Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ನೇಹವೊಂದೇ ಆಸ್ತಿ

ಸ್ನೇಹ ಬೆಸೆದ ಬಂಧ ನೀವು
ಬದುಕಿಗೆ ಜೀವ ತುಂಬಿದ ನೀವು
ನನ್ನೆದೆಯ ಸಿಂಹಾಸನದ ಮುತ್ತುಗಳು
ಈ ಹೃದಯ ಸಂಪಾದಿಸಿದ ಸಂಪತ್ತುಗಳು

ಪ್ರತಿಫಲದ ಅಪೇಕ್ಷೆಯಿಲ್ಲದೆ
ಪ್ರತಿ ಸ್ಪಂದನೆಯ ರೂಪವೇ ನೀವು
ಯಾವ ಪ್ರತಿರೋಧವೂ ಬರದಂತೆ
ಬದುಕ ಮುನ್ನಡೆಸಿ ದವರು ನೀವು

ನೋವಿರಲಿ ನಲಿವಿರಲಿ ಮೊದಲು
ಕೈ ಜೋಡಿಸುವವರು ನೀವು
ಸೋಲಿರಲಿ ಗೆಲುವಿರಲಿ ಎಲ್ಲದರಲೂ
ಸವಿನಯದ ಸಹಭಾಗಿಗಳು ನೀವು

ನನ್ನನ್ನು ಆ ಶಿಖರಕ್ಕೇರಿಸಲು
ಮೆಟ್ಟಿಲಾದವರು ನೀವು
ನನ್ನ ಭಾವಮಗುವು ನಗಲು
ತೊಟ್ಟಿಲಾದವರು ನೀವು

ಸ್ನೇಹವೊಂದೇ ನಮ್ಮ ಆಸ್ತಿ
ಸ್ನೇಹವೊಂದುಳಿದುದೆಲ್ಲಾ ನಾಸ್ತಿ
ಸ್ನೇಹವೇ ಬದುಕಿನ ಆಧಾರ
ಸ್ನೇಹವೇ ಸದ್ಭಾವದ ಸಂಸ್ಕಾರ

0724ಎಎಂ06082017

*ಅಮುಭಾವಜೀವಿ*

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

06 Aug 2017, 09:41 am

ಬರಡು ಭೂಮಿ

ನಾ ನಡೆವ ಹಾದಿಯಲ್ಲಿ
ಸ್ವಾಗತಿಸಲು ಹಚ್ಚಹಸುರಿಲ್ಲ
ಮಳೆಹನಿಗಳಲಿ ಮಿಂದೆದ್ದ
ಮಣ್ಣಿನ ಕಂಪಿಲ್ಲ
ಯಾರ ಶಾಪವೊ ತಿಳಿತಿಲ್ಲ
ಹುಡುಕುತ ಹೊರಟೆ ಮೂಲ
ಹರಡಿದೆ ನಮ್ಮದೆ ಜಾಲ!

ಅಪೌಷ್ಟಿಕತೆಗೆ ಆಸರೆಯಾಗಿ
ಪತನಗೊಂಡ ಪರ್ಣಗಳ
ಮೂಕವೀಕ್ಷಕನಂತೆ ನಿಂತಿವೆ
ತರು-ಲತೆಗಳು ಬೆತ್ತಲೆಯಾಗಿ
ಸಿಂಗರಿಸು ಬಾ ಮಳೆರಾಯ
ಆಗದಿರು ಇಳೆಗೆ ಜವರಾಯ!


ಶಾರಧ

- ಶಕುಂತಲಾ

06 Aug 2017, 07:58 am

ಬೇಡ ಈ ಬವಣೆ

ಬಡತನದ ಬೇಗೆಯೊಳಗೂ
ಈ ದೇಹಕೆ ಸೌಂದರ್ಯದ ಕಾಣಿಕೆ
ಚಿಂದಿ ಹುಟ್ಟ ಈ ಮೈಯಿಗೆ
ಬೀದಿ ಕಾಮಣ್ಣರ ದಬ್ಬಾಳಿಕೆ

ಹಸಿದ ಹೊಟ್ಟೆಗೆ ಕೂಳಿಲ್ಲ
ಕಾಮದ ಹಸಿವಿದ್ದವಗದು ಕಾಣಲ್ಲ
ಕಿತ್ತು ತಿನ್ನುವ ಬಡತನದೊಳಗೆ
ಕಾಮರಕ್ಕಸರ ಆಕ್ರಮಣ ತಪ್ಪಿಲ್ಲ

