Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರತ್ತೋ ರತ್ತೋ ರಾಯ

ರತ್ತೋ ರತ್ತೋ ರಾಯ ನೀನು
ಬರುವೆಯೇನು ಇಲ್ಲಿಗೆ!!
ಬಿತ್ತೋ ಬಿತ್ತೋ ಪ್ರೇಮದ ಬೆಳೆಯ
ನನ್ನ ಹೃದಯದ ಹಿತ್ತಲಿಗೆ!!

ಒಂಟಿಯಲ್ಲ ನಾನು ಇಲ್ಲಿ
ನೀನು ಜೊತೆಗೆ ಇರುವಾಗ!!
ಜಂಟಿಯಾಯ್ತು ಮನಸು ಇಲ್ಲಿ
ಪ್ರೇಮ ಮೊಳಕೆ ಒಡೆದಾಗ!!

ಹೊಸ ಆಸೆ ಚಿಗುರಿತು ಈಗ
ನಿನ್ನ ಕೂಡಿ ನಲಿವಾಗ!!
ಸ್ಥಿರವಾಯ್ತು ಪ್ರೇಮ ಹೃದಯದಿ
ಬೇರೂರಿ ಕುಳಿತಾಗ!!

ತಂಪಾದ ತಂಗಾಳಿ
ನನ್ನ ಉಸಿರಿಂದ ಹೊರಬಂತು!!
ಪ್ರೇಮದ ಮರವು ಇಂದು
ಹಸಿರಾಗಿ ಬೆಳೆದು ತಾ ನಿಂತಾಗ!!

ನಿನ್ನ ಪ್ರೇಮದೊಲವಿನ ಬೆಸುಗೆ
ನನ್ನ ಒಳಗೆ ಬೆಸೆದಾಗ!!
ನನ್ನ ಸನಿಹದ ಮೋಹದ ಸಲಿಗೆ
ನಾ ನೀಡುವೆ ನಿನಗೆ!!

- ಪಿ.ಜಿ.ಜ್ಯೋತಿ

09 Aug 2017, 08:51 am

ನಿನ್ನ ಉಸಿರು

ನನ್ನ ಜೀವಕೆ ಉಸಿರು ನಿನ್ನದೇ
ನನ್ನ ಹೃದಯದಿ‌ ನಿನ್ನ ಹೆಸರಿದೆ!!
ಉಸಿರ‌ ಹೆಸರಲಿ ಪ್ರೀತಿ ಬೆರೆತಿದೆ
ನಿನ್ನ ನೆನೆಯುತ ನಾನು ಬದುಕಿದೆ!!

ಕರುಣೆ ಇಲ್ಲದೇ ನೀ ನನ್ನ ದೂರಿದೆ
ಉಸಿರು ನಿಲ್ಲಿಸಿ ನೀ ದೂರ ಸರಿದೆ!!
ನನ್ನ ಸನಿಹ ನೀ ಬರಲಾರದೇ
ಇಂದು ಹೀಗೇಕೆ ಜಡವಾಗಿ ಹೋದೆ!!

ಪ್ರಶ್ನೆ ನಾ ಕೇಳಲು ಉತ್ತರ ನೀಡದೇ
ಹೇಳು ಯಾಕಾಗಿ ನೀ ಮೌನಿಯಾದೆ!!
ಕಣ್ಣು ಕಂ‌ಬ‌ನಿಯನು ತಾ ಮಿಡಿಯುತ
ಹಂಬಲಿಸಿ ಕೇಳಿದೆ ನಿನ್ನ ಉಸಿರನು!!

- ಪಿ.ಜಿ.ಜ್ಯೋತಿ

09 Aug 2017, 08:50 am

ಓ ಮಳೆಯೇ

ಓ ಮಳೆಯೇ,
ರಚ್ಛೆ ಹಿಡಿದ ಪುಟ್ಟ ಮಗುವಿನಂತೆ
ನೀ ಧುಮ್ಮಿಕ್ಕಿ ಸುರಿಯಬೇಡ..
ಕಳೆದ ನನ್ನ ಸುಂದರ ನೆನಪುಗಳ
ಮತ್ತೊಮ್ಮೆ ಹೆಕ್ಕಿ ತರಬೇಡ.

