Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರೆಕ್ಕೆ ಮುರಿದ ‌ಹಕ್ಕಿ ನಾನು

ರೆಕ್ಕೆ ಮುರಿದ ಹಕ್ಕಿ ನಾನು
ಹಾರುವಾಸೆ ಮುಗಿದಿಲ್ಲ ನನಗಿನ್ನು
ಬುವಿಯ ಮೇಲೆಯೆ ಉಳಿದುಬಿಡುವನೇನು
ಮತ್ತೆ ಆಗಸವ ನೋಡಲಾರನೇನು
ನನ್ನಾಸೆಗಳೆಲ್ಲ ಬಣ್ಣ ಕಳೆದುಕೊಂಡವೇನು ?

ಮೋಡದೊಳಗೆ ತೂರುವಾಸೆ
ರೆಕ್ಕೆ ಬಿಚ್ಚಿ ಅತ್ತ ಇತ್ತ ಹಾರುವಾಸೆ
ಬಾನಾಡಿಗಳೊಡನೆ ಆಡುವಾಸೆ
ಬಾನಿಂದ ಬುವಿಯ ನೋಡುವಾಸೆ
ಭುವಿಯ ಮುಟ್ಟಿ ಬಾನಿಗೆ ಚಿಮ್ಮುವಾಸೆ
ಎಲ್ಲವು ನನಗಿನ್ನು ಬರಿಯ ಕನಸೆ ?

ರೆಕ್ಕೆ ಇರದ ನಾನು ಮೂಕ‌ವಿನ್ನು
ನಗುವ ತುಂಬಿ ಹಾಡಲಾಗದ ಹಕ್ಕಿ‌ ನಾನು‌
ಹಾರಿ‌ ಹುಡುಕಿ ಹೆಕ್ಕಿ ತಿನ್ನುವಾಸೆ ಸುಳ್ಳಾಯಿತೇನು
ದೂರ ಸಾಗುವ ಆಸೆ ಬಹು ದೂರವಿನ್ನು
ನನಗೇನೆ ನಾನು ಭಾರವಾದೆನು
ಆಗಸವು ಕನಸಷ್ಟೆ ಉಸಿರೋಗುವವರೆಗೆ ಇನ್ನು

- ಶ್ರೀಕಾವ್ಯ

05 Aug 2017, 08:44 am

ದೇವರಿರುವುದಿಲ್ಲ

ದೇವರು ಇರೋ ಕಡೆ
ಮನುಷ್ಯ ಹೋಗೊಕ್ಕಾಗಲ್ಲ..
ಮನುಷ್ಯ ಹುಡುಕುವ
ಗುಡಿ-ಗೋಪುರಗಳಲ್ಲಿ ದೇವರಿರುವುದಿಲ್ಲ..

--- ಧರ್ಮ ರಾಜ್

- ಧರ್ಮರಾಜ್

04 Aug 2017, 08:18 pm

ದಾರಿಗೋ ಸಾಸಿರ ಸಂಗತಿ

ದಾರಿಗೋ ಸಾಸಿರ ಸಂಗಾತಿ,ನನಗೇ ನಿನಷ್ಟೇ ಜೊತೆಗಾತಿ, ಬಿಡುವದಾದರೆ ಹೇಳಿ ಬಿಡು ಮುನ್ನ,ಹಿಡಿಯುವೆ ನಾನೂ ಮರಳಿ ಬಾರದ ದಾರಿಯನ್

- Manju...

04 Aug 2017, 08:06 pm

ಕೆಟ್ಟ ಮರೆವು , ಒಳ್ಳೆ ನೆನಪು

ಕೆಟ್ಟ ಮರೆವು , ಒಳ್ಳೆ ನೆನಪು
ಎಂದೂ ಗೆಳೆಯರಲ್ಲ
ಮರೆತು ಹೋದ ಗಳಿಗೆಯನು
ನೆನಪು ಜಪಿಸುತಿಲ್ಲ
ನೆನೆಯುವ ಹಿತ ಕ್ಷಣವನು
ಮರೆವು ಅಳಿಸಿತಲ್ಲ
ನೆನಪು ಉಳಿಯುವುದು ಮರೆಯುವರೆಗು
ಮರೆವು ಇರುವುದು ನೆನಪಾಗುವವರೆಗು
ಮರೆವು ನೆನಪು ಎಂದೂ ಸ್ನೇಹಿತರಲ್ಲ
ಅವರಿಲ್ಲದೆ ಜೀವನ ಮುಂದೆ ಸಾಗುವುದಿಲ್ಲ