ಮೈಮಾರಿದ ಬಿಡಿಕಾಸಿನೊಳಗೆ
ನನ್ನವರ ಮಾನ ಮುಚ್ಚಬೇಕು
ಕಾಮಾಂಧರ ಆ ಶೋಷಣೆಗೆ
ಅಸಹಾಯಕ ಕಿಚ್ಚನು ಬಚ್ಚಿಡಬೇಕು

ವೇಶ್ಯೆಯ ಮುಟ್ಟುವವರೆಲ್ಲ
ಸಮಾಜದಿ ಘನತೆವೆತ್ತವರೇ ಎಲ್ಲ
ಕಾಮದ ಬೆವರಿನಲ್ಲಿ ಮಿಂದರೂ
ಅದರ ಘಮಲನೂ ಮರೆಸಿದೆ ಅತ್ತರು

ಮೈಕೊಟ್ಟ ತಪ್ಪಿಗೆ
ನನ್ನ ವೃತ್ತಿಗಿಲ್ಲ ಒಪ್ಪಿಗೆ
ಅವರೆಸೆವ ಭಿಕ್ಷೆಯ ಆಯ್ದು
ಬದುಕ ಕಟ್ಟಿಕೊಳ್ಳಬೇಕಿಂದು

ಬೇಡ ಇನ್ನಾರಿಗೂ ಈ ಬವಣೆ
ನಾಗರಿಕ ಸಮಾಜ ನೀಡದು ರಕ್ಷಣೆ
ಬಡತನದ ಹೆಣ್ಣೊಂದು ಹುಣ್ಣು
ಎಲ್ಲರನ್ನೂ ಸಹಿಸುವುದೊಂದೆ ಮಣ್ಣು

0654ಪಿಎಂ04082017

*ಅಮುಭಾವಜೀವಿ*

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

06 Aug 2017, 07:04 am

ಸಂಪತ್ತಿನ ಪ್ರದರ್ಶನ (ಲಕ್ಷ್ಮಿಹಬ್ಬದ ಆಚರಣೆ)

ಆರುಮೊಳ ಸೀರೆಯುಟ್ಟು
ಮೂರುಮೊಳ ಕೂರುವ
ಮುತ್ತೈದೆಯು ನೀನು!

ಗಗನಯಾತ್ರೆಯು ನಿನ್ನದು
ಹಿಡಿದಿಡುವ ಪ್ರಯತ್ನವು ನಮ್ಮದು
ನಿಲ್ಲುವೆಯ ಸ್ಥಿರವಾಗಿ ಎಂದೆಂದು!

ತರ-ತರಹದ ಫಲಪುಷ್ಪಗಳು
ವಿಧ-ವಿಧವಾದ ತಿನಿಸುಗಳು
ಅರ್ಥವಿಲ್ಲದ ಹಲವು ಆಚರಣೆಗಳು!

ನಿನದೊಂದು ಮೂರುತಿ
ಕೂರಿಸುವರು ಮಾಡುತ ಆರತಿ
ಕ್ಷಣಿಕವಾದ ಅನಿಯಮಿತ ಭಕುತಿ!

ಸಿರಿ-ಸಂಪತ್ತಿನ ಪ್ರದರ್ಶನ
ಮುತ್ತೈದೆಯರಿಗೆ ಆಹ್ವಾನ
ನೀಡುವರು ಬಾಗೀನ!

ಜಗವ ಕುಣಿಸುವ
ಜಗನ್ಮಾತೆಯು ನೀನು
ನಿನಗೆ ನಾವು ಶರಣು!



ಶಾರಧ

- ಶಕುಂತಲಾ

05 Aug 2017, 04:49 pm

ತಾಯ್ತನವೆಂಬ ಸ್ವತ್ತು

ಪ್ರಿಯವಾಯಿತು ಕೆಮ್ಮಣ್ಣಿನ‌ ಕೆಸರು
ಹುಳಿ ಮಾವಿನ ಹಚ್ಚ ಹಸಿರು
ಅವಳಾಗಲು ಒಡಲು‌ ತುಂಬಿ ಬಸಿರು
ಸಿದ್ಧಳು ತನ್ನೊಡಲ ಸೇರಿದ ಜೀವಕೆ ಕೊಡಲು ತನ್ನ ಉಸಿರು

ಕೂಸ ನೆನೆಯುವಳು ಹಾಕಿ ಅದರಪ್ಪನ ಮುಖದ ಕವಚ
ಕೊಡುವಳು ಆ ಕೂಸಿಗೆ ತನ್ನಮ್ಮನ ಪ್ರೀತಿಯ ಸ್ಪರುಶ
ಬೇಡುವಳು ತನ್ನಪ್ಪನ ಗುಣಗಳು ಸೇರಲೆಂದು ಪ್ರತಿ ನಿಮಿಷ
ನಗುವಳು, ಉಣ್ಣುವಳು ಕೂಸಿರಬೇಕೆಂದು ಹರುಷ