ಇದ್ದೀತು ಪ್ರತಿ ಆಲಿಕಲ್ಲಿನಲು
ಆಕೆ ಕೊಟ್ಟ ಸಿಹಿ ಕ್ಮುತ್ತಿನ ಘಮಲು.
ಗಾಳಿಗೆ ತೂರಿ ತೂರಿ ಹೊಡೆದಂತೆ ಇಸಿಲು
ಮನದೊಳಗೆ ಮುರುಟಿದ್ದ
ಪ್ರೀತಿಯ ಬೀಜ ಒಡೆದೀತು ಟಿಸಿಲು.

ನೆನೆದೀತು ನೆನಪುಗಳ ಬಚ್ಚಿಟ್ಟ ಗೂಡ.
ಕರಗೀತು ಕನಸುಗಳ ಕವಿದಿರುವ ಮೋಡ.

- ಶ್ರೀಗೋ.

09 Aug 2017, 12:43 am

ಹರಿದ ಬ್ಯಾಗಿಗೆ...

ಹರಿದ ಬ್ಯಾಗಿಗೆ
ಬಿದ್ದಿತ್ತು ಸುಮಾರು ಕಡೆ ಹೊಲಿಗೆ
ಕಿತ್ತು ಹೋದ ಬ್ಯಾಗಿನ ಜಿಪ್ಪಿಗೆ
ಹಾಕಿದ್ದ ಪಿನ್ನುಗಳು ಮಾಡಿದ್ದವು ಸುಲಿಗೆ

ಬ್ಯಾಗಿನೊಳಗೆ ತುಂಬಿದ್ದ ಪುಸ್ತಕದ ಗಂಟು
ಬೆಸೆದಿತ್ತು ಬ್ಯಾಗು ಹೊತ್ತವನ ಕನಸುಗಳೊಂದಿಗೆ ನಂಟು
ಆ ಬ್ಯಾಗಿನೊಳಗೆ ಪುಸ್ತಕ ಜೋಡಿಸುವ ಜೊತೆಜೊತೆಗೆ
ಜೀವ ತೆರೆದಿತ್ತು ತನ್ನೊಳಗೆ ಭವಿಷ್ಯದ ಕನಸುಗಳ‌ ಮಳಿಗೆ

ಮಳೆಗಾಲದಲಿ‌ ಮಣ್ಣಲಿ ಬಿದ್ದ ಗುಂಡಿಯ ಹಾರುವ ರಭಸಕೆ
ಮಣ್ಣ ಸೇರಿತ್ತು ಕಿತ್ತು ಭುಜದ ಮೇಲಿದ್ದ ಪುಸ್ತಕದ ಜೋಳಿಗೆ
ಅದು ನೋಡಿ ನಡಯುವವರ ಮನಸಾಕ್ಷಿಯ ಅಳೆಯುವ ಘಳಿಗೆ
ಕಾಣದಂತೆ ನಡೆದ ಜನರ ಕಂಡು ಮುಸಿಮುಸಿ ನಕ್ಕಿತ್ತು‌ ಮಾನವೀಯತೆಯು ಒಳಗೊಳಗೆ

ಎತ್ತವರಿಗೆ ದೊಡ್ಡ ದೊಡ್ಡ ವಿದ್ಯೆಯ ಕಲಿಸುವಾಸೆ
ಓದಿ ದೊಡ್ಡವನಾಗಬೇಕು ಬಡತನ ನೀಗಬೇಕೆಂಬುದು ಓದುವವನ ಮಹದಾಸೆ
ದುಡ್ಡಿದ್ದವರಿಗಷ್ಟೆ ಓದಬೇಕೆಂದು‌ ವಿದ್ಯೆಯು ತೋರಲು ವರಸೆ
ಓದಿನ ಬಗೆಗೆ ಇರುವ ಕನಸುಗಳನ್ನೆಲ್ಲ ಮಾಡುಬಿಡುವರು ಖುಲಾಸೆ