- harsha

04 Aug 2017, 07:02 pm

ಯಾರು ನೀ ಮಾಯಾವಿ

ಯಾರು ನೀನು ಮಾಯಾವಿ
ಎಲ್ಲಿ ಕದ್ದೆ ಮನಸಿನ ಮನೆಯ ಛಾವಿ
ಎದೆಯಲಿ ತುಂಬಿದೆ ಸಿಹಿ ಪ್ರೀತಿಯ ಸವಿ
ನಾನಿನ್ನ‌ ಸೇರುವ ಮುನ್ನ‌ ನಾನಾದೆ ನಿನ್ನಾಸೆ ಬಟ್ಟಲಿಂದ ಆವಿ

ಮನಸ ತುಂಬಿದ ನೋವುಗಳೇ ಪ್ರೀತಿಗೆ ಬಳುವಳಿ
ನೆನ್ನೆಗಳ ನೆನಪಲಿ ನಡೆಯುತಿದೆ ಎದೆಯಲಿ ಚಳುವಳಿ
ಅರುಕು ಮುರುಕು ಭಾವಗಳೆ‌ ಜೀವಕಿನ್ನು ಉಸಿರು
ಮನಸಿಗಿಲ್ಲ ಇನ್ನೂ ಸಹಜ ನಗುವಿನ ಅಲಂಕಾರದ ತಳಿರು

ಹೊರಟದ್ದಾಗಿದೆ ಈ ನನ್ನ ಮನಸು ಗೂಡ ತೊರೆದು
ನೋಡಲಾರದೆ‌ ಹೋದೆ ನೀನು ಮನಸಿನ ಕಣ್ಣ ತೆರೆದು
ಬದುಕಬೇಕು ಬಣ್ಣವಿರದ‌‌ ಕನಸಿಗೆ ತೇಪೆಯ ಬಣ್ಣ ಬಳಿದು
ಬಚ್ಚಿಡಬೇಕು ಆಸೆ ಕನಸುಗಳ ಎದೆಯಾಳದಲಿ ಕನ್ನ ಕೊರೆದು

- ಶ್ರೀಕಾವ್ಯ

04 Aug 2017, 05:19 pm

ಸ್ವಾತಿ

ಸ್ವಾತಿ ಮುತ್ತಿಗಾಗಿ ಬರದೆ ಪ್ರೇಮದ ಸಂದೇಶ
ಕಣ್ಣಂಚಿನಲಿ ನೋಟದ ನಗೆ ಬೀರಿ
ಬಂಧಿಸಿದಳು ಹೃದಯ ಅಂತರಾಳದಲ್ಲಿ
ಏನೋ ಹರುಷದಲ್ಲಿ ತೂಗುತ್ತಿತು ಪ್ರೀತಿಯ ಜೋಕಾಲಿ
ಈಗೇ ಸಾಗುತ್ತಿರುವಾಗ ಹರಿದು ಬಂತು ಪ್ರೀತಿಯ ಆದೇಶ
ಮನಸ್ಸು ಒಪ್ಪಲಿಲ್ಲ ಆವಳ ಉಪದೇಶ
ಅದಕ್ಕೇ ಬಿಟ್ಟು ಆರಿಸಿದಳು ಹೊರದೇಶ
ಪ್ರೀತಿ ಹಾ(ಆ)ರಿ ಹೋಯಿತು ಆ ದೇಶಕ್ಕೇ
ಆದರೂ ನೆನಪುಗಳಿಂದ ನೆನಯುತ್ತಿರುವೇ ಸ್ವಾತಿ ಮಳೆಯಲ್ಲಿ....
ಎ ಜಿ ಶರಣ್

- ಎ ಜಿ ಶರಣ್

04 Aug 2017, 04:38 pm

ನೋವು

ಕಣ್ಣಲಿ ಜಾಗವಿಲ್ಲದೆ ಜಾರುತಿದೆ ಕಂಬನಿ
ನೋವಿನ ಬಿಸಿಲಿಗೆ ಕರಗುತಿದೆ ನಗು ಎಂಬ ಇಬ್ಬನಿ.....
.....®

- ರಮೇಶ್

03 Aug 2017, 09:42 pm

ನಿದಿರೆಯ ಜೊಂಪು

ನಿದಿರೆಯ ಜೊಂಪು ಹತ್ತಿದ ಕೂಡಲೇ
ಪ್ರತ್ಯಕ್ಷ ಆಕಳಿಕೆ ಶುರುವಾಯ್ತು ತೂಕಡಿಕೆ!!
ಮುಗ್ಗರಿಸಿ ಮುಗ್ಗರಿಸಿ ಬಿದ್ದರೂ ಮತ್ತದೇ
ಚಾಳಿ ಅರಿವಿಲ್ಲದಂತೆ ದಾಳಿ ನಡೆಸಿದೆ!!