ನೇವರಿಸುವಳು ತನ್ನೊಡಲ ನೆನೆದು ಕೂಸ ಬಾರಿ ಬಾರಿ
ಆಶಿಸುವಳು‌ ಈ ‌ಕೂಸೆ ಇನ್ನೆಂದು ನನ್ನಾಸೆ ಕನಸಿಗೆ ರೂವಾರಿ
ಆ ಕೂಸ‌ ಮೇಲಿನ ಆಸೆಗಳದೆ ಮನಸಲೆಲ್ಲ‌ ಸವಾರಿ
ಕುಲಾವಿ, ಬೆಳ್ಳಿ ಚಮಚವೆ ಹೇಳುವವು ಆ ಸಂಭ್ರಮದ ಪರಿ

ನೋವನು‌ಣ್ಣ ಬೇಕು ನವಮಾಸ ಕೂಸ ಭಾರವ ಹೊತ್ತು
ಆ ಕೂಸಿನ ಹುಟ್ಟು ತರಬಹುದು ಅವಳ ಜೀವಕೆ‌ ಕುತ್ತು
ಮತ್ತೊಮ್ಮೆ ಹುಟ್ಟಬೇಕವಳು ಪ್ರಸವ ವೇದನೆಯಲಿ ಸತ್ತು
ಆದರವಳಿಗೆ ತಾಯ್ತನಕ್ಕಿಂತ ಬೇರೆಯಾವುದಿಲ್ಲ ಸ್ವತ್ತು

- ಶ್ರೀಕಾವ್ಯ

05 Aug 2017, 03:14 pm

ಹೋರಾಟ

ಒಂದೊತ್ತು
ಭಕ್ಷಿಸುವ
ತುತ್ತಿಗೆ
ಬಡಜನರ
ಪರದಾಟ !!!!

ಬೇನಾಮಿ
ಹಣದ
ರಕ್ಷಣೆಗೆ
ಸಿರಿವಂತರ
ಹೋರಾಟ !!!!

ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

05 Aug 2017, 02:25 pm

ಜೀವ - ಜೀವನ

ಜೀವಕ್ಕೂ ಜೀವನಕ್ಕೂ
ಅಗಾಧ ವ್ಯತ್ಯಾಸವುಂಟು..

ಒಂದು ಬಾರಿ ಹೋದರೆ
ಮತ್ತೆ ಬಾರದರಿವುದೆ " ಜೀವ.."

ಕೆಟ್ಟು ಹೋದರು ಮತ್ತೆ
ಸರಿ ಪಡಿಸಿಕೊಳ್ಳಬಹುದಾದುದೆ " ಜೀವನ... "

ಧರ್ಮ ರಾಜ್

- ಧರ್ಮರಾಜ್

05 Aug 2017, 12:47 pm

ಕಣ್ಣೊಳಗೆ ಕಳ್ಳಿ ಒಬ್ಬಳು

ಕಣ್ಣೊಳಗೆ ಕಳ್ಳಿ ಒಬ್ಬಳು
ಕುಂತವಳೆ ಮನೆ ಮಾಡಕೊಂಡು
ನಿನ್ನ ಕಂಡಾಗಲೆಲ್ಲ ನನಗೆ
ಕಣ್ಣ ಹೂಡಿತಾಳೆ ನಕ್ಕೊಂಡು....

ರೊಪಿಸಿಕೊಂಡು ಸಂಚೂಂದು
ಹೆಣಿತಾವಳೆ ಬಲೆಯೊಂದು
ಹೃದಯಾನ ಕದಿಯೋಕೆ
ಕಾಯ್ತಾವಳೆ ನಕ್ಕೊಂಡು....

ಮಿಂಚುಗಳ ಹಾವಳಿಯಿಂದ
ಮುಗುಳ ನಗೆ ಬಾಣಗಳಿಂದ
ಪಾರಾಗುವುದು ಹೇಗೋ ಕಾಣೆ
ಎದುರಲಿ ಬರ್ತಾವಳೆ ಸಿಂಗರಿಸಿಕೊಂಡು...

ಕೆನ್ನೆ ಮೇಲಿನ ಗುಳಿಗಳಲಿ
ಮುಳುಗಿ ಹೋಗುವ ಬಯದಲಿ
ಓಡುತಿರುವೆ ನಾ ಎದ್ದು ಬಿದ್ದು
ಬೆಂಬಿಡದ ದೆವ್ವದಂತೆ ಬರತಾವಳೆ ಹೂವಿಡುಕೊಂಡು....