ಹೇಳುತ್ತಿದ್ದರು ದುಡ್ಡು ದೊಡ್ಡಪ್ಪ, ವಿದ್ಯೆ ಅವರಪ್ಪ
ಈಗ ಕಲಿತ ವಿದ್ಯೆಗೆ ಎಲ್ಲಿ‌ ಹೋದರು ಹಾಕರು ಸೊಪ್ಪ
ಈಗ ದುಡ್ಡು ಕೊಟ್ಟರೆ ಎಂಥ ವಿದ್ಯೆಗೂ ಅವರೆ ಅಪ್ಪ
ಸಾಮಾನ್ಯ ‌ಮನುಷ್ಯ ಕಣ್ಣ ಮಿಟಿಮಿಟಿ ಮಾಡುತ ನೋಡತಲಿರಬೇಕು ಆಗಿ ಬೆಪ್ಪ

- ಶ್ರೀಕಾವ್ಯ

08 Aug 2017, 11:52 am

ಪ್ರೀತಿಯ ಪ್ರಸ್ತಾಪ

*ಪ್ರೀತಿಯ ಪ್ರಸ್ತಾಪ*


ವರ್ಷದ ಹಿಂದೆ
ನೀ ನನ್ನ ಬಾಳಲ್ಲಿ ಬಂದೆ
ಅಂದು ನಿನ್ನ ನೋಡಿ ನಾ ನಕ್ಕೆ
ನನ್ನ ನೋಡಿ ನೀ ನಕ್ಕೆ
ಅಂದೇ ನಾವಿಬ್ಬರು ಸ್ನೇಹಿತರಾದೆವು
ಕಷ್ಟ ಸುಖಗಳಲ್ಲಿ ಒಂದಾದೆವು

ನಿನ್ನ ಮುಗ್ಧ ಮನಸ್ಸು, ಆ ಕೆಂದುಟಿಯ ನಗು
ಏನೋ ಹೇಳ ಹೊರಟಿರುವ ಮೀನಿನಂತಹಾ ಕಣ್ಣುಗಳು
ಇವೆಲ್ಲವುಗಳಿಂದ ನಾ ನಿನ್ನ ಬಳಿಗೆ ಆಕರ್ಷಿತನಾದೆ
ನಿನಗೇನೋ ಹೇಳಬೇಕೆಂದು ನನ್ನ ಮನ ಹಂಬಲಿಸುತಿದೆ

ನಮ್ಮ ಸ್ನೇಹವಿಂದು ಪ್ರೀತಿಯೆಡೆಗೆ ಬಾಗುತಿರೆ
ಇದ ನಿನಗೆ ಹೇಳುವ ಮಾರ್ಗ ನಾ ಹುಡುಕುತಿರೆ
ಅದಕಾಗಿ ನಾ ಈ ಕವನ ಬರೆಯುತಿರೆ
ಇದ ನಿನಗೆ ತಲುಪಿಸಲಾಗದೆ ಮನ ಮರುಗುತಿರೆ

ಪ್ರಿಯೇ,
ನನ್ನ ಮನದ ಹಂಬಲ ಹೇಳಲಿ ಹೇಗೆ?
ನನ್ನ ಹೃದಯದ ಮಾತು ನಿನಗೆ ಅರ್ಥವಾಗದೇ?

