ಸಂಜೆಗತ್ತಲು ಕವಿದ ಮೇಲು
ನಿನ್ನ ನೆನಪು ಕಾಡುತಿಹುದು
ನೀನಿರದ ಸನಿಹದಲ್ಲಿ
ಮಾತು ಮೌನವಾಗಿದೆ.
ಕಂಡ ಕನಸು ನಿಜವಾಯಿತು
ಕಣ್ಣಂಚಿನಲ್ಲಿ ಕಂಡು ಕಾಣದ
ಹೃದಯದ ವೇದನೆ
ಹನಿಯಾಗಿ ಭೂಮಿಯ
ತಾಗುವ ಮುನ್ನ ,ಬರಬಾರದೇ
ನನ್ನೀ ಸನಿಹಕೆ!!
ಕಂಗಳ ಹಿಂದಿನ ಕಂಬನಿ
ಏನೋ ಹೇಳಲು ಬಯಸಿದಂತಿದೆ
ನನ್ನ ಸಾಲಿನ ಕತೆಗಳು
ಎಂದೋ ಮುಗಿಯದ ಮೌನದಂತಿದೆ,
ಮನದ ಆಸೆ ನೂರಾರು
ನಿನ್ನೀ ನೆನಪು ಕಾಡುತಿದೆ,
ಆರದ ಗಾಯವ ಮಾಡಿದೆ
ಮನಸಿನ ಪುಟದಲಿ.
ನೀ ದೂರ ಹೋಗುವ ಮುನ್ನ
ನಾ ಮರಳುವೆ
ಬಾರದ ಲೋಕಕೆ!!
ಕಿರು ಕಾದಂಬರಿಯ ಲೇಖನ ನನ್ನ ಈ ಜೀವನ
ಅದರಲ್ಲಿನ ಶಾಯಿ ಮುಗಿದ ಮೇಲೆ ನೆಲಕ್ಕೆ ಜಾರಿದರು ಮೇಲಕ್ಕೆತ್ತಿ ಜೋಪಾನ ಮಾಡುವ ಕೈಯಿಲ್ಲ ನನ್ನ ಜೊತೆಯಲ್ಲಿ.............
ಅನಿಲವಾದೆಡೆ ಅಗಸದಲ್ಲಾದರು ಹಾರಾಡಿ ಉಸಿರಾಡುತ್ತಿದೆ ಘನವಲ್ಲ ಮೃದುವಲ್ಲ ಈ ನನ್ನ ಹುಚ್ಚು ಮನ ತಾ ಬಯಸುವುದರ ಮೇಲೆ ಆಸೆಯೊರೆತು ಬೇರೊಂದು ತನಗೆ ಬೇಡವೆಂದು ನನ್ನ ಶಾಸಿಸುತ್ತದೆ ಪ್ರತಿಯೊಂದು ಕ್ಷಣ...........
ಸಾಯುವ ಮುನ್ನ ನಾ ಬರೆದಿಟ್ಟು ಹೋಗಲೇ ಒಂದು ಕವನ ನಿಮ್ಮ ಮನದಲ್ಲಿ ನನ್ನ ಹೆಸರು ಎಂದಿಗೂ ಹಳಿಯದಂತೆ ಈ ನನ್ನ ರಚನಾ......
ನಿನ್ನ ಕಂಡ ದಿನದಿಂದ
ನನ್ನ ಕಣ್ಣು ಹೊಂಚು ಹಾಕುತ್ತಿದೆ
ಮಿಂಚು ಮೂಡುತ್ತಿದೆ
ಸಂಚು ಮಾಡುತ್ತಿದೆ
ಅದ ಮನ ತಡಿಯುತಿದೆ
ನೀನು ದೂರಾದ ಕ್ಷಣದಿಂದ
ಮನ ಕಣ್ಣೀರಿಟ್ಟು ಮರುಗುತಿದೆ
ಕರಗಿ ಕೊರಗಿ ಸೊರಗಿ ಬರಿದಾಗುತ್ತಿದೆ
ಮಧುರ ದಿನಗಳ ಮಧುರ ನೆನಪುಗಳು
ಒಡೆದ ಕನ್ನಡಿಯಂತೆ ಚೂರಾಗಿದೆ
ಮನದ ಕನಸಿನ ಸವಿ ಭಾವಗಳು
ಸುಡುವ ಮರು ಭೂಮಿಯಂತೆ ಬಿರುಕಾಗಿದೆ
ಇನ್ನೇಕೆ ಬದುಕು ಎಂಬ ವೇದನೆ
ಮಾಡಿದೆ ತನು-ಮನ ಖಾಲಿ ಮನೆ
ಒಲವನ್ನೆಲ್ಲಾ ಗಂಟು ಕಟ್ಟಿ ಬೆಂಕಿಗಾಹುತಿ ಕೊಟ್ಟು
ನನ್ನಿಂದ ಬೇಗ ಬಹುದೂರ ಸಾಗಿರುವೆ
ಮನದ ಆಸೆಯಲ್ಲಿ ಬುತ್ತಿ ಮಾಡಿ ಕೊಳ್ಳಿ ಇಟ್ಟು
ವಿರಹದ ಬೇಗೆಯಲ್ಲಿ ಉಸಿರುಗಟ್ಟಿ ಸಾಯಿಸಿರುವೆ
ಎಲ್ಲಾ ತಂಪಾದ ಮೇಲೆ ಶೋಕಾಚರಣೆ ಆರಂಭಿಸಿದೆ
ತಪ್ಪಿನ ಅರಿವಾಗಿ ಮನ ಪರಿತಪಿಸಿದೆ.
ಎಲ್ಲವೂ ಬದಲಾಗಿತ್ತು.....
ಪುಟ್ಟ ಪುಟ್ಟ ಹೆಜ್ಜೆಯನಿಡುತ್ತಿದ್ದ ಮಗು
ಹರೆಯಕ್ಕೆ ಕಾಲಿಟ್ಟಿದೆ,
ಬೇಸಿಗೆಯ ಕಾಲ ಮುಗಿದು
ಮಳೆಗಾಲ ಬಂದಿದೆ,
ನಿನ್ನೆ ಕಂಡ ಚಿಗುರು ಇಂದು
ಬೆಳೆದು ಹೂ ಬಿಟ್ಟಿದೆ,
ಆಗ ಕಂಡ ಹೂ ಈಗ
ಇನ್ಯಾರದೋ ಪಾಲಾಗಿದೆ,
ಆದರೆ......
ಬೀಸಿ ಬಂದ ಗಾಳಿ ಬದಲಾಗಲೇ ಇಲ್ಲ.