃದಯದ ಕೋಣೆಯಲಿ!!
ಮೆಲ್ಲಗೆ ಮೆಲ್ಲಗೆ ಹೆಜ್ಜೆಯನ್ನಿಟ್ಟರೂ
ಮೊಳಗುವುದೋಂದೇ ನಾದದಲಿ!!
ಅವಳದೇ ಕಂಗಳ ಹುಣ್ಣಿಮೆ ಬೆಳಕಲಿ
ಕಳೆಯಲು ಕಾದೆನು ನಾ ಇರುಳ!!
ಬಣ್ಣದ ಬಣ್ಣದ ಕನಸನು ಹೆಣೆಯುತ
ಕಾದಿತು ಮನವು ಅನುರಾಗದಲಿ!!
ಅವಳನೇ ನೋಡಲು ಕಾದಿದೆ ಕಂಗಳು
ರೆಪ್ಪೆಯ ಮುಚ್ಚದೇ ಹಗಲಿರುಳು!!
ಸಕ್ಕರೆ ಗೊಂಬೆಯು ನಕ್ಕರೆ ಸ್ವರ್ಗವು
ಹೇಳದೇ ಬಳಲಿದೆ ನನ್ನ ಒಲವ!!
ಎದುರಿಗೆ ಬಂದರೆ ಹೆದರುವ ಅದರವು
ತೊದಲದೇ ನಿಂತಿತೇ ಅವಳೆದುರು!!
ಅವಳದೇ ದನಿಯನು ಕೇಳಿದ ಮೇಲೆ
ನಿಂತಿತೆ ಹೃದಯದಿ ಗೆಜ್ಜೆಯ ದನಿಯು!!
ಅವಳದೇ ನಲ್ಲನ ಪರಿಚಯ ಮಾಡಿಸ
ಬಂದಳೇ ಅವಳು ನನ್ನೆದುರು!!
ಅವರನು ಕಂಡು ಆಘಾತಗೊಂಡು
ಹರಿಯಿತು ಗೆಜ್ಜೆಯು ತಾ ನೊಂದು!!
- ಪಿ.ಜಿ.ಜ್ಯೋತಿ
02 Aug 2017, 03:09 pm