ಯಾರೋ ನೆತ್ತಿಗೆ ಲಗಾಮು ಕಟ್ಟಿ ಎಳೆದಂತೆ
ಎಷ್ಟೇ ತಡೆದರೂ ಹಿಡಿತಕೆ ಸಿಗದಂತೆ!!
ಸಾಕಾಯ್ತು ಈ ತೂರಾಟದ ಹೋರಾಟ
ಅತಿಯಾಯ್ತು ಈ ನಿದಿರೆಯ ಪರದಾಟ!!

ಎಲ್ಲ ಮರೆತು ಹಾಯಾಗಿ ಮಲಗಿ ಬಿಡಲೇ
ಒಂದು ಕ್ಷಣ ಇಲ್ಲಿ ಯಾರಿಗೂ ತಿಳಿಯದಂತೆ!!
ಅಯ್ಯೋ ಯಾರಾದರೂ ಕಂಡರೆ ನನ್ನನ್ನು
ಎಬ್ಬಿಸಿ ತರುವರೇ ನನ್ನ ನಿದಿರೆಗೆ ಭಂಗ!!

ಎಷ್ಟೇ ಯೋಚಿಸಿದರೂ ಯೋಚನೆಗಳೆಲ್ಲ
ಕನಸೇ ಹೊರತು ಆಲೋಚನೆಯಲ್ಲ!!
ಎಷ್ಟೇ ಯತ್ನಿಸಿದರೂ ನಿದಿರೆಯ ಜೊಂಪು
ತೂಕಡಿಕೆ ನನ್ನಿಂದ ತಲೆಯಲು ಆಗುತ್ತಿಲ್ಲ!!

- ಪಿ.ಜಿ.ಜ್ಯೋತಿ

03 Aug 2017, 04:03 pm

ಕಣ್ಣೀರು

ಕಣ್ಣೀರಿಗೂ ಮರುಕ ಬಂದಿತು
ನನ್ನವಳು ನನಗೆ ಕೊಟ್ಟ
ನೋವ ಕಂಡು...

ಅದಕ್ಕೆ ನಾ ಕರೆಯದಿದ್ದರೂ
ಅದು ತಾನಾಗೆ ಉಕ್ಕಿ ಬಂದಿತು
ಸಂತೈಸುವೆ ನಿನ್ನ ಎಂದು....

‌ --- ಧರ್ಮ ರಾಜ್

- ಧರ್ಮರಾಜ್

03 Aug 2017, 03:12 pm

ನಿನ್ನ ಪ್ರೀತಿ

ಪ್ರಿಯಾ ನಿನ್ನ ಪ್ರೀತಿ
ನನ್ನ ಪಾಲಿಗಿರಲಿ
ಆ ಪ್ರೀತಿಗಾಗಿ ನಾನು
ಜನುಮ ಜನುಮ ಕಾಯುವೆ‌ನು!!

ಎದೆಯಾಳದಲ್ಲಿ ಅಡಗಿರುವ
ನಿನ್ನ ಪ್ರೀತಿಯನ್ನ
ನಾ ತಾಳೆನು ಚೆಲುವ
ನಾ ತಾಳೆನು!!

ಮನದಾಳದಲ್ಲಿ ನಿನ್ನ
ರೂಪವನ್ನ ಇಟ್ಟು ನಾನು
ಪೂಜಿಸುವೆನು ಗೆಳೆಯ
ಪೂಜಿಸುವೆನು!!

ಸ್ನೇಹ ಎಂಬ ಮಾತಿಲ್ಲಿ
ಪ್ರೀತಿಯಾಯ್ತು‌ ನಮ್ಮಲ್ಲಿ
ನಿನ್ನ ಜೊತೆಗೆ ನಾನೇ‌ ಇರುವೆ
ಈ ಜೀವ ಜನುಮದಲಿ!!

- ಪಿ.ಜಿ.ಜ್ಯೋತಿ

03 Aug 2017, 02:01 pm