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

08 Aug 2017, 07:47 am

ಗಜಲ್

ಮಂಕು ಕವಿದ ನನ್ನ ಭಾವಗಳಿಗೆ
ಗೆಳತಿ ನೀನೇ ವಾಸಿ ಮಾಡೋ ಗುಳಿಗೆ

ನನ್ನೆಲ್ಲಾ ನೋವುಗಳ ಆಳಕಿಳಿದು
ಅವನ್ನೆಲ್ಲಾ ನಿವಾರಿಸಲು ಬಂದೆ ಬಳಿಗೆ

ಸತ್ತ ಭರವಸೆಗಳ ಮತ್ತೆ ಬದುಕಿಸಿ
ಹಣತೆ ಹಚ್ಚಿದೆ ನೀ ಬಾಳ ಕತ್ತಲೆಯೊಳಗೆ

ಎಲ್ಲ ಅವಮಾನಗಳ ಸಂತೈಸಿ
ಮತ್ತೆ ಪುಟಿದೇಳುವಂತೆ ಮಾಡಿದೆ ನನ್ನೊಳಗೆ

ಹಾರತುರಾಯಿಗಳಿಂದು ಬೀಳುತಿವೆ
ಅಂದು ಸೋತು ಸೊರಗಿದ್ದ ಕೊರಳಿಗೆ

ಅಮು ಎಂಬ ಕೂಸನ್ನು ಹುಟ್ಟುಹಾಕಿದೆ
ನಿನ್ನ ಛಲದ ಬಲವಿತ್ತು ನನಗೆ

0559ಎಎಂ08082017

ಅಮುಭಾವಜೀವಿ

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

08 Aug 2017, 06:30 am

ಕಷ್ಟಗಳಲ್ಲಿ ಸುಖ‌ವಂದಿರುವುದು

ಕಷ್ಟಗಳಲ್ಲಿ ಸುಖ‌ವಂದಿರುವುದು
ತಿಳಿದರೇ ನೀ ಜಗ್ಗುವುದಿಲ್ಲ
ಸುಖದಿಂದೆ ಹಲವು ಕಷ್ಟಗಳ ಸರಪಳಿ ಇರುವುದು, ಅರಿತರೇ ಜಂಬದಿಂದಿರಲು ಸಾದ್ಯವಿಲ್ಲ
ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿದರೆ ವ್ಯತ್ಯಾಸ ಪಡಿಸಲು ಅವಕಾಶಗಳಿಲ್ಲ.

- harsha

07 Aug 2017, 08:01 pm

ಸುರಿಯೋ ಮಳೆ....

ಸುರಿಯೋ ಮಳೆ
ನಿನಗಾಗಿ ಕಾದಿದೆ ಇಳೆ
ನೀನಿಲ್ಲದೆ ಇಳೆಯಲಿಲ್ಲ ಕಳೆ
ನೀ ಬಂದು ಕಳೆದಾಕು ನೋವಿನ ಕೊಳೆ

ನೀ‌ ಬಂದು ತೊಳೆಯ ಬೇಕು ರೈತನ‌ ಕಣ್ಣೀರು
ನೀನಿದ್ದರೇನೆ ಅವರ ಬದುಕು ಪನ್ನೀರು
ನೀರಿಲ್ಲದಿದ್ದರೆ ಎಲ್ಲಿಂದ ಬರಬೇಕು ಹಸಿರಾದ ಬೆಳೆ
ಬೆಳೆ‌‌ ಇಲ್ಲವೆಂದರೆ ‌ಅವರಿಗೆಲ್ಲಿದೆ ಈ ಭೂಮಿಯಲಿ ಬೆಲೆ

ನೀನಿಲ್ಲದೆ ದಾನ ಮಾಡಿರುವರು ಜೀವವ ಯಮನಿಗೆ
ಕಿಂಚಿತ್ತಾದರು ಬೆಲೆಕೊಡರು ಯಾರು ಅವರ ಕಣ್ಣೀರಿಗೆ
ಜೀವ ಉಳಿಸುವ ನೀನೆ ದೂರ ಸರಿದರೆ ಮತ್ತ್ಯಾರು ಅವರಿಗೆ
ಜೀವದಾನ ನೀಡು ನೀನು ಸುರಿದು ಕೆರೆ ಕಟ್ಟೆ ತುಂಬುವರೆಗೆ