ನಾಚಿಕೆ ಇಲ್ಲದ ಕಳ್ಳಿ ಇವಳು
ಕೆಳ್ತಾವಳೆ ಪ್ರಿತ್ಸು ಎಂದು
ಹೃದಯದ ಕೊಳದೊಳಗೆ ಬಿಟ್ಟಾವಳೆ
ಆಸೆಗಳ ಮೀನುಗಳು ನೂರಾವಂದು...

- ಕುಮಾರ ಸಿದ್ದರಾಜ

05 Aug 2017, 12:35 pm

ನೆನಪಿನ ನೋವು

ಬೇಸಿಗೆಯಲೂ ಹೃದಯವನು
ನೆನೆಸಿಟ್ಟಳು ಒಲವ ಮಳೆ ಸುರಿಸಿ...

ಬಿಟ್ಟೋದಳು ಅತ್ತರೂ ಕಾಣಿಸಿದ
ಮಳೆಗಾಲದಲಿ ಕಣ್ಣೀರು ತರಿಸಿ...

ಜೊತೆಗಿದ್ದಾಗ ಅವಳ ಮನದಲ್ಲೇನಿತ್ತೋ
ನಾ ಅರಿಯಲಾಗಲಿಲ್ಲ...

ದೂರಾಗುವಾಗ ನನ್ನ ಮನಕ್ಕಾಗುವ ನೋವು
ಅವಳಿಗೆ ತಿಳಿಯಲಿಲ್ಲ...

ಕೇಳಲು ಕಾತುರದಿಂದ ಕಾಯುತ್ತಿದ್ದೆ
ಅವಳಾಡುವ ಪೆದ್ದು ಮಾತುಗಳ...

ಈಗ ಕೊಟ್ಟೋದಳು ಮರೆತರು
ಮರೆಯಲಾಗದ ಲೆಕ್ಕವಿಡದಷ್ಟು ನೆನಪುಗಳ.....

---- ಧರ್ಮ ರಾಜ್

- ಧರ್ಮರಾಜ್

05 Aug 2017, 11:45 am

ಒಂಟಿಯಾಗಿರುವೆ ಅವಳಿಲ್ಲದೆ

ಕಂಬನಿಯನು ಕರಗಿಸಿ ಮಂಜಾಗಿಸಲೆ
ನನ್ನ ಪ್ರೀತಿಯ ಸಾಕ್ಷಿಗೆ,
ಮುಸುಕಿದಾ ಮಂಜಲಿ ಹುಡುಕುತಾ ಬಾರೆ
ಕಾಯುತಲಿರುವೆ ಕೊನೆಯವರೆಗೆ,
ಸೂರ್ಯನ ಬೇಡಿ ಮಂಜನು ಕರಗಿಸಿ
ನಾನೆ ಅರಸಿ ಬರುವೆ ಸಿಗುವೆಯ ಒಲವೆ,
ಮುನಿಸೇನೊ ನಿನಗೆ ಮುಸುಕಿದೆ ಮೋಡ
ಮಳೆಯಾದರೀಗ ಕರಗೀತೆ ಗಾಢ ಮೌನ,
ಮೌನವೆ ಸಮ್ಮತಿ ಎಂದುಕೊಳ್ಳಲೆ,
ಮೌನವೆ ಅಂತ್ಯ ಎಂದುಕೊಳ್ಳಲೆ,
ಅರಗಿಸಿಕೊಳ್ಳಲಾಗದ ಸತ್ಯಕ್ಕೆ
ನನ್ನ ಅರೆಜೀವವಾಗಲೆ ಹೋಗಿದೆ,
ಜಗವೇಕೆ ಬೇಡವೆನಿಸಿತು ನಿನಗೆ
ನನ್ನ ನೆನಪಾಗಲಿಲ್ಲವೆ,
ನೀನಿಲ್ಲದ ಬದುಕು ಇನ್ನೇಕೆ,
ನಾನು ನಿನ್ನೊಡನೆ ಬರುವೆನೆಂದುಕೊಂಡರು,
ನೀ ಬರೆದಿಟ್ಟ ಹಾಳೆಯ ಪದಗಳು
ಕಟ್ಟಿ ಕೂರಿಸಿವೆ ನನ್ನ,
ಇದ್ದರೆ ನನಗೆ ಇನ್ನೊಂದು ಜನ್ಮ
ನಿನಗಾಗೆ ಕಾದಿರುವೆ,
ಒಂಟಿಯಾಗಿರುವೆ ನಾ, ಮತ್ತೆ ಬರುವೆಯಲ್ಲವೆ...!

(ಮನೋಜ್)

- manoj kumar

05 Aug 2017, 11:33 am