ನೀನು ಆಗದಿರು ಈ ಜನರಂತೆ ನಿಷ್ಕರುಣಿ‌
ನೀನಾಗು ಈ ಜಗಕ್ಕೆಲ್ಲ ಜೀವಧಾರಿಣಿ
ಕಾದಿರುವಳು ತನ್ನೊಡಲಲಿ ಹಸಿರ ನೋಡಲು ಧರಣಿ
ನೀನು ಇನ್ನೂ ಕಾರಣವಾಗಬೇಡ ಆಗಲು ಆತ್ಮಹತ್ಯೆ ‌ಸರಣಿ

- ಶ್ರೀಕಾವ್ಯ

07 Aug 2017, 06:30 pm

ರಕ್ಷಾ ಕವಚ

ನೂರು ನೂರಾರು ನೂಲನು ಜೊತೆಗಿರಿಸಿ
ಸಾಲು ಸಾಲುಗಳ ಸರಪಳಿಯ ಜೋಡಿಸಿ
ಕರುಣೆಯ ಕರಗಳ ಜೊತೆ ಮೀಲಾಯಿಸಿ

ಮನಸ್ಸಿನ ಆಹ್ಲಾ ದಕದ ತ್ರಿಗುಣ
ಸತ್ವ,ರಜ,ತಮ ಇದ್ದೆಲವ ಬದಿಗರಿಸಿ ಕರಗಳಿಗೆ ಕಟ್ಟು ನೀ ರಕ್ಷಣೆಯ ರಾಖಿಯ ಪಾಲನೆಯ ರಾಖಿಯ..

ಬದುಕಿನ ಭಾವನೆಯ ವಚನವ
ನಿನ ಕರದೊಳಿರಿಸಿ ದಡವ ಸೇರಿಸೋ
ಜೀವದ ಗೆಳತಿ .. ನನ್ನೋಡಹುಟ್ಟಿದಾಕಿ....

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

07 Aug 2017, 09:48 am

ಪಿಸುಮಾತು...

ನೇಸರ ಸರಿದ‌‌ ಇಳಿ‌ ಸಂಜೆಯಲಿ
ತನುವ ಸೋಕುವ ತಂಪು ಗಾಳಿಯಲಿ
ಗೂಡು ಸೇರುವ ಹಕ್ಕಿಗಳ ಇಂಚರದಲಿ
ಪ್ರಕೃತಿ ಅಪ್ಪಿರಲು ಮೌನವನು ಪ್ರಶಾಂತತೆಯಲಿ‌

ಕೈ ಬೆರಳುಗಳು ತಾವಿಬ್ಬರು ಜೊತೆಗೆಂದು ಬೆಸೆದಿರಲು
ಇಬ್ಬರ ಕಣ್ಣುಗಳು‌ ಕಣ್ಣ ಮುಚ್ಚಾಲೆಯಾಡುತ ಸೇರಿರಲು
ನೋವುನಲಿವಲಿ ನಿನ್ನೊಟ್ಟಿಗೆಂದೂ‌ ಹೆಜ್ಜೆ ಜೊತೆಯಾಗಿರಲು
ತೋಳ ಬಳಸಿ, ಶಿರವ ತಗ್ಗಿಸಿ‌ ಎದೆಗೆ ತನುವು‌ ಒರಗಿರಲು

ಹೇಳುವೆಯೇನು ಮೆಲುದನಿಯಲೊಂದು‌ ಪಿಸುಮಾತು‌
ಈ ಜಗದಲಿ‌ ಇನ್ನೇನೂ ಬೇಡ ನನಗೆ ನಿನ್ನ‌ ಹೊರತು
ಬದುಕಲು ಆಗದು ಎಂದೂ ನಾನು ನಿನ್ನನು ಮರೆತು
ಇರಬೇಕು ನಿನಗಾಗಿ ನಾನು, ನನಗಾಗಿ ನೀನೆಂದು ಬೆರೆತು

- ಶ್ರೀಕಾವ್ಯ

06 Aug 2017, 03:59